ಭಾನುವಾರ, ಜುಲೈ 31, 2022

Partha Chatterjee and Arpita Mukherjee- ಹಗರಣಕ್ಕೆ ಪಾರ್ಥ ಅರ್ಪಿತ!

ಪಾರ್ಥ ಚಟರ್ಜಿ ಮತ್ತು ಅರ್ಪಿತಾ ಮುಖರ್ಜಿ ಎಂಬೆರಡು ಹೆಸರು ಬೇಡದ ಕಾರಣಕ್ಕೆ ಪ್ರಸಿದ್ಧಿಯಾಗಿವೆ. ವಿಭಿನ್ನ ವ್ಯಕ್ತಿತ್ವದ ಈ ಇಬ್ಬರು ಹಗರಣದ ಸುಳಿಯಲ್ಲಿಸಿಲುಕಿದ್ದಾರೆ.


- ಮಲ್ಲಿಕಾರ್ಜುನ ತಿಪ್ಪಾರ
‘‘ಅವಳು ಚೆಲುವೆ. ಪ್ರತಿಭಾವಂತೆ. ಕೆಳಹಂತದಿಂದ ಮೇಲೆ ಬಂದವಳು. ನಾನು ಯಾವಾಗಲೂ ಹೊಸಬರನ್ನೇ ಆಯ್ಕೆ ಮಾಡಿಕೊಳ್ಳುತ್ತಿದ್ದೆ. 2013ರಲ್ಲಿನಾನು ಬಿಜೆಪಿ ಸೇರಿದೆ. ಆ ಬಳಿಕ ಸಂಪರ್ಕ ಕಡಿದು ಹೋಯಿತು. ಒಂದಂತೂ ಸತ್ಯ. ಆಕೆ, ಅತಿಯಾದ ಮಹತ್ವಾಕಾಂಕ್ಷೆ ಹೊಂದಿದ್ದಳು...’’

- ಚಿತ್ರಕರ್ಮಿ ಹಾಗೂ ಬಿಜೆಪಿಯ ನಾಯಕ ಸಂಗಮಿತ್ರ ಚೌಧರಿ ಅವರು ಅರ್ಪಿತಾ ಮುಖರ್ಜಿ ಬಗ್ಗೆ ಆಡಿದ ಮಾತುಗಳಿವು. ಚೌಧರಿ ಮಾತುಗಳು ಸತ್ಯ. ಅರ್ಪಿತಾ ಮುಖರ್ಜಿ ಎಷ್ಟು ಪ್ರತಿಭಾವಂತಳೋ ಅಷ್ಟೇ ಮಹತ್ವಾಕಾಂಕ್ಷಿಯೂ ಹೌದು. ಯಾವುದೋ ಒಂದು ಹಂತದಲ್ಲಿರಾಜಕಾರಣಿಯ ನಂಟು ಬೆಳೆಸಿಕೊಂಡು, ಈಗ ಹಗರಣದ ಸುಳಿಯಲ್ಲಿಸಿಲುಕಿಕೊಂಡು ಒದ್ದಾಡುತ್ತಿದ್ದಾರೆ. 

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅತ್ಯಾಪ್ತ ಹಾಗೂ ಸಚಿವರಾಗಿದ್ದ ಪಾರ್ಥ ಚಟರ್ಜಿ ಶಾಲಾ ಸೇವಾ ಆಯೋಗದ ನೇಮಕಾತಿ ವೇಳೆ ನಡೆಸಿದ ಬ್ರಹ್ಮಾಂಡ ಭ್ರಷ್ಟಾಚಾರವು ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ. ಜಾರಿ ನಿರ್ದೇಶನಾಲಯ(ಇ.ಡಿ) ಹೊರ ಹಾಕುತ್ತಿರುವ ಮಾಹಿತಿ, ಎಣಿಸುತ್ತಿರುವ ನೋಟುಗಳ ಮೌಲ್ಯ ಇಡೀ ಹಗರಣದ ಕತೆಯನ್ನು ಹೇಳುತ್ತಿವೆ. ಈ ಕತೆಯೊಳಗೇ ‘ಕ್ಯಾಶ್‌ ಕ್ವೀನ್‌’ ನಟಿ ಅರ್ಪಿತಾ ಮುಖರ್ಜಿ ಅವರದ್ದೂ ಒಂದು ಪ್ರಮುಖ ಪಾತ್ರ! ಯಾಕೆಂದರೆ, ಬಗೆದಷ್ಟು ಸಿಗುತ್ತಿರುವ ನಗದು ಅರ್ಪಿತಾ ಮನೆಯಲ್ಲೇ ಹೆಕ್ಕಿರುವುದು. ಈವರೆಗೆ ಅರ್ಪಿತಾ ಮನೆಯಲ್ಲಿ50 ಕೋಟಿ ರೂ. ನಗದು ಮತ್ತು ನಾಲ್ಕೂವರೆ ಕೋಟಿ ರೂ.ಗೂ ಅಧಿಕ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. 

