ಸೋಮವಾರ, ಏಪ್ರಿಲ್ 26, 2021

Next Super star of Indian Cricket: 'ದೈವದತ್ತ' ಕ್ರಿಕೆಟ್‌ ಪ್ರತಿಭೆ

ಐಪಿಎಲ್‌ ಕ್ರಿಕೆಟ್‌ ಟೂರ್ನಿಯಲ್ಲಿಮಿಂಚುತ್ತಿರುವ ಕರ್ನಾಟಕದ ಎಡಗೈ ಬ್ಯಾಟ್ಸ್‌ಮನ್‌ ದೇವದತ್ತ ಪಡಿಕ್ಕಲ್‌ ಭಾರತೀಯ ಕ್ರಿಕೆಟ್‌ ತಂಡದ ಕದವನ್ನು ತಟ್ಟುತ್ತಿದ್ದಾರೆ. 


- ಮಲ್ಲಿಕಾರ್ಜುನ ತಿಪ್ಪಾರ

ದೇವದತ್‌ ಪಡಿಕ್ಕಲ್‌ ಅದ್ಭುತ ಪ್ರತಿಭೆ ಎನ್ನುವುದರಲ್ಲಿಅನುಮಾನವೇ ಇಲ್ಲ. ಭವಿಷ್ಯದ ಆಟಗಾರರಲ್ಲಿಅವರೂ ಒಬ್ಬರು.
- ವಿರಾಟ್‌ ಕೊಹ್ಲಿ ಭಾರತೀಯ ಕ್ರಿಕೆಟ್‌ ತಂಡದ ನಾಯಕ

ದೇವದತ್‌ ಪಡಿಕ್ಕಲ್‌ ಪ್ರಥಮ ದರ್ಜೆ ಹಾಗೂ ರಣಜಿ ಕ್ರಿಕೆಟ್‌ನಲ್ಲಿರನ್‌ ರಾಶಿಗಳನ್ನೇ ಗುಡ್ಡೆ ಹಾಕಿದ್ದಾರೆ. ಅವರಲ್ಲಿರುವ ಪ್ರತಿಭೆ ಮತ್ತು ಸಾಮರ್ಥ್ಯ‌ಕ್ಕೆ ಅನುಗುಣವಾಗಿ ಮುಂಬರುವ ದಿನಗಳಲ್ಲಿಕ್ರಿಕೆಟ್‌ನ ಯಾವುದಾದರೂ ಮಾದರಿಯಲ್ಲಿಭಾರತೀಯ ತಂಡವನ್ನು ಪ್ರತಿನಿಧಿಸಿದರೆ ಅಚ್ಚರಿಪಡಬೇಕಾಗಿಲ್ಲ.
- ಸುನೀಲ್‌ ಗವಾಸ್ಕರ್‌ ಮಾಜಿ ಕ್ರಿಕೆಟಿಗ

ಭಾರತೀಯ ಕ್ರಿಕೆಟ್‌ನ ಈ ಇಬ್ಬರು ದಿಗ್ಗಜರ ಮಾತುಗಳೇ ಕರ್ನಾಟಕದ ಪ್ರತಿಭಾವಂತ ದೇವದತ್‌ ಪಡಿಕ್ಕಲ್‌ ಕ್ರಿಕೆಟ್‌ ಬದುಕಿನ ಮುನ್ನುಡಿಗಳಾಗಿವೆ. ಕಳೆದ ಇಂಡಿಯನ್‌ ಪ್ರೀಮಿಯರ್‌ ಲೀಗ್‌(ಐಪಿಎಲ್‌)ನಲ್ಲಿತನ್ನ ಬ್ಯಾಂಟಿಂಗ್‌ ಸ್ಥಿರ ಪ್ರದರ್ಶನದ ಮೂಲಕ ಕ್ರಿಕೆಟ್‌ ಪಂಡಿತರು, ಅಭಿಮಾನಿಗಳ ಗಮನ ಸೆಳೆದಿದ್ದ ದೇವದತ್‌, ಈ ಬಾರಿಯ ಐಪಿಎಲ್‌ನಲ್ಲಿ ತಮ್ಮ ಆಟವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದು ‘ಭಾರತೀಯ ಕ್ರಿಕೆಟ್‌ನ ಭವಿಷ್ಯದ ಸ್ಟಾರ್‌’ ಎಂಬುದನ್ನು ನಿರೂಪಿಸುತ್ತಿದ್ದಾರೆ. 

21 ವರ್ಷದ ಈ ಎಡಗೈ ಬ್ಯಾಟ್ಸ್‌ಮನ್‌ ಪಡಿಕ್ಕಲ್‌ ಆಟ ನೋಡುವುದೇ ಚೆಂದ. ಆಧುನಿಕ ಚುಟುಕು ಕ್ರಿಕೆಟ್‌ಗೆ ಬೇಕಾಗಿರುವ ಆಕ್ರಮಣಶೀಲತೆ ಮತ್ತು ತಾಂತ್ರಿಕವಾಗಿಯೂ ಪರಿಪೂರ್ಣ ಎನಿಸುವಂಥ ಆಟವನ್ನು ಅವರು ಮೈಗೂಡಿಸಿಕೊಂಡಿದ್ದಾರೆ. 6.3 ಅಡಿ ಎತ್ತರದ ದೇವದತ್‌, ಈಗ ಐಪಿಎಲ್‌ನಲ್ಲಿಆಡುತ್ತಿರುವ ವೈಭವವನ್ನು ನೋಡಿದರೆ, ಶೀಘ್ರವೇ ಭಾರತೀಯ ರಾಷ್ಟ್ರೀಯ ಕ್ರಿಕೆಟ್‌ ತಂಡದ ಬಾಗಿಲನ್ನು ತಟ್ಟದೇ ಇರಲಾರರು. ಆಯ್ಕೆಗಾರರಿಗೂ ಪಡಿಕ್ಕಲ್‌ ಅವರನ್ನು ಬಿಟ್ಟುಕೊಡಲು ಸಾಧ್ಯವಾಗದೇ ಇರಬಹುದು. ಸದ್ಯದ ಮಟ್ಟಿಗೆ, ಕ್ರಿಕೆಟ್‌ನ ಮೂರೂ ಫಾಮ್ರ್ಯಾಟ್‌ಗಳಲ್ಲಿ ಆರಂಭಿಕ ಸ್ಥಾನದಲ್ಲಿ ಘಟಾನುಘಟಿ ಕ್ರಿಕೆಟರ್ಸ್‌ ಇದ್ದಾರೆ. ಜೊತೆಗೆ, ಬೆಂಚ್‌ ಸ್ಟ್ರೆಂಥ್‌ ಕೂಡ ಬಲಿಷ್ಠವಾಗಿದೆ. ಹಾಗಿದ್ದೂ, ಪಡಿಕ್ಕಲ್‌ ತೋರುತ್ತಿರುವ ಗಮನಾರ್ಹ ಪ್ರದರ್ಶನವು ಅವರನ್ನು ಭಾರತೀಯ ಕ್ರಿಕೆಟ್‌ ತಂಡಕ್ಕೆ ಕರೆತರಬಹುದು. 

