ಭಾನುವಾರ, ಜನವರಿ 31, 2021

Rakesh Tikait is carrying his father's movement legacy, ತಂದೆಗೆ ತಕ್ಕ ಮಗ ರಾಕೇಶ್ ಟಿಕಾಯತ್

೮೦ ಮತ್ತು ೯೦ರ ದಶಕದಲ್ಲಿ ಮಹೇಂದ್ರ ಸಿಂಗ್ ಟಿಕಾಯತ್ ಅವರ ಹೋರಾಟಕ್ಕೆ ಸರಕಾರಗಳು ನಡುಗುತ್ತಿದ್ದವು. ಅವರ ಕಿರಿಯ ಪುತ್ರ ರಾಕೇಶ್ ಟಿಕಾಯತ್ ತಂದೆಯ ದಾರಿಯಲ್ಲಿ ಸಾಗುತ್ತಿದ್ದಾರೆ.

 

- ಮಲ್ಲಿಕಾರ್ಜುನ ತಿಪ್ಪಾರ
ರಾಕೇಶ್ ಟಿಕಾಯತ್ ಎಂಬ ಹೆಸರು ಎರಡು ತಿಂಗಳ ಹಿಂದೆ ಬಹುಶಃ ಉತ್ತರ ಪ್ರದೇಶದ ಜನರನ್ನು ಬಿಟ್ಟು ದೇಶದ ಇತರ ಭಾಗಗಳಿಗೆ ತೀರಾ ಪರಿಚಿತವಾಗಿರಲಿಲ್ಲ. ಆದರೆ, ಕೇಂದ್ರ ಸರಕಾರ ಜಾರಿಗೆ ತಂದಿರುವ ಮೂರು ಕೃಷಿ ಕಾಯಿದೆಗಳ ವಿರುದ್ಧ ನಡೆಯುತ್ತಿರುವ ಹೋರಾಟದ ‘ಮುಖ’ವಾಗಿ ಅವರೀಗ ದೇಶಪೂರ್ತಿ ಜನಪ್ರಿಯ. ಅಣ್ಣಾ ಹಜಾರೆ ಚಳವಳಿಯ ಮೂಸೆಯಲ್ಲಿ ಅರವಿಂದ ಕೇಜ್ರಿವಾಲ್ ಎಂಬ ನಾಯಕ ಬೆಳಕಿಗೆ ಬಂದಂತೆ ಈ ರೈತ ಹೋರಾಟದ ಫಲವಾಗಿ, ಭಾರತ ಕಿಸಾನ್ ಯೂನಿಯನ್(ಬಿಕೆಯು)ನ ವಕ್ತಾರ ರಾಕೇಶ್ ಟಿಕಾಯತ್ ಅವರು ಪ್ರಭಾವಿ ನಾಯಕರಾಗಿ ಹೊರಹೊಮ್ಮುತ್ತಿದ್ದಾರೆ. ೪೦ಕ್ಕೂ ಹೆಚ್ಚು ರೈತ ಸಂಘಟನೆಗಳು ಒಂದುಗೂಡಿ ನಡೆಸುತ್ತಿರುವ ಹೋರಾಟದ ನೇತೃತ್ವವನ್ನು ತಮ್ಮ ಹೆಗಲ ಮೇಲೇರಿಸಿಕೊಂಡು ಮುನ್ನಡೆಯುತ್ತಿದ್ದಾರೆ.

ರಾಕೇಶ್ ಟಿಕಾಯತ್ ಬಗ್ಗೆ ತಿಳಿದುಕೊಳ್ಳುವ ಮುಂಚೆ ಅವರ ತಂದೆ ಮಹೇಂದ್ರ ಸಿಂಗ್ ಟಿಕಾಯತ್ ಬಗ್ಗೆ ತಿಳಿದುಕೊಂಡರೆ ನಿಮಗೆ ಮತ್ತೊಂದು ಹೊಳಹು ದೊರೆತೀತು. ಅದು ೧೯೮೮ರ ಸಮಯ. ಮಹೇಂದ್ರ ಸಿಂಗ್ ಟಿಕಾಯತ್ ಅವರು ೫ ಲಕ್ಷ ರೈತರೊಂದಿಗೆ ದಿಲ್ಲಿಗೆ ನುಗ್ಗಿದ್ದರು. ಅಂದು ಪ್ರಚಂಡ ಬಹುಮತದೊಂದಿಗೆ ಪ್ರಧಾನಿಯಾಗಿದ್ದ–ವರು ರಾಜೀವ್ ಗಾಂಧಿ ಮತ್ತು ಗೃಹ ಮಂತ್ರಿಯಾಗಿದ್ದವರು ಇತ್ತೀಚೆಗಷ್ಟೇ ನಿಧನರಾದ ಬೂಟಾ ಸಿಂಗ್. ಅಂದು ಮತ್ತು ಇಂದಿನ ಹೋರಾಟಕ್ಕೆ ವ್ಯತ್ಯಾಸ ಏನೆಂದರೆ; ಅಂದಿನ ಸರಕಾರವು ರೈತರನ್ನು ದಿಲ್ಲಿಯ ಗಡಿಯಲ್ಲೇನೂ ತಡೆದಿರಲಿಲ್ಲ. ಬದಲಿಗೆ ನಗರದೊಳಗೆ ಬಿಟ್ಟುಕೊಂಡಿತ್ತು. ರೈತರೆಲ್ಲರೂ ದಿಲ್ಲಿಯ ವಿಜಯ್ ಚೌಕ್‌ನಿಂದ ಇಂಡಿಯಾ ಗೇಟ್‌ವರೆಗೂ ಟೆಂಟ್‌ಗಳನ್ನು ಹಾಕಿ ಪ್ರತಿಭಟನೆ ನಡೆಸಿದ್ದರು. ದಿಲ್ಲಿಯ ಬೋಟ್ ಕ್ಲಬ್ ಲಾನ್‌ನಲ್ಲಿ ಮಹೇಂದ್ರ ಸಿಂಗ್ ಟಿಕಾಯತ್ ರೈತರನ್ನು ಉದ್ದೇಶಿಸಿ ಮಾತನಾಡುತ್ತಿದ್ದರೆ ಸರಕಾರವು ಅವರ ಬೇಡಿಕೆಗಳಿಗೆ ಮಣಿಯದೇ ಬೇರೆ ದಾರಿ ಇರಲಿಲ್ಲ. ಇದರ ಮಧ್ಯೆಯೂ ರೈತ ಹೋರಾಟವನ್ನು ತಡೆಯಲು ಬೂಟಾ ಸಿಂಗ್ ಪೊಲೀಸ್ ಬಲ ಪ್ರಯೋಗಿಸಿದರೂ ಮಹೇಂದ್ರ ಸಿಂಗ್ ಟಿಕಾಯತ್ ಹೆದರಲಿಲ್ಲ, ಬೆದರಲಿಲ್ಲ. ವಾರಗಳ ಕಾಲ ನಡೆದ ಹೋರಾಟದ ಬಳಿಕ ರಾಜೀವ್ ಗಾಂಧಿ ಸರಕಾರವು ರೈತರ ಬೇಡಿಕೆಗಳನ್ನು ಒಪ್ಪಿಕೊಂಡಿತು. ಕಬ್ಬಿಗೆ ಹೆಚ್ಚಿನ ಬೆಲೆ, ವಿದ್ಯುತ್ ಮತ್ತು ನೀರು ಶುಲ್ಕ ಮನ್ನಾ ಸೇರಿದಂತೆ ೩೫ ಬೇಡಿಕೆ ಈಡೇರಿಸಿಕೊಂಡೇ ಟಿಕಾಯತ್ ತಮ್ಮ ರೈತ ಸೇನೆಯೊಂದಿಗೆ ಮುಜಫರ್‌ನಗರಕ್ಕೆ ವಾಪಸಾಗಿದ್ದರು. ಅಂದಿನ ಹೋರಾಟದ ಬಗ್ಗೆ ಹಲವಾರು ಲೇಖನಗಳು ಸಾರ್ವಜನಿಕವಾಗಿ ಲಭ್ಯ ಇವೆ. ಅವುಗಳನ್ನು ಓದಿದರೆ ಅಂದಿನ ಹೋರಾಟದ ಸ್ವರೂಪ ಹಾಗೂ ಸರಕಾರದ ಸ್ಪಂದನದ ರೀತಿ ಅರಿವಾದೀತು.