ಯಾರು ಈ ಅರ್ಪಿತಾ ಮುಖರ್ಜಿ?
ಪ್ರತಿಭಾವಂತೆ ನಟಿ ಎನಿಸಿಕೊಂಡಿದ್ದ ಅರ್ಪಿತಾಗೆ ಸಿನಿಮಾರಂಗದಲ್ಲಿಅಬ್ಬಾ ಎನ್ನುವಂಥ ಯಶಸ್ಸು ಕಾಣಲಿಲ್ಲ. 2008ರಿಂದ 2014ರ ಅವಧಿಯಲ್ಲಿಅರ್ಪಿತಾ ಅವರು ಬೆಂಗಾಳಿ ಮತ್ತು ಒಡಿಯಾ ಭಾಷೆಯ ಕೆಲವು ಚಿತ್ರಗಳಲ್ಲಿನಟಿಸಿದ್ದಾರೆ. ಆದರೆ, ರಾಜಕೀಯ ಕಾರಿಡಾರ್‌ನಲ್ಲಿದೊರೆತ ಸಂಪರ್ಕಗಳು ಅರ್ಪಿತಾ ಅವರನ್ನು ಕೋಲ್ಕೊತಾದ ಪ್ರತಿಷ್ಠಿತ ವ್ಯಕ್ತಿಯನ್ನಾಗಿಸಿದವು. ದಕ್ಷಿಣ ಕೋಲ್ಕೊತಾದ ಚೋಕಾ ಪ್ರದೇಶದ ಐಷಾರಾಮಿ ಅಪಾರ್ಟ್‌ಮೆಂಟ್‌ನಲ್ಲಿವಾಸ್ತವ್ಯ ಸಾಮಾನ್ಯವಾಯಿತು. ನಗರದಲ್ಲಿರುವ ಹುಕ್ಕಾ ಬಾರ್‌ಗಳಿಗೆ ಅರ್ಪಿತಾ ನಿತ್ಯದ ಕಸ್ಟಮರ್‌. ಬ್ಯಾಂಕಾಂಕ್‌, ಸಿಂಗಾಪುರ ಸೇರಿದಂತೆ ಕೆಲವು ರಾಷ್ಟ್ರಗಳಲ್ಲಿರಜೆ ಮೋಜು ಕಳೆದಿದ್ದಿದೆ. 

ಕೋಲ್ಕೊತಾದ ಹೊರವಲಯದಲ್ಲಿರುವ ಬೆಲ್ಗಾರಿಯಾದಲ್ಲಿವಾಸವಾಗಿದ್ದ ಮಧ್ಯಮ ವರ್ಗದ ಕುಟುಂಬದ ಹಿನ್ನೆಲೆಯಲ್ಲಿಬಂದವರು ಅರ್ಪಿತಾ. ಕಾಲೇಜು ದಿನಗಳಿಂದಲೇ ಮಾಡೆಲಿಂಗ್‌ನಲ್ಲಿಆಸಕ್ತಿ. ತಂದೆಯ ಮರಣದ ನಂತರ, ಜಾಗ್ರಾಮ್‌ನ ಉದ್ಯಮಿಯೊಬ್ಬರನ್ನು ವಿವಾಹವಾಗಿದ್ದರು ಎಂಬ ಮಾಹಿತಿ ಈಗ ಹೊರ ಬಿದ್ದಿದೆ. ಆದರೆ, ಈ ಮದುವೆಯ ಬಗ್ಗೆ ಹೆಚ್ಚಿನ ವಿವರಗಳೂ ಇನ್ನೂ ಸಿಕ್ಕಿಲ್ಲ. ಆ ಬಳಿಕ ಚಿತ್ರೋದ್ಯಮಕ್ಕೆ ಮರಳಿದ ಅರ್ಪಿತಾ, ಸುವೇಂದು ನಿರ್ದೇಶನದ ‘ಬಂದೆ ಉತ್ಕಲ್‌ ಜನನಿ’, ಅಶೋಕ್‌ ಪಟಿ ಅವರ ‘ಪ್ರೇಮ್‌ ರೋಗಿ’ ಸೇರಿದಂತೆ ಎಂಟು ಒಡಿಯಾ ಸಿನಿಮಾಗಳಲ್ಲಿನಾಯಕಿಯಾಗಿ ನಟಿಸಿದ್ದಾರೆ. ಈ ಎರಡೂ ಚಿತ್ರಗಳು ಬಾಕ್ಸಾಫಿಸ್‌ನಲ್ಲಿಹಿಟ್‌ ಎನಿಸಿಕೊಂಡಿವೆ. 2012ರಲ್ಲಿತೆರೆ ಕಂಡ ‘ರಾಜು ಆವಾರಾ’ ಒಡಿಯಾ ಚಿತ್ರವೇ ಕೊನೆ. ಮತ್ತೆ ಅರ್ಪಿತಾ ಒಡಿಯಾ ಚಿತ್ರದಲ್ಲಿಕಾಣಿಸಿಕೊಂಡಿಲ್ಲ. ಇದಕ್ಕೂ ಮೊದಲು ಕೇಮಿತಿ ಬಂಧನ (2011), ಮು ಕನಾ ಇತೆ ಖರಾಪ್‌(2010) ಚಿತ್ರಗಳಲ್ಲಿನಟಿಸಿದ್ದಾರೆ. ‘ಭೂತ್‌ ಇನ್‌ ರೋಸ್‌ವಿಲ್ಲೆ’, ‘ಜೀನಾ ದಿ ಎಂಡ್ಲೆಸ್‌ ಲವ್‌’, ‘ಬಿದೇರ್ಹಿ ಖೋಂಜೆ ರವೀಂದ್ರಹತ್‌’, ‘ಮಾಮಾ ಭಗ್ನೆ’ ಮತ್ತು ಪಾರ್ಟನರ್‌’ ಸೇರಿದಂತೆ ಕೆಲವು ಬೆಂಗಾಲಿ ಸಿನಿಮಾಗಳಲ್ಲಿಸಣ್ಣ ಪಾತ್ರಗಳಲ್ಲಿಅಭಿನಯಿಸಿದ್ದಾರೆ. ಆದರೆ 2014ರಿಂದ ಯಾವುದೇ ಬೆಂಗಾಲಿ ಸಿನಿಮಾದಲ್ಲೂಕಾಣಿಸಿಕೊಂಡಿಲ್ಲಅರ್ಪಿತಾ. 

