ಸೋಮವಾರ, ಡಿಸೆಂಬರ್ 14, 2020

ಸೈಂಟಿಸ್ಟ್ ಸೂಪರ್‌ಹೀರೊ ಗೀತಾಂಜಲಿ

ಪ್ರತಿಷ್ಠತಟೈಮ್ಮ್ಯಾಗಜಿನ್ ನೀಡುತ್ತಿರುವಕಿಡ್ ಆ್ ದಿ ಇಯರ್ಗೌರವಕ್ಕೆ ಪಾತ್ರಳಾದ ಇಂಡಿಯನ್-ಅಮೆರಿಕನ್ ಬಾಲೆ ಗೀತಾಂಜಲಿ ರಾವ್, ಬಹುಮುಖ ಪ್ರತಿಭಾವಂತೆ.


- ಮಲ್ಲಿಕಾರ್ಜುನ ತಿಪ್ಪಾರ 

ಅಮೆರಿಕದಲ್ಲಿರುವ ಭಾರತೀಯ ಸಮುದಾಯವು ಎರಡು ಹೆಮ್ಮೆಯ ಕ್ಷಣಗಳಿಗೆ ಸಾಕ್ಷಿಯಾಗುತ್ತಿದೆ. ಭಾರತೀಯ ಮೂಲದ ಕಮಲಾ ಹ್ಯಾರಿಸ್ ಅಮೆರಿಕದ ಉಪಾಧ್ಯಕ್ಷರಾಗುವ ಮೂಲಕ ಇತಿಹಾಸ ಸೃಷ್ಟಿಸಿದರೆ, ಪ್ರತಿಷ್ಠತಟೈಮ್ಮ್ಯಾಗಜಿನ್ ಇದೇ ಮೊದಲ ಬಾರಿಗೆ ನೀಡುತ್ತಿರುವಕಿಡ್ಸ್ ಆ್ ದಿ ಇಯರ್ಗೌರವಕ್ಕೆ ಇಂಡಿಯನ್-ಅಮೆರಿಕನ್ ಬಾಲೆ, 15ರ ಹರೆಯದಗೀತಾಂಜಲಿ ರಾವ್ಅವರನ್ನು ಆಯ್ಕೆ ಮಾಡಿದೆ. ಈ ಬಾಲೆ ಮಂಗಳೂರು ಮೂಲದವಳು ಎನ್ನುವುದು ಕನ್ನಡಿಗರಾಗಿ ನಮಗೆ ಮತ್ತೊಂದು ಹೆಮ್ಮೆಯ ಕೋಡು!

ಗೀತಾಂಜಲಿ ರಾವ್ ಪ್ರತಿಭೆ ಯಾವುದೇ ಒಂದಕ್ಕೆ ಸೀಮಿತವಾಗಿಲ್ಲ. ಆಕೆ ಸಂಶೋಧಕಿ, ವಿಜ್ಞಾನಿ, ಫೆನ್ಸರ್, ಡ್ಯಾನ್ಸರ್, ಸಿಂಗರ್, ಬೇಕರ್, ಟೆಡ್ ಸ್ಪೀಕರ್... ಹೀಗೆ ಪಟ್ಟಿ ಬೆಳೆಯುತ್ತದೆ. ಅಮೆರಿಕದ ಕೊಲೊರಡೊದ ಡೆನೆವರ್ನಲ್ಲಿ ವಾಸವಾಗಿರುವ ಗೀತಾಂಜಲಿಟೈಮ್ಸ್ಮುಖಪುಟದಲ್ಲಿ ರಾರಾಜಿಸುವ ಖುಷಿಯ ಕ್ಷಣ ಸಲೀಸಾಗಿ ಸಿಕ್ಕಿದ್ದಲ್ಲ. ಅಮೆರಿಕದ ಐದು ಸಾವಿರಕ್ಕೂ ಹೆಚ್ಚು ಸ್ಪರ್ಧಾರ್ಥಿಗಳನ್ನು ಹಿಂದಿಕ್ಕಿ ಗೆದ್ದಿದ್ದಾಳೆ ಮತ್ತು ಈ ಗೌರವಕ್ಕೆ ಯಾವುದೇ ದೃಷ್ಟಿಯಿಂದ ನೋಡಿದರೂ ಆಕೆ ಸೂಕ್ತ ಆಯ್ಕೆಯೂ ಹೌದು.

