ಸೋಮವಾರ, ಆಗಸ್ಟ್ 31, 2020

Abe Shinzo: ಭಾರತದ ಗೆಳೆಯ ಶಿಂಜೊ ಎಂದೆಂದೂ ಜತೆಯಾಗಿರಿ

ಜಪಾನ್‌ನ ಜನಪ್ರಿಯ ಪ್ರಧಾನಿ ಅಬೆ ಶಿಂಜೊ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಭಾರತ ಮತ್ತು ಜಪಾನ್‌ ನಡುವಿನ ಬಾಂಧವ್ಯಕ್ಕೆ ಹೊಸ ರೂಪ ನೀಡಿ, ಉಭಯ ರಾಷ್ಟ್ರಗಳ ಜನರ ಪ್ರೀತಿಗೆ ಶಿಂಜೊ ಪಾತ್ರರಾಗಿದ್ದಾರೆ.


- ಮಲ್ಲಿಕಾರ್ಜುನ ತಿಪ್ಪಾರ


ಬಹುಶಃ ಭಾರತೀಯರಿಗೆ 'ಅಬೆ ಶಿಂಜೊ' ಹೆಸರು ಗೊತ್ತಿರುವಷ್ಟು ಜಪಾನ್‌ನ ಇನ್ನಾವುದೇ ಪ್ರಧಾನಿ ಅಥವಾ ನಾಯಕರ ಹೆಸರು ಪರಿಚಿತವಿಲ್ಲ. ಭಾರತದೆಡೆಗೆ ಅವರು ಹೊಂದಿರುವ ಕಾಳಜಿ ಮತ್ತು ಉಭಯ ರಾಷ್ಟ್ರಗಳ ನಡುವಿನ ಬಾಂಧವ್ಯ ವೃದ್ಧಿಗೆ ಅವರು ತುಡಿಯುತ್ತಿದ್ದ ರೀತಿಯೇ ಭಾರತೀಯರ ಮೆಚ್ಚುಗೆಗೆ ಕಾರಣವಾಗಿತ್ತು. ವಿಶೇಷವಾಗಿ ಪ್ರಧಾನಿ ಮೋದಿ ಮತ್ತು ಪ್ರಧಾನಿ ಅಬೆ ನಡುವಿನ ಗೆಳೆತನ ಅಂತಾರಾಷ್ಟ್ರೀಯವಾಗಿ ಖ್ಯಾತಿಯಾಗಿತ್ತು.

ಜಪಾನ್‌ನ 'ಆಕ್ರಮಣಕಾರಿ'(Hawkish PM) ಹಾಗೂ ಸುದೀರ್ಘ ಕಾಲದ ಪ್ರಧಾನಿ ಎಂಬ ಹೆಗ್ಗಳಿಕೆಯೊಂದಿಗೆ ಅಬೆ ತಮ್ಮ ಹುದ್ದೆಯನ್ನು ತೊರೆಯುತ್ತಿದ್ದಾರೆ. ಕರುಳು ಉರಿಯೂತ ಕಾಯಿಲೆಯಿಂದ ಜರ್ಜರಿತವಾಗಿರುವ ಅಬೆ, ತಮ್ಮ ಕೆಲಸಕ್ಕೆ ನ್ಯಾಯ ಸಲ್ಲಿಸಲು ಸಾಧ್ಯವಾಗುತ್ತಿಲ್ಲಎಂದು ಗೊತ್ತಾಗುತ್ತಿದ್ದಂತೆ ರಾಜಿನಾಮೆ ನೀಡುವ ನಿರ್ಧಾರ ಪ್ರಕಟಿಸಿದರು. ಈ ಹಿಂದೆಯೂ ಇದೇ ಕಾಯಿಲೆ ಕಾರಣಕ್ಕಾಗಿಯೇ ಅವರು ಪ್ರಧಾನಿ ಪಟ್ಟ ತೊರೆದು, ಮತ್ತೆ ಸಕ್ರಿಯ ರಾಜಕಾರಣಕ್ಕೆ ಮರಳಿದ್ದರು. ಆದರೆ, ಈ ಬಾರಿ ಅವರು ರಾಜಕಾರಣದಿಂದ ವಿಮುಖರಾಗುವ ಸ್ಪಷ್ಟ ಸೂಚನೆಗಳನ್ನು ನೀಡಿದ್ದಾರೆ. ಹಾಗಾಗಿ, ಜಪಾನ್‌ ಪ್ರಧಾನಿ ಹುದ್ದೆಗೆ ಎಲ್‌ಡಿಪಿ(ಲಿಬರಲ್‌ ಡೆಮಾಕ್ರಾಟಿಕ್‌ ಪಾರ್ಟಿ)ಯಲ್ಲಿಹುಡುಕಾಟ ಶುರುವಾಗಿದೆ.

''ಅಧಿಕಾರಾವಧಿ ಪೂರ್ಣಗೊಳ್ಳಲು ಒಂದು ವರ್ಷ ಬಾಕಿ ಇರುವಾಗಲೇ ಮತ್ತು ಕೊರೊನಾ ಸಮಸ್ಯೆ ಮಧ್ಯೆಯೇ, ವಿವಿಧ ಕಾರ್ಯನೀತಿಗಳು ಜಾರಿ ಹಂತದಲ್ಲಿರುವಾಗಲೇ ಹುದ್ದೆ ತೊರೆಯುತ್ತಿರುವುದಕ್ಕೆ ನಾನು ಜಪಾನ್‌ ಜನರ ಕ್ಷಮೆ ಕೋರುತ್ತೇನೆ,'' ಎಂದು ಅಬೆ ಶಿಂಜೊ ತಮ್ಮ ನಿರ್ಧಾರ ಪ್ರಕಟಿಸುವಾಗ ಹೇಳಿದ್ದಾರೆ. ಕೊರೊನಾ ಸಾಂಕ್ರಾಮಿಕಕ್ಕೆ ಎಲ್ಲದೇಶಗಳು ತಲ್ಲಣಗೊಂಡಿವೆ. ಇದಕ್ಕೆ ಜಪಾನ್‌ ಕೂಡ ಹೊರತಾಗಿಲ್ಲ. ಇಂಥ ಸಂದರ್ಭದಲ್ಲಿಯಾವುದೇ ದೇಶದ ನಾಯಕತ್ವ ಬದಲಾವಣೆ ಜಾಣತನದ ನಿರ್ಧಾರವಲ್ಲ.


ಅಬೆ ಶಿಂಜೊ 'ದಿ ಪ್ರಿನ್ಸ್‌' ಎಂಬ ಖ್ಯಾತಿ ಪಡೆದಿದ್ದಾರೆ. ಜಪಾನಿಗರು ಅವರನ್ನು ಹಾಗೆ ಕರೆಯುತ್ತಾರೆ; ಅವರು ಇದ್ದದ್ದು ಹಾಗೆಯೇ. ಶಿಂಜೊ ಅವರಿಗೆ ರಾಜಕೀಯ ಹೊಸದೇನಲ್ಲ. ಅವರದ್ದು ರಾಜಕೀಯ ಕುಟುಂಬ. ಜಪಾನ್‌ನ ಟೊಕಿಯೊದಲ್ಲಿ1954ರ ಸೆಪ್ಟೆಂಬರ್‌ 12ರಂದು ಅಬೆ ಶಿಂಜೊ ದೇಶದ ಪ್ರಮುಖ ರಾಜಕೀಯ ಮನೆತನದಲ್ಲಿಜನಿಸಿದರು. ಶಿಂಜೊ ಅಜ್ಜ ನೊಬುಸ್ಕೆ ಕಿಶಿ(ತಾಯಿಯ ತಂದೆ) ಅವರು 1957ರಿಂದ 1960ರವರೆಗೂ ಜಪಾನ್‌ನ ಪ್ರಧಾನಿಯಾಗಿದ್ದರು. ಮುತ್ತಜ್ಜ ವಿಸ್ಕೌಂಟ್‌ ಯೋಶಿಮಾಸಾ ಒಶಿಮಾ ಅವರು ಇಂಪಿರೀಯಲ್‌ ಜಪಾನ್‌ ಸೇನೆಯಲ್ಲಿಜನರಲ್‌ ಆಗಿದ್ದರು. ಶಿಂಜೊ ಅವರ ತಂದೆ ಶಿಂಚೊರೊ ಅವರು ಪೆಸಿಫಿಕ್‌ ಯುದ್ಧ ವೇಳೆ ಪೈಲಟ್‌ ಆಗಿದ್ದರು. ಆ ಬಳಿಕ ಜಪಾನ್‌ನ ವಿದೇಶಾಂಗ ಸಚಿವರೂ ಆಗಿದ್ದರು. ಅಂದರೆ, ಅಬೆ ಶಿಂಜೊ ಅವರಿಗೆ ರಾಜಕೀಯ ರಕ್ತಗತವಾಗಿ ಬಂದಿರುವಂಥದ್ದು ಮತ್ತು ಸಹಜವಾಗಿಯೇ ಅವರು ಜಪಾನ್‌ನ ಉನ್ನತ ಸ್ಥಾನಕ್ಕೇರಲು ಇದು ಪ್ರಭಾವ ಬೀರಿದೆ. ಜನರೂ ಶಿಂಜೊ ಕುಟುಂಬದ ಮೇಲೆ ಅಪರಿಮಿತ ವಿಶ್ವಾಸವನ್ನು ಹೊಂದಿದ್ದಾರೆ. ಈಗಲೂ, ಜಪಾನ್‌ನ ಅತ್ಯಂತ ಜನಪ್ರಿಯ ನಾಯಕರೆಂದರೆ ಅಬೆ ಶಿಂಜೊ ಮಾತ್ರ.