ಪಾರ್ಥ ಚಟರ್ಜಿ ಅವರ  ನಕ್ತಲಾ ಉದಯನ್‌ ಸಂಘದ 2020 ಸಾಲಿನ ದುರ್ಗಾ ಪೂಜೆಗೆ ಅರ್ಪಿತಾ ಬ್ರ್ಯಾಂಡ್‌ ಅಂಬಾಸಿಡರ್‌ ಆಗಿದ್ದರು. ಆ ವೇಳೆಯಲ್ಲಿಅರ್ಪಿತಾ, ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಮತ್ತು ಪಾರ್ಥ ಚಟರ್ಜಿ ಅವರ ಜತೆಗೆ ವೇದಿಕೆ ಹಂಚಿಕೊಂಡಿರುವ ಫೋಟೊಗಳು, ಕಂತೆ ಕಂತೆ ನೋಟು ಸಿಗುತ್ತಿದ್ದಂತೆ ಭಾರಿ ವೈರಲ್‌ ಆದವು. ಪ್ರತಿಪಕ್ಷ ಗಳು, ಟಿಎಂಸಿ ಜತೆ ಅರ್ಪಿತಾ ಇದ್ದಾರೆಂಬುದಕ್ಕೆ ಈ ಫೋಟೊಗಳು ಸಾಕ್ಷಿಯಾಗಿವೆ ಎಂದು ಆರೋಪಿಸಿವೆ. ಈ ಫೋಟೊಗಳನ್ನು ಪ್ರತಿಪಕ್ಷ ದ ನಾಯಕ ಸುವೇಂದು ಅಧಿಕಾರಿ ಟ್ವಿಟರ್‌ನಲ್ಲಿಹಂಚಿಕೊಂಡು, ಟಿಎಂಸಿಯನ್ನು ಹಿಗ್ಗಾಮುಗ್ಗಾ ಟೀಕಿಸಿದ್ದಾರೆ. 

ದೀದಿಯ ಅತ್ಯಾಪ್ತ ಪಾರ್ಥ ಚಟರ್ಜಿ
ಈ ಹಿಂದೆ ಶಾರದಾ ಮತ್ತು ನಾರದ ಹಗರಣವು ಮಮತಾ ಬ್ಯಾನರ್ಜಿ ಸುತ್ತ ಇದ್ದ ಬಹುತೇಕ ನಾಯಕರನ್ನು ಸುತ್ತಿಕೊಂಡಿತ್ತು. ಆ ಸುಳಿಯಲ್ಲಿಸಿಲುಕಿಕೊಳ್ಳದೇ ಇದ್ದ ಏಕೈಕ ಹಿರಿಯ ಸಚಿವ ಈ ಪಾರ್ಥ ಚಟರ್ಜಿ. ಆ ಬಗ್ಗೆ ಅವರು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದರು. ಈಗ ಅದೇ ವ್ಯಕ್ತಿಯ ಸುತ್ತ ಶಿಕ್ಷ ಕರ ನೇಮಕ ಹಗರಣ ಸುತ್ತಿಕೊಂಡಿದೆ! 

ಕಾಲೇಜು ದಿನಗಳಿಂದಲೇ ನಾಯಕತ್ವ ಗುಣಗಳನ್ನು ಪ್ರದರ್ಶಿಸಿದ್ದ ಪಾರ್ಥ ಅವರು, 1960ರ ದಶಕದಲ್ಲಿಕಾಂಗ್ರೆಸ್‌ ಮೂಲಕ ರಾಜಕಾರಣ ಆರಂಭಿಸಿದರು. ಶುಭ್ರತ್‌ ಮುಖರ್ಜಿ ಮತ್ತು ಪ್ರಿಯ ರಂಜನ್‌ ದಾಸಮುನ್ಷಿ ಅವರು ಪಾರ್ಥ ಅವರಿಗೆ ರೋಲ್‌ ಮಾಡೆಲ್‌ ರಾಜಕಾರಣಿಗಳು. ವಿದ್ಯಾರ್ಥಿಗಳ ದಿನಗಳಲ್ಲಿರಾಜಕೀಯದಲ್ಲಿದ್ದೂ ಉನ್ನತ ಶಿಕ್ಷ ಣವನ್ನು ಪಡೆದುಕೊಂಡ ಕೆಲವೇ ಕೆಲವು ಬಂಗಾಳದ ನಾಯಕರಲ್ಲಿಇವರು ಒಬ್ಬರು. ಕಲ್ಕತ್ತಾ ವಿವಿಯಿಂದ ಪಿಜಿ ಪದವಿ ಪಡೆದ ಅವರು, ಇಂಡಿಯನ್‌ ಇನ್ಸ್‌ ಟಿಟ್ಯೂಟ್‌ ಆಫ್‌ ಸೋಷಿಯಲ್‌ ವೆಲೆಧೀರ್‌ ಆ್ಯಂಡ್‌ ಬಿಸಿನೆಸ್‌ ಮ್ಯಾನೇಜ್‌ಮೆಂಟ್‌ನಿಂದ ಎಂಬಿಎ ಪದವಿ ಪಡೆದರು. ಕಾರ್ಪೊರೇಟ್‌ ಕಂಪನಿಯಲ್ಲಿಸ್ವಲ್ಪ ದಿನಗಳ ಕಾಲ ಎಚ್‌ಆರ್‌ ಆಗಿ ಕೆಲಸ ಮಾಡಿದ ಅನುಭವವಿದೆ.