ಹಾಲಿವುಡ್ನ ಖ್ಯಾತ ನಟಿ ಎಂಜೆಲಿನಾ ಜೋಲಿ ಅವರು ಗೀತಾಂಜಲಿ ರಾವ್ ಅವರನ್ನು ಸಂದರ್ಶಿಸಿದ್ದು, ಅದರಲ್ಲಿ ಆಕೆ ತನ್ನ ಗುರಿ, ಮುಂದಿನ ಯೋಜನೆಗಳು, ಹಲವು ಸಂಶೋಧನೆಗಳಿಗೆ ಕಾರಣವಾದ ಸಂಗತಿಗಳು, ಸ್ಫೂರ್ತಿ ನೀಡಿದ ನಾಯಕರು, ಸಾಗಬೇಕಿರುವ ದಾರಿ... ಹೀಗೆ ಮಾತುಗಳನ್ನು ಹರವಿಟ್ಟಿದ್ದಾಳೆ. ಗೀತಾಂಜಲಿಯ ಸಾಧನೆಗೆ ಆಕೆಯ ತಂದೆ ರಾಮ್ ರಾವ್ ಮತ್ತು ತಾಯಿ ಭಾರತಿ ಅವರ ಸಂಪೂರ್ಣ ಬೆಂಬಲವೂ ಇದೆ. ಯಾವುದೇ ಮಕ್ಕಳು ಹೊಸದಕ್ಕೆ ತುಡಿದಾಗ ಅದಕ್ಕೆ ಪೋಷಕರು ಅಗತ್ಯ ಬೆಂಬಲ ನೀಡಿದರೆ ಅದ್ಭುತ ಸೃಷ್ಟಿಯಾಗುತ್ತದೆ ಎಂಬುದಕ್ಕೆ ಗೀತಾಂಜಲಿ ಉದಾಹರಣೆ.

ಚಿಕ್ಕ ವಯಸ್ಸಾದರೂ ಆಕೆಯಲ್ಲಿರುವ ವಿಚಾರ ಸ್ಪಷ್ಟತೆ, ನಿರ್ದಿಷ್ಟ ಗುರಿಯೆಡೆಗಿನ ಬದ್ಧತೆ ನಿಮ್ಮನ್ನು ವಿಸ್ಮಯಗೊಳಿಸುತ್ತದೆ. ವಯಸ್ಸಿಗೆ ಮೀರಿದ ಯೋಚನಾ ಸರಣಿ ಹಾಗೂ ಸಮಾಜಕ್ಕೆ ಏನಾದರೂ ಕೊಡಬೇಕು ಎನ್ನುವ ತುಡಿತವೇ ಆಕೆಯ ಸಂಶೋಧನೆ, ಆವಿಷ್ಕಾರಗಳಿಗೆ ಕಾರಣವಾಗಿದೆ.