‘ಟೀಮ್‌ ಫಸ್ಟ್‌’ ಎಂಬ ಮನೋಭಾವ ಕೂಡ ಪಡಿಕ್ಕಲ್‌ ಅವರಲ್ಲಿ ಇರುವುದನ್ನು ನಾವು ಈ ಸೀಸನ್‌ನಲ್ಲಿ ರಾಜಸ್ಥಾನ್‌ ರಾಯಲ್ಸ್‌ ವಿರುದ್ಧದ ಪಂದ್ಯದಲ್ಲಿ ನೋಡಿದೆವು. ಐಪಿಎಲ್‌ ವೃತ್ತಿಜೀವನದ ಮೊದಲನೇ ಶತಕ ಗಳಿಸುವ ಅವಕಾಶ ಸಿಕ್ಕರೂ, ಆಟ ಬೇಗನೆ ಮುಗಿಸುವಂತೆ ನಾಯಕ ವಿರಾಟ್‌ ಕೊಹ್ಲಿ ಅವರಲ್ಲಿ ಕೇಳಿಕೊಂಡಿದ್ದರಂತೆ ದೇವದತ್‌. ‘‘ನಾನು ಶತಕ ಗಳಿಸುವುದಕ್ಕಿಂತ ತಂಡ ಗೆಲ್ಲುವುದು ಮುಖ್ಯ,’’ ಎಂದು ದೇವದತ್‌ ಬಳಿಕ ಹೇಳಿದ್ದರು. ಇದು ಅವರಲ್ಲಿರುವ ಟೀಮ್‌ ಫಸ್ಟ್‌ ಎಂಬ ಮನೋಭಾವವನ್ನು ಸಾರಿ ಹೇಳುತ್ತದೆ. ವೃತ್ತಿಪರ ಕ್ರಿಕೆಟರ್‌ನಲ್ಲಿರಬೇಕಾದ ಗುಣವಿದು.

ಐಪಿಎಲ್‌ನಲ್ಲಿ ಮಿಂಚುತ್ತಿರುವ ದೇವದತ್‌ ಪಡಿಕ್ಕಲ್‌, ಕರ್ನಾಟಕದ ಪರವಾಗಿ ರಣಜಿ, ಲಿಸ್ಟ್‌ ಎ ಕ್ರಿಕೆಟ್‌ ಆಡುತ್ತಿದ್ದಾರೆ. ಕರ್ನಾಟಕ ಪ್ರೀಮಿಯಲ್‌ ಲೀಗ್‌(ಕೆಪಿಎಲ್‌)ನ ಬಳ್ಳಾರಿ ಟಸ್ಕರ್‌ ಪರವಾಗಿ 2017ರಲ್ಲಿಆಡಿದ್ದಾರೆ. 2019ರಲ್ಲಿಬೆಂಗಳೂರು ರಾಯಲ್‌ ಚಾಲೆಂಜರ್ಸ್‌(ಆರ್‌ಸಿಬಿ) ಅವರನ್ನು ತಂಡಕ್ಕೆ ಸೇರಿಸಿಕೊಂಡಿತು. 2020ರ ಐಪಿಎಲ್‌ ಟೂರ್ನಿಯಲ್ಲಿಆರ್‌ಸಿಬಿ ಪರವಾಗಿ ಓಪನಿಂಗ್‌ ಸ್ಥಾನಕ್ಕೆ ಲಗ್ಗೆ ಹಾಕಿದ ಪಡಿಕ್ಕಲ್‌ ಮೊದಲ ಮೂರು ಪಂದ್ಯಗಳಲ್ಲಿ50 ಪ್ಲಸ್‌ ರನ್‌ ಗಳಿಸಿ ದಾಖಲೆ ಬರೆದರು. ಭಾರತೀಯ ಕ್ರಿಕೆಟ್‌ ತಂಡದ ನಾಯಕ ಕೊಹ್ಲಿಯಂಥ ಆಟಗಾರರ ಜತೆ ಡ್ರೆಸ್ಸಿಂಗ್‌ ರೂಮ್‌ ಹಂಚಿಕೊಳ್ಳುವುದು ಯಾವುದೇ ಆಟಗಾರನಿಗೆ ದೊರೆಯುವ ಅದೃಷ್ಟವೇ ಸರಿ. ಅಂಥದ್ದರಲ್ಲಿ ಪಡಿಕ್ಕಲ್‌ಗೆ ಕೊಹ್ಲಿಜತೆ ಇನ್ನಿಂಗ್ಸ್‌ ಕೂಡ ಆರಂಭಿಸುವ ಅವಕಾಶ ದೊರೆತಿರುವುದು ಅವರಲ್ಲಿರುವ ಪರಿಪೂರ್ಣ ಕ್ರಿಕೆಟ್‌ ಅನ್ನು ಹೊರ ತರಲು ಸಾಧ್ಯವಾಯಿತು. ಕೊಹ್ಲಿಗಿಂತಲೂ ಪಡಿಕ್ಕಲ್‌ಗೆ ದೊಡ್ಡ ಮೆಂಟರ್‌ ಸಿಗಲು ಸಾಧ್ಯವೆ? ಈ ದೃಷ್ಟಿಯಲ್ಲಿ ನೋಡಿದರೆ ದೇವದತ್‌ ಅದೃಷ್ಟವಂತ.

ಪಡಿಕ್ಕಲ್‌ ಮೊದಲ ಸೀಸನ್‌ನಲ್ಲಿ ಆರ್‌ಸಿಬಿ ಪರ 15 ಪಂದ್ಯ ಆಡಿದ್ದಾರೆ. 124 ಸ್ಟ್ರೈಕ್‌ ರೇಟ್‌ನಲ್ಲಿ, 31.53 ಸರಾಸರಿಯಲ್ಲಿ 473 ರನ್‌ ಕಲೆ ಹಾಕಿದ್ದಾರೆ. ಯುವ ಕ್ರಿಕೆಟರ್‌ ತಂಡಕ್ಕೆ ಪದಾರ್ಪಣೆ ಮಾಡಿದ ಟೂರ್ನಿಯಲ್ಲಿ ಇಷ್ಟೊಂದು ಸರಾಸರಿ ಮತ್ತು ಸ್ಟ್ರೈಕ್‌ ರೇಟ್‌ನಲ್ಲಿರನ್‌ ಗಳಿಸುವುದೇನೂ ಸುಲಭವಲ್ಲ. ಆ ಆವೃತ್ತಿಯಲ್ಲಿ ಆರ್‌ಸಿಬಿ ಪರ ಪಡಿಕ್ಕಲ್‌ ಗರಿಷ್ಠ ಸ್ಕೋರರ್‌ ಆಗಿದ್ದರು. ಮೊದಲ ನಾಲ್ಕು ಪಂದ್ಯಗಳಲ್ಲಿ ಮೂರು 50 ರನ್‌ ಗಳಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಪಡಿಕ್ಕಲ್‌ಗೆ ಕೊರೊನಾ ಸೋಂಕು ತಗುಲಿದ್ದರಿಂದ ಈಗ ನಡೆಯುತ್ತಿರುವ ಟೂರ್ನಿಯ ಮೊದಲ ಎರಡು ಪಂದ್ಯಗಳಲ್ಲಿ ಆರ್‌ಸಿಬಿ ಪರ ಆಡಲು ಸಾಧ್ಯವಾಗಲಿಲ್ಲ. ಸೋಂಕಿನಿಂದ ಚೇತರಿಸಿಕೊಂಡ ಬಳಿಕ ಅಂಗಣಕ್ಕೆ ಇಳಿದ ಪಡಿಕ್ಕಲ್‌ ತಮ್ಮ ನೈಜಸಾಮರ್ಥ್ಯ‌ ಪ್ರದರ್ಶಿಸಿದ್ದಾರೆ. ರಾಜಸ್ಥಾನ್‌ ರಾಯಲ್ಸ್‌ ವಿರುದ್ಧದ ಅವರ ಆಟವಂತೂ ಹಬ್ಬವಾಗಿತ್ತು. 