ಟಿಎಂಸಿ ಸರ್ಕಲ್‌ನಲ್ಲಿ‘ಪಾರ್ಥ ದಾ’ ಎಂದೇ ಖ್ಯಾತರಾಗಿದ್ದ ಅವರೇನೂ ಆಕರ್ಷಕ ಭಾಷಣಕಾರರಲ್ಲ. ಬದಲಿಗೆ ಅತ್ಯುತ್ತಮ ಸಂಘಟಕ. ಇಂದು ಟಿಎಂಸಿ ಏನಾದರೂ ಬಂಗಾಳದಲ್ಲಿತಳಮಟ್ಟದಲ್ಲಿಗಟ್ಟಿ ಕಾರ್ಯಕರ್ತರ ಪಡೆಯನ್ನು ಹೊಂದಿದೆ ಎಂದರೆ ಅದರಲ್ಲಿಪಾರ್ಥ ಅವರ ಕೊಡಗೆ ಅಪಾರ. ಆ ಕಾರಣಕ್ಕಾಗಿಯೇ ಮಮತಾ ದೀದಿ ಅವರನ್ನು ತಮ್ಮ ಅತ್ಯಾಪ್ತ ಬಳಗಕ್ಕೆ ಸೇರಿಸಿಕೊಂಡಿದ್ದರು. ಕಾಂಗ್ರೆಸ್‌ನಿಂದ ಟಿಎಂಸಿಗೆ ಹಿರಿಯ ನಾಯಕರೊಂದಿಗೆ ಬಂದ ಅವರು, ನಿಧಾನ ಮತ್ತು ನಿರಂತರ ಗತಿಯಲ್ಲಿತಮ್ಮ ರಾಜಕೀಯ ಬೆಳವಣಿಗೆಯನ್ನು ಕಂಡುಕೊಂಡರು. ದಕ್ಷಿಣ ಕೋಲ್ಕೊತಾ ಮೂಲದ ಪಾರ್ಥ ಅವರು, ಬಂಗಾಳ ವಿಧಾನಸಭೆಗೆ 2001ರಲ್ಲಿಬೆಹಲಾ ಪಶ್ಚಿಮ ಕ್ಷೇತ್ರದಿಂದ ಮೊದಲ ಬಾರಿಗೆ ಸ್ಪರ್ಧಿಸಿ ಗೆದ್ದರು. ಆ ಬಳಿಕ ಸತತ ಐದು ಅವಧಿಗೆ ಗೆದ್ದಿದ್ದಾರೆ. 2011ರಲ್ಲಿಟಿಎಂಸಿ ಅಧಿಕಾರಕ್ಕೆ ಬಂದಾಗ ಪ್ರಮುಖ ಖಾತೆಗಳೇ ಇವರನ್ನು ಅರಸಿಕೊಂಡು ಬಂದವು. 2014ರಿಂದಲೂ ಅವರ ಸಂಪುಟ ದರ್ಜೆ ಸಚಿವರಾಗಿ ಕಾರ್ಯ ನಿರ್ವಹಿಸುತ್ತಾ ಬಂದಿದ್ದಾರೆ. ಬಂಗಾಳ ವಿಧಾನಸಭೆಯಲ್ಲಿಪ್ರತಿಪಕ್ಷ ದ ನಾಯಕರಾಗಿಯೂ ಪಾರ್ಥ ಕಾರ್ಯಧಿನಿರ್ವಹಿಸಿದ್ದಾರೆ. ಈಗ ಹಗರಣದ ಹಿನ್ನೆಲೆಯಲ್ಲಿಟಿಎಂಸಿ ಪಕ್ಷ ದಿಂದಲೇ ಅವರನ್ನು ಕಿತ್ತು ಹಾಕಲಾಗಿದೆ.

‘ಎಲ್ಲಬಣ್ಣಗಳನ್ನು ಮಸಿ ನುಂಗಿತು’ ಎನ್ನುವ ಹಾಗೆ, ಪಾರ್ಥ ಚಟರ್ಜಿ ಅವರೀಗ ಜೈಲು ಕಂಬಿ ಎಣಿಸುತ್ತಿದ್ದಾರೆ. ಹಣದ ಲಾಲಸೆ, ಅಧಿಕಾರದ ದರ್ಪಗಳೆರಡೂ ಸೇರಿ ಬಿಟ್ಟರೆ ಅನಾಹುತ ಗ್ಯಾರಂಟಿ. ರಾಜಕೀಯ ಇತಿಹಾಸದಲ್ಲಿಇದಕ್ಕೆ ಸಾಕಷ್ಟು ಉದಾಹರಣೆಗಳಿವೆ. ಆದರೂ ರಾಜಕೀಯ ನಾಯಕರು ಬುದ್ಧಿ ಕಲಿಯುವುದಿಲ್ಲ. ಅಪಾರ ಅನುಭವವಿದ್ದೂ ಅತಿಆಸೆಗೆ ರಾಜಕೀಯ ಜೀವನಕ್ಕೆ ಕೊಳ್ಳಿ ಇಟ್ಟುಕೊಂಡಿದ್ದು ಪಾರ್ಥ; ಅತಿ ಮಹತ್ವಾಕಾಂಕ್ಷಿಯೇ ಅರ್ಪಿತಾ ಅವರ ಜೀವನಕ್ಕೆ ಮುಸುಕು ಕವಿಯುವಂತೆ ಮಾಡಿತು!



ಈ ಲೇಖನವು ವಿಜಯ ಕರ್ನಾಟಕದ 2022ರ ಜುಲೈ 31ರ ಸಂಚಿಕೆಯಲ್ಲಿ ಪ್ರಕಟವಾಗಿದೆ.

ಶುಕ್ರವಾರ, ಜುಲೈ 15, 2022

Briton former PM Boris Johnson: ಮೋಜುಗಾರ ಬೋರಿಸ್‌ ಜಾನ್ಸನ್

ಬೋರಿಸ್‌ ಜಾನ್ಸನ್‌ ಬ್ರಿಟನ್‌ ಪಿಎಂ ಸ್ಥಾನವನ್ನು ತೊರೆದಿದ್ದಾರೆ. ವಿಲಕ್ಷ ಣ ವ್ಯಕ್ತಿತ್ವದೊಂದಿಗೆ ನಾಯಕತ್ವವನ್ನು ಪ್ರದರ್ಶಿಸುತ್ತಿದ್ದ ಬೋರಿಸ್‌ ಜೀವನವೇ ಮಜವಾಗಿದೆ.