ಕುಡಿಯುವ ನೀರಿನಲ್ಲಿ ಅಪಾಯಕಾರಿ ಮಟ್ಟದಲ್ಲಿದ್ದ ಸೀಸದ ಸಮಸ್ಯೆಯನ್ನು ಅಮೆರಿಕದ ಮಿಶಿಗನ್, ಫ್ಲಿಂಟ್ ವಾಸಿಗಳು ಎದುರಿಸುತ್ತಿದ್ದರು. ಈ ಸಮಸ್ಯೆಗೆ ಪರಿಹಾರ ಯೋಚಿಸಿದ ಗೀತಾಂಜಲಿ, ‘ಟೆಥಿಸ್ಎಂಬ ಸಾಧನವನ್ನು ಅಭಿವೃದ್ಧಿಪಡಿಸಿದಳು. ಇದು ಕಾರ್ಬನ್ ನ್ಯಾನೋಟ್ಯೂಬ್ ಆಗಿದ್ದು, ನೀರಿನಲ್ಲಿರುವ ಸೀಸದ ಪ್ರಮಾಣ ಎಷ್ಟಿದೆ ಎಂಬುದನ್ನು ಪತ್ತೆ ಹಚ್ಚಿ, ಕುಡಿಯಲು ನೀರು ಯೋಗ್ಯವಾಗಿದೆಯೇ ಎಂಬುದನ್ನು ಸುರಕ್ಷಿತ, ಸ್ವಲ್ಪ ಕಲುಷಿತ ಮತ್ತು ಯೋಗ್ಯವಲ್ಲ ಎಂದು ವಿಂಗಡಿಸಿ ಮಾಹಿತಿಯನ್ನು ಸ್ಮಾರ್ಟ್ ೆನ್ನ ಆ್ಯಪ್ಗೆ ರವಾನಿಸುತ್ತದೆ. ಈ ಸಾಧನ ಆಕೆಗೆ 2017ರಲ್ಲಿ ಡಿಸ್ಕವರಿ ಎಜುಕೇಷನ್ 3ಎಂ ಯಂಗ್ ಸೈಂಟಿಸ್ಟ್ ಚಾಲೆಂಜ್ ಗೆಲ್ಲಲು ಅವಕಾಶ ಕಲ್ಪಿಸಿತು. ಕೈಂಡ್ಲೀ ಎನ್ನುವ ಆ್ಯಪ್ ಅನ್ನು ಗೀತಾಂಜಲಿ ಅಭಿವೃದ್ಧಿ ಪಡಿಸಿದ್ದಾಳೆ. ಕೃತಕ ಬುದ್ಧಿಮತ್ತೆ(ಎಐ) ಆಧರಿತ ಈ ಆ್ಯಪ್ ಸೈಬರ್ಬುಲ್ಲಿ ಚಟುವಟಿಕೆಯನ್ನು ಪತ್ತೆ ಹಚ್ಚುತ್ತದೆ. ಗೀತಾಂಜಲಿಯ ಮತ್ತೊಂದು ಅವಿಷ್ಕಾರವು ಹ್ಯೂಮನ್ ಜೆನೆಟಿಕ್ಸ್(ಮಾನವ ತಳಿಶಾಸ) ಸಂಬಂಧಿಸಿದ್ದು ಮತ್ತು ಮಾದಕ ವ್ಯಸನಿಯಾಗುವುದನ್ನು ಪತ್ತೆ ಹಚ್ಚುತ್ತದೆ.

ವಿಜ್ಞಾನ, ತಂತ್ರಜ್ಞಾನ, ಎಂಜನಿಯರಿಂಗ್, ಗಣಿತ—(ಸ್ಟೆಮ್)ನಲ್ಲಿ ಅಪಾರ ನಂಬಿಕೆ ಹೊಂದಿರುವ ಗೀತಾಂಜಲಿ, ಸ್ಟೆಮ್ ಸಂಸ್ಥೆಗಳಲ್ಲಿರುವ ಹುಡುಗಿಯರು, ಸ್ಕೂಲ್ ವಿದ್ಯಾರ್ಥಿಗಳು, ಶಾಂಘೈ ಇಂಟರ್ನ್ಯಾಘಿಷನಲ್ ಯುಥ್ ಸೈನ್ಸ್ ಆ್ಯಂಡ್ ಟೆಕ್ನಾಲಜಿ ಗ್ರೂಪ್, ಲಂಡನ್ನ ರಾಯಲ್ ಅಕಾಡೆಮಿ ಆ್ ಎಂಜನಿಯರಿಂಗ್ ಸಂಸ್ಥೆಗಳಲ್ಲಿ ನಾವೀನ್ಯತಾ ಕಾರ್ಯಾಗಾರಗಳನ್ನು ಮಾಡುವುದನ್ನು ಇಷ್ಟಪಡುತ್ತಾಳೆ. ವಾರಾಂತ್ಯದಲ್ಲಿ ಈ ಕ್ಲಾಸುಗಳಿಗೆ ಜಗತ್ತಿನಾದ್ಯಂತ 28 ಸಾವಿರಕ್ಕೂ ಹೆಚ್ಚು ಪೂರ್ವ ಪ್ರಾಥಮಿಕ, ಪ್ರಾಥಮಿಕ, ಹೈಸ್ಕೂಲು ವಿದ್ಯಾರ್ಥಿಗಳು ಪಾಲ್ಗೊಳ್ಳುತ್ತಾರೆ ಮತ್ತು ಗೀತಾಂಜಲಿ ತಾನು ಕಂಡುಕೊಂಡ ಪ್ರಕ್ರಿಯೆ ಹಾಗೂ ಸಾಧನಗಳ ಬಗ್ಗೆ ಮಾಹಿತಿ ನೀಡುತ್ತಾಳೆ.