ಅಬೆ ಅವರು ಸೈಕಾಯ್‌ ಪ್ರಾಥಮಿಕ ಶಾಲೆ, ಜ್ಯೂನಿಯರ್‌ ಮತ್ತು ಮಾಧ್ಯಮಿಕ ಶಾಲೆಯಲ್ಲಿಶಿಕ್ಷಣ ಪಡೆದರು. 1977ರಲ್ಲಿಸೈಕಾಯ್‌ ವಿಶ್ವವಿದ್ಯಾಲಯದಲ್ಲಿಸಾರ್ವಜನಿಕ ಆಡಳಿತ ಅಧ್ಯಯನ ಮಾಡಿದರು. ಜೊತೆಗೆ ಪಾಲಿಟಿಕಲ್‌ ಸೈನ್ಸ್‌ ವಿಷಯದಲ್ಲಿಪದವಿ ಸಂಪಾದಿಸಿದರು. ಬಳಿಕ ಅಮೆರಿಕಕ್ಕೆ ತೆರಳಿ ಸದರ್ನ್‌ ಕ್ಯಾಲಿಫೋರ್ನಿಯಾದ ಸ್ಕೂಲ್‌ ಆಫ್‌ ಪಬ್ಲಿಕ್‌ ಪಾಲಿಸಿಯಲ್ಲಿಸಾರ್ವಜನಿಕ ನೀತಿಗಳಿಗೆ ಸಂಬಂಧಿಸಿದಂತೆ ಅಧ್ಯಯನ ಕೈಗೊಂಡರು. 1979ರಲ್ಲಿಕೋಬೆ ಸ್ಟೀಲ್‌ನಲ್ಲಿಕೆಲಸ ಆರಂಭಿಸಿದರು. ಶೀಘ್ರವೇ ತಮ್ಮ ಆದ್ಯತೆ ಮತ್ತು ಆಸಕ್ತಿಗಳನ್ನು ಗುರುತಿಸಿಕೊಂಡ ಅಬೆ ಕೆಲಸ ತೊರೆದು 1982ರಲ್ಲಿರಾಜಕಾರಣಕ್ಕೆ ಧುಮುಕಿದರು. ಮೊದಲಿಗೆ ಅವರು, ವಿದೇಶಾಂಗ ವ್ಯವಹಾರಗಳ ಸಚಿವಾಲಯದಲ್ಲಿ ಕಾರ್ಯಕಾರಿ ಸಹಾಯಕರಾಗಿ ಸೇರಿಕೊಂಡರು. ಆ ನಂತರ, ಜಪಾನ್‌ ಪ್ರಮುಖ ರಾಜಕೀಯ ಪಕ್ಷ ಎಲ್‌ಡಿಪಿ ಜನರಲ್‌ ಕೌನ್ಸಿಲ್‌ನ ಅಧ್ಯಕ್ಷರ ಖಾಸಗಿ ಕಾರ್ಯದರ್ಶಿ ಮತ್ತು ಎಲ್‌ಡಿಪಿ ಸೆಕ್ರೆಟರಿ-ಜನರಲ್‌ಗೆ ಖಾಸಗಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದರು.

1991ರಲ್ಲಿತಮ್ಮ ತಂದೆಯ ಮರಣದ ನಂತರ 1993ರಲ್ಲಿಶಿಂಜೊ ಅವರು ಯಮಗುಶಿ ಪ್ರಾಂತ್ಯದ ಮೊದಲ ಜಿಲ್ಲೆಗೆ ಆಯ್ಕೆಯಾದರು. ಎಸ್‌ಎನ್‌ಟಿವಿ ಬಹು ಸದಸ್ಯರ ಜಿಲ್ಲೆಯಲ್ಲಿಚುನಾಯಿತರಾದ ನಾಲ್ಕು ಪ್ರತಿನಿಧಿಗಳಲ್ಲಿಹೆಚ್ಚಿನ ಮತಗಳನ್ನು ಪಡೆದುಕೊಂಡಿದ್ದರು. 1999ರಲ್ಲಿಅವರು ಸಾಮಾಜಿಕ ವ್ಯವಹಾರಗಳ ವಿಭಾಗದ ನಿರ್ದೇಶಕರಾದರು. 2000-2003ರ ವರೆಗೆ ಯೋಶಿರೆ ಮೋರಿ ಮತ್ತು ಜುನಿಚಿರೆ ಕೊಯಿಜುಮಿ ಸಂಪುಟದಲ್ಲಿಡೆಪ್ಯುಟಿ ಚೀಫ್‌ ಕ್ಯಾಬಿನೆಟ್‌ ಕಾರ್ಯದರ್ಶಿಯಾಗಿದ್ದರು. ನಂತರ ಅವರನ್ನು ಲಿಬರಲ್‌ ಡೆಮಾಕ್ರಟಿಕ್‌ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ನೇಮಿಸಲಾಯಿತು. ಆ ಬಳಿಕ ಅವರು ತಿರುಗಿ ನೋಡಲಿಲ್ಲ.

2006ರ ಏಪ್ರಿಲ್‌ 23ರಂದು ಅಬೆ ಅವರನ್ನು ಆಡಳಿತ ಪಕ್ಷ ಎಲ್‌ಡಿಪಿಯ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು. ಅದೇ ವರ್ಷ ಜುಲೈ 14ರಂದು ಜಪಾನ್‌ನ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದರು. ಆಗ ಅವರಿಗೆ 52 ವರ್ಷ. 1941ರ ಬಳಿಕ ಜಪಾನ್‌ನ ಅತ್ಯಂತ ಕಿರಿಯ ಪ್ರಧಾನಿ ಎಂಬ ಗರಿಮೆಗೆ ಪಾತ್ರರಾದರು. ಈಗ ಬಾಧಿಸುತ್ತಿರುವ ಕರುಳು ಊರಿಯೂತ ಕಾಯಿಲೆ 2007ರಲ್ಲೂಅಬೆ ಅವರನ್ನು ತೀವ್ರವಾಗಿ ಬಾಧಿಸಿತು. ಅದೇ ಕಾರಣಕ್ಕಾಗಿ ಅವರು ಆಗಲೂ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದ್ದರು. ಆದರೆ, ಶೀಘ್ರವೇ ಅದರಿಂದ ಗುಣಮುಖರಾಗಿ ಮತ್ತೆ ಸಕ್ರಿಯ ರಾಜಕಾರಣಕ್ಕೆ ಮರು ಎಂಟ್ರಿ ಕೊಟ್ಟಿದ್ದರು. 2012ರಲ್ಲಿಮತ್ತೆ ಅಬೆ ಜಪಾನ್‌ನ ಪ್ರಧಾನಿಯಾದರು. 2014 ಮತ್ತು 2017ರಲ್ಲಿಮರು ಆಯ್ಕೆಯಾದರು. ಇಷ್ಟೂ ವರ್ಷಗಳಲ್ಲಿಜಪಾನ್‌ನಲ್ಲಿಅಬೆ ಅತ್ಯಂತ ಜನಪ್ರಿಯ ಪ್ರಧಾನಿಯಾಗಿಯೇ ಗುರುತಿಸಿಕೊಂಡರು. ತಮ್ಮದೇ ವಿದೇಶಾಂಗ ನೀತಿ ಮತ್ತು ಆರ್ಥಿಕ ನೀತಿ(ಅಬೆನಾಮಿಕ್ಸ್‌)ಗಳಿಂದಾಗಿ ಮನೆ ಮಾತಾದರು.

ಅಬೆ ಶಿಂಜೊ ಅವರ ಬಗ್ಗೆ ಮಾತನಾಡುವಾಗ ಭಾರತ ಮತ್ತು ಜಪಾನ್‌ ನಡುವಿನ ಸಂಬಂಧ ವೃದ್ಧಿಯ ಬಗ್ಗೆ ಹೇಳಲೇಬೇಕಾಗುತ್ತದೆ. ಯಾಕೆಂದರೆ, ಉಭಯ ರಾಷ್ಟ್ರಗಳ ನಡುವಿನ ಬಾಂಧವ್ಯಕ್ಕೆ ಈ ಅವಧಿಯಲ್ಲಿಹೊಸ ಭಾಷ್ಯವನ್ನೇ ಬರೆಯಲಾಗಿದೆ. ಜಪಾನ್‌ ಭಾರತದ ಸಹಜ ಮಿತ್ರ ರಾಷ್ಟ್ರವಾಗಿದ್ದರೂ, ಶಿಂಜೊ ಆಡಳಿತದಲ್ಲಿಈ ಮಿತ್ರತ್ವವನ್ನು ಮತ್ತೊಂದು ಹಂತಕ್ಕೆ ಹೋಯಿತು.