- ಮಲ್ಲಿಕಾರ್ಜುನ ತಿಪ್ಪಾರ
ಐರೋಪ್ಯ ಒಕ್ಕೂಟದಿಂದ ಬ್ರಿಟನ್‌ ಹೊರ ಬರುವ ‘ಬ್ರೆಕ್ಸಿಟ್‌’ ಪ್ರಕ್ರಿಯೆಯನ್ನು ಅಡೆ-ತಡೆಗಳ ಮಧ್ಯೆಯೇ ಪೂರ್ಣಗೊಳಿಸಿದ ಬೋರಿಸ್‌ ಜಾನ್ಸನ್‌, ಪ್ರಧಾನಿ ಪಟ್ಟದಿಂದಲೇ ‘ಎಕ್ಸಿಟ್‌’ ಆಗಿದ್ದಾರೆ. ಇತ್ತೀಚಿನ ವರ್ಷಗಳಲ್ಲಿಬ್ರಿಟನ್‌ ಕಂಡ ‘ವಿಲಕ್ಷ ಣ’ ಪ್ರಧಾನಿ ಅವರು. ತಮ್ಮ ಮ್ಯಾನರಿಸಂ ಹಾಗೂ ನಿರ್ಧಾರಗಳ ಮೂಲಕ ಅದನ್ನು ಆಗಾಗ ಸಾಬೀತು ಮಾಡಿದ್ದಾರೆ. 58 ವರ್ಷದ ಬೋರಿಸ್‌ ಮೇಲ್ನೋಟಕ್ಕೆ ಹುಡುಗಾಟದ ಹುಡುಗನಂತೆ ಕಂಡರೂ, ಆಳದಲ್ಲಿಅವರಲ್ಲೊಬ್ಬ ನಾಯಕನಿದ್ದಾನೆ, ಸಂದರ್ಭ ಬಂದಾಗೆಲ್ಲಗಟ್ಟಿ ನಿರ್ಧಾರಕ್ಕೆ ಹಿಂಜರಿಯುವುದಿಲ್ಲಎಂಬುದನ್ನು ಈ ಮೂರು ವರ್ಷಗಳಲ್ಲಿಮನದಟ್ಟು ಮಾಡಿಸಿದ್ದಾರೆ.

ಬೋರಿಸ್‌ ಅವರು ಹಗರಣಗಳಲ್ಲೇ ಕಾಲ ಹರಣ ಮಾಡಿದಂತಿದೆ. ಕೆಲವೊಂದರಲ್ಲಿಅವರೇ ನೇರವಾಗಿ ಭಾಗಿಯಾದರೆ, ಮತ್ತೊಂದಿಷ್ಟು ಅವರಿಗೆ ಸಂಬಂಧ ಇರದಿದ್ದರೂ ತಲೆ ಕೊಡಬೇಕಾದ ಪರಿಸ್ಥಿತಿ ಎದುರಾಯಿತು. ಅವರ ರಾಜೀನಾಮೆಯ ಕೊನೆಯ ಪರದೆ ಎಳೆದಿದ್ದು, ನಾರಾಯಣಮೂರ್ತಿ ಅವರ ಅಳಿಯ ಹಾಗೂ ವಿತ್ತ ಸಚಿವರಾಗಿದ್ದ ರಿಷಿ ಸುನಾಕ್‌ ಮತ್ತು ಪಾಕಿಸ್ತಾನ ಮೂಲದ, ಆರೋಗ್ಯ ಸಚಿವ ಸಾಜಿದ್‌ ಜಾವಿದ್‌. ಇವರಿಧಿಬ್ಬರೂ ತಮ್ಮ ಹುದ್ದೆಗಳಿಂದ ನಿರ್ಗಮಿಸಿ, ಬೋರಿಸ್‌ ಅವರು ಪ್ರಧಾನಿ ಹುದ್ದೆಯನ್ನು ತ್ಯಜಿಸಲೇಬೇಕಾದ ಒತ್ತಡ ಸೃಷ್ಟಿಸಿದರು. ರಾಜಕೀಯವಾಗಿ ಬ್ರಿಟನ್‌ನ ಅತ್ಯುಧಿನ್ನತ ಹುದ್ದೆಗೇರಿದ ಬೋರಿಸ್‌ ಅವರ ಲೈಫ್‌ ಅಷ್ಟೇ ಕಲರ್‌ಫುಲ್‌. ವರ್ಣರಂಜಿತ ವ್ಯಕ್ತಿತ್ವ. ವೃತ್ತಿ, ಮದುವೆ ಹಾಗೂ ರಾಜಕೀಯದಲ್ಲಿಅವರದ್ದು ಎಂದೂ ಸರಳಧಿರೇಖೆಯಂಥ ಬದುಕಲ್ಲ; ವಕ್ರಗೆರೆಗಳೇ ಸೇರಿ ಹುಟ್ಟಿದ ಚಿತ್ತಾರ. 37ನೇ ವಯಸ್ಸಿಗೆ ಬ್ರಿಟನ್‌ ಸಂಸತ್ತಿಗೆ ಆಯ್ಕೆಯಾದ ಅವರು 7 ವರ್ಷ ಅನುಭವ ಪಡೆದರು. 2008ರಿಂದ 2016ರವರೆಗೆ ಲಂಡನ್‌ನ ಮೇಯರ್‌ ಆಗಿದ್ದರು. 2016ರಿಂದ 2018ರವರೆಗೆ ಬ್ರಿಟನ್‌ನ ವಿದೇಶಾಂಗ ಸಚಿವರಾಗಿ ತಮ್ಮ ವ್ಯಾಪ್ತಿಯನ್ನು ಇನ್ನಷ್ಟು ವಿಸ್ತರಿಸಿದರು. ಮೇಯರ್‌ ಆಗಿದ್ದ ಕಾಲದಲ್ಲಿಒಲಿಂಪಿಕ್ಸ್‌ ಕೂಟವನ್ನು ಯಶಸ್ವಿಯಾಗಿ ನಡೆಸಿದ ಹೆಗ್ಗಳಿಕೆ ಅವರಿಗಿದೆ. ಇದೇ ಸಾಧನೆಯೇ ಅವರಿಗೆ ಕನ್ಸರ್ವೇಟಿವ್‌ ಪಕ್ಷ ದೊಳಗೆ ಗಟ್ಟಿ ನಾಯಕನ ಸ್ಥಾನ ಒದಗಿಸಿ,  ಬ್ರಿಟನ್‌ ಪ್ರಧಾನಿ ಹುದ್ದೆಯವರೆಗೂ ಕರೆ ತಂದಿತು. 