ಕೇರಳದ ಎಡಪ್ಪಾಳ್‌ ಎಂಬಲ್ಲಿ2000 ಜುಲೈ 7ರಂದು ದೇವದತ್‌ ಜನಿಸಿದರು. ತಂದೆ ಬಾಬು ಕುನ್ನಥ್‌ ಮತ್ತು ತಾಯಿ ಅಂಬಿಲಿ ಪಡಿಕ್ಕಲ್‌ ಅವರು ಬೆಂಗಳೂರಿಗೆ ತಮ್ಮ ನೆಲೆಯನ್ನು ಬದಲಾಯಿಸುವ ಮುನ್ನ ಹೈದರಾಬಾದ್‌ನಲ್ಲಿ ಕೆಲಸ ಮಾಡುತ್ತಿದ್ದರು. 11ನೇ ವಯಸ್ಸಿನಲ್ಲಿ ದೇವದತ್‌ ಕ್ರಿಕೆಟ್‌ ಅನ್ನು ಗಂಭೀರವಾಗಿ ಪರಿಗಣಿಸಿ ಅಭ್ಯಾಸ ಆರಂಭಿಸಿದರು. ಕರ್ನಾಟಕ ಇನ್ಸ್‌ಟಿಟ್ಯೂಟ್‌ ಆಫ್‌ ಕ್ರಿಕೆಟ್‌ನಲ್ಲಿ 2014ರಿಂದ ತರಬೇತಿ ಪಡೆಯಲಾರಂಭಿಸಿದರು. ಅಂಡರ್‌ 16 ಮತ್ತು ಅಂಡರ್‌ 19 ಕ್ರಿಕೆಟ್‌ ವಿಭಾಗದಲ್ಲಿ ಅವರು ಕರ್ನಾಟಕವನ್ನು ಪ್ರತಿನಿಧಿಸಿದ್ದಾರೆ. 

2018-19ರ ಸಾಲಿನಲ್ಲಿ ಕರ್ನಾಟಕದ ಪರವಾಗಿ ರಣಜಿ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು. 2018ರಲ್ಲಿ ಆರ್‌ಸಿಬಿ ಮ್ಯಾನೇಜ್‌ಮೆಂಟ್‌ ಕಣ್ಣಿಗೆ ಬಿದ್ದ ದೇವದತ್‌ ಐಪಿಎಲ್‌ನಲ್ಲಿ ಆಡಲು ವೇದಿಕೆ ಸೃಷ್ಟಿಸಿಕೊಂಡರು. 2019ರ ಸೆ.26ರಂದು ಕರ್ನಾಟಕ ಪರವಾಗಿ ಲಿಸ್ಟ್‌ ಎ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು. ವಿಜಯ ಹಜಾರೆ ಪಂದ್ಯಾವಳಿಯಲ್ಲಿ ಕರ್ನಾಟಕದ ಪರ ಅತಿ ಹೆಚ್ಚು ರನ್‌ ಗಳಿಸಿದರು. ಈ ಟೂರ್ನಿಯಲ್ಲಿ 11 ಪಂದ್ಯಗಳಿಂದ 609 ರನ್‌ ಗಳಿಸಿ ಎಲ್ಲರ ಗಮನ ಸೆಳೆದರು. 2019ರ ಅಕ್ಟೋಬರ್‌ನಲ್ಲಿ ಭಾರತೀಯ ಎ ತಂಡದ ಸದಸ್ಯರಾದರು. 2019ರ ನವೆಂಬರ್‌ನಲ್ಲಿದೇಶಿ ಟ್ವೆಂಟಿ20ಗೂ ಅಡಿಯಿಟ್ಟರೂ. 2019-20ರ ಸಾಲಿನ ಮಸ್ತಾಕ್‌ ಅಲಿ ಟ್ರೋಫಿ ಟೂರ್ನಿಯಲ್ಲಿಕರ್ನಾಟಕವನ್ನು ಪ್ರತಿನಿಧಿಸಿದ್ದರು. ಮುಂದೆ 2021ರ ಸಾಲಿನ ಸಯ್ಯದ್‌ ಮಸ್ತಾಕ್‌ ಅಲಿ ಟ್ರೂಫಿ ಟೂರ್ನಿಗೆ ಕರ್ನಾಟಕ ತಂಡದ ಭಾಗವಾದರು.

ಗೌತಮ್‌ ಗಂಭೀರ್‌ ಅವರನ್ನು ಮೆಚ್ಚುವ ಪಡಿಕ್ಕಲ್‌ ಸದ್ಯ 15 ಪ್ರಥಮ ದರ್ಜೆ ಪಂದ್ಯಗಳನ್ನಾಡಿ 34.88ರ ಸರಾಸರಿಯಲ್ಲಿ907 ರನ್‌ ಕಲೆ ಹಾಕಿದ್ದಾರೆ. ಇದರಲ್ಲಿ ಹತ್ತು ಅರ್ಧ ಶತಕಗಳು ಸೇರಿವೆ. ಇನ್ನು 20 ಲಿಸ್ಟ್‌ ಎ ಕ್ರಿಕೆಟ್‌ ಪಂದ್ಯಗಳನ್ನಾಡಿರುವ ದೇವದತ್‌, 86.68ರ ಸರಾಸರಿಯಲ್ಲಿ1387 ರನ್‌ ಗಳಿಸಿದ್ದಾರೆ. ಇದರಲ್ಲಿ 6 ಶತಕ ಮತ್ತು 8 ಅರ್ಧ ಶತಕಗಳಿವೆ. 36 ಟ್ವೆಂಟಿ20 ಪಂದ್ಯಗಳನ್ನಾಡಿ, 45.41 ಸರಾಸರಿಯಲ್ಲಿ 1408 ರನ್‌ ಪೇರಿಸಿದ್ದಾರೆ. ತುಂಬ ಕಡಿಮೆ ಅವಧಿಯಲ್ಲಿಸಾಕಷ್ಟು ರನ್‌ ಗಳಿಸುವ ಮೂಲಕ ಕ್ರಿಕೆಟ್‌ ಪಂಡಿತರ ಮನಸ್ಸು ಗೆದ್ದಿದ್ದಾರೆ. 

ಐಪಿಎಲ್‌ನ ಪ್ರದರ್ಶನವಂತೂ ಅವರನ್ನು ಸ್ಟಾರ್‌ ಪಟ್ಟಕ್ಕೇರಿಸಿದೆ. ಶೀಘ್ರವೇ ಭಾರತೀಯ ಕ್ರಿಕೆಟ್‌ ತಂಡವನ್ನು ದೇವದತ್‌ ಪ್ರತಿನಿಧಿಸಬಹುದು ಎಂಬ ಭವಿಷ್ಯವನ್ನು ಬಹುತೇಕರು ನುಡಿಯುತ್ತಿದ್ದಾರೆ. ಜಿ.ಆರ್‌.ವಿಶ್ವನಾಥ, ರಾಹುಲ್‌ ದ್ರಾವಿಡ್‌ ಮತ್ತು ಕೆ.ಎಲ್‌ ರಾಹುಲ್‌  ಅವರಂಥ  ಬ್ಯಾಟ್ಸಮನ್‌ಗಳನ್ನು ನೀಡಿರುವ ಕರ್ನಾಟಕದಿಂದ ಮತ್ತೊಬ್ಬ ಪ್ರತಿಭಾನ್ವಿತ ಬ್ಯಾಟ್ಸಮನ್‌ ಆಗಿ ದೇವದತ್‌ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮಿಂಚುವ ದಿನಗಳು ದೂರವಿಲ್ಲ. ದೇವದತ್‌ಗೆ ಈಗಿನ್ನೂ 21 ವರ್ಷ. ಅವರ ಮುಂದೆ ಬೇಕಾದಷ್ಟು ಕ್ರಿಕೆಟ್‌ ಜೀವನವಿದೆ.