ಈಗ ನಿಮಗೆ ರಾಕೇಶ್ ಟಿಕಾಯತ್ ಅವರ ಹೋರಾಟದ ಹಿನ್ನೆಲೆ ಸ್ವಲ್ಪವಾದರೂ ಅರಿವಾದೀತು. ಜನವರಿ ೨೬ರಂದು ‘ರೈತ ಗಣತಂತ್ರ ಪರೇಡ್’ ವೇಳೆ ಉಂಟಾದ ಹಿಂಸಾಚಾರ ಮತ್ತು ಕೆಂಪುಕೋಟೆ ಸಿಖ್ ಧ್ವಜಾರೋಹಣ ಪ್ರಕರಣ ಹಿನ್ನೆಲೆಯಲ್ಲಿ ರೈತ ಹೋರಾಟ ಸಂಪೂರ್ಣವಾಗಿ ಹಿನ್ನೆಲೆಗೆ ಸರಿಯಿತು ಎಂದು ಬಹುತೇಕ ಮಾಧ್ಯಮಗಳು ಷರಾ ಬರೆದಿದ್ದವು ಮತ್ತು ಕೇಂದ್ರ ಸರಕಾರದ ಉದ್ದೇಶವೂ ಈಡೇರಿತ್ತು! ಉತ್ತರ ಪ್ರದೇಶದ ಸರಕಾರವು ಘಾಜಿಪುರ್ ಬಾರ್ಡರ್‌ನಲ್ಲಿ ಬೀಡುಬಿಟ್ಟಿದ್ದ ರೈತರನ್ನು ಖಾಲಿ ಮಾಡಲು ಬಹುದೊಡ್ಡ ಪೊಲೀಸ್ ಪಡೆಯನ್ನು ಕಳುಹಿಸಿತ್ತು. ವಿದ್ಯುತ್ ಮತ್ತು ನೀರು ಪೂರೈಕೆಯನ್ನು ನಿಲ್ಲಿಸಿತ್ತುಘಿ. ಅಕ್ಷರಶಃ ರೈತರು ಘಾಜಿಪುರ್ ತೊರೆದು ಹೋಗಲೇಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಆದರೆ, ಆ ಕ್ಷಣದಲ್ಲಿ ರಾಕೇಶ್ ಟಿಕಾಯತ್ ಮಾಡಿದ ಭಾವನಾತ್ಮಕ ಭಾಷಣವು ಅವರೊಬ್ಬ ತಂದೆಯಂತೆಯೇ ಗಟ್ಟಿ ನಾಯಕ ಎಂಬುದನ್ನು ಸಾಬೀತುಪಡಿಸಿತು. ಈ ವೇಳೆ ಭಾವುಕರಾಗಿ ಕಣ್ಣೀರು ಸುರಿಸಿದ್ದು ಇಡೀ ರೈತ ಹೋರಾಟವನ್ನು ಮತ್ತೆ ಫ್ರಂಟ್‌ಫುಟ್‌ಗೆ ತಂದು ನಿಲ್ಲಿಸಿತು. ಟಿಕಾಯಿತ್ ಕಣ್ಣೀರಿನ ವಿಡಿಯೋ ಕ್ಲಿಪ್ ಕಾಳ್ಗಿಚ್ಚಿನಂತೆ ಹರಡಿ ಘಾಜಿಪುರ್‌ನಿಂದ ೧೫೦ ಕಿ.ಮೀ. ದೂರವಿರುವ ಮುಝಫರ್‌ನಗರದಿಂದ ರಾತ್ರೋರಾತ್ರಿ ರೈತರು ಟ್ರ್ಯಾಕ್ಟರ್ ಏರಿ ಘಾಜಿಪುರ್ ಬಾರ್ಡರ್‌ಗೆ ತಲುಪಿದರು. ಅತ್ತ ಸಿಂಘು ಬಾರ್ಡರ್ ಸೇರಿದಂತೆ ಎಲ್ಲ ಗಡಿಗಳಿಗೂ ಹರಿಯಾಣ, ಪಂಜಾಬ್ ಮತ್ತು ಪಶ್ಚಿಮ ಉತ್ತರ ಪ್ರದೇಶ ರೈತರು ಸಾಗರೋಪಾದಿಯಲ್ಲಿ ಬಂದು ಸೇರಲಾರಂಭಿಸಿದರು. ಗತ್ಯಂತರವಿಲ್ಲದೇ ಉತ್ತರ ಪ್ರದೇಶ ಸರಕಾರವು ಘಾಜಿಪುರ್ ಗಡಿಯಿಂದ ತನ್ನ ಪೊಲೀಸ್ ಪಡೆಯನ್ನು ವಾಪಸ್ ಕರೆಸಿಕೊಂಡಿತು. ರಾಕೇಶ್ ಟಿಕಾಯತ್ ಬಲಿಷ್ಠ ರೈತನಾಯಕನಾಗಿ ಬೆಳೆದು ನಿಂತರು. ಇನ್ನೇನು ಮುಗಿದೇ ಹೋಯಿತು ಎಂಬ ಸ್ಥಿತಿಗೆ ತಲುಪಿದ್ದ ರೈತ ಹೋರಾಟ ಹೊಸ ಹುರುಪಿನಿಂದ ಮತ್ತೆ ಮೈಕೊಡವಿಕೊಂಡು ಎದ್ದು ನಿಲ್ಲಲು ರಾಕೇಶ್ ಕಾರಣರಾದರು.

‘‘ಒಂದು ಹನಿ ಕಣ್ಣೀರು ಸರಕಾರಕ್ಕೆ ಗಂಡಾಂತರ ಸೃಷ್ಟಿಸಲಿದೆ. ಇನ್ನು ಕಣ್ಣುಗಳೇ ಕಡಲಾಗಿ ಉಕ್ಕುವುದನ್ನು ನೀವು ಕಂಡಿರಲಾರಿರಿ,’’ ಎಂಬ ಟಿಕಾಯತ್ ಅವರ ಮಾತುಗಳು ರೈತರ ಒಡಲಾಳದ ಕಿಚ್ಚನ್ನು ಹೊತ್ತಿಸಿದವು.

೧೯೬೯ರ ಜೂನ್ ೪ರಂದು ರಾಕೇಶ್ ಟಿಕಾಯತ್ ಅವರು ಮುಝಫರ್ ನಗರದ ಸಿಸೌಲಿ ಪಟ್ಟಣದಲ್ಲಿ ಜನಿಸಿದರು. ತಂದೆ ಮಹೇಂದ್ರ ಸಿಂಗ್ ಪಶ್ಚಿಮ ಉತ್ತರ ಪ್ರದೇಶದ ಪ್ರಭಾವಿ ರೈತ ನಾಯಕ ಮತ್ತು ಭಾರತ್ ಕಿಸಾನ್ ಯೂನಿಯನ್(ಬಿಕೆಯು) ಸಹ ಸಂಸ್ಥಾಪಕರು. ಟಿಕಾಯತ್ ಕುಟುಂಬವು ಬಿಲಿಯಾನ್ ಖಾಪ್‌ಗೆ ಸೇರಿದ್ದಾಗಿದೆ. ಪಶ್ಚಿಮ ಉತ್ತರಪ್ರದೇಶದಲ್ಲಿ ಬಹುಸಂಖ್ಯೆಯಲ್ಲಿ ಕೃಷಿಕರಾಗಿರುವ ಜಾಟ್ ಸಮುದಾಯದಕ್ಕೆ ಸೇರಿದವರು ಇವರು. ಮೀರತ್ ವಿಶ್ವವಿದ್ಯಾಲಯದಿಂದ ರಾಕೇಶ್ ಎಂಎ ಪದವಿ ಪಡೆದಿದ್ದಾರೆ.

೨೦೧೧ರಲ್ಲಿ ಮಹೇಂದ್ರ ಸಿಂಗ್ ಟಿಕಾಯತ್ ನಿಧನದ ಬಳಿಕ ಅಣ್ಣ ನರೇಶ್ ಟಿಕಾಯತ್ ಯೂನಿಯನ್ ಅಧ್ಯಕ್ಷರಾದರು, ರಾಕೇಶ್ ಬಿಕೆಯುನ ವಕ್ತಾರರಾದರು. ರೈತ ಸಂಘಟನೆಯಲ್ಲಿ ಗುರುತಿಸಿಕೊಳ್ಳುವ ಮುಂಚೆ ರಾಕೇಶ್ ದಿಲ್ಲಿ ಪೊಲೀಸ್ ಇಲಾಖೆಯಲ್ಲಿ ಕಾನ್‌ಸ್ಟೇಬಲ್ ಆಗಿದ್ದರು. ಆ ಬಳಿಕ ಎಸ್‌ಐ ಕೂಡ ಆದರು. ೧೯೯೩ರಲ್ಲಿ ಮಹೇಂದ್ರ ಸಿಂಗ್ ಅವರು ಕೆಂಪುಕೋಟೆಯಲ್ಲಿ ಪ್ರತಿಭಟನೆ ಆಯೋಜಿಸಿದ್ದರು. ಈ ಸಂದರ್ಭದಲ್ಲಿ ಪೊಲೀಸ್ ಸೇವೆಗೆ ರಾಜೀನಾಮೆ ನೀಡಿ, ತಂದೆಯ ಜೊತೆ ಹೋರಾಟಕ್ಕೆ ಧುಮುಕಿದರು. ನಾಲ್ಕು ವರ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡ ಬಳಿಕ ವಕ್ತಾರರಾಗಿ ನೇಮಕವಾದರು. ಅಲ್ಲಿಂದ ಟಿಕಾಯತ್ ಅವರ ರೈತಪರ ಹೋರಾಟ ಆರಂಭವಾಯಿತು. ಹಲವು ಬಾರಿ ರೈತರ ಪರವಾಗಿ ಹೋರಾಟ ಮಾಡಿ ೪೦ಕ್ಕೂ ಹೆಚ್ಚು ಬಾರಿ ಜೈಲುವಾಸ ಕಂಡಿದ್ದಾರೆ. ೨೦೧೮ರಲ್ಲಿ ಟಿಕಾಯತ್ ಸಂಘಟಿಸಿದ ಉತ್ತರಾಖಂಡದ ಹರಿದ್ವಾರದಿಂದ ದಿಲ್ಲಿಯವರೆಗೆ ನಡೆಸಿದ ಕಿಸಾನ್ ಕ್ರಾಂತಿ ಯಾತ್ರೆ ಗಮನ ಸೆಳೆಯಿತು.