· ಹಲವು ಅಡೆತಡೆಗಳ ಮಧ್ಯೆಯೇ ಬ್ರೆಕ್ಸಿಟ್‌ ಪ್ರಕ್ರಿಯೆ ಪೂರ್ಣಗೊಳಿಸಿದ ಬ್ರಿಟನ್‌ನ ಪ್ರಧಾನಿ
· ಹಲವು ಹಗರಣಗಳು, ಅಪವಾದಗಳು ಬೋರಿಸ್‌ ನೇತೃತ್ವದ ಸರಕಾರ ವಿಶ್ವಾಸ ಕಳೆದುಕೊಳ್ಳಲು ಕಾರಣ
· ಲಂಡನ್‌ ಮೇಯರ್‌ ಆಗಿ ಬೋರಿಸ್‌ ಅತ್ಯುತ್ತಮ ಕೆಲಸ ಮಾಡಿ ಹೆಸರುವಾಸಿಯಾಗಿದ್ದರು

ಬೋರಿಸ್‌ ಪೂರ್ತಿ ಹೆಸರು ಅಲೆಕ್ಸಾಂಡರ್‌ ಬೋರಿಸ್‌ ಡಿ ಪಿಫೆಲ್‌ ಜಾನ್ಸನ್‌. ಅಮೆರಿಕದ ನ್ಯೂಯಾರ್ಕ್‌ ಸಿಟಿಯಲ್ಲಿ1964 ಜೂನ್‌ 19ರಂದು ಜನಿಸಿದರು. ತಂದೆ ಇಂಗ್ಲಿಷ್‌ಮನ್‌ ಸ್ಟ್ಯಾನ್ಲಿಜಾನ್ಸನ್‌. ತಾಯಿ ಷಾರ್ಲೆಟ್‌ ಫಾಸೆಟ್‌. ಕಾಲೇಜಿನಲ್ಲಿದ್ದಾಗಲೇ ಇವರಿಬ್ಬರಿಗೆ ಬೋರಿಸ್‌ ಜನಿಸಿದರು. ಹಾಗಾಗಿ, ಬೋರಿಸ್‌ ಜಾನ್ಸನ್‌ ಅವರಿಗೆ ದ್ವಿಪೌರತ್ವವಿತ್ತು. ಆದರೆ, ತೆರಿಗೆ ಭಾರ ತಾಳಲಾರದೇ 2016ರಲ್ಲಿಅಮೆರಿಕದ ಪೌರತ್ವವನ್ನು ಬಿಟ್ಟುಕೊಟ್ಟರು. ಬೋರಿಸ್‌ಗೆ ಐದು ವರ್ಷ ಆದಾಗ, ಅವರ ತಂದೆ ಬ್ರಿಟನ್‌ಗೆ ಮರಳಿದರು. ಬಾಲ್ಯದಲ್ಲಿಬೋರಿಸ್‌ ಕಿವುಡರಾಗಿದ್ದರು. ಆದರೆ, ಈ ಸಮಸ್ಯಯೇನೂ ದೀರ್ಘಾವಧಿಗೆ ಇರಲಿಲ್ಲ. ಆಕ್ಸ್‌ಫರ್ಡ್‌ನಲ್ಲಿಶಿಕ್ಷ ಣವನ್ನು ಪಡೆದುಕೊಂಡರು. 

1987ರಲ್ಲಿಕಾಲೇಜ್‌ ಶಿಕ್ಷ ಣ ಪೂರೈಸಿದ ಬಳಿಕ ದಿ ಟೈಮ್ಸ್‌ನಲ್ಲಿಪತ್ರಕರ್ತರಾಗಿ ಕೆಲಸಕ್ಕೆ ಸೇರಿಕೊಂಡರು. ವರದಿ ವೇಳೆ ಮೂಲವನ್ನು ತಪ್ಪಾಗಿ ಉಲ್ಲೇಖಿಸಿದ ಪರಿಣಾಮ ಅವರನ್ನು ಕೆಲಸದಿಂದ ಕಿತ್ತು ಹಾಕಲಾಯಿತು. ಇಷ್ಟಾಗಿಯೂ ಬೋರಿಸ್‌ ದಿ ಡೈಲಿ ಟೆಲಿಗ್ರಾಫ್‌, ದಿ ಸ್ಪೆಕ್ಟೇಟರ್‌ನಂಥ ಪತ್ರಿಕೆಗಳಲ್ಲಿಕೆಲಸವನ್ನು ಪಡೆದುಕೊಳ್ಳಲು ಯಶಸ್ವಿಯಾದರೂ, ಹೇಳಿಕೊಳ್ಳುವಂಥ ಸಕ್ಸೆಸ್‌ ಸಿಗಲಿಲ್ಲ. ಆದರೆ, ಕಡಿಮೆ ಅವಧಿಯಲ್ಲೇ ಬಲಪಂಥೀಯ ಒಲವು ಉಳ್ಳ ಓದುಗರನ್ನು ತಮ್ಮತ್ತ ಸೆಳೆಯಲು ಯಶಸ್ವಿಯಾದರು. 80ರ ದಶಕದಲ್ಲಿ100 ಜನರ ಸಾವಿಗೆ ಕಾರಣವಾದ ಫುಟ್‌ಬಾಲ್‌ ಸ್ಟೇಡಿಯಂ ದುರಂತದ ಬಗ್ಗೆ ವಕ್ರವಾಗಿ ಮಾತನಾಡಿ, ಟೀಕೆಗೆ ಗುರಿಯಾಗಿದ್ದರು. ಸಂಪಾದಕೀಯಕ್ಕೆ ಸಂಬಂಧಿಸಿದಂತೆ ಸಂವೇದನಾ ರಹಿತವಾಗಿ ಮತ್ತು ಅಶ್ಲೀಲ ಕಮೆಂಟ್‌ ಮಾಡಿ, ಕ್ಷ ಮೆ ಕೇಳಿದ ಘಟನೆ 2004ರಲ್ಲಿನಡೆಯಿತು.