‘‘ಪ್ರತಿ ಸಮಸ್ಯೆಗೂ ಪರಿಹಾರ ಕಂಡುಕೊಳ್ಳಲು ಹೋಗಬಾರದು. ನಿಮ್ಮನ್ನು ಪ್ರಚೋದಿಸುವ ಸಮಸ್ಯೆಯೊಂದರ ಮೇಲೆ ಮಾತ್ರವೇ ಗಮನ ಕೇಂದ್ರೀಕರಿಸಿ. ಒಂದು ವೇಳೆ ಇಷ್ಟೆಲ್ಲ ಮಾಡಲು ನನಗೆ ಸಾಧ್ಯವಾಗಿದ್ದರೆ, ಯಾರಾದರೂ ಇದನ್ನು ಮಾಡಬಹುದಲ್ಲವೇ,’’ ಎನ್ನುತ್ತಾ ಇತರರನ್ನು ಹುರಿದುಂಬಿಸುವ ಔದಾರ್ಯ ಗೀತಾಂಜಲಿಗಿದೆ. ‘‘ಇಷ್ಟು ಚಿಕ್ಕ ವಯಸ್ಸಿನಲ್ಲೇ ದೊಡ್ಡ ಸಾಧನೆ ಮಾಡಿದ್ದೀಯಲ್ಲನಿನಗೆ ಯಾರು ಸ್ಫೂರ್ತಿ?’’ ಎಂದು ಕೇಳಿದರೆ, ಮೇರಿ ಕ್ಯೂರಿ ತನ್ನ ಅತಿದೊಡ್ಡ ಸ್ಫೂರ್ತಿ ಎನ್ನುತ್ತಾಳೆ ಬಟ್ಟಲು ಕಂಗಳ ಗೀತಾಂಜಲಿ. ಜೊತೆಗೆ, ತಂದೆ ತಾಯಿ, ಭಾರತದಲ್ಲಿರುವ ಕುಟುಂಬದ ಸದಸ್ಯರ ಬೆಂಬಲವನ್ನು ಸ್ಮರಿಸುತ್ತಾಳೆ. ಫ್ರೆಂಚ್ ಪ್ರಾಧ್ಯಾಪಕ ಮತ್ತು ಮೈಕ್ರೋಬಯಾಲಜಿ, ಜೆನೆಟಿಕ್ಸ್ ಮತ್ತು ಬಯೋಕೆಮಿಸ್ಟ್ರಿ ಸಂಶೋಧಕ ಎಮ್ಯಾನುಯೆಲ್ ಮೇರಿ ಚಾರ್ಪೆಂಟಿಯರ್ ಮತ್ತು ಅಮೆರಿಕದ ಜೀವರಾಸಾಯನಿಕ ವಿಜ್ಞಾನಿ ಜೆನ್ನಿರ್ ಆನ್ ಡೌಡನಾ ಗೀತಾಂಜಲಿ ಮೇಲೆ ಬಹಳಷ್ಟು ಪ್ರಭಾವ ಬೀರಿದ್ದಾರೆ.