೫೧ ವರ್ಷದ ಟಿಕಾಯತ್ ಸಂಘಟಿಸಿದ ಬಹುತೇಕ ರೈತ ಹೋರಾಟಗಳಲ್ಲಿ ಯಶಸ್ಸು ಕಂಡಿದ್ದಾರೆ. ರಾಜಕೀಯದಲ್ಲೂ ತಮ್ಮ ನಸೀಬು ಪರೀಕ್ಷಿಸಿದರಾದರೂ ಯಶಸ್ಸು ಸಿಕ್ಕಿಲ್ಲ. ಕಾಂಗ್ರೆಸ್ ಬೆಂಬಲದೊಂದಿಗೆ ೨೦೦೭ರಲ್ಲಿ ಉತ್ತರ ಪ್ರದೇಶದ ವಿಧಾನಸಭೆಗೆ ಸ್ಪರ್ಧಿಸಿ ಸೋತರು. ಮತಗಳ ಲೆಕ್ಕದಲ್ಲಿ ಅವರು ಆರನೇ ಸ್ಥಾನದಲ್ಲಿದ್ದರು! ಇನ್ನು ೨೦೧೪ರ ಲೋಕಸಭೆ ಚುನಾವಣೆಯಲ್ಲಿ ರಾಷ್ಟ್ರೀಯ ಲೋಕದಳ(ಆರ್‌ಎಲ್‌ಡಿ) ಟಿಕೆಟ್ ಪಡೆದು ಅಮ್ರೋಹ ಕ್ಷೇತ್ರದಿಂದ ಸ್ಪರ‌್ಸಿ, ಕೇವಲ ಹತ್ತು ಸಾವಿರ ಒಳಗೆ ಮತಗಳನ್ನು ಪಡೆದರು. ರಾಜಕಾರಣದ ಸೋಲು ಅವರನ್ನೇನೂ ಧೃತಿಗೆಡಿಸಲಿಲ್ಲ. ಬದಲಿಗೆ ರೈತ ಹೋರಾಟದಲ್ಲಿ ಇನ್ನು ಹೆಚ್ಚಿಗೆ ತೊಡಗಿಸಿಕೊಳ್ಳುವಂತೆ ಮಾಡಿತು.

ಆರ್‌ಎಲ್‌ಡಿ ಮುಖ್ಯಸ್ಥ ಅಜಿತ್ ಸಿಂಗ್ ಅವರೊಂದಿಗೆ ರಾಕೇಶ್ ಅವರದ್ಧು ಕಭೀ ಖುಷಿ ಕಭೀ ಗಮ್ ಸಂಬಂಧ. ಅವರೂ ಟಿಕಾಯತ್ ಬೆಂಬಲಕ್ಕೆ ನಿಂತಿದ್ದಾರೆ. ಇಂಡಿಯನ್ ನ್ಯಾಷನಲ್ ಲೋಕದಳದ ಅಭಯ ಸಿಂಗ್ ಚೌಟಾಲಾ, ರಾಷ್ಟ್ರೀಯ ಲೋಕತಾಂತ್ರಿಕ ಪಾರ್ಟಿಯ ಹನುಮಾನ್ ಬೇಣಿವಾಲಾ ಅವರು ಸಂಪೂರ್ಣವಾಗಿ ಟಿಕಾಯತ್ ಬೆಂಬಲಕ್ಕೆ ನಿಲ್ಲುವ ಮೂಲಕ ರೈತರ ಹೋರಾಟಕ್ಕೆ ಹೊಸ ತಿರುವು ದೊರೆಯಲಾರಂಭಿಸಿದೆ. ತಂದೆಯ ದಾರಿಯಲ್ಲೇ ಸಾಗುತ್ತಿರುವ ರಾಕೇಶ್ ಅವರ ಮೇಲೆ ಈಗ ಜವಾಬ್ದಾರಿ ಹೆಚ್ಚಾಗಿದೆ. ಜೊತೆಗಿರುವ ೪೦ಕ್ಕೂ ಹೆಚ್ಚು ರೈತ ಸಂಘಟನೆಗಳ ನಡುವೆ ಸಮನ್ವಯ ಸಾಸುತ್ತಲೇ ರೈತ ಹೋರಾಟವನ್ನು ವಿಫಲಗೊಳಿಸುವ ಒಳಸಂಚುಗಳನ್ನು ಮೆಟ್ಟಿ ರೈತ ಹೋರಾಟವನ್ನು ಒಂದು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲೇಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಅನೂಹ್ಯವಾಗಿ ವ್ಯಕ್ತವಾಗು ತ್ತಿರುವ ಬೆಂಬಲವನ್ನು ಹಿಡಿದಿಟ್ಟುಕೊಂಡು ಗಮ್ಯ ತಲುಪುವ ಸವಾಲು ಅವರ ಮುಂದಿದೆ. 




ಸೋಮವಾರ, ಜನವರಿ 25, 2021

How to enable Two Step Verification in Telegram? ಟೆಲಿಗ್ರಾಮ್‌ನಲ್ಲಿ ಟು ಸ್ಟೆಪ್‌ ವೆರಿಫಿಕೇಷನ್‌ ಹೇಗೆ?

- ಮಲ್ಲಿಕಾರ್ಜುನ ತಿಪ್ಪಾರ

ಫೇಸ್ಬುಕ್ಒಡೆತನದ ವಾಟ್ಸ್ಆ್ಯಪ್ಈಗಲೂ ಜಗತ್ತಿನ ಅತ್ಯಂತ ಜನಪ್ರಿಯ ಮೆಸೆಂಜರ್ಆ್ಯಪ್ಎನ್ನುವುದು ನಿರ್ವಿವಾದ. ಆದರೆ, ಯಾವಾಗ ವಾಟ್ಸ್ಆ್ಯಪ್ನಲ್ಲಿರುವ ಮಾಹಿತಿಯನ್ನು ಫೇಸ್ಬುಕ್ಜತೆ ಹಂಚಿಕೊಳ್ಳಬೇಕು ಎಂಬ ನೀತಿಯನ್ನು ತರುವುದಾಗಿ ಫೇಸ್ಬುಕ್ಹೇಳಿತೋ ಆಗ  ಬಳಕೆದಾರರಿಂದ ತೀವ್ರ ವಿರೋಧ ವ್ಯಕ್ತವಾಯಿತು. ಪರಿಣಾಮ, ಫೇಸ್ಬುಕ್ವಾಟ್ಸ್ಆ್ಯಪ್ಪ್ರೈವೆಸಿ ಪಾಲಿಸಿಯನ್ನು ಒಂದಿಷ್ಟು ಕಾಲ ಮುಂದೂಡಿದೆ. ಏತನ್ಮಧ್ಯೆ, ಸಿಗ್ನಲ್ಮತ್ತು ಟೆಲಿಗ್ರಾಮ್ನಂಥ ಪರ್ಯಾಯ ಮೆಸೆಂಜರ್ಆ್ಯಪ್ಗಳ ಬಗ್ಗೆ ಜನರು ಹೆಚ್ಚೆಚ್ಚು ಮೋಹ ಬೆಳೆಸಿಕೊಳ್ಳುತ್ತಿದ್ದಾರೆಸದ್ಯ 56 ಲಕ್ಷ ಕ್ಕೂ ಅಧಿಕ ಟೆಲಿಗ್ರಾಮ್ಆ್ಯಪ್ಡೌನ್ಲೋಡ್ಆಗಿದ್ದರೆ, ಸಿಗ್ನಲ್ನ ಈ ಪ್ರಮಾಣ 75 ಲಕ್ಷ ಕ್ಕೇರಿಕೆಯಾಗಿದೆ. ಇದೆಲ್ಲವೂ ವಾಟ್ಸ್ಆ್ಯಪ್ಗೆ ಪರ್ಯಾಯವಾಗಿ ಜನರು ಕಂಡುಕೊಳ್ಳುತ್ತಿರುವ ಡಿಜಿಟಲ್ದಾರಿಗಳಾಗಿವೆ.

ವಾಟ್ಸ್ಆ್ಯಪ್ಪ್ರೈವೆಸಿ ಪಾಲಿಸಿ ಘೋಷಣೆ ಬಳಿಕ ಸಿಗ್ನಲ್ಮತ್ತು ಟೆಲಿಗ್ರಾಮ್ಗೆ ಸಿಕ್ಕಾಪಟ್ಟೆ ಬಳಕೆದಾರರು ಹೆಚ್ಚುತ್ತಿರುವ ಸಂಗತಿಗಳು ಈಗ ಗುಟ್ಟಾಗಿ ಉಳಿದಿಲ್ಲ. ಹಾಗೆಂದಮಾತ್ರಕ್ಕೆ ಈ ಎರಡೂ ಆ್ಯಪ್ಗಳು ಗರಿಷ್ಠ ಸುರಕ್ಷಿತವಾಗಿವೆಯೇ? ಖಂಡಿತ ಇಲ್ಲ. ಇಲ್ಲೂಒಂದಿಷ್ಟು ಆತಂಕಗಳಿವೆ. ಆದರೆ, ವಾಟ್ಸ್ಆ್ಯಪ್ನ ಹೊಸ ಪ್ರೈವೆಸಿ ಪಾಲಿಸಿಯಷ್ಟು (ಈಗ ಮುಂದೂಡಲಾಗಿದೆ) ಆತಂಕ­ಕಾರಿಯಲ್ಲ! ಇದು ಒಂದು ಬಾಜುವಿನ ಚರ್ಚೆ; ಮತ್ತೊಂದು ಬಾಜು ನೋಡುವುದಾದರೆ, ಟೆಲಿಗ್ರಾಮ್ಅನ್ನು ಅತ್ಯಂತ ಸುರಕ್ಷಿತವಾಗಿ ಬಳಸುವುದು ಹೇಗೆ ಪ್ರಶ್ನೆ ಮೂಡುತ್ತದೆ. ನಿಮ್ಮ ಮಾಹಿತಿಯನ್ನು ಬೇರೆಯವರು ನೋಡದಂತೆ ಅಥವಾ ನಿಮ್ಮ ಖಾತೆಯನ್ನು ಹೆಚ್ಚು ಸುರಕ್ಷಿತವಾಗಿಸಲು ಕಂಪನಿಯೇ ಒದಗಿಸುವ ಕೆಲವು ಕ್ರಮಗಳನ್ನು ಅನುಸರಿಸಬೇಕಾಗುತ್ತದೆ. ಆ ಪೈಕಿಟು ಸ್ಟೆಪ್ವೆರಿಫಿಕೇಷನ್‌  ಕೂಡ ಒಂದು.

ಟು ಸ್ಟೆಪ್ವೆರಿಫಿಕೇಷನ್ಹೇಗೆ?
ಮೊದಲಿಗೆ ಸ್ಮಾರ್ಟ್ಫೋನ್ನಲ್ಲಿಟೆಲಿಗ್ರಾಮ್ಆ್ಯಪ್ಓಪನ್ಮಾಡಿ. ಬಳಿಕ ಎಡಗಡೆ ಸ್ವೈಪ್ಮಾಡುವ ಮೂಲಕ ಮೆನು ಓಪನ್ಮಾಡಿ ಇಲ್ಲವೇ ಹೆಂಬರ್ಗರ್ಐಕಾನ್ಮೇಲೆ ಟ್ಯಾಪ್ಮಾಡಿ. ಆಗ ಸೆಟ್ಟಿಂಗ್ಸ್ಗೆ ಹೋಗುತ್ತೀರಿ. ಸೆಟ್ಟಿಂಗ್ಸ್ಮೆನುವಿನಲ್ಲಿಪ್ರೈವೆಸಿ ಮತ್ತು ಸೆಕ್ಯುರಿಟಿ ಆಪ್ಷನ್ಅನ್ನು ಆಯ್ಕೆ ಮಾಡಿಕೊಳ್ಳಿ. ಬಳಿಕ ಟು ಸ್ಟೆಪ್ವೆರಿಫಿಕೇಷನ್ಆಯ್ಕೆ ಮೇಲೆ ಟ್ಯಾಪ್ಮಾಡಿ. ಪಾಸ್ವರ್ಡ್ಹಾಕಿದ ಬಳಿಕ ನೀವು ಪಾಸ್ವರ್ಡ್ಹಿಂಟ್ಮತ್ತು ರಿಕವರಿ ಇಮೇಲ್ಸೇರಿಸಬೇಕಾಗುತ್ತದೆ. ಇಷ್ಟಾದ ಮೇಲೆ, ಟೆಲಿಗ್ರಾಮ್ಕಳುಹಿಸುವ ಕೋಡ್ನಮೂದಿಸಿ. ಅಲ್ಲಿಗೆ ಟು ಸ್ಟೆಪ್ವೆರಿಫಿಕೇಷನ್ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ.

ಇದು ಟೆಲಿಗ್ರಾಮ್ನಲ್ಲಿ ಟು ಸ್ಟೆಪ್ವೆರಿಫಿಕೇಷನ್ಮಾಡಲು ಅನುಸರಿಸಬೇಕಾದ ಮಾದರಿ­ಯಾಗಿದೆ. ಟು ಸ್ಟೆಪ್ವೆರಿಫಿಕೇಷನ್ಸಕ್ರಿಯಗೊಂಡ ಮೇಲೆ, ಹೊಸ ಸಾಧನದಲ್ಲಿಟೆಲಿಗ್ರಾಮ್ಓಪನ್ಮಾಡಲು ಈ ಹಿಂದೆ ಟು ಸ್ಟೆಪ್ವೆರಿಫಿಕೇಷನ್ಗೆ ನೀಡಿದ ಪಾಸ್ವರ್ಡ್ಅನ್ನು ಹಾಕಬೇಕಾಗು­ತ್ತದೆ ಮತ್ತು ಎಸ್ಸೆಮ್ಮೆಸ್ಮೂಲಕ ಟೆಲಿಗ್ರಾಮ್ರವಾನಿಸುವ ಕೋಡ್ಅನ್ನು ಕೂಡ ಹಾಕಬೇಕು. ಆಗ ಮಾತ್ರವೇ ಟೆಲಿಗ್ರಾಮ್ನಿಮ್ಮ ಬಳಕೆಗೆ ತೆರೆದುಕೊಳ್ಳುತ್ತದೆ.

ಲಾಸ್ಟ್ಸೀನ್ಮುಚ್ಚಿಡುವುದು ಹೇಗೆ?
ಟೆಲಿಗ್ರಾಮ್ಆ್ಯಪ್ಓಪನ್ಮಾಡಿ, ಸ್ಕ್ರೀನ್ನ ಎಡಮೂಲೆಯಲ್ಲಿರುವ ಹೆಂಬರ್ಗರ್ಐಕಾನ್ಮೇಲೆ ಟ್ಯಾಪ್ಮಾಡಿ. ಆಗ ಸೆಟ್ಟಿಂಗ್ಸ್ಬಾಕ್ಸ್ನಲ್ಲಿರುವ ಪ್ರೈವೆಸಿ ಮತ್ತು ಸೆಕ್ಯುರಿಟಿ ಆಪ್ಷನ್ಮೇಲೆ ಟ್ಯಾಪ್ಮಾಡಿ. ಬಳಿಕ ಲಾಸ್ಟ್ಸೀನ್ಆಪ್ಷನ್ಮೇಲೆ ಟ್ಯಾಪ್ಮಾಡಿ. ಆಗ ಯಾರು ನಿಮ್ಮ ಲಾಸ್ಟ್ಸೀನ್ನೋಡಬಹುದು ಎಂಬುದಕ್ಕೆ ಆಯ್ಕೆಗಳು ಕಾಣುತ್ತವೆ. Every one to my contacts and Nobody ಪೈಕಿ ಲಾಸ್ಟ್ಸೀನ್ಕಾಣಿಸದಂತೆ ಮಾಡಲು ನೀವು ನೋಬಡಿ ಆಪ್ಷನ್ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ಇದಕ್ಕಾಗಿ ಸ್ಕ್ರೀನ್ನ ರೈಟ್ಸೈಡ್ನಲ್ಲಿರುವ ಚೆಕ್ಮಾರ್ಕ್ಮೇಲೆ ಟ್ಯಾಪ್ಮಾಡಿ. ಆಗ ಎದುರಾಗುವ ಪಾಪ್ಅಪ್ನಲ್ಲಿ ನೀವು ಯಾರೊಂದಿಗೆ ನಿಮ್ಮ ಲಾಸ್ಟ್ಸೀನ್ಟೈಮ್ನೋಡಲು ಅವಕಾಶ ಕಲ್ಪಿಸುವುದಿಲ್ಲವೋ ಅವರ ಲಾಸ್ಟ್ಸೀನ್

ಅನ್ನು ನೀವು ನೋಡಲು ಸಾಧ್ಯವಾಗುವುದಿಲ್ಲಎಂಬ ಸಂದೇಶವನ್ನು ಕಾಣಬಹುದು. ಇಷ್ಟಾದ ಬಳಿಕ ನೀವು ಎಂದು ಓಕೆ ಎಂದು ಒಪ್ಪಿಗೆ ಕೊಟ್ಟರೆ ಲಾಸ್ಟ್ಸೀನ್ಮುಚ್ಚಿಡುವ ಪ್ರಕ್ರಿಯೆ ಪೂರ್ಣಗೊಳಿಸಿದಂತಾಗುತ್ತದೆ. 




ಬುಧವಾರ, ಜನವರಿ 13, 2021

Is Signal more secure than Whatsapp?- ವಾಟ್ಸ್‌ಆ್ಯಪ್‌ಗಿಂತ ಸಿಗ್ನಲ್‌ ಹೇಗೆ ಬೆಸ್ಟು?

- ಮಲ್ಲಿಕಾರ್ಜುನ ತಿಪ್ಪಾರ
ಜಗತ್ತಿನ ನಂಬರ್‌ 1 ಶ್ರೀಮಂತ, ಟೆಸ್ಲಾ ಕಂಪನಿಯ ಮಾಲೀಕ ಎಲಾನ್ಮಸ್ಕ್ಆ ಒಂದು ಟ್ವೀಟ್ಮಾಡ­ದಿದ್ದರೆ ಈ ಜಗತ್ತುಸಿಗ್ನಲ್‌’ ಎಂಬ ಆ್ಯಪ್ಹಿಂದೆ ಬೀಳುತ್ತಿರ­ಲಿಲ್ಲವೇನೋ? ವಾಟ್ಸ್ಆ್ಯಪ್ಹೊಸ ಪ್ರೈವೆಸಿ ನೀತಿಯನ್ನು ಜಾರಿಗೆ ತರಲು ಮುಂದಾಗುತ್ತಿದ್ದಂತೆ ಎಲಾನ್ಮಸ್ಕ್Use Signal ಅಂತಾ ಸಿಂಪಲ್ಆಗಿ ಮಾಡಿದ ಈ ಟ್ವೀಟ್ಸಿಗ್ನಲ್ಫೌಂಡೇಷನ್ನ ಸರ್ವರ್ ಕ್ರ್ಯಾಶ್ಆಗುವಂತೆ ಮಾಡಿತು! ಐದಾರು ದಿನಗಳಲ್ಲಿಸಿಗ್ನಲ್ಗೆ ಸೈನ್ಇನ್ಆಗುತ್ತಿರುವವರ ಸಂಖ್ಯೆಯಲ್ಲಿವಿಪರೀತ ಹೆಚ್ಚಳವಾಗಿದೆ. ಜಗತ್ತು ಈಗ ಸಿಗ್ನಲ್ಸಮೂಹ ಸನ್ನಿಗೆ ಒಳಗಾಗಿದೆ.