ಈ ಲೇಖನವು ವಿಜಯ ಕರ್ನಾಟಕದ 2021ರ ಮೇ 25ರ ಸಂಚಿಕೆಯಲ್ಲಿ ಪ್ರಕಟವಾಗಿದೆ.


 

Chief Justice N V Ramana: ನ್ಯಾಯ ನಿಪುಣ ನ್ಯಾ.ರಮಣ

ಕಾನೂನು ಪಾಂಡಿತ್ಯ, ಸಮಚಿತ್ತ, ನ್ಯಾಯನಿಷ್ಠ ವ್ಯಕ್ತಿತ್ವದ ನ್ಯಾ. ಎನ್‌ ವಿ ರಮಣ ಅವರು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳಾಗುತ್ತಿರುವುದು ಈ ಕ್ಷ ಣದ ಅಗತ್ಯವೂ ಹೌದು.


- ಮಲ್ಲಿಕಾರ್ಜುನ ತಿಪ್ಪಾರ

ನ್ಯಾಯ ಪರಿಪಾಲನೆಯಲ್ಲಿನೈಪುಣ್ಯತೆಯನ್ನು ಸಾಧಿಸಿರುವ, ಅಪಾರ ಕಾನೂನು ಪಾಂಡಿತ್ಯವನ್ನು ಹೊಂದಿರುವ ನ್ಯಾ. ಎನ್‌ ವಿ ರಮಣ ಅವರು ದೇಶದ ಅಗ್ರ ನ್ಯಾಯಾಲಯ, ಸುಪ್ರೀಂ ಕೋರ್ಟ್‌ನ 48ನೇ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕಗೊಂಡಿದ್ದಾರೆ. ಬಹುಶಃ ಈ ಘನ ಹುದ್ದೆಗೆ ರಮಣ ಅವರು ಪ್ರತಿಶತ ಸಮರ್ಥನೀಯ ವ್ಯಕ್ತಿಯಾಗಿದ್ದಾಧಿರೆಂಬುದು ಕಾನೂನು ವಲಯದಲ್ಲಿಕೇಳಿ ಬರುತ್ತಿರುವ ಮೆಚ್ಚುಗೆ ಮಾತು. 

ಪತ್ರಿಕೆಯಲ್ಲಿ‘ಸುದ್ದಿ’ ಬರೆಯುತ್ತಿದ್ದ ರಮಣ ಅವರು ‘ತೀರ್ಪು’ ಬರೆಯುವವರೆಗೂ ತಲುಪಿದ ಜೀವನದ ಪಯಣವೂ ಸಾಕಷ್ಟು ರೋಚಕ ಹಾಗೂ ಸೂಧಿರ್ತಿದಾಯಕ. ರೈತನ ಮಗನೊಬ್ಬ ಇಂದು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗುತ್ತಾರೆಂದರೆ ಅದು ಈ ದೇಶದ ಪ್ರಜಾಪ್ರಭುತ್ವದ ದೊಡ್ಡ ಶಕ್ತಿ; ಸಂವಿಧಾನ ಒದಗಿಸಿದ ಅವಕಾಶ. 

ಸದಾ ಶಾಂತಚಿತ್ತರಾಗಿರುವ ರಮಣ ನ್ಯಾಯ ಪರಿಪಾಲನೆಯಲ್ಲಿಮಾತ್ರ ಕಠೋರ. ನ್ಯಾಯದ ಹಾದಿಯಲ್ಲಿಎಷ್ಟೇ ಎಡರು ತೊಡರುಗಳು ಎದುರಾದರೂ ಅವರು ಎದೆಗುಂದಿದ ಪ್ರಕರಣವಿಲ್ಲ. ಸತ್ಯವನ್ನು ಯಾವುದೇ ಅಂಜಿಕೆ ಇಲ್ಲದೇ ಹೇಳಿದ್ದಾರೆ ಮತ್ತು ನಾಗರಿಕ ಹಕ್ಕುಗಳನ್ನು ಸಂರಕ್ಷಿಸಿದ್ದಾರೆ. ಇದಕ್ಕೆ ಉದಾಹರಣೆ ಎಂದರೆ; ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ಹಿಂಪಡೆದ ಬಳಿಕ ಕೇಂದ್ರ ಸರಕಾರ ಮುಂಜಾಗ್ರತಾ ಕ್ರಮವಾಗಿ ಇಂಟರ್ನೆಟ್‌ ಸೇವೆಯನ್ನು ಬಂದ್‌ ಮಾಡಿತ್ತು. ಸರಕಾರದ ನಿಷೇಧ ವರ್ಷಗಟ್ಟಲೆ ಮುಂದುವರಿಯಿತು ಮತ್ತು ಈ ಪ್ರಕರಣ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದಾಗ, ಅದರ ವಿಚಾರಣೆ ನಡೆಸಿದ್ದು ಇದೇ ನ್ಯಾ. ಎನ್‌.ವಿ.ರಮಣ ನೇತೃತ್ವದ ಪೀಠ. ‘‘ಈ ಪ್ರಕರಣದಲ್ಲಿ ಅನಿರ್ದಿಷ್ಟಾವಧಿಗೆ ಇಂಟರ್ನೆಟ್‌ ಸೇವೆಯನ್ನು ಸ್ಥಗಿತಗೊಳಿಸುವುದು ಕಾನೂನುಬಾಹಿರವಾಗುತ್ತದೆ,’’ ಎಂದು ಹೇಳಿ, ಸಂವಿಧಾನದಡಿಯಲ್ಲಿ ಇಂಟರ್ನೆಟ್‌ ಸೇವೆಯೂ ವಾಕ್‌ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಭಾಗವೇ ಆಗಿದೆ. ಹಾಗಾಗಿ, ಇಂಟರ್ನೆಟ್‌ ಕೂಡ ಮೂಲಭೂತ ಹಕ್ಕು ಎಂದು ಪೀಠ ಹೇಳಿತು ಮತ್ತು ಕಾಶ್ಮೀರ ಕಣಿವೆಯಲ್ಲಿ ಇಂಟರ್ನೆಟ್‌ ಸೇವೆ ಮರು ಆರಂಭಿಸಲು ಆದೇಶಿಸಿತು. 