ಜಗತ್ತಿನ ಹಲವು ಮಕ್ಕಳಿಗೆರೋಲ್ ಮಾಡೆಲ್ಆಗಿರುವ ಗೀತಾಂಜಲಿ ಭಾರತದ ಇಂದಿರಾ ಗಾಂಧಿ ಎಂದರೆ ಅಚ್ಚುಮೆಚ್ಚು ಮತ್ತು ಸ್ಫೂರ್ತಿಯ ಸೆಲೆ. ‘‘ಭಾರತದಲ್ಲಿ ನನಗೆ ಸ್ಫೂರ್ತಿದಾಯಕ ವ್ಯಕ್ತಿ ಎಂದರೆ ಇಂದಿರಾ ಗಾಂಧಿ. ಇಂದಿರಾ ಬರ್ತ್ಡೇ ದಿನವೇ ನನ್ನದು ಕೂಡ,’’ ಎನ್ನುತ್ತಾಳೆ ಗೀತಾಂಜಲಿ. ಇಂದಿರಾ ಅವರ ಕೆಲಸ, ತೋರಿದ ದಿಟ್ಟ ನಾಯಕತ್ವದ ಬಗ್ಗೆ ಅಪಾರ ಮೆಚ್ಚುಗೆ. ಅವರು ಸಾಗಿದ ದಾರಿಯಲ್ಲೇ ಸಾಗಿ, ಅವರಷ್ಟೇ ಶಕ್ತಿಶಾಲಿ ವ್ಯಕ್ತಿತ್ವ ರೂಪಿಸಿಕೊಳ್ಳುವ ಇಂಗಿತ ಹೊರಹಾಕುತ್ತಾಳೆ. ಇಂದಿರಾ ಹೊರತುಪಡಿಸಿ, ನಟ ಶಾರುಖ್ ಖಾನ್ ಬಗ್ಗೆಯೂ ಗೀತಾಂಜಲಿಗೆ ಅಭಿಮಾನವಿದೆ. ತಾನು ಈವರೆಗೆ ಭೇಟಿ ಮಾಡಿದವರ ಪೈಕಿ ಅತ್ಯಂತ ನಿಸ್ವಾರ್ಥ ವ್ಯಕ್ತಿ ಎಂದುಕಿಂಗ್ ಖಾನ್ರನ್ನು ಶ್ಲಾಘಿಸುತ್ತಾಳೆ. ಶಾರುಖ್ ನಡೆಸಿಕೊಟ್ಟ ಟೆಡ್ ಟಾಕ್ನಲ್ಲೂ ಗೀತಾಂಜಲಿ ಮಾತನಾಡಿದ ಅನುಭವವನ್ನು ನೆನಪಿಸಿಕೊಳ್ಳುತ್ತಾಳೆ. ಹಾಲಿವುಡ್ನಲ್ಲೂ ಹೆಸರು ಮಾಡುತ್ತಿರುವ ಭಾರತದ ನಟಿ ಪ್ರಿಯಾಂಕಾ ಚೋಪ್ರಾ ಅವರ ಬಗ್ಗೆ ಗೀತಾಂಜಲಿಗೆ ಪ್ರೀತಿ ಇದೆ.

ಗೀತಾಂಜಲಿಯ ಆಸಕ್ತಿ ವಿಜ್ಞಾನ, ಸಂಶೋಧನೆಗೆ ಸೀಮಿತವಾಗಿಲ್ಲ. ಆಕೆಗೆ ನಾನಾ ಆಸಕ್ತಿ. ಪ್ರತಿಯೊಂದನ್ನು ಕುತೂಹಲದಿಂದ ನೋಡುವ ಬೆರಗು ಸ್ವಭಾವ ಅವಳದ್ದು. ಪ್ರತಿಯೊಂದರಲ್ಲೂ ಆಸಕ್ತಿ ತಾಳಿ ಅದನ್ನು ಒಲಿಸಿಕೊಳ್ಳುತ್ತಾಳೆ. ಪಿಯಾನೋ ವಾದನ, ಭಾರತೀಯ ನೃತ್ಯ, ಗಾಯನ, ಈಜು ಮತ್ತು ಫೆನ್ಸಿಂಗ್ ಗೀತಾಂಜಲಿಯ ಆಸಕ್ತಿಯ ಕ್ಷೇತ್ರಗಳು. ಒಂಭತ್ತು ವರ್ಷದವಳಿದ್ದಾಗಲೇ ಶಾಸೀಯ ಸಂಗೀತ ಅಭ್ಯಾಸ ಆರಂಭಿಸಿದಳು. ಕೋವಿಡ್ ಕ್ವಾರಂಟೈನ್ನಲ್ಲಿ ಸಮಯವನ್ನು ಹೊಸ ಕಲಿಕೆಗೆ ಸದುಪಯೋಗಪಡಿಸಿಕೊಂಡೆ ಎಂದು ಏಂಜೆಲೀನಾ ಜೋಲಿ ನಡೆಸಿದ ಸಂದರ್ಶನದಲ್ಲಿ ತಿಳಿಸಿದ್ದಾಳೆ. ಇದೇ ಸಮಯದಲ್ಲಿ ತಾನು ಹೇಗೆ ಬೇಕಿಂಗ್ ಕಲಿತೆ ಎಂಬುದನ್ನು ರಸವತ್ತಾಗಿ ವಿವರಿಸಿದ್ದಾಳೆ.