ಜಗತ್ತಿನಾದ್ಯಂತ ಪತ್ರಕರ್ತರು, ಕಾರ್ಯಕರ್ತರು, ವಕೀಲರು, ಸಂಶೋಧ­ಕರು, ರಾಜ­­ಕಾರ­ಣಿ­ಗಳು, ಸುರಕ್ಷತಾ ತಜ್ಞರು ಹೆಚ್ಚಾಗಿ ಈ ಸಿಗ್ನಲ್ಆ್ಯಪ್ಬಳಸು­­ತ್ತಿದ್ದರು. ಆದರೆ ಈಗ ಸಾಮಾ­ನ್ಯರೂ ಸಿಗ್ನಲ್ಗೆ ಅಡಿಯಿಡುತ್ತಿದ್ದಾರೆ. ಲಾಭ­ರಹಿತ ಸಂಸ್ಥೆಯಾಗಿರುವ ಸಿಗ್ನಲ್ಫೌಂಡೇ­­ಷನ್ಒಡೆತನದ ಸಿಗ್ನಲ್ಆ್ಯಪ್‌,  ಸುರ­­­­­­ಕ್ಷ­ತೆಯ ದೃಷ್ಟಿಯಿಂದ ಮಜಬೂತ್ಆಗಿದೆ. ನಿಮ್ಮ ಯಾವ ಮಾಹಿತಿಯೂ 3ನೇ ವ್ಯಕ್ತಿಯ ಪಾಲಾಗುವುದಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ನಿಮ್ಮ ಡೇಟಾ ಯಾವುದೇ ಅನ್ಯ ಉದ್ದೇಶಕ್ಕೆ ಬಳಕೆಯಾಗುವುದಿಲ್ಲ. ಹಾಗಾಗಿ, ಹೆಚ್ಚಿನವರು ಸಿಗ್ನಲ್ಮೇಲೆ ವಿಶ್ವಾಸ ಇಡುವಂತಾಗಿದೆ. ಹಾಗಾದರೆ, ಸಿಗ್ನಲ್ನಲ್ಲಿ ಏನಿದೆ, ವಾಟ್ಸ್ಆ್ಯಪ್ಗಿಂತಲೂ ಹೇಗೆ ಬೆಸ್ಟು?

ಲಾಭರಹಿತ ಸಂಸ್ಥೆಯ ಒಡೆತನ
ವಾಟ್ಸ್ಆ್ಯಪ್ಗಿಂತ ಸಿಗ್ನಲ್ಯಾಕೆ ಮುಖ್ಯವಾಗುತ್ತದೆ ಎಂದರೆ, ಈ ಆ್ಯಪ್ಯಾವುದೇ ದೊಡ್ಡ ಟೆಕ್ಕಂಪನಿಯದ್ದಲ್ಲ. ಬದಲಿಗೆ, ಲಾಭರಹಿತ ಸಿಗ್ನಲ್ಫೌಂಡೇಷನ್ಗೆ ಸೇರಿದೆ. ಹಾಗಾಗಿ, ಬಳಕೆದಾರರ ಡೇಟಾ­ವನ್ನು ಅದು ವಾಣಿಜ್ಯ ಕಾರಣಕ್ಕೆ ಬಳಸಿಕೊಳ್ಳಲಾರದು. ಜೊತೆಗೆ, ಈ ಆ್ಯಪ್ನಿಗೂಢ ಪಠ್ಯವನ್ನು ಯಾರೂ ಡಿಕೋಡ್ಮಾಡಲು ಆಗೋದಿಲ್ಲ. ಫೌಂಡೇಶನ್ಗೆ ಬರುವ ಡೊನೇಷನ್ಮತ್ತು ಬಳಕೆದಾರರು ನೀಡುವ ಹಣವೇ ಇವರಿಗೆ ಆಧಾರ.

ಎಲ್ಲ ಖುಲ್ಲಂ ಖುಲ್ಲಾ

ಸಿಗ್ನಲ್ಆ್ಯಪ್ಒಂದು ರೀತಿಯಲ್ಲಿ ತೆರೆದ ಪುಸ್ತಕ. ಇಲ್ಲಿ ಯಾವ ಮುಚ್ಚುಮರೆಯೂ ಇಲ್ಲ. ನೀವು ಈ ಆ್ಯಪ್ನ ಸೋರ್ಸ್ಕೋಡ್ನೋಡಬಹುದು. ಅದು ಸಾರ್ವಜನಿಕವಾಗಿ ಲಭ್ಯವಿದೆ. ಅಂದರೆ, ಜಗತ್ತಿನಾದ್ಯಂತ ತಜ್ಞರು ಈ ಕೋಡ್ನೋಡುವುದರಿಂದ ಏನಾದರೂ ಸಮಸ್ಯೆ ಎದುರಾದರೆ ಮೆಸೆಂಜರ್ ಮತ್ತು ವಾಟ್ಸ್ಆ್ಯಪ್ಗಿಂತಲೂ ಫಾಸ್ಟ್ಆಗಿ ಸರಿಪಡಿಸಲು ಸಾಧ್ಯವಾಗುತ್ತದೆ. ಮತ್ತು ಯಾವುದೂ ರಹಸ್ಯವಾಗಿ ಉಳಿಯುವುದಿಲ್ಲ. ಇದೇ ಮಾತನ್ನು ನೀವು ವಾಟ್ಸ್ಆ್ಯಪ್ಗೆ ಹೇಳುವಂತಿಲ್ಲ.

ಎಲ್ಲವೂ ನಿಗೂಢ ಲಿಪಿ
ನಿಮ್ಮ ಪ್ರೊಫೈಲ್ಫೋಟೊ, ನಿಮ್ಮ ಧ್ವನಿ, ವಿಡಿಯೋ ಕಾಲ್ಸ್‌, ಫೋಟೊ ಅಟ್ಯಾಚ್ಮೆಂಟ್ಸ್‌, ಸ್ಟಿಕರ್ಸ್‌, ಲೊಕೇಷನ್ಪಿನ್ಸ್‌. ಅಷ್ಟೇ ಯಾಕೆ ನೀವು ಕಳುಹಿಸುವ ಜಿಐಎಫ್ಕೂಡ ಎನ್ಕ್ರಿಪ್ಟೆಡ್ಆಗಿರುತ್ತದೆ. ಈ ವಿಷಯದಲ್ಲಿ ವಾಟ್ಸ್ಆ್ಯಪ್ಗಿಂತಲೂ ಸಿಗ್ನಲ್ಹೆಚ್ಚು ನಂಬಿಕೆಗೆ ಅರ್ಹವಾಗಿದೆ. ಬಳಕೆದಾರರ ಮಾಹಿತಿ ಸುರಕ್ಷತೆಯ ವಿಷಯದಲ್ಲಿ ಸಿಗ್ನಲ್ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ.

ಎಲ್ಲವೂ ಸುರಕ್ಷಿತ
ಸಿಗ್ನಲ್ನ ಇನ್ನೊಂದು ಖಾಸಿಯತ್ಏನೆಂದರೆ, ಇಲ್ಲಿ ಎಲ್ಲವೂ ಸುರಕ್ಷಿತ. ನಿಮ್ಮ ಸುರಕ್ಷಿತ ಮೆಸೆಜ್ಗಳನ್ನು ಸಿಗ್ನಲ್ಕ್ಲೌಡ್ಗೆ ಕಳುಹಿಸು­ವುದಿಲ್ಲ. ಯಾಕೆಂದರೆ, ಈ ಕ್ಲೌಡ್ನಲ್ಲಿರುವ ಸಂದೇಶಗಳನ್ನು

ವಾಟ್ಸ್ಆ್ಯಪ್‌, ಗೂಗಲ್ಸೇರಿದಂತೆ ಯಾರು ಬೇಕಿದ್ದರೂ ಅವುಗಳನ್ನು ಓದಬಹುದು. ಬದಲಿಗೆ, ಇಂಥ ಬ್ಯಾಕ್ಅಪ್ಗಳನ್ನು ನಿಮ್ಮ ಫೋನ್ನ ಡೇಟಾಬೇಸ್ನಲ್ಲಿ ನಿಗೂಢಲಿಪಿ­ಯಲ್ಲಿ ಸಿಗ್ನಲ್ಸೇವ್ಮಾಡುತ್ತದೆ ಮತ್ತು ಅದನ್ನು ನೀವು ಮಾತ್ರ ನೋಡಲು ಸಾಧ್ಯವಾಗುತ್ತದೆ. ಇನ್ನೂ ಆಶ್ಚರ್ಯ ಎಂದರೆ, ಇದು ನಿಮ್ಮ ಫೋನ್ನಲ್ಲಿರುವ ಸಂಪರ್ಕ ಸಂಖ್ಯೆಗಳನ್ನೂ ತನ್ನ ಸರ್ವರ್ನಲ್ಲಿ ಉಳಿಸಿಕೊಳ್ಳುವುದಿಲ್ಲ!

ಕಣ್ಮರೆಯಾಗುವ ಮೆಸೆಜ್
ಇದರಲ್ಲೇನು ವಿಶೇಷ ಎನ್ನಬೇಡಿ. ವಾಟ್ಸ್ಆ್ಯಪ್ನಲ್ಲಿ ಈ ಫೀಚರ್ಇದೆಯಲ್ಲ ಅನ್ನಬಹುದು. ಆದರೆ, ಈ ಫೀಚರ್ಸಿಗ್ನಲ್ನ ಅತ್ಯಂತ ಹಳೆಯ ಮತ್ತು ಅತ್ಯಂತ ಉಪಯುಕ್ತ ಫೀಚರ್ಆಗಿದೆ. ವಾಟ್ಸ್ಆ್ಯಪ್ನಲ್ಲಿ ಅದು ಇತ್ತೀಚೆಗಷ್ಟೇ ಬಂದಿದೆ. ಬಳಕೆದಾರರು ತಮ್ಮ ಸಂದೇಶಕ್ಕೆ ಹತ್ತು ಸೆಕೆಂಡ್ನಿಂದ ವಾರದವರೆಗೂ ಟೈಮರ್ಅಳವಡಿಸ­ಬಹುದು. ಆ ಬಳಿಕ ಅದು ಸ್ವಯಂ ಆಗಿ ಕಣ್ಮರೆಯಾಗುತ್ತದೆ. ಒಂದು ಬಾರಿ ವೀಕ್ಷಿಸಬಹುದಾದ ಮೀಡಿಯಾ ಮತ್ತು ಮೆಸೆಜ್ರಿಕ್ವೆಸ್ಟ್ಗಳು ವಾಟ್ಸ್ಆ್ಯಪ್ನಲ್ಲೂ ಇಲ್ಲ.

ಬೇರೆ ಆ್ಯಪ್ಗಳು ಕನ್ನ ಹಾಕುವಂಗಿಲ್ಲ
ಈ ಫೀಚರ್ ವಾಟ್ಸ್ಆ್ಯಪ್ಸೇರಿದಂತೆ ಸೇರಿದಂತೆ ಇತರ ಯಾವುದೇ ಪ್ರಮುಖ ಮೆಸೆಂಜರ್ಆ್ಯಪ್ಗಳಲ್ಲೂ ಇಲ್ಲ. ಸಿಗ್ನಲ್ನಲ್ಲಿ ಇನ್ಕಾಗ್ನಿಟೋ ಕೀಬೋರ್ಡ್ಆಪ್ಷನ್ಇದ್ದು, ಇದು ನೀವು ಏನನ್ನು ಟೈಪ್ಮಾಡುತ್ತಿದ್ದೀರಿ ಎಂಬುದನ್ನು ಗುರುತಿಸುವುದಿಲ್ಲ. ಸ್ಕ್ರೀನ್ಸೆಕ್ಯುರಿಟಿ ಫೀಚರ್‌, ನಿಮ್ಮ ಸಿಗ್ನಲ್ಆ್ಯಪ್ನಲ್ಲಿರುವ ಮಾಹಿತಿಯನ್ನು ಕದ್ದು ನೋಡುವುದನ್ನು ತಪ್ಪಿಸುತ್ತದೆ. ಇದನ್ನು ಗಮನಿಸಿದರೆ ಜಗತ್ತಿನಲ್ಲೇ ಸಿಗ್ನಲ್ಅತ್ಯಂತ ಸೆಕ್ಯೂರ್ಆಗಿರುವ ಮೆಸೆಂಜರ್ಆ್ಯಪ್ಎನ್ನುವುದು ತಿಳಿಯು­ತ್ತದೆ. ಆದರೆ, ದುರದೃಷ್ಟವಶಾತ್ಈ ಆ್ಯಪ್ಬಗ್ಗೆ ಜಗತ್ತು ತೀರಾ ಇತ್ತೀಚಿನವರೆಗೂ ಅಪರಿಚಿತವಾಗಿರುವುದು ಚೋದ್ಯವೇ ಸರಿ!



ಸೋಮವಾರ, ಜನವರಿ 4, 2021

Former home minister Buta Singh: ನಿರ್ದಯ ನಡೆಯ ಬೂಟಾ ಸಿಂಗ್‌

ತಮ್ಮ ಅನಿಯಂತ್ರಿತ ಅಧಿಕಾರದ ಚಲಾವಣೆ ಮೂಲಕ ಪ್ರಜಾಪ್ರಭುತ್ವದ ಲೋಪಗಳನ್ನು ಎತ್ತಿ ತೋರಿಸಿದ, ಆ ನೆಪದಲ್ಲಿಅದನ್ನು ಗಟ್ಟಿಗೊಳಿಸಲು ಕಾರಣರಾದ ಬೂಟಾ ಸಿಂಗ್‌ ಅವರನ್ನು ನೆನಪಿಟ್ಟುಕೊಳ್ಳಲೇಬೇಕು.


- ಮಲ್ಲಿಕಾರ್ಜುನ ತಿಪ್ಪಾರ

ಏಳು ವರ್ಷದ ಬಾಲಕನೊಬ್ಬನಿಗೆ ಆತನ ಚಿಕ್ಕಪ್ಪ, ಕಣಜದ ಗೂಡು ತೋರಿಸಿ ಅದರಲ್ಲಿಜೇನು ಇದೆ ಎಂದು ಹೇಳುತ್ತಾರೆ. ಆ ಬಾಲಕ, ಹಿಂದೆ ಮುಂದೆ ಯೋಚಿಸದೇ ಮರ ಏರಿ, ನಿರ್ದಯವಾಗಿ ಈ ಕಣಜದ ಗೂಡನ್ನು ಕೆಡವುತ್ತಾನೆ. ಗೂಡಿನಲ್ಲಿದ್ದ ಕಣಜದ ಹಾರುಹುಳಗಳು ಬೆನ್ನ ಹತ್ತಿದ್ದರಿಂದ ಮರ ಮೇಲಿಂದ ಬಿದ್ದು ಕಾಲು ಮುರಿದುಕೊಳ್ಳುತ್ತಾನೆ. 

ಆ ಬಾಲಕನೇ ಮುಂದೆ ‘ನಿರ್ದಯಿ’ ರಾಜಕಾರಣಿಯಾಗಿ ರೂಪುಗೊಂಡ ಬೂಟಾ ಸಿಂಗ್‌. ಅವರ ಈ ಸ್ವಭಾವದ ಪರಿಣಾಮಗಳು ಇಂದಿರಾ ಗಾಂಧಿ ಮತ್ತು ರಾಜೀವ್‌ ಗಾಂಧಿ ಕಾಲದಲ್ಲಿಢಾಳಾಗಿ ಎದ್ದು ಕಂಡಿತು.  ಇಂದಿರಾ ಮತ್ತು ರಾಜೀವ್‌ ಅವರ ‘ಪರಮ ನಿಷ್ಠ’ರಾಗಿದ್ದ ಬೂಟಾ, ಅವರ ಎಲ್ಲಕಾರ್ಯಗಳನ್ನು ಯಾವುದನ್ನೂ ಲೆಕ್ಕಿಸದೇ ಮಾಡಿ ಬಿಡುತ್ತಿದ್ದರು. ಪರಿಣಾಮ­ವಾಗಿ ಅವರನ್ನು ಮಾಧ್ಯಮಗಳು ಅತ್ಯಂತ ವಿವಾದಿತ ರಾಜಕಾರಣಿ, ರಾಜೀವ್‌ ಬಂಟ ಎಂದು ಇಂದಿಗೂ ಗುರುತಿಸುತ್ತವೆ. ಅಂಥ ಬೂಟಾ ಸಿಂಗ್‌ ಅವರು, ಕಾಂಗ್ರೆಸ್‌ಗೆ ಏನೆಲ್ಲಮಾಡಿದೆ. ತನ್ನ ನಿಷ್ಠೆಯನ್ನು ಯಾರೂ ಪರಿಗಣಿ ಸಲೇ ಇಲ್ಲಎಂಬ ಕೊರಗಿನಲ್ಲೇ 86ನೇ ವಯಸ್ಸಿನಲ್ಲಿಕೊನೆಯುಸಿರೆಳೆದಿದ್ದಾರೆ. 

ರಾಜೀವ್‌ ಗಾಂಧಿ ಪ್ರಧಾನಿಯಾಗಿದ್ದಾಗ ಅಕ್ಷ ರಶಃ ಅವರು ಕ್ಯಾಬಿನೆಟ್‌ನಲ್ಲಿಎರಡನೇ ಸ್ಥಾನದಲ್ಲಿ­ದ್ದರು. ಇತರ ಎಲ್ಲಸಚಿವರಿಗಿಂತಲೂ ರಾಜೀವ್‌ ಅವರನ್ನು ಬಹಳ ಸಲೀಸಾಗಿ ಭೇಟಿಯಾಗುತ್ತಿದ್ದರು. ದೇಶದ ಗೃಹ ಮಂತ್ರಿಯಾಗಿದ್ದಾಗ ರಾಜ್ಯ ಸರಕಾರಗಳನ್ನು ಕಣ್ಣು ಮಿಟುಕಿಸುವಷ್ಟರಲ್ಲಿಕೆಡವಿ ಬಿಡುತ್ತಿದ್ದರು. ಅಂಥ ನಿರ್ದಯಿ ರಾಜಕಾರಣಿ ಬೂಟಾ ಸಿಂಗ್‌. 

ರಾಜೀವ್‌ ಕಾಲದಲ್ಲಿಕಾಂಗ್ರೆಸ್‌ನ ದಲಿತ ಹಾಗೂ ಏಕೈಕ ಸಿಖ್‌ ಮುಖವಾಗಿದ್ದ ಬೂಟಾ ಸಿಂಗ್‌ ರಾಜಕಾರಣದ ಹಿನ್ನೆಲೆಯಲ್ಲಿಬೆಳೆದು ಬಂದವರಲ್ಲ. ಪಂಜಾಬ್‌ನ ಜಲಂಧರ್‌ ಜಿಲ್ಲೆಯ ಮುಸ್ತಫಾಪುರದಲ್ಲಿ1934 ಮಾರ್ಚ್‌ 21ರಂದು ಬೂಟಾ ಸಿಂಗ್‌ ಜನಿಸಿದರು. ಬೂಟಾ ಅವರದ್ದು ಸಾಧಾರಣ ಹಿನ್ನೆಲೆಯ ಕುಟುಂಬ. ಲಿಯಾಲ್‌ಪುರ ಖಾಲ್ಸಾ ಕಾಲೇಜ್‌ನಿಂದ ಬಿ.ಎ(ಆನರ್ಸ್‌) ಮತ್ತು ಬಾಂಬೆಯ ಗುರು ನಾನಾಕ್‌ ಖಾಲ್ಸಾ ಕಾಲೇಜ್‌ನಲ್ಲಿಎಂಎ ಪದವಿ ಪಡೆದುಕೊಂಡರು. ಬಳಿಕ ಬುಂದೇಲ್‌ಖಂಡ್‌ ವಿವಿಯಲ್ಲಿಪಿಎಚ್‌ಡಿ ಮಾಡಿದರು. 1964ರಲ್ಲಿಮಂಜಿತ್‌ ಕೌರ್‌ ಅವರನ್ನು ವಿವಾಹವಾದರು. ದಂಪತಿಗೆ ಮೂವರು ಮಕ್ಕಳಿದ್ದಾರೆ. 

ಬೂಟಾ ಸಿಂಗ್‌ ಅವರು ರಾಜಕಾರಣಕ್ಕೆ ಪ್ರವೇಶ ಪಡೆಯುವ ಮುಂಚೆ ಪತ್ರಕರ್ತರಾಗಿದ್ದರು. ಅಕಾಲಿ ದಳದ ಮೂಲಕ ರಾಜಕಾರಣ ಆರಂಭಿಸಿ ಕಾಂಗ್ರೆಸ್‌ನಲ್ಲಿಉತ್ತುಂಗಕ್ಕೇರಿ, ಬಿಜೆಪಿಯಲ್ಲೂಸ್ವಲ್ಪ ಕಾಲ ಇದ್ದು ಮತ್ತೆ ಕಾಂಗ್ರೆಸ್‌ಗೆ ಮರಳಿ ಸಕ್ರಿಯ ರಾಜಕಾರಣದಿಂದ ದೂರವಾಗಿದ್ದರು. 

ಬೂಟಾ ಅವರು ಅಕಾಲಿದಳ ಸೇರುವ ಮುಂಚೆ ಮಾರ್ಕ್ಸ್‌ ವಿಚಾರಗಳಿಗೆ ಮಾರು ಹೋಗಿದ್ದರು. ಬಾಂಬೆಯ ಖಾಲ್ಸಾ ಕಾಲೇಜ್‌ನಲ್ಲಿಇತಿಹಾಸ ಓದುತ್ತಿದ್ದಾಗ ಅವರು ಬೊಲ್ಶೆವಿಕ್‌ ಸಾಹಿತ್ಯದ ಕಟ್ಟಾ ಓದುಗರು. ‘ಫೂಲ್‌ವಾರಿ’ ಮ್ಯಾಗ್‌ಜಿನ್‌ನಲ್ಲಿಪ್ರೂಫ್‌ರೀಡರ್‌ ಆಗಿ ಕೆಲಸ ಮಾಡುತ್ತಿದ್ದಾಗ, 1953ರಲ್ಲಿಜೋಸೆಫ್‌ ಸ್ಟಾಲಿನ್‌ ನಿಧನದ ಸುದ್ದಿ ತಿಳಿದಾಗ ಕಣ್ಣೀರಿಟ್ಟಿದ್ದರು. ಅಂದರೆ, ಮಾರ್ಕ್ಸ್‌ವಾದ ಅವರನ್ನು ಅಷ್ಟೊಂದು ಆವರಿಸಿಕೊಂಡಿತ್ತು. ‘ಅಕಾಲಿ ಪತ್ರಿಕಾ’ದಲ್ಲಿಉಪ ಸಂಪಾದಕರಾಗಿಯೂ ಕೆಲಸ ಮಾಡಿದ್ದಾರೆ. 1962ರಲ್ಲಿಅಕಾಲಿ ದಳ ಬೂಟಾ ಅವರನ್ನು ರೋಪರ್‌ ಮೀಸಲು ಕ್ಷೇತ್ರದಿಂದ ಲೋಕಸಭೆಗೆ ಚುನಾವಣೆಗೆ ಕಣಕ್ಕಿಳಿಸಿತು. ಮುಂದೆ ಅಕಾಲಿ ಇಬ್ಭಾಗ ಆದಾಗ ಅವರು ತಾರಾ ಸಿಂಗ್‌ ಅವರೊಂದಿಗೆ ಹೆಜ್ಜೆ ಹಾಕಿದರಾದರೂ ಅವರೊಂದಿಗೆ ಬಹಳ ದಿನ ನಿಲ್ಲಲಿಲ್ಲ. ಇಂದಿರಾ ಅವರ ಪರಿಚಯವಾದ ಮೇಲೆ ಕಾಂಗ್ರೆಸ್‌ ಸೇರಿದರು. ಆನಂತರ ನಡೆದಿದ್ದೆಲ್ಲಇತಿಹಾಸ. 

ಇಂದಿರಾ ಗಾಂಧಿ ಅವರು ‘ಆಪರೇಷನ್‌ ಬ್ಲೂಸ್ಟಾರ್‌’ ಕಾರ್ಯಾಚರಣೆ ಕೈಗೊಂಡಾಗ ಅದರ ಎಲ್ಲನಿರ್ವಹಣೆ ಮಾಡಿವರು ಇದೇ ಬೂಟಾ ಸಿಂಗ್‌. ಸಚಿವರಾಗಿ ‘ಗೋಲ್ಡನ್‌ ಟೆಂಪಲ್‌’ನ ಪುನರ್‌ ನಿರ್ಮಾಣವನ್ನು ನೋಡಿಕೊಂಡರು. ಆದರೆ, ಸಿಖ್‌ ಧಾರ್ಮಿಕ ಗುರುಗಳು ಇವರನ್ನು ‘ಧರ್ಮಭ್ರಷ್ಟ’ ಎಂದು ಘೋಷಿಸಿದರು. ಬೂಟಾ ಸಿಂಗ್‌ ಆ ಬಳಿಕ ಸ್ವರ್ಣಮಂದಿರದಲ್ಲಿಭಕ್ತರ ಚಪ್ಪಲಿ ಕ್ಲೀನ್‌ ಮಾಡಿ ಪ್ರಾಯಶ್ಚಿತ್ತ ಕೂಡ ಮಾಡಿಕೊಂಡರೆನ್ನಿ. 

ರಾಜೀವ್‌ ಗಾಂಧಿ ಅವಧಿಯಲ್ಲಿಬೂಟಾ ಸಿಂಗ್‌ ರಾಜಕಾರಣಿಯಾಗಿ, ಆಡಳಿತಗಾರನಾಗಿ ಗ್ರಾಫ್‌ ಏರುಗತಿಯಲ್ಲಿತ್ತು; ಜೊತೆಗೆ ವಿವಾದಗಳೂ. ರಾಜೀವ್‌ ಸಂಪುಟದಲ್ಲಿಪಿ.ವಿ.ನರಸಿಂಹ ರಾವ್‌ ಮತ್ತು ಪಿ ಶಿವಶಂಕರ್‌ ಅವರಂಥ ಹಿರಿಯರಿದ್ದರೂ ಬೂಟಾ ಸಿಂಗ್‌ ಅಕ್ಷ ರಶಃ ರಾಜೀವ್‌ ನಂತರದ ಸ್ಥಾನದಲ್ಲಿವಿರಾಜಮಾನರಾದರು. ರಾಜೀವ್‌ ಅವರ ಬಂಟ ಎಂದೇ ಖ್ಯಾತರಾದರು. ಈ ಅವಧಿಯಲ್ಲಿಅವರು ಪ್ರತಿಕ್ಷ ಗಳ ಮುಖ್ಯಮಂತ್ರಿಗಳನ್ನು ಅಧಿಕಾರದಿಂದ ಕೆಳಗಿಳಿಸುವಲ್ಲಿಪ್ರಮುಖ ಪಾತ್ರ ವಹಿಸಿದರು. 1988ರಲ್ಲಿಜಾನಕಿ ರಾಮಚಂದ್ರನ್‌ ಸರಕಾರ ವಜಾಗೊಳಿಸಿದರು. ಕಾಂಗ್ರೆಸ್‌ನ ಅನೇಕ ಮುಖ್ಯಮಂತ್ರಿಗಳನ್ನು ಅಧಿಕಾರದಿಂದ ದೂರ ಸರಿಸುವ ಕಾರ್ಯವನ್ನು ಬೂಟಾ ನಿರ್ದಯಿಯಾಗಿ ಮಾಡಿದರು. ರಾಜಸ್ಥಾನದಲ್ಲಿಹರಿದೇವ್‌ ಜೋಶಿ, ಮಧ್ಯ ಪ್ರದೇಶದಲ್ಲಿಮೋತಿಲಾಲ್‌ ವೋರಾ ಇದಕ್ಕೆ ಉದಾಹಣೆಯಾಗಿ ನೀಡಬಹುದು. ರಾಜೀವ್‌ ಗಾಂಧಿ 1989ರಲ್ಲಿಅಯೋಧ್ಯೆಯ ವಿವಾದಿತ ಜಾಗದಲ್ಲಿರಾಮ ಮಂದಿರಕ್ಕೆ ಶಿಲಾನ್ಯಾಸ ನೆರವೇರಿಸಿದರು. ಅದರ ಹಿಂದೆ ಬೂಟಾ ಸಿಂಗ್‌ ಇದ್ದರು ಎಂದು ಇಂದಿಗೂ ಕಾಂಗ್ರೆಸ್‌ನವರು ಮಾತನಾಡಿಕೊಳ್ಳುತ್ತಾರೆ. 

1985ರಿಂದ 89ರ ಅವಧಿಯಲ್ಲಿಕೇಂದ್ರ ಗೃಹ ಸಚಿವರಾಗಿ ಬೂಟಾ ಸಿಂಗ್‌, ಅನೇಕ ರಾಜ್ಯ ಸರಕಾರಗಳನ್ನು ಉರುಳಿಸಲು ರಾಷ್ಟ್ರಪತಿಗೆ ಶಿಫಾರಸು ಮಾಡಿ­ದರು. ‘‘ಬೂಟಾ ಸಿಂಗ್‌ಜೀ, ನಿಮ್ಮ ಕೃಪಾಣ್‌(ಕತ್ತಿ) ಒಳಗಿಡಿ,’’ ಎಂದು ರಾಜೀವ್‌ ಅವರು ಹೇಳಿಧಿದ್ದರಂತೆ. ಅಷ್ಟೊತ್ತಿಗೆ, ಮಧ್ಯ ಪ್ರದೇಶ, ಜಮ್ಮು ಮತ್ತು ಕಾಶ್ಮೀರ, ತ್ರಿಪುರಾ, ರಾಜಸ್ಥಾನ, ಬಿಹಾರ ಮತ್ತಿತರ ರಾಜ್ಯ ಸರಕಾರಗಳನ್ನು ಬುಡಮೇಲು ಮಾಡಿಯಾಗಿತ್ತು. ಬಿಹಾರದ ರಾಜ್ಯಪಾಲರಾಗಿ­ದ್ದಾಗ ಅವರ ನಡೆದುಕೊಂಡ ರೀತಿ ಸುಪ್ರೀಂ ಕೋರ್ಟ್‌ ತೀಕ್ಷ ್ಣ ಟೀಕೆಗೂ ಗುರಿಯಾಗಿತ್ತು. 2005ರಲ್ಲಿಜೆಡಿಎಯು-­ಬಿಜೆಪಿಗೆ ಸರಕಾರ ರಚಿಸಲು ಆಹ್ವಾನ ನೀಡುವ ಬದಲು ಅಸೆಂಬ್ಲಿಯನ್ನೇ ವಿಸರ್ಜಿಸಿ ಬಿಟ್ಟಿದ್ದರು. ಕೇಂದ್ರ ಸಂಪುಟಕ್ಕೆ ತಪ್ಪು ಮಾಹಿತಿ, ಸಂಸದೀಯ ವ್ಯವಸ್ಥೆಯನ್ನೇ ಬುಡಮೇಲು ಮಾಡಿದ್ದೀರಿ ಎಂದು ಸುಪ್ರೀಂ ಕೋರ್ಟ್‌ ತಪರಾಕಿ ಹಾಕಿತ್ತು. ಇದು ಬಹಳ ಚರ್ಚೆ ಕಾರಣವಾಗಿತ್ತು. ಬಳಿಕ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು. 

ರಾಜೀವ್‌ ಬಳಿಕ ಕಾಂಗ್ರೆಸ್‌ನಲ್ಲಾದ ಬದಲಾ­ವಣೆಗಳು ಬೂಟಾ ಸಿಂಗ್‌ ಅವರನ್ನು ತೆರೆಮರೆಗೆ ಸರಿಯುವಂತೆ ಮಾಡಿದವು. ಆಗ ಅವರು ಬಿಜೆಪಿ ಸೇರಿ ವಾಜಪೇಯಿ ಸರಕಾರದಲ್ಲಿಸಚಿವರೂ ಆದರು. ಆದರೆ, ಜೆಎಂಎಂ ಲಂಚ ಪ್ರಕರಣದಲ್ಲಿಕೋರ್ಟ್‌ ಬೂಟಾ ಅವರ ವಿರುದ್ಧ ದೋಷಾರೋಪಣೆ ಮಾಡಿದ ಹಿನ್ನೆಲೆಯಲ್ಲಿಅವರನ್ನು ವಾಜಪೇಯಿ ಅವರು ಸಂಪುಟದಿಂದ ಕೈ ಬಿಟ್ಟ ಬಳಿಕ ಮತ್ತೆ ಮರಳಿ ಕಾಂಗ್ರೆಸ್‌ ಗೂಡು ಸೇರಿಕೊಂಡರು. ತಮ್ಮ ಅನಿಯಂತ್ರಿತ ಅಧಿಕಾರದ ಚಲಾವಣೆಯ ಮೂಲಕ ಭಾರತೀಯ ಪ್ರಜಾಪ್ರಭುತ್ವದ ಲೋಪಗ­ಳನ್ನು ಎತ್ತಿ ತೋರಿಸಿದ್ದಕ್ಕಾಗಿ ಮತ್ತು ಅದನ್ನು ಗಟ್ಟಿಗೊಳಿಸಲು ಪರೋಕ್ಷ ವಾಗಿ ಕಾರಣರಾದ ಬೂಟಾ ಸಿಂಗ್‌ ಅವರನ್ನು ನೆನಪಿಟ್ಟುಕೊಳ್ಳಲೇಬೇಕು!

ಸುಮಾರು ಐದು ದಶಕಗಳ ರಾಜಕೀಯ ಜೀವನದಲ್ಲಿಬೂಟಾ ಸಿಂಗ್‌ ಅವರದ್ದು ವರ್ಣರಂಜಿತ ವ್ಯಕ್ತಿತ್ವ. ವಿವಾದಗಳನ್ನೇ ಮೈಮೇಲೆ ಎಳೆದುಕೊಂಡಷ್ಟೇ ವೇಗವಾಗಿ ಅವುಗಳಿಂದ  ಹೊರಗೆ ಬರುವ ಕಲೆಯ ಅವರಿಗೆ ಗೊತ್ತಿತ್ತು. ಹಾಗಾಗಿಯೇ ಎಂಥದ್ದೇ ವಿವಾದಗಳು ಎದುರಾದರೂ ಎಲ್ಲವನ್ನು ನುಂಗಿಬಿಡುವ ಧಿಮಾಕು ಅವರಲ್ಲಿತ್ತು. ಎಂಟು ಬಾರಿ ಲೋಕಸಭೆಗೆ ಆಯ್ಕೆಯಾಗಿದ್ದ ಬೂಟಾ ಸಿಂಗ್‌, ಕೇಂದ್ರ ಗೃಹ, ರೈಲ್ವೆ, ವಾಣಿಜ್ಯ, ಬಂದರು ಮತ್ತು ಹೆದ್ದಾರಿ, ಸಂಸದೀಯ ವ್ಯವಹಾರ, ಕ್ರೀಡೆ, ಹೌಸಿಂಗ್‌, ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ, ನಾಗರಿಕ ಪೂರೈಕೆ-ಗ್ರಾಹಕ ವ್ಯವಹಾರ,  ಸಂವಹನ ಸೇರಿ ಹಲವು ಇಲಾಖೆಗಳನ್ನು ನಿರ್ವಹಿಸಿದ ಕಸುಬುದಾರರು. ತೀರಾ ಇತ್ತೀಚೆಗೆ ಅಂದರೆ, 2007ರಿಂದ 10ರವರೆಗೆ ಪರಿಶಿಷ್ಟ ಜಾತಿಗಳ ರಾಷ್ಟ್ರೀಯ ಆಯೋಗದ ಅಧ್ಯಕ್ಷ ರಾಗಿಯೂ ಕೆಲಸ ಮಾಡಿದ್ದಾರೆ. ತಮ್ಮ ಆಡಳಿತಾವಧಿಯಲ್ಲಿಅನೇಕ ಜನೋಪಕಾರಿ ಕೆಲಸ ಮಾಡಿದ್ದರೂ ಜನರು ಅವುಗಳನ್ನು ನೆನಪಿನಲ್ಲಿಟ್ಟುಕೊಂಡಿಲ್ಲ. ಯಾಕೆಂದರೆ, ಬೂಟಾ ಸಿಂಗ್‌ ಈಗಲೂ, ಇಂದಿರಾ ಅವರ ನೆಚ್ಚಿಗ ಮತ್ತು ರಾಜೀವ್‌ ಅವರ ಭಂಟ. ಎಲ್ಲಕ್ಕಿಂತ ಹೆಚ್ಚಾಗಿ ಅವರೊಬ್ಬ ವಿವಾದಿತ ರಾಜಕಾರಣಿ ಎಂಬುದು ನಿರ್ವಿವಾದ. ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿಯೂ ಆಗಿ ಪಕ್ಷ  ಸಂಘಟನೆಯಲ್ಲಿಅಮೂಲ್ಯ ಕೊಡುಗೆ ನೀಡಿದ್ದ ಬೂಟಾ ಸಿಂಗ್‌ ಅವರಿಗೆ ಕೊನೆಯ ದಿನಗಳಲ್ಲಿತಮ್ಮ ನಿಷ್ಠೆಯನ್ನು ಯಾರೂ ಪರಿಗಣಿಸುತ್ತಿಲ್ಲಎಂಬ ಚಿಂತೆ ಕಾಡುತ್ತಿತ್ತು. ತಮ್ಮ ಆಪ್ತರ ಬಳಿಯೂ ಹೇಳಿಕೊಂಡಿದ್ದರು.