ಬೋರಿಸ್‌ ದೈಹಿಕ ಚಟುವಟಿಕೆಗಳು ಮತ್ತು ವ್ಯಾಯಾಮಗಳನ್ನು ಬಲವಾಗಿ ಪ್ರತಿಪಾದಿಸುತ್ತಾರೆ. ಅವರಿಗೆ ಫುಟ್‌ಬಾಲ್‌, ರಗ್ಬಿ ತುಂಬಾ ಇಷ್ಟ. ಜಾಗಿಂಗ್‌ ಇನ್ನೂ ಇಷ್ಟ. ಹಾಗಾಗಿ, ಲಂಡನ್‌ನ ಬೀದಿಗಳಲ್ಲಿಜಾಗಿಂಗ್‌ ಮಾಡುತ್ತಾ ಸೈಕಲ್‌ ರೈಡ್‌ ಮಾಡುತ್ತಾ ಹೋಗುವುದನ್ನು ಜನ ನೋಡಬಹುದು. ರಗ್ಬಿ ವಿಷಯದಲ್ಲಿಇವರ ಭಾವಾವೇಶ ಎಷ್ಟೆಂದರೆ, ವಿದೇಶಾಂಗ ಕಾರ್ಯದರ್ಶಿಯಾಗಿ ಜಪಾನ್‌ಗೆ ಹೋಗಿದ್ದಾಗ ಆಟವಾಡುತ್ತಾ 10 ವರ್ಷದ ಬಾಲಕನೊಬ್ಬನನ್ನು ದೂಡಿ ಹಾಕಿದ್ದು ಭಾರಿ ಸುದ್ದಿಯಾಗಿತ್ತು. 2006ರಲ್ಲಿಫಿಫಾ ವರ್ಲ್ಡ್‌ ಕಪ್‌ ಪಂದ್ಯಾವಳಿ ವೇಳೆಯೂ ಬೋರಿಸ್‌ ಟೀಕೆಗೆ ಗುರಿಯಾಗಿದ್ದರು.

ರಾಸಲೀಲೆ ಕತೆಗಳು, ಹಗರಣಗಳು, ವಿಲಕ್ಷ ಣ ವ್ಯಕ್ತಿತ್ವದಿಂದಲೇ ಬೋರಿಸ್‌ ಹೊರ ಜಗತ್ತಿಗೆ ಹೆಚ್ಚು ಗೊತ್ತು. ಆದರೆ, ‘ಮಾಡೆಲ್‌ ಬಸ್‌’ಗಳನ್ನು ತಯಾರಿಸುವ ಪ್ರತಿಭೆ ಹೊಂದಿದ್ದಾರೆಂಬುದು ಬಹಳಷ್ಟು ಜನರಿಗೆ ಗೊತ್ತಿಲ್ಲ. ಹಾಗಂತ ಅವರೇನೂ ಫ್ಯಾನ್ಸಿ ಬಸ್‌ಗಳನ್ನು ಮಾಡುವುದಿಲ್ಲ. ಬದಲಿಗೆ, ಹಳೆಯ ಮದ್ಯದ ಬಾಕ್ಸ್‌ಗಳು, ಪೇಂಟ್ಸ್‌ ಬಳಸಿಕೊಂಡು ಉತ್ಕೃಷ್ಟವಾದ ಮಾಡೆಲ್‌ ಬಸ್‌ಗಳನ್ನು ಮಾಡುವ ಹವ್ಯಾಸ ಬೆಳೆಸಿಕೊಂಡಿದ್ದಾರೆ. ಬಹುಶಃ ಅವರ ಈ ಹವ್ಯಾಸವೇ ‘ಬೋರಿಸ್‌ ಬಸ್‌’ ಯೋಜನೆಗೆ ಕಾರಣವಾಗಿರಬಹುದು. ಲಂಡನ್‌ನಲ್ಲಿಹೈಬ್ರಿಡ್‌ ಸಾರ್ವಜನಿಕ ಬಸ್‌ ಸೌಲಭ್ಯ ಕಲ್ಪಿಸಿದ್ದರು. ಆದರೆ, ಲಂಡನ್‌ ಮೇಯರ್‌ ಹುದ್ದೆಯಿಂದ ಕೆಳಗಿಳಿಯುಧಿತ್ತಿದ್ದಂತೆ ಆ ಯೋಜನೆ ಕೂಡ ರದ್ದಾಯಿತು. 

ಜಾನ್ಸನ್‌ ಅವರ ಎರಡನೇ ಪತ್ನಿಧಿಯಾಗಿದ್ದ ಮರೀನಾ ವೀಲರ್‌ ಭಾರತ ಮೂಲಧಿದವರು. ಇವರು ಪತ್ರಕರ್ತ ಸರ್‌ ಚಾರ್ಲ್ಸ್ ವೀಲರ್‌ ಮತ್ತು ದೀಪ್‌ ಸಿಂಗ್‌ ಮಗಳು. ಈ ದೀಪ್‌ ಸಿಂಗ್‌ ಯಾರೆಂದರೆ, ಖ್ಯಾತ ಬರಹಗಾರ ಖುಷ್ವಂತ್‌ ಸಿಂಗ್‌ ಅವರ ತಮ್ಮ ದಲ್ಜಿತ್‌ ಸಿಂಗ್‌ ಅವರ ಮೊದಲ ಪತ್ನಿ. ಹೀಗೆ, ಆಕೆ ಭಾರತದ ಮಗಳು. ಹಾಗಾಗಿ ಜಾನ್ಸನ್‌ ಕೂಡ ಭಾರತದ ಅಳಿಯ ಎನ್ನಬಹುದು. ಈ ಮದುವೆ 2020ರಲ್ಲಿವಿಚ್ಛೇದನದೊಂದಿಗೆ ಸಮಾಪ್ತಿಯಾಯಿತು. 2021ರಲ್ಲಿಕ್ಲೈಮೆಟ್‌ ಆ್ಯಕ್ಟಿವಿಸ್ಟ್‌ ಕ್ಯಾರಿ ಸೈಮಂಡ್ಸ್‌ ಅವರನ್ನು ಮದುವೆಯಾಗಿದ್ದಾರೆ. ಇವರ ಮೊದಲನೆಯ ಪತ್ನಿ ಹೆಸರು ಅಲ್ಲೆಗ್ರಾ. ಇವರನ್ನು 1987ರಲ್ಲಿಮದವೆಯಾದರು, 1993ರಲ್ಲಿವಿಚ್ಛೇದನ ನೀಡಿದರು. 

· ಅಮೆರಿಕ ಮತ್ತು ಇಂಗ್ಲೆಡ್‌ ದ್ವಿಪೌರತ್ವ ಹೊಂದಿದ್ದ ಜಾನ್ಸನ್‌ ಅಮೆರಿಕ ಪೌರತ್ವ ತ್ಯಜಿಸಿದ್ದಾರೆ
· ದಿ ಟೈಮ್ಸ್‌, ದಿ ಸ್ಪೆಕ್ಟೇಟರ್‌, ದಿ ಟೆಲಿಗ್ರಾಫ್‌ ಪತ್ರಿಕೆಗಳಲ್ಲಿಕೆಲಸ, ಅಂಥ ಸಕ್ಸೆಸ್‌ ಏನೂ ಸಿಗಲಿಲ್ಲ
· ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿರುವ ಬೋರಿಸ್‌ ಮುಂದಿನ ನಡೆಯ ಬಗ್ಗೆ ಕುತೂಹಲ

ಬೋರಿಸ್‌ ದಿ ಸ್ಪೆಕ್ಟೇಟರ್‌ ಪತ್ರಿಕೆಯಲ್ಲಿಕೆಲಸ ಮಾಡುತ್ತಿದ್ದಾಗ ಇಬ್ಬರು ಮಹಿಳೆರ ಮೇಲೆ ಕೈ ಹಾಕಿದ್ದರಂತೆ. ಮುಂದೆ ಪ್ರಧಾನಿಯಾದಾಗ ಆ ಮಹಿಳೆಯರು ಈ ವಿಷಯವನ್ನು ಬಹಿರಂಗಪಡಿಸಿದರು. ಶಾಡೋ ಆರ್ಟ್‌ ಮಿನಿಸ್ಟರ್‌ ಆಗಿದ್ದಾಗ ಪೆಟ್ರೋನೆಲ್ಲಾವ್ಯಾಟ್‌ ಜತೆಗಿನ ಅನೈತಿಕ ಸಂಬಂಧ ಹೊರಬೀಳುತ್ತಿದ್ದಂತೆ ಬೋರಿಸ್‌ 2004ರಲ್ಲಿತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು. 2009ರಲ್ಲಿಲಂಡನ್‌ ಮೇಯರ್‌ ಆಗಿದ್ದಾಗ, ಹೆಲೆನ್‌ ಮ್ಯಾಕಿನ್ರ್ಟೈ ಎಂಬಾಕೆ ಜತೆ ದೈಹಿಕ ಸಂಪರ್ಕದಲ್ಲಿದ್ದರು. ಅಲ್ಲದೇ ಹೆಣ್ಣು ಮಗುವಿನ ತಂದೆ ಕೂಡ ಆದರು. ಬೋರಿಸ್‌ ರಾಸಲೀಲೆ ಕತೆಗಳು ಬ್ರಿಟನ್‌ನ ಟ್ಯಾಬ್ಲಾಯ್ಡ್‌ಗಳಿಗೆ ಭಾರಿ ಸುದ್ದಿ ಭೋಜನವನ್ನು ಒದಗಿಸುತ್ತಿದ್ದವು. 

ಏನೇ ಆಗಲಿ, ಬ್ರಿಟನ್‌ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಮೆಚ್ಚಿಕೊಳ್ಳಧಿಲೇಬೇಕು. ತಮ್ಮದೇ ಪಕ್ಷ ದ ನಾಯಕನೊಬ್ಬ ಹಾದಿ ತಪ್ಪುತ್ತಿರುವುದು ಗೊತ್ತಾಗುಧಿತ್ತಿದ್ದಂತೆ ಅದನ್ನು ಪ್ರಜಾಸತ್ತಾತ್ಮಕ ರೀತಿಯಲ್ಲಿಪ್ರತಿಭಟಿಸುತ್ತಾರೆ, ಪಕ್ಷ ದೊಳಗೇ ಭಿನ್ನಭಿಪ್ರಾಯಗಳಿಗೆ ಬೆಲೆ ನೀಡುತ್ತಾರೆ. ಈ ಒಂದು ಗುಣವೇ ಜಗತ್ತಿನ ಎಲ್ಲರಾಷ್ಟ್ರಗಳ ಪ್ರಜಾ ಪ್ರಭುತ್ವಕ್ಕೆ ಮಾದರಿಯಾಗಿದೆ. ಅದೇ ಮೌಲ್ಯಗಳಿಗೆ ಬೆಲೆ ಕೊಟ್ಟು ಬೋರಿಸ್‌ ಈಗ ಬ್ರಿಟನ್‌ ಪದ ಚ್ಯುತರಾಗಿಧಿದ್ದಾರೆ. ಹಾಗಾದರೆ, ಅವರ ಮುಂದಿರುವ ದಾರಿಗಳೇನು? ಅವರೇನು ಮಾಡುತ್ತಾರೆಂಬ ಪ್ರಶ್ನೆಗಳಿಗೆ ಬ್ರಿಟನ್ನಿಗರು ಉತ್ತರ ಹುಡುಕುಧಿತ್ತಿದ್ದಾರೆ. ರಾಜಕೀಯದಲ್ಲಿಏನು ಬೇಕಾದರೂ ಆಗಬಧಿಹುದು. ಇಂದು ಹೀರೊ ಆದವರು ನಾಳೆ ವಿಲನ್‌ ಆಗಬಹುದು; ವಿಲನ್‌ಗಳು ಹೀರೊ ಆಗಬಹುದು. ಮುಂದಿನ ಪ್ರಧಾನಿ ಆಯ್ಕೆಯವರೆಗೂ ಅವರೇ ಮುಂದುಧಿವರಿಯುತ್ತಾರೆ. ಆ ಬಳಿಕ ಏನು ಮಾಡಲಿ ದ್ದಾರೆಂಬುದನ್ನು ಕಾದು ನೋಡಬೇಕು.