ಪಾಸ್ ಇದೆಯಾ..?
ಪಾಸ್ ಇದೆಯಾ..?
ಅತ್ತಿಂದ ಧ್ವನಿ ಬಂತು
ಬೆಂಗಳೂರ ಸಿಟಿ ಬಸ್ಸಿಂದಿಳಿದಾಕ್ಷಣ
ತೆಲೆ ಎತ್ತಿ ನೋಡಿದೆ
ಮಬ್ಬುಗತ್ತಲಿನಲ್ಲಿ
ಮೇಲುಗಣ್ಣಿನ ಹುಡುಗ
ಮೈ ಮೇಲೆ ಅಲ್ಲಲ್ಲಿ ಅರಿವೆ
ಕೋಡಬೇಕೋ ಕೋಡಬೇಡವೋ
ಯೋಚಿಸುವ ಮೊದಲೆ
ನನ್ನ ಕೈಕಿಸೆಯೊಳಗಿಳಿದು
ಅವನ ಕೈಗೆ ಪಾಸ್ ನೀಡಿತ್ತು...
ಮತ್ತೊಂದು ದಿನ ....
ಬಸ್ ಪಾಸ್ ಇದೆಯಾ..?
ಕೇಳಿತು ಅತ್ತ ಕಡೆಯಿಂದಬಸ್ಸಿಂದಿಳಾದಕ್ಷಣ.
ನೋಡಿದೆ, ಮೈ ತುಂಬಾ
ಬಟ್ಟೆ ಕೈಗಳು ತುಂಬಾ ಬಂಗಾರ
ಆದರೂ, ಪಾಸ್ ಇದೆಯಾ.... ?
ಇದ್ದರೂ ಇಲ್ಲ ಅಂದೆ.
ದುರುಗಟ್ಟಿದ ಆತ...
ದುರಳರು ದುರುಗಟ್ಟುತ್ತಾರೆ
ಆದರೂ `ಪಾಸ್'ಗಾಗಿ ಹಪಿಹಪಿಸುತ್ತಾರೆ..
ಇದೇ ನಗರ ಜೀವನಾನಾ...?
ಒಂದಡೇ ಇಲ್ಲದವರೂ ಬೇಡುತ್ತಾರೆ
ಇದ್ದವರೂ ಬೇಡುತ್ತಾರೆ....
ಇಲ್ಲ ಮತ್ತು ಇದ್ದವರ ನಡುವೆ
ಕೊಡವವನು ಯಾರು..?
-ಮಲ್ಲಿಕಾರ್ಜುನ್
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
-
| ಮಲ್ಲಿಕಾರ್ಜುನ ತಿಪ್ಪಾರ, ಬೆಂಗಳೂರು ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಅವರು ಸುಪ್ರೀಂ ಕೋರ್ಟ್ನ 50ನೇ ಮುಖ್ಯ ನ್ಯಾಯಮೂರ್ತಿಯಾಗಲಿದ್ದಾರೆಂಬ ಸುದ್ದಿ ಹೊರ ಬೀಳುತ್ತಿದ್...
-
ಶೋಷಿತರ ಪರ ನಿಲ್ಲುವ ನ್ಯಾಯವಾದಿಯ ಕತೆಯ ಸಿನಿಮಾ ‘ ಜೈ ಭೀಮ್ ’ ಸದ್ದು ಮಾಡುತ್ತಿದೆ . ನೈಜ ಕತೆಯನ್ನಾಧರಿಸಿದ ಈ ಚಿತ್ರದ ಅಸಲಿ ಹೀರೊ ಜಸ್ಟೀಸ್ ಕೆ . ಚಂದ್ರು . ...
-
ಎದೆಯ ನೋವು ಹೂವಾಗಲು, ಸೂರ್ಯನ ಕಿರಣಬೇಕೀಗ, ಮೋಡ ಸರಿದು, ಕತ್ತಲೆ ಚಿಮ್ಮಿ, ಬೆಳಕು ಬರುವ ಮುನ್ನ ಹೋಗಬೇಡ ಕವಲು ದಾರಿಗಳ ನಡುವೆ ನಿಂತಿದೆ ಪ್ರಾಣ, ಅದಕೆ ನೀನೇ ಉಸಿರು, ಬಿಕ...
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