ಇದೇ ರೀತಿಯ ಹಲವು ಐತಿಹಾಸಿಕ ತೀರ್ಪುಗಳನ್ನು ಅವರು ನೀಡಿದ್ದಾರೆ. ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಕಚೇರಿಯನ್ನು ಮಾಹಿತಿ ಹಕ್ಕು ಕಾಯಿದೆ(ಆರ್‌ಟಿಐ) ವ್ಯಾಪ್ತಿಗೆ ತರುವಲ್ಲಿ ಇವರು ನೀಡಿದ ತೀರ್ಪು ಕಾರಣ. ಉದ್ಯಮಿ ಹಾಗೂ ಆರ್‌ಟಿಐ ಕಾರ್ಯಕರ್ತ ಸುಭಾಶ್‌ಚಂದ್ರ ಅಗರ್ವಾಲ್‌ ಅವರು ಸುಪ್ರೀಂ ಕೋರ್ಟ್‌ನ ಹಾಲಿ ನ್ಯಾಯಮೂರ್ತಿಗಳ ಆಸ್ತಿ ಬಗ್ಗೆ ಮಾಹಿತಿ ನೀಡುವಂತೆ ಕೇಂದ್ರ ಸಾರ್ವಜನಿಕ ಮಾಹಿತಿ ಅಧಿಕಾರಿಗೆ(ಸಿಪಿಐಒ) ಆರ್‌ಟಿಐನಡಿ ಕೇಳಿಕೊಂಡಿದ್ದರು. ಆದರೆ, ಗೌಪ್ಯ ಮಾಹಿತಿ ಎಂಬ ಕಾರಣ ನೀಡಿ, ಈ ಅರ್ಜಿಯನ್ನು ಸಿಪಿಐಒ ವಜಾ ಮಾಡಿದರು. ಈ ಪ್ರಕರಣ ಕಡೆಗೆ ಸುಪ್ರೀಂ ಕೋರ್ಟ್‌ನ ಸಂವಿಧಾನಪೀಠಕ್ಕೆ ವರ್ಗವಾಗಿ, ಸುಪ್ರೀಂ ಕೋರ್ಟ್‌ ಕೂಡ ಸಾರ್ವಜನಿಕ ಕಚೇರಿಯಾಗಿರುವು­ದರಿಂದ 2005ರ ಮಾಹಿತಿ ಹಕ್ಕು ಕಾಯಿದೆ ವ್ಯಾಪ್ತಿಗೆ ಒಳಪಡುತ್ತದೆ ಎಂಬ ಐತಿಹಾಸಿಕ ತೀರ್ಪು ಹೊರ ಬಿತ್ತು. ಈ ತೀರ್ಪಿನ ಹಿಂದೆ ನ್ಯಾ.ರಮಣ ಅವರ ಮಹತ್ತರ ಕಾಣಿಕೆ ಇದೆ. ಈ ತೀರ್ಪಿನೊಂದಿಗೆ ಹಾಲಿ ನ್ಯಾಯಮೂರ್ತಿ­ಗಳು ತಮ್ಮ ಆಸ್ತಿ ವಿವರವನ್ನು ಬಹಿರಂಗಗೊಳಿಸಬೇಕಾಯಿತು. 

ವಾಣಿಜ್ಯ ವ್ಯಾಜ್ಯಗಳನ್ನು ಬಗೆಹರಿಸುವಲ್ಲೂರಮಣರ ಕಾನೂನು ಪಾಂಡಿತ್ಯ ನೆರವಿಗೆ ಬಂದಿದೆ. ಅನೇಕ ಪ್ರಕರಣಗಳಲ್ಲಿ ಮೈಲುಗಲ್ಲುತೀರ್ಪುಗಳನ್ನು ನೀಡಿದ್ದಾರೆ. ಇದಕ್ಕೆ ವಿದ್ಯಾ ದ್ರೋಲಿಯಾ, ಅಲ್ಕನೋ ವರ್ಸಸ್‌ ಸಲೇಮ್‌ ಪ್ರಕರಣಗಳ ತೀರ್ಪನ್ನು ಉದಾಹರಣೆಯಾಗಿ ನೀಡಬಹುದು. ಸಾಂವಿಧಾನಿಕ ಬಿಕ್ಕಟ್ಟು ಸೃಷ್ಟಿಯಾದ ಹಲವು ಪ್ರಕರಣಗಳಲ್ಲಿ ಅವರು ಮಹತ್ವದ ತೀರ್ಪುಗಳನ್ನು ನೀಡಿದ್ದಾರೆ. ಕರ್ನಾಟಕದ ಕಾಂಗ್ರೆಸ್‌-ಜೆಡಿಎಸ್‌ ಶಾಸಕರ ಅನರ್ಹ ಪ್ರಕರಣದಲ್ಲಿ, ಸ್ಪೀಕರ್‌ ನೀಡಿದ ತೀರ್ಮಾನವನ್ನು ಎತ್ತಿ ಹಿಡಿದಿದ್ದರು. 2019ರಲ್ಲಿ ಮಹಾರಾಷ್ಟ್ರದಲ್ಲಿಸರಕಾರ ರಚನೆ ಸಂಬಂಧ ಉಂಟಾಗಿದ್ದ ಬಿಕ್ಕಟ್ಟು ವೇಳೆ, ವಿಶ್ವಾಸಮತ ಯಾಚನೆಗೆ ಅವಕಾಶ ನೀಡಿ ಸಂವಿಧಾನಬದ್ಧ ಪ್ರಕ್ರಿಯೆಗೆ ಅನುವು ಮಾಡಿಕೊಟ್ಟಿದ್ದರು.

ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಯಾಗುವ ಮುಂಚೆ ರಮಣ, ಆಂಧ್ರಪ್ರದೇಶ ಹೈಕೋರ್ಟ್‌, ಕೇಂದ್ರ ಆಡಳಿತಾತ್ಮಕ ನ್ಯಾಯಾಧಿಕರಣ, ಆಂಧ್ರಪ್ರದೇಶ ರಾಜ್ಯ ಆಡಳಿತಾತ್ಮಕ ನ್ಯಾಯಾಧಿಕರಣ, ಸುಪ್ರೀಂ ಕೋರ್ಟ್‌ ನಲ್ಲಿ ವಕೀಲಿಕೆ ಮಾಡಿದ್ದಾರೆ. ಸುಪ್ರೀಂ ಕೋರ್ಟ್‌ನಲ್ಲಿ ವಕೀಲಿಕೆ ಮಾಡುವಾಗ ಸಾಂವಿಧಾನಿಕ, ಅಪರಾಧ, ಸೇವೆ ಮತ್ತು ಅಂತಾರಾಜ್ಯ ಕಾನೂನುಗಳ ವಿಷಯತಜ್ಞತೆಯನ್ನು ಸಾಧಿಸಿದ್ದರು. ಜೊತೆಗೆ ಸಿವಿಲ್‌, ಕ್ರಿಮಿನಲ್‌, ಲೇಬರ್‌, ಸವೀಸ್, ಚುನಾವಣಾ ಸಂಬಂಧಿಸಿದ ಪ್ರಕರಣಗಳನ್ನು ನಿರ್ವಹಿಸಿದ್ದಾರೆ. ಹಲವು ಕೇಸ್‌ಗಳಲ್ಲಿ ಕೇಂದ್ರ ಸರಕಾರ, ರೇಲ್ವೆಯನ್ನು ಪ್ರತಿನಿಧಿಸಿದ್ದಾರೆ. ಆಂಧ್ರಪ್ರದೇಶದ ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಆಗಿ ಕಾರ್ಯನಿರ್ವಹಿಸಿದ್ದಾರೆ. ವಕೀಲಿಕೆಯಲ್ಲಿ ಅಪಾರ ಅನುಭವವನ್ನು ಹೊಂದಿದ್ದ ಅವರನ್ನು 2000 ಜೂನ್‌ 27ರಂದು ಆಂಧ್ರಪ್ರದೇಶದ ಶಾಶ್ವತ ನ್ಯಾಯಮೂರ್ತಿಯಾಗಿ ನೇಮಕ ಮಾಡಲಾಯಿತು. 2013 ಮಾರ್ಚ್‌ 10ರಿಂದ 2013 ಮೇ 20ರವರೆಗೂ ಆಂಧ್ರಪ್ರದೇಶ ಹೈಕೋರ್ಟ್‌ನ ಹಂಗಾಮಿ ಮುಖ್ಯ ನ್ಯಾಯಮೂರ್ತಿಯಾಗಿಯೂ ಕೆಲಸ ಮಾಡಿದ್ದಾರೆ. ಬಳಿಕ ಅವರನ್ನು 2013 ಸೆಪ್ಟೆಂಬರ್‌ 2ರಂದು ದಿಲ್ಲಿ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯನ್ನಾಗಿ ನೇಮಿಸಲಾಯಿತು. ಇದಾದ ಒಂದೇ ವರ್ಷದಲ್ಲಿ ಅವರು ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಯಾಗಿ 2014 ಫೆಬ್ರವರಿ 17ರಂದು ನೇಮಕಗೊಂಡರು. 

ಅಪಾರ ಕಾನೂನು ಪಾಂಡಿತ್ಯ ಮತ್ತು ಸಮಚಿತ್ತ, ದೃಢ ನಿಲುವು ಹೊಂದಿದ ವ್ಯಕ್ತಿಯೊಬ್ಬರು ಮುಖ್ಯ ನ್ಯಾಯಮೂರ್ತಿ ಗಳಾಗುತ್ತಿರುವುದು ಈ ಕ್ಷ ಣದ ಅಗತ್ಯವೂ ಆಗಿತ್ತು. ಕಾನೂನು ಪ್ರೀತಿಸುವಷ್ಟೇ ಕಲೆ ಮತ್ತು ಸಾಹಿತ್ಯವನ್ನೂ ಇಷ್ಟ ಪಡುತ್ತಾರೆ. 

ಆಂಧ್ರ ಪ್ರದೇಶದ ಕೃಷ್ಣಾ ಜಿಲ್ಲೆಯ ಪೊನ್ನಾವರಂ ಹಳ್ಳಿಯ ಕೃಷಿಕ ಕುಟುಂಬದಲ್ಲಿ ಎನ್‌ ವಿ ರಮಣ ಅವರು 1957 ಆಗಸ್ಟ್‌ 27ರಂದು ಜನಿಸಿದರು. ಇವರ ತಂದೆ ಗಣಪತಿ ರಾವ್‌ ಮತ್ತು ತಾಯಿ ಸರೋಜನಿ ದೇವಿ ಕೃಷಿಕರು. ಬಿಎಸ್‌ಸಿ ಪದವಿ ಪಡೆದ ನಂತರ ಕಾನೂನು ಪದವಿ ಸಂಪಾದಿಸಿದರು. 1975ರಲ್ಲಿ ದೇಶಾದ್ಯಂತ ತುರ್ತು ಪರಿಸ್ಥಿತಿ ಘೋಷಿಸಿಧಿದಾಗ ರಮಣ ಅವರು ಒಂದು ಶೈಕ್ಷ ಣಿಕ ವರ್ಷವನ್ನು ತ್ಯಜಿಸಬೇಕಾದ ಪರಿಸ್ಥಿತಿ ಉಂಟಾಯಿತು. ಬಳಿಕ ಅವರು, ಎರಡು ವರ್ಷಗಳ ಕಾಲ ತೆಲುಗು ಪತ್ರಿಕೆಯೊಂದರಲ್ಲಿ ಕೆಲಸ ಮಾಡಿ, ನಂತರ ಕಾನೂನು ಪದವಿಯನ್ನು ಪಡೆದುಕೊಂಡು ವಕೀಲಿಕೆ ಆರಂಭಿಸಿದರು. ಪೊನ್ನಾವರಮ್‌ ಹಳ್ಳಿಯಿಂದ ವಕೀಲಿಕೆ ಆರಂಭಿಸಿದ ಮೊದಲಿಗರು ಇವರು. 

ವಿದ್ಯಾರ್ಥಿಯಾಗಿದ್ದಾಗಲೇ ರೈತರು, ಕಾರ್ಮಿಕರು ಮತ್ತು ಇತರ ಸಾಮಾಜಿಕ ಸಮಸ್ಯೆಗಳಿಗೆ ಸಂಬಂಧಿಸಿದ ಹೋರಾಟದಲ್ಲಿ ಪಾಲ್ಗೊಳ್ಳುವ ಮೂಲಕ ಸಾಮಾಜಿಕ ಕಾರ್ಯಕರ್ತರಾಗಿದ್ದರು. ನಾಗರಿಕರ ಹಕ್ಕುಗಳ ಪರವಾಗಿದ್ದರು. ವಿದ್ಯಾರ್ಥಿ ದಿಸೆಯಿಂದಲೇ ಅವರಲ್ಲಿ ಸಾಮಾಜಿಕ ಬದ್ಧತೆ ಮೈಗೂಡಿರುವುದನ್ನು ನಾವು ಕಾಣಬಹುದು ಮತ್ತು ಅದು ಅವರ ತೀರ್ಪುಗಳಲ್ಲಿ ಪ್ರತಿಫಲನವಾಗಿದೆ. ಸರಳ ಜೀವನವನ್ನು ಮೈಗೂಡಿಸಿಕೊಂಡಿ­ರುವ ನ್ಯಾ.ರಮಣ ನೈತಿಕವಾಗಿ ಯಾವುದಾದರೂ ವಿಷಯ ಸರಿ ಅಲ್ಲಎಂದು ತೋರಿದರೆ ಅದನ್ನು ಟೀಕಿಸುವುದರಲ್ಲಿಎಂದೂ ಹಿಂದೆ ಬಿದ್ದಿಲ್ಲ. ಇತ್ತೀಚೆಗೆ ಅವರು ನಮ್ಮ ದೇಶದ ಶಿಕ್ಷ ಣ ವ್ಯವಸ್ಥೆಗೆ ಬಗ್ಗೆ ಮಾಡಿದ ಟೀಕೆಯನ್ನು ಉದಾಹರಿಸಬಹುದು. 

ಇಷ್ಟೆಲ್ಲ ಹೆಗ್ಗಳಿಕೆಯ ಮಧ್ಯೆಯೂ ಅವರು ವಿವಾದವೊಂದರಲ್ಲಿ ಸಿಲುಕಿಕೊಂಡಿದ್ದರು. ಆಂಧ್ರಪ್ರದೇಶದ ಸಿಎಂ ವೈ ಎಸ್‌ ಜಗನ್‌ ಮೋಹನ್‌ ರೆಡ್ಡಿ ಅವರು, ಸುಪ್ರೀಂ ಕೋರ್ಟ್‌ನ ಸಿಜೆಐಗೆ ಪತ್ರ ಬರೆದು ರಮಣ ಹಾಗೂ ಅವರ ಸಂಬಂಧಿಕರು ಅಮರಾವತಿಯ ಭೂಸ್ವಾಧೀನದಲ್ಲಿ ಭ್ರಷ್ಟಾಚಾರ ಎಸಗುತ್ತಿದ್ದಾರೆ. ಜತೆಗೆ ತಮ್ಮ ಸರಕಾರವನ್ನು ಅಸ್ಥಿರಗೊಳಿಸಲು ಯತ್ನಿಸುತ್ತಿದ್ದಾ­ರೆಂದು ಆರೋಪಿಸಿದ್ದರು. ಈ ಪತ್ರ ಭಾರಿ ಸಂಚಲನವನ್ನೇ ಸೃಷ್ಟಿಸಿತ್ತು ಎಂಬುದನ್ನು ಇಲ್ಲಿ ಸ್ಮರಿಸಬಹುದು. 

63 ವರ್ಷದ ನ್ಯಾ. ರಮಣ ಅವರು, ಏಪ್ರಿಲ್‌ 24ರಂದು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳಾಗಿ ಅಧಿಕಾರ ಸ್ವೀಕರಿಸಲಿದ್ದು, ಅವರ ಅಧಿಕಾರಾವಧಿ 2022 ಆಗಸ್ಟ್‌ 26ಕ್ಕೆ ಕೊನೆಗೊಳ್ಳಲಿದೆ. ದೇಶದ ಮುಖ್ಯ ನ್ಯಾಯಮೂರ್ತಿಯಾಗಿ ಮಾತ್ರವಲ್ಲದೆ ಅವರು ಸುಪ್ರೀಂ ಕೋರ್ಟ್‌ನ ಆಡಳಿತಾತ್ಮಕ ವ್ಯವಸ್ಥೆಯ ಮುಖ್ಯಸ್ಥರೂ ಆಗಿಯೂ ಕಾರ್ಯನಿರ್ವಹಿಸಬೇಕಾಗುತ್ತದೆ. ಅವರ ಮುಂದೆ ಸಾಕಷ್ಟು ಸವಾಲುಗಳಂತೂ ಇದ್ದೇ ಇವೆ.




How to make Whats app call from Desktop?: ಕಂಪ್ಯೂಟರ್‌ನಿಂದ ವಾಟ್ಸ್‌ಆ್ಯಪ್‌ ಕಾಲ್‌ ಮಾಡುವುದು ಹೇಗೆ?


- ಮಲ್ಲಿಕಾರ್ಜುನ ತಿಪ್ಪಾರ

ಕಿರು ಸಂದೇಶ ಸಂವಹನದಲ್ಲಿಕ್ರಾಂತಿಯನ್ನೇ ಸೃಷ್ಟಿಸಿರುವ ಫೇಸ್‌ಬುಕ್‌ ಒಡೆತನದ ‘ವಾಟ್ಸ್‌ಆ್ಯಪ್‌’, ತನ್ನ ಬಳಕೆದಾರರಿಗೆ ಕಾಲ ಕಾಲಕ್ಕೆ ಹೊಸ ಹೊಸ ಫೀಚರ್‌ಗಳನ್ನು ಪರಿಚಯಿಸುತ್ತಲೇ ಇರುತ್ತದೆ. ಈಗಾಗಲೇ ನೀವು  ಸ್ಮಾರ್ಟ್‌ಫೋನ್‌ ವರ್ಷನ್‌ನಲ್ಲಿವಾಟ್ಸ್‌ಆ್ಯಪ್‌ ವಾಯ್ಸ್‌ ಮತ್ತು ವಿಡಿಯೊ ಕಾಲ್‌ ಸೌಲಭ್ಯವನ್ನು ಬಳಸಿಕೊಂಡಿರುತ್ತೀರಿ. ಈ ವಾಟ್ಸ್‌ಆ್ಯಪ್‌ ವಾಯ್ಸ್‌ ಮತ್ತು ವಿಡಿಯೊ ಕಾಲ್‌ ಎಷ್ಟು ಜನಪ್ರಿಯವಾಗಿದೆ ಎಂದರೆ, 2020ರ ಹೊಸ ವರ್ಷದ ದಿನ ಜಗತ್ತಿನಾದ್ಯಂತ 140 ಕೋಟಿ ವಾಯ್ಸ್‌ ಮತ್ತು ವಿಡಿಯೊ ಕರೆಗಳನ್ನು ವ್ಯಾಟ್ಸ್‌ಆ್ಯಪ್‌ ಮೂಲಕ ಮಾಡಲಾಗಿದೆಯಂತೆ! ಅಂದರೆ, ಅಷ್ಟರಮಟ್ಟಿಗೆ ವಾಟ್ಸ್‌ಆ್ಯಪ್‌ ಆಧುನಿಕ ಸಂವಹನದ ಹೊಸ ಪರಿಭಾಷೆ ಮತ್ತು ಮಾಧ್ಯಮವಾಗಿ ರೂಪುಗೊಂಡಿದೆ.

ಈವರೆಗೂ ವಾಟ್ಸ್‌ಆ್ಯಪ್‌ ವಾಯ್ಸ್‌ ಮತ್ತು ವಿಡಿಯೊ ಕಾಲ್‌ ಸೇವೆ ಸ್ಮಾರ್ಟ್‌ಫೋನ್‌ಗಳಿಗೆ ಮಾತ್ರವೇ ಸಪೋರ್ಟ್‌ ಮಾಡುತ್ತಿತ್ತು. ಅಂದರೆ, ಸ್ಮಾರ್ಟ್‌ಫೋನ್‌ನಲ್ಲಿಮಾತ್ರವೇ ವಾಟ್ಸ್‌ಆ್ಯಪ್‌ ಬಳಸಿಕೊಂಡು ಕರೆ ಮಾಡಲು ಸಾಧ್ಯವಾಗುತ್ತಿತ್ತು. ಹಾಗಾಗಿ, ವಾಟ್ಸ್‌ಆ್ಯಪ್‌ ವೆಬ್‌ನಲ್ಲೂಈ ಸೇವೆ ನೀಡಬೇಕೆಂಬುದು ಬಳಕೆದಾರರ ಬೇಡಿಕೆಯಾಗಿತ್ತು. ವಾಟ್ಸ್‌ಆ್ಯಪ್‌ ಇದೀಗ ವಾಟ್ಸ್‌ಆ್ಯಪ್‌ ವೆಬ್‌ನಲ್ಲೂಆ ಸೇವೆಯನ್ನು ನೀಡುವ ಮೂಲಕ ಬಳಕೆದಾರರಿಗೆ ಮತ್ತೊಂದು ಅನುಭವವನ್ನು ಒದಗಿಸಿದೆ. ವಾಟ್ಸ್‌ವ್ಯಾಪ್‌ ವೆಬ್‌ ಮೂಲಕ ಅಂದರೆ, ನೀವು ಡೆಸ್ಕ್‌ಟಾಪ್‌(ಕಂಪ್ಯೂಟರ್‌)ನಲ್ಲೂವಾಟ್ಸ್‌ಆ್ಯಪ್‌ ಬಳಸಿಕೊಂಡು ವಾಯ್ಸ್‌ ಮತ್ತು ವಿಡಿಯೊ ಕಾಲ್‌ಗಳನ್ನು ಮಾಡಬಹುದು.

ಸದ್ಯಕ್ಕೆ, ವಾಟ್ಸ್‌ಆ್ಯಪ್‌ ವೆಬ್‌ ಸೇವೆ ಸೀಮಿತವಾಗಿದೆ; ಅದರ ವ್ಯಾಪ್ತಿ ವಿಸ್ತಾರವಾಗಿಲ್ಲ. ಹಾಗೆಯೇ, ಎಲ್ಲರೀತಿಯ ಒಎಸ್‌ಗಳಿಗೂ ಇದು ಸಪೋರ್ಟ್‌ ಮಾಡುತ್ತಿಲ್ಲ. ವಿಂಡೋಸ್‌ 10 ಮತ್ತು ಮ್ಯಾಕ್‌ಒಎಸ್‌ 10.13 ವರ್ಷನ್‌ನಲ್ಲಿಮಾತ್ರವೇ ನೀವು ಆಡಿಯೊ ಮತ್ತು ವಿಡಿಯೊ ಕಾಲ್‌ ಮಾಡಲು ಸಾಧ್ಯವಾಗಲಿದೆ. ಜೊತೆಗೆ, ವಾಟ್ಸ್‌ಆ್ಯಪ್‌ ಗ್ರೂಪ್‌ ಕರೆಗಳಿಗೂ ಅವಕಾಶವಿಲ್ಲ. ಸ್ಮಾರ್ಟ್‌ಫೋನ್‌ನಲ್ಲಾದರೆ ನೀವು ಗ್ರೂಪ್‌ ಕಾಲ್‌ ಮೂಲಕ ವರ್ಚುಯಲ್‌ ಮೀಟಿಂಗ್‌ಗಳಂಥ ಟಾಸ್ಕ್‌ಗಳನ್ನು ಮಾಡಬಹುದಾಗಿತ್ತು. ಸದ್ಯಕ್ಕೆ ವೈಯಕ್ತಿಕ ಕರೆಗಳಿಗೆ ಮಾತ್ರವೇ ವಾಟ್ಸ್‌ಆ್ಯಪ್‌ ವಾಯ್ಸ್‌ ಮತ್ತು ವಿಡಿಯೊ ಕಾಲ್‌ಗೆ ಸೀಮಿತವಾಗಿದ್ದು, ಮುಂಬರುವ ದಿನಗಳಲ್ಲಿವಾಟ್ಸ್‌ಆ್ಯಪ್‌ ಈ ತನ್ನ ಸೇವೆಯನ್ನು ವ್ಯಾಪ್ತಿಯನ್ನು ಇನ್ನಷ್ಟು ವಿಸ್ತರಿಸಬಹುದು. 

ಕಾಲ್‌ ಮಾಡುವುದು ಹೇಗೆ?- ಈ ಫೀಚರ್‌ ಸದ್ಯ ವಾಟ್ಸ್‌ಆ್ಯಪ್‌ ವೆಬ್‌ನಲ್ಲಿಮಾತ್ರವೇ ಲಭ್ಯವಿದ್ದು, ವಿಂಡೋಸ್‌ ಮತ್ತು ಮ್ಯಾಕ್‌ಒಎಸ್‌ನಲ್ಲಿಮಾತ್ರವೇ ಕೆಲಸ ಮಾಡುತ್ತದೆ. ಹಾಗೆಯೇ ಗ್ರೂಪ್‌ ಕಾಲ್‌ಗಳು ಸಾಧ್ಯವಾಗುವುದಿಲ್ಲ. ಕೇವಲ ಸೀಮಿತ ಕಾಲ್ಗೆ ಮಾತ್ರವೇ ಅವಕಾಶವಿದೆ.

ಏನೇನು ಇರಬೇಕು?: ವಿಂಡೋಸ್‌ 10 64-ಬಿಟ್‌ ವರ್ಷನ್‌ 1903 ಮತ್ತು ಹೊಸ ಮ್ಯಾಕ್‌ಒಎಸ್‌ 10.13. ಹಾಗೆಯೇ, ವಾಯ್ಸ್‌ ಮತ್ತು ವಿಡಿಯೊ ಕಾಲ್‌ ಮಾಡಲು ಅಗತ್ಯವಿರುವ ಆಡಿಯೊ ಔಟ್‌ಪುಟ್‌ ಡಿವೈಸ್‌ ಮ್ತತು ಮೈಕ್ರೋಫೋನ್‌ ಇರಬೇಕು. ವಿಡಿಯೊ ಕಾಲ್‌ಗೆ ಕ್ಯಾಮೆರಾ ಅಗತ್ಯ. ನಿಮ್ಮ ಪಿಸಿ ಮತ್ತು ಸ್ಮಾರ್ಟ್‌ಫೋನ್‌ ಇಂಟರ್ನೆಟ್‌ಗೆ ಕನೆಕ್ಟ್ ಆಗಿರಬೇಕು. 

ಕರೆ ಮಾಡಲು ಹೀಗೆ ಮಾಡಿ

- ನಿಮ್ಮ ಆಪರೇಟಿಂಗ್‌ ಸಿಸ್ಟಮ್‌ನಲ್ಲಿವಾಟ್ಸ್‌ಆ್ಯಪ್‌ನ ಹೊಸ ಆವೃತ್ತಿಯನ್ನು ಡೌನ್ಲೋಡ್‌ ಮಾಡಿಕೊಂಡು ಇನ್ಸ್ಟಾಲ್‌ ಮಾಡಿಕೊಂಡಿರಬೇಕು. 

- ಡೆಸ್ಕ್‌ಟಾಪ್‌ನಲ್ಲಿರುವ ಆ್ಯಪ್‌ ಓಪನ್‌ ಮಾಡಿ ಮತ್ತು ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿರುವ  ವಾಟ್ಸ್‌ಆ್ಯಪ್‌ ಬಳಸಿಕೊಂಡು ಕ್ಯೂಆರ್‌ ಸ್ಕ್ಯಾ‌ನಿಂಗ್‌ ಮೂಲಕ ಕಾನಿಧಿಗರ್‌ ಮಾಡಿಕೊಳ್ಳಿ.

- ಇಷ್ಟಾದ ಮೇಲೆ ಚಾಟ್‌ ವಿಂಡೋ ಟ್ಯಾಪ್‌ ಮಾಡಿ ಮತ್ತು ಅಲ್ಲಿನಿಮಗೆ ಬಲಬದಿಯ ಮೇಲ್ತುದಿಯಲ್ಲಿವಾಯ್ಸ್‌ ಮತ್ತು ವಿಡಿಯೊ ಕಾಲ್‌ ಐಕಾನ್‌ಗಳು ಕಾಣಿಸುತ್ತವೆ.

 - ವಾಯ್ಸ್ ಕಾಲ್‌ ಮಾಡಲು ವಾಯ್ಸ್‌ ಕಾಲ್‌ ಬಟನ್‌ ಮತ್ತು ವಿಡಿಯೊ ಕಾಲ್‌ ಮಾಡಲು ವಿಡಿಯೊ ಕಾಲ್‌ ಬಟನ್‌ ಮೇಲೆ ಕ್ಲಿಕ್‌ ಮಾಡಿ.

ವಾಯ್ಸ್‌ ಮತ್ತು ವಿಡಿಯೊ ಕಾಲ್‌ ಸ್ವೀಕರಿಸುವುದು ಹೇಗೆ?: ವಾಟ್ಸ್‌ಆ್ಯಪ್‌ ಮೂಲಕ ಕರೆ ಬಂದ ಕೂಡಲೇ ನಿಮ್ಮ ಡೆಸ್ಕ್‌ಟಾಪ್‌ ಮೇಲೆ ವಿಂಡೋ ಪಾಪ್‌ಅಪ್‌  ಆಗುತ್ತದೆ. ಆಗ ನೀವು ಕರೆಯನ್ನು ಸ್ವೀಕರಿಸಲು ರಿಸೀವ್‌ ಬಟನ್‌ ಮೇಲೆ ಕ್ಲಿಕ್‌ ಮಾಡಬೇಕು. ಕರೆ ಸ್ವೀಕರಿಸುವುದು ಬೇಡವಾಗಿದ್ದರೆ ಡಿಸ್‌ಕನೆಕ್ಟ್ ಬಟನ್‌ ಮೇಲೆ ಕ್ಲಿಕ್‌ ಮಾಡಬೇಕು.