ಪ್ರಧಾನಿಯಾಗಿದ್ದ 2006-07ರ ಅವಧಿಯಲ್ಲಿಅಬೆ ಭಾರತಕ್ಕೆ ಭೇಟಿ ನೀಡಿ, ಸಂಸತ್ತನ್ನು ಉದ್ದೇಶಿಸಿ ಮಾತನಾಡಿದ್ದರು. ಎರಡನೇ ಬಾರಿ ಪ್ರಧಾನಿಯಾಗಿ ಚುಕ್ಕಾಣಿ ಹಿಡಿದ ಬಳಿಕ ಭಾರತಕ್ಕೆ 2014 ಜನವರಿ, 2015 ಡಿಸೆಂಬರ್‌ ಮತ್ತು 2017ರ ಸೆಪ್ಟೆಂಬರ್‌ನಲ್ಲಿಭೇಟಿ ನೀಡಿದರು. 2014ರ ಗಣರಾಜ್ಯೋತ್ಸವದಲ್ಲಿಮುಖ್ಯ ಅತಿಥಿಯಾಗಿ ಪಾಲ್ಗೊಂಡ ಜಪಾನ್‌ನ ಮೊದಲ ಪ್ರಧಾನಿ ಎನಿಸಿಕೊಂಡರು. ಪ್ರಧಾನಿಯಾಗಿ ಅವರು, ಯುಪಿಎ ಆಡಳಿತ ಹಾಗೂ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಆಡಳಿತಾವಧಿಯಲ್ಲಿಭಾರತಕ್ಕೆ ಬಹು ನೆರವಾಗಿದ್ದಾರೆ. ಮೋದಿ ಕಾಲದಲ್ಲಿಈ ಪ್ರಕ್ರಿಯೆ ಇನ್ನಷ್ಟು ಚುರುಕು ಪಡೆದುಕೊಂಡಿತು ಎಂದು ಹೇಳಬಹುದು. ಪ್ರಧಾನಿ ನರೇಂದ್ರ ಮೋದಿ ಅವರು, ನೆರೆ ಹೊರೆ ರಾಷ್ಟ್ರಗಳ ಬಳಿಕ ಮೊದಲಿಗೆ ಭೇಟಿ ನೀಡಿದ್ದು ಜಪಾನ್‌ಗೆ. ಅಂದರೆ, ಭಾರತ ಮತ್ತು ಜಪಾನ್‌ ನಡುವಿನ ಬಾಂಧವ್ಯ ಎಷ್ಟರ ಮಟ್ಟಿಗೆ ಮಹತ್ವದ್ದು ಎಂಬುದನ್ನು ಅದು ಸಾಂಕೇತಿಸುತ್ತದೆ. ಈ ವೇಳೆ ವಿಶೇಷ ವ್ಯೂಹಾತ್ಮಕ ಮತ್ತು ಜಾಗತಿಕ ಸಹಭಾಗಿತ್ವಕ್ಕೆ ಮೋದಿ ಮತ್ತು ಅಬೆ ಒಪ್ಪಿಗೆ ಸೂಚಿಸಿದ್ದರು. ನಾಗರಿಕ ಅಣು ಇಂಧನ, ಕರಾವಳಿ ಭದ್ರತೆ, ಬುಲೆಟ್‌ ಟ್ರೇನ್‌ ಪ್ರಾಜೆಕ್ಟ್ , ಇಂಡೋ-ಪೆಸಿಫಿಕ್‌ ಸ್ಟ್ರ್ಯಾಟಜಿ ಸೇರಿದಂತೆ ಅನೇಕ ಯೋಜನೆಗಳು ಸಾಕಾರಗೊಂಡವು. ಆ ಮೂಲಕ ಉಭಯ ರಾಷ್ಟ್ರಗಳ ನಡುವಿನ ಸಹಭಾಗಿತ್ವದ ಹೊಸ ಮಜಲಿನತ್ತ ಸಾಗಿದವು. ಇದಕ್ಕೆ ಅಬೆ ಶಿಂಜೊ ಅವರ ಕಾಣಿಕೆ ಅಪಾರ ಎಂಬುದನ್ನು ಮತ್ತೆ ಪ್ರತ್ಯೇಕವಾಗಿ ಹೇಳಬೇಕಿಲ್ಲ.

ಅಬೆ ರಾಜೀನಾಮೆ ನೀಡಿದ್ದರೂ ಮುಂದಿನ ಪ್ರಧಾನಿ ಆಯ್ಕೆಯ ತನಕ, ಅವರ ಬಳಿಯೇ ಆಡಳಿತ ಇರಲಿದೆ. ಜಪಾನ್‌ ಜನಪದೀಯ ಗೀತೆಗಳನ್ನು ಹಾಡುವ ಅಬೆ ಅವರಿಗೆ, ಐಸ್‌ಕ್ರೀಮ್‌ ಮತ್ತು ಕಲ್ಲಂಗಡಿ ಹಣ್ಣು ತುಂಬ ಇಷ್ಟ. ಸೆಪ್ಟೆಂಬರ್‌ 21ಕ್ಕೆ 65 ವರ್ಷ ಪೂರೈಸಲಿರುವ ಅಬೆ ಆದಷ್ಟು ಬೇಗ ಅನಾರೋಗ್ಯದಿಂದ ಗುಣಮುಖರಾಗಿ, ಮತ್ತೆ ಜಪಾನ್‌ನ ರಾಜಕಾರಣದಲ್ಲಿ ಮತ್ತೆ ಮಿಂಚಲಿ.

ಗುರುವಾರ, ಆಗಸ್ಟ್ 27, 2020

What to do if your phone is hacked?: ಫೋನ್‌ ಹ್ಯಾಕ್‌ ಆಗಿದೆಯಾ? ನೀವೇ ಚೆಕ್‌ ಮಾಡಿಕೊಳ್ಳಿ

ಆ್ಯಂಡ್ರಾಯ್ಡ ಫೋನ್‌ಗಳು ಜನಪ್ರಿಯವಾಗುತ್ತಿರುವಂತೆ ಅವು ಹ್ಯಾಕರ್ಸ್‌ ಮತ್ತು ಸೈಬರ್‌ ಕ್ರಿಮಿನಲ್‌ಗಳ ನೆಚ್ಚಿನ ಫೋನ್‌ಗಳೂ ಆಗುತ್ತಿವೆ! ಈ ಖದೀಮರು ಬಳಕೆದಾರರನ್ನು ತಮ್ಮ ಖೆಡ್ಡಾಗೆ ಕೆಡವಿಕೊಳ್ಳಲು ಸದಾ ಕಾಯುತ್ತಿರುತ್ತಾರೆ, ಇದಕ್ಕಾಗಿ ಒಂದಿಲ್ಲಒಂದು ಹೊಸ ದಾರಿಯನ್ನು ಹುಡುಕುತ್ತಿರುತ್ತಾರೆ. ಮೊಬೈಲ್‌ ಬಳಕೆಯ ಜ್ಞಾನ ಕೊಂಚ ಕಡಿಮೆ ಇರುವ ಬಳಕೆದಾರರನ್ನು ಟಾರ್ಗೆಟ್‌ ಮಾಡುವ ಸೈಬರ್‌ ಕ್ರಿಮಿನಲ್‌ಗಳು, ಅನುಮಾನಾಸ್ಪದ ಆ್ಯಪ್‌ ಮತ್ತು ವೈರಸ್‌ ಇರುವ ಯುಆರ್‌ಎಲ್‌ ತೆರೆಯುವಂತೆ ಪ್ರೇರೇಪಿಸುತ್ತಾರೆ. ಜೊತೆಗೆ ಥರ್ಡ್‌ ಪಾರ್ಟಿ ಎಪಿಕೆ ಫೈಲ್‌ಗಳನ್ನು ಇನ್‌ಸ್ಟಾಲ್‌ ಮಾಡಿಕೊಂಡರೆ ಅನಗತ್ಯ ಜಾಹೀರಾತುಗಳು ಕಾಣಿಸಿಕೊಳ್ಳುತ್ತೇವೆ. ನಮ್ಮ ಸ್ಮಾರ್ಟ್‌ ಫೋನ್‌ ಹ್ಯಾಕ್‌ ಆಗಿದೆಯೇ ಇಲ್ಲವೇ ಎಂಬುದನ್ನು ನಾವು ಗುರುತಿಸಿಕೊಳ್ಳಬಹುದು. ರೋಗದ ಗುಣ ಲಕ್ಷ ಣ ಕೇಳಿ ರೋಗ ನಿರ್ಧಾರ ಮಾಡುತ್ತಾರಲ್ಲಹಾಗೆ. ಹಾಗಿದ್ದರೆ, ನಮ್ಮ ಸ್ಮಾರ್ಟ್‌ ಫೋನ್‌ ಹ್ಯಾಕ್‌ ಆಗಿದೆಯೇ ಇಲ್ಲವೇ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ನೀವಿಲ್ಲಿನೆನಪಿಡಬೇಕಾದ ಸಂಗತಿ ಏನೆಂದರೆ, ಹ್ಯಾಕಿಂಗ್‌ ಎಂದರೆ, ಅಪಾಯಕಾರಿ ಆ್ಯಪ್‌ಗಳು, ಮಾಲ್‌ವೇರ್‌, ಸ್ಪೈ ವೇರ್‌, ನಿಮ್ಮ ಬ್ಯಾಂಕಿಂಗ್‌ ಡೇಟಾ ಕದಿಯುವ ಪ್ರೋಗ್ರಾಮ…, ವೈರಸ್‌ ಇರುವ ಲಿಂಕ್‌ ಮತ್ತು ಒಟ್ಟಾರೆ ನಿಮ್ಮ ಸ್ಮಾರ್ಟ್‌ ಫೋನ್‌ಗೆ ಹಾನಿಯನ್ನುಂಟು ಮಾಡುವ ಸಂಗತಿಗಳನ್ನು ಹ್ಯಾಕಿಂಗ್‌ ಎಂದು ಭಾವಿಸಬಹುದು. 

  • ಪಾಪ್‌ ಆ್ಯಡ್‌ ಹೆಚ್ಚಾಗುವುದು
    ನಿಮ್ಮ ಫೋನ್‌ ಸ್ಕ್ರೀನ್‌ ಮೇಲೆ ಇದ್ದಕ್ಕಿದ್ದಂತೆ ಪಾಪ್‌ ಅಪ್‌ ಜಾಹೀರಾತುಗಳು ಕಾಣಿಸಿಕೊಳ್ಳಲಾರಂಭಿಸಿದರೆ, ಅಂಥ ಫೋನ್‌ನಲ್ಲಿ ಮಾಲ್‌ವೇರ್‌ ಸೇರಿಕೊಂಡಿರುವ ಸಾಧ್ಯತೆ ಇರುತ್ತದೆ ಎಂದು ಪರಿಗಣಿಸಬಹುದು. 

  • ಗೊತ್ತಿಲ್ಲದಂತೆ ಅಪರಿಚಿತ ಆ್ಯಪ್‌ ಇನ್‌ಸ್ಟಾಲ್‌
    ಕೆಲವೊಂದು ಸಾರಿ ನಿಮಗೆ ಗೊತ್ತಿಲ್ಲದಂತೆ ಕೆಲವೊಂದು ಆ್ಯಪ್‌ಗಳು ನಿಮ್ಮ ಫೋನ್‌ನಲ್ಲಿ ಇನ್‌ಸ್ಟಾಲ್‌ ಆಗಿರುತ್ತವೆ. ಅಂಥ ಆ್ಯಪ್‌ಗಳು ಅಪಾಯಕಾರಿಯಾಗಿರುತ್ತವೆ. ಇದು ಕೂಡ ನಿಮ್ಮ ಫೋನ್‌ ಮಾಲ್‌ವೇರ್‌ ದಾಳಿಗೆ ಒಳಗಾಗಿರುವ ಸಂಕೇತವಾಗಿರುತ್ತದೆ. 

  • ಐಕಾನ್‌ ಕಾಣದಂತೆ ಮಾಯ
    ನೀವು ಯಾವುದೇ ಒಂದು ಆ್ಯಪ್‌ ಒಂದನ್ನು  ಡೌನ್ಲೋಡ್‌ ಮಾಡಿ ಇನ್‌ಸ್ಟಾಲ್‌ ಮಾಡಿಕೊಳ್ಳುತ್ತೀರಿ. ಆದರೆ, ಇನ್‌ಸ್ಟಾಲ್‌ ಆಗುತ್ತಿದ್ದಂತೆ ಆ್ಯಪ್‌ನ ಐಕಾನ್‌ ಸ್ಕ್ರೀನ್‌ ಮೇಲೆ ಕಾಣಿಸದಿದ್ದರೆ ಅಂಥ ಆ್ಯಪ್‌ ಮಾಲ್ವೇರ್‌ಗೆ ಒಳಗಾಗಿರುವ ಸಾಧ್ಯತೆ ಇರುತ್ತದೆ. 

  • ಬ್ಯಾಟರಿ ಖಾಲಿಯಾಗುತ್ತಿದ್ದರೆ...
    ನಿಮ್ಮ ಸ್ಮಾರ್ಟ್‌ ಫೋನ್‌ ಬ್ಯಾಟರಿ ಇದ್ದಕ್ಕಿದ್ದಂತೆ ಖಾಲಿಯಾಗುತ್ತಿದ್ದರೆ ಅಂದರೆ ಶೇ.100ರಷ್ಟಿದ್ದ ಬ್ಯಾಟರಿ ತಕ್ಷ ಣವೇ ಶೇ.10ಕ್ಕೆ ಇಳಿಯುತ್ತಿದ್ದರೆ ಅಂಥ ಫೋನ್‌ ಮಾಲ್‌ವೇರ್‌ ದಾಳಿಗೆ ಒಳಗಾಗಿದೆ ಎಂದು ಭಾವಿಸಬೇಕು.

  • ಅಂತಾರಾಷ್ಟ್ರೀಯ ಕರೆಗಳು, ಮಿಸ್ಡ್‌ ಕಾಲ್‌ಗಳು
    ಒಂದೊಮ್ಮೆ  ನಿಮಗೆ ಮೇಲಿಂದ ಮೇಲೆ ಅಂತಾರಾಷ್ಟ್ರೀಯ ಕರೆಗಳು ಬರುತ್ತಿದ್ದರೆ, ಮಿಸ್ಡ್‌ ಕಾಲ್‌ಗಳಾಗುತ್ತಿದ್ದರೆ  ನಿಮ್ಮ ಫೋನ್‌ ಅನ್ನು ಹ್ಯಾಕ್‌ ಮಾಡಿರುವ ಸಾಧ್ಯತೆ ಹೆಚ್ಚಾಗಿರುತ್ತದೆ. ಹಾಗಾಗಿ ನಿಮ್ಮ ಫೋನ್‌ ಅನ್ನು ಪರೀಕ್ಷಿಸಿಕೊಳ್ಳುವುದು ಬೆಸ್ಟ್‌.

  • ಡೇಟಾ ಖಾಲಿಯಾಗುತ್ತಿದ್ದರೆ....
    ನೀವು ನಿಯಂತ್ರಿತ ಡೇಟಾ ಪ್ಯಾಕ್‌ ಹಾಕಿಸಿಕೊಂಡಿರುತ್ತೀರಿ. ಆದರೂ ಡೇಟಾ ಖಾಲಿಯಾಗುತ್ತಿದ್ದರೆ ಅಂದು ಚಿಂತೆಯ ವಿಷಯ ಖಂಡಿತ  ಹೌದು. ಯಾಕೆಂದರೆ, ನಿಮ್ಮ ಫೋನ್‌ ವೈರಸ್‌ ದಾಳಿಗೊಳಗಾಗಿರುವ ಸಾಧ್ಯತೆ ಇರುತ್ತದೆ. 

  • ಆ್ಯಪ್‌ ಕ್ರ್ಯಾಶ್‌, ಅಪ್ಡೇಟ್‌ ಆಗದಿರುವುದು
    ಒಂದು ವೇಳೆ ಆ್ಯಪ್‌ಗಳು ಪದೇ ಪದೇ ಕ್ರ್ಯಾಶ್‌ ಆಗುತ್ತಿದ್ದರೆ ಮತ್ತು ಅಪ್ಡೇಟ್‌ ಮಾಡಲು ಸಾಧ್ಯವಾಗುತ್ತಿಲ್ಲವಾದರೆ ಮಾಲ್‌ವೇರ್‌ಇಫೆಕ್ಟ್ ಆಗಿರುವ ಸಾಧ್ಯತೆ ಹೆಚ್ಚಾಗಿರುತ್ತದೆ.

  • ನಿಧಾನ ಪ್ರದರ್ಶನ
    ಚೆನ್ನಾಗಿಯೇ ಇರುವ ಸ್ಮಾರ್ಟ್‌ ಫೋನ್‌ ನಿಧಾನವಾಗಿ ಪ್ರದರ್ಶನ ತೋರಿಸಲಾರಂಭಿಸಿದರೆ ಖಂಡಿತವಾಗಿಯೂ ಅಪಾಯದ ಮುನ್ಸೂಚನೆಯಾಗಿರುತ್ತದೆ.  ಹಾಗಾಗಿ, ಪರೀಕ್ಷಿಸಿಕೊಳ್ಳುವುದು ಒಳ್ಳೆಯದು.


  1. ಕಾಲ್‌ ವಾರ್ನಿಂಗ್‌, ಹುಷಾರಾಗಿರಿ!

ಬಳಕೆದಾರ ವೈಯಕ್ತಿಕ ಮಾಹಿತಿಯನ್ನು ಕದಿಯುವುದಕ್ಕಾಗಿ ಕೆಲವು ನಕಲಿ ಕರೆಗಳು ಬರುತ್ತಿದ್ದು ಈ ಬಗ್ಗೆ ಎಚ್ಚರ ವಹಿಸುವಂತೆ ಸರಕಾರವೇ ಎಚ್ಚರಿಸಿದೆ. ಸೈಬರ್‌ ಖದೀಮರು ಬಳಕೆದಾರರಿಗೆ ಕರೆ ಮಾಡಿ, ಬ್ಯಾಂಕಿಂಗ್‌ ಮಾಹಿತಿ ಸೇರಿದಂತೆ ಇನ್ನಿತರ ಮಾಹಿತಿಯನ್ನು ನಿಮ್ಮಿಂದ ಪಡೆಯುವ ಪ್ರಯತ್ನ ಮಾಡುತ್ತಿದ್ದಾರೆ. ಈ ಬಗ್ಗೆ ಎಚ್ಚರ ವಹಿಸುವುದು ಸೂಕ್ತ. ಅಂಥ ಕರೆಗಳನ್ನು ಗುರುತಿಸುವುದು ಹೇಗೆ?

  •  ಸಾಮಾನ್ಯವಾಗಿ ಈ ರೀತಿಯ ಕರೆಗಳ ನಂಬರ್‌ +92ನಿಂದ ಆರಂಭವಾಗಿರುತ್ತವೆ.
  • ಇಂಥ ಕರೆಗಳು ಸಾಮಾನ್ಯ­ ವಾಗಿ ಧ್ವನಿ ಕರೆಗಳು ಇಲ್ಲವೇ ವಾಟ್ಸ್‌ ಆ್ಯಪ್‌ ಕರೆಗಳಾಗಿರುತ್ತವೆ.
  • ಬ್ಯಾಂಕ್‌ ಖಾತೆ ನಂಬರ್‌ ಅಥವಾ ಡೆಬಿಟ್‌ ಕಾರ್ಡ್‌ ಮಾಹಿತಿ ಪಡೆಯುವುದೇ ಉದ್ದೇಶವಾಗಿರುತ್ತದೆ.
  • ನಕಲಿ ಲಾಟರಿ, ಲಕ್ಕಿ ಡ್ರಾ ದೊರೆತಿದೆ ಎಂಬ ಆಮಿಷ ಒಡ್ಡುವ ಕರೆಗಳಾಗಿರುತ್ತವೆ. 
  • ಖದೀಮರು ತಾವು ಅಧಿಧಿಕೃತ ಸಂಸ್ಥೆಯಿಂದಲೇ ಕರೆ ಮಾಡುತ್ತಿರುವುದಾಗಿ ನಂಬಿಸುತ್ತಾರೆ.
  • ಕೆಲವೊಮ್ಮೆ ಸೈಬರ್‌ ಕ್ರಿಮಿನಲ್‌ಗಳು ನಿಮಗೆ ಕ್ಯೂಆರ್‌ ಕೋಡ್‌ ಅಥವಾ ಬಾರ್‌ ಕೋಡ್‌ ಸಂದೇಶಗಳನ್ನು ಕಳುಹಿಸುತ್ತಾರೆ. ಅಂಥ ಕ್ಯೂಆರ್‌ ಕೋಡ್‌ಗಳನ್ನು  ಎಂದಿಗೂ ಸ್ಕ್ಯಾ‌ನ್‌ ಮಾಡಲು ಹೋಗಬೇಡಿ.
  • ಖದೀಮರು +01 ಆರಂಭವಾಗುವ ನಂಬರ್‌ನಿಂದಲೂ ಕರೆಗಳ ಬರಬಹುದು ಹುಷಾರಾಗಿರಿ.


    (ಈ ಲೇಖನ ವಿಜಯ ಕರ್ನಾಟಕದ 2020ರ ಆಗಸ್ಟ್ 26ರ ಸಂಚಿಕೆಯಲ್ಲಿ ಪ್ರಕಟಾಗಿದೆ)



 

Google People Card: ವರ್ಚುಯಲ್‌ ವಿಸಿಟಿಂಗ್‌ ಕಾರ್ಡ್‌!

 ಗೂಗಲ್ನಿಂದಪೀಪಲ್ಕಾರ್ಡ್‌’ ಫೀಚರ್


 - ಮಲ್ಲಿಕಾರ್ಜುನ ತಿಪ್ಪಾರ
ದ್ಯೆತ್ಯ ಗೂಗಲ್ತನ್ನ ಬಳಕೆದಾರರಿಗೆ ಅತ್ಯಾಧುನಿಕ ತಾಂತ್ರಿಕ ಸೌಲಭ್ಯ ಒದಗಿಸಲು  ಎಂದೂ ಹಿಂದೆ ಬಿದ್ದಿಲ್ಲ. ಬಳಕೆದಾರರ ಅಗತ್ಯಕ್ಕೆ ಅನುಗುಣವಾಗಿ ಮತ್ತು ಲಭ್ಯವಾಗುವ ತಾಂತ್ರಿಕತೆಯನ್ನು ಬಳಸಿಕೊಂಡು ವಿಶಿಷ್ಟ ಬಳಕೆಯ ಅನು­ಭವವನ್ನು ನೀಡುತ್ತಾ ಬಂದಿದೆ. ಇದೀಗ ಅದೇ ಮಾದರಿಯಲ್ಲಿಪೀಪಲ್ಕಾರ್ಡ್‌’ ಎಂಬ ಹೊಸ ಆಯ್ಕೆಯೊಂದನ್ನು ಬಳಕೆದಾರರಿಗೆ ನೀಡಿದೆ. ಇದು ಈಗ ಭಾರತೀಯ ಬಳಕೆದಾರರಿಗೆ ಲಭ್ಯವಿದ್ದು, ವರ್ಚುಯಲ್ಕಾರ್ಡ್ರಚಿಸಿಕೊಳ್ಳಬಹುದಾಗಿದೆ.

ಆನ್ಲೈನ್ನಲ್ಲಿಜನರ ಇರುವಿಕೆಯನ್ನು ಹೆಚ್ಚಿಸುವ ಉದ್ದೇಶದಿಂದಲೇ ಗೂಗಲ್ಈ ಪೀಪಲ್ಕಾರ್ಡ್ಫೀಚರ್ಅನ್ನು ಹೊರ ತಂದಿದೆ. ವಿಶೇಷವಾಗಿ ಆಗಷ್ಟೇ ಆನ್ಲೈನ್  ಬಳಕೆಗೆ ಮುಂದಾದವರಿಗೆ ಇದು ಹೆಚ್ಚಿನ ನೆರವು ನೀಡಲಿದೆ. ಇನ್ನು ನೀವು ಇದನ್ನು ಬಿಸಿನೆಸ್ಕಾರ್ಡ್ರೀತಿಯಲ್ಲಿಬಳಸಿಕೊಳ್ಳಬಹುದು. ವರ್ಚುಯಲ್ವಿಸಿಟಿಂಗ್ಕಾರ್ಡ್ಎಂದು ಗುರುತಿಸಲಾಗುತ್ತಿರುವ ಈ ಪೀಪಲ್ಕಾರ್ಡ್ಅನ್ನು ಬಳಸಿಕೊಂಡು ಬಳಕೆ­ದಾರರು ತಮ್ಮ ಕಾಂಟ್ಯಾಕ್ಟ್ ಡಿಟೇಲ್ಸ್ಹೆಚ್ಚಿಸುವುದಕ್ಕೆ ಬಳಸಬಹುದು. ಇದಕ್ಕೆ ಅವರು ಒದಗಿಸುವ ಸಾಮಾಜಿಕ ಜಾಲತಾಣ­ಗಳ ಮಾಹಿತಿಯು ಹೆಚ್ಚಿನ ನೆರವು ಒದಗಿಸುತ್ತದೆ. ಹಾಗಂತ ಎಲ್ಲಮಾಹಿತಿಯನ್ನು ಒದಗಿಸಬೇಕೆಂದೇನೂ ಇಲ್ಲನಿಮಗೆ ಕೊಡಬೇಕಿನಿಸಿರುವ ಮಾಹಿತಿಯನ್ನು ಮಾತ್ರವೇ ದಾಖಲಿಸಬಹುದು.

‘‘ಪ್ರಭಾವಿಗಳು, ಉದ್ಯಮಿಗಳು, ಉದ್ಯೋಗ ಶೋಧಿ­ಸುತ್ತಿ­ರು­ವವರು, ಸ್ವಯಂ ಉದ್ಯೋಗಿಗಳು, ಸ್ವತಂತ್ರೋದ್ಯೋಗಿ­ಗಳು ಸೇರಿ ಲಕ್ಷಾಂತರು ಜನರಿಗೆ ತಮ್ಮನ್ನು ತಾವು ಶೋಧಿಸಿಕೊಳ್ಳಲು ಇದು ನೆರವು ನೀಡುತ್ತದೆ.ಜಗತನ್ನು ಶೋಧಿಸಲು ಈ ಹೊಸ ವೈಶಿಷ್ಟ್ಯ­ವೂ ಸಹಾಯ ಮಾಡುತ್ತದೆ ಎಂದು ನಾವು ಭಾವಿಸು­ತ್ತೇವೆ,’’ ಎಂದು ಗೂಗಲ್ತನ್ನ ಬ್ಲಾಗ್ಪೋಸ್ಟ್ನಲ್ಲಿಹೇಳಿಕೊಂಡಿದೆ. ಪೀಪಲ್ಕಾರ್ಡ್ರಚಿಸಿ ಆದ ಮೇಲೆ ಅದು ಲೈವ್ಆಗುತ್ತದೆ ಮತ್ತು ಶೋಧದ ಭಾಗವಾಗಿ ಸರ್ಚ್ರಿಸಲ್ಟ್ನಲ್ಲಿಅದು ಕಾಣಿಸಿಕೊಳ್ಳುತ್ತದೆ. ಸರ್ಚ್ಎಂಜಿನ್ಬಳಕೆದಾರರು ನಿರ್ದಿಷ್ಟ ವ್ಯಕ್ತಿಯ ಬಗ್ಗೆ ಶೋಧಿಸಿದಾಗ ಆ ವ್ಯಕ್ತಿಯ ಪೀಪಲ್ಕಾರ್ಡ್ಜೊತೆಗೆ ಇತರ ಮಾಹಿತಿಯೂ ಲಭ್ಯವಾಗುತ್ತದೆ. ಅದರಲ್ಲಿಹೆಸರು, ವೃತ್ತಿ ಮತ್ತು ಸ್ಥಳದ ಮತ್ತಿತರ ಮಾಹಿತಿಯೂ ಮಾಡ್ಯುಲ್ಕಾಣಿಸಿಕೊಳ್ಳುತ್ತದೆ. ಒಂದೊಮ್ಮೆ ಒಂದೇ  ಹೆಸರಿನ ಅನೇಕ ಕಾರ್ಡ್ಗಳಿದ್ದರೆ, ಬಳಕೆದಾರರಿಗೆ ಮಲ್ಟಿಪಲ್ಮಾಡ್ಯುಲ್ಕಾರ್ಡ್ಗಳು ಗೋಚರವಾಗುತ್ತವೆ ಮತ್ತು ತಮಗೆ ಬೇಕಿರುವ ವ್ಯಕ್ತಿಯ ಮಾಹಿತಿಯನ್ನು ಪ್ರತ್ಯೇಕಿಸಲು ಅವರಿಗೆ ಸಾಧ್ಯವಾಗುತ್ತದೆ.

Add caption

 ಗೂಗಲ್ಕಾರ್ಡ್ಕ್ರಿಯೆಟ್ಹೇಗೆ?: ಗೂಗಲ್ಕಾರ್ಡ್ಕ್ರಿಯೆಟ್ಮಾಡಲು ನೀವು ಗೂಗಲ್ನ ಅಧಿಕೃತ ಇ-ಮೇಲ್ಐಡಿ ಮತ್ತು ಮೊಬೈಲ್ನಂಬರ್ಗಳನ್ನು ಹೊಂದಿರ­ಬೇಕು.

ಹೀಗೆ ಮಾಡಿ: ನಿಮ್ಮ ಸ್ಮಾರ್ಟ್ಫೋನ್ನ ಗೂಗಲ್ಸರ್ಚ್ಬಾರ್ನಲ್ಲಿ Add me to search ಎಂದು ಟೈಪ್ಮಾಡಿ. ಆಗ Get Started  ಎಂಬ ಬಟನ್ಕಾಣುತ್ತದೆ ಅದರ ಮೇಲೆ ಟ್ಯಾಪ್ಮಾಡಿ. ಆಗ ಅದು ನಿಮ್ಮನ್ನು Edit your public profile ಆಪ್ಷನ್ಗೆ ಕರೆದೊಯ್ಯುತ್ತದೆ. ಅಲ್ಲಿನೀವು, ಫೋಟೊ, ಹೆಸರು, ಬಿಸಿನೆಸ್ಅಥವಾ ನೀವು ಮಾಡುತ್ತಿರುವ ಉದ್ಯೋಗ, ನಿಮ್ಮ ಹುದ್ದೆ, ಕಂಪನಿ ಹೆಸರು, ನಿಮ್ಮ ಬಗ್ಗೆ ಹೀಗೆ ಎಲ್ಲವೈಯಕ್ತಿಕ ಮಾಹಿತಿ ಜೊತೆಗೆ ನಿಮ್ಮ ಫೋನ್ನಂಬರ್‌, ಇ ಮೇಲ್ಐಡಿ ಮಾಹಿತಿಯನ್ನೂ ನಮೂದಿಸಬೇಕಾಗುತ್ತದೆ. ಇಷ್ಟೆಲ್ಲಾಮಾಹಿತಿಯನ್ನು ನೀವು ಡಿಜಿಟಲ್ಫಾರ್ಮ್ನಲ್ಲಿಭರ್ತಿ ಮಾಡಿದ ಮೇಲೆ ಪ್ರಿವಿವ್ಯೂ ಕಾಣಿಸುತ್ತದೆ. ಆಗ ನೀವು ದಾಖಲಿಸಿದ ಮಾಹಿತಿ ಸರಿಯಾಗಿದೆಯೇ ಎಂಬುದನ್ನು ಮತ್ತೊಮ್ಮೆ ಖಾತ್ರಿಪಡಿಸಿ­ಕೊಂಡು ಸೇವ್ಬಟನ್ಒತ್ತಿ. ಆಗ ವರ್ಚುಯಲ್ಬಿಸಿನೆಸ್ಕಾರ್ಡ್ಸೃಷ್ಟಿಯಾಗಿ ಕೆಲವೇ ನಿಮಿಷಗಳಲ್ಲಿಅದು ಲೈವ್ಆಗುತ್ತದೆ. ಒಮ್ಮೆ ನಿಮ್ಮ ಕಾರ್ಡ್ಲೈವ್ಆಯ್ತೆಂದರೆ, ಗೂಗಲ್ಸರ್ಚ್ಮಾಡಿದಾಗ, ನಿಮ್ಮ ಮೊಬೈಲ್ನಂಬರ್‌, ನಿಮ್ಮ ಹೆಸರನ್ನು ಶೋಧಿಸಿದಾಗ ರಿಸಲ್ಟ್ನಿಮ್ಮ ಬಿಸಿನೆಸ್ಕಾರ್ಡ್ಮಾಹಿತಿಯನ್ನು ಒದಗಿಸುತ್ತದೆ.

ಎಚ್ಚರಿಕೆಯೂ ಇರಲಿ: ಈ ವರ್ಚುಯಲ್ವಿಸಿಟಿಂಗ್ಕಾರ್ಡ್ಅನ್ನು ಯಾರು ಬೇಕಾದರೂ ರಚಿಸಿಕೊಳ್ಳಬಹುದು. ಆದರೆ, ಬಿಸಿನೆಸ್ಮೆನ್ಮತ್ತು ಉದ್ದಿಮೆದಾರರು, ವ್ಯಾಪಾರಿಗಳು ಇದು ಹೆಚ್ಚಿನ ಲಾಭವನ್ನು ತಂದುಕೊಡಲಿದೆ. ಅವರಿಗೆ ತಮ್ಮ ಗ್ರಾಹಕರ ಜತೆಗಿನ ಸಂಪರ್ಕಕ್ಕೆ ಇದು ರಹದಾರಿ ಯಾಗಲಿದೆ. ಖಾಸಗಿ ಮಾಹಿತಿ­ಯನ್ನು ಹಂಚಿಕೊಳ್ಳಲು ಇಷ್ಟವಿಲ್ಲದವರೂ ಈ ಕಾರ್ಡ್ನಿಂದ ದೂರ ಇರುವುದು ಒಳ್ಳೆಯದು. ಯಾಕೆಂದರೆ, ನೀವು ಒದಗಿಸುವ ನಂಬರ್‌, ಪೋಟೊಗಳನ್ನು ಅನ್ಯ ಕಾರಣಕ್ಕೆ ಬಳಸಿಕೊಳ್ಳಬಹುದು.

(ಈ ಲೇಖನ ವಿಜಯ ಕರ್ನಾಟಕದ 2020ರ ಆಗಸ್ಟ್ 26ರ ಸಂಚಿಕೆಯಲ್ಲಿ ಪ್ರಕಟಾಗಿದೆ)

ಸೋಮವಾರ, ಆಗಸ್ಟ್ 3, 2020

Sarah Catherine Gilbert: ಸಾರಾ ‘ಲಸಿಕೆ’ ಕೊಡ್ತಾರಾ?

ಲಸಿಕೆಗಳ ತಯಾರಿಕೆಯಲ್ಲಿನಿಷ್ಣಾತರಾಗಿರುವ ಆಕ್ಸ್ಫರ್ಡ್ವಿಶ್ವವಿದ್ಯಾಲಯದ ಡಾ. ಸಾರಾ ಗಿಲ್ಬರ್ಟ್ಅವರು, ಕೊರೊನಾ ಲಸಿಕೆ ಪ್ರಯೋಗಕ್ಕೆ ತಮ್ಮ ತ್ರಿವಳಿ ಮಕ್ಕಳನ್ನೇ ಒಡ್ಡಿದ್ದಾರೆ.

 

- ಮಲ್ಲಿಕಾರ್ಜುನ ತಿಪ್ಪಾರ

ಇಡೀ ವಿಶ್ವವನ್ನೇ ತಲ್ಲಣಗೊಳಿಸಿರುವ ಕೋವಿಡ್‌-19 ವೈರಾಣು ಸೋಂಕಿತರ ಸಂಖ್ಯೆ 18 ಲಕ್ಷ  ದಾಟಿದ್ದು, ಈವರೆಗೆ ಹತ್ತಿರ 6.80 ಲಕ್ಷ  ಜನರು ಮೃತಪಟ್ಟಿದ್ದಾರೆ ಮತ್ತು ಈ ಸಂಖ್ಯೆ ಇನ್ನೂ ಏರುತ್ತಲೇ ಇದೆ. ಹಾಗಾಗಿ, ಕೋವಿಡ್‌ -19 ವಿರುದ್ಧದ ಲಸಿಕೆ ಅಥವಾ ಔಷಧ ತಯಾರಿಕೆ ಈ ಕ್ಷ ಣದ ಅಗತ್ಯಧಿವಾಗಿದ್ದು, ಅನೇಕ ರಾಷ್ಟ್ರಗಳು, ಔಷಧ ಕಂಪನಿಗಳು ಮತ್ತು ಔಷಧ ಸಂಶೋಧನಾ ಸಂಸ್ಥೆಗಳು ಈ ದಿಸೆಯಲ್ಲಿ ಕಾರ್ಯಪ್ರವೃತ್ತವಾಗಿವೆ; ಪೈಪೋಟಿಗಿಳಿದಿವೆ. ಎಲ್ಲರಿಗಿಂತ ಮೊದಲು ಲಸಿಕೆಯನ್ನೋ, ಔಷಧವನ್ನೋ ಕಂಡು ಹಿಡಿದು ಅದರ ಮೇಲೆ ಹಕ್ಕು ಸ್ವಾಮ್ಯ ಸಾಧಿಸುವುದು ಒಂದು, ಇಡೀ ಮನುಕುಲವನ್ನು ಈ ವೈರಾಣುವಿನಿಂದ ಕಾಪಾಡುವುದು ಮತ್ತೊಂದು ಉದ್ದೇಶ. ಈ ವಿಷಯದಲ್ಲಿ ಎಲ್ಲರಿಗಿಂತ ಮುಂಚೂಣಿಯಲ್ಲಿರುವುದು ಲಂಡನ್ನ ಆಕ್ಸ್ಫರ್ಡ್ವಿವಿಯ ಸಂಶೋಧಕರ ತಂಡ. ಈ ತಂಡದ ನೇತೃತ್ವ ವಹಿಸಿರುವುದು ಖ್ಯಾತ ಲಸಿಕಾಶಾಸ್ತ್ರಜ್ಞೆ ಡಾ. ಸಾರಾ ಗಿಲ್ಬರ್ಟ್‌. ವ್ಯಾಕ್ಸೀನಾಲಜಿ ಪ್ರಾಧ್ಯಾಪಕಿಯೂ ಆಗಿರುವ ಡಾ. ಸಾರಾ, ಕೋವಿಡ್ವಿರುದ್ಧ ಅಭಿವೃದ್ಧಿಪಡಿಸುತ್ತಿರುವ ಲಸಿಕೆ ಮೊದಲ ಹಂತದ ಪ್ರಯೋಗದಲ್ಲಿಹೆಚ್ಚು ಪರಿಣಾಧಿಮಕಾರಿಯಾಧಿಗಿರುವುದು ಸಂತಸಕ್ಕೆ ಕಾರಣವಾಗಿದೆ. ಹಾಗಾಗಿ, ಇಡೀ ಜಗತ್ತು ಸಾರಾ ನೇತೃತ್ವದಲ್ಲಿಅಭಿವೃದ್ಧಿಯಾಗುತ್ತಿರುವ ಆಕ್ಸ್ಫರ್ಡ್ನ ಲಸಿಕೆ ಯತ್ತಲೇ ದೃಷ್ಟಿ ನೆಟ್ಟು ಕೂತಿದೆ.

ವಿಶ್ವ ಆರೋಗ್ಯ ಸಂಸ್ಥೆ ಕೊರೊನಾ ಸಾಂಕ್ರಾಮಿಕ ಎಂದು ಘೋಷಿಸುವ ಮೊದಲೇ ಆಕ್ಸ್ಫರ್ಡ್ವಿವಿ ಮತ್ತು ಜೆನ್ನರ್ಇನ್ಸ್ಟಿಟ್ಯೂಟ್ಜಂಟಿಯಾಗಿ 250 ಸಂಶೋಧಕರ ತಂಡ  ಔಷಧ ಕುರಿತಾದ ವಿನ್ಯಾಸವನ್ನು ಸಿದ್ಧಪಡಿಸಲು ಆರಂಭಿಸಿತು. ಅಂದರೆ, ಜಗತ್ತು ಇನ್ನೂ ಕೊರೊನಾ ವೈರಸ್ಹಿನ್ನಲೆ ಮುನ್ನಲೆ ತಿಳಿಯುವ ಮೊದಲೇ ಈ ತಂಡ ಲಸಿಕೆಯ ಬಗ್ಗೆ ವಿಸ್ತೃತವಾದ ಪ್ಲ್ಯಾನ್ಹರವಿಕೊಂಡು ತಯಾರಾಗಿತ್ತು ಎಂದರೆ ಅದಕ್ಕೆ ಡಾ. ಸಾರಾ ಅವರ ಸ್ಫೂರ್ತಿ ಮತ್ತು ಅನುಭವವೂ ಕಾರಣ.

ಲಸಿಕೆ ತಯಾರಿಕೆ ಮತ್ತು ಪರೀಕ್ಷೆಯಲ್ಲಿ ಡಾ.ಸಾರಾ ಅವರಿಗಿರುವ ತಜ್ಞತೆಯ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ(ಡಬ್ಲ್ಯೂಎಚ್) ಗೆ ಈ ಮೊದಲೇ ಅರಿವಿತ್ತು. 2014ರಲ್ಲಿ ಕಾಡಿದ ಎಬೋಲಾ ಸೋಂಕಿಗೆ ಔಷಧ ತಯಾರಿಕೆಯ ಕೆಲಸವನ್ನು ಡಾ.ಸಾರಾ ಮತ್ತು ತಂಡಕ್ಕೆ ವಹಿಸಲಾಗಿತ್ತು. ಹಾಗಾಗಿ, ಚೀನಾದ ವುಹಾನ್ನಲ್ಲಿ ಮೊದಲ ಬಾರಿಗೆ ವೈರಸ್ಪತ್ತೆಯಾಗುತ್ತಿದ್ದಂತೆ ಸಾರಾ ತಂಡ ಚುರುಕಾಯಿತು. ಮರ್ಸ್‌(ಮಿಡಲ್ಈಸ್ಟ್ರೆಸ್ಪಿರೇಟರಿ ಸಿಂಡ್ರೋಮ್ಕೊರೊನಾ ವೈರಸ್‌)ಗೆ ವ್ಯಾಕ್ಸಿನ್ಗಾಗಿ ನಡೆಸಿದ ಸಂಶೋಧನೆಯು ಇದಕ್ಕೂ ಬಹುಪಾಲು ನೆರವು ನೀಡಿತು.  ಸಾರಾ ಶಾಂತ ವರ್ತನೆ ಮತ್ತು ಸ್ನೇಹಪರ ವ್ಯಕ್ತಿತ್ವವನ್ನು ಹೊಂದಿರುವ ಅತ್ಯಂತ ಬುದ್ಧಿವಂತ ಹುಡುಗಿಯಾಗಿದ್ದಳು ಎಂದು ಆಕೆಯ ಕ್ಲಾಸ್ಮೇಟ್ಗಳು ಸ್ಮರಿಸಿಕೊಳ್ಳುತ್ತಾರೆ. ಸಾರಾ ಬಗ್ಗೆ ಹೆಮ್ಮೆ ಪಡಲು ಇನ್ನೊಂದು ಕಾರಣವಿದೆ. ಅವರು ತಮ್ಮ ತ್ರಿವಳಿ ಮಕ್ಕಳನ್ನೇ ಈ ಕೊರೊನಾ ಲಸಿಕೆ ಪ್ರಯೋಗಕ್ಕೆ ಬಳಸಿಕೊಂಡಿದ್ದಾರೆ! 21 ವರ್ಷದ ಮೂವರು ಮಕ್ಕಳು ಸ್ವಯಂಪ್ರೇರಿತರಾಗಿಯೇ ಪರೀಕ್ಷೆಗೆ ತಮ್ಮನ್ನು ಒಡ್ಡಿಕೊಂಡಿದ್ದಾರೆ.

ಜಗತ್ತಿನಾದ್ಯಂತದ ಜನರನ್ನು ಸಂಕಟದಿಂದ ಪಾರು ಮಾಡುವ ಅಗತ್ಯವನ್ನು ಸತ್ಯದೊಂದಿಗೆ ಎತ್ತಿ ಹಿಡಿಯುಲು ಬೇಕಾದ ಭರವಸೆಯನ್ನು ಹೇಗೆ ಸಮತೋಲನಗೊಳಿಸಬೇಕೆಂಬುದು ಅರಿತುಕೊಂಡಿರುವುದೇ ಸಾರಾ ಅವರ ಬಹುದೊಡ್ಡ ಸಾಮರ್ಥ್ಯ‌. ತನ್ನ ಹೆಗಲ ಮೇಲೆ ಕೋಟ್ಯಂತರ ನಿರೀಕ್ಷೆಗಳ ಭಾರ ಹೊತ್ತುಕೊಂಡಿರುವ ಅರಿವು ಸ್ಪಷ್ಟವಾಗಿ ಸಾರಾಗೆ ಗೊತ್ತಿದೆ. ಹಾಗಾಗಿಯೇ ವರ್ಷಾಂತ್ಯಕ್ಕೆ ಆಕ್ಸ್ಫರ್ಡ್ಲಸಿಕೆಯನ್ನು ಸಿಗುವಂತೆ ಮಾಡುವ ದೊಡ್ಡ ಸವಾಲು ಅವರ ಮುಂದಿದೆ. ಇದೇನೂ ಅಸಾಧ್ಯವಾದುದಲ್ಲ. ಆದರೆ, ಆ ಬಗ್ಗೆ ಖಚಿತತೆ ಇಲ್ಲಎಂಬುದನ್ನು ಒಪ್ಪಿಕೊಳ್ಳಲೇಬೇಕು ಎನ್ನುವ ಅವರ ಮಾತುಗಳು ಬದ್ಧತೆಗೆ ಪ್ರತೀಕವಾಗಿವೆ. 1962ರ ಏಪ್ರಿಲ್ನಲ್ಲಿ ಜನಿಸಿದ ಸಾರಾಗೆ ಈಗ 58ರ ಹರೆಯ. ಈಸ್ಟ್ಏಂಜಿಲಿಯಾ ವಿವಿಯಲ್ಲಿ ಅಧ್ಯಯನ ಕೈಗೊಂಡ ಸಾರಾ, ಬಯೋಲಾಜಿಕಲ್ಸೈನ್ಸ್ನಲ್ಲಿಪದವಿ ಪಡೆದರು. ಅಲ್ಲಿಂದ ಡಾಕ್ಟರಲ್ಪದವಿಗಾಗಿ ಯುನಿವರ್ಸಟಿ ಆಫ್ಹಲ್ಗೆ ತೆರಳಿದರು. ಈ ವಿಶ್ವವಿದ್ಯಾಲಯದಲ್ಲೇ ಅವರು,  ಯೀಸ್ಟ್ರೋಡೋಸ್ಪೊರಿಡಿಯಮ್ಟೊರುಲಾಯ್ಡ್ಗಳ ತಳಿಶಾಸ್ತ್ರ ಮತ್ತು ಜೀವರಾಸಾಯನಿಕತೆಯ ಕುರಿತು ಅಧ್ಯಯನ ನಡೆಸಿದರು.

ಉನ್ನತ ಶಿಕ್ಷ ಣದ ಬಳಿಕ ಸಾರಾ, ಬರ್ವಿಂಗ್ಇಂಡಸ್ಟ್ರಿ ರಿಸರ್ಚ್ಫೌಂಡೇಷನ್ನಲ್ಲಿ ಪೋಸ್ಟ್ಡಾಕ್ಟರಲ್ಸಂಶೋಧಕಿಯಾಗಿ ಕೆಲಸ ಮಾಡಿದರು. ನಂತರ, ಡೆಲ್ಟಾ ಬಯೋ ಟೆಕ್ನಾಲಜಿ ಸೇರಿಕೊಂಡರು. 1994ರಲ್ಲಿಮತ್ತೆ ಅಧ್ಯಯನಕ್ಕೆ ಮರಳಿದ ಸಾರಾ, ಆಡ್ರಿನ್ವಿ ಎಸ್ಹಿಲ್ಪ್ರಯೋಗಾಲಯಕ್ಕೆ ಸೇರಿದರು. ಅಲ್ಲಿಂದ 2004ರಲ್ಲಿ ಆಕ್ಸ್ಫರ್ಡ್ವಿವಿಯ ವ್ಯಾಕ್ಸಿನಾಲಜಿ ವಿಭಾಗದಲ್ಲಿ ರೀಡರ್ಆಗಿ ನೇಮಕವಾದರು. 2010ರಲ್ಲಿಜೆನ್ನರ್ಇನ್ಸ್ಟಿಟ್ಯೂಟ್ನಲ್ಲಿ ಪ್ರೊಫೆಸರ್ಆದರು. ಅಲ್ಲಿಅವರು, ವೆಲ್ಕಮ್ಟ್ರಸ್ಟ್ಸಹಾಯದೊಂದಿಗೆ ನಾವೆಲ್ಇನ್ಫ್ಲುಯೆಂಜಾಗೆ ಲಸಿಕೆಗಳನ್ನು ತಯಾರಿಸುವ ವಿನ್ಯಾಸದ ಕೆಲಸವನ್ನು ಆರಂಭಿಸಿದರು. ಹೀಗೆ ಅವರು ಒಬ್ಬ ವ್ಯಾಕ್ಸಿನಿಸ್ಟ್ಆಗಿ ಬೆಳಕಿಗೆ ಬರತೊಡಗಿದರು. ಈ ಕ್ಷೇತ್ರದಲ್ಲಿ ಅವರು ಮಾಡಿದ ಪ್ರಯೋಗಗಳು, ಸಂಶೋಧನೆಗಳು ಹೊಸ ದಾರಿಗಳನ್ನು ತೋರಿಸಿದವು.

ಸಾರಾ ಅವರು ಯುನಿವರ್ಸಲ್ಫ್ಲುವ್ಯಾಕ್ಸಿನ್ಅಭಿವೃದ್ಧಿ ಮತ್ತು ಪರೀಕ್ಷೆಯಲ್ಲಿ ತಮ್ಮನ್ನು ಹೆಚ್ಚಾಗಿ ತೊಡಗಿಸಿಕೊಂಡಿದ್ದಾರೆ. ಸಾಂಪ್ರದಾಯಿಕ ಲಸಿಕೆಗಳಂತೆ ಈಯುನಿವರ್ಸಲ್ಫ್ಲುಲಸಿಕೆಗಳು ಪ್ರತಿಕಾಯಗಳ ಉತ್ಪಾದನೆಯನ್ನು ವೇಗಗೊಳಿಸುವುದಿಲ್ಲ. ಬದಲಿಗೆ, ಇನ್ಫ್ಲುಯೆಂಜಾಗೆ ಅಗತ್ಯವಿರುವಟಿಕೋಶಗಳನ್ನು ಸೃಷ್ಟಿಸುವಂತೆ ದೇಹದ ನಿರೋಧಕ ಶಕ್ತಿ ವ್ಯವಸ್ಥೆಗೆ ಪ್ರಚೋದನೆ ನೀಡುತ್ತವೆ. ವ್ಯಕ್ತಿಗೆ ವಯಸ್ಸಾದಂತೆ ನಿರೋಧಕ ಶಕ್ತಿ ಕುಂದುತ್ತಾ ಹೋಗುತ್ತದೆ. ಅಂಥವರಿಗೆ ಈ ಸಾಂಪ್ರದಾಯಿಕ ಲಸಿಕೆಗಳು ಪರಿಣಾಮಕಾರಿಯಾಗುವುದಿಲ್ಲ. ಬದಲಿಗೆ ಯುನಿವರ್ಸಲ್ಫ್ಲು ಲಸಿಕೆಗಳು ಹೆಚ್ಚು ಪರಿಣಾಮವನ್ನು ನೀಡಬಲ್ಲವು. ಹಾಗಾಗಿಯೇ, ಸಾರಾ ಅವರ ಪ್ರಯೋಗಕ್ಕೆ ಹೆಚ್ಚು ಮನ್ನಣೆ ಇದೆ. 2008ರಲ್ಲಿ ಅವರ ಮೊದಲ ಕ್ಲಿನಿಕಲ್ಪ್ರಯೋಗಗಳಲ್ಲಿಇನ್ಫ್ಲುಯೆಂಜಾ ಎ ವೈರಸ್  ಸಬ್ಟೈಪ್ಎಚ್‌3ಎನ್‌2 ಅನ್ನು ಬಳಸಲಾಯಿತು. ರೋಗಿಯ ರೋಗಲಕ್ಷ ಣಗಳ ದೈನಂದಿನ ಮೇಲ್ವಿಚಾರಣೆ ನಡೆಸಲಾಯಿತು. ಫ್ಲು ವೈರಸ್ಗೆ ಪ್ರತಿಕ್ರಿಯೆಯಾಗಿ ಟಿ ಕೋಶಗಳನ್ನು ಉತ್ತೇಜಿಸಲು ಸಾಧ್ಯವಿದೆ ಮತ್ತು ಜನರನ್ನು ಜ್ವರದಿಂದ ರಕ್ಷಿಸಲು ಸಾಧ್ಯವಾಗುತ್ತದೆ ಎಂಬುದನ್ನು ಕಂಡುಕೊಳ್ಳಲಾಯಿತು. ಈ ಎಲ್ಲ ಸಂಶೋಧನೆಗಳ ಫಲವಾಗಿಯೇ ಸಾರಾ ಅವರು ಮರ್ಸ್ಗೆ ಲಸಿಕೆಯನ್ನು ಕಂಡು ಹಿಡಿಯಲು ಸಾಧ್ಯವಾಯಿತು. ಇದೇ ಮಾದರಿಯನ್ನು ನಿಫಾಗೆ ತಯಾರಿಸಲಾದ ಲಸಿಕೆಯಲ್ಲಿ ಬಳಸಿಕೊಳ್ಳಲಾಯಿತು. ಹೀಗೆ, ಸಾರಾ ಅವರು, ಮಾನವ ಕುಲವನ್ನು ಕಾಡುತ್ತಿರುವ ಅನೇಕ ವೈರಾಣು ವಿರುದ್ಧಗಳ ಲಸಿಕೆಗಳನ್ನು ಸಿದ್ಧಪಡಿಸಲು ತಮ್ಮ ಜ್ಞಾನವನ್ನು ಧಾರೆ ಎರೆಯುತ್ತಿದ್ದಾರೆ.

ಬಹುಶಃ ಆಕ್ಸ್ಫರ್ಡ್ತಯಾರಿಸುತ್ತಿರುವ ಕೋವಿಡ್ಲಸಿಕೆಯೇ ಎಲ್ಲರಿಗಿಂತ ಮೊದಲು ದೊರೆಯುವ ಸಾಧ್ಯತೆಗಳು ಹೆಚ್ಚಾಗಿವೆ. ಈ ಲಸಿಕೆ  ಪರಿಣಾಮಕಾರಿಯಾದರೆ ಡಾ. ಸಾರಾಗೆ ಇಡೀ ಜಗತ್ತೇ ಋುಣಿಯಾಗಲಿದೆ. ಎಪಿಡೆಮಿಕ್ಪ್ರಿಪೇರೆಡೆನೆಸ್ಇನ್ನೋವೇಷನ್ಸ್  ಸಾರಾ ಅವರ ಲಸಿಕೆ ತಯಾರಿಕೆಗೆ ನಿಧಿ ಒದಗಿಸುತ್ತಿದೆ. ‘ಯುನಿವರ್ಸಲ್ಫ್ಲು ವ್ಯಾಕ್ಸಿನ್‌’ ಪದ್ಧತಿ ಮೂಲಕ ತಮ್ಮದೇ ಆದ ಲಸಿಕೆ ತಯಾರಿಕಾ ದಾರಿಯನ್ನು ಕಂಡುಕೊಂಡಿರುವ ಸಾರಾ ಅವರು, ಸೆಪ್ಟೆಂಬರ್ಹೊತ್ತಿಗೆ ಕೋವಿಡ್‌ 19ಗೆ ಲಸಿಕೆ ಲಭ್ಯವಾಗಲಿದೆ ಎಂದು ಹೇಳುತ್ತಾರೆ. ಅದಾಗದಿದ್ದರೂ ವರ್ಷಾಂತ್ಯಕ್ಕೆ ಲಸಿಕೆ ದೊರೆಯುವ ಸಾಧ್ಯತೆಗಳು ಹೆಚ್ಚು ಎಂಬುದು ಬಹುತೇಕ ತಜ್ಞರ ಅಭಿಪ್ರಾಯ. ಡಾ. ಸಾರಾ ಗಿಲ್ಬರ್ಟ್ಅವರ ಈ ಪ್ರಯತ್ನಗಳಿಂದಾಗಿ ಜಗತ್ತಿನಾದ್ಯಂತ ಪರಿಚಿತರಾಗುತ್ತಿದ್ದಾರೆ. ಟೈಮ್ಸ್ಪತ್ರಿಕೆಯಸೈನ್ಸ್ಪವರ್ಲಿಸ್ಟ್‌’ನಲ್ಲೂ ಕಾಣಿಸಿಕೊಂಡಿದ್ದಾರೆ. ವ್ಯಾಕಿಟೆಕ್ಸಂಸ್ಥೆಯನ್ನು ಹುಟ್ಟು ಹಾಕಿ ಸಂಶೋಧನೆಗೆ  ಒತ್ತು ನೀಡುತ್ತಿದ್ದಾರೆ.

(ಈ ಲೇಖನವು ವಿಜಯ ಕರ್ನಾಟಕದ 2020ರ ಆಗಸ್ಟ್ 2ರ ಸಂಚಿಕೆಯಲ್ಲಿ ಪ್ರಕಟವಾಗಿದೆ)