ತೀರಾ ಚಿಕ್ಕ ವಯಸ್ಸಿಗೆ ಜಗತ್ತಿನಾದ್ಯಂತ ಪ್ರಸಿದ್ಧಿ ಪಡೆದಿರುವ ಗೀತಾಂಜಲಿ ಮುಂದೇನು ಮಾಡುತ್ತಾಳೆ ಎಂಬ ಪ್ರಶ್ನೆ ಸಹಜ. ನಯೀ ಬಾತ್ ಟೆಡ್ಟಾಕ್ನಲ್ಲಿ ತನ್ನ ಮುಂದಿರುವ ಗುರಿಯನ್ನು ಸೂಪರ್ ಹೀರೋಗಳೊಂದಿಗೆ ಸಮೀಕರಿಸಿ ವಿವರಿಸಿದ್ದಾಳೆ. ಕಾಮಿಕ್ ಅಥವಾ ಸಿನಿಮಾದಲ್ಲಿ ಸೂಪರ್ ಹೀರೋಗಳು ಎತ್ತರದ ಕಟ್ಟಡಗಳಿಂದ ಕಟ್ಟಡಕ್ಕೆ ನೆಗೆಯುತ್ತಾರೆ; ತಾಂತ್ರಿಕ ಗ್ಯಾಜೆಟ್ಗಳನ್ನು ಬಳಸುತ್ತಾರೆ; ಅತಿಮಾನುಷ ಶಕ್ತಿ ಹೊಂದಿರುತ್ತಾರೆ. ಆದರೆ, ಅವರ ಮುಖ್ಯ ಕೆಲಸ ಜೀವಗಳನ್ನುರಕ್ಷಿಸುವುದೇ ಆಗಿರುತ್ತದೆ. ವಿಜ್ಞಾನಿಗಳೂ ಹಾಗೆಯೇ. ವಿಜ್ಞಾನಿಗಳು ಯಾವಾಗಲೂ ಸಮಸ್ಯೆಗೆ ಪರಿಹಾರ ಸೂಚಿಸುತ್ತಾರೆ; ಜನರ ಸಂಕಟಕ್ಕೆ ನೆರವಾಗುತ್ತಾರೆ. ತಾನುಸೈಂಟಿಸ್ಟ್ ಸೂಪರ್ ಹೀರೊಆಗಬೇಕು. ನಿಜ ಜಗತ್ತಿನ ಸಮಸ್ಯೆಗಳನ್ನು ಪರಿಹರಿಸುತ್ತಾ, ಜೀವಗಳನ್ನು ರಕ್ಷಿಸಬೇಕು ಎನ್ನುವುದು ಆಕೆಯ ಆಂತರ್ಯದ ಮಾತುಗಳು. ಅವಳ ಮುಂದಿನ ಗುರಿ, ಯೋಜನೆಗಳೇನೆಂಬುದು ನಿಮಗೀಗ ಸ್ಪಷ್ಟವಾಗಿರಬೇಕು ಅಲ್ಲವೇ?

(ಈ ಲೇಖನ ವಿಜಯ ಕರ್ನಾಟಕದ 2020 ಡಿಸೆಂಬರ್ 13ರ ಸಂಚಿಕೆಯಲ್ಲಿ ಪ್ರಕಟವಾಗಿದೆ) 

ಕಾಮೆಂಟ್‌ಗಳಿಲ್ಲ: