tag:blogger.com,1999:blog-68978544398106961402024-02-08T01:58:21.141+05:30ನನ್ನ ಹಾಡು.....ಭಾವನೆಗಳ ಭರಪೂರ ಸಂಗಮಮಲ್ಲಿಕಾಜು೯ನ ತಿಪ್ಪಾರhttp://www.blogger.com/profile/03103441547302200527noreply@blogger.comBlogger216125tag:blogger.com,1999:blog-6897854439810696140.post-47706228099736475842022-10-15T11:33:00.002+05:302022-10-15T11:33:58.710+05:30 Justice D Y Chandrchud | ಡಿ ವೈ ಚಂದ್ರಚೂಡ್ ನ್ಯಾಯನಿಷ್ಠ, ಧೈರ್ಯಶಾಲಿ ನ್ಯಾಯಮೂರ್ತಿ<p><b>| ಮಲ್ಲಿಕಾರ್ಜುನ ತಿಪ್ಪಾರ, ಬೆಂಗಳೂರು</b></p><p>ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಅವರು ಸುಪ್ರೀಂ ಕೋರ್ಟ್ನ 50ನೇ ಮುಖ್ಯ ನ್ಯಾಯಮೂರ್ತಿಯಾಗಲಿದ್ದಾರೆಂಬ ಸುದ್ದಿ ಹೊರ ಬೀಳುತ್ತಿದ್ದಂತೆ, 'ಭಾರತೀಯ ನ್ಯಾಯಾಂಗವು ವ್ಯವಸ್ಥೆ ಸುರಕ್ಷಿತ ಕೈಗಳಲ್ಲಿದೆ' ಎಂಬ ಮೆಚ್ಚುಗೆ ಎಲ್ಲೆಡೆಯಿಂದ ಕೇಳಿ ಬಂತು! ನ್ಯಾಯವಾದಿಯಾಗಿ, ಹೆಚ್ಚುವರಿ ಸಾಲಿಸಿಟರ್ ಜನರಲ್ ಆಗಿ, ಹೈಕೋರ್ಟ್ ನ್ಯಾಯಮೂರ್ತಿ- ಮುಖ್ಯ ನ್ಯಾಯಮೂರ್ತಿ ಹಾಗೂ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿ ಡಿ ವೈ ಚಂದ್ರಚೂಡ್ ಅವರು ತೋರಿದ ಧೈರ್ಯ, ದೃಢತೆ, ನ್ಯಾಯಪರತೆಯೇ ಈ ಮೆಚ್ಚುಗೆಯ ಹಿಂದಿನ ಕಾರಣ.</p><table cellpadding="0" cellspacing="0" class="tr-caption-container" style="float: left;"><tbody><tr><td style="text-align: center;"><a href="https://blogger.googleusercontent.com/img/b/R29vZ2xl/AVvXsEiIRZ-1GYk9mKXHlrK4FJAu4TXgubfZ2eNYl7LQS9AMzdFsAx9husgUVhC81ZyVEY5TwRl5p6i4kTnN4b6yISEmvVemtDw6KHwk9kGmZ8nytSSCyRYU5ZK1PDgjQ1-E7D1sxGBcPA3c6X6OhB044jun4B5Awat0TdhqE5mHizVyZXVhyzsuvQP3vmK-/s484/D%20Y%20Chandrachu.jpg" imageanchor="1" style="clear: left; margin-bottom: 1em; margin-left: auto; margin-right: auto;"><img border="0" data-original-height="484" data-original-width="472" height="320" src="https://blogger.googleusercontent.com/img/b/R29vZ2xl/AVvXsEiIRZ-1GYk9mKXHlrK4FJAu4TXgubfZ2eNYl7LQS9AMzdFsAx9husgUVhC81ZyVEY5TwRl5p6i4kTnN4b6yISEmvVemtDw6KHwk9kGmZ8nytSSCyRYU5ZK1PDgjQ1-E7D1sxGBcPA3c6X6OhB044jun4B5Awat0TdhqE5mHizVyZXVhyzsuvQP3vmK-/s320/D%20Y%20Chandrachu.jpg" width="312" /></a></td></tr><tr><td class="tr-caption" style="text-align: center;">ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್</td></tr></tbody></table><p>ನ್ಯಾ. ಚಂದ್ರಚೂಡ್ ಅವರನ್ನು ಹತ್ತಿರದಿಂದ ಬಲ್ಲ ಮುಂಬೈ ನ್ಯಾಯವಾದಿಗಳು ಅವರನ್ನು ಮೂರು ಸಿ(C)ಗಳಲ್ಲಿ ಬಣ್ಣಿಸುತ್ತಾರೆ. compassion, courage and conscientiousness. ಅಂದರೆ, ಸಹಾನುಭೂತಿ, ಧೈರ್ಯ ಮತ್ತು ಆತ್ಮಸಾಕ್ಷಿಗೆ ಅನುಗುಣವಾಗಿ ನಡೆಯುವ ವ್ಯಕ್ತಿ ಎಂದರ್ಥ. ಅವರು ನೀಡಿದ ಎಲ್ಲ ತೀರ್ಪುಗಳಲ್ಲಿ ನ್ಯಾಯಪರತೆಯೊಂದಿಗೆ ಈ ಮೂರು ಮೌಲ್ಯಗಳು ಪ್ರತಿಫಲನಗೊಂಡಿರುವುದನ್ನು ಸುಲಭವಾಗಿ ಗುರುತಿಸಬಹುದು. ಹಾಗಾಗಿಯೇ ಭಾರತೀಯ ನ್ಯಾಯಾಂಗ ವ್ಯವಸ್ಥೆಯಲ್ಲಿ ಡಿ. ವೈ.ಚಂದ್ರಚೂಡ ಅವರಿಗೆ ವಿಶೇಷವಾದ ಗೌರವವಿದೆ. ಅವರೀಗ ಸುಪ್ರೀಂ ಕೋರ್ಟ್ನ ನಿಯೋಜಿತ ಮುಖ್ಯ ನ್ಯಾಯಮೂರ್ತಿ. ಸುಮಾರು ಎರಡು ವರ್ಷಗಳ ಕಾಲ ಈ ಹುದ್ದೆಯಲ್ಲಿ ಇರಲಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಇಷ್ಟೊಂದು ದೀರ್ಘ ಅವಧಿಗೆ ಸಿಜೆಐ ಆಗುತ್ತಿರುವುದು ಇವರೇ ಮೊದಲಿಗರು. ಇನ್ಫ್ಯಾಕ್ಟ್ ಡಿ ವೈ ಚಂದ್ರಚೂಡ್ ಅವರ ತಂದೆ ಯಶವಂತರಾವ್ ವಿ ಚಂದ್ರಚೂಡ್ ಅವರೂ 7 ವರ್ಷಗಳ ಕಾಲ ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿಗಳಾಗಿದ್ದರು. ಇದು ಈ ವರೆಗಿನ ಗರಿಷ್ಠ ದಾಖಲೆಯಾಗಿದೆ. ಈಗ ಅವರ ಪುತ್ರ ದೀರ್ಘಾವಧಿಗೆ ಅದೇ ಹುದ್ದೆಯಲ್ಲಿ ಇರಲಿರುವುದು ಕಾಕತಾಳೀಯವಷ್ಟೇ. ಬಹುಶಃ ಭಾರತೀಯ ನ್ಯಾಯಾಂಗ ಇತಿಹಾಸದಲ್ಲಿ ತಂದೆ-ಮಗ ಇಬ್ಬರು ದೀರ್ಘಾವಧಿಗೆ ಸಿಜೆಐ ಆಗಿರುವುದು ವಿಶಿಷ್ಟ ದಾಖಲೆಯಾಗಲಿದೆ.</p><p><b>1959ರಲ್ಲಿ ಜನನ<br /></b>ಡಿ ವೈ ಚಂದ್ರಚೂಡ್ ಅವರ ಪೂರ್ತಿ ಹೆಸರು ಧನಂಜಯ್ ಯಶವಂತರಾವ್ ಚಂದ್ರಚೂಡ್. 1959 ನವೆಂಬರ್ 11ರಂದು ಮುಂಬೈನಲ್ಲಿ ಜನಿಸಿದರು. ತಂದೆ ಯಶವಂತರಾವ್ ಚಂದ್ರಚೂಡ್. ಅವರೂ ಸಿಜೆಐ ಆಗಿದ್ದವರು. ತಾಯಿ ಪ್ರಭಾ. ಶಾಸ್ತ್ರೀಯ ಸಂಗೀತಗಾರ್ತಿ. ಧನಂಜಯ್ ಅವರು ದಿಲ್ಲಿಯ ಸೇಂಟ್ ಸ್ಟೀಫನ್ಸ್ ಕಾಲೇಜಿನಲ್ಲಿ ಅರ್ಥಶಾಸ್ತ್ರದಲ್ಲಿ ಪದವಿ ಪಡೆದರು. ದೆಹಲಿ ವಿಶ್ವವಿದ್ಯಾಲಯದ ಫ್ಯಾಕಲ್ಟಿ ಆಫ್ ಲಾ ಕಾಲೇಜಿನಿಂದ ಕಾನೂನು ಪದವಿ ಗಳಿಸಿದರು. ಹಾಗೆಯೇ, ಹಾರ್ವರ್ಡ್ ಲಾ ಸ್ಕೂಲ್ನಿಂದ ಮಾಸ್ಟರ್ ಆಫ್ ಲಾ ಮತ್ತು ಜುರಿಡಿಕಲ್ ಸೈನ್ಸ್ನಲ್ಲಿ ಪಿಎಚ್ಡಿ ಸಂಪಾದಿಸಿದರು. ಆ ಬಳಿಕ ಅವರು ಬಾಂಬೆ ಹಾಗೂ ಸುಪ್ರೀಂ ಕೋರ್ಟ್ನಲ್ಲಿ ವಕೀಲಿಕಿ ಆರಂಭಿಸಿದರು. ಈ ಮಧ್ಯೆ ಅವರು ಭಾರತ ಸರ್ಕಾರದ ಹೆಚ್ಚುವರಿ ಸಾಲಿಸಿಟರ್ ಜನರಲ್ ಆಗಿಯೂ ಕೆಲಸ ಮಾಡಿದರು. 2000ರಲ್ಲಿ ಅವರನ್ನು ಬಾಂಬೆ ಹೈಕೋರ್ಟ್ಗೆ ಹೆಚ್ಚುವರಿ ನ್ಯಾಯಮೂರ್ತಿಯಾಗಿ ನೇಮಕ ಮಾಡಲಾಯಿತು. 2013 ಅಕ್ಟೋಬರ್ 31ರಂದು ಅವರು ಅಲಹಾಬಾದ್ ಹೈಕೋರ್ಟ್ ಮುಖ್ಯನ್ಯಾಯಮೂರ್ತಿಯಾಗಿ ಅಧಿಕಾರ ಸ್ವೀಕರಿಸಿದರು. 2016 ಮಾರ್ಚ್ 13ರಂದು ಅವರಿಗೆ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿ ಭಡ್ತಿ ನೀಡಲಾಯಿತು. </p><p><b>ಬಹುಮುಖ ವ್ಯಕ್ತಿತ್ವ<br /></b>ನಿಯೋಜಿತ ಸಿಜೆಐ ಡಿ ವೈ ಚಂದ್ರಚೂಡ್ ಅವರು ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ನ್ಯಾಯಮೂರ್ತಿ ಚಂದ್ರಚೂಡ್ ಅವರ ಪೀಠದಲ್ಲಿ ಸ್ವಾಭಾವಿಕ ನಾಯಕನಂತಿರುತ್ತಾರೆ. ಅವರ ಸಮಚಿತ್ತತೆ, ಸಭ್ಯತೆ ಮತ್ತು ದೃಢವಾದ ನಡವಳಿಕೆ, ಅವರ ಪಾಂಡಿತ್ಯ ಮತ್ತು ನ್ಯಾಯದಾನ ಮಾಡುವ ಅವರ ಉತ್ಸಾಹವು ಹೆಚ್ಚು ವಿಶ್ವಾಸಾರ್ಹವಾಗಿದೆ. ಹಾಗಾಗಿ, ಅವರು ಭಾರತದ ಮುಖ್ಯ ನ್ಯಾಯಮೂರ್ತಿಯಾಗಿ ಕೆಲಸ ಮಾಡುವ ಬಗ್ಗೆ ಇಡೀ ಜಗತ್ತೇ ನಿರೀಕ್ಷೆಯನ್ನು ಇಟ್ಟುಕೊಂಡಿದೆ ಎಂದರೆ ಅತಿಶಯೋಕ್ತಿಯೇನೂ ಆಗಲಾರದು. </p><p>ಸುಪ್ರೀಂ ಕೋರ್ಟ್ನ ನ್ಯಾಯಮೂರ್ತಿಯಾಗಿ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿರುವ ಚಂದ್ರಚೂಡ್ ಅವರು ಮುಂಬೈ ವಿಶ್ವವಿದ್ಯಾಲಯದ ಕಂಪ್ಯಾರಟಿವ್ ಕಾನ್ಸಿಟಿಟ್ಯೂಷನಲ್ ಲಾ ಕಾಲೇಜು ಹಾಗೂ ಅಮೆರಿಕದ ಓಕ್ಲಹೋಮ್ ಯುನಿವರ್ಸಿಟಿಯ ಸ್ಕೂಲ್ ಆಫ್ ಲಾ ಕಾಲೇಜಿನ ಸಂದರ್ಶಕ ಪ್ರಾಧ್ಯಾಪಕರೂ ಹೌದು. ಚಂದ್ರಚೂಡ ಅವರು ನಿಸರ್ಗ ಪ್ರೇಮಿ. ನಡೆಯುವುದೆಂದರೆ ತುಂಬ ಖುಷಿ ಅವರಿಗೆ. ಅಧ್ಯಾತ್ಮಿಕ ಹಾಗೂ ತತ್ವಜ್ಞಾನ ವಿಷಯಗಳು ಇಷ್ಟ. ಇಬ್ಬರು ಮಕ್ಕಳಿದ್ದಾರೆ. ಮೊದಲನೆಯ ಮಗ ಅಭಿನವ್ ಬಾಂಬೆ ಹೈಕೋರ್ಟ್ನಲ್ಲಿ ವಕೀಲಿಕೆ ಮಾಡುತ್ತಿದ್ದಾರೆ. ಎರಡನೇಯ ಮಗ ಚಿಂತನ್ ಅವರು ಲಂಡನ್ನ ಬ್ರಿಕ್ ಕೋರ್ಟ್ ಚೇಂಬರ್ಸ್ನಲ್ಲಿ ನ್ಯಾಯವಾದಿಯಾಗಿದ್ದಾರೆ.</p><p><b>ತಂದೆ ತೀರ್ಪುಗಳನ್ನೇ ಬದಲಿಸಿದ ಮಗ </b><br />ಡಿ ವೈ ಚಂದ್ರಚೂಡ್ ಅವರ ತಂದೆ ಯಶವಂತ ವಿ ಚಂದ್ರಚೂಡ್ ಅವರು ಸುಪ್ರೀಂ ಕೋರ್ಟ್ನ 16ನೇ ಮುಖ್ಯ ನ್ಯಾಯಮೂರ್ತಿಯಾಗಿ ಏಳು ವರ್ಷ ನಾಲ್ಕು ತಿಂಗಳು ಕಾಲ ಕಾರ್ಯ ನಿರ್ವಹಿಸಿದ್ದರು. ಆ ಸಮಯದಲ್ಲಿ ಸಿಜೆಐ ಆಗಿ ಯಶವಂತ ಚಂದ್ರಚೂಡ್ ಅವರು ಖಾಸಗಿ ಹಕ್ಕು (right to privacy) ಮತ್ತು ವಿವಾಹೇತರ ಸಂಬಂಧ (Adultery) ಕುರಿತು ತೀರ್ಪು ನೀಡಿದ್ದರು. ಸೀನಿಯರ್ ಚಂದ್ರಚೂಡ್ ಅವರು ಅಡಲ್ಟರಿ ಕಾನೂನಿನ 497 ವಿಧಿಯ ಸಿಂಧುತ್ವವನ್ನು ಎತ್ತಿ ಹಿಡಿದ್ದರು. ಇದಾದ 35 ವರ್ಷದ ಬಳಿಕ ಅವರ ಪುತ್ರ ಡಿ ವೈ ಚಂದ್ರಚೂಡ್ ಅವರು, ನಮ್ಮ ತೀರ್ಪುಗಳು ವರ್ತಮಾನಕ್ಕೆ ಹೆಚ್ಚು ಹೊಂದಾಣಿಕೆಯಾಗುವಂತೆ ನೋಡಿಕೊಳ್ಳಬೇಕು ಎಂದು ಹೇಳಿದ್ದರು. ಅಲ್ಲದೇ, ವಿವಾಹೇತರ ಸಂಬಂಧ ಅಪರಾಧಿಕರಣವನ್ನು ತೆಗೆದು ಹಾಕಿದ್ದರು. ಅದೇ ರೀತಿ, ಖಾಸಗಿ ಹಕ್ಕಿಗೆ ಸಂಬಂಧಿಸಿದಂತೆ ಸಿಜೆಐ ಯಶವಂತ್ ಚಂದ್ರಚೂಡ್ ಅವರು ವಿವಾದಿತ ಎಡಿಎಂ ಜಬಲ್ಪುರ್ ಪ್ರಕರಣದಲ್ಲಿ ನೀಡಿದ್ದ ತೀರ್ಪನ್ನು ಬದಲಿಸಿದ್ದರು. </p><p>ಡಿ ವೈ ಚಂದ್ರಚೂಡ್ ನೀಡಿದ ಪ್ರಮುಖ ತೀರ್ಪುಗಳು<br /><b>| ಅಯೋಧ್ಯೆ ವಿವಾದ:</b> ಅಯೋಧ್ಯೆ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ನ ಐವರು ನ್ಯಾಯಮೂರ್ತಿಗಳಿದ್ದ ಸಾಂವಿಧಾನಿಕ ಪೀಠವು 2019 ನವೆಂಬರ್ 9ರಂದು ಐತಿಹಾಸಿಕ ತೀರ್ಪು ಪ್ರಕಟಿಸಿತು. ವಿವಾದಿತ ಅಯೋಧ್ಯೆಯ ಜಾಗವು ಹಿಂದೂಗಳಿಗೆ ಸೇರಿದ್ದು, ಮುಸ್ಲಿಮರಿಗೆ ಪರ್ಯಾಯ ಭೂಮಿ ಒದಗಿಸುವಂತೆ ಆದೇಶ ಮಾಡಲಾಯಿತು. ಈ ಸಾಂವಿಧಾನಿಕ ಪೀಠದ ನೇತೃತ್ವವನ್ನು ಅಂದಿನ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ವಹಿಸಿದ್ದರು. ನ್ಯಾಯಮೂರ್ತಿಗಳಾದ ಡಿ ವೈ ಚಂದ್ರಚೂಡ್, ಎಸ್ ಅಬ್ದುಲ್ ನಝೀರ್, ಅಶೋಕ್ ಭೂಷಣ್ ಮತ್ತು ಎಸ್ ಎ ಬೋಬ್ಡೆ ಅವರು ಪೀಠದಲ್ಲಿದ್ದ ಇತರರು. ದಶಕಗಳಿಂದ ನಡೆದುಕೊಂಡಿದ್ದ ಬಂದಿದ್ದ ಪ್ರಕರಣಕ್ಕೆ ಈ ತೀರ್ಪು ಅಂತ್ಯ ಹಾಡಿತು.</p><p><b>| ಖಾಸಗಿ ಹಕ್ಕು:</b> 2007 ಆಗಸ್ಟ್ನಲ್ಲಿ ಸುಪ್ರೀಂ ಕೋರ್ಟ್ನ 9 ನ್ಯಾಯಮೂರ್ತಿಗಳನ್ನು ಒಳಗೊಂಡಿದ್ದ ಪೀಠವು ಖಾಸಗಿ ಹಕ್ಕಿನ ಸಂಬಂಧ ಐತಿಹಾಸಿಕ ತೀರ್ಪು ಪ್ರಕಟಿಸಿತು. ಖಾಸಗಿ ಹಕ್ಕು ಕೂಡ ಮೂಲಭೂತ ಹಕ್ಕು ಎಂಬುದನ್ನು ಸಂವಿಧಾನ ಖಾತರಿಪಡಿಸುತ್ತದೆ ಎಂಬ ತೀರ್ಪನ್ನು ಬರೆದಿದ್ದೇ ನ್ಯಾ. ಡಿ ವೈ ಚಂದ್ರಚೂಡ್ ಅವರು. ಖಾಸಗಿ ಹಕ್ಕು ಮತ್ತು ಘನತೆಯ ಹಕ್ಕು ಬದುಕಿನ ಆಂತರಿಕ ಹಕ್ಕುಗಳಾಗಿವೆ ಎಂದು ತಮ್ಮ ತೀರ್ಪಿನಲ್ಲಿ ಅವರು ಅಭಿಪ್ರಾಯಪಟ್ಟಿದ್ದಾರೆ.</p><p><b>| ಗರ್ಭಪಾತ ಹಕ್ಕು: </b>ಕಳೆದ ತಿಂಗಳು ಸುಪ್ರೀಂ ಕೋರ್ಟ್ ಗರ್ಭಪಾತಕ್ಕೆ ಸಂಬಂಧಿಸಿದಂತೆ ಮಹತ್ವದ ತೀರ್ಪು ನೀಡಿತು. ಅವಿವಾಹಿತ ಮತ್ತು ವಿವಾಹಿತ ಮಹಿಳೆಯರು ಸುರಕ್ಷಿತ ಮತ್ತು ಕಾನೂನುಬದ್ಧ ಗರ್ಭಪಾತದ ಹಕ್ಕನ್ನು ಹೊಂದಿದ್ದಾರೆಂದು ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ ತಿಳಿಸಿತ್ತು. ಈ ತೀರ್ಪು ನೀಡಿದ ಡಿ ವೈ ಚಂದ್ರಚೂಡ ನೇತೃತ್ವದ ಪೀಠದಲ್ಲಿ ಎ ಎಸ್ ಬೋಪಣ್ಣ, ಬಿ ವಿ ನಾಗರತ್ನ ನ್ಯಾಯಮೂರ್ತಿಗಳಿದ್ದರು. </p><p><b>| ಶಬರಿಮಲೆ ದೇಗುಲಕ್ಕೆ ಮಹಿಳೆಯರಿಗೆ ಪ್ರವೇಶ: </b> ಶಬರಿಮಲೆ ದೇಗುಲಕ್ಕೆ ಎಲ್ಲ ವಯೋಮಾನದವರ ಪ್ರವೇಶಕ್ಕೆ ಒಪ್ಪಿಗೆ ನೀಡಬೇಕೆಂದು ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು ನೀಡಿತ್ತು. ಈ ತೀರ್ಪು ಪ್ರಕಟಿಸಿದ ಸುಪ್ರೀಂ ಕೋರ್ಟ್ನ ಪೀಠದಲ್ಲೂ ನ್ಯಾ. ಡಿ ವೈ ಚಂದ್ರಚೂಡ್ ಅವರಿದ್ದರು. ಮಹಿಳೆಯರಿಗೆ ದೇಗುಲ ಪ್ರವೇಶ ನಿರಾಕರಿಸುವುದು ಸಾಂವಿಧಾನಿಕ ತತ್ವದ ವಿರುದ್ಧವಾಗಿದೆ ಎಂದು 9 ನ್ಯಾಯಮೂರ್ತಿಗಳಿದ್ದ ಪೀಠವು ಅಭಿಪ್ರಾಯಪಟ್ಟಿತ್ತು.</p><p><b>| ಕ್ರಿಯೇಟಿವ್ ಪ್ರೈವೇಟ್ ಲಿ. </b>ವರ್ಸಸ್ ಪಶ್ಚಿಮ ಬಂಗಾಳ ಪ್ರಕರಣದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ, ರಿಪಬ್ಲಿಕ್ ಟಿವಿ ಪ್ರಧಾನ ಸಂಪಾದಕ ಅರ್ನಬ್ ಗೋಸ್ವಾಮಿ ಪ್ರಕರಣದಲ್ಲಿ ವೈಯಕ್ತಿಕ ಸ್ವಾತಂತ್ರ್ಯ, ರಕ್ಷಣಾ ಸಚಿವಾಲಯ ವರ್ಸಸ್ ಬಬಿತಾ ಪುನಿಯಾ ಪ್ರಕರಣದಲ್ಲಿ ಲಿಂಗ ಸಮಾನ ನ್ಯಾಯ ಹಾಗೂ ಕೆಲಸದ ಸ್ಥಳಗಳಲ್ಲಿ ಲೈಂಗಿಕ ದೌರ್ಜನ್ಯ, ಪರಿಸರ ರಕ್ಷಣೆ, ಕಾರ್ಮಿಕರ ಹಿತರಕ್ಷಣೆ ಸಂಬಂಧ ಪ್ರಮುಖ ತೀರ್ಪುಗಳನ್ನು ಪ್ರಕಟಿಸಿದ್ದಾರೆ. ಅದೇ ರೀತಿ, ಸಾಂವಿಧಾನಿಕ ಬಿಕ್ಕಟ್ಟು ಉಂಟಾದ ಸಂದರ್ಭದಲ್ಲೂ ಸಂವಿಧಾನವನ್ನು ಎತ್ತಿ ಹಿಡಿಯುವ ಕೆಲಸವನ್ನು ಮಾಡಿದ್ದಾರೆ. ನಾನಾ ವಿಷಯಗಳಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನೀಡಿದ ಪ್ರಮುಖ ತೀರ್ಪುಗಳಲ್ಲಿ ನ್ಯಾ. ಡಿ ವೈ ಚಂದ್ರಚೂಡ್ ಅವರ ನ್ಯಾಯಪರತೆ ಕೆಲಸ ಮಾಡಿದೆ.</p><p>ಸುಪ್ರೀಂ ಕೋರ್ಟ್ನ 50ನೇ ಮುಖ್ಯ ನ್ಯಾಯಮೂರ್ತಿಯಾಗಿ ನಿಯೋಜಿತವಾಗಿರುವ ಡಿ ವೈ ಚಂದ್ರಚೂಡ್ ಅವರ ನ್ಯಾಯಪರತೆಯಿಂದಾಗಿ ಈಗಾಗಲೇ ಹೆಸರುವಾಸಿಯಾಗಿದ್ದಾರೆ. ಹಾಗಾಗಿ, ಅವರ ಮೇಲೆ ನಿರೀಕ್ಷೆಗಳ ಬೆಟ್ಟ ದೊಡ್ಡದಿದೆ. ಮುಖ್ಯ ನ್ಯಾಯಮೂರ್ತಿಯಾಗಿ ಅವರ ಮುಂದೆ ಸಾಕಷ್ಟು ಸವಾಲಗಳೂ ಇವೆ. ಆದರೆ, ಈವರೆಗಿನ ಅವರ ಕಾರ್ಯವೈಖರಿಯನ್ನು ಪರಿಗಣಿಸಿದರೆ, ಎಲ್ಲ ಸವಾಲು, ಸಂಕಟಗಳನ್ನು ಅವರು ಮೆಟ್ಟಿ ನಿಲ್ಲುತ್ತಾರೆಂಬುದರಲ್ಲಿ ಅನುಮಾನಗಳಿಲ್ಲ.</p><p><span style="color: #f4cccc;"><a href="https://vistaranews.com/attribute-119724/2022/10/15/d-y-chandrachud-is-courageous-conscientiousness-justice/" target="_blank">ಈ ಲೇಖನವು ವಿಸ್ತಾರನ್ಯೂಸ್ ವೆಬ್ಸೈಟ್ನಲ್ಲಿ ಪ್ರಕಟಗೊಂಡಿದೆ.</a></span></p>ಮಲ್ಲಿಕಾಜು೯ನ ತಿಪ್ಪಾರhttp://www.blogger.com/profile/03103441547302200527noreply@blogger.com0tag:blogger.com,1999:blog-6897854439810696140.post-92061170757958142732022-07-31T10:00:00.001+05:302022-07-31T10:00:00.191+05:30Partha Chatterjee and Arpita Mukherjee- ಹಗರಣಕ್ಕೆ ಪಾರ್ಥ ಅರ್ಪಿತ!<p><i style="background-color: #f4cccc;"><b>ಪಾರ್ಥ ಚಟರ್ಜಿ ಮತ್ತು ಅರ್ಪಿತಾ ಮುಖರ್ಜಿ ಎಂಬೆರಡು ಹೆಸರು ಬೇಡದ ಕಾರಣಕ್ಕೆ ಪ್ರಸಿದ್ಧಿಯಾಗಿವೆ. ವಿಭಿನ್ನ ವ್ಯಕ್ತಿತ್ವದ ಈ ಇಬ್ಬರು ಹಗರಣದ ಸುಳಿಯಲ್ಲಿಸಿಲುಕಿದ್ದಾರೆ.</b></i></p><p><br /></p><p><b>- ಮಲ್ಲಿಕಾರ್ಜುನ ತಿಪ್ಪಾರ</b><br />‘‘ಅವಳು ಚೆಲುವೆ. ಪ್ರತಿಭಾವಂತೆ. ಕೆಳಹಂತದಿಂದ ಮೇಲೆ ಬಂದವಳು. ನಾನು ಯಾವಾಗಲೂ ಹೊಸಬರನ್ನೇ ಆಯ್ಕೆ ಮಾಡಿಕೊಳ್ಳುತ್ತಿದ್ದೆ. 2013ರಲ್ಲಿನಾನು ಬಿಜೆಪಿ ಸೇರಿದೆ. ಆ ಬಳಿಕ ಸಂಪರ್ಕ ಕಡಿದು ಹೋಯಿತು. ಒಂದಂತೂ ಸತ್ಯ. ಆಕೆ, ಅತಿಯಾದ ಮಹತ್ವಾಕಾಂಕ್ಷೆ ಹೊಂದಿದ್ದಳು...’’</p><p>- ಚಿತ್ರಕರ್ಮಿ ಹಾಗೂ ಬಿಜೆಪಿಯ ನಾಯಕ ಸಂಗಮಿತ್ರ ಚೌಧರಿ ಅವರು ಅರ್ಪಿತಾ ಮುಖರ್ಜಿ ಬಗ್ಗೆ ಆಡಿದ ಮಾತುಗಳಿವು. ಚೌಧರಿ ಮಾತುಗಳು ಸತ್ಯ. ಅರ್ಪಿತಾ ಮುಖರ್ಜಿ ಎಷ್ಟು ಪ್ರತಿಭಾವಂತಳೋ ಅಷ್ಟೇ ಮಹತ್ವಾಕಾಂಕ್ಷಿಯೂ ಹೌದು. ಯಾವುದೋ ಒಂದು ಹಂತದಲ್ಲಿರಾಜಕಾರಣಿಯ ನಂಟು ಬೆಳೆಸಿಕೊಂಡು, ಈಗ ಹಗರಣದ ಸುಳಿಯಲ್ಲಿಸಿಲುಕಿಕೊಂಡು ಒದ್ದಾಡುತ್ತಿದ್ದಾರೆ. </p><p>ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅತ್ಯಾಪ್ತ ಹಾಗೂ ಸಚಿವರಾಗಿದ್ದ ಪಾರ್ಥ ಚಟರ್ಜಿ ಶಾಲಾ ಸೇವಾ ಆಯೋಗದ ನೇಮಕಾತಿ ವೇಳೆ ನಡೆಸಿದ ಬ್ರಹ್ಮಾಂಡ ಭ್ರಷ್ಟಾಚಾರವು ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ. ಜಾರಿ ನಿರ್ದೇಶನಾಲಯ(ಇ.ಡಿ) ಹೊರ ಹಾಕುತ್ತಿರುವ ಮಾಹಿತಿ, ಎಣಿಸುತ್ತಿರುವ ನೋಟುಗಳ ಮೌಲ್ಯ ಇಡೀ ಹಗರಣದ ಕತೆಯನ್ನು ಹೇಳುತ್ತಿವೆ. ಈ ಕತೆಯೊಳಗೇ ‘ಕ್ಯಾಶ್ ಕ್ವೀನ್’ ನಟಿ ಅರ್ಪಿತಾ ಮುಖರ್ಜಿ ಅವರದ್ದೂ ಒಂದು ಪ್ರಮುಖ ಪಾತ್ರ! ಯಾಕೆಂದರೆ, ಬಗೆದಷ್ಟು ಸಿಗುತ್ತಿರುವ ನಗದು ಅರ್ಪಿತಾ ಮನೆಯಲ್ಲೇ ಹೆಕ್ಕಿರುವುದು. ಈವರೆಗೆ ಅರ್ಪಿತಾ ಮನೆಯಲ್ಲಿ50 ಕೋಟಿ ರೂ. ನಗದು ಮತ್ತು ನಾಲ್ಕೂವರೆ ಕೋಟಿ ರೂ.ಗೂ ಅಧಿಕ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. </p><div class="separator" style="clear: both; text-align: center;"><a href="https://blogger.googleusercontent.com/img/b/R29vZ2xl/AVvXsEhJEDfwm89kn59Kw2DnNoMxsJTyaUfqIWcPPq-oxVxrDXsQ4QhBGgJPIQGz23H-AoFJX6-C9xWTgifBPVtO4FSSv6k4Oqc-JsCCv-6UQyT-HbjA7AfzQCn3T4Qft6VYVyGeBsx7pK5eKQRqqfGB3AXqey0QYZ4F2ITuj5A34i8mQxFobYd0si2T_tCl/s449/arpita_mukherjee.jpg" imageanchor="1" style="clear: left; float: left; margin-bottom: 1em; margin-right: 1em;"><img border="0" data-original-height="449" data-original-width="381" height="320" src="https://blogger.googleusercontent.com/img/b/R29vZ2xl/AVvXsEhJEDfwm89kn59Kw2DnNoMxsJTyaUfqIWcPPq-oxVxrDXsQ4QhBGgJPIQGz23H-AoFJX6-C9xWTgifBPVtO4FSSv6k4Oqc-JsCCv-6UQyT-HbjA7AfzQCn3T4Qft6VYVyGeBsx7pK5eKQRqqfGB3AXqey0QYZ4F2ITuj5A34i8mQxFobYd0si2T_tCl/s320/arpita_mukherjee.jpg" width="272" /></a></div><p><b>ಯಾರು ಈ ಅರ್ಪಿತಾ ಮುಖರ್ಜಿ?<br /></b>ಪ್ರತಿಭಾವಂತೆ ನಟಿ ಎನಿಸಿಕೊಂಡಿದ್ದ ಅರ್ಪಿತಾಗೆ ಸಿನಿಮಾರಂಗದಲ್ಲಿಅಬ್ಬಾ ಎನ್ನುವಂಥ ಯಶಸ್ಸು ಕಾಣಲಿಲ್ಲ. 2008ರಿಂದ 2014ರ ಅವಧಿಯಲ್ಲಿಅರ್ಪಿತಾ ಅವರು ಬೆಂಗಾಳಿ ಮತ್ತು ಒಡಿಯಾ ಭಾಷೆಯ ಕೆಲವು ಚಿತ್ರಗಳಲ್ಲಿನಟಿಸಿದ್ದಾರೆ. ಆದರೆ, ರಾಜಕೀಯ ಕಾರಿಡಾರ್ನಲ್ಲಿದೊರೆತ ಸಂಪರ್ಕಗಳು ಅರ್ಪಿತಾ ಅವರನ್ನು ಕೋಲ್ಕೊತಾದ ಪ್ರತಿಷ್ಠಿತ ವ್ಯಕ್ತಿಯನ್ನಾಗಿಸಿದವು. ದಕ್ಷಿಣ ಕೋಲ್ಕೊತಾದ ಚೋಕಾ ಪ್ರದೇಶದ ಐಷಾರಾಮಿ ಅಪಾರ್ಟ್ಮೆಂಟ್ನಲ್ಲಿವಾಸ್ತವ್ಯ ಸಾಮಾನ್ಯವಾಯಿತು. ನಗರದಲ್ಲಿರುವ ಹುಕ್ಕಾ ಬಾರ್ಗಳಿಗೆ ಅರ್ಪಿತಾ ನಿತ್ಯದ ಕಸ್ಟಮರ್. ಬ್ಯಾಂಕಾಂಕ್, ಸಿಂಗಾಪುರ ಸೇರಿದಂತೆ ಕೆಲವು ರಾಷ್ಟ್ರಗಳಲ್ಲಿರಜೆ ಮೋಜು ಕಳೆದಿದ್ದಿದೆ. </p><p>ಕೋಲ್ಕೊತಾದ ಹೊರವಲಯದಲ್ಲಿರುವ ಬೆಲ್ಗಾರಿಯಾದಲ್ಲಿವಾಸವಾಗಿದ್ದ ಮಧ್ಯಮ ವರ್ಗದ ಕುಟುಂಬದ ಹಿನ್ನೆಲೆಯಲ್ಲಿಬಂದವರು ಅರ್ಪಿತಾ. ಕಾಲೇಜು ದಿನಗಳಿಂದಲೇ ಮಾಡೆಲಿಂಗ್ನಲ್ಲಿಆಸಕ್ತಿ. ತಂದೆಯ ಮರಣದ ನಂತರ, ಜಾಗ್ರಾಮ್ನ ಉದ್ಯಮಿಯೊಬ್ಬರನ್ನು ವಿವಾಹವಾಗಿದ್ದರು ಎಂಬ ಮಾಹಿತಿ ಈಗ ಹೊರ ಬಿದ್ದಿದೆ. ಆದರೆ, ಈ ಮದುವೆಯ ಬಗ್ಗೆ ಹೆಚ್ಚಿನ ವಿವರಗಳೂ ಇನ್ನೂ ಸಿಕ್ಕಿಲ್ಲ. ಆ ಬಳಿಕ ಚಿತ್ರೋದ್ಯಮಕ್ಕೆ ಮರಳಿದ ಅರ್ಪಿತಾ, ಸುವೇಂದು ನಿರ್ದೇಶನದ ‘ಬಂದೆ ಉತ್ಕಲ್ ಜನನಿ’, ಅಶೋಕ್ ಪಟಿ ಅವರ ‘ಪ್ರೇಮ್ ರೋಗಿ’ ಸೇರಿದಂತೆ ಎಂಟು ಒಡಿಯಾ ಸಿನಿಮಾಗಳಲ್ಲಿನಾಯಕಿಯಾಗಿ ನಟಿಸಿದ್ದಾರೆ. ಈ ಎರಡೂ ಚಿತ್ರಗಳು ಬಾಕ್ಸಾಫಿಸ್ನಲ್ಲಿಹಿಟ್ ಎನಿಸಿಕೊಂಡಿವೆ. 2012ರಲ್ಲಿತೆರೆ ಕಂಡ ‘ರಾಜು ಆವಾರಾ’ ಒಡಿಯಾ ಚಿತ್ರವೇ ಕೊನೆ. ಮತ್ತೆ ಅರ್ಪಿತಾ ಒಡಿಯಾ ಚಿತ್ರದಲ್ಲಿಕಾಣಿಸಿಕೊಂಡಿಲ್ಲ. ಇದಕ್ಕೂ ಮೊದಲು ಕೇಮಿತಿ ಬಂಧನ (2011), ಮು ಕನಾ ಇತೆ ಖರಾಪ್(2010) ಚಿತ್ರಗಳಲ್ಲಿನಟಿಸಿದ್ದಾರೆ. ‘ಭೂತ್ ಇನ್ ರೋಸ್ವಿಲ್ಲೆ’, ‘ಜೀನಾ ದಿ ಎಂಡ್ಲೆಸ್ ಲವ್’, ‘ಬಿದೇರ್ಹಿ ಖೋಂಜೆ ರವೀಂದ್ರಹತ್’, ‘ಮಾಮಾ ಭಗ್ನೆ’ ಮತ್ತು ಪಾರ್ಟನರ್’ ಸೇರಿದಂತೆ ಕೆಲವು ಬೆಂಗಾಲಿ ಸಿನಿಮಾಗಳಲ್ಲಿಸಣ್ಣ ಪಾತ್ರಗಳಲ್ಲಿಅಭಿನಯಿಸಿದ್ದಾರೆ. ಆದರೆ 2014ರಿಂದ ಯಾವುದೇ ಬೆಂಗಾಲಿ ಸಿನಿಮಾದಲ್ಲೂಕಾಣಿಸಿಕೊಂಡಿಲ್ಲಅರ್ಪಿತಾ. </p><p>ಪಾರ್ಥ ಚಟರ್ಜಿ ಅವರ ನಕ್ತಲಾ ಉದಯನ್ ಸಂಘದ 2020 ಸಾಲಿನ ದುರ್ಗಾ ಪೂಜೆಗೆ ಅರ್ಪಿತಾ ಬ್ರ್ಯಾಂಡ್ ಅಂಬಾಸಿಡರ್ ಆಗಿದ್ದರು. ಆ ವೇಳೆಯಲ್ಲಿಅರ್ಪಿತಾ, ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಮತ್ತು ಪಾರ್ಥ ಚಟರ್ಜಿ ಅವರ ಜತೆಗೆ ವೇದಿಕೆ ಹಂಚಿಕೊಂಡಿರುವ ಫೋಟೊಗಳು, ಕಂತೆ ಕಂತೆ ನೋಟು ಸಿಗುತ್ತಿದ್ದಂತೆ ಭಾರಿ ವೈರಲ್ ಆದವು. ಪ್ರತಿಪಕ್ಷ ಗಳು, ಟಿಎಂಸಿ ಜತೆ ಅರ್ಪಿತಾ ಇದ್ದಾರೆಂಬುದಕ್ಕೆ ಈ ಫೋಟೊಗಳು ಸಾಕ್ಷಿಯಾಗಿವೆ ಎಂದು ಆರೋಪಿಸಿವೆ. ಈ ಫೋಟೊಗಳನ್ನು ಪ್ರತಿಪಕ್ಷ ದ ನಾಯಕ ಸುವೇಂದು ಅಧಿಕಾರಿ ಟ್ವಿಟರ್ನಲ್ಲಿಹಂಚಿಕೊಂಡು, ಟಿಎಂಸಿಯನ್ನು ಹಿಗ್ಗಾಮುಗ್ಗಾ ಟೀಕಿಸಿದ್ದಾರೆ. </p><p><b>ದೀದಿಯ ಅತ್ಯಾಪ್ತ ಪಾರ್ಥ ಚಟರ್ಜಿ<br /></b>ಈ ಹಿಂದೆ ಶಾರದಾ ಮತ್ತು ನಾರದ ಹಗರಣವು ಮಮತಾ ಬ್ಯಾನರ್ಜಿ ಸುತ್ತ ಇದ್ದ ಬಹುತೇಕ ನಾಯಕರನ್ನು ಸುತ್ತಿಕೊಂಡಿತ್ತು. ಆ ಸುಳಿಯಲ್ಲಿಸಿಲುಕಿಕೊಳ್ಳದೇ ಇದ್ದ ಏಕೈಕ ಹಿರಿಯ ಸಚಿವ ಈ ಪಾರ್ಥ ಚಟರ್ಜಿ. ಆ ಬಗ್ಗೆ ಅವರು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದರು. ಈಗ ಅದೇ ವ್ಯಕ್ತಿಯ ಸುತ್ತ ಶಿಕ್ಷ ಕರ ನೇಮಕ ಹಗರಣ ಸುತ್ತಿಕೊಂಡಿದೆ! </p><p>ಕಾಲೇಜು ದಿನಗಳಿಂದಲೇ ನಾಯಕತ್ವ ಗುಣಗಳನ್ನು ಪ್ರದರ್ಶಿಸಿದ್ದ ಪಾರ್ಥ ಅವರು, 1960ರ ದಶಕದಲ್ಲಿಕಾಂಗ್ರೆಸ್ ಮೂಲಕ ರಾಜಕಾರಣ ಆರಂಭಿಸಿದರು. ಶುಭ್ರತ್ ಮುಖರ್ಜಿ ಮತ್ತು ಪ್ರಿಯ ರಂಜನ್ ದಾಸಮುನ್ಷಿ ಅವರು ಪಾರ್ಥ ಅವರಿಗೆ ರೋಲ್ ಮಾಡೆಲ್ ರಾಜಕಾರಣಿಗಳು. ವಿದ್ಯಾರ್ಥಿಗಳ ದಿನಗಳಲ್ಲಿರಾಜಕೀಯದಲ್ಲಿದ್ದೂ ಉನ್ನತ ಶಿಕ್ಷ ಣವನ್ನು ಪಡೆದುಕೊಂಡ ಕೆಲವೇ ಕೆಲವು ಬಂಗಾಳದ ನಾಯಕರಲ್ಲಿಇವರು ಒಬ್ಬರು. ಕಲ್ಕತ್ತಾ ವಿವಿಯಿಂದ ಪಿಜಿ ಪದವಿ ಪಡೆದ ಅವರು, ಇಂಡಿಯನ್ ಇನ್ಸ್ ಟಿಟ್ಯೂಟ್ ಆಫ್ ಸೋಷಿಯಲ್ ವೆಲೆಧೀರ್ ಆ್ಯಂಡ್ ಬಿಸಿನೆಸ್ ಮ್ಯಾನೇಜ್ಮೆಂಟ್ನಿಂದ ಎಂಬಿಎ ಪದವಿ ಪಡೆದರು. ಕಾರ್ಪೊರೇಟ್ ಕಂಪನಿಯಲ್ಲಿಸ್ವಲ್ಪ ದಿನಗಳ ಕಾಲ ಎಚ್ಆರ್ ಆಗಿ ಕೆಲಸ ಮಾಡಿದ ಅನುಭವವಿದೆ.</p><p>ಟಿಎಂಸಿ ಸರ್ಕಲ್ನಲ್ಲಿ‘ಪಾರ್ಥ ದಾ’ ಎಂದೇ ಖ್ಯಾತರಾಗಿದ್ದ ಅವರೇನೂ ಆಕರ್ಷಕ ಭಾಷಣಕಾರರಲ್ಲ. ಬದಲಿಗೆ ಅತ್ಯುತ್ತಮ ಸಂಘಟಕ. ಇಂದು ಟಿಎಂಸಿ ಏನಾದರೂ ಬಂಗಾಳದಲ್ಲಿತಳಮಟ್ಟದಲ್ಲಿಗಟ್ಟಿ ಕಾರ್ಯಕರ್ತರ ಪಡೆಯನ್ನು ಹೊಂದಿದೆ ಎಂದರೆ ಅದರಲ್ಲಿಪಾರ್ಥ ಅವರ ಕೊಡಗೆ ಅಪಾರ. ಆ ಕಾರಣಕ್ಕಾಗಿಯೇ ಮಮತಾ ದೀದಿ ಅವರನ್ನು ತಮ್ಮ ಅತ್ಯಾಪ್ತ ಬಳಗಕ್ಕೆ ಸೇರಿಸಿಕೊಂಡಿದ್ದರು. ಕಾಂಗ್ರೆಸ್ನಿಂದ ಟಿಎಂಸಿಗೆ ಹಿರಿಯ ನಾಯಕರೊಂದಿಗೆ ಬಂದ ಅವರು, ನಿಧಾನ ಮತ್ತು ನಿರಂತರ ಗತಿಯಲ್ಲಿತಮ್ಮ ರಾಜಕೀಯ ಬೆಳವಣಿಗೆಯನ್ನು ಕಂಡುಕೊಂಡರು. ದಕ್ಷಿಣ ಕೋಲ್ಕೊತಾ ಮೂಲದ ಪಾರ್ಥ ಅವರು, ಬಂಗಾಳ ವಿಧಾನಸಭೆಗೆ 2001ರಲ್ಲಿಬೆಹಲಾ ಪಶ್ಚಿಮ ಕ್ಷೇತ್ರದಿಂದ ಮೊದಲ ಬಾರಿಗೆ ಸ್ಪರ್ಧಿಸಿ ಗೆದ್ದರು. ಆ ಬಳಿಕ ಸತತ ಐದು ಅವಧಿಗೆ ಗೆದ್ದಿದ್ದಾರೆ. 2011ರಲ್ಲಿಟಿಎಂಸಿ ಅಧಿಕಾರಕ್ಕೆ ಬಂದಾಗ ಪ್ರಮುಖ ಖಾತೆಗಳೇ ಇವರನ್ನು ಅರಸಿಕೊಂಡು ಬಂದವು. 2014ರಿಂದಲೂ ಅವರ ಸಂಪುಟ ದರ್ಜೆ ಸಚಿವರಾಗಿ ಕಾರ್ಯ ನಿರ್ವಹಿಸುತ್ತಾ ಬಂದಿದ್ದಾರೆ. ಬಂಗಾಳ ವಿಧಾನಸಭೆಯಲ್ಲಿಪ್ರತಿಪಕ್ಷ ದ ನಾಯಕರಾಗಿಯೂ ಪಾರ್ಥ ಕಾರ್ಯಧಿನಿರ್ವಹಿಸಿದ್ದಾರೆ. ಈಗ ಹಗರಣದ ಹಿನ್ನೆಲೆಯಲ್ಲಿಟಿಎಂಸಿ ಪಕ್ಷ ದಿಂದಲೇ ಅವರನ್ನು ಕಿತ್ತು ಹಾಕಲಾಗಿದೆ.</p><p>‘ಎಲ್ಲಬಣ್ಣಗಳನ್ನು ಮಸಿ ನುಂಗಿತು’ ಎನ್ನುವ ಹಾಗೆ, ಪಾರ್ಥ ಚಟರ್ಜಿ ಅವರೀಗ ಜೈಲು ಕಂಬಿ ಎಣಿಸುತ್ತಿದ್ದಾರೆ. ಹಣದ ಲಾಲಸೆ, ಅಧಿಕಾರದ ದರ್ಪಗಳೆರಡೂ ಸೇರಿ ಬಿಟ್ಟರೆ ಅನಾಹುತ ಗ್ಯಾರಂಟಿ. ರಾಜಕೀಯ ಇತಿಹಾಸದಲ್ಲಿಇದಕ್ಕೆ ಸಾಕಷ್ಟು ಉದಾಹರಣೆಗಳಿವೆ. ಆದರೂ ರಾಜಕೀಯ ನಾಯಕರು ಬುದ್ಧಿ ಕಲಿಯುವುದಿಲ್ಲ. ಅಪಾರ ಅನುಭವವಿದ್ದೂ ಅತಿಆಸೆಗೆ ರಾಜಕೀಯ ಜೀವನಕ್ಕೆ ಕೊಳ್ಳಿ ಇಟ್ಟುಕೊಂಡಿದ್ದು ಪಾರ್ಥ; ಅತಿ ಮಹತ್ವಾಕಾಂಕ್ಷಿಯೇ ಅರ್ಪಿತಾ ಅವರ ಜೀವನಕ್ಕೆ ಮುಸುಕು ಕವಿಯುವಂತೆ ಮಾಡಿತು!</p><div class="separator" style="clear: both; text-align: center;"><a href="https://blogger.googleusercontent.com/img/b/R29vZ2xl/AVvXsEhIWqAKmOvueICXEvQIStDiAFVH8nqONafNiRnw7GeJrqyy9ergvMkGrHi5GgLd7h-a9E3rBeJSuUaICAmMz-7UlbIBAFxzhFUgyi3v60GAMfTHQMnzU7Anvjc13lVDESjhsehLZ1OikjEIIXokSPF5mwrBbvDdc8MBbdQmLD76-0KtrpmgiRn_VM-1/s3227/mukharjee.jpg" imageanchor="1" style="margin-left: 1em; margin-right: 1em;"><img border="0" data-original-height="3227" data-original-width="1665" height="640" src="https://blogger.googleusercontent.com/img/b/R29vZ2xl/AVvXsEhIWqAKmOvueICXEvQIStDiAFVH8nqONafNiRnw7GeJrqyy9ergvMkGrHi5GgLd7h-a9E3rBeJSuUaICAmMz-7UlbIBAFxzhFUgyi3v60GAMfTHQMnzU7Anvjc13lVDESjhsehLZ1OikjEIIXokSPF5mwrBbvDdc8MBbdQmLD76-0KtrpmgiRn_VM-1/w330-h640/mukharjee.jpg" width="330" /></a></div><br /><p><br /></p><p><span style="color: #f4cccc;">ಈ ಲೇಖನವು ವಿಜಯ ಕರ್ನಾಟಕದ 2022ರ ಜುಲೈ 31ರ ಸಂಚಿಕೆಯಲ್ಲಿ ಪ್ರಕಟವಾಗಿದೆ.</span></p>ಮಲ್ಲಿಕಾಜು೯ನ ತಿಪ್ಪಾರhttp://www.blogger.com/profile/03103441547302200527noreply@blogger.com0tag:blogger.com,1999:blog-6897854439810696140.post-30437324537225785192022-07-15T00:02:00.000+05:302022-07-15T00:02:22.791+05:30Briton former PM Boris Johnson: ಮೋಜುಗಾರ ಬೋರಿಸ್ ಜಾನ್ಸನ್<p><b><i style="background-color: #f4cccc;">ಬೋರಿಸ್ ಜಾನ್ಸನ್ ಬ್ರಿಟನ್ ಪಿಎಂ ಸ್ಥಾನವನ್ನು ತೊರೆದಿದ್ದಾರೆ. ವಿಲಕ್ಷ ಣ ವ್ಯಕ್ತಿತ್ವದೊಂದಿಗೆ ನಾಯಕತ್ವವನ್ನು ಪ್ರದರ್ಶಿಸುತ್ತಿದ್ದ ಬೋರಿಸ್ ಜೀವನವೇ ಮಜವಾಗಿದೆ.</i></b></p><p><b><i style="background-color: #f4cccc;"><br /></i></b></p><p><b>- ಮಲ್ಲಿಕಾರ್ಜುನ ತಿಪ್ಪಾರ</b><br />ಐರೋಪ್ಯ ಒಕ್ಕೂಟದಿಂದ ಬ್ರಿಟನ್ ಹೊರ ಬರುವ ‘ಬ್ರೆಕ್ಸಿಟ್’ ಪ್ರಕ್ರಿಯೆಯನ್ನು ಅಡೆ-ತಡೆಗಳ ಮಧ್ಯೆಯೇ ಪೂರ್ಣಗೊಳಿಸಿದ ಬೋರಿಸ್ ಜಾನ್ಸನ್, ಪ್ರಧಾನಿ ಪಟ್ಟದಿಂದಲೇ ‘ಎಕ್ಸಿಟ್’ ಆಗಿದ್ದಾರೆ. ಇತ್ತೀಚಿನ ವರ್ಷಗಳಲ್ಲಿಬ್ರಿಟನ್ ಕಂಡ ‘ವಿಲಕ್ಷ ಣ’ ಪ್ರಧಾನಿ ಅವರು. ತಮ್ಮ ಮ್ಯಾನರಿಸಂ ಹಾಗೂ ನಿರ್ಧಾರಗಳ ಮೂಲಕ ಅದನ್ನು ಆಗಾಗ ಸಾಬೀತು ಮಾಡಿದ್ದಾರೆ. 58 ವರ್ಷದ ಬೋರಿಸ್ ಮೇಲ್ನೋಟಕ್ಕೆ ಹುಡುಗಾಟದ ಹುಡುಗನಂತೆ ಕಂಡರೂ, ಆಳದಲ್ಲಿಅವರಲ್ಲೊಬ್ಬ ನಾಯಕನಿದ್ದಾನೆ, ಸಂದರ್ಭ ಬಂದಾಗೆಲ್ಲಗಟ್ಟಿ ನಿರ್ಧಾರಕ್ಕೆ ಹಿಂಜರಿಯುವುದಿಲ್ಲಎಂಬುದನ್ನು ಈ ಮೂರು ವರ್ಷಗಳಲ್ಲಿಮನದಟ್ಟು ಮಾಡಿಸಿದ್ದಾರೆ.</p><p>ಬೋರಿಸ್ ಅವರು ಹಗರಣಗಳಲ್ಲೇ ಕಾಲ ಹರಣ ಮಾಡಿದಂತಿದೆ. ಕೆಲವೊಂದರಲ್ಲಿಅವರೇ ನೇರವಾಗಿ ಭಾಗಿಯಾದರೆ, ಮತ್ತೊಂದಿಷ್ಟು ಅವರಿಗೆ ಸಂಬಂಧ ಇರದಿದ್ದರೂ ತಲೆ ಕೊಡಬೇಕಾದ ಪರಿಸ್ಥಿತಿ ಎದುರಾಯಿತು. ಅವರ ರಾಜೀನಾಮೆಯ ಕೊನೆಯ ಪರದೆ ಎಳೆದಿದ್ದು, ನಾರಾಯಣಮೂರ್ತಿ ಅವರ ಅಳಿಯ ಹಾಗೂ ವಿತ್ತ ಸಚಿವರಾಗಿದ್ದ ರಿಷಿ ಸುನಾಕ್ ಮತ್ತು ಪಾಕಿಸ್ತಾನ ಮೂಲದ, ಆರೋಗ್ಯ ಸಚಿವ ಸಾಜಿದ್ ಜಾವಿದ್. ಇವರಿಧಿಬ್ಬರೂ ತಮ್ಮ ಹುದ್ದೆಗಳಿಂದ ನಿರ್ಗಮಿಸಿ, ಬೋರಿಸ್ ಅವರು ಪ್ರಧಾನಿ ಹುದ್ದೆಯನ್ನು ತ್ಯಜಿಸಲೇಬೇಕಾದ ಒತ್ತಡ ಸೃಷ್ಟಿಸಿದರು. ರಾಜಕೀಯವಾಗಿ ಬ್ರಿಟನ್ನ ಅತ್ಯುಧಿನ್ನತ ಹುದ್ದೆಗೇರಿದ ಬೋರಿಸ್ ಅವರ ಲೈಫ್ ಅಷ್ಟೇ ಕಲರ್ಫುಲ್. ವರ್ಣರಂಜಿತ ವ್ಯಕ್ತಿತ್ವ. ವೃತ್ತಿ, ಮದುವೆ ಹಾಗೂ ರಾಜಕೀಯದಲ್ಲಿಅವರದ್ದು ಎಂದೂ ಸರಳಧಿರೇಖೆಯಂಥ ಬದುಕಲ್ಲ; ವಕ್ರಗೆರೆಗಳೇ ಸೇರಿ ಹುಟ್ಟಿದ ಚಿತ್ತಾರ. 37ನೇ ವಯಸ್ಸಿಗೆ ಬ್ರಿಟನ್ ಸಂಸತ್ತಿಗೆ ಆಯ್ಕೆಯಾದ ಅವರು 7 ವರ್ಷ ಅನುಭವ ಪಡೆದರು. 2008ರಿಂದ 2016ರವರೆಗೆ ಲಂಡನ್ನ ಮೇಯರ್ ಆಗಿದ್ದರು. 2016ರಿಂದ 2018ರವರೆಗೆ ಬ್ರಿಟನ್ನ ವಿದೇಶಾಂಗ ಸಚಿವರಾಗಿ ತಮ್ಮ ವ್ಯಾಪ್ತಿಯನ್ನು ಇನ್ನಷ್ಟು ವಿಸ್ತರಿಸಿದರು. ಮೇಯರ್ ಆಗಿದ್ದ ಕಾಲದಲ್ಲಿಒಲಿಂಪಿಕ್ಸ್ ಕೂಟವನ್ನು ಯಶಸ್ವಿಯಾಗಿ ನಡೆಸಿದ ಹೆಗ್ಗಳಿಕೆ ಅವರಿಗಿದೆ. ಇದೇ ಸಾಧನೆಯೇ ಅವರಿಗೆ ಕನ್ಸರ್ವೇಟಿವ್ ಪಕ್ಷ ದೊಳಗೆ ಗಟ್ಟಿ ನಾಯಕನ ಸ್ಥಾನ ಒದಗಿಸಿ, ಬ್ರಿಟನ್ ಪ್ರಧಾನಿ ಹುದ್ದೆಯವರೆಗೂ ಕರೆ ತಂದಿತು. </p><div class="separator" style="clear: both; text-align: center;"><a href="https://blogger.googleusercontent.com/img/b/R29vZ2xl/AVvXsEin8G8UIZQlfP5x-I0oy2KnvieWRE8zQRae2jVpeMtb0p9vfXwhoee5tfxZvItASjUnHGOMcZJCSOrV9tamz9B14sn7TQ-oSf-zxhxbvqtmVFt0ngKN47C1ud8QS8X03MKZfWpdPe2qJ3pw7ssypQVglMcYz9HMUZWynOWSxpdgX0CbyG8D6dZFX5uC/s1125/Boris_Johnson.jpg" imageanchor="1" style="clear: left; float: left; margin-bottom: 1em; margin-right: 1em;"><img border="0" data-original-height="1125" data-original-width="800" height="320" src="https://blogger.googleusercontent.com/img/b/R29vZ2xl/AVvXsEin8G8UIZQlfP5x-I0oy2KnvieWRE8zQRae2jVpeMtb0p9vfXwhoee5tfxZvItASjUnHGOMcZJCSOrV9tamz9B14sn7TQ-oSf-zxhxbvqtmVFt0ngKN47C1ud8QS8X03MKZfWpdPe2qJ3pw7ssypQVglMcYz9HMUZWynOWSxpdgX0CbyG8D6dZFX5uC/s320/Boris_Johnson.jpg" width="228" /></a></div><p><b>· ಹಲವು ಅಡೆತಡೆಗಳ ಮಧ್ಯೆಯೇ ಬ್ರೆಕ್ಸಿಟ್ ಪ್ರಕ್ರಿಯೆ ಪೂರ್ಣಗೊಳಿಸಿದ ಬ್ರಿಟನ್ನ ಪ್ರಧಾನಿ<br /></b><b>· ಹಲವು ಹಗರಣಗಳು, ಅಪವಾದಗಳು ಬೋರಿಸ್ ನೇತೃತ್ವದ ಸರಕಾರ ವಿಶ್ವಾಸ ಕಳೆದುಕೊಳ್ಳಲು ಕಾರಣ<br /></b><b>· ಲಂಡನ್ ಮೇಯರ್ ಆಗಿ ಬೋರಿಸ್ ಅತ್ಯುತ್ತಮ ಕೆಲಸ ಮಾಡಿ ಹೆಸರುವಾಸಿಯಾಗಿದ್ದರು</b></p><p>ಬೋರಿಸ್ ಪೂರ್ತಿ ಹೆಸರು ಅಲೆಕ್ಸಾಂಡರ್ ಬೋರಿಸ್ ಡಿ ಪಿಫೆಲ್ ಜಾನ್ಸನ್. ಅಮೆರಿಕದ ನ್ಯೂಯಾರ್ಕ್ ಸಿಟಿಯಲ್ಲಿ1964 ಜೂನ್ 19ರಂದು ಜನಿಸಿದರು. ತಂದೆ ಇಂಗ್ಲಿಷ್ಮನ್ ಸ್ಟ್ಯಾನ್ಲಿಜಾನ್ಸನ್. ತಾಯಿ ಷಾರ್ಲೆಟ್ ಫಾಸೆಟ್. ಕಾಲೇಜಿನಲ್ಲಿದ್ದಾಗಲೇ ಇವರಿಬ್ಬರಿಗೆ ಬೋರಿಸ್ ಜನಿಸಿದರು. ಹಾಗಾಗಿ, ಬೋರಿಸ್ ಜಾನ್ಸನ್ ಅವರಿಗೆ ದ್ವಿಪೌರತ್ವವಿತ್ತು. ಆದರೆ, ತೆರಿಗೆ ಭಾರ ತಾಳಲಾರದೇ 2016ರಲ್ಲಿಅಮೆರಿಕದ ಪೌರತ್ವವನ್ನು ಬಿಟ್ಟುಕೊಟ್ಟರು. ಬೋರಿಸ್ಗೆ ಐದು ವರ್ಷ ಆದಾಗ, ಅವರ ತಂದೆ ಬ್ರಿಟನ್ಗೆ ಮರಳಿದರು. ಬಾಲ್ಯದಲ್ಲಿಬೋರಿಸ್ ಕಿವುಡರಾಗಿದ್ದರು. ಆದರೆ, ಈ ಸಮಸ್ಯಯೇನೂ ದೀರ್ಘಾವಧಿಗೆ ಇರಲಿಲ್ಲ. ಆಕ್ಸ್ಫರ್ಡ್ನಲ್ಲಿಶಿಕ್ಷ ಣವನ್ನು ಪಡೆದುಕೊಂಡರು. </p><p>1987ರಲ್ಲಿಕಾಲೇಜ್ ಶಿಕ್ಷ ಣ ಪೂರೈಸಿದ ಬಳಿಕ ದಿ ಟೈಮ್ಸ್ನಲ್ಲಿಪತ್ರಕರ್ತರಾಗಿ ಕೆಲಸಕ್ಕೆ ಸೇರಿಕೊಂಡರು. ವರದಿ ವೇಳೆ ಮೂಲವನ್ನು ತಪ್ಪಾಗಿ ಉಲ್ಲೇಖಿಸಿದ ಪರಿಣಾಮ ಅವರನ್ನು ಕೆಲಸದಿಂದ ಕಿತ್ತು ಹಾಕಲಾಯಿತು. ಇಷ್ಟಾಗಿಯೂ ಬೋರಿಸ್ ದಿ ಡೈಲಿ ಟೆಲಿಗ್ರಾಫ್, ದಿ ಸ್ಪೆಕ್ಟೇಟರ್ನಂಥ ಪತ್ರಿಕೆಗಳಲ್ಲಿಕೆಲಸವನ್ನು ಪಡೆದುಕೊಳ್ಳಲು ಯಶಸ್ವಿಯಾದರೂ, ಹೇಳಿಕೊಳ್ಳುವಂಥ ಸಕ್ಸೆಸ್ ಸಿಗಲಿಲ್ಲ. ಆದರೆ, ಕಡಿಮೆ ಅವಧಿಯಲ್ಲೇ ಬಲಪಂಥೀಯ ಒಲವು ಉಳ್ಳ ಓದುಗರನ್ನು ತಮ್ಮತ್ತ ಸೆಳೆಯಲು ಯಶಸ್ವಿಯಾದರು. 80ರ ದಶಕದಲ್ಲಿ100 ಜನರ ಸಾವಿಗೆ ಕಾರಣವಾದ ಫುಟ್ಬಾಲ್ ಸ್ಟೇಡಿಯಂ ದುರಂತದ ಬಗ್ಗೆ ವಕ್ರವಾಗಿ ಮಾತನಾಡಿ, ಟೀಕೆಗೆ ಗುರಿಯಾಗಿದ್ದರು. ಸಂಪಾದಕೀಯಕ್ಕೆ ಸಂಬಂಧಿಸಿದಂತೆ ಸಂವೇದನಾ ರಹಿತವಾಗಿ ಮತ್ತು ಅಶ್ಲೀಲ ಕಮೆಂಟ್ ಮಾಡಿ, ಕ್ಷ ಮೆ ಕೇಳಿದ ಘಟನೆ 2004ರಲ್ಲಿನಡೆಯಿತು.</p><p>ಬೋರಿಸ್ ದೈಹಿಕ ಚಟುವಟಿಕೆಗಳು ಮತ್ತು ವ್ಯಾಯಾಮಗಳನ್ನು ಬಲವಾಗಿ ಪ್ರತಿಪಾದಿಸುತ್ತಾರೆ. ಅವರಿಗೆ ಫುಟ್ಬಾಲ್, ರಗ್ಬಿ ತುಂಬಾ ಇಷ್ಟ. ಜಾಗಿಂಗ್ ಇನ್ನೂ ಇಷ್ಟ. ಹಾಗಾಗಿ, ಲಂಡನ್ನ ಬೀದಿಗಳಲ್ಲಿಜಾಗಿಂಗ್ ಮಾಡುತ್ತಾ ಸೈಕಲ್ ರೈಡ್ ಮಾಡುತ್ತಾ ಹೋಗುವುದನ್ನು ಜನ ನೋಡಬಹುದು. ರಗ್ಬಿ ವಿಷಯದಲ್ಲಿಇವರ ಭಾವಾವೇಶ ಎಷ್ಟೆಂದರೆ, ವಿದೇಶಾಂಗ ಕಾರ್ಯದರ್ಶಿಯಾಗಿ ಜಪಾನ್ಗೆ ಹೋಗಿದ್ದಾಗ ಆಟವಾಡುತ್ತಾ 10 ವರ್ಷದ ಬಾಲಕನೊಬ್ಬನನ್ನು ದೂಡಿ ಹಾಕಿದ್ದು ಭಾರಿ ಸುದ್ದಿಯಾಗಿತ್ತು. 2006ರಲ್ಲಿಫಿಫಾ ವರ್ಲ್ಡ್ ಕಪ್ ಪಂದ್ಯಾವಳಿ ವೇಳೆಯೂ ಬೋರಿಸ್ ಟೀಕೆಗೆ ಗುರಿಯಾಗಿದ್ದರು.</p><p>ರಾಸಲೀಲೆ ಕತೆಗಳು, ಹಗರಣಗಳು, ವಿಲಕ್ಷ ಣ ವ್ಯಕ್ತಿತ್ವದಿಂದಲೇ ಬೋರಿಸ್ ಹೊರ ಜಗತ್ತಿಗೆ ಹೆಚ್ಚು ಗೊತ್ತು. ಆದರೆ, ‘ಮಾಡೆಲ್ ಬಸ್’ಗಳನ್ನು ತಯಾರಿಸುವ ಪ್ರತಿಭೆ ಹೊಂದಿದ್ದಾರೆಂಬುದು ಬಹಳಷ್ಟು ಜನರಿಗೆ ಗೊತ್ತಿಲ್ಲ. ಹಾಗಂತ ಅವರೇನೂ ಫ್ಯಾನ್ಸಿ ಬಸ್ಗಳನ್ನು ಮಾಡುವುದಿಲ್ಲ. ಬದಲಿಗೆ, ಹಳೆಯ ಮದ್ಯದ ಬಾಕ್ಸ್ಗಳು, ಪೇಂಟ್ಸ್ ಬಳಸಿಕೊಂಡು ಉತ್ಕೃಷ್ಟವಾದ ಮಾಡೆಲ್ ಬಸ್ಗಳನ್ನು ಮಾಡುವ ಹವ್ಯಾಸ ಬೆಳೆಸಿಕೊಂಡಿದ್ದಾರೆ. ಬಹುಶಃ ಅವರ ಈ ಹವ್ಯಾಸವೇ ‘ಬೋರಿಸ್ ಬಸ್’ ಯೋಜನೆಗೆ ಕಾರಣವಾಗಿರಬಹುದು. ಲಂಡನ್ನಲ್ಲಿಹೈಬ್ರಿಡ್ ಸಾರ್ವಜನಿಕ ಬಸ್ ಸೌಲಭ್ಯ ಕಲ್ಪಿಸಿದ್ದರು. ಆದರೆ, ಲಂಡನ್ ಮೇಯರ್ ಹುದ್ದೆಯಿಂದ ಕೆಳಗಿಳಿಯುಧಿತ್ತಿದ್ದಂತೆ ಆ ಯೋಜನೆ ಕೂಡ ರದ್ದಾಯಿತು. </p><p>ಜಾನ್ಸನ್ ಅವರ ಎರಡನೇ ಪತ್ನಿಧಿಯಾಗಿದ್ದ ಮರೀನಾ ವೀಲರ್ ಭಾರತ ಮೂಲಧಿದವರು. ಇವರು ಪತ್ರಕರ್ತ ಸರ್ ಚಾರ್ಲ್ಸ್ ವೀಲರ್ ಮತ್ತು ದೀಪ್ ಸಿಂಗ್ ಮಗಳು. ಈ ದೀಪ್ ಸಿಂಗ್ ಯಾರೆಂದರೆ, ಖ್ಯಾತ ಬರಹಗಾರ ಖುಷ್ವಂತ್ ಸಿಂಗ್ ಅವರ ತಮ್ಮ ದಲ್ಜಿತ್ ಸಿಂಗ್ ಅವರ ಮೊದಲ ಪತ್ನಿ. ಹೀಗೆ, ಆಕೆ ಭಾರತದ ಮಗಳು. ಹಾಗಾಗಿ ಜಾನ್ಸನ್ ಕೂಡ ಭಾರತದ ಅಳಿಯ ಎನ್ನಬಹುದು. ಈ ಮದುವೆ 2020ರಲ್ಲಿವಿಚ್ಛೇದನದೊಂದಿಗೆ ಸಮಾಪ್ತಿಯಾಯಿತು. 2021ರಲ್ಲಿಕ್ಲೈಮೆಟ್ ಆ್ಯಕ್ಟಿವಿಸ್ಟ್ ಕ್ಯಾರಿ ಸೈಮಂಡ್ಸ್ ಅವರನ್ನು ಮದುವೆಯಾಗಿದ್ದಾರೆ. ಇವರ ಮೊದಲನೆಯ ಪತ್ನಿ ಹೆಸರು ಅಲ್ಲೆಗ್ರಾ. ಇವರನ್ನು 1987ರಲ್ಲಿಮದವೆಯಾದರು, 1993ರಲ್ಲಿವಿಚ್ಛೇದನ ನೀಡಿದರು. </p><p><b>· ಅಮೆರಿಕ ಮತ್ತು ಇಂಗ್ಲೆಡ್ ದ್ವಿಪೌರತ್ವ ಹೊಂದಿದ್ದ ಜಾನ್ಸನ್ ಅಮೆರಿಕ ಪೌರತ್ವ ತ್ಯಜಿಸಿದ್ದಾರೆ<br />· ದಿ ಟೈಮ್ಸ್, ದಿ ಸ್ಪೆಕ್ಟೇಟರ್, ದಿ ಟೆಲಿಗ್ರಾಫ್ ಪತ್ರಿಕೆಗಳಲ್ಲಿಕೆಲಸ, ಅಂಥ ಸಕ್ಸೆಸ್ ಏನೂ ಸಿಗಲಿಲ್ಲ<br />· ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿರುವ ಬೋರಿಸ್ ಮುಂದಿನ ನಡೆಯ ಬಗ್ಗೆ ಕುತೂಹಲ</b></p><p>ಬೋರಿಸ್ ದಿ ಸ್ಪೆಕ್ಟೇಟರ್ ಪತ್ರಿಕೆಯಲ್ಲಿಕೆಲಸ ಮಾಡುತ್ತಿದ್ದಾಗ ಇಬ್ಬರು ಮಹಿಳೆರ ಮೇಲೆ ಕೈ ಹಾಕಿದ್ದರಂತೆ. ಮುಂದೆ ಪ್ರಧಾನಿಯಾದಾಗ ಆ ಮಹಿಳೆಯರು ಈ ವಿಷಯವನ್ನು ಬಹಿರಂಗಪಡಿಸಿದರು. ಶಾಡೋ ಆರ್ಟ್ ಮಿನಿಸ್ಟರ್ ಆಗಿದ್ದಾಗ ಪೆಟ್ರೋನೆಲ್ಲಾವ್ಯಾಟ್ ಜತೆಗಿನ ಅನೈತಿಕ ಸಂಬಂಧ ಹೊರಬೀಳುತ್ತಿದ್ದಂತೆ ಬೋರಿಸ್ 2004ರಲ್ಲಿತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು. 2009ರಲ್ಲಿಲಂಡನ್ ಮೇಯರ್ ಆಗಿದ್ದಾಗ, ಹೆಲೆನ್ ಮ್ಯಾಕಿನ್ರ್ಟೈ ಎಂಬಾಕೆ ಜತೆ ದೈಹಿಕ ಸಂಪರ್ಕದಲ್ಲಿದ್ದರು. ಅಲ್ಲದೇ ಹೆಣ್ಣು ಮಗುವಿನ ತಂದೆ ಕೂಡ ಆದರು. ಬೋರಿಸ್ ರಾಸಲೀಲೆ ಕತೆಗಳು ಬ್ರಿಟನ್ನ ಟ್ಯಾಬ್ಲಾಯ್ಡ್ಗಳಿಗೆ ಭಾರಿ ಸುದ್ದಿ ಭೋಜನವನ್ನು ಒದಗಿಸುತ್ತಿದ್ದವು. </p><p>ಏನೇ ಆಗಲಿ, ಬ್ರಿಟನ್ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಮೆಚ್ಚಿಕೊಳ್ಳಧಿಲೇಬೇಕು. ತಮ್ಮದೇ ಪಕ್ಷ ದ ನಾಯಕನೊಬ್ಬ ಹಾದಿ ತಪ್ಪುತ್ತಿರುವುದು ಗೊತ್ತಾಗುಧಿತ್ತಿದ್ದಂತೆ ಅದನ್ನು ಪ್ರಜಾಸತ್ತಾತ್ಮಕ ರೀತಿಯಲ್ಲಿಪ್ರತಿಭಟಿಸುತ್ತಾರೆ, ಪಕ್ಷ ದೊಳಗೇ ಭಿನ್ನಭಿಪ್ರಾಯಗಳಿಗೆ ಬೆಲೆ ನೀಡುತ್ತಾರೆ. ಈ ಒಂದು ಗುಣವೇ ಜಗತ್ತಿನ ಎಲ್ಲರಾಷ್ಟ್ರಗಳ ಪ್ರಜಾ ಪ್ರಭುತ್ವಕ್ಕೆ ಮಾದರಿಯಾಗಿದೆ. ಅದೇ ಮೌಲ್ಯಗಳಿಗೆ ಬೆಲೆ ಕೊಟ್ಟು ಬೋರಿಸ್ ಈಗ ಬ್ರಿಟನ್ ಪದ ಚ್ಯುತರಾಗಿಧಿದ್ದಾರೆ. ಹಾಗಾದರೆ, ಅವರ ಮುಂದಿರುವ ದಾರಿಗಳೇನು? ಅವರೇನು ಮಾಡುತ್ತಾರೆಂಬ ಪ್ರಶ್ನೆಗಳಿಗೆ ಬ್ರಿಟನ್ನಿಗರು ಉತ್ತರ ಹುಡುಕುಧಿತ್ತಿದ್ದಾರೆ. ರಾಜಕೀಯದಲ್ಲಿಏನು ಬೇಕಾದರೂ ಆಗಬಧಿಹುದು. ಇಂದು ಹೀರೊ ಆದವರು ನಾಳೆ ವಿಲನ್ ಆಗಬಹುದು; ವಿಲನ್ಗಳು ಹೀರೊ ಆಗಬಹುದು. ಮುಂದಿನ ಪ್ರಧಾನಿ ಆಯ್ಕೆಯವರೆಗೂ ಅವರೇ ಮುಂದುಧಿವರಿಯುತ್ತಾರೆ. ಆ ಬಳಿಕ ಏನು ಮಾಡಲಿ ದ್ದಾರೆಂಬುದನ್ನು ಕಾದು ನೋಡಬೇಕು.</p><div class="separator" style="clear: both; text-align: center;"><a href="https://blogger.googleusercontent.com/img/b/R29vZ2xl/AVvXsEgqSYx5drDmE55ykC3ePHmmNVv_k5qSlhdGkzOqFkgKqjTWuPnIWEB6XwD-0RlZZQu8anZcfunfHPTcWNb4bAtXL351rFJ_EM8AYYGR7Itqx0VeNB-QgScdy8TeDpzRvqUAX_SMKHwxog2if0OZseJrefbeVbuFmRK2YZGBTYPd6tvFPO2uUuz_S0FA/s2703/Boris.jpg" imageanchor="1" style="margin-left: 1em; margin-right: 1em;"><img border="0" data-original-height="2703" data-original-width="1388" height="400" src="https://blogger.googleusercontent.com/img/b/R29vZ2xl/AVvXsEgqSYx5drDmE55ykC3ePHmmNVv_k5qSlhdGkzOqFkgKqjTWuPnIWEB6XwD-0RlZZQu8anZcfunfHPTcWNb4bAtXL351rFJ_EM8AYYGR7Itqx0VeNB-QgScdy8TeDpzRvqUAX_SMKHwxog2if0OZseJrefbeVbuFmRK2YZGBTYPd6tvFPO2uUuz_S0FA/w205-h400/Boris.jpg" width="205" /></a></div><br /><p><br /></p>ಮಲ್ಲಿಕಾಜು೯ನ ತಿಪ್ಪಾರhttp://www.blogger.com/profile/03103441547302200527noreply@blogger.com0tag:blogger.com,1999:blog-6897854439810696140.post-39414249964224600632022-06-30T19:35:00.002+05:302022-06-30T19:35:52.420+05:30Rebel Leader Eknath Shinde: ‘ರೆಬೆಲ್ ಲೀಡರ್’ ಏಕನಾಥಗೆ ಮುಖ್ಯಮಂತ್ರಿ ಪಟ್ಟ<p><b><i style="background-color: #f4cccc;">ಕಣ್ಣ ಮುಂದೆಯೇ ಮಕ್ಕಳ ಸಾವಿನಿಂದಾಗಿ ರಾಜಕಾರಣದಿಂದ ದೂರವೇ ಸರಿದಿದ್ದ ಏಕನಾಥ ಶಿಂಧೆ ಮತ್ತೆ ಅಗ್ರಗಣ್ಯ ನಾಯಕರಾಗಿ ಬೆಳೆದಿದ್ದೇ ಅಚ್ಚರಿ</i></b></p><p><br /></p><p><b>- ಮಲ್ಲಿಕಾರ್ಜುನ ತಿಪ್ಪಾರ</b><br />ಏಕನಾಥ ಶಿಂಧೆ ಎಂಬ ಏಕವ್ಯಕ್ತಿ ಮೇಲೆ ಇಡೀ ದೇಶ ಕುತೂಹಲದ ಕಣ್ಣಿಟ್ಟಿದೆ. ಮಹಾರಾಷ್ಟ್ರದ ಶಿವಸೇನೆ-ಎನ್ಸಿಪಿ-ಕಾಂಗ್ರೆಸ್ ನೇತೃತ್ವದ ‘ಮಹಾ ವಿಕಾಸ್ ಅಘಾಡಿ’ ಸರಕಾರವನ್ನು ಖೆಡ್ಡಾಗೆ ಕೆಡವಿರುವ ಏಕನಾಥ, ಶಿವಸೇನೆಯ ಪ್ರಮುಖ ಹಾಗೂ ಭಾರಿ ಪ್ರಭಾವಿ ನಾಯಕ. ತಮ್ಮ ಪಕ್ಷ ವು ‘ಹಿಂದುತ್ವ’ವನ್ನು ಕೈಬಿಟ್ಟಿದೆ ಎಂದು ಆರೋಪಿಸಿ, 30ಕ್ಕೂ ಅಧಿಕ ಶಾಸಕರೊಂದಿಗೆ ಅಸ್ಸಾಂನ ಗುವಾಹಟಿ ಹೋಟೆಲ್ನಲ್ಲಿತಳವೂರಿದ್ದಾರೆ. ಮೇಲ್ನೋಟಕ್ಕೆ, ಶಿವಸೇನೆಯ ಸೈದ್ಧಾಂತಿಕ ವೈರುಧ್ಯದ ಕಾರಣಕ್ಕೇ ಬಂಡಾಯ ಬಾವುಟ ಹಾರಿಸಿದ್ದಾರೆ ಎನಿಸಿದರೂ ಆಳದಲ್ಲಿಅವರನ್ನು ಪಕ್ಷ ದಲ್ಲಿ ಮೂಲೆಗುಂಪು ಮಾಡಲಾಗುತ್ತಿದ್ದ ಪಿಸುಮಾತುಗಳಿವೆ!</p><p>ಹಣಬಲ ಮತ್ತು ತೋಳ್ಬಲದಲ್ಲಿಏಕನಾಥ ಶಿಂಧೆ ಅವರನ್ನು ಸರಿಗಟ್ಟುವವರಿಲ್ಲ. ಪಕ್ಷ ಕ್ಕೆ ಬೇಕಿರುವ ಮತಗಳನ್ನು ಕ್ರೋಡೀಕರಿಸುವಲ್ಲಿಸಿದ್ಧಹಸ್ತರು. ವಿಶೇಷವಾಗಿ ಠಾಣೆ ವ್ಯಾಪ್ತಿಯಲ್ಲಿಏಕನಾಥ ಅವರೇ ಶಿವಸೇನೆಯ ಅಸಲಿ ನಾಯಕ. ಅಷ್ಟರ ಮಟ್ಟಿಗೆ ವರ್ಚಸ್ಸಿದೆ. ಏಕನಾಥ ಅವರು ಹೇಗೆ ಇಷ್ಟು ಪ್ರಸಿದ್ಧಿಯಾದರು ಎಂದು ತಿಳಿದುಕೊಳ್ಳಧಿಬೇಕಿದ್ದರೆ ಅವರ ರಾಜಕೀಯ ಗುರು ‘ಆನಂದ್ ದಿಘೆ ಅವರ ಕುರಿತು ಕೊಂಚ ತಿಳಿದುಕೊಳ್ಳಬೇಕು. ‘ಧರ್ಮವೀರ್’ ಆನಂದ ದಿಘೆ ಠಾಣೆಯಲ್ಲಿಅಕ್ಷ ರಶಃ ಸಮಾನಂತರ ಸರಕಾರವನ್ನೇ ನಡೆಸುಧಿತ್ತಿದ್ದರು. ತಮ್ಮದೇ ಶೈಲಿಯಲ್ಲಿನಿತ್ಯವೂ ದರ್ಬಾರ್ ನಡೆಸಿ, ಸಮಸ್ಯೆಧಿಗಳನ್ನು ಆಲಿಸುತ್ತಿದ್ದರು. ಬಾಳಾಸಾಹೇಬ್ ಠಾಕ್ರೆ ಅವರ ಪರಮ ನಿಷ್ಠರು. ಈ ನಿಷ್ಠೆ ಯಾವ ಪರಿ ಇತ್ತೆಂದರೆ, 1989ರಲ್ಲಿಶ್ರೀಧರ ಖೋಪ್ಕರ್ ಎಂಬ ಸದಸ್ಯ ಕಾಂಗ್ರೆಸ್ ಪರವಾಗಿ ಮತ ಹಾಕಿದ್ದಕ್ಕೆ ಅವರನ್ನು ಕೊಲೆ ಮಾಡಲಾಗಿತ್ತು. ಈ ಪ್ರಕರಣದಲ್ಲಿಆನಂದ ದಿಘೆ ಅವರನ್ನು ಬಂಧಿಸಲಾಗಿತ್ತು. ಜಾಮೀನು ಮೇಲೆ ಹೊರ ಬಂದಿದ್ದರು. 2001ರಲ್ಲಿಹೃದಯಾಘಾತದಿಂದ ಸಾವಿಗೀಡಾದರು. ದಿಘೆ ಬಳಿಕ ಉಂಟಾಗಿದ್ದ ನಿರ್ವಾತವನ್ನು ತುಂಬಿದ್ದು ಇದೇ ಏಕನಾಥ ಶಿಂಧೆ. ಅವರದ್ದೇ ರಾಜಕೀಯ ಪಟ್ಟು, ಶೈಲಿಯನ್ನು ಕರಗತ ಮಾಡಿಕೊಂಡಿದ್ದಾರೆ. ದಿಘೆ ಅವರಂತೆ ಏಕನಾಥ ಅವರದ್ದೂ ‘ಆಕ್ರಮಣಕಾರಿ’ ರಾಜಕಾರಣ; ಎಲ್ಲವೂ ತಾಬಡತೋಬಡ ಆಗಬೇಕು. ಎಂವಿಎ ಸರಕಾರದಲ್ಲಿಲೋಕೋಪಯೋಗಿ ಸಚಿವರಾಗಿರುವ 58 ವರ್ಷದ ಏಕನಾಥ ಅವರಿಗೇನೂ ರಾಜಕೀಯ ಕೌಟುಂಬಿಕ ಹಿನ್ನೆಲೆ ಇಲ್ಲ. </p><div class="separator" style="clear: both; text-align: center;"><a href="https://blogger.googleusercontent.com/img/b/R29vZ2xl/AVvXsEgQiMkA1QnW9zM5Zc_b3Y81SZpbg9dx0Da3KPmmOVDcM45jBWQgwWfaxSQeBzNalF3hf0OgYAPyx6ryyNfW2MdhtJFfs977XWMpvofzCAM24WRd5Q4lXEwg3DZsFrIBYRHsSbFFGBAYdQxTR1gRhwU3sjm_3WME1ZdARqlksvQb2M4ZibAQ-3SOQO2D/s1007/eKAN.jpg" imageanchor="1" style="clear: left; float: left; margin-bottom: 1em; margin-right: 1em;"><img border="0" data-original-height="762" data-original-width="1007" height="242" src="https://blogger.googleusercontent.com/img/b/R29vZ2xl/AVvXsEgQiMkA1QnW9zM5Zc_b3Y81SZpbg9dx0Da3KPmmOVDcM45jBWQgwWfaxSQeBzNalF3hf0OgYAPyx6ryyNfW2MdhtJFfs977XWMpvofzCAM24WRd5Q4lXEwg3DZsFrIBYRHsSbFFGBAYdQxTR1gRhwU3sjm_3WME1ZdARqlksvQb2M4ZibAQ-3SOQO2D/s320/eKAN.jpg" width="320" /></a></div><p>ಸಾತಾರಾ ಮೂಲದವರು: ಏಕನಾಥ ಸಾತಾರಾ ಜಿಲ್ಲೆಜವಳಿ ತಾಲೂಧಿಕಿಧಿನವರು. ಹುಟ್ಟಿದ್ದು ಮರಾಠ ಕುಟುಂಬದಲ್ಲಿ1964 ಫೆಬ್ರವರಿ 9ರಂದು. ತಂದೆ ಸಂಭಾಜಿ. ಏಕನಾಥ ಚಿಕ್ಕವರಿದ್ದಾಗಲೇ ಅವರ ಕುಟುಂಬ ಠಾಣೆಗೆ ಸ್ಥಳಾಂತಧಿರವಾಯಿತು. ಮಂಗಳಾ ಹೈಸ್ಕೂಲ್ ಮತ್ತು ಜೂನಿಯರ್ ಕಾಲೇಜ್ನಲ್ಲಿ11ನೇ ತರಗತಿವರೆಗೆ ಓದಿದ್ದಾರೆ. ಮುಂದೆ ಓದುವ ಆಸೆ ಇದ್ದರೂ ಕುಟುಂಬಕ್ಕಾಗಿ ತಮ್ಮ ಶಿಕ್ಷ ಣವನ್ನು ಅರ್ಧಕ್ಕೆ ಮೊಟಕುಗೊಳಿಸಿ, ದಿನಗೂಲಿ ಕೆಲಸಗಳನ್ನು ಮಾಡಬೇಕಾಯಿತು. ತುಂಬಾ ಕಷ್ಟಪಟ್ಟು ಕೊನೆಗೆ ಆಟೊರಿಕ್ಷಾ ಚಾಲಕರಾದರು. 70 ಮತ್ತು 80ರ ದಶಕದಲ್ಲಿಮಹಾರಾಷ್ಟ್ರದ ಎಲ್ಲಯುವಕರಂತೆ ಏಕನಾಥ ಅವರಿಗೆ ಸೇನೆ ಚಟುವಟಿಕೆಗಳು ಆಕರ್ಷಿಸಿದವು. 1980ರಲ್ಲಿಶಿವಸೇನೆ ಸೇರಿದರು. ಠಾಣೆ ಜಿಲ್ಲಾಶಿವಸೇನೆ ಪ್ರಮುಖರಾಗಿದ್ದ ಆನಂದ್ ದಿಘೆ ಅವರ ‘ನೀಲಿಗಣ್ಣಿನ ಹುಡುಗ’ನಾಗಲು ಬಹಳ ದಿನಗಳೇನೂ ಬೇಕಾಗಲಿಲ್ಲ. ಪ್ರಾಮಾಧಿಣಿಕತೆ, ಕಠಿಣ ಪರಿಶ್ರಮಗಳಿಂದಾಗಿ ಬಾಳಾಸಾಹೇಬ್ ಠಾಕ್ರೆ ಕಣ್ಣಿಗೂ ಬಿದ್ದರು. ಠಾಕ್ರೆ ಮತ್ತು ಆನಂದ್ ದಿಘೆ ಅವರ ಆಶ್ರಯದಲ್ಲಿಏಕನಾಥ, ಶಿವಸೇನೆಧಿಯಲ್ಲಿಒಂದೊಂದೇ ಹುದ್ದೆಗಳನ್ನೇರುತ್ತಾ ಮುನ್ನಡೆದರು. </p><p>ಕಣ್ಣ ಮುಂದೆ ಮಕ್ಕಳು ಜಲಸಮಾಧಿ: ಏಕನಾಥ ಅವರಿಗೆ 2000 ಕಹಿ ನೀಡಿದ ವರ್ಷ. ಕಣ್ಣ ಮುಂದೆಯೇ ಅವರ ಮೂವರು ಮಕ್ಕಳ ಪೈಕಿ ಇಬ್ಬರು ಜಲಧಿ ಸಮಾಧಿಧಿಯಾದರು. ಅದು ಜೂನ್ 2ನೇ ತಾರೀಖು. 11 ವರ್ಷದ ಪುತ್ರ ದಿಪೇಶ್, 7 ವರ್ಷದ ಮಗಳು ಶುಭದಾ ಅವರು ಊರಿನ ಕೆರೆಯಲ್ಲಿಬೋಟಿಂಗ್ ಮಾಡುತ್ತಿದ್ದರು. ಬೋಟ್ ಮುಗುಚಿ ಮಕ್ಕಳಿಬ್ಬರು ಜಲ ಸಮಾಧಿಯಾದರು. ಮಕ್ಕಳ ಸಾವು ಅವರಿಗೆ ಬಾಧಿಸಿತು. ಖಿನ್ನತೆಗೆ ಜಾರಿದರು. ಸಕ್ರಿಯ ರಾಜಕಾರಣದಿಂದಲೇ ವಿಮುಖರಾದರು. ಹೀಗೆ ಬಿಟ್ಟರೆ ಏಕನಾಥ ಕೈಗೆ ಸಿಗುವುದಿಲ್ಲಎಂದು ಭಾವಿಸಿದ ದಿಘೆ, ಏಕನಾಥ ಅವರನ್ನು ಠಾಣೆ ಮುನ್ಸಿಪಲ್ ಕಾರ್ಪೊರೇಷನ್(ಟಿಎಂಸಿ) ಸದನ ನಾಯಕಧಿರನ್ನಾಗಿ ಮಾಡಿದರು. ನಿಧಾನವಾಗಿ ಏಕನಾಥ, ಮಕ್ಕಳ ಸಾವಿನ ನೋವಿನಿಂದ ಹೊರ ಬಂದರು. ರಾಜಕಾರಣದಲ್ಲಿಮತ್ತೆ ಸಕ್ರಿಯರಾದರು. ಶಿಂಧೆ ಅವರ ಮತ್ತೊಬ್ಬ ಪುತ್ರ ಡಾ.ಶ್ರೀಕಾಂತ್ ಅವರು ಕಲ್ಯಾಣ್ ಕ್ಷೇತ್ರದಿಂದ 2014ರಿಂದಲೂ ಸಂಸತ್ ಸದಸ್ಯರು. </p><p>ಬಳ್ಳಾರಿ ಜೈಲಿನಲ್ಲಿದ್ದರು: ಏಕನಾಥ ಮತ್ತು ಕರ್ನಾಟಕದ ನಡುವೆ ‘ಬೇಡವಾದ ಕಾರಣಕ್ಕೆ’ ನಂಟಿದೆ. 1985ರಲ್ಲಿಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ ಉಚ್ಚ್ರಾಯದ ಕಾಲ. ಆಗ ಮಹಾರಾಷ್ಟ್ರದಲ್ಲಿಈ ವಿಷಯಕ್ಕೆ ಸಂಬಂಧಿಸಿದಂತೆ ಸಾಕಷ್ಟು ಪ್ರತಿಭಟನೆ, ಗಲಾಟೆಗಳಾಗುಧಿತ್ತಿದ್ದವು. ಅಂಥ ಒಂದು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಏಕನಾಥ ಅವರನ್ನು ಬಂಧಿಸಿ ಸುಮಾರು 40 ದಿನಗಳ ಕಾಲ ಬಳ್ಳಾರಿ ಜೈಲಿನಧಿಲ್ಲಿಡಲಾಗಿತ್ತು. ಏಕನಾಥ ಅವರು ಶಿವಸೇನೆಯ ಮುಂಚೂಣಿಯ ನಾಯಕಧಿರಾಗಿ, ಬೆಲೆ ಏರಿಕೆ, ಕಾಳದಂಧೆ ಸೇರಿದಂತೆ ಇನ್ನಿತರ ವಿಷಯಗಳನ್ನು ಮುಂದಿಟ್ಟುಕೊಂಡು ಹೋರಾಟ ಮಾಡಿದ್ದಾರೆ. </p><p>ನಾಲ್ಕು ಬಾರಿ ಶಾಸಕ, ಸಚಿವ: 1997ರಲ್ಲಿಠಾಣೆ ಮುನ್ಸಿಪಲ್ ಕಾರ್ಪೊರೇಷನ್ (ಟಿಎಂಸಿ)ಗೆ ಆಯ್ಕೆಧಿಯಾಗಿ, 2001ರಿಂದ ಸಭಾನಾಯಕರಾಗಿದ್ದರು ಏಕನಾಥ್. ಟಿಎಂಸಿಗೆ ಸಂಬಂಧಿಸಿದ ಕೆಲಸಗಳಿಗೆ ಮಾತ್ರ ತಮ್ಮನ್ನು ಸೀಮಿತಧಿಗೊಳಿಸಲಿಲ್ಲ. ಬದಲಿಗೆ ಇಡೀ ಥಾಣೆ ಜಿಲ್ಲೆಗೆ ಸಂಬಂಧಿಸಿದ ಎಲ್ಲವಿಷಯಗಳಲ್ಲೂಮುಂಚೂಣಿಧಿಯಲ್ಲಿರುತ್ತಿದ್ದರು. ಪರಿಣಾಮವಾಗಿ, ಕೋಪರಿ-ಪಾಚಪಾಖಾಡಿಧಿ (2004)ಕ್ಷೇತ್ರದಿಂದ ಸ್ಪರ್ಧಿಸಲು ಶಿವಸೇನೆ ಟಿಕೆಟ್ ನೀಡಿತು. ಗೆದ್ದರು. ಆ ಬಳಿಕ ಸತತವಾಗಿ 2009, 2014 ಮತ್ತು 2019ರಲ್ಲಿಆಯ್ಕೆಧಿಯಾದರು. ಬಾಳಾಸಾಹೇಬ್ ಠಾಕ್ರೆ ಅವರು 2005ರಲ್ಲಿಥಾಣೆ ಜಿಲ್ಲಾಶಿವಸೇನೆಯ ಮುಖ್ಯಸ್ಥರನ್ನಾಗಿ ಮಾಡಿದರು. ಶಿವಸೇನೆಯಲ್ಲಿಈ ರೀತಿ ಶಾಸಕ- ಜಿಲ್ಲಾಮುಖ್ಯಸ್ಥ ಜವಾಬ್ದಾರಿ ಹೊಂದಿದ ಮೊದಲನೇ ವ್ಯಕ್ತಿಧಿಯಾದರು. 2014ರ ಚುನಾವಣೆ ಬಳಿಕ ಮಹಾರಾಷ್ಟ್ರ ವಿಧಾನಸಭೆಯಲ್ಲಿಪ್ರತಿಪಕ್ಷ ದ ನಾಯಕ ಹುದ್ದೆ ಒಲಿಯಿತು. ಇದಾದ ತಿಂಗಳಲ್ಲಿಶಿವಸೇನೆಯು ಬಿಜೆಪಿ ಸರಕಾರದಲ್ಲಿಭಾಗವಹಿಸುತ್ತಿದ್ದಂತೆ ಏಕನಾಥ್ ಅವರು ಲೋಕೋಪಯೋಗಿ ಸಚಿವರಾದರು. ಈ ವೇಳೆ, ಯಶವಂತರಾಯ ಚವಾಣ್ ಮುಕ್ತ ವಿಶ್ವವಿದ್ಯಾಲಯ ನೋಂದಣಿ ಮಾಡಿಕೊಂಡರು. ಶೇ.77.25 ಅಂಕಗಳೊಂದಿಗೆ ಬಿ ಎ ಡಿಗ್ರಿಯನ್ನು ಪಡೆದುಕೊಂಡರು. ಮರಾಠಿ ಮತ್ತು ರಾಜ್ಯಶಾಸ್ತ್ರ ಮುಖ್ಯ ವಿಷಯಗಳಾಗಿದ್ದವು. 2019ರ ಎಂವಿಎ ಸರಕಾರದಲ್ಲಿಲೋಕೋಪಧಿಯೋಗಿ ಜತೆಗೆ ಜತೆಗೆ ಹೆಚ್ಚುವರಿಯಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೊಣೆ ಹೆಗಲೇರಿತು. ಸಚಿವರಾಗಿ ಅವರು ತುಂಬಾ ಚುರುಕಾಗಿದ್ದರು. ತಮ್ಮ ಬಳಿ ಬರುವ ಎಲ್ಲಶಾಸಕರ ಬೇಕು ಬೇಡಗಳನ್ನು ಈಡೇರಿಸುತ್ತಿದ್ದರು. ಎಲ್ಲಕ್ಕಿಂತ ಹೆಚ್ಚಾಗಿ ಸಾಮಾನ್ಯ ಕಾರ್ಯಕರ್ತನಿಂದ ಹಿಡಿದು ಉನ್ನತ ಹುದ್ದೆಯ ನಾಯಕರವರೆಗೂ ಅವರು ಕೈಗೆ ಸಿಗುತ್ತಿದ್ದರು. ಇದರಿಂದಾಗಿ ಪಕ್ಷ ದೊಳಗೆ ಜನಪ್ರಿಯರಾದರು. ಬಹುಶಃ ಈ ಗುಣಗಳೇ ಅವರ ಹಿಂದೆ 30ಕ್ಕೂ ಅಧಿಕ ಶಾಸಕರು ಬರಲು ಕಾರಣವಾಗಿರಬಹುದು!</p><p>ಅದೇನೇ ಇರಲಿ, ಮಹಾರಾಷ್ಟ್ರದಲ್ಲಿಬಹುದೊಡ್ಡ ರಾಜಕೀಯ ಪಲ್ಲಟಕ್ಕೆ ಏಕನಾಥ ಅವರು ಶ್ರೀಕಾರ ಹಾಕಿದ್ದಾರೆ. ತಮ್ಮದೇ ನಿಜವಾದ ಶಿವಸೇನೆ ಎಂದು ಹೇಳಿಕೊಳ್ಳುತ್ತಿರುವ ಅವರ ಮಂದೆ ಸಾಕಷ್ಟು ಸವಾಲುಗಳಿವೆ. ಅವರ ಬಂಡಾಯಕ್ಕೆ ಬಿಜೆಪಿ ಕೂಡ ಸಾಥ್ ನೀಡಿರುವ ಸಾಧ್ಯತೆಗಳಿರುವುದರಿಂದ ಸದ್ಯಧಿಕ್ಕಂತೂ ಬಂಡಾಯದಲ್ಲಿಗೆಲುವು ಅವರಿಗೇ ಒಲಿಯಧಿಬಹುದು. ಆದರೆ, ಮುಂದಿನ ಚುನಾವಣೆಗೆ ಪರಿಸ್ಥಿತಿ ಹೇಗಿರಲಿದೆ ಎಂಬುದನ್ನು ಕಾಲವೇ ಉತ್ತರಿಸಬೇಕು.</p><div class="separator" style="clear: both; text-align: center;"><a href="https://blogger.googleusercontent.com/img/b/R29vZ2xl/AVvXsEjuHycghwJi0qUC0sxMj81cK2y19V1NsUaamb5a3KRoUViVYPywSOgTGq3jnBvaRYwbN3NzBoFOXTmZ_7WWAJ19vBTlAvyxKPmRgbPP3hyGvH8eihBETrcxWc4Q_u-APfpH5e6Jh1_44m4SPSpiYg5lA32GtNKeIICcr045TouWH22mV2doKV9QKGgR/s1638/Ekanath.jpg" imageanchor="1" style="margin-left: 1em; margin-right: 1em;"><img border="0" data-original-height="1638" data-original-width="760" height="640" src="https://blogger.googleusercontent.com/img/b/R29vZ2xl/AVvXsEjuHycghwJi0qUC0sxMj81cK2y19V1NsUaamb5a3KRoUViVYPywSOgTGq3jnBvaRYwbN3NzBoFOXTmZ_7WWAJ19vBTlAvyxKPmRgbPP3hyGvH8eihBETrcxWc4Q_u-APfpH5e6Jh1_44m4SPSpiYg5lA32GtNKeIICcr045TouWH22mV2doKV9QKGgR/w296-h640/Ekanath.jpg" width="296" /></a></div><br /><p><br /></p><p>(ಈ ಲೇಖನವು ವಿಜಯ ಕರ್ನಾಟಕದ ಭಾನುವಾರ ಸಂಚಿಕೆಯ ವ್ಯಕ್ತಿಗತ ಅಂಕಣದಲ್ಲಿ ಪ್ರಕಟವಾಗಿದೆ)</p><p> </p>ಮಲ್ಲಿಕಾಜು೯ನ ತಿಪ್ಪಾರhttp://www.blogger.com/profile/03103441547302200527noreply@blogger.com0tag:blogger.com,1999:blog-6897854439810696140.post-88486736491484162602022-06-08T23:13:00.000+05:302022-06-08T23:13:43.136+05:30Khalistan 2.0: ಖಲಿಸ್ತಾನ್ ನಿಶ್ಚಲವಷ್ಟೇ ಅದಿನ್ನೂ ಅಂತ್ಯವಾಗಿಲ್ಲ<p><b>- ಮಲ್ಲಿಕಾರ್ಜುನ ತಿಪ್ಪಾರ</b><br />ಪಂಜಾಬ್ ಅನ್ನು ಸೇರಿಸಿಕೊಂಡು ಉತ್ತರ ಭಾರತದ ಕೆಲವು ರಾಜ್ಯಗಳನ್ನೊಳಗೊಂಡ ಖಲಿಸ್ತಾನ್ ಪ್ರತ್ಯೇಕ ರಾಷ್ಟ್ರಕ್ಕಾಗಿ ಹುಟ್ಟಿಕೊಂಡಿದ್ದೇ ಖಾಲ್ಸಾ ಚಳವಳಿ. ಪ್ರತ್ಯೇಕತೆಯನ್ನು ಪ್ರತಿಪಾದಿಸುತ್ತಿದ್ದ ಈ ಚಳವಳಿ ಮುಂದೆ ಉಗ್ರಗಾಮಿ ಸಂಘಟನೆಯಾಗಿ ಬದಲಾಯಿತು. ಪ್ರತ್ಯೇಕ ಸಾರ್ವಭೌಮ ರಾಷ್ಟ್ರ ಬೇಡಿಕೆ ಹೆಸರಿನಲ್ಲಿಅಮಾಯಕ ಹಿಂದೂಗಳನ್ನು, ಸಿಖ್ಖರೇತರನ್ನು, ತಮ್ಮ ಬೇಡಿಕೆಯನ್ನು ವಿರೋಧಿಸುವ ಸಹ ಸಿಖ್ಖರನ್ನು ಕೊಲ್ಲುವ ಮೂಲಕ ಭಯೋತ್ಪಾದನೆಯ ಹಾದಿಯನ್ನು ತುಳಿಯಿತು. ಜರ್ನೈಲ್ ಸಿಂಗ್ ಭಿಂದ್ರಾನ್ವಾಲೆ ಈ ಖಲಿಸ್ತಾನ್ ಚಳವಳಿಗೆ ಹಿಂಸಾರೂಪ ನೀಡಿದ. ಸಿಖ್ಖರ ಪವಿತ್ರ ಕ್ಷೇತ್ರವಾಗಿರುವ ಅಮೃತಸರದ ಸ್ವರ್ಣ ದೇಗುಲವನ್ನೇ ತನ್ನ ಕಾರಸ್ಥಾನವನ್ನಾಗಿ ಮಾಡಿಕೊಂಡಿದ್ದ.</p><p>ಪಾಕಿಸ್ತಾನದ ಕುಮ್ಮಕ್ಕಿನಿಂದ ದೇಶದ ಸಾರ್ವಭೌಮತ್ವಕ್ಕೆ ಸವಾಲಾಗಿದ್ದ ಆತನನ್ನು ಹಿಮ್ಮೆಟ್ಟಿಸುವುದು ಅಂದಿನ ಕೇಂದ್ರ ಸರಕಾರಕ್ಕೆ ತುರ್ತು ಅಗತ್ಯವಾಗಿತ್ತು. ಅದರ ಫಲವಾಗಿ ನಡೆದಿದ್ದೇ ‘ಆಪರೇಷನ್ ಬ್ಲೂಸ್ಟಾರ್’. ಭಾರತ ಕಂಡ ಅತ್ಯಂತ ದಕ್ಷ ಹಾಗೂ ಪ್ರಭಾವಶಾಲಿ ಪ್ರಧಾನಿಯಾದ ಇಂದಿರಾ ಗಾಂಧಿ ಅವರು ಗಟ್ಟಿ ನಿರ್ಧಾರ ಮಾಡಿ, ಅಮೃತಸರದಲ್ಲಿಬೀಡುಬಿಟ್ಟಿದ್ದ ಭಿಂದ್ರನ್ವಾಲೆಯನ್ನು ಮಟ್ಟ ಹಾಕಲು ಸೇನೆಗೆ ಸೂಚಿಸಿದ್ದರು. ಅವರು ಅಂದು ಕೈಗೊಂಡ ಈ ನಿರ್ಧಾರ ಸರಿಯೋ, ತಪ್ಪೋ ಎಂದು ಮೂರು ದಶಕಗಳ ಬಳಿಕವೂ ಚರ್ಚೆಯಾಗುತ್ತಲೇ ಇದೆ. ಕೆಲವು ಇತಿಹಾಸಕಾರರು ಸ್ವರ್ಣ ಮಂದಿರಕ್ಕೆ ಸೇನೆಯನ್ನು ನುಗ್ಗಿಸುವುದರ ಬದಲು ಬೇರೆ ಮಾರ್ಗದ ಮೂಲಕ ಭಿಂದ್ರನ್ವಾಲೆಯನ್ನು ಮಟ್ಟ ಹಾಕಬಹುದಿತ್ತು ಎಂದು ಹೇಳಿದರೆ, ಇನ್ನು ಕೆಲವರು ಇಂದಿರಾ ಕೈಗೊಂಡ ನಿರ್ಧಾರ ಸರಿಯಾಗಿತ್ತು ಎಂದು ವಾದಿಸುತ್ತಾರೆ. ಆದರೆ, ಬ್ಲೂಸ್ಟಾರ್ ಕಾರ್ಯಾಚರಣೆ ನಡೆದ ನಂತರದ ಘಟನೆಗಳು ಇದನ್ನು ಪುಷ್ಟಿಕರಿಸುತ್ತವೆ. ಕಾರ್ಯಾಚರಣೆಯ ಪ್ರತೀಕಾರಕ್ಕೆ ಮೊದಲಿಗೆ ಬಲಿಯಾಗಿದ್ದೇ ಪ್ರಧಾನಿ ಇಂದಿರಾ ಗಾಂಧಿ ಅವರು. ನಂತರ, ಆಪರೇಷನ್ ಬ್ಲೂಸ್ಟಾರ್ ವೇಳೆ ಸೇನಾ ನಾಯಕರಾಗಿದ್ದು ಜನರಲ್(ನಿವೃತ್ತ) ಎ.ಎಸ್. ವೈದ್ಯ, ಲೆಫ್ಟಿನೆಂಟ್ ಕರ್ನಲ್ ಕುಲ್ದಿಪ್ ಸಿಂಗ್ ಬ್ರಾರ್ ಅವರ ಹತ್ಯೆಯಾಯಿತು. ಇದಕ್ಕೂ ಮುಂಚೆ, ಕೆನಡಾದಲ್ಲಿದ್ದ ಖಲಿಸ್ತಾನದ ಇಬ್ಬರು ಬಂಡುಕೋರರು ಏರ್ ಇಂಡಿಯಾ ಕನಿಷ್ಕ ವಿಮಾನವನ್ನು ಆಕಾಶದಲ್ಲೆ ಸೊಧೀಟಿಸಿ, 329 ಜನರ ಆಹುತಿ ತೆಗೆದುಕೊಂಡರು. ಇದಿಷ್ಟು ಆಪರೇಷನ್ ಬ್ಲೂಸ್ಟಾರ್ಗೆ ಪ್ರತಿಯಾಗಿ ಪ್ರತೀಕಾರದ ಘಟನೆಗಳಾದರೆ, ಇಂದಿರಾ ಗಾಂಧಿ ಹತ್ಯೆ ಮತ್ತೊಂದು ಮಗ್ಗಲನ್ನು ಪಡೆಯಿತು. ಇದಕ್ಕೆ ಪ್ರತಿಯಾಗಿ ದಿಲ್ಲಿಸೇರಿದಂತೆ ದೇಶದೆಲ್ಲೆಡೆ ಸಾವಿರಾರು ಸಿಖ್ಖರ ಮಾರಣಹೋಮವೇ ನಡೆಯಿತು.</p><p>1984ರ ಜೂನ್ 3ರಿಂದ 8ರವರೆಗೆ ನಡೆದ ಬ್ಲೂಸ್ಟಾರ್ ಕಾರ್ಯಾಚರಣೆಗೀಗ 38 ವರ್ಷ. ವರ್ಷಾಚರಣೆ ನೆಪದಲ್ಲಿಈಗಲೂ ಖಲಿಸ್ತಾನಿ ಪರ ಘೋಷಣೆಗಳು, ಭಿಂದ್ರನ್ವಾಲೆಯನ್ನು ಹುತಾತ್ಮನ ರೀತಿ ನೋಡುವುದನ್ನು ನಿಂತಿಲ್ಲ. ‘ಖಲಿಸ್ತಾನ್ 2.0’ ನಿಧಾನವಾಗಿ ಮರುಹುಟ್ಟು ಪಡೆದುಕೊಳ್ಳುತ್ತಿರುವುದಕ್ಕೆ ಇದೆಲ್ಲವೂ ಸಾಕ್ಷಿ. ಇತ್ತೀಚಿನ ಕೆಲವು ವರ್ಷಗಳಲ್ಲಿಭಾರತ ಹಾಗೂ ಭಾರತದ ಆಚೆ ಅಂದರೆ, ಯುರೋಪ್ ಮತ್ತು ಅಮೆರಿಕದ ಕೆಲವು ರಾಷ್ಟ್ರಗಳಲ್ಲಿವಾಸವಾಗಿರುವ ಸಿಖ್ ಸಮುದಾಯದಲ್ಲಿಖಲಿಸ್ತಾನ್ ಚಳವಳಿಯನ್ನು ಮತ್ತೆ ಮುನ್ನೆಲೆಗೆ ತರುವ ಪ್ರಯತ್ನ ನಿರಂತರವಾಗಿ ನಡೆಯುತ್ತಿದೆ. ಈ ಬಗ್ಗೆ ಭಾರತೀಯ ತನಿಖಾ ಏಜೆನ್ಸಿಗಳಲ್ಲಿಸಾಕಷ್ಟು ಸಾಕ್ಷ್ಯಾಧಾರಗಳಿವೆ ಮತ್ತು ಈ ಖಲಿಸ್ತಾನದ ಬಂಡುಕೋರರನ್ನು ಬಳಸಿಕೊಂಡು ಭಾರತದೊಳಗೆ ಅಶಾಂತಿ ಸೃಷ್ಟಿಸುವ ಪ್ರಯತ್ನವನ್ನು ಪಾಕಿಸ್ತಾನದ ಬೇಹುಗಾರಿಕೆ ಸಂಸ್ಥೆ ಐಎಸ್ಐ ಮಾಡುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಖಲಿಸ್ತಾನ್ ಚಳವಳಿ ನಿಶ್ಚಲವಾಗಿದೆಯಷ್ಟೇ, ಸಂಪೂರ್ಣವಾಗಿ ಸತ್ತಿಲ್ಲಎಂಬುದಕ್ಕೆ ಇತ್ತೀಚಿನ ಕೆಲವು ಘಟನೆಗಳು ನಮ್ಮ ಮುಂದಿವೆ.</p><p>ಸಿಖ್ ರ್ಫಾ ಜಸ್ಟೀಸ್ (ಎಸ್ಎಫ್ಜೆ) ಕಳೆದ ವರ್ಷ ಫೆಬ್ರವರಿಧಿಯಲ್ಲಿಪಂಜಾಬ್ನಲ್ಲಿಖಲಿಸ್ತಾನ್ ಚಳವಳಿಯನ್ನು ಪುನಃಶ್ಚೇತನಧಿಗೊಳಿಸುವುದು ಮತ್ತು ಭಾವನೆಗಳನ್ನು ಬಡಿದೆಬ್ಬಿಸುವ ಕೆಲಸವನ್ನು ಮಾಡುತ್ತಿದ್ದ ಬಗ್ಗೆ ವರದಿಗಳಿವೆ. ಎನ್ಐಎ ತಂಡವೊಂದು ಕಳೆದ ನವೆಂಬರ್ನಲ್ಲಿಕೆನಡಾಗೆ ತೆರಳಿ ಪರಿಶೀಲಿಸಿದಾಗ, ರೈತ ಚಳವಳಿಯ ಹೆಸರಿನಲ್ಲಿಒಂದು ಲಕ್ಷ ಕ್ಕೂ ಅಧಿಕ ಅಮೆರಿಕನ್ ಡಾಲರ್ ಸಂಗ್ರಹಿಸಿದ್ದನ್ನು ಪತ್ತೆ ಹಚ್ಚಿತ್ತು ಎನ್ನಲಾಗಿದೆ. ಮೇ 5ರಂದು ಖಲಿಸ್ತಾನ್ ಧ್ವಜವನ್ನು ಧರ್ಮಶಾಲಾದಲ್ಲಿರುವ ಹಿಮಾಚಲ ಪ್ರದೇಶ ವಿಧಾನಸಭೆ ಸಂಕೀರ್ಣದ ಮುಖ್ಯ ದ್ವಾರದಲ್ಲಿಕಟ್ಟಲಾಗಿತ್ತು. ಈ ಹಿನ್ನೆಲೆಯಲ್ಲೇ ಎಸ್ಎಫ್ಜೆ ನಾಯಕ ಗುರುಪತ್ವಂತ್ ಸಿಂಗ್ ಪನ್ನುನ್ ವಿರುದ್ಧ ಹಿಮಾಚಲ ಪ್ರದೇಶ ಪೊಲೀಸರು ಯುಎಪಿಎ ಅಡಿ ಕೇಸ್ ದಾಖಲಿಸಿಕೊಂಡಿದ್ದಾರೆ. ರಾಜ್ಯದಲ್ಲಿಖಲಿಸ್ತಾನ್ ಪರ ಚಟುವಟಿಕೆಗಳ ಮೇಲೆ ಹದ್ದಿನ ಕಣ್ಣಿಟ್ಟಿದ್ದಾರೆ. ಮೇ 9ರಂದು ಪಂಜಾಬ್ ಪೊಲೀಸ್ ಬೇಹುಗಾರಿಕಾ ಮುಖ್ಯ ಕಚೇರಿ ಮೇಲೆ, ಪಾಕಿಸ್ತಾನ ನಿರ್ಮಿತ ರಾಕೆಟ್ ಪೊ›ಪೆಲ್ಡ… ಗ್ರೆನೇಡ್ ದಾಳಿ ನಡೆದಿತ್ತು. ಈ ರೀತಿಯ ಘಟನೆಗಳು ನಿರಂತರವಾಗಿ ಪಂಜಾಬ್ ಹಾಗೂ ಸುತ್ತಮುತ್ತಲಿನ ರಾಜ್ಯಗಳಲ್ಲಿಕಂಡು ಬರುತ್ತಿವೆ.</p><p>ಖಲಿಸ್ತಾನ್ ಚಳವಳಿಯು ಈಗಲೂ ಸಿಖ್ ಸಮುದಾಯದ ಒಂದು ವರ್ಗದಲ್ಲಿಸುಪ್ತವಾಗಿದ್ದು, ಯಾವಾಗಲಾದರೂ ಅದು ಸೊಧೀಟಿಸಬಹುದು ಎಂಬುದನ್ನು ಈ ಘಟನೆಗಳು ಸಾಬೀತುಪಡಿಸುತ್ತವೆ. ಇದಕ್ಕೆಲ್ಲಭಾರತದ ಹೊರಗಡೆ ಇದ್ದುಕೊಂಡೇ ಹಲವರು ನೀರೆರೆಧಿಯುತ್ತಿದ್ದಾರೆ. ಅಂಥ ಒಂಬತ್ತು ಜನರನ್ನು ಭಾರತ ಸರಕಾರವು ಗುರುತಿಸಿದ್ದು, ಅವರನ್ನು ಉಗ್ರಗಾಮಿಗಳೆಂದು ಹೆಸರಿಸಿದೆ. ಗುರ್ಮೀತ್ ಸಿಂಗ್ ಬಗ್ಗಾ. ಜರ್ಮನಿಯಲ್ಲಿರಾಧಾಸ್ವಾಮಿ ಪಂಥದ ಮುಖ್ಯಸ್ಥನನ್ನು ಕೊಲೆ ಮಾಡಿಸಿದ ಆರೋಪ ಈತನ ಮೇಲಿದೆ. 2019ರಲ್ಲಿಪಾಕಿಸ್ತಾನದಲ್ಲಿರುವ ಉಗ್ರ ರಂಜೀತ್ ಸಹಾಯದಿಂದ ಡ್ರೋನ್ ಮೂಲಕ ಭಾರತದೊಳಕ್ಕೆ ಶಸ್ತ್ರಾಸ್ತ್ರಗಳನ್ನು ಸಾಗಿಸುತ್ತಾನೆ. ಬಗ್ಗಾ ಆಪ್ತ ಭೂಪೀಂದೇರ್ ಸಿಂಗ್ ಭಿಂಡಾ ಕೂಡ ಇದೇ ಕೆಲಸ ಮಾಡುತ್ತಾನೆ. ನೀತಾ ಅಲಿಯಾಸ್ ರಂಜೀತ್ ಸಿಂಗ್ ಪಾಕಿಸ್ತಾನಧಿದಲ್ಲಿದ್ಡುಕೊಂಡೇ ಐಎಸ್ಐ ಸಹಾಯದಿಂದ ಭಾರತದೊಳಗೆ ನಕಲಿ ಕರೆನ್ಸಿ, ಮಾದಕ ವಸ್ತುಗಳು ಮತ್ತು ಸೊಧೀಟಕಗಳನ್ನು ಕಳುಹಿಸುವ ಕೆಲಸ ಮಾಡುತ್ತಾನೆ. ವಾಧ್ವಾ ಸಿಂಗ್ ಮತ್ತೊಬ್ಬ ಉಗ್ರಗಾಮಿ. ಈತ ಬಬ್ಬರ್ ಖಾಲ್ಸಾ ಅಂತಾರಾಷ್ಟ್ರೀಯ ಸಂಘಟನೆಯ ಮುಖ್ಯಸ್ಥ. ಪಂಜಾಬ್ನಲ್ಲಿಹಲವು ಪೊಲೀಸರನ್ನು ಕೊಂದಿರುವ ಆರೋಪವಿದೆ. ಲಕ್ಬಿರ್ ಸಿಂಗ್ ರೋಡೆ ಹಾಗೂ ಈತನ ಮಗ ಭಗತ್ ಬ್ರಾರ್ ಇಬ್ಬರು ಕೆನಡಾದಲ್ಲಿದ್ದು ಅಲ್ಲಿಂದಲೇ ಖಲಿಸ್ತಾನ ಚಟುವಟಿಕೆಗಳ ಜತೆ ಕೈಜೋಡಿಸಿದ್ದಾರೆ. ಬ್ರಿಟನ್ಲ್ಲಿರುವ ಪ್ರಂಜಿತ್ ಸಿಂಗ್ ಪಮ್ಮಾ ಖಲಿಸ್ತಾನಿ ಉಗ್ರರಿಗೆ ಹಣಕಾಸು ನೆರವು ಒದಗಿಸುತ್ತಾನೆ. 2018ರಲ್ಲಿಪ್ರಧಾನಿ ನರೇಂದ್ರ ಮೋದಿ ಅವರು ಬ್ರಿಟನ್ಗೆ ಭೇಟಿ ನೀಡಿದಾಗ ಅವರ ವಿರುದ್ಧ ಸ್ಥಳೀಯರಲ್ಲಿಪ್ರಂಜಿತ್ ಸಿಂಗ್ ಪಮ್ಮಾ ದ್ವೇಷ ಪ್ರಚೋದಿಸುವ ಕೆಲಸ ಮಾಡಿದ್ದ. ಪರಮ್ಜಿತ್ ಸಿಂಗ್ ಪಂಜ್ವರ್ ಖಲಿಸ್ತಾನ್ ಕಮಾಂಡೋ ಫೋರ್ಸ್ ಎಂಬ ಸಂಘಟನೆಯ ನಾಯಕನೀತ. ಅಫಘಾನ್ಲ್ಲಿದ್ದು, ಖಲಿಸ್ತಾನಿಗಳಿಗೆ ತರಬೇತಿ ನೀಡುತ್ತಾನೆ. ಗುರುಪತ್ವಂತ್ ಸಿಂಗ್ ಪನ್ನುನ್ ಖಲಿಸ್ತಾನ್ ಭಯೋತ್ಪಾದನೆಗೆ ಮರುಜೀವ ನೀಡುತ್ತಿರುವ 2020ರ ‘ನಿರ್ಣಯ’ದ ಜನಕ. ಹರ್ದೀಪ್ ಸಿಂಗ್ ನಿಜ್ಜರ್ ಪಾಕಿಸ್ತಾನದ ಜೈಷೆ ಮೊಹಮ್ಮದ್ ಸಂಘಟನೆಯೊಂದಿಗೆ ಸೇರಿಕೊಂಡು ಉಗ್ರ ಚಟುವಟಿಕೆ ನಡೆಸುತ್ತಾನೆ. ಇವರೆಲ್ಲರೂ ‘ಖಲಿಸ್ತಾನ್’ ಎಂಬ ಎಂದೂ ಕೈಗೂಡದ ವಿಚಾರಧಾರೆಯನ್ನು ಸದಾ ಜೀವಂತವಾಗಿಡುವ ಉದ್ದೇಶಕ್ಕಾಗಿ ಭಯೋತ್ಪಾದನೆಯಲ್ಲಿತೊಡಗಿಸಿಕೊಂಡಿದ್ದಾರೆ. </p><p>***</p><p>ಖಲಿಸ್ತಾನದ ಬೀಜಗಳು ಮೊಳೆತಿದ್ದು 1800ರ ಅಂತ್ಯ ಮತ್ತು 1900ರ ಆರಂಭದಲ್ಲಿ. ಅಂದಿನ ಬ್ರಿಟಿಷ್ ಸರಕಾರದ ನೀತಿಗಳೇ ಇದಕ್ಕೆ ಕಾರಣವಾಯಿತು. 1940ರಲ್ಲೇ ಖಲಿಸ್ತಾನದ ಚಿಂತನೆಯ ಬೀಜಗಳು ಒಡೆದು ಸಸಿಗಳಾಗಲಾರಂಭಿಸಿದವು. ಪಂಜಾಬ್ ಕೇಂದ್ರವಾಗಿಟ್ಟುಕೊಂಡು ಬಲೂಚಿಸ್ತಾನ, ಹಿಮಾಚಲ, ಹರಿಯಾಣ, ಜಮ್ಮು- ಕಾಶ್ಮೀರದ ಕೆಲ ಭಾಗಗಳನ್ನು ಸೇರಿಸಿಕೊಂಡು ಪ್ರತ್ಯೇಕ ಖಲಿಸ್ತಾನ್ ರಚಿಸುವ ಪ್ರಯತ್ನವಿದು. ಶ್ರೀಮಂತ ಹಾಗೂ ಪ್ರತ್ಯೇಕತಾವಾದಿ ಸಿಖ್ಖರ ಹಣಕಾಸು ಹಾಗೂ ಪಾಕಿಸ್ತಾನದ ಬೆಂಬಲದಿಂದ 70-80ರ ದಶಕದಲ್ಲಿಉಗ್ರವಾಗಿ ಬೆಳೆಯಿತು. 1980ರಲ್ಲಿಜಗಜಿತ್ ಸಿಂಗ್ ಚೌಹಾಣ್ ಎಂಬಾತ ನ್ಯಾಷನಲ್ ಕೌನ್ಸಿಲ್ ಆಫ್ ಖಲಿಸ್ತಾನ್ ಎಂಬ ಸಂಘಟನೆ ಕಟ್ಟಿದ. ಬ್ರಿಟನ್ಗೆ ಹೋಗಿ ಅಲ್ಲಿಂದಲೇ ಖಲಿಸ್ತಾನ್ ರಚನೆಯನ್ನೂ ಘೋಷಿಸಿದ. ನಂತರ ಜರ್ನೈಲ್ ಸಿಂಗ್ ಭಿಂದ್ರಾನ್ವಾಲೆ ಎಂಬ ಮತಾಂಧ ಧಾರ್ಮಿಕ ಗುರು ಹುಟ್ಟಿಕೊಂಡ. ಉಗ್ರ ಖಾಲ್ಸಾ ವಿಚಾರವನ್ನು ಪ್ರೋತ್ಸಾಹಿಸಿದ. ಈತನ ಕಾಲದಲ್ಲಿಪಂಜಾಬ್ನಲ್ಲಿಹಿಂಸೆ ತಾಂಡವವಾಡಿತು. ಅಂತಿಮವಾಗಿ 1984ರಲ್ಲಿಆಪರೇಷನ್ ಬ್ಲೂಸ್ಟಾರ್ ಮೂಲಕ ಖಲಿಸ್ತಾನ್ ಚಳವಳಿಯನ್ನು ಒಂದು ಹಂತಕ್ಕೆ ಹುಟ್ಟಡಗಿಸಲಾಯಿತು. ಆದರೂ, ಖಲಿಸ್ತಾನದ ಪಳೆಯುಳಿಕೆಗಳು ಅಲ್ಲಲ್ಲಿಉಳಿದುಕೊಂಡು ಈಗ ಮತ್ತೆ ಜೀವ ಪಡೆದುಕೊಳ್ಳುವ ಪ್ರಯತ್ನ ಮಾಡುತ್ತಿವೆ. ಖಲಿಸ್ತಾನ್ ಬಗ್ಗೆ ಸಹಾನುಭೂತಿ ಹೊಂದಿದ ಬಹಳ ಮಂದಿ ಜರ್ಮನಿ, ಬ್ರಿಟನ್, ಕೆನಡಾ ಮತ್ತು ಅಮೆರಿಕದಲ್ಲಿದ್ದಾರೆ. ಖಲಿಸ್ತಾನ್ ಜಿಂದಾಬಾದ್ ಫೋರ್ಸ್ ಎಂಬ ಹೊಸ ಸಂಘಟನೆಯೊಂದನ್ನು ಪೊಲೀಸರು 2019ರಲ್ಲಿಭೇದಿಸಿದ್ದರು. ಇದರ ನಾಯಕರಲ್ಲಿಹೆಚ್ಚಿನವರು ಜರ್ಮನಿಯಲ್ಲಿದ್ದಾರೆ.</p><p>***</p><p>ಆಪರೇಷನ್ ಬ್ಲೂಸ್ಟಾರ್ನ ಭಯಂಕರ ಪರಿಣಾಮದ ಹೊರತಾಗಿಯೂ ಅಂಥದ್ದೇ ಕಾರ್ಯಾಚರಣೆಯನ್ನು ಭಾರತವು, ‘ಆಪರೇಷನ್ ಬ್ಲ್ಯಾಕ್ ಥಂಡರ್’ ಹೆಸರಿನಲ್ಲಿಮತ್ತೆ ಕೈಗೊಂಡಿತು. ಆಪರೇಷನ್ ಬ್ಲೂಸ್ಟಾರ್ ವೇಳೆ ಅಳಿದುಳಿದ ಖಲಿಸ್ತಾನ ಬಂಡುಕೋರರು ಮತ್ತೆ ತಮ್ಮ ಕಾರ್ಯಾಚರಣೆಗೆ ಗೋಲ್ಡನ್ ಟೆಂಪಲ್ ಅನ್ನೇ ಬಳಸಿಕೊಳ್ಳಲಾರಂಭಿಸಿದ್ದರು. ಈ ಪ್ರಯತ್ನವನ್ನು ಹಿಮ್ಮೆಟ್ಟಿಸುವುದಕ್ಕಾಗಿಯೇ ನಡೆದ ಕಾರ್ಯಾಚರಣೆಯೇ ‘ಆಪರೇಷನ್ ಬ್ಲ್ಯಾಕ್ ಥಂಡರ್’. ಮೊದಲನೆ ಬಾರಿಗೆ ಕಾರ್ಯಾಚರಣೆ ನಡೆದಿದ್ದು 1986 ಏಪ್ರಿಲ್ 30ರಂದು. ಇದಕ್ಕಾಗಿ ರಾಷ್ಟ್ರೀಯ ಭದ್ರತಾ ದಳದ ‘ಬ್ಲ್ಯಾಕ್ ಕ್ಯಾಟ್’ ಕಮಾಂಡೋ ಪಡೆಯನ್ನು ಬಳಸಿಕೊಳ್ಳಲಾಯಿತು. ಎರಡನೇ ಬಾರಿಗೆ ಕಾರ್ಯಾಚರಣೆ ನಡೆದಿದ್ದು 1988 ಮೇ 9ರಂದು. ಎರಡೂ ಆಪರೇಷನ್ಗಳ ನೇತೃತ್ವ ವಹಿಸಿದ್ದವರು ಕೆ.ಪಿ.ಗಿಲ್. ಅವರು ಆಗ ಪಂಜಾಬ್ ಪೊಲೀಸ್ ಡಿಜಿಪಿ ಆಗಿದ್ದರು. ಅಳಿದುಳಿದ ಬಂಡುಕೋರರನ್ನು ಮಟ್ಟಹಾಕುವಲ್ಲಿಈ ಬ್ಲ್ಯಾಕ್ ಥಂಡರ್ ಕಾರ್ಯಾಚರಣೆ ಯಶಸ್ವಿಯಾಗಿತ್ತು.</p><p>ಆದರೆ, ಈಗ ಖಲಿಸ್ತಾನ್ 2.0 ಸಕ್ರಿಯವಾಗುತ್ತಿರುವುದು ಸ್ಪಷ್ಟ. ಹಲವು ಘಟನೆಗಳು ಇದಕ್ಕೆ ಸಾಕ್ಷ ್ಯ ಒದಗಿಸಿವೆ. ಸರಕಾರ ಈಗಲೇ ಗದಾಪ್ರಹಾರ ಮಾಡದಿದ್ದರೆ, ಮುಂದೊಂದು ದಿನ ಮತ್ತೆ ಪಂಜಾಬ್ ಹೊತ್ತಿ ಉರಿಯಬಹುದು, ಭಾರತದ ಸಾರ್ವಭೌಮತ್ವಕ್ಕೆ ಸವಾಲು ಎದುರಾಗಬಹುದು.</p><div class="separator" style="clear: both; text-align: center;"><a href="https://blogger.googleusercontent.com/img/b/R29vZ2xl/AVvXsEgsBK6pLa3XqnWoVJ8daLSKua2f1DK00HldU-V34b9G_1vZPiktU6uqhjxWdIUeoRv-CylV3T52knW2mDMhUmfxKF9olt6adCFJosRrH7OdbM-95xj8kkuMI-gFjwNxq7g8vpGdnbGTgxVruUq3hXW_ZxiZVcq8ef_2RBA9ym12YhUplOJbUcPUvxRg/s2976/tippar%20article1.jpg" imageanchor="1" style="margin-left: 1em; margin-right: 1em;"><img border="0" data-original-height="2287" data-original-width="2976" height="493" src="https://blogger.googleusercontent.com/img/b/R29vZ2xl/AVvXsEgsBK6pLa3XqnWoVJ8daLSKua2f1DK00HldU-V34b9G_1vZPiktU6uqhjxWdIUeoRv-CylV3T52knW2mDMhUmfxKF9olt6adCFJosRrH7OdbM-95xj8kkuMI-gFjwNxq7g8vpGdnbGTgxVruUq3hXW_ZxiZVcq8ef_2RBA9ym12YhUplOJbUcPUvxRg/w640-h493/tippar%20article1.jpg" width="640" /></a></div><br /><p><br /></p>ಮಲ್ಲಿಕಾಜು೯ನ ತಿಪ್ಪಾರhttp://www.blogger.com/profile/03103441547302200527noreply@blogger.com0tag:blogger.com,1999:blog-6897854439810696140.post-39713867506642843802022-05-17T21:52:00.003+05:302022-05-17T21:52:37.010+05:30QR Code Scan Scam: ಕ್ಯೂಆರ್ ಕೋಡ್ ಬಳಸಿ ವಂಚನೆ, ಇರಲಿ ಎಚ್ಚರ<p><br /></p><p><b>- ಮಲ್ಲಿಕಾರ್ಜುನ ತಿಪ್ಪಾರ</b><br />ತಂತ್ರಜ್ಞಾನ ಬೆಳೆದಂತೆ ನಮ್ಮ ಜೀವನ ಬಹಳ ಸುಲಭವಾಗಿದೆ. ಕೈ ಬೆರಳ ತುದಿಯಲ್ಲೇ ಇಡೀ ಜಗತ್ತಿದೆ. ಕುಳಿತಲ್ಲೇ ನಿಮಗೆ ಬೇಕಾದ್ದನ್ನು ತರಿಸಿಕೊಳ್ಳಬಹುದು; ಇಲ್ಲ ಮಾರಬಹುದು. ಈ ಡಿಜಿಟಲ್ ಯುಗದಲ್ಲಿ ಬಹಳಷ್ಟು ಉಪಯೋಗಗಳಿವೆ. ಹಾಗೆಯೇ, ಸ್ವಲ್ಪ ಮೈಮರೆತರೂ ಎಲ್ಲವನ್ನೂ ಕಳೆದುಕೊಳ್ಳಲು ಕ್ಷಣಾರ್ಧ ಸಾಕು. ಸೈಬರ್ ಖದೀಮರು ಯಾವ ಮಾಯೆಯಿಂದಲಾದರೂ ನಿಮ್ಮ ಫೋನ್ ಹೊಕ್ಕು, ನಿಮ್ಮೆಲ್ಲ ಮಾಹಿತಿ ಹಾಗೂ ಹಣವನ್ನು ಕಿತ್ತುಕೊಳ್ಳಬಲ್ಲರು. ಈ ಖದೀಮರು ಇತ್ತೀಚಿನ ಎರಡು ವರ್ಷಗಳಲ್ಲಿ ಹೊಸ ದಾರಿ ಮೂಲಕ ಮುಗ್ಧ ಜನರನ್ನು ವಂಚಿಸುತ್ತಿದ್ದಾರೆ. ಅವರೀಗ ಕ್ಯೂಆರ್ ಕೋಡ್ ಬಳಸಿಕೊಂಡು, ಜನರ ಖಾತೆಯಲ್ಲಿರುವ ಹಣವನ್ನು ಎಗರಿಸುತ್ತಿದ್ದಾರೆ. ಈ ಬಗ್ಗೆ ಬಹಳ ಎಚ್ಚರಿಕೆಯಿಂದ ಇರಬೇಕಾಗುತ್ತದೆ.</p><div class="separator" style="clear: both; text-align: center;"><a href="https://blogger.googleusercontent.com/img/b/R29vZ2xl/AVvXsEhuKUBxiGC30R7Y_F0U_K6DcmRiAGYttPQLYhS9o4ocKTZNNI3OA1IqTCZqJ6ri2ZIN-OirscRdjbhwdy84korISlID4Dm8BqB4goPxPs5ss-ee5j8Yo1tpQ2CjO12iQrnpQ33594_YtQx4mhPjL-a1HypefDuvorT29qwqO6i2aNQxKEHQ0USGxD-9/s336/QR%20code.jpg" imageanchor="1" style="clear: left; float: left; margin-bottom: 1em; margin-right: 1em;"><img border="0" data-original-height="336" data-original-width="228" height="320" src="https://blogger.googleusercontent.com/img/b/R29vZ2xl/AVvXsEhuKUBxiGC30R7Y_F0U_K6DcmRiAGYttPQLYhS9o4ocKTZNNI3OA1IqTCZqJ6ri2ZIN-OirscRdjbhwdy84korISlID4Dm8BqB4goPxPs5ss-ee5j8Yo1tpQ2CjO12iQrnpQ33594_YtQx4mhPjL-a1HypefDuvorT29qwqO6i2aNQxKEHQ0USGxD-9/s320/QR%20code.jpg" width="217" /></a></div><p><b>ಹೇಗೆ ವಂಚನೆ?</b></p><p>ಈ ಮೊದಲು ಫಿಶಿಂಗ್ ಮೇಲ್, ಲಿಂಕ್ಸ್ ಕಳುಹಿಸಿ ಹಣವನ್ನು ಎತ್ತುತ್ತಿದ್ದ ಖದೀಮರು ಕ್ಯೂಆರ್ ಕೋಡ್ ಮೂಲಕ ಆ ಕೆಲಸವನ್ನು ಮಾಡುತ್ತಿದ್ದಾರೆ. ಅಪರಿಚಿತರಿಗೆ ಕ್ಯೂಆರ್ ಕೋಡ್ ಕಳುಹಿಸಿ, ನಿಮಗೆ ಇಂತಿಂಥ ಸ್ಕೀಮ್ನಲ್ಲಿ ಹಣ ಬಂದಿದೆ, ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ, ನಿಮ್ಮ ಅಕೌಂಟ್ಗೆ ಹಣ ವರ್ಗಾವಣೆಯಾಗುತ್ತದೆ ಎಂಬ ಒಕ್ಕಣಿಕೆ ಸಂದೇಶಗಳನ್ನು ಕಳುಹಿಸುತ್ತಾರೆ. ಬಳಕೆದಾರರು ಇದನ್ನು ನಿಜ ಎಂದು ನಂಬಿ, ಹಣದ ಆಮಿಷಕ್ಕೆ ಒಳಗಾಗಿ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿದರೆ, ಖಾತೆಗೆ ಹಣ ವರ್ಗಾವಣೆ ಆಗುವ ಬದಲು, ನಿಮ್ಮ ಖಾತೆಯಲ್ಲಿರುವ ಹಣವೇ ಅವರಿಗೆ ವರ್ಗಾವಣೆಯಾಗಿರುತ್ತದೆ! ಆಗಲೇ ಮೋಸ ಹೋಗಿರುವುದು ಗೊತ್ತಾಗುತ್ತದೆ. ಜತೆಗೆ ಹಣ ಮಾತ್ರವಲ್ಲದೇ, ನಮ್ಮೆಲ್ಲವೈಯಕ್ತಿಕ ಮಾಹಿತಿಯನ್ನು ಅವರು ಖದಿಯುತ್ತಾರೆ. ಸಾಮಾನ್ಯವಾಗಿ ಇಂಥ ಆಮಿಷ ಒಡ್ಡುವ ಸಂದೇಶಗಳು ವಾಟ್ಸ್ಆ್ಯಪ್ ಮೂಲಕವೇ ಇಲ್ಲವೇ ಮೇಲ್ ಮುಖಾಂತರ ಬರುತ್ತವೆ. ಈ ಬಗ್ಗೆ ಎಚ್ಚರಿಕೆ ವಹಿಸಬೇಕು.</p><p><b>ರಕ್ಷ ಣೆ ಹೇಗೆ? <br /></b>ಸೈಬರ್ ಕಳ್ಳರು ಒಂದಿಲ್ಲ ಒಂದು ಹೊಸ ದಾರಿಯನ್ನು ಹುಡುಕಿಕೊಳ್ಳುತ್ತಿದ್ದಾರೆ. ಈಗ ಕ್ಯೂಆರ್ ಕೋಡ್ ಮೂಲಕ ಹಣ ಕೀಳುತ್ತಿದ್ದಾರೆ. ಈ ವಂಚನೆಯ ಜಾಲಕ್ಕೆ ಬಲಿಯಾಗದಂತೆ ನೋಡಿಕೊಳ್ಳಬೇಕೆಂದರೆ, ನಮ್ಮ ಎಚ್ಚರದಲ್ಲಿ ನಾವಿರಬೇಕು. ಯಾವುದೇ ಕಾರಣಕ್ಕೂ ನಮ್ಮ ಯುಪಿಐ ಐಡಿ ಅಥವಾ ಬ್ಯಾಂಕ್ ಮಾಹಿತಿಯನ್ನು ಅಪರಿಚಿತರ ಜತೆ ಹಂಚಿಕೊಳ್ಳಬಾರದು. ಅಪರಿಚಿತರಿಂದ ಅಥವಾ ಶಂಕಾಸ್ಪದ ವ್ಯಕ್ತಿಗಳಿಂದ ಬರುವ ಯಾವುದೇ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಲು ಹೋಗಬಾರದು. ಜತೆಗೆ, ಒಟಿಪಿಗಳನ್ನು ಯಾರೊಂದಿಗೂ ಹಂಚಿಕೊಳ್ಳಬಾರದು. ಇವಿಷ್ಟು ಮಾಡುವುದರಿಂದ ಖಂಡಿತವಾಗಿಯೂ ನೀವು ವಂಚಕರ ಜಾಲಕ್ಕೆ ಬೀಳದೆ ಬಚಾವ್ ಆಗಬಹುದು. ಹಾಗೆಯೇ, ಆನ್ಲೈನ್ ವ್ಯವಹಾರ ಮಾಡುವಾಗ ಅಥವಾ ಹಣವನ್ನು ಪಾವತಿಸುವಾಗ ವ್ಯಕ್ತಿಯ ನೈಜತೆಯನ್ನು ತಿಳಿಯಲು ಪ್ರಯತ್ನಿಸಿ. ಅದರಲ್ಲೂ ಆನ್ಲೈನ್ ವೇದಿಕೆಗಳಲ್ಲಿ ಖರೀದಿಸುವಾಗ ಬಹಳ ಹುಷಾರ್ ಆಗಿರಬೇಕು. ಸಿಕ್ಕ ಸಿಕ್ಕ ತಾಣಗಳಲ್ಲಿ ಖರೀದಿಗೆ ಮುಂದಾಗಬಾರದು. ವಿಶ್ವಾಸಾರ್ಹ ವೇದಿಕೆಗಳನ್ನು ಮಾತ್ರ ಬಳಸಿ. ಒಂದೊಮ್ಮೆ ನೀವು ಯುಪಿಐ ಬಳಸುತ್ತಿದ್ದರೆ ಕೋಡ್ ಮೂಲಕ ಅದನ್ನು ಸೆಕ್ಯುರ್ ಮಾಡಿಟ್ಟುಕೊಳ್ಳಿ. ಭೀಮ್, ಫೋನ್ಪೇ, ಗೂಗಲ್ ಪೇ ಸೇರಿದಂತೆ ಎಲ್ಲಯುಪಿಐ ಪೇಮೆಂಟ್ ತಾಣಗಳು ಬಳಕೆದಾರರಿಗೆ ಸೆಕ್ಯುರಿಟಿ ಪಿನ್ ಮಾಡಲು ಅವಕಾಶ ಮಾಡಿಕೊಟ್ಟಿರುತ್ತವೆ. ಹಾಗಾಗಿ, ತಪ್ಪದೇ ಸೆಕ್ಯುರಿಟಿ ಪಿನ್ ಸೆಟ್ ಮಾಡಿಕೊಳ್ಳಿ. ಅಪರಿಚಿತರಿಂದ ವ್ಯವಹರಿಸುವಾಗ ಸಾಧ್ಯವಾದಷ್ಟು ನಗದು ಮೂಲಕ ವಹಿವಾ ಮಾಡುವುದು ಉತ್ತಮ. ಇದರಿಂದ ಆನ್ಲೈನ್ ವಂಚನೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿದೆ. </p><p><b>ಎಚ್ಚರಿಕೆಯೊಂದೇ ದಾರಿ<br /></b>ಆನ್ಲೈನ್ ಹಣಕಾಸು ವ್ಯವಹಾರ ಹೆಚ್ಚಾದಂತೆ ಆನ್ಲೈನ್ ವಂಚನೆಗಳೂ ಹೆಚ್ಚಾಗುತ್ತಿರುವುದು ಸತ್ಯ. ಹಾಗಾಗಿ, ನಾವು ಯಾವಾಗಲೂ ಬಹಳ ಎಚ್ಚರಿಕೆಯಿಂದ ಇರಬೇಕಾಗುತ್ತದೆ. ವಿಶೇಷವಾಗಿ, ಆನ್ಲೈನ್ ತಾಣಗಳ ಮೂಲ ಹಣ ಪಾವತಿಸುವ ಸಂದರ್ಭ ಎದುರಾದಾಗ ಎಷ್ಟು ಸಾಧ್ಯವೋ ಅಷ್ಟು ಮುಂಜಾಗೃತೆಯನ್ನು ವಹಿಸಿಕೊಳ್ಳಬೇಕು. ನಾವು ಯಾರಿಗೆ ಹಣ ಪಾವತಿಸುತ್ತಿದ್ದೇವೆ ಎಂಬುದರ ಬಗ್ಗೆ ಗೊತ್ತಿರಬೇಕು. ಚೂರೇ ಚೂರು ಸಂಶಯ ಬಂದರೂ ಆನ್ಲೈನ್ ಮೂಲಕ ಹಣ ಪಾವತಿಸಲು ಹೋಗಬೇಡಿ. ಹಾಗೆಯೇ, ಅಪರಿಚಿತರಿಂದ ಬರುವ ಯಾವುದೇ ರೀತಿಯ ಕ್ಯೂಆರ್ ಕೋಡ್ಗಳನ್ನು ಸ್ಕ್ಯಾನ್ ಮಾಡಲು ಹೋಗಲೇ ಬೇಡಿ. ಹಣ ಕಳೆದುಕೊಂಡು ಪರಿತಪಿಸುವುದಕ್ಕಿಂತ ಕಳೆದುಕೊಳ್ಳದಂತೆ ನೋಡಿಕೊಳ್ಳುವುದು ಬೆಸ್ಟ್ ಉಪಾಯ ಅಲ್ಲವೇ?</p><div class="separator" style="clear: both; text-align: center;"><a href="https://blogger.googleusercontent.com/img/b/R29vZ2xl/AVvXsEg7JGce6RAr0BdwVdB2qDgOnG0P-33M8miC2SPs0Y1vVhdwI4JioOSEOk6wqnOYvrp6yAPNn0mv86_YyAmUNT47PwcZr12ZF1_KwP5v2HbqM65hx0gzREMBfM6HHb9hDTGNUHxfT_Q8-32DqyFcZ4Yl5-Pq27R6aYe6eWaXuWRii3yhPNrx_QP6YhiS/s2283/teck.jpg" imageanchor="1" style="margin-left: 1em; margin-right: 1em;"><img border="0" data-original-height="2283" data-original-width="1329" height="640" src="https://blogger.googleusercontent.com/img/b/R29vZ2xl/AVvXsEg7JGce6RAr0BdwVdB2qDgOnG0P-33M8miC2SPs0Y1vVhdwI4JioOSEOk6wqnOYvrp6yAPNn0mv86_YyAmUNT47PwcZr12ZF1_KwP5v2HbqM65hx0gzREMBfM6HHb9hDTGNUHxfT_Q8-32DqyFcZ4Yl5-Pq27R6aYe6eWaXuWRii3yhPNrx_QP6YhiS/w372-h640/teck.jpg" width="372" /></a></div><br /><p><br /></p>ಮಲ್ಲಿಕಾಜು೯ನ ತಿಪ್ಪಾರhttp://www.blogger.com/profile/03103441547302200527noreply@blogger.com0tag:blogger.com,1999:blog-6897854439810696140.post-80572068562266665852022-05-17T21:26:00.000+05:302022-05-17T21:26:18.327+05:30Ravindra Jadeja- ಜಡೇಜಾ ಅಂದರೆ 'ಜಯ'<p><span style="background-color: #f4cccc;">ಮೂರೂ ಮಾದರಿಯ ಕ್ರಿಕೆಟ್ನಲ್ಲಿಭಾರತೀಯ ಕ್ರಿಕೆಟ್ ತಂಡದ ಕಾಯಂ ಸದಸ್ಯರಾಗಿರುವ ರವೀಂದ್ರ ಜಡೇಜಾ ಅವರೀಗ ಐಪಿಎಲ್ನಲ್ಲಿಸಿಎಸ್ಕೆ ತಂಡದ ನಾಯಕ.</span></p><p><br /></p><p><b>- ಮಲ್ಲಿಕಾರ್ಜುನ ತಿಪ್ಪಾರ</b><br />ಸಂದರ್ಶಕ: ವೃತ್ತಿ ಜೀವನದ ಅಂತ್ಯಕ್ಕೆ ನಿಮ್ಮ ಹೆಸರಿನಲ್ಲಿವಿಶಿಷ್ಟ ದಾಖಲೆ ಯಾವುದು ಇರಬೇಕೆಂದು ಇಚ್ಛಿಸುತ್ತೀರಿ?<br />ಕ್ರಿಕೆಟಿಗ: ಒಂದೇ ಪಂದ್ಯದಲ್ಲಿ ಐದು ವಿಕೆಟ್ ಹಾಗೂ ಶತಕ ಗಳಿಸಿದ ದಾಖಲೆ.</p><p>ಹೀಗೆ, ತಮ್ಮ ದಾಖಲೆ ಯಾವುದು ಇರಬೇಕೆಂದು ಹೇಳಿ ಅದನ್ನು ಸಾಧಿಸಿದ ಕ್ರಿಕೆಟಿಗ ಬೇರೆ ಯಾರೂ ಅಲ್ಲ, ವಿಶ್ವದ ನಂ.1 ಆಲ್ರೌಂಡರ್ ರವೀಂದ್ರ ಜಡೇಜಾ. ಆದರೆ, ಅವರ ವೃತ್ತಿಜೀವನ ಅಂತ್ಯವಾಗುತ್ತಿಲ್ಲ; ಈಗಷ್ಟೇ ಉಚ್ಛ್ರಾಯ ಸ್ಥಿತಿಗೆ ತಲುಪಿದೆ!</p><p>ಖಾಸಗಿ ಕ್ರೀಡಾ ವಾಹಿನಿಯೊಂದು 2018ರಲ್ಲಿನಡೆಸಿದ ಸಂದರ್ಶನದ ತುಣುಕು ಇದು. ಇದಾಗಿ ನಾಲ್ಕು ವರ್ಷದಲ್ಲೇ ಜಡೇಜಾ ತಮ್ಮ ಕನಸಿನ ದಾಖಲೆ ಪೂರ್ತಿಗೊಳಿಸುವ ಟೆಸ್ಟ್ ಪಂದ್ಯವನ್ನು ಆಡಿದರು. ಕಳೆದ ಮಾರ್ಚ್ ತಿಂಗಳಲ್ಲಿ ಮೊಹಾಲಿಯಲ್ಲಿ ನಡೆದ ಪ್ರವಾಸಿ ಶ್ರೀಲಂಕಾ ವಿರುದ್ಧ ಮೊದಲ ಟೆಸ್ಟ್ನಲ್ಲಿ ಜಡೇಜಾ ಅವರು 7ನೇ ವಿಕೆಟ್ನಲ್ಲಿ ಅಮೋಘ 175 ರನ್ಗಳನ್ನು ಸಿಡಿಸಿ, ಮೊದಲ ಇನಿಂಗ್ಸ್ನಲ್ಲಿ 5 ವಿಕೆಟ್ ಗೊಂಚಲು ಕೂಡ ಪಡೆದುಕೊಂಡು, ತಮ್ಮ ಕನಸಿನ ದಾಖಲೆ ಸಾಧಿಸಿ ಬೀಗಿದರು. ಈ ಸಂದರ್ಶನದ ತುಣುಕನ್ನು ಯಾಕೆ ಪ್ರಸ್ತಾಪಿಸಬೇಕಾಯಿತು ಎಂದರೆ, ತಾವು ಅಂದುಕೊಂಡಿದ್ದನ್ನು ಛಲ ಬಿಡದೇ ಸಾಧಿಸುವ ಗುಣ ಅವರಲ್ಲಿದೆ. ಆ ಗುಣವೇ ಅವರನ್ನೀಗ ನಾಲ್ಕು ಬಾರಿ ಐಪಿಎಲ್ ಚಾಂಪಿಯನ್ ಪಟ್ಟ ಏರಿರುವ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ಕೆ) ತಂಡದ ನಾಯಕತ್ವದವರೆಗೂ ಕರೆ ತಂದಿದೆ. </p><p>ವರ್ಷದಿಂದ ವರ್ಷಕ್ಕೆ ಪರಿಪೂರ್ಣ ಆಟಗಾರರಾಗಿ ಬದಲಾಗುತ್ತಿರುವ ರವೀಂದ್ರ ಜಡೇಜಾ ಭಾರತೀಯ ಕ್ರಿಕೆಟ್ನ ಬಹುದೊಡ್ಡ ಆಸ್ತಿ ಮತ್ತು ಇದೇ ಮಾತನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೂ ಅನ್ವಯಿಸಬಹುದು. ಜಡೇಜಾ 2012ರ ಆವೃತ್ತಿಯಿಂದ ಸಿಎಸ್ಕೆ ಬಳಗದಲ್ಲಿದ್ದಾರೆ. ಆ ಆವೃತ್ತಿಯ ಹರಾಜಿನಲ್ಲಿ ಅವರನ್ನು 9.8 ಕೋಟಿ ರೂಪಾಯಿಗೆ ಸಿಎಸ್ಕೆ ಫ್ರಾಂಚೈಸಿ ಖರೀದಿಸಿತ್ತು. ಅದು ಆಗ ದಾಖಲೆ. ಕಳೆದ ಹರಾಜಿಗೂ ಮೊದಲು 16 ಕೋಟಿ ರೂಪಾಯಿ ತೆತ್ತು ಅವರನ್ನು ತಂಡದಲ್ಲಿ ಉಳಿಸಿಕೊಳ್ಳಲಾಗಿದೆ. 33 ವರ್ಷದ ಜಡೇಜಾ ಐಪಿಎಲ್ ಸಿಎಸ್ಕೆ ಪರವಾಗಿ ಅದ್ಭುತವಾದ ಆಟವನ್ನೇ ಆಡಿದ್ದಾರೆ. ಐಪಿಎಲ್ನಲ್ಲಿ ಈವರೆಗೆ 200 ಪಂದ್ಯಗಳನ್ನಾಡಿ 2386 ರನ್ಗಳೊಂದಿಗೆ 127 ವಿಕೆಟ್ ಕೂಡ ಕಿತ್ತಿದ್ದಾರೆ. </p><p>ಕ್ರಿಕೆಟ್ನಲ್ಲಿ ‘ಸವ್ಯಸಾಚಿ’ಗಳಿಗೂ ಎಂದಿಗೂ ವಿಶೇಷ ಸ್ಥಾನವಿದೆ. ಕ್ರಿಕೆಟ್ ಇತಿಹಾಸವನ್ನು ನೋಡಿದರೆ ಗ್ಯಾರಿ ಸೋಬರ್ಸ್, ಜಾಕಸ್ ಕಾಲಿಸ್, ಕಪಿಲ್ ದೇವ್, ಇಮ್ರಾನ್ ಖಾನ್, ರಿಚರ್ಡ್ ಹ್ಯಾಡ್ಲಿ, ಕೇಥ್ ಮಿಲ್ಲರ್, ಲ್ಯಾನ್ಸ್ ಕ್ಲುಸ್ನರ್, ಟೋನಿ ಗ್ರೇಗ್ನಂಥ ಆಟಗಾರರು ಕ್ರಿಕೆಟ್ಗೆ ಹೊಸ ಮೆರುಗು ತಂದುಕೊಟ್ಟಿದ್ದಾರೆ. ಅದೇ ಸಾಲಿನಲ್ಲಿ ಜಡೇಜಾ ಕೂಡ ಸಾಗುತ್ತಿದ್ದಾರೆ. ಬ್ಯಾಟ್, ಬಾಲ್ ಮತ್ತು ಫೀಲ್ಡಿಂಗ್ ಮೂಲಕ ತಮ್ಮ ತಂಡವನ್ನು ಯಶಸ್ಸಿನ ದಡಕ್ಕೆ ಕೊಂಡೊಯ್ಯುವ ಪ್ರಯತ್ನವನ್ನು ಪ್ರತಿ ಪಂದ್ಯದಲ್ಲಿ ಮಾಡುತ್ತಲೇ ಬಂದಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಅವರು ಭಾರತೀಯ ಟೆಸ್ಟ್ ಕ್ರಿಕೆಟ್ ತಂಡದ ಕಾಯಂ ಆಟಗಾರನಾಗಿ ರೂಪುಗೊಳ್ಳುತ್ತಿದ್ದಾರೆ ಹಾಗೂ ಅವರ ಪ್ರಯತ್ನದ ಫಲವಾಗಿ ಹಲವು ಪಂದ್ಯಗಳನ್ನು ಗೆಲ್ಲಲು ಸಾಧ್ಯವಾಗಿದೆ. ಹಾಗಾಗಿ, ಅವರನ್ನು ‘ಮ್ಯಾಚ್ ವಿನ್ನರ್’ ಎಂದು ಹೇಳಿದರೆ ಅತಿಯಾಗದು. ಟೆಸ್ಟ್ ಆಗಲಿ, ಒನ್ ಡೇ, ಟಿ20 ಅಥವಾ ಐಪಿಎಲ್ ಪಂದ್ಯವೇ ಆಗಿರಲಿ, ಸೋಲಿನ ಅಂಚಿನಲ್ಲಿದ್ದ ತಂಡವನ್ನು ಏಕಾಂಗಿಯಾಗಿ ಬ್ಯಾಟ್ ಹಾಗೂ ಬಾಲ್ ಮೂಲಕ ಮೇಲಕ್ಕೆತ್ತಿದ ಉದಾಹರಣೆಗಳಿವೆ.</p><p>ಹಾಗಂತ, ಅವರೇನೂ ಬ್ಯಾಟಿಂಗ್ ಮತ್ತು ಬೌಲಿಂಗ್ನಲ್ಲಿ ಅದ್ಭುತವಾದ್ದನ್ನು ಮಾಡುವುದಿಲ್ಲ. ಬದಲಿಗೆ, ತಮ್ಮ ಆಟವನ್ನು ಶಿಸ್ತುಬದ್ಧವಾಗಿ ಆಡುತ್ತಾರಷ್ಟೇ. ಉದಾಹರಣೆಗೆ, ರವೀಚಂದ್ರನ್ ಅಶ್ವಿನ್ ರೀತಿಯಲ್ಲಿ ಜಡೇಜಾ ಅವರೇನೂ ಒಂದೇ ಓವರ್ನಲ್ಲಿ 6 ಬಾಲ್ಗಳನ್ನು ಒಂದಕ್ಕಿಂತ ಒಂದು ಭಿನ್ನವಾಗಿ ಎಸೆಯುವುದಿಲ್ಲ. ಬದಲಿಗೆ ಸ್ಟಂಪ್ ಟು ಸ್ಟಂಪ್ ಹಾಗೂ ಲೈನ್ ಮತ್ತು ಲೆಂಥ್ ಕರಾರುವಕ್ಕಾಗಿ ಬೌಲಿಂಗ್ ಮಾಡುತ್ತಾರೆ. ಅವರ ಶಿಸ್ತಿನ ಬೌಲಿಂಗ್ಗೆ ಪಿಚ್ ಕೂಡ ಸಾಥ್ ನೀಡಿದರೆ ಮುಗೀತು ಎದುರಾಳಿಯ ವಿಕೆಟ್ಗಳು ಬೀಳುತ್ತಾ ಹೋಗುತ್ತವೆ. ಬ್ಯಾಟಿಂಗ್ನಲ್ಲೂ ಅಷ್ಟೇ ವಿಶೇಷವಾದ್ದನ್ನು ಏನೂ ಮಾಡಲು ಹೋಗುವುದಿಲ್ಲ, ಚೆಂಡಿನ ದಿಕ್ಕು ಮತ್ತು ಗತಿಯನ್ನು ಗುರುತಿಸಿ ಅದನ್ನು ಅಷ್ಟೇ ಶಿಸ್ತು ಬದ್ಧವಾಗಿ ಬಲವಾಗಿ ಹೊಡೆಯುತ್ತಾರೆ; ಚೆಂಡು ಬೌಂಡ್ರಿ ಗೆರೆಯನ್ನು ದಾಟಿರುತ್ತದೆ. ಇನ್ನು ಫೀಲ್ಡಿಂಗ್ನಲ್ಲಿ ಮಾತಾಡುವಂತೆಯೇ ಇಲ್ಲ, ಬಹುಶಃ ಮೊಹಮ್ಮದ್ ಕೈಫ್ ಮತ್ತು ಯುವರಾಜ್ ಸಿಂಗ್ ಅವರ ಬಳಿಕ ಭಾರತಕ್ಕೆ ಸಿಕ್ಕ ಅದ್ಭುತ ಫೀಲ್ಡರ್ ಇವರು. ಅವರ ಬಳಿ ಬಾಲ್ ಹೋದರೆ ಎದುರಾಳಿ ತಂಡದ ಬ್ಯಾಟರ್ ರನ್ ಕದಿಯಲು ಮುಂದಾಗುವುದೇ ಇಲ್ಲ! ಅಷ್ಟರ ಮಟ್ಟಿಗೆ ಅವರ ಥ್ರೋಗಳು ಕರಾರುವಕ್ಕಾಗಿರುತ್ತವೆ ಮತ್ತು ಫೀಲ್ಡಿಂಗ್ ಮೂಲಕವೇ ಬೌಂಡರಿಗಳನ್ನು ಉಳಿಸಿ ತಂಡಕ್ಕೆ ನೆರವಾಗುವ ಚಾಕಚಕ್ಯತೆ ಅವರಲ್ಲಿ ಇದೆ. ಈ ವರೆಗೆ 59 ಟೆಸ್ಟ್ಗಳಿಂದ 242 ವಿಕೆಟ್ ಹಾಗೂ 2 ಶತಕಗಳೊಂದಿಗೆ 2369 ರನ್ ಗಳಿಸಿದ್ದಾರೆ. 168 ಅಂತಾರಾಷ್ಟ್ರೀಯ ಒಂದು ದಿನದ ಪಂದ್ಯಗಳನ್ನಾಡಿ 2411 ರನ್ಗಳೊಂದಿಗೆ 188 ವಿಕೆಟ್ಗಳನ್ನು ಪಡೆದುಕೊಂಡಿದ್ದಾರೆ. 57 ಟಿ20 ಪಂದ್ಯಗಳಲ್ಲಿ47 ವಿಕೆಟ್ ಹಾಗೂ 326 ರನ್ ಗಳಿಸಿದ್ದಾರೆ.</p><p>1988 ಡಿಸೆಂಬರ್ 6ರಂದು ರವೀಂದ್ರ ಜಡೇಜಾ ಗುಜರಾತ್ನ ಜಾಮ್ನಗರದ ರಜಪೂತ್ ಕುಟುಂಬದಲ್ಲಿ ಜನಿಸಿದರು. ತಂದೆ ಅನಿರುದ್ಧ ಖಾಸಗಿ ಏಜೆನ್ಸಿ ಪರವಾಗಿ ವಾಚ್ಮನ್ ಕೆಲಸ ಮಾಡುತ್ತಿದ್ದರು. ಮಗ ಸೇನೆ ಸೇರಿಕೊಳ್ಳಲಿ ಎಂದು ತಂದೆ ಆಸೆ ಪಟ್ಟರೆ ಕ್ರಿಕೆಟ್ ಆಗುವ ಕನಸು ಕಂಡಿದ್ದ ಜಡೇಜಾಗೆ ತಾಯಿ ಲತಾ ಆಸರೆಯಾಗಿ ನಿಂತಿದ್ದರು. ಆದರೆ, ವಿಧಿ ಬೇರೆಯದ್ದೇ ಆಟ ಹೂಡಿತ್ತು. 2005ರಲ್ಲಿಅವರ ತಾಯಿ ರಸ್ತೆ ಅಪಘಾತದಲ್ಲಿಮೃತಪಟ್ಟರು. ಆಗ ಜಡೇಜಾ ಅವರಿಗೆ ಕೇವಲ 17 ವರ್ಷ. ತೀವ್ರ ಆಘಾತಕ್ಕೆ ಒಳಗಾಗಿದ್ದ ಅವರು ಕ್ರಿಕೆಟ್ ತೊರೆಯುವ ನಿರ್ಧಾರ ಮಾಡಿದ್ದರಂತೆ. ಆದರೆ, ತಾಯಿ ಆಸೆ ನೆರವೇರಿಸುವ ಪಣ ತೊಟ್ಟಂತೆ ತಮಗೆ ಸಿಕ್ಕ ಅವಕಾಶಗಳನ್ನು ಬಾಚಿಕೊಂಡು ಜಡೇಜಾ ಈಗ ವಿಶ್ವದ ನಂ.1 ಆಲ್ರೌಂಡರ್ ಆಗಿದ್ದಾರೆ. ಇವರಿಗೆ ಒಬ್ಬಳು ಸಹೋದರಿ ಇದ್ದಾರೆ. 2016ರಲ್ಲಿರೀವಾ ಸೋಲಂಕಿಯನ್ನು ವರಿಸಿದರು, ದಂಪತಿಗೆ ಒಂದು ಹೆಣ್ಣು ಮಗುವಿದೆ. </p><p>‘ಜಡ್ಡು’, ‘ರಾಕ್ ಸ್ಟಾರ್’, ‘ಸರ್ ಜಡೇಜಾ’ ಇತ್ಯಾದಿ ಅಡ್ಡ ಹೆಸರುಗಳನ್ನು ಹೊಂದಿರುವ ಜಡೇಡಾ, ಮೈದಾನದಲ್ಲಿಶತಕ ಅಥವಾ ಅರ್ಧ ಶತಕ ಸಿಡಿಸಿದಾಗ ಕತ್ತಿ ವರಸೆ ರೀತಿಯಲ್ಲಿ ಬ್ಯಾಟ್ ಬೀಸುವುದನ್ನು ನೋಡುವುದೇ ಚೆಂದ. 16ನೇ ವಯಸ್ಸಿಗೆ ಜಡೇಜಾ ಅಂಡರ್ 19 ವಿಶ್ವಕಪ್ ತಂಡಕ್ಕೆ ಆಯ್ಕೆಯಾದರು. ಆದರೆ, ಭಾರತ ತಂಡ ಕಪ್ ಗೆಲ್ಲಲು ಸಾಧ್ಯವಾಗಲಿಲ್ಲ. ಮುಂದೆ 2008ರಲ್ಲೂ ಅಂಡರ್-19 ಟೀಮ್ ಆಯ್ಕೆಯಾದರಲ್ಲದೇ ವೈಸ್ ಕ್ಯಾಪ್ಟನ್ ಕೂಡ ಆದರು. ಆಗ ಕ್ಯಾಪ್ಟನ್ ಆಗಿದ್ದವರು ಮತ್ತೊಬ್ಬ ದಿಗ್ಗಜ ವಿರಾಟ್ ಕೊಹ್ಲಿ. ಈ ಫೈನಲ್ನಲ್ಲಿ ದಕ್ಷಿಣ ಆಫ್ರಿಕಾವನ್ನು ಸೋಲಿಸಿ ಭಾರತೀಯ ತಂಡ ವಿಶ್ವಕಪ್ ಎತ್ತಿ ಹಿಡಿಯಿತು. ಜಡೇಜಾ 6 ಪಂದ್ಯಗಳಿಂದ 10 ವಿಕೆಟ್ ಪಡೆದುಕೊಂಡರು. 2006-07ರ ಸಾಲಿನ ಪ್ರಥಮ ದರ್ಜೆ ಕ್ರಿಕೆಟ್ಗೆ ಅಡಿ ಇಟ್ಟರು. ದೇಶಿಯ ಕ್ರಿಕೆಟ್ನಲ್ಲಿ ಸೌರಾಷ್ಟ್ರ ಪರವಾಗಿ ಅವರು ಆಡುತ್ತಾರೆ. ರಣಜಿ ಪಂದ್ಯದಲ್ಲಿ ವಿಶಿಷ್ಟ ಸಾಧನೆ ಅವರ ಹೆಸರಿನಲ್ಲಿದೆ. ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ಮೂರು ತ್ರಿಶತಕಗಳನ್ನು ಸಿಡಿಸಿದ ಮೊದಲ ಭಾರತೀಯ ಹಾಗೂ ವಿಶ್ವದಲ್ಲಿ 8ನೇ ಆಟಗಾರ ಎಂಬ ಖ್ಯಾತಿ ಅವರ ಬೆನ್ನಿಗಿದೆ. 2008-09ರ ಸಾಲಿನ ರಣಜಿ ಕ್ರಿಕೆಟ್ ಪಂದ್ಯಾವಳಿ ಅದ್ಭುತ ಆಲ್ರೌಂಡ್ ಆಟದಿಂದ ಆಯ್ಕೆಗಾರ ಗಮನ ಸೆಳೆದರು. ಈ ಟೂರ್ನಿಯಲ್ಲಿ ಅವರು 739 ರನ್ ಹಾಗೂ 42 ವಿಕೆಟ್ ಪಡೆದುಕೊಂಡು, ಭಾರತೀಯ ಒಂದು ದಿನದ ಕ್ರಿಕೆಟ್ ತಂಡದ ಕದ ತಟ್ಟಿದರು. ಕೊಲಂಬೊದಲ್ಲಿ ನಡೆದ ತಮ್ಮ ಮೊದಲ ಅಂತಾರಾಷ್ಟ್ರೀಯ ಒಡಿಐನಲ್ಲಿ 60 ರನ್ ಗಳಿಸಿದರು. ಆದರೆ, ಯಾವುದೇ ವಿಕೆಟ್ ಪಡೆಯಲಿಲ್ಲ. 2012ರಲ್ಲಿ ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡಿದರು. ಆ ನಂತರ ಜಡ್ಡು ನಿಧಾನವಾಗಿ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಭಾರತದ ತಂಡದ ಅವಿಭಾಜ್ಯ ಅಂಗವಾದರು.</p><p>ಐಪಿಎಲ್ನಲ್ಲಿ ಸಿಎಸ್ಕೆ ತಂಡಕ್ಕೆ ಅದರದ್ದೇ ಆದ ಮಹತ್ವವಿದೆ; ವಿಶಿಷ್ಟ ಪರಂಪರೆಯಿದೆ. ಯಾಕೆಂದರೆ, ವಿಶ್ವದ ಅತ್ಯುತ್ತಮ ಕ್ಯಾಪ್ಟನ್ಗಳಲ್ಲಿ ಒಬ್ಬರೆನಿಸಿಕೊಂಡಿದ್ದ ಮಹೇಂದ್ರ ಸಿಂಗ್ ಧೋನಿ ಅವರು ಸಿಎಸ್ಕೆಯನ್ನು ಉನ್ನತ ಹಂತಕ್ಕೆ ಕೊಂಡೊಯ್ಯದಿದ್ದಾರೆ. ಆ ತಂಡದ ನೇತೃತ್ವ ಈಗ ಸವ್ಯಸಾಚಿ ಜಡೇಜಾ ಹೆಗಲಿಗೇರಿದೆ. ಈವರೆಗೆ ಅವರ ಆಟವನ್ನು ನೋಡುತ್ತಾ ಬಂದವರಿಗೆ ನಾಯಕನಾಗಿಯೂ ಜಡೇಜಾ ಯಶಸ್ವಿಯಾಗುತ್ತಾರೆಂಬ ನಂಬಿಕೆ ಸಿಎಸ್ಕೆ ತಂಡದ ಅಭಿಮಾನಿಗಳದ್ದು.</p><div class="separator" style="clear: both; text-align: center;"><a href="https://blogger.googleusercontent.com/img/b/R29vZ2xl/AVvXsEgRB9e_5HxerJFvu-lIaUzmwfpEP0bYnaPsVecFFsGUOWgydOdQNPTOfixnsgonKP54di6Zi-LXCR_72RxTr83ERbpo7YVQVVN74E8ng31hKxoZPafBWJ87YYzY_Ik1B46Ia6WkS-9LN59IE-xrqba31Cg_j1Ydb1LtEPfoHqKL5ExVeoUV8KtLRtr9/s3153/jadeja.jpg" imageanchor="1" style="margin-left: 1em; margin-right: 1em;"><img border="0" data-original-height="3153" data-original-width="1629" height="640" src="https://blogger.googleusercontent.com/img/b/R29vZ2xl/AVvXsEgRB9e_5HxerJFvu-lIaUzmwfpEP0bYnaPsVecFFsGUOWgydOdQNPTOfixnsgonKP54di6Zi-LXCR_72RxTr83ERbpo7YVQVVN74E8ng31hKxoZPafBWJ87YYzY_Ik1B46Ia6WkS-9LN59IE-xrqba31Cg_j1Ydb1LtEPfoHqKL5ExVeoUV8KtLRtr9/w330-h640/jadeja.jpg" width="330" /></a></div><br /><p><br /></p>ಮಲ್ಲಿಕಾಜು೯ನ ತಿಪ್ಪಾರhttp://www.blogger.com/profile/03103441547302200527noreply@blogger.com0tag:blogger.com,1999:blog-6897854439810696140.post-12093967421106995902022-05-04T23:51:00.001+05:302022-05-04T23:51:54.924+05:30Elon Musk: ಸಾಹಸಿ ಉದ್ಯಮಿ ಮಸ್ಕ್<p><i style="background-color: #f4cccc;">ಎಲಾನ್ ಮಸ್ಕ್ ಎಂಬ ವ್ಯಕ್ತಿ ಯಾವುದೇ ಅಳತೆಗೋಲಿಗೆ ಸಿಗುವ ಜಾಯಮಾನದವರಲ್ಲ; ಅವರಿಗೆ ಅವರೇ ಅಳತೆಗೋಲು, ಹೊಡೆದಿದ್ದೆಲ್ಲಗೋಲು!</i></p><p><br /></p><p><b>- ಮಲ್ಲಿಕಾರ್ಜುನ ತಿಪ್ಪಾರ</b><br />ಒಂದಷ್ಟು ಪ್ರತಿಭೆ; ಮತ್ತೊಂದಿಷ್ಟು ಹುಚ್ಚುತನ, ಒಂದಷ್ಟು ಉಡಾಫೆ; ಮತ್ತೊಂದಿಷ್ಟು ಧೈರ್ಯ, ಒಂದಷ್ಟು ಸಾಹಸ; ಮತ್ತೊಂದಿಷ್ಟು ಹುಚ್ಚು ಸಾಹಸ, ಒಂದಷ್ಟು ತಿಕ್ಕುಲತನ; ಮತ್ತೊಂದಿಷ್ಟು ಮೊಂಡತನ, ಒಂದಷ್ಟು ಹುಮ್ಮಸ್ಸು; ಮತ್ತೊಂದಿಷ್ಟು ಕನಸು, ಒಂದಷ್ಟು ಸೊಗಸುಗಾರ; ಮತ್ತೊಂದಿಷ್ಟು ಮೋಜುಗಾರ... ಈ ಒಂದಿಷ್ಟು ಮತ್ತು ಮತ್ತೊಂದಿಷ್ಟು ಒಟ್ಟು ಮೊತ್ತವೇ ಎಲಾನ್ ರೀವ್ ಮಸ್ಕ್ ಅಲಿಯಾಸ್ ಎಲಾನ್ ಮಸ್ಕ್.</p><p>ಭೂಮಿ ಮೇಲಿನ ಅತಿ ದೊಡ್ಡ ಶ್ರೀಮಂತ ವ್ಯಕ್ತಿ ಎಲಾನ್ ಮಸ್ಕ್, ಹೆಚ್ಚಾಗಿ ನಷ್ಟವನ್ನು ಉಲಿಯುತ್ತಿದ್ದ ‘ಟ್ವಿಟರ್’ ಖರೀದಿಯ ಮೂಲಕ ತಾನೆಂಥ ಹುಚ್ಚು ಸಾಹಸಿಗ ಎಂಬುದನ್ನು ಮತ್ತೊಮ್ಮೆ ನಿರೂಪಿಸಿದ್ದಾರೆ. ಈ ಹುಚ್ಚುತನ ಅವರ ವ್ಯಕ್ತಿತ್ವದಲ್ಲಿದೆ, ಯಾರೂ ಕಾಣದ ಕನಸು ಕಂಡು ಅದನ್ನು ನನಸು ಮಾಡಿಕೊಳ್ಳುವ ಛಾತಿ ಅವರಿಗೆ ಒಗ್ಗಿದೆ ಅದೇ ಕಾರಣಕ್ಕೆ. ಎಷ್ಟೋ ರಾಷ್ಟ್ರಗಳು ಚಂದ್ರನಲ್ಲಿಗೆ ಹೋಗಲು ಪ್ಲ್ಯಾನ್ ಮಾಡುತ್ತಿರುವಾಗಲೇ, ಮಂಗಳನ ಅಂಗಳಲ್ಲಿ ಮಾನವರ ಕಾಲನಿ ಸೃಷ್ಟಿಸಬೇಕೆಂಬ ಹುಚ್ಚು ಕನಸು ಕಾಣಲು ಸಾಧ್ಯವಾಗುವುದು ಮಸ್ಕ್ಗೆ ಮಾತ್ರವೇ ಸಾಧ್ಯ. ಬರೀ ಕನಸಷ್ಟೇ ಅಲ್ಲ, ಆ ದಿಶೆಯಲ್ಲಿ ಯೋಜಿಸಿ, ರೂಪಿಸಿ ಮುಂದಡಿ ಇಡಬಲ್ಲ ಧೈರ್ಯಗಾರನೂ.</p><div class="separator" style="clear: both; text-align: center;"><a href="https://blogger.googleusercontent.com/img/b/R29vZ2xl/AVvXsEgM0lHomm_0saOwbCrqH6AbQ2nRsg6_SW70AmPA66JkK-R7aLxRguL4RlJCJVTNmYG6e-sPxeUNOxQolZKE5TH3PHPTmQm4NvGS1B8kal912JXxUPT4uiqoxETTT5iy76BaD6hl11SSXUTVIGRdjQcBHx-jbEc2jlSH2puHwDYyZz1ioc7HeI-g-4P9/s800/Elon%20Musk.jpg" imageanchor="1" style="clear: left; float: left; margin-bottom: 1em; margin-right: 1em;"><img border="0" data-original-height="600" data-original-width="800" height="240" src="https://blogger.googleusercontent.com/img/b/R29vZ2xl/AVvXsEgM0lHomm_0saOwbCrqH6AbQ2nRsg6_SW70AmPA66JkK-R7aLxRguL4RlJCJVTNmYG6e-sPxeUNOxQolZKE5TH3PHPTmQm4NvGS1B8kal912JXxUPT4uiqoxETTT5iy76BaD6hl11SSXUTVIGRdjQcBHx-jbEc2jlSH2puHwDYyZz1ioc7HeI-g-4P9/s320/Elon%20Musk.jpg" width="320" /></a></div><p>ಇಲ್ಲಿ ಒಂದು ಘಟನೆ ಹೇಳಬೇಕು; ಬಿಟ್ ಕಾಯಿನ್ ಕುರಿತು ಮಸ್ಕ್ ಒಂದೇ ಒಂದು ಮಸ್ಕರಿ ಟ್ವೀಟ್ ಮಾಡಿದ್ದರು. ಅದರಿಂದ ಅವರ ಟೆಸ್ಲಾ ಕಂಪನಿಗೆ ಒಂದು ಲಕ್ಷ ಕೋಟಿ ರೂ.ಗೆ ಅಧಿಕ ನಷ್ಟ ಉಂಟು ಮಾಡಿತು ಮತ್ತು ವಿಶ್ವದ ನಂಬರ್ 1 ಶ್ರೀಮಂತ ಪಟ್ಟ ಕಳೆದುಕೊಳ್ಳಬೇಕಾಯಿತು. ಮತ್ತೊಮ್ಮೆ ಟೆಸ್ಲಾ ಕಂಪನಿಯು ವರ್ಷಕ್ಕೆ 5 ಲಕ್ಷ ಕಾರುಗಳನ್ನು ತಯಾರಿಸುತ್ತಿದೆ ಎಂಬ ಉತ್ಪ್ರೇಕ್ಷೆಯ ಹೇಳಿಕೆ ನೀಡಿದ್ದಕ್ಕಾಗಿ ಕಂಪನಿಯ ಪಾಲುದಾರರು ಮಸ್ಕ್ನ ಮೇಲೆ ಸಿಟ್ಟಾಗಿ ಈತನ ಟ್ವಿಟ್ಟರ್ ಖಾತೆಯನ್ನು ನಿಷೇಧಿಸುವಂತೆ ಆಗ್ರಹಿಸಿದ್ದರು. ಮಸ್ಕ್ ಅವರ ಈ ತರಹದ ಹುಚ್ಚಾಟಗಳು ಬೇಕಾದಷ್ಟಿವೆ. ಆದರೆ, ಅವರ ಒಟ್ಟಾರೆ ವ್ಯಕ್ತಿತ್ವದಲ್ಲಿನಮಗೆ ಪ್ರೇರಣೆಯಾಗಬಲ್ಲಸಾಕಷ್ಟು ಸಂಗತಿಗಳಿವೆ ಎಂಬುದೂ ಅಷ್ಟೇಸತ್ಯ. </p><p>ಎಲಾನ್ ಮಸ್ಕ್ ಅವರ ಹೆಸರಿನಲ್ಲಿ ಕಂಪನಿಗಳಿಗೆ ಒಂದಾ, ಎರಡಾ...? ಸ್ಪೇಸ್ಎಕ್ಸ್, ಟೆಸ್ಲಾ, ಬೋರಿಂಗ್ ಕಂಪನಿ, ಗಿ.್ಚಟಞ, ಪೇಪಾಲ್, ನ್ಯೂರೊಲಿಂಕ್, ಓಪನ್ಎಐ, ಝಿಪ್ 2, ಮಸ್ಕ್ ಫೌಂಡೇಷನ್(ಈ ಕಂಪನಿಗಳ ಪಟ್ಟಿಯಲ್ಲಿಕೆಲವು ಮಾರಿದ್ದು ಇದೆ)... ಹೀಗೆ ಪಟ್ಟಿ ದೊಡ್ಡದಿದೆ; ಈಗ ಹೊಸದಾಗಿ ಟ್ವಿಟರ್ ಮಾಲೀಕ. ಅವರ ಈ ಸಾಹಸ ಕಂಡು, ನೇಟಿಜನ್ಸ್ ಆ ಕಂಪನಿ ಖರೀದಿಸಿ, ಈ ಕಂಪನಿ ಖರೀದಿಸಿ ಎಂಬ ಪುಕ್ಕಟೆ ಸಲಹೆಗಳನ್ನು ಕೂಡ ಕೊಡುತ್ತಿದ್ದಾರೆ! ಈ ಸಲಹೆಗಳು ನಿಜವಾದರೂ ಆಗಬಹುದು. ಯಾಕೆಂದರೆ, 2017ರಲ್ಲಿಮಸ್ಕ್ ಅವರು, ‘‘ಐ ಲವ್ ಟ್ವಿಟರ್,’’ ಎಂದು ಟ್ವೀಟ್ ಮಾಡಿದ್ದರು. ‘‘ಹಾಗಿದ್ದರೆ ನೀವು ಅದನ್ನು ಖರೀದಿಸಿ,’’ ಎಂದು ನಿರೂಪಕ ಡೇವ್ ಸ್ಮಿತ್ ಮರು ಪ್ರತಿಟ್ವೀಟಿಸಿದ್ದರು. ಇದಕ್ಕೆ ಪ್ರತಿಯಾಗಿ ಮಸ್ಕ್, ‘‘ಎಷ್ಟಂತೆ ಅದರ ಬೆಲೆ,’’ ಎಂದು ಪ್ರಶ್ನಿಸಿದ್ದರು. ಮೊನ್ನೆ ಮಸ್ಕ್ ಟ್ವಿಟರ್ ಖರೀದಿಸಿದಾಗ ಈ ಹಳೆಯ ಟ್ವೀಟ್ ಸಿಕ್ಕಾಪಟ್ಟೆ ವೈರಲ್ ಆಗಿತ್ತು!</p><p>ಎಲಾನ್ ಮಸ್ಕ್ ಅವರು 1971ರ ಜೂನ್ 28ರಂದು ದಕ್ಷಿಣ ಆಫ್ರಿಕಾದಲ್ಲಿ, ಕೆನಡಾದ ತಾಯಿತಂದೆಗಳಿಗೆ ಜನಿಸಿದರು. ಅವರ ಶಾಲಾ ದಿನಗಳು ಅಷ್ಟೇನೂ ಚೆನ್ನಾಗಿರಲಿಲ್ಲ. ಅವರೇ ಹೇಳಿಕೊಂಡಿರುವಂತೆ; ಮಸ್ಕ್ ಪುಸ್ತಕದ ಹುಳು. ಎನ್ಸೈಕ್ಲೋಪಿಡಿಯಾಗಳಿಂದ ಹಿಡಿದು ಕಾಮಿಕ್ ಬುಕ್ ಗಳವರೆಗೆ ಎಲ್ಲವನ್ನು ಓದುತ್ತಿದ್ದರಂತೆ. ಪ್ರಿಟೋರಿಯಾ ನಗರದಲ್ಲಿರುವ ವಾಟರ್ಕ್ಲೂಫ್ ಹೌಸ್ ಪ್ರಿಪರೇಟರಿ ಸ್ಕೂಲ್ ಸೇರಿಕೊಂಡರು. ಬಳಿಕ ಪ್ರಿಟೋರಿಯಾ ಬಾಯ್ಸ್ ಹೈಸ್ಕೂಲ್ನಲ್ಲಿಶಿಕ್ಷ ಣ ಪಡೆದುಕೊಂಡರು. ಈ ದಿನಗಳು ಅವರಿಗೆ ಹೆಚ್ಚು ಏಕಾಂಗಿತನವನ್ನು ಕೊಟ್ಟವು. ಆದರೆ, ಎಲಾನ್ ಎಂಥ ಬುದ್ಧಿಶಾಲಿ ಎಂದರೆ, 10ನೇ ವಯಸ್ಸಿನಲ್ಲೇ ಸಾಫ್ಟ್ವೇರ್ ಕೋಡಿಂಗ್ ಕಲಿತುಕೊಂಡು, 12ನೇ ವಯಸ್ಸಿನಲ್ಲೇ ಒಂದು ವಿಡಿಯೋ ಗೇಮ್ ತಯಾರಿಸಿದರು. ಮುಂದೆ, ಎಕಾನಮಿಕ್ಸ್ ಪದವಿಗೆ ಸೇರಿದರು. ಆದರೆ, ಈ ಕೋರ್ಸ್ ತಮಗಲ್ಲಎಂಬುದು ಗೊತ್ತಾಗುತ್ತಿದ್ದಂತೆ ಸೇರಿದ ಎರಡು ದಿನದಲ್ಲೇ ಅದನ್ನು ಬಿಟ್ಟು ‘ಝಿಪ್2’ ಎಂಬ ಸಾಫ್ಟ್ವೇರ್ ಸಂಸ್ಥೆಯನ್ನು ಸ್ಥಾಪಿಸಿದರು. ನಂತರ ಅದನ್ನು ಕಾಂಪಾಕ್ ಕಂಪನಿಗೆ 340 ದಶಲಕ್ಷ ಡಾಲರಿಗೆ ಮಾರಾಟ ಮಾಡಿದರು. ಆಗ ಮಸ್ಕ್ ಅವರಿಗೆ ಕೇವಲ 28 ವರ್ಷ. ಈ ವಯಸ್ಸಿಗೆ ಹೊತ್ತಿಗೆ ನಾವು- ನೀವಾದರೆ ಕೆಲಸ ಹುಡ್ಕೊಂಡು ಅಲೆಯುತ್ತಿದ್ದೆವು. ಆನಂತರ ಪೇಪಾಲ್ ಎಂಬ ಆನ್ಲೈನ್ ಹಣಪಾವತಿ ಕಂಪನಿಯನ್ನು ಹುಟ್ಟುಹಾಕಿ ನಂತರ ಅದನ್ನು ಇಬೇ ಕಂಪನಿಗೆ 120 ಕೋಟಿ ಡಾಲರ್ಗೆ ಮಾರಾಟ ಮಾಡಿದರು ಮಸ್ಕ್. ಟೆಸ್ಲಾಎಂಬ ವಿದ್ಯುತ್ ಚಾಲಿತ ಕಾರ್ ತಯಾರಿಕಾ ಕಂಪನಿ ಪ್ರಾರಂಭಿಸಿದರು. ಚಿಕ್ಕಂದಿನಿಂದಲೇ ಐಸಾಕ್ ಅಸಿಮೋವ್ ಮುಂತಾದ ವಿಜ್ಞಾನ ಲೇಖಕರನ್ನು ಓದುತ್ತ ಬೆಳೆದ ಮಸ್ಕ್ಗೆ ಬಾಹ್ಯಾಕಾಶ ಸಂಶೋಧನೆಯ ಹುಚ್ಚು. ಅದಕ್ಕಾಗಿಯೇ ಸ್ಪೇಸ್ ಎಕ್ ್ಸಪ್ಲೋರೇಷನ್ (ಸ್ಪೇಸ್ಎಕ್ಸ್) ಎಂಬ ಕಂಪನಿಯನ್ನು ಆಂಭಿಸಿದರು. ಮಸ್ಕ್ ಅವರ ಉದ್ಯಮ ಹುಚ್ಚು ಸಾಹಸಗಳು ಇಷ್ಟಕ್ಕೆ ನಿಲ್ಲುವುದಿಲ್ಲ. ಒಂದರ ಮೇಲೊಂದು ಕಂಪನಿಗಳು ಆರಂಭಿಸುವುದು, ಇಲ್ಲವೇ ಸ್ವಾಧೀನ ಮಾಡಿಕೊಳ್ಳುವುದು ಅಥವಾ ಮಾರುವುದು ಈವರೆಗೆ ನಡೆದುಕೊಂಡು ಬಂದಿದೆ. </p><p>ಉದ್ಯಮ ಸಾಹಸದಂತೆ ಅವರ ವೈಯಕ್ತಿಕ ಜೀವನವೂ ರೋಚಕವಾಗಿದೆ. ಎರಡು ಮದುವೆಗಳಾಗಿವೆ. ಸದ್ಯಕ್ಕೆ ಅವಿವಾಹಿತ. ಮೊದಲ ಹೆಂಡತಿ ಜಸ್ಟಿನ್ ವಿಲ್ಸನ್. ಈಕೆ ಕೆನಡಾದ ಲೇಖಕಿ. 2000ರಿಂದ 2008ರವರೆಗೆ ಮದುವೆ ಬಾಳಿಕೆ ಬಂತು. ಆ ನಂತರ ಇಂಗ್ಲಿಷ್ ನಟಿ ತಾಲುಲಾ ರಿಲೇ ಅವರನ್ನು 2010ರಲ್ಲಿಮದುವೆಯಾದರು; 2016ರಲ್ಲಿಬೇರೆ ಬೇರೆಯಾದರು. ಮಸ್ಕ್ಗೆ ಒಟ್ಟು ಆರು ಮಕ್ಕಳಿದ್ದಾರೆ. 2018ರಿಂದ ಕೆನಡಾದ ಗಾಯಕಿ, ಸಾಂಗ್ ರೈಟರ್ ಗ್ರೀಮ್ಸ್ (ಕ್ಲೇರ್ ಎಲಿಸ್ ಬೌಚರ್) ಜತೆ ಸಂಬಂಧವಿಟ್ಟುಕೊಂಡಿದ್ದಾರೆ. ಒಂದು ಮಗುವಿದೆ. ಹಲವು ಗುಪ್ತ ಪ್ರಣಯಗಳೂ ಇವೆ. ಫೋರ್ಬ್ಸ್ ಪತ್ರಿಕೆ ಮಸ್ಕ್ ಅವರನ್ನು ಜಗತ್ತಿನ 25 ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳ ಸಾಲಿನಲ್ಲಿಸೇರಿಸಿದೆ.</p><p>ಮಸ್ಕ್ ಅವರಲ್ಲಿಇನ್ನೂ ಏನೇನು ಕನಸುಗಳಿವೆಯೋ? ಎಂಥ ಹುಚ್ಚ ಸಾಹಸಗಳಿಗೆ ಅಣಿಯಾಗುತ್ತಿದ್ದಾರೋ ಯಾರಿಗೆ ಗೊತ್ತು? ಅನಿರೀಕ್ಷಿತ ನಿರ್ಧಾರ ಕೈಗೊಳ್ಳುವುದರಲ್ಲಿಸಿದ್ಧಹಸ್ತರಾಗಿರುವ ವ್ಯಕ್ತಿಯ ನಡೆಯನ್ನು ಊಹಿಸುವುದು ಕಷ್ಟ. ಅವರ ಈ ಗುಣವೇ ಅವರನ್ನು ಇಂದು ವಿಶ್ವದ ಶ್ರೀಮಂತ ವ್ಯಕ್ತಿಸ್ಥಾನದಲ್ಲಿತಂದುಕೂರಿಸಿದೆ. ನೆಲದಿಂದ ಚಂದ್ರನಲ್ಲಿಗೆ ನೆಗೆಯುವ ಸಾಹಸಿ ಗುಣವನ್ನು ಗಟ್ಟಿಗೊಳಿಸಿದೆ.</p><p><br /></p><div class="separator" style="clear: both; text-align: center;"><a href="https://blogger.googleusercontent.com/img/b/R29vZ2xl/AVvXsEgqy4nGTdObin51Q7eLX_N90F2DZg9HFdBH8vH1kGNkyxLCjC0fI8tSluGBEFV8NSHIB_TihmRBmzIkeLwrEQsdCllIl3YDXwMkbFpjdyUNFZS81tJ1SOvtjmSL5s_mHkdFyX9K9Ev_zdqNxsbB8XsBW0dKY87DAU0fL8Ebbf6vuHItDSbrK5p740di/s3176/eloan%20musk.jpg" imageanchor="1" style="margin-left: 1em; margin-right: 1em;"><img border="0" data-original-height="3176" data-original-width="1273" height="640" src="https://blogger.googleusercontent.com/img/b/R29vZ2xl/AVvXsEgqy4nGTdObin51Q7eLX_N90F2DZg9HFdBH8vH1kGNkyxLCjC0fI8tSluGBEFV8NSHIB_TihmRBmzIkeLwrEQsdCllIl3YDXwMkbFpjdyUNFZS81tJ1SOvtjmSL5s_mHkdFyX9K9Ev_zdqNxsbB8XsBW0dKY87DAU0fL8Ebbf6vuHItDSbrK5p740di/w256-h640/eloan%20musk.jpg" width="256" /></a></div><br /><p><br /></p>ಮಲ್ಲಿಕಾಜು೯ನ ತಿಪ್ಪಾರhttp://www.blogger.com/profile/03103441547302200527noreply@blogger.com0tag:blogger.com,1999:blog-6897854439810696140.post-44528073992268529242022-02-16T18:07:00.003+05:302022-02-16T18:07:28.805+05:30Fearless Businessman Rahul Bajaj - ಹಮಾರಾ 'ರಾಹುಲ್ ಬಜಾಜ್'<p><span style="background-color: #f4cccc;"><i> ಭಾರತದ ‘ಧೈರ್ಯವಂತ’ ಉದ್ಯಮಿ ಎನಿಸಿಕೊಂಡಿದ್ದ ರಾಹುಲ್ ಬಜಾಜ್, ಅಜ್ಜನಿಂದ ಬಂದ ಬಜಾಜ್ ಆಟೊ ಕಂಪನಿಯನ್ನು ಉತ್ತುಂಗಕ್ಕೇರಿಸಿದವರು.</i></span></p><p><br /></p><p><i><b>1970</b> </i><br />‘ಬಲಾಢ್ಯ ನಾಯಕಿ’ ಪ್ರಧಾನಿ ಇಂದಿರಾ ಗಾಂಧಿ ಅವರು ‘ಲೈಸೆನ್ಸ್ ರಾಜ್’ ಹೆಸರಿನಲ್ಲಿಉತ್ಪಾದನಾ ವಲಯವನ್ನು ಅನಗತ್ಯ ನಿಯಂತ್ರಣಕ್ಕೊಳಪಡಿಸಿದ್ದರು. ಈ ವ್ಯವಸ್ಥೆಯ ಪರಿಣಾಮ ಖರೀದಿದಾರರು ಸ್ಕೂಟರ್ ಬುಕ್ ಮಾಡಿ, ಅದನ್ನು ಖರೀದಿಸಲು ವರ್ಷಗಟ್ಟಲೆ ಕಾಯಬೇಕಾದ ಪರಿಸ್ಥಿತಿ ಇತ್ತು. ಆಗ ರಾಹುಲ್ ಬಜಾಜ್ ಅವರು ಸಂದರ್ಶನವೊಂದರಲ್ಲಿ, ‘‘ಹೆಚ್ಚಿನ ಭಾರತೀಯರಿಗೆ ಅಗತ್ಯವಿರುವ ಸರಕುಗಳ ಉತ್ಪಾದನೆಗಾಗಿ ಜೈಲಿಗೆ ಹೋಗಬೇಕಾದ ಪರಿಸ್ಥಿತಿ ಎದುರಾದರೆ ಹೋಗಲು ಸಿದ್ಧ,’’ ಎಂದು ಹೇಳಿದ್ದರು.</p><p><b><i>2019 </i><br /></b>‘ವಿಕ’ ಸೋದರ ಪತ್ರಿಕೆ ‘ದಿ ಎಕನಾಮಿಕ್ ಟೈಮ್ಸ್’ ಪತ್ರಿಕೆಯ ಇಟಿ ಅವಾರ್ಡ್ಸ್ ಕಾರ್ಯಕ್ರಮದಲ್ಲಿಮಾತನಾಡಿದ್ದ ರಾಹುಲ್ ಬಜಾಜ್, ‘‘ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರಕಾರದ ಎರಡನೇ ಅವಧಿಯಲ್ಲಿಯಾರನ್ನು ಬೇಕಾದರೂ ನಾವು ಟೀಕಿಸಲು ಅವಕಾಶವಿತ್ತು. ಆದರೆ, ಈಗ ಅಂಥ ವಾತಾವರಣ ಇಲ್ಲ. ಉದ್ಯಮದಲ್ಲಿಅನೇಕರಿಗೆ ಈ ಭಾವನೆ ಇದೆ. ಉದ್ಯಮದ ಗೆಳೆಯರ ಮನಸ್ಸಿನಲ್ಲಿಯೂ ಅನೇಕ ವಿಷಯಗಳಿವೆ. ಆದರೆ, ಯಾರೂ ಮಾತನಾಡುತ್ತಿಲ್ಲ. ಆದರೆ, ನಾನು ಮಾತನಾಡುತ್ತೇನೆ,’’ ಎಂದಿದ್ದರು. ವಿಶೇಷ ಎಂದರೆ, ಇದೇ ಕಾರ್ಯಕ್ರಮದಲ್ಲಿಗೃಹ ಸಚಿವ ಅಮಿತ್ ಶಾ ಕೂಡ ಇದ್ದರು!</p><p style="text-align: center;">***</p><p>ಮೇಲಿನ ಈ ಎರಡೂ ಘಟನೆಗಳು, ಶನಿವಾರ ನಿಧನರಾದ ಉದ್ಯಮಿ ರಾಹುಲ್ ಬಜಾಜ್ ಅವರ ವ್ಯಕಿತ್ವವನ್ನು ಪರಿಚಯಿಸುತ್ತವೆ. ಉದ್ಯಮ ಹಿತಾಸಕ್ತಿಗಳ ಹೊರತಾಗಿಯೂ ಅವರು ವ್ಯವಸ್ಥೆಯ ವಿರುದ್ಧ ಮಾತಾಡಬೇಕಾದ ಅಗತ್ಯ ಎನಿಸಿದರೆ ಯಾರಿಗೂ ಹೆದರದೆ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದರು. ಇದೇ ಕಾರಣಕ್ಕಾಗಿ ಅವರನ್ನು ಇಷ್ಟಪಡುವ ಜನರು ಹೆಚ್ಚಿನ ಸಂಖ್ಯೆಯಲ್ಲಿದ್ದರು. ಉದ್ಯಮ ಮಾತ್ರವಲ್ಲದೆ ಸ್ವಾತಂತ್ರ್ಯ ಹೋರಾಟದಲ್ಲೂಬಜಾಜ್ ಕುಟುಂಬ ಪಾಲ್ಗೊಂಡಿದೆ, ಅಜ್ಜ ಜಮನ್ಲಾಲ್ ಬಜಾಜ್, ಚಿಕ್ಕಪ್ಪ ರಾಮಕೃಷ್ಣ ಬಜಾಜ್ ಅವರು ಹೋರಾಟದಲ್ಲಿಪಾಲ್ಗೊಂಡು, ಜೈಲುವಾಸ ಅನುಭವಿಸಿದ್ದರು. ಬಜಾಜ್ ಕುಟುಂಬದ ಹಿನ್ನೆಲೆ ಮತ್ತು ರಾಹುಲ್ ಬಜಾಜ್ ಅವರನ್ನು ತುಲನೆ ಮಾಡಿದಾಗ ಸಾರ್ವಜನಿಕವಾಗಿ ಅವರು ತೋರಿದ ಧೈರ್ಯ ಮತ್ತು ಉದ್ಯಮದಲ್ಲಿಅವರು ಅಳವಡಿಸಿಕೊಂಡ ಬಂದ ನೀತಿಗಳ ಸೂಧಿರ್ತಿಮೂಲದ ಪರಿಚಯವಾಗುತ್ತದೆ. </p><div class="separator" style="clear: both; text-align: center;"><a href="https://blogger.googleusercontent.com/img/a/AVvXsEjJ_hwL7PuHCN6G22gk1tUqDZOEfSD3R5CCtUD6KgG_Yt5SktVDJ-Cnl8TJAr8rK-FwxL-QvgKlVt-WrkiTVe6NSw3t0PL-4j2VULUpbIqCHm1a88cQaZ2aOOTGyvExJ7VFsIaX6BNTIKXddB9P96WjMws9NWvLsTymAGhzGCrydlQUysiSYkf3gA05=s1830" imageanchor="1" style="clear: left; float: left; margin-bottom: 1em; margin-right: 1em;"><img border="0" data-original-height="1830" data-original-width="1187" height="320" src="https://blogger.googleusercontent.com/img/a/AVvXsEjJ_hwL7PuHCN6G22gk1tUqDZOEfSD3R5CCtUD6KgG_Yt5SktVDJ-Cnl8TJAr8rK-FwxL-QvgKlVt-WrkiTVe6NSw3t0PL-4j2VULUpbIqCHm1a88cQaZ2aOOTGyvExJ7VFsIaX6BNTIKXddB9P96WjMws9NWvLsTymAGhzGCrydlQUysiSYkf3gA05=s320" width="208" /></a></div><p>ರಾಹುಲ್ ತಮ್ಮ ಗೆಳೆಯರ ಬಳಗ, ಉದ್ಯಮದ ಸ್ನೇಹಿತರ ವಲಯದಲ್ಲಿಮೊದಲಿನಿಂದಲೂ, ‘ಬಾರ್ನ್ ಆ್ಯಂಟಿ ಎಸ್ಟಾಬ್ಲಿಷ್ಮೆಂಟ್’ ಮತ್ತು ‘ಫಿಯರ್ಲೆಸ್’ ಎಂದು ಗುರುತಿಸಿಕೊಂಡಿದ್ದರು. ಈ ವಿಷಯವನ್ನು ಅವರು ಹೇಳಿಕೊಂಡಿದ್ದಾರೆ ಕೂಡ. ಉದ್ಯಮಿಯಾಗಿ ಬಜಾಜ್ ಗ್ರೂಪ್ ಕಂಪನಿಗಳನ್ನು ತುಂಬ ಎತ್ತರಕ್ಕೆ ಕೊಂಡೊಯ್ಯುವಲ್ಲಿಅವರ ಕಾಣಿಕೆ ಮರೆಯುವಂತಿಲ್ಲ. ಆಟೊ, ಹಣಕಾಸು, ಸಾರ್ಜನಿಕ ಸೇವೆಯಲ್ಲಿಅವರು ತೋರಿದ ಅಪ್ರತಿಮ ಸಾಧನೆಗಳ ಮೂಲಕ ಆಧುನಿಕ ಭಾರತದ ನಿರ್ಮಾಣದಲ್ಲಿಅಲ್ಪ ಕಾಣಿಕೆ ದೊರೆತಿದೆ ಎಂದರೆ ಉತ್ಪ್ರೇಕ್ಷೆ ಅಲ್ಲ. </p><p>ರಾಹುಲ್ ಬಜಾಜ್ 1938 ಜೂನ್ 10ರಂದು ಪಶ್ಚಿಮ ಬಂಗಾಳದ ಕೊಲ್ಕೊತಾದಲ್ಲಿಜನಿಸಿದರು. ತಂದೆ ಕಮಲನಯನ ಬಜಾಜ್, ಇವರು ಉದ್ಯಮಿ ಜತೆಗೆ ರಾಜಕಾರಣಿಯೂ ಹೌದು. ಮೂರು ಬಾರಿ ಲೋಕಸಭೆಗೆ ಆಯ್ಕೆಯಾಗಿದ್ದರು. ರಾಹುಲ್, ಸ್ವಾತಂತ್ರ್ಯ ಹೋರಾಟಗಾರ, ಸಮಾಜ ಸೇವಕ ಜಮನ್ಲಾಲ್ ಬಜಾಜ್ ಅವರ ಮೊಮ್ಮಗ. 1958ರಲ್ಲಿದಿಲ್ಲಿಯ ಸೇಂಟ್ ಸ್ಟೀಫನ್ ಕಾಲೇಜಿನಿಂದ ಪದವಿ ಪಡೆದ ರಾಹುಲ್, ಬಾಂಬೆ ವಿಶ್ವವಿದ್ಯಾಲಯದಲ್ಲಿಕಾನೂನು ಅಧ್ಯಯನ ಮಾಡಿದರು. ಅಲ್ಲಿಂದ ಅಮೆರಿಕಕ್ಕೆ ತೆರಳಿ ಹಾರ್ವರ್ಡ್ ಬಿಸಿನೆಸ್ ಸ್ಕೂಲ್ನಲ್ಲಿಎಂಬಿಎಂ ಮಾಡಿದರು. </p><p>1965ರಲ್ಲಿಎಂಬಿಎ ಪದವಿ ಪಡೆದು ಭಾರತಕ್ಕೆ ಮರಳಿದ ರಾಹುಲ್ ಮೊದಲಿಗೆ ಕಂಪನಿಯ ಡೆಪ್ಯುಟಿ ಜನರಲ್ ಮ್ಯಾನೇಜರ್ ಆಗಿ ಸೇರಿಕೊಂಡು, ಮಾರ್ಕೆಟಿಂಗ್, ಅಕೌಂಟ್ಸ್, ಪರ್ಚೇಸ್ ಮತ್ತು ಆಡಿಟ್ಗಳಂಥ ಪ್ರಮುಖ ವಿಭಾಗಗಳನ್ನು ನೋಡಿಕೊಳ್ಳುತ್ತಿದ್ದರು. ಆಗ ಬಜಾಜ್ನ ಆಟೊ ಸಿಇಒ ಆಗಿದ್ದ ನಾವಲ್ ಕೆ ಫಿರೋದಿಯಾ ಅವರ ಮಾರ್ಗದರ್ಶನದಲ್ಲಿಉದ್ಯಮ, ವ್ಯಾಪಾರದ ಪಟ್ಟುಗಳನ್ನು ಕಲಿತರು. 1972ರಲ್ಲಿರಾಹುಲ್ ತಂದೆ ಕಮಲನಯನ ಬಜಾಜ್ ನಿಧನರಾದರು. ಇದಕ್ಕೂ ಮೊದಲೇ ಸಿಇಒ ಆಗಿದ್ದ ಫಿರೋದಿಯಾ ಕೂಡ ಕಂಪನಿ ತೊರೆದಿದ್ದರು. ಹಾಗಾಗಿ, ರಾಹುಲ್ ಅವರನ್ನೇ ಬಜಾಜ್ ಆಟೊ ವ್ಯವಸ್ಥಾಪಕ ನಿರ್ದೇಶಕರನ್ನಾಗಿ ನೇಮಕ ಮಾಡಲಾಯಿತು. ವ್ಯವಹಾರ ಚತುರ ಮತ್ತು ಮಹತ್ವಾಕಾಂಕ್ಷಿಯಾಗಿದ್ದ ರಾಹುಲ್, ಸಣ್ಣ ಆಟೊ ಕಂಪನಿ ಎನಿಸಿಕೊಂಡಿದ್ದ ಬಜಾಜ್ನ್ನು ಜಗತ್ತಿನ ಬೃಹತ್ ಕಂಪನಿಗಳಲ್ಲಿಒಂದಾಗಿಸಿದರು. ಅವರ ನಾಯಕತ್ವದಲ್ಲಿಬಜಾಜ್ ಗ್ರೂಪ್ ಯಶಸ್ಸಿನ ಉತ್ತುಂಗ ತಲುಪಿತು. ಒಂದೇ ದಶಕದಲ್ಲಿಶತಕೋಟಿ ವ್ಯವಹಾರ ಮಾಡುವ ಕಂಪನಿಯಾಗಿ ಬೆಳೆಯಿತು. ಬಜಾಜ್ ಆಟೊ ಬೆಳವಣಿಗೆಯಲ್ಲಿಚೇತಕ್ ಸ್ಕೂಟರ್ ಮತ್ತು ಪಲ್ಸರ್ ಮೋಟರ್ ಸೈಕಲ್ ಸಕ್ಸೆಸ್ ಬಹಳ ಪಾತ್ರ ನಿರ್ವಹಿಸಿದೆ. ಈಗಿನ ಕಾಲದ ಬಹಳ ಮಂದಿಗೆ ಗೊತ್ತಿಲ್ಲ, ಬಜಾಜ್ ಚೇತಕ್ ಸ್ಕೂಟರ್ ಬುಕ್ ಮಾಡಿ, ಅದನ್ನು ಖರೀದಿಸಲು ಐದಾರು ವರ್ಷ ಕಾಯಬೇಕಾದ ಪರಿಸ್ಥಿತಿ ಇತ್ತು. ಅಷ್ಟರ ಮಟ್ಟಿಗೆ ಬೇಡಿಕೆ ಸೃಷ್ಟಿಯಾಗಿತ್ತು. ‘ಹಮಾರಾ ಬಜಾಜ್’ ನಿಜಾರ್ಥದಲ್ಲಿಭಾರತದ ಸ್ಕೂಟರೇ ಆಗಿತ್ತು ಎಂದು ವಿಶ್ಲೇಷಿಸಬಹುದು. ಭಾರತವು ಉದಾರೀಕರಣಕ್ಕೆ ಹೊರಳುತ್ತಿದ್ದ ಕಷ್ಟದ ಅವಧಿಯಲ್ಲಿ ಕಂಪನಿ ಈ ಮಟ್ಟಿಗೆ ಯಶಸ್ಸು ಸಾಧಿಸಿತು. ಇದಕ್ಕೆ ರಾಹುಲ್ ಬಜಾಜ್ ತೋರಿದ ನಾಯಕತ್ವ, ಪ್ರಾವೀಣ್ಯ ಮತ್ತು ಸಾಮರ್ಥ್ಯವೇ ಕಾರಣ.</p><p>ಜಮನ್ಲಾಲ್ ಬಜಾಜ್ 1926ರಲ್ಲಿಸ್ಥಾಪಿಸಿದ ಬಜಾಜ್ ಕಂಪನಿ ಇಂದು ಜಗತ್ತಿನ ದೈತ್ಯ ಕಂಪನಿಗಳಲ್ಲಿಒಂದಾಗಿದೆ, 60 ಸಾವಿರ ಜನರಿಗೆ ಉದ್ಯೋಗ ಕಲ್ಪಿಸಿದೆ ಎಂದರೆ ಅದಕ್ಕೆ ರಾಹುಲ್ ಕೊಡುಗೆ ಸಾಕಷ್ಟಿದೆ. ರಾಹುಲ್ 2008ರಲ್ಲಿ ಕಂಪನಿಯನ್ನು ಮೂರು ವಿಭಾಗಗಳಾಗಿ ಅಂದರೆ, ಬಜಾಜ್ ಆಟೊ, ಫೈನಾನ್ಸ್ ಕಂಪನಿ ಬಜಾಜ್ ಫಿನ್ಸರ್ವ್ ಮತ್ತು ಹೋಲ್ಡಿಂಗ್ ಕಂಪನಿಯಾಗಿ ವಿಂಗಡಿಸಿದರು. ಅವರ ನೇತೃತ್ವದಲ್ಲಿಬಜಾಜ್ ಆಟೋ ಉತ್ತುಂಗ ತಲುಪಿದ್ದು ಎಷ್ಟು ನಿಜವೋ ಅಷ್ಟೇ ಸಂಕಟವನ್ನು ಎದುರಿಸಿದೆ ಎನ್ನಬಹುದು. 2001ರಲ್ಲಿಅಂದರೆ, ಉದಾರೀಕರಣದ ಬಳಿಕ ಮಾರುಕಟ್ಟೆಯಲ್ಲಿಕಂಪನಿಯ ವಾಹನಗಳ ಮಾರಾಟ ತೀವ್ರ ಕುಸಿತ ಕಂಡಿತ್ತು. ಹೋಂಡಾ, ಸುಜುಕಿ, ಯಮಹಾದಂಥ ಕಂಪನಿಗಳು ಹೊಸ ಹೊಸ ಮೋಟಾರ್ಸೈಕಲ್ಗಳನ್ನು ಪರಿಚಯಿಸಿ ಭಾರತೀಯ ಮಾರುಕಟ್ಟೆಯ ಒಟ್ಟು ಚಿತ್ರಣವನ್ನು ಬದಲಿಸಿದವು. ಇದರಿಂದ ಬಜಾಜ್ ಕೊಂಚ ವಿಚಲಿತವಾದಂತೆ ಕಂಡು ಬಂದಿತಾದರೂ, ಕಂಪನಿಯು ಪಲ್ಸರ್ ಮೋಟಾರ್ ಸೈಕಲ್ ಬಿಡುಗಡೆ ಮಾಡುವ ಮೂಲಕ ಎಲ್ಲನಿರೀಕ್ಷೆಗಳನ್ನು ಮೀರಿ ಯಶಸ್ಸು ಸಾಧಿಸಿತು. ಮುಂದಿನ 10ರಿಂದ 15 ವರ್ಷ ಪಲ್ಸರ್ ಅಕ್ಷ ರಶಃ ಮಾರುಕಟ್ಟೆ ಲೀಡರ್ ಆಗಿತ್ತು. ಬಜಾಜ್ ಕಂಪನಿಯ ಯಶಸ್ಸಿನಲ್ಲಿಚೇತಕ್ ಮತ್ತು ಪಲ್ಸರ್ಗಳು ಮಹತ್ವದ ಕೊಡುಗೆ ನೀಡಿವೆ ಎಂದು ಹೇಳುವುದು ಇದೇ ಕಾರಣಕ್ಕೆ. </p><p>2005ರಲ್ಲಿರಾಹುಲ್ ಕಂಪನಿಯ ಮುಖ್ಯಸ್ಥ ಸ್ಥಾನದಿಂದ ಕೆಳಗಿಳಿದು ಜವಾಬ್ದಾರಿಯನ್ನು ಹಿರಿಯ ಪುತ್ರ ರಾಜೀವ್ ಬಜಾಜ್ಗೆ ವಹಿಸಿದರು. ಆ ಬಳಿಕ 2006ರಿಂದ 2010ರವರೆಗೆ ರಾಜ್ಯಸಭಾ ಸದಸ್ಯರಾಗಿಯೂ ಕೆಲಸ ಮಾಡಿದರು. 2016ರಲ್ಲಿಫೋರ್ಬ್ಸ್ ಪ್ರಕಟಿಸಿದ ಜಗತ್ತಿನ ಕೋಟ್ಯಧೀಶರ ಪಟ್ಟಿಯಲ್ಲಿರಾಹುಲ್ ಬಜಾಜ್ 722ನೇ ಸ್ಥಾನದಲ್ಲಿದ್ದರು. 1979-80 ಮತ್ತು 1999-2000 ಎರಡು ಅವಧಿಯಲ್ಲಿಸಿಐಐ(ಭಾರತೀಯ ಕೈಗಾರಿಕೆಗಳ ಒಕ್ಕೂಟ) ಅಧ್ಯಕ್ಷ ರಾಗಿ ಕಾರ್ಯ ನಿರ್ವಹಿಸಿದ್ದಾರೆ. ಅವರ ಅನನ್ಯ ಕಾರ್ಯನಿರ್ವಹಣೆಗಾಗಿ 2017ರಲ್ಲಿಅಂದಿನ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಸಿಸಿಐ ಪ್ರೆಸಿಡೆಂಟ್ ಅವಾರ್ಡ್ ಪ್ರದಾನ ಮಾಡಿದ್ದರು. 2021ರ ಏಪ್ರಿಲ್ನಲ್ಲಿಬಜಾಜ್ ಆಟೋದ ಕಾರ್ಯನಿರ್ವಾಹಕೇತರ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದು, ಸೋದರಸಂಬಂಧಿ ನೀರಜ್ ಬಜಾಜ್ಗೆ ಆ ಸ್ಥಾನ ಬಿಟ್ಟುಕೊಟ್ಟರು. ದೇಶದ ಮೂರನೇ ಅತ್ಯುನ್ನತ ನಾಗರಿಕ ಗೌರವ ಪದ್ಮಭೂಷಣ ಸೇರಿದಂತೆ ಅನೇಕ ಪ್ರಶಸ್ತಿ ಸಮ್ಮಾನಗಳು ಅವರನ್ನು ಅರಸಿ ಬಂದಿವೆ. </p><p>ಉದ್ಯಮದಲ್ಲಿಅನನ್ಯ ಸಾಧನೆ ಮಾಡಿದ್ದ ರಾಹುಲ್ ಬಜಾಜ್ ಅವರ ವೈಯಕ್ತಿಕ ಆಸಕ್ತಿಗಳೂ ಅಷ್ಟೇ ಅನನ್ಯವಾಗಿದ್ದವು. ಕುರ್ತಾ ಅವರ ಅಚ್ಚುಮೆಚ್ಚಿನ ಉಡುಪಾಗಿತ್ತು. ಅವರ ಬಳಿ ಕುರ್ತಾಗಳ ದೊಡ್ಡ ಸಂಗ್ರಹವಿತ್ತು. ‘ಧೈರ್ಯವಂತ’ ಉದ್ಯಮಿ ಎನಿಸಿಕೊಂಡಿದ್ದ ರಾಹುಲ್ ಬಜಾಜ್ ನಿರ್ಗಮನ ಖಂಡಿತವಾಗಿಯೂ ಭಾರತೀಯ ಉದ್ಯಮಕ್ಕೆ ಕಾಡಲಿದೆ.</p><div class="separator" style="clear: both; text-align: center;"><a href="https://blogger.googleusercontent.com/img/a/AVvXsEh0WrZlrBSucYZEwM1Qwp5Ri2g1Vf6uXJaA_yonL6T-no6fJizEukx-RNH1y1ySUiu8v5Y78OlNhoCU5k0DeACcMhnxLyVzO10l-Q3t74oGScRmMsI68O66_H8Dj9vKuyH4faKb1p2Iu841FxJtDrud2LU9GVnaWR8FnsVr-nHCbY5Rnmfe70WzjGAq=s3240" imageanchor="1" style="margin-left: 1em; margin-right: 1em;"><img border="0" data-original-height="3240" data-original-width="1741" height="640" src="https://blogger.googleusercontent.com/img/a/AVvXsEh0WrZlrBSucYZEwM1Qwp5Ri2g1Vf6uXJaA_yonL6T-no6fJizEukx-RNH1y1ySUiu8v5Y78OlNhoCU5k0DeACcMhnxLyVzO10l-Q3t74oGScRmMsI68O66_H8Dj9vKuyH4faKb1p2Iu841FxJtDrud2LU9GVnaWR8FnsVr-nHCbY5Rnmfe70WzjGAq=w344-h640" width="344" /></a></div><div class="separator" style="clear: both; text-align: center;"><br /></div><div class="separator" style="clear: both; text-align: center;"><span style="color: #f4cccc;">ಈ ಲೇಖನವು ವಿಜಯ ಕರ್ನಾಟಕದ 2022 ಫೆ.13ರ ಸಂಚಿಕೆಯಲ್ಲಿ ಪ್ರಕಟವಾಗಿದೆ</span></div><br /><p><br /></p>ಮಲ್ಲಿಕಾಜು೯ನ ತಿಪ್ಪಾರhttp://www.blogger.com/profile/03103441547302200527noreply@blogger.com0tag:blogger.com,1999:blog-6897854439810696140.post-41114288103596019552022-01-09T17:45:00.002+05:302022-01-09T17:45:59.088+05:30Mother of Orphans Sindhutai Sapkal : ಅನಾಥರ ಆಯಿ ಸಿಂಧುತಾಯಿ ಸಕಪಾಳ್<p><i style="background-color: #fff2cc;"> ಪರಿತ್ಯಕ್ತ ಮಹಿಳೆಯರ ಮಕ್ಕಳು, ಅನಾಥ ಕಂದಮ್ಮಗಳಿಗೆ ಅವ್ವಳಾದ ಸಿಂಧುತಾಯಿ ಬದುಕೇ ಸಂಘರ್ಷ. ‘ಚಿಂದಿ’ಯಿಂದ ‘ಚಿನ್ನ’ದಂಥ ತಾಯಿ ಆಗೋವರೆಗಿನ ಕತೆ ಸ್ಫೂರ್ತಿದಾಯಕ.</i></p><p><br /></p><p><b>- ಮಲ್ಲಿಕಾರ್ಜುನ ತಿಪ್ಪಾರ</b><br />‘ಎಲ್ಲೆಡೆಯೂ ತಾನಿರಲು ಸಾಧ್ಯವಿಲ್ಲಎಂದು ದೇವರು ತಾಯಿಯನ್ನು ಸೃಷ್ಟಿಸಿದ’ ಎಂಬ ಮಾತಿದೆ. ಈ ಮಾತು ಸಿಂಧುತಾಯಿ ಸಪಕಾಳ್ ವಿಷಯದಲ್ಲಿನಿಜವಾಗಿದೆ. ‘ಅನಾಥಾಚಿ ಆಯಿ’(ಅನಾಥರ ತಾಯಿ) ಎಂದು ಖ್ಯಾತರಾದ ಅವರು ಅನಾಥ ಮಕ್ಕಳಿಗೆ ಅಕ್ಷ ರಶಃ ದೇವರಾದರು, ತನ್ನ ಹೊಟ್ಟೆಯಲ್ಲಿಹುಟ್ಟಿದ ಮಕ್ಕಳಂತೆ ಸಾಕಿ, ಸಲುಹಿದರು. ಅವರು ತಮ್ಮ ಬದುಕಿನ ಪೂರ್ತಿ 1500ಕ್ಕೂ ಹೆಚ್ಚು ಅನಾಥ ಮಕ್ಕಳಿಗೆ ಆಸರೆಯಾದರು. ಈ ಕುಟುಂಬ ಬೆಳೆದು ಈಗ ದೊಡ್ಡದಾಗಿದೆ. 282 ಅಳಿಯಂದಿರು, 47 ಸೊಸೆಯರು ಸೇರಿಕೊಂಡಿದ್ದಾರೆ.</p><p>‘ಅನಾಥಮಕ್ಕಳ ಅವ್ವ’ ಸಿಂಧುತಾಯಿ ಬದುಕು ಪೂರ್ತಿ ಸಂಘರ್ಷವೇ. ಆಕೆಯ ಜೀವನದ ಪ್ರತಿಪುಟದಲ್ಲೂದೌರ್ಜನ್ಯ, ಅವಮಾನ, ಹಿಂಸೆಯೇ ತುಂಬಿದೆ. ಆದರೂ ಧೃತಿಗೆಡದೇ ಅವರು ತಮ್ಮನ್ನು ತಾವು ರೂಪಿಸಿಕೊಂಡು, ದೇಶದ ನಾಲ್ಕನೇ ಅತಿದೊಡ್ಡ ನಾಗರಿಕ ಪ್ರಶಸ್ತಿ ‘ಪದ್ಮಶ್ರೀ’ ಸ್ವೀಕರಿಸುವವರೆಗಿನ ಪಯಣ ಯಾರಿಗಾದರೂ ಸ್ಫೂರ್ತಿಯಾಗಬಲ್ಲದು. ಅನಾಥರ ಪಾಲಿನ ದೈವ ಎನಿಸಿಕೊಂಡ ಸಿಂಧುತಾಯಿ, ಹಿಂದೊಮ್ಮೆ ಅನಾಥವಾಗಿಯೇ ಮನೆಯಿಂದ ಹೊರಹಾಕಲ್ಪಟ್ಟ ನತದೃಷ್ಟ ಹೆಣ್ಣುಮಗಳು!</p><p>1948 ನವೆಂಬರ್ 14ರಂದು ಮಹಾರಾಷ್ಟ್ರ ವಾರ್ಧಾ ಜಿಲ್ಲೆಯ ಪಿಂಪ್ರಿ ಮೆಘೇ ಹಳ್ಳಿಯ ಕಡುಬಡತನದ ಕುಟುಂಬವೊಂದರಲ್ಲಿಜನಿಸಿದರು. ಅಂದಿನ ಕಾಲದಲ್ಲಿಹೆಣ್ಣು ಮಕ್ಕಳು ಜನಿಸಿತೆಂದರೆ ಯಾರಿಗೂ ಸಂತೋಷವೇ ಇರುತ್ತಿರಲಿಲ್ಲ. ಸಿಂಧುತಾಯಿ ವಿಷಯದಲ್ಲಿಈ ಹಣೆಬರಹ ಬದಲಾಗಲಿಲ್ಲ. ಆದರೆ, ಎಂಥ ನಿಕೃಷ್ಟ ಸ್ಥಿತಿ ಎದುರಾಗಿತ್ತು ಎಂದರೆ, ಆ ಹೆಣ್ಣು ಮಗುವಿಗೆ ‘ಚಿಂದಿ’ ಎಂದು ಕರೆಯುತ್ತಿದ್ದರಂತೆ! ಇಂಥ ಮನಸ್ಥಿತಿಯ ಜನರು ಇರುವಾಗ ಸಿಂಧುತಾಯಿ ಬಾಲ್ಯ ಹೇಗೆ ಚೆನ್ನಾಗಿರಲು ಸಾಧ್ಯ? ನಾಲ್ಕನೇ ತರಗತಿ ಮುಗಿಯುತ್ತಿದ್ದಂತೆ, ನವರಾಂವ್ ಹಳ್ಳಿಯ 25 ವರ್ಷದ ಶ್ರೀಹರಿ ಸಪಕಾಳ್ಗೆ ಮದುವೆ ಮಾಡಿಕೊಟ್ಟರು. ಗಂಡ ಕೂಲಿ ಕೆಲಸ ಮಾಡಿಕೊಂಡಿದ್ದಾತ. ಆದರೆ, ಹೆಂಡತಿಗೆ ವಿಪರೀತ ಕಾಟ ಕೊಡುತ್ತಿದ್ದ. ಸಿಂಧು ತಾಯಿ 20 ವರ್ಷಕ್ಕೆ ಬರುವಷ್ಟರ ಹೊತ್ತಿಗಾಗಲೇ ಎರಡು ಮಕ್ಕಳಗಾಗಿದ್ದವು. ಗಂಡನ ಕಿರುಕುಳವೂ ಮಿತಿಮೀರಿತ್ತು. ಸ್ಥಳೀಯ ಸಾಹುಕಾರನೊಬ್ಬ ಸಿಂಧುತಾಯಿ ಹೊಟ್ಟೆಯಲ್ಲಿದ್ದ ಮೂರನೇ ಮಗುವಿನ ಬಗ್ಗೆ ಪುಕಾರು ಹಬ್ಬಿಸಿದ. ಇದನ್ನೇ ಸತ್ಯ ಎಂದು ನಂಬಿದ ಗಂಡ ಇನ್ನಷ್ಟು ಕಿರುಕುಳ ನೀಡಲಾರಂಭಿಸಿದ. ಬಸುರಿಯಿದ್ದಾಗಲೇ ಆಕೆಯ ಹೊಟ್ಟೆಗೆ ಒದ್ದು, ದನದ ಕೊಟ್ಟಿಗೆಗೆ ಹಾಕುವ ಮೂಲಕ ವಿಕೃತಿ ಮೆರೆದಿದ್ದ. ದನಗಳು ತುಳಿದು ಸಾಯಿಸಲಿ ಎಂದೇ ಕೊಟ್ಟಿಗೆಗೆ ಹಾಕಿದ್ದಂತೆ. ಆದರೆ, ದನವೊಂದು ಬಸುರಿ ಸಿಂಧುತಾಯಿ ರಕ್ಷ ಣೆಗೆ ನಿಂತು ಬೇರೆ ಯಾವುದೇ ದನಗಳು ಹತ್ತಿರ ಸುಳಿಯದಂತೆ ನೋಡಿಕೊಂಡಿತಂತೆ. ಈ ವಿಷಯವನ್ನು ಸ್ವತಃ ಸಿಂಧುತಾಯಿ ಅವರು 2016ರಲ್ಲಿಹೇಳಿಕೊಂಡಿದ್ದಾರೆ. </p><div class="separator" style="clear: both; text-align: center;"><a href="https://blogger.googleusercontent.com/img/a/AVvXsEheacyFneehCsbDVhi-Ada-fKRDqSJbxO4gniCyfIl-aqcOK8jMRXka-gJpxLQgxiZnBCLutUzcBTb6Pnh317_f8H5Meqo25ReMrM6OMMO-nzVvzul67WswX4ODO0q-ZeFA5pKYQYzvK6le3cr8DiwU81Z40sCbnlxbTFSLProrEvOz1Oz8k7zfzhdf=s472" imageanchor="1" style="clear: left; float: left; margin-bottom: 1em; margin-right: 1em;"><img border="0" data-original-height="472" data-original-width="472" height="320" src="https://blogger.googleusercontent.com/img/a/AVvXsEheacyFneehCsbDVhi-Ada-fKRDqSJbxO4gniCyfIl-aqcOK8jMRXka-gJpxLQgxiZnBCLutUzcBTb6Pnh317_f8H5Meqo25ReMrM6OMMO-nzVvzul67WswX4ODO0q-ZeFA5pKYQYzvK6le3cr8DiwU81Z40sCbnlxbTFSLProrEvOz1Oz8k7zfzhdf=s320" width="320" /></a></div><p>ಸಿಂಧುತಾಯಿ ಬವಣೆಯ ಬದುಕು ಇಷ್ಟಕ್ಕೆ ನಿಲ್ಲಲಿಲ್ಲ. ಗಂಡನ ದೌರ್ಜನ್ಯಕ್ಕೆ ರೋಸಿ ಹೋಗಿ 10 ದಿನದ ಮಗುವಿನೊಂದಿಗೆ ತಂದೆ-ತಾಯಿ ಊರಿಗೆ ಹೋದರೆ, ಅಲ್ಲಿಯೂ ತಿರಸ್ಕಾರದ ಸ್ವಾಗತ. ತಂದೆ, ತಾಯಿ ಅವರನ್ನು ಒಳಗೇ ಬಿಟ್ಟುಕೊಳ್ಳಲಿಲ್ಲ. ಅಲ್ಲಿಂದ ಹೊರಬಿದ್ದ ಅವರಿಗೆ ಬದುಕಲೇಬೇಕೆಂಬ ಹಠ. ಅದಕ್ಕಾಗಿ ಅವರು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ರೈಲ್ವೆ ನಿಲ್ದಾಣ, ಸ್ಮಶಾನಗಳೇ ಆಸರೆಗಳಾಗಿದ್ದವು. ಸ್ಮಶಾನದ ಹೆಣಗಳ ಮೇಲಿದ್ದ ಬಟ್ಟೆ, ಅನ್ನವೇ ಆಹಾರ, ಭಿಕ್ಷೆಯೇ ಮೃಷ್ಟಾನ್ನವಾಗಿತ್ತು.</p><p>ಭಿಕ್ಷ ಕರ ಜತೆಗೇ ಜೀವನ ಸಾಗಿತ್ತು. ರೈಲ್ವೆ ನಿಲ್ದಾಣದಲ್ಲಿಮಲಗಿಕೊಳ್ಳುವುದು ಸಾಮಾನ್ಯವಾಗಿತ್ತು. ಆದರೆ, ಯವ್ವನದಲ್ಲಿದ್ದ ತನ್ನನ್ನು ಮಗುವನ್ನು ಯಾರಾದರೂ ಅಪಹರಿಸಿದರೆ ಎಂಬ ಚಿಂತೆ ಎದುರಾಗುತ್ತಿದ್ದಂತೆ, ನಗರದ ಸ್ಮಶಾನಭೂಮಿ ಸುರಕ್ಷಿತ ತಾಣ ಎಂದರಿತು ಅಲ್ಲಿಗೆ ಹೋದರು. ಆ ದಿನಗಳು ತಮ್ಮ ಬದುಕಿನ ಅತ್ಯಂತ ಕೆಟ್ಟ ದಿನಗಳು ಎಂದ ಆಗಾಗ ನೆನೆಪಿಸಿಕೊಳ್ಳುತ್ತಿದ್ದರು ಅವರು. ಸ್ಮಶಾನದಲ್ಲಿದ್ದಾಗ ಹಸಿವು ಆದಾಗ ತಿನ್ನಲು ಏನೂ ಇರುತ್ತಿರಲಿಲ್ಲ. ಆದರೆ, ಹೊಟ್ಟೆಯ ಬೆಂಕಿಯನ್ನು ಆರಿಸಲು ಹೆಣದ ಬೆಂಕಿಯ ಸಹಾಯ ಪಡೆದುಕೊಳ್ಳದೇ ವಿಧಿಯೇ ಇರಲಿಲ್ಲ! ಸ್ಮಶಾನದಲ್ಲಿಯಾರೋ ನಾದಿದ ಗೋಧಿ ಹಿಟ್ಟನ್ನು ಗೋರಿಯ ಮೇಲೆ ಬಿಟ್ಟು ಹೋಗಿದ್ದರಂತೆ, ಅದು ಕೊಳೆಯುವ ಸ್ಥಿತಿಗೆ ತಲುಪಿತ್ತು. ಅದನ್ನೇ ನೀರಿನಲ್ಲಿಅದ್ದಿ, ಮುರಿದ ಮಡಿಕೆಯಲ್ಲಿಟ್ಟು ಹೆಣದ ಚಿತೆಯ ಮೇಲಿಟ್ಟು ರೊಟ್ಟಿ ಮಾಡಿ, ಹಸಿವು ನೀಗಿಸಿಕೊಳ್ಳಬೇಕಾದ ಊಹಾತೀತ ಪರಿಸ್ಥಿತಿಯನ್ನು ಅವರು ಎದುರಿಸಿದ್ದಾರೆ. </p><p>ಆ ಕೆಟ್ಟ ಪರಿಸ್ಥಿತಿಯೇ ಸಿಂಧುತಾಯಿಗೆ ಹೊಸ ಹುಟ್ಟು ನೀಡಿತು. ಯಾಕೆಂದರೆ, ಆಗಲೇ ಅವರು ನಿರ್ಧರಿಸಿದ್ದರಂತೆ, ತಾನು ಹೊಸ ಜೀವವನ್ನು ಆರಂಭಿಸಬೇಕು. ಬಾಳಿನಲ್ಲಿಬಂದಿದ್ದನ್ನು ಛಲದಿಂದ ಎದುರಿಸಬೇಕೆಂದು ತಮ್ಮೊಳಗೇ ಶಪಥ ಮಾಡಿಕೊಂಡು ಮುನ್ನುಗ್ಗಿದರು. ಆ ನಂತರ ಅವರು ತನ್ನಂಥ ಅದೆಷ್ಟೋ ಅನಾಥಮಕ್ಕಳಿಗೆ ನೆರವಾದರು, ಅವರ ಬದಕನ್ನು ಹಸನು ಮಾಡಿದರು. ತಾವು ಮಾತ್ರ ಬದುಕುವುದಲ್ಲದೇ ತನ್ನಂಥ ನೂರಾರು ಜನರಿಗೆ ಸಹಾಯ ಮಾಡಿದರು. ಆದಿವಾಸಿಗಳ ಕಷ್ಟಕ್ಕೆ ಮರುಗಿದರು. ಸಮಾಜದ ಕಟ್ಟಕಡೆಯಲ್ಲಿರುವವರ ಮಕ್ಕಳನ್ನು ಎದೆಗಪ್ಪಿಕೊಂಡು ಬೆಳೆಸಿದರು.</p><p>1971ರಲ್ಲಿಅಮರಾವತಿ ಜಿಲ್ಲೆಯ ಚಿಖಲ್ದಾರಾ ಎಂಬ ಗುಡ್ಡಗಾಡು ಊರಿಗೆ ಹೋಗಿ, ಅಲ್ಲಿಆದಿವಾಸಿಗಳ ಪರವಾಗಿಯೂ ಸಿಂಧುತಾಯಿ ಹೋರಾಟ ನಡೆಸಿದರು. ಹುಲಿ ಸಂರಕ್ಷ ಣೆಗಾಗಿ ಕಾಡಿನಲ್ಲಿದ್ದ 84 ಆದಿವಾಸಿ ಕುಟುಂಬಗಳನ್ನು ಹೊರದಬ್ಬಲಾಗಿತ್ತು. ಅವರ ಪರವಾಗಿ ಹೋರಾಟ ನಡೆಸಿದರು. ಸಿಂಧುತಾಯಿ ಹೋರಾಟದ ಕಿಚ್ಚಿಗೆ ಸಣ್ಣ ಉದಾಹರಣೆಯನ್ನು ನೀಡಬಹುದು. ಹುಲಿ ಸಂರಕ್ಷ ಣಾ ಅರಣ್ಯ ಉದ್ಘಾಟನೆಗೆ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಚಿಖಲ್ದಾರಾಗೆ ಬಂದಿದ್ದರು. ಈ ವೇಳೆ ಸಿಂಧುತಾಯಿ ಕಾಡು ಪ್ರಾಣಿಗಳಿಂದ ಆದಿವಾಸಿಗಳು ಅನುಭವಿಸುತ್ತಿರುವ ನೋವನ್ನು ಅಭಿವ್ಯಕ್ತಿಸುವ ಫೋಟೊವೊಂದನ್ನು ಇಂದಿರಾ ಗಾಂಧಿ ಎದುರು ಪ್ರದರ್ಶಿಸಿದರು. ‘‘ದನಕ್ಕೆ ಕಾಡು ಪ್ರಾಣಿ ಹಾನಿ ಮಾಡಿದಾಗ ಅರಣ್ಯ ಇಲಾಖೆ ಪರಿಹಾರ ನೀಡುತ್ತದೆ. ಆದರೆ, ಆದಿವಾಸಿ ಮಹಿಳೆಯೊಬ್ಬಳು ಕಣ್ಣು ಕಳೆದುಕೊಂಡರೂ ಅಧಿಕಾರಿಗಳು ಕ್ಯಾರೆ ಮಾಡುವುದಿಲ್ಲ. ಮನುಷ್ಯರ ನೋವಿಗೆ ಬೆಲೆ ಇಲ್ಲವೇ?’’ ಎಂದು ಇಂದಿರಾ ಗಾಂಧಿ ಅವರನ್ನು ಪ್ರಶ್ನಿಸಿದರಂತೆ. ತಕ್ಷ ಣವೇ ಪ್ರಧಾನಿ ಪರಿಹಾರಕ್ಕೆ ಆದೇಶಿಸಿದರು! </p><p>ಇದೇ ವೇಳೆ ಆದಿವಾಸಿ ಪರಿತ್ಯಕ್ತ ಮಹಿಳೆಯರ ಮಕ್ಕಳು, ಅನಾಥ ಮಕ್ಕಳ ಸ್ಥಿತಿಯನ್ನು ಕಂಡು ಅವರ ಆಸರೆಗೆ ಮುಂದಾದರು. ಇಲ್ಲಿಂದ ಆರಂಭವಾದ ಅನಾಥ ಮಕ್ಕಳ ರಕ್ಷ ಣೆ ನಿಧಾನವಾಗಿ ಮಹಾರಾಷ್ಟ್ರದಾದ್ಯಂತ ಹರಡಿಕೊಂಡಿತು. ವಿಶೇಷವಾಗಿ ಪುಣೆಯ ಸುತ್ತಮುತ್ತ ಅನಾಥರಿಗೆ ಸಿಂಧುತಾಯಿ ಆಸರೆಯಾದರು. ಇದಕ್ಕಾಗಿ ನಾನಾ ಸಂಸ್ಥೆಗಳನ್ನು ಹುಟ್ಟು ಹಾಕಿದರು. ಈ ಪೈಕಿ ಮದರ್ ಗ್ಲೋಬಲ್ ಫೌಂಡೇಷನ್, ಸನ್ಮತಿ ಬಾಲ ನಿಕೇತನ, ಮಮತಾ ಬಾಲ ಸದನ, ಸಪ್ತಸಿಂಧು ಮಹಿಳಾ ಆಧಾರ್, ಬಾಲಸಂಗೋಪನ ಮತ್ತು ಶಿಕ್ಷ ಣ ಟ್ರಸ್ಟ್ ಹೀಗೆ ಎಲ್ಲಸಂಸ್ಥೆಗಳು ಅನಾಥರ ರಕ್ಷ ಣೆಗೆ ಮೀಸಲಾದವು. ಹೀಗೆ ಶುರುವಾದ ಅವರ ಅನಾಥ ಮಕ್ಕಳ ಸಾಕುವ ಕೈಂಕರ್ಯ ನಿರಂತರವಾಗಿ ನಡೆದುಕೊಂಡು ಬಂತು. ಜನರು ಪ್ರೀತಿಯಿಂದ ‘ಅನಾಥರ ಅವ್ವ’ ಎಂದು ಕರೆಯಲಾರಂಭಿಸಿದರು. ಸಿಂಧುತಾಯಿಯ ಮಾನವೀಯ ಕಾರ್ಯ ಕಂಡು ಹಲವು ಪ್ರಶಸ್ತಿ, ಗೌರವವಗಳು ಹುಡುಕಿಕೊಂಡು ಬಂದವು. ಪದ್ಮಶ್ರೀ(2021) ಸೇರಿದಂತೆ 700ಕ್ಕೂ ಹೆಚ್ಚು ಪ್ರಶಸ್ತಿಗಳು ಅವರಿಗೆ ಸಂದಿವೆ. 2010ರಲ್ಲಿಸಿಂಧುತಾಯಿ ಜೀವನಕತೆ ಆಧರಿಸಿ ನಿರ್ದೇಶಕ ಅನಂತ ನಾರಾಯಣ ಮಹಾದೇವನ್ ಅವರು ‘ಮೀ ಸಿಂಧುತಾಯಿ ಸಪಕಾಳ್’ ಮರಾಠಿ ಸಿನಿಮಾ ಮಾಡಿದ್ದರು. </p><p>ಮಹಿಳಾ ಶಕ್ತಿಗೆ ಗಡಿಗಳೇ ಇಲ್ಲಎಂಬುದನ್ನು ಸಿಂಧುತಾಯಿ ನಿರೂಪಿಸಿದ್ದಾರೆ. ಮಹಿಳೆ ಮನಸ್ಸು ಮಾಡಿದರೆ ಏನು ಬೇಕಾದರೂ ಮಾಡಬಹುದು ಎಂಬುದನ್ನು ಅವರು ಸಾಧಿಸಿದ್ದಾರೆ. 74 ವರ್ಷ ಬದುಕಿದ ಸಿಂಧುತಾಯಿ, ಲಕ್ಷಾಂತರ ಅಬಲೆಯರು ಎನಿಸಿಕೊಂಡಿರುವ ಹೆಣ್ಣುಮಕ್ಕಳಿಗೆ ಸ್ಫೂರ್ತಿಯ ಕಿಡಿ. ಅಂಥ ಮಹಾತಾಯಿ ಜ.4ರಂದು ಇಹಲೋಕ ತ್ಯಜಿಸಿದರು. ಆದರೆ ಅವರು ತೋರಿದ ತಾಯಿ ವಾತ್ಸಲ್ಯ, ಮಮತೆಗಳು ಮಾತ್ರ ಮಾಸಲಾರವು.</p><div class="separator" style="clear: both; text-align: center;"><a href="https://blogger.googleusercontent.com/img/a/AVvXsEhmkN-0LsH8mB8wmLEAVAHvqLGFao8ugrKpl7QS-S_2BlP8-wLHv3oR4dE7WvQLMzO7p8qiNxEGoKSCFOWEaPfdQKcaTvrVX66KalRlMm2AO4zq091P1gqN_VnYVwVefx8Foe_lG3_yeRcK-d_-j5i5oCDR6kEFDnMJaXT2HrjaF5BivCww8Le4pt3C=s3091" imageanchor="1" style="margin-left: 1em; margin-right: 1em;"><img border="0" data-original-height="3091" data-original-width="1559" height="640" src="https://blogger.googleusercontent.com/img/a/AVvXsEhmkN-0LsH8mB8wmLEAVAHvqLGFao8ugrKpl7QS-S_2BlP8-wLHv3oR4dE7WvQLMzO7p8qiNxEGoKSCFOWEaPfdQKcaTvrVX66KalRlMm2AO4zq091P1gqN_VnYVwVefx8Foe_lG3_yeRcK-d_-j5i5oCDR6kEFDnMJaXT2HrjaF5BivCww8Le4pt3C=w322-h640" width="322" /></a></div><div class="separator" style="clear: both; text-align: center;"><br /></div><div class="separator" style="clear: both; text-align: center;"><span style="color: #f4cccc;">(ಈ ಲೇಖನವು ವಿಜಯ ಕರ್ನಾಟಕದ 2022ರ ಜನವರಿ 9ರ ಸಂಚಿಕೆಯಲ್ಲಿ ಪ್ರಕಟವಾಗಿದೆ)</span></div><br /><p><br /></p>ಮಲ್ಲಿಕಾಜು೯ನ ತಿಪ್ಪಾರhttp://www.blogger.com/profile/03103441547302200527noreply@blogger.com0tag:blogger.com,1999:blog-6897854439810696140.post-82390204680146106182022-01-01T18:53:00.001+05:302022-01-01T18:53:47.860+05:30Arjun Gowda Kannada Film: ಕತೆ ಸುಮಾರು, ಆ್ಯಕ್ಷ ನ್ ಜೋರು!<p>- ಮಲ್ಲಿಕಾರ್ಜುನ ತಿಪ್ಪಾರ</p><p>ಕನ್ನಡದ ಚಿತ್ರಗಳಿಗೆ ಅದ್ಧೂರಿತನ, ಆ್ಯಕ್ಷ ನ್ ಸಿನಿಮಾಗಳಿಗೆ ಹೊಸ ಖದರ್ ತಂದುಕೊಟ್ಟವರು ನಿರ್ಮಾಪಕ ‘ಕೋಟಿ’ ರಾಮು. ಅವರ ಬ್ಯಾನರ್ನ ಸಿನಿಮಾಗಳೆಂದರೆ ಫುಲ್ ಆ್ಯಕ್ಷ ನ್, ಸ್ವಲ್ಪ ಸೆಂಟಿಮೆಂಟ್ ಜತೆಗೆ ಮನರಂಜನೆ ಗ್ಯಾರಂಟಿ. ಇದಕ್ಕೆ ವರ್ಷದ ಕೊನೆಯಲ್ಲಿಬಿಡುಗಡೆಯಾಗಿರುವ ‘ಅರ್ಜುನ್ ಗೌಡ’ ಸಿನಿಮಾ ಹೊರತಲ್ಲ. ಚಿತ್ರ ಅದ್ಧೂರಿಯಾಗಿದೆ. ಆದರೆ, ಪ್ರೇಕ್ಷ ಕರ ಮನಸ್ಸಿಗೆ ಎಷ್ಟು ನಾಟಲಿದೆ ಎಂಬುದು ನಿಗೂಢ!</p><p>ನಿರ್ದೇಶಕರು ‘ಅರ್ಜನ್ ಗೌಡ’ ಚಿತ್ರದ ಆರಂಭದಲ್ಲಿಪತ್ರಕರ್ತೆ ಗೌರಿ ಲಂಕೇಶ್, ವಿದ್ವಾಂಸ ಎಂ. ಎಂ. ಕಲಬುರ್ಗಿ ಹತ್ಯೆಗಳೇ ತಮ್ಮ ಸಿನಿಮಾಕ್ಕೆ ಸೂಧಿರ್ತಿ ಎಂದು ಹೇಳಿಸುತ್ತಾರೆ. ಆದರೆ, ಸಿನಿಮಾ ಮುಗಿದರೂ ಆ ಸೂಧಿರ್ತಿ ಏನೆಂಬುದು ಗೊತ್ತಾಗುವುದಿಲ್ಲ! ಪ್ರೀತಿ, ಸಮಾಜ, ದುಷ್ಟಶಕ್ತಿಗಳು, ಮಾಧ್ಯಮ... ಹೀಗೆ ಎಲ್ಲವನ್ನೂ ಹೇಳಲು ಹೋಗಿ, ಯಾವುದನ್ನೂ ಪ್ರೇಕ್ಷ ಕರ ಮನಸ್ಸಿಗೆ ಪೂರ್ತಿಯಾಗಿ ದಾಟಿಸುವಲ್ಲಿಚಿತ್ರ ಯಶಸ್ವಿಯಾಗುವುದಿಲ್ಲ. ಹಾಗಾಗಿಯೇ, ಚಿತ್ರ ನೋಡಿ ಹೊರ ಬಂದಾಗ ನಿಮಗೆ ಮನಸ್ಸು ಭಾರವೂ ಆಗುವುದಿಲ್ಲ, ಹಗುರವೂ ಆಗುವುದಿಲ್ಲ.</p><div class="separator" style="clear: both; text-align: center;"><a href="https://blogger.googleusercontent.com/img/a/AVvXsEhyUKtXET6Mgh5Tum3wNT0NMfS9hrATXuL4yq4QnmfM2aDsXb1lzmqxVKVNNjUqotOp7N9n0C_h0R2mrZujokSEiqYR6bnWrlnQM-PSgSXA60q_QMDRynt-TvaXP1wa5V4DwZc-5TuXeac3HxLqAHyVxAWeKtbZ_QZiW2EV1uMw5U2SP1zScr8Hlm1x=s1200" imageanchor="1" style="clear: left; float: left; margin-bottom: 1em; margin-right: 1em;"><img border="0" data-original-height="900" data-original-width="1200" height="300" src="https://blogger.googleusercontent.com/img/a/AVvXsEhyUKtXET6Mgh5Tum3wNT0NMfS9hrATXuL4yq4QnmfM2aDsXb1lzmqxVKVNNjUqotOp7N9n0C_h0R2mrZujokSEiqYR6bnWrlnQM-PSgSXA60q_QMDRynt-TvaXP1wa5V4DwZc-5TuXeac3HxLqAHyVxAWeKtbZ_QZiW2EV1uMw5U2SP1zScr8Hlm1x=w400-h300" width="400" /></a></div><p>ಚಿತ್ರದ ನಾಯಕ ಅರ್ಜುನ್ ಗೌಡ (ಪ್ರಜ್ವಲ್ ದೇವರಾಜ್) ಸುದ್ದಿವಾಹಿನಿಯ ಒಡತಿ ಜಾನಕಿ (ಸ್ಪರ್ಶ ರೇಖಾ) ಅವರ ಏಕೈಕ ಪುತ್ರ. ಆಗಾಗ ಅಮ್ಮ-ಮಗನ ಮಧ್ಯೆ ಜನರೇಷನ್ ಗ್ಯಾಪ್ ಜಗಳ. ದೊಡ್ಡ ಉದ್ಯಮಿ (ರಾಜ್ ದೀಪಕ್ ಶೆಟ್ಟಿ) ಮಗಳು ಜಾಹ್ನವಿ (ಪ್ರಿಯಾಂಕಾ ತಿಮ್ಮೇಶ್) ಮತ್ತು ಅರ್ಜುನ್ ಮಧ್ಯೆ ಅಮರ ಪ್ರೇಮ. ಜಾಹ್ನವಿ ತಂದೆ ಒಪ್ಪಲ್ಲ. ಹಲವು ತಿರುವು ಘಟಿಸಿ ಜಾಹ್ನವಿ ಮದುವೆ ಎನ್ಆರ್ಐಯೊಂದಿಗೆ ಆಗುತ್ತದೆ. ಇದೇ ದುಃಖದಲ್ಲಿಮನೆ ತೊರೆದ ಅರ್ಜುನ್ ಗೌಡ ಮಂಗಳೂರು ಸೇರುತ್ತಾನೆ; ಲೋಕಲ್ ಗೂಂಡಾಗಳು ಜತೆಯಾಗುತ್ತಾರೆ. ಮಗನಿಗೆ ಹೀಗೆ ಆಯ್ತಲ್ಲಅಂತ ತಾಯಿ ಉದ್ಯಮಿಯ ವ್ಯಾಪಾರವನ್ನು ತನ್ನ ವರದಿಗಾರರಿಂದ ಜಾಲಾಡಿದಾಗ ಸಮಾಜಘಾತಕಶಕ್ತಿ ಖಳನಾಯಕ(ರಾಹುಲ್ ದೇವ್) ಅವರ ಜತೆ ಉದ್ಯಮಿಯ ಸಂಪರ್ಕವಿರುವುದು ಗೊತ್ತಾಗುತ್ತದೆ. ಈ ವಿಷಯ ಗೊತ್ತಾಗುತ್ತಿದ್ದಂತೆ ವಿಲನ್, ಜಾನಕಿಯನ್ನು ಕೊಲ್ಲಲು ಕರಾವಳಿಯ ಡಾನ್ಗೆ ಹೇಳುತ್ತಾನೆ. ಜಾನಕಿಯನ್ನು ಯಾರು ಕೊಲ್ಲುತ್ತಾರೆ? ಆ ಸುಪಾರಿ ಕಿಲ್ಲರ್ಸ್ ಯಾರು? ಕೊಲೆ ಯತ್ನ ಕೇಸ್ನಲ್ಲಿಅರ್ಜುನ್ ಗೌಡ ಯಾಕೆ ಜೈಲು ಪಾಲಾಗುತ್ತಾನೆ? ಕೊನೆಗೆ ಜಾಹ್ನವಿ ಏನಾದಳು ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರ ಬೇಕಿದ್ದರೆ ಸಿನಿಮಾ ನೋಡಬೇಕು.</p><p>ಪ್ರಜ್ವಲ್ ದೇವರಾಜ್ ಹಾಗೂ ‘ಸ್ಪರ್ಶ’ ರೇಖಾ ಅವರು ತಮಗೆ ವಹಿಸಿರುವ ಕೆಲಸವನ್ನು ನೀಟ್ ಆಗಿ ಮಾಡಿದ್ದಾರೆ. ಫೈಟಿಂಗ್ ದೃಶ್ಯಗಳಲ್ಲಿಪ್ರಜ್ವಲ್ ಪವರ್ಫುಲ್ ಆಗಿ ಕಾಣಿಸುತ್ತಾರೆ. ಸಿನಿಮಾದಲ್ಲಿಹಾಸ್ಯನಟ ಸಾಧು ಕೋಕಿಲ ಹಾಗೂ ಕಾಮಿಡಿ ಕಿಲಾಡಿಯಂಥ ನಟರಿದ್ದೂ ಪ್ರೇಕ್ಷ ಕರು ನಗದಿದ್ದರೆ ಅದು ಯಾರ ತಪ್ಪು? ಖಳನಾಯಕ ರಾಹುಲ್ ದೇವ್ಗೆ ಹೆಚ್ಚು ಕೆಲಸವಿಲ್ಲ.</p><p>ಧರ್ಮೇಶ್ ವಿಶ್ ಅವರ ಸಂಗೀತ ಮಾತ್ರ ತಲೆ ಗಿಂವ್ ಅನ್ನುವ ಹಾಗಿದೆ! ಕ್ಯಾಮೆರಾ ವರ್ಕ್ ಓಕೆ. ಸಂಭಾಷಣೆ ಅಲ್ಲಲ್ಲಿಹರಿತವಾಗಿದೆ. ಅರ್ಜುನ್ ಗೌಡರದ್ದು ಮಧ್ಯಂತರವರೆಗೆ ‘ಸುದೀರ್ಘ’ ಪಯಣ. ಸೆಕೆಂಡ್ ಹಾಫ್ ಕೂಡ ಹೆಚ್ಚು ಕಡಿಮೆ ಹಾಗೆಯೇ. ಇಷ್ಟಾಗಿಯೂ ಆ್ಯಕ್ಷ ನ್ ಪ್ರಿಯರಿಗೆ ಸಿನಿಮಾ ಇಷ್ಟವಾಗಬಹುದು.</p><p>ಚಿತ್ರ: ಅರ್ಜುನ್ ಗೌಡ </p><p>ನಿರ್ದೇಶನ: ಶಂಕರ್. ನಿರ್ಮಾಪಕ: ರಾಮು.</p><p>ತಾರಾಗಣ: ಪ್ರಜ್ವಲ್ ದೇವರಾಜ್, ಪ್ರಿಯಾಂಕ ತಿಮ್ಮೇಶ್, ರಾಹುಲ್ ದೇವ್, ಸ್ಪರ್ಶ ರೇಖಾ, ಸಾಧು ಕೋಕಿಲ ಮತ್ತಿತರರು. </p><p><br /></p><p><span style="color: #f4cccc;">(ಈ ಲೇಖನವು ವಿಜಯ ಕರ್ನಾಟಕ ಜ.1, 2022ರ ಸಂಚಿಕೆಯಲ್ಲಿ ಪ್ರಕಟವಾಗಿದೆ)</span></p><p><br /></p>ಮಲ್ಲಿಕಾಜು೯ನ ತಿಪ್ಪಾರhttp://www.blogger.com/profile/03103441547302200527noreply@blogger.com0tag:blogger.com,1999:blog-6897854439810696140.post-90328961183966401292021-12-31T23:13:00.001+05:302021-12-31T23:13:38.772+05:3083 Hindi Film Review: ತೆರೆಯ ಮೇಲೆ 83ರ ವಿಶ್ವಕಪ್ ಗೆಲುವಿನ ರೋಚಕತೆ<p></p><p class="MsoNormal" style="line-height: normal; margin-bottom: .0001pt; margin-bottom: 0in; mso-layout-grid-align: none; text-autospace: none;"><b><span style="font-family: Tunga, "sans-serif";">- </span><span lang="KN" style="font-family: Tunga, "sans-serif";">ಮಲ್ಲಿಕಾರ್ಜುನ ತಿಪ್ಪಾರ</span></b></p>
<p class="MsoNormal" style="line-height: normal; margin-bottom: .0001pt; margin-bottom: 0in; mso-layout-grid-align: none; text-autospace: none;"><span lang="KN" style="font-family: Tunga, "sans-serif";">ಮೂವತ್ತೆಂಟು ವರ್ಷಗಳ ಹಿಂದೆ
ರೇಡಿಯೊಗೆ ಕಿವಿಯಾನಿಸಿ ಕಾಮೆಂಟರಿ ಕೇಳಿ ಪುಳಕಗೊಂಡಿದ್ದ ಒಂದು ತಲೆಮಾರು</span><span style="font-family: Tunga, "sans-serif";">, <span lang="KN">ಅಂದಿನ
ಯಶಸ್ಸಿನ ಕತೆಯನ್ನು ಆಗಾಗ ಕೇಳುತ್ತಿದ್ದ ಹೊಸ ತಲೆಮಾರಿನ ಕ್ರಿಕೆಟ್</span> <span lang="KN">ಅಭಿಮಾನಿಗಳಿಗೆ</span>
‘83’ <span lang="KN">ಸಿನಿಮಾ ಒಂದು ಹೊಸ ಸಂಚಲನ</span>. <span lang="KN">ಭಾರತವು</span>
1983<span lang="KN">ರ ಕ್ರಿಕೆಟ್</span> <span lang="KN">ವರ್ಲ್ಡ್</span> <span lang="KN">ಕಪ್</span> <span lang="KN">ಗೆದ್ದ ಪಯಣವನ್ನು</span> ‘<span lang="KN">ಭಜರಂಗಿ ಭಾಯಿಜಾನ್</span>’
<span lang="KN">ಖ್ಯಾತಿಯ ನಿರ್ದೇಶಕ ಕಬೀರ್</span> <span lang="KN">ಖಾನ್</span> <span lang="KN">ಸೊಗಸಾಗಿ ಕಟ್ಟಿಕೊಟ್ಟಿದ್ದಾರೆ</span>. <span lang="KN">ಸಿನಿಮಾ ಆರಂಭವಾಗಿ</span>
‘<span lang="KN">ಕಪ್</span> <span lang="KN">ಗೆಲ್ಲುವ</span>’ <span lang="KN">ತನಕ ನಿಮ್ಮ
ಕಣ್ಣಂಚಿನಲ್ಲಿರುವ ನೀರು ಹೊರ ಬೀಳಲು ಕಾಯುತ್ತಲೇ ಇರುತ್ತದೆ</span>. <span lang="KN">ನಡುನಡುವೆ
ಒಂಚೂರು ಹಾಸ್ಯ</span>, <span lang="KN">ವಿಷಾದ</span>, <span lang="KN">ತುಂಟಾಟ</span>, <span lang="KN">ನೋವು</span>... <span lang="KN">ಹೀಗೆ ಹಲವು ಭಾವಗಳು ನಿಮ್ಮನ್ನು ಅಪ್ಪಿಕೊಂಡು</span>,
<span lang="KN">ಸೀಟಿನಂಚಿಗೆ ಬಂದು ಕೂಡುವಂತೆ ಮಾಡುತ್ತವೆ</span>.<o:p></o:p></span></p>
<p class="MsoNormal" style="line-height: normal; margin-bottom: .0001pt; margin-bottom: 0in; mso-layout-grid-align: none; text-autospace: none;"><span lang="KN" style="font-family: Tunga, "sans-serif";">ಬಯೋಪಿಕ್</span><span style="font-family: Tunga, "sans-serif";"> <span lang="KN">ಸಿನಿಮಾಗಳನ್ನು
ಮಾಡುವಾಗ ಡಾಕ್ಯುಮೆಂಟರಿಯಾಗುವ ಅಪಾಯವೇ ಹೆಚ್ಚು</span>. <span lang="KN">ಒಂಚೂರು ಆಚೆ</span>,
<span lang="KN">ಈಚೆಯಾದರೂ ಸಿನಿಮಾ ಚೌಕಟ್ಟು ಮೀರುತ್ತದೆ</span>. <span lang="KN">ಕೆಲವೊಮ್ಮೆ
ನೈಜ ಘಟನೆಗಳ ಜತೆಗೆ ನಿರ್ದೇಶಕ ತನಗಿರುವ ಸೃಜನಾತ್ಮಕ ಸ್ವಾತಂತ್ರ್ಯ</span><span lang="KN">ವನ್ನು
ಬಳಸಿಕೊಂಡು</span> ‘<span lang="KN">ಕತೆ</span>’<span lang="KN">ಯನ್ನೂ ಕಟ್ಟುತ್ತಾನೆ</span>.
<span lang="KN">ಆದರೆ</span>, 83 <span lang="KN">ಸಿನಿಮಾದಲ್ಲಿ</span>‘<span lang="KN">ಫಿಲ್ಮೀ
ಕತೆ</span>’<span lang="KN">ಗೆ ಅಷ್ಟೇನೂ ಜಾಗವಿಲ್ಲ</span>. <span lang="KN">ರಿಯಲ್</span>
<span lang="KN">ಕತೆಯನ್ನು ರೀಲ್</span><span lang="KN">ನಲ್ಲಿಅಷ್ಟೇ ರಿಯಲ್</span> <span lang="KN">ಆಗಿ ತೋರಿಸುವಲ್ಲಿಯಶಸ್ವಿಯಾಗಿದ್ದಾರೆ</span>. <span lang="KN">ಹಾಗಾಗಿ</span>, <span lang="KN">ಕಪಿಲ್</span> <span lang="KN">ಆ್ಯಂಡ್</span> <span lang="KN">ಟೀಂ ಅಂದು ಅನುಭವಿಸಿದ
ಎಲ್ಲಟೀಕೆ</span>, <span lang="KN">ಉಡಾಫೆ</span>, <span lang="KN">ನಿರ್ಲಕ್ಷ್ಯ ಎಲ್ಲವನ್ನೂ
ತೆರೆಯ ಮೇಲೆ ತರಲು ಸಾಧ್ಯವಾಗಿದೆ</span>. <span lang="KN">ಸುಮಾರು ಎರಡೂವರೆ ಗಂಟೆಯ ಸಿನಿಮಾ ಒಂದೇ
ಗಂಟೆಯಲ್ಲಿಮುಗಿದ ಅನುಭವವಾಗುತ್ತದೆ</span>!<o:p></o:p></span></p><p class="MsoNormal" style="line-height: normal; margin-bottom: .0001pt; margin-bottom: 0in; mso-layout-grid-align: none; text-autospace: none;"></p><div class="separator" style="clear: both; text-align: center;"><a href="https://blogger.googleusercontent.com/img/a/AVvXsEgsSg3p669H5ReCLZzKTWkQShfA1bpCBJFk00j4SVRqgArSUkUzPRdyq9td7OOATa46KqhKG85r9x7qEx_o8hajciCeaMIT9mmJftLwRnOcNdLqmGcvap_OOMC0vyv3eashi0Ji8TQ5vgfNe2JkCVMbwD8lhNeERRZZfOGufos2g9xCuPl7mRJibBBO=s750" imageanchor="1" style="clear: left; float: left; margin-bottom: 1em; margin-right: 1em;"><img border="0" data-original-height="563" data-original-width="750" height="300" src="https://blogger.googleusercontent.com/img/a/AVvXsEgsSg3p669H5ReCLZzKTWkQShfA1bpCBJFk00j4SVRqgArSUkUzPRdyq9td7OOATa46KqhKG85r9x7qEx_o8hajciCeaMIT9mmJftLwRnOcNdLqmGcvap_OOMC0vyv3eashi0Ji8TQ5vgfNe2JkCVMbwD8lhNeERRZZfOGufos2g9xCuPl7mRJibBBO=w400-h300" width="400" /></a></div><span lang="KN" style="font-family: Tunga, "sans-serif";">ಕತೆ ಏನೆಂದು ಕೇಳಿದರೆ ಅದು
ಎಲ್ಲರಿಗೂ ಗೊತ್ತಿರುವಂಥದ್ದೇ</span><span style="font-family: Tunga, "sans-serif";">!
‘<span lang="KN">ಅಂಡರ್</span><span lang="KN">ಡಾಗ್</span>’ <span lang="KN">ಹಣೆಪಟ್ಟಿ ಹೊತ್ತಿದ್ದ
ತಂಡವೊಂದು ಯಾರೂ ನಿರೀಕ್ಷಿಸದ ರೀತಿಯಲ್ಲಿಸಾಹಸ ಮೆರೆಯುವಂಥದ್ದು</span>. 1983<span lang="KN">ರ
ವಿಶ್ವಕಪ್</span> <span lang="KN">ಪಂದ್ಯಾವಳಿಗೆ ಹೊರಟ ತಂಡದ ಮೇಲೆ ಕ್ರಿಕೆಟ್</span> <span lang="KN">ಮಂಡಳಿಯ ಅಧಿಕಾರಿಗಳಿಂದ ಹಿಡಿದು ದೇಶ</span>, <span lang="KN">ವಿದೇಶಗಳಲ್ಲಿರುವ ಅಭಿಮಾನಿಗಳಿಗೆ
ಮಾತ್ರವಲ್ಲದೆ ತಂಡಕ್ಕೆ ಆಯ್ಕೆಯಾದ ಆಟಗಾರರಿಗೆ</span> ‘<span lang="KN">ಗೆಲ್ಲುವ</span>’ <span lang="KN">ವಿಶ್ವಾಸವಿರುವುದಿಲ್ಲ</span>. <span lang="KN">ಈ ಹಿಂದಿನ ಎರಡು ವರ್ಲ್ಡ್</span> <span lang="KN">ಕಪ್</span><span lang="KN">ನಲ್ಲಿಭಾರತದ ಪ್ರದರ್ಶನ ಹೀನಾಯವಾಗಿರುತ್ತದೆ</span>. <span lang="KN">ಹಾಗಾಗಿ</span>, <span lang="KN">ಯಾರಿಗೂ ಯಾವ ನಿರೀಕ್ಷೆಗಳೂ ಇರುವುದಿಲ್ಲ</span>; <span lang="KN">ಕಪಿಲ್</span> <span lang="KN">ದೇವ್</span> <span lang="KN">ಎಂಬ ಆತ್ಮವಿಶ್ವಾಸದ
ನಾಯಕನೊಬ್ಬನನ್ನು ಹೊರತುಪಡಿಸಿ</span>. <span lang="KN">ಭಾರತದ ತಂಡದ ಬಗ್ಗೆ ತೂರಿ ಬರುವ ಎಲ್ಲ
ಅವಮಾನಗಳನ್ನು ಶಾಂತವಾಗಿಯೇ ಸ್ವೀಕರಿಸಿ</span>, <span lang="KN">ಸಹ ಆಟಗಾರರನ್ನು ಹುರಿದುಂಬಿಸುತ್ತ</span>,
<span lang="KN">ಅವರಲ್ಲಿರುವ ಶಕ್ತಿ ಸಾಮರ್ಥ್ಯದ ಬಗ್ಗೆ ಅರುಹುತ್ತಾ ಹೊಸ ಇತಿಹಾಸಕ್ಕೆ ನಾಂದಿ ಹಾಡುತ್ತಾರೆ</span>
‘<span lang="KN">ಇಂಗ್ಲಿಷ್</span> <span lang="KN">ಮೋಹಿ</span>’ <span lang="KN">ಕಪಿಲ್</span>.
<span lang="KN">ಈ ಪಾತ್ರವನ್ನು ನಟ ರಣವೀರ್</span> <span lang="KN">ಸಿಂಗ್</span> <span lang="KN">ಅಕ್ಷ ರಶಃ ಜೀವಿಸಿದ್ದಾರೆ</span>. <span lang="KN">ಅಂದಿನ ಕ್ರಿಕೆಟ್</span> <span lang="KN">ತಂಡದ ಯಶಸ್ಸಿನ ಶ್ರೇಯದಲ್ಲಿಮ್ಯಾನೇಜರ್</span> <span lang="KN">ಪಿ</span>. <span lang="KN">ಆರ್</span>. <span lang="KN">ಮಾನ್</span><span lang="KN">ಸಿಂಗ್</span> <span lang="KN">ಅವರಿಗೂ ಪಾಲು ಸಲ್ಲುತ್ತದೆ</span>. <span lang="KN">ಆ ಪಾತ್ರದಲ್ಲಿಪ್ರತಿಭಾವಂತ ನಟ ಪಂಕಜ್</span>
<span lang="KN">ತ್ರಿಪಾಠಿ ನಿಮ್ಮನ್ನು ಕಾಡುತ್ತಾರೆ</span>. <span lang="KN">ಕ್ರಿಕೆಟ್</span>
<span lang="KN">ತಂಡದ ಮ್ಯಾನೇಜರ್</span> <span lang="KN">ಒಬ್ಬರು</span>, <span lang="KN">ವಿಮಾನ ಟಿಕೆಟ್</span> <span lang="KN">ಕ್ಯಾನ್ಸಲ್</span> <span lang="KN">ಮಾಡಿದರೆ
ಎಷ್ಟು ದುಡ್ಡು ಕೊಡಬೇಕಾಗುತ್ತದೆ ಎಂಬ ಲೆಕ್ಕ ಹಾಕುತ್ತಲೇ</span>, ‘<span lang="KN">ನಮಗೆ ಸ್ವಾತಂತ್ರ್ಯ
ಸಿಕ್ಕಿದೆ</span>, <span lang="KN">ಇನ್ನೂ ಗೌರವ ಸಿಕ್ಕಿಲ್ಲ</span>’ <span lang="KN">ಎಂದು ಹೇಳುತ್ತಾ
ವಿಷಾದ ಮತ್ತು ವಾಸ್ತವವನ್ನು ಒಟ್ಟೊಟ್ಟಿಗೆ ತಂದಿಡುತ್ತಾರೆ</span>. <span lang="KN">ಶ್ರೀಕಾಂತ್</span>,
<span lang="KN">ಮೊಹಿಂದರ್</span> <span lang="KN">ಅಮರನಾಥ್</span>, <span lang="KN">ಮದನಲಾಲ್</span>,
<span lang="KN">ಕೀರ್ತಿ ಆಜಾದ್</span>, <span lang="KN">ಸಂದೀಪ್</span> <span lang="KN">ಪಾಟೀಲ್</span>,
<span lang="KN">ಸಯ್ಯದ್</span> <span lang="KN">ಕೀರ್ಮಾನಿ</span>, <span lang="KN">ರೋಜರ್</span>
<span lang="KN">ಬಿನ್ನಿ</span>, <span lang="KN">ಸುನಿಲ್</span> <span lang="KN">ಗವಾಸ್ಕರ್</span>,
<span lang="KN">ಯಶಪಾಲ್</span> <span lang="KN">ಶರ್ಮಾ</span>, <span lang="KN">ಬಲ್ವಿಂದರ್</span>
<span lang="KN">ಸಿಂಗ್</span> <span lang="KN">ಸಂಧು</span>, <span lang="KN">ದಿಲಿಪ್</span>
<span lang="KN">ವೆಂಗ್</span><span lang="KN">ಸರ್ಕಾರ್</span> <span lang="KN">ಹೀಗೆ ಎಲ್ಲಈ
ದಂತಕತೆಗಳಾದ ಆಟಗಾರರ ಪಾತ್ರವನ್ನು ಪೋಷಣೆ ಮಾಡಿರುವ ನಟರು</span>, <span lang="KN">ಮೂಲ ಕ್ರಿಕೆಟಿಗರನ್ನು
ತೆರೆಯ ಮೇಲೆ ಬಹುತೇಕ ಪ್ರಾಮಾಣಿಕವಾಗಿ ತಂದಿದ್ದಾರೆ</span>; <span lang="KN">ಅವರದ್ದೇ ಆಂಗಿಕ
ಭಾಷೆಯನ್ನು ಯಶಸ್ವಿಯಾಗಿ ಬಳಸಿಕೊಂಡಿದ್ದಾರೆ</span>.</span><p></p>
<p class="MsoNormal" style="line-height: normal; margin-bottom: .0001pt; margin-bottom: 0in; mso-layout-grid-align: none; text-autospace: none;"><span style="font-family: Tunga, "sans-serif";">1983<span lang="KN">ರ ವರ್ಲ್ಡ್</span> <span lang="KN">ಕಪ್</span><span lang="KN">ನ ಯಶಸ್ಸು ಭಾರತದಲ್ಲಿಸಾಮಾಜಿಕವಾಗಿ</span>, <span lang="KN">ಕ್ರೀಡಾ ಕ್ಷೇತ್ರದಲ್ಲಿಹೇಗೆ ಬದಲಾವಣೆಗೆ ಕಾರಣವಾಯಿತು ಎಂಬುದನ್ನು ಸೂಚ್ಯವಾಗಿ ನಿರ್ದೇಶಕರು
ಹೇಳುತ್ತಾರೆ</span>. <span lang="KN">ಫೈನಲ್</span> <span lang="KN">ಮ್ಯಾಚ್</span> <span lang="KN">ಆರಂಭವಾದಾಗ</span>, <span lang="KN">ಬಾಲಕ ಸಚಿನ್</span> <span lang="KN">ತೆಂಡೂಲ್ಕರ್</span>
<span lang="KN">ಟಿವಿ ಮುಂದೆ ಕುಳಿತುಕೊಳ್ಳುವುದು</span>; <span lang="KN">ತಂಡ ಗೆದ್ದಾಗ ಭಾರತದ
ಪರ ಆಡುವೆ ಎಂದು ಕೂಗುವುದು</span>, <span lang="KN">ಕೋಮು ಹಿಂಸಾಚಾರದಿಂದಾಗಿ ಒಡೆದಿದ್ದ ಮನಸ್ಸುಗಳು
ಒಂದಾಗುವುದು</span>, <span lang="KN">ಕ್ರಿಕೆಟ್</span><span lang="KN">ಅನ್ನೇ ಸಮಸ್ಯೆಗೆ ಪರಿಹಾರವಾಗಿ
ಬಳಸಿಕೊಳ್ಳುವ ನಾಯಕತ್ವ</span>, <span lang="KN">ವಿದೇಶಗಳಲ್ಲಿಭಾರತೀಯ ಕ್ರಿಕೆಟ್</span> <span lang="KN">ಅಭಿಮಾನಿಗಳು ನೋವು</span>-<span lang="KN">ನಲಿವು</span>, <span lang="KN">ಕ್ರಿಕೆಟ್</span>
<span lang="KN">ಅಂಗಣ</span><span lang="KN">ದಲ್ಲಿಭಾರತ ರನ್</span> <span lang="KN">ಹೊಡೆದಾಗಲೆಲ್ಲ
ಗಡಿಯಿಂದ ತೂರಿ ಬರುವ ಗುಂಡುಗಳು</span>... <span lang="KN">ಹೀಗೆ ಆ ಕಾಲಘಟ್ಟದ ಎಲ್ಲತಳಮಳಗಳನ್ನು
ಕ್ರಿಕೆಟ್</span><span lang="KN">ನೊಟ್ಟಿಗೆ ಚಿತ್ರಿಸುವಲ್ಲಿಯಶಸ್ವಿಯಾಗಿದ್ದಾರೆ ಕಬೀರ್</span>.
<span lang="KN">ಸಿನಿಮಾದಲ್ಲಿಅಲ್ಲಲ್ಲಿಮೂಲ ಪಂದ್ಯಾವಳಿಯ ಫೋಟೊಗ್ರಾಫ್</span><span lang="KN">ಗಳನ್ನು</span>, <span lang="KN">ವಿಡಿಯೊ ತುಣುಕುಗಳನ್ನು ಬಳಸಿಕೊಳ್ಳುವ ಮೂಲಕ ಕತೆ ಹೇಳುವ
ರೀತಿಗೆ ಹೊಸ ಶೈಲಿಯನ್ನು ಶೋಧಿಸಿದ್ದಾರೆ ನಿರ್ದೇಶಕರು</span>.<o:p></o:p></span></p>
<p class="MsoNormal" style="line-height: normal; margin-bottom: .0001pt; margin-bottom: 0in; mso-layout-grid-align: none; text-autospace: none;"><span lang="KN" style="font-family: Tunga, "sans-serif";">ಬಿಬಿಸಿ ನಿರ್ಲಕ್ಷ್ಯದಿಂದಾಗಿ
ಜಿಂಬಾಬ್ವೆ ವಿರುದ್ಧ ಕಪಿಲ್</span><span style="font-family: Tunga, "sans-serif";">
<span lang="KN">ದೇವ್</span> <span lang="KN">ಆಟವನ್ನು ನೋಡಲು ಅಂದಿನವರಿಗೆ ಸಾಧ್ಯವಾಗಿರಲಿಲ್ಲ</span>.
<span lang="KN">ಆ ಪಂದ್ಯದಲ್ಲಿಏಕಾಂಗಿಯಾಗಿ ಕಪಿಲ್</span> <span lang="KN">ಅವರ ವಿಶ್ವದಾಖಲೆಯ
ಆಟವನ್ನು ಕಣ್ತುಂಬಿ</span><span lang="KN">ಕೊಳ್ಳಬೇಕಿದ್ದರೆ</span> 83 <span lang="KN">ಮಿಸ್</span>
<span lang="KN">ಮಾಡಿಕೊಳ್ಳಬೇಡಿ</span>.<o:p></o:p></span></p>
<p class="MsoNormal" style="line-height: normal; margin-bottom: .0001pt; margin-bottom: 0in; mso-layout-grid-align: none; text-autospace: none;"><span style="font-family: Tunga, "sans-serif";"><o:p> </o:p></span></p>
<p class="MsoNormal" style="line-height: normal; margin-bottom: .0001pt; margin-bottom: 0in; mso-layout-grid-align: none; text-autospace: none;"><span lang="KN" style="font-family: Tunga, "sans-serif";">ನಿರ್ದೇಶನ</span><span style="font-family: Tunga, "sans-serif";">: <span lang="KN">ಕಬೀರ್</span>
<span lang="KN">ಖಾನ್</span>, <span lang="KN">ತಾರಾಗಣ</span>: <span lang="KN">ರಣವೀರ್</span>
<span lang="KN">ಸಿಂಗ್</span>, <span lang="KN">ಜೀವಾ</span>, <span lang="KN">ಪಂಕಜ್</span>
<span lang="KN">ತ್ರಿಪಾಠಿ</span>, <span lang="KN">ದೀಪಿಕಾ ಪಡುಕೋಣೆ</span>, <span lang="KN">ತಾಹಿರ್</span> <span lang="KN">ರಾಜ್</span> <span lang="KN">ಬಾಷಿನ್</span>,
<span lang="KN">ಜತಿನ್</span> <span lang="KN">ಸರಣ್</span> <span lang="KN">ಮತ್ತಿತರರು</span>.
<span lang="KN">ರೇಟಿಂಗ್</span>: ****</span></p><p class="MsoNormal" style="line-height: normal; margin-bottom: .0001pt; margin-bottom: 0in; mso-layout-grid-align: none; text-autospace: none;"><span style="font-family: Tunga, "sans-serif";"><span style="color: #ea9999;">(ಈ ವಿಮರ್ಶೆ ವಿಜಯ ಕರ್ನಾಟಕದ ಪತ್ರಿಕೆಯಲ್ಲಿ ಪ್ರಕಟವಾಗಿದೆ.)</span></span></p><p></p>ಮಲ್ಲಿಕಾಜು೯ನ ತಿಪ್ಪಾರhttp://www.blogger.com/profile/03103441547302200527noreply@blogger.com0tag:blogger.com,1999:blog-6897854439810696140.post-85256841639363302812021-11-22T00:01:00.000+05:302021-11-22T00:01:54.844+05:30Nykaa CEO Falguni Nayar: ಫಾಲ್ಗುಣಿ ಯಶಸ್ಸಿನ ಗಣಿ, ಮಹಿಳೆಯರಿಗೆ ಸ್ಫೂರ್ತಿ ಸೆಲೆ<p><b><i style="background-color: #f4cccc;"><span lang="KN" style="font-family: Tunga, "sans-serif"; font-size: 14pt;">ಫಾಲ್ಗುಣಿ ನಾಯರ್</span><span style="font-family: Tunga, "sans-serif"; font-size: 14pt;"> 50<span lang="KN">ನೇ ವಯಸ್ಸಿನಲ್ಲಿ
ಆರಂಭಿಸಿದ</span> ‘<span lang="KN">ನೈಕಾ</span>’ <span lang="KN">ಈಗ ಲಕ್ಷ ಕೋಟಿ ರೂ</span>.
<span lang="KN">ವೌಲ್ಯದ ಕಂಪನಿ</span>. <span lang="KN">ಉದ್ಯಮದ ಹಿನ್ನೆಲೆ ಇಲ್ಲದೇ ಅವರು ಯಶಸ್ವಿ
ಉದ್ಯಮಿಯಾದ ಕತೆ ಇದು</span>.</span></i></b></p>
<p class="MsoNormal" style="line-height: normal; margin-bottom: .0001pt; margin-bottom: 0in; mso-layout-grid-align: none; text-autospace: none;"><span style="font-family: "Tunga","sans-serif"; font-size: 14.0pt;"><o:p> </o:p></span></p>
<p class="MsoNormal" style="line-height: normal; margin-bottom: .0001pt; margin-bottom: 0in; mso-layout-grid-align: none; text-autospace: none;"><span style="font-family: Tunga, "sans-serif"; font-size: 14pt;"><b>-ಮಲ್ಲಿಕಾರ್ಜುನ ತಿಪ್ಪಾರ</b><br /></span><span lang="KN" style="font-family: Tunga, "sans-serif"; font-size: 14pt;">ಉದ್ಯೋಗದಲ್ಲಿದ್ದವರಿಗೆ</span><span style="font-family: Tunga, "sans-serif"; font-size: 14pt;"> 50 <span lang="KN">ವರ್ಷ
ವಯಸ್ಸು ಎಂದರೆ ನಿವೃತ್ತಿಯ ಹತ್ತಿರದಲ್ಲಿರುತ್ತಾರೆ</span>, <span lang="KN">ಮನೆಯಲ್ಲಿದ್ದವರಾದರೆ
ಮೊಮ್ಮಕ್ಕಳೊಂದಿಗೆ ಆಟವಾಡಿಕೊಂಡು ಕಾಲ ಕಳೆಯಲು ಮನಸ್ಸನ್ನು ಸಜ್ಜುಗೊಳಿಸುವ ಕಾಲ</span>. <span lang="KN">ಅಂಥ ವಯಸ್ಸಿನಲ್ಲಿ ಸ್ಟಾರ್ಟ್</span><span lang="KN">ಅಪ್ ಆರಂಭಿಸಿ</span>, <span lang="KN">ಅಲ್ಪ ಕಾಲದಲ್ಲೇ</span> ‘<span lang="KN">ಯೂನಿಕಾರ್ನ್</span>’ <span lang="KN">ಕಂಪನಿ
ಅಂದರೆ ಒಂದು ಶತಕೋಟಿ ಡಾಲರ್ ವೌಲ್ಯದ ಉದ್ಯಮವಾಗಿ ಬೆಳೆಸುವುದೆಂದರೆ ಸಾಮಾನ್ಯದ ಮಾತಲ್ಲಘಿ</span>.
<span lang="KN">ಈ ಅಸಾಮಾನ್ಯ ಸಾ</span>‘<span lang="KN">ನೆಯನ್ನು ಸಾಮಾನ್ಯ ಮಹಿಳೆಯೊಬ್ಬಳು ಮಾಡಿದ್ದಾರೆ</span>.</span></p>
<p class="MsoNormal" style="line-height: normal; margin-bottom: .0001pt; margin-bottom: 0in; mso-layout-grid-align: none; text-autospace: none;"><span lang="KN" style="font-family: "Tunga","sans-serif"; font-size: 14.0pt;">ಸೆಲ್ ಮೇಡ್ ಬಿಸಿನೆಸ್ ವುಮನ್</span><span style="font-family: "Tunga","sans-serif"; font-size: 14.0pt;"> ‘<span lang="KN">ಫಾಲ್ಗುಣಿ</span>’
<span lang="KN">ಆ ಯಶಸ್ವಿ ಉದ್ಯಮಿ</span>. <span lang="KN">ನೈಕಾ</span>(www.nykaa.com) <span lang="KN">ಎಂಬ ಇ</span>- <span lang="KN">ಕಾಮರ್ಸ್ ತಾಣವನ್ನು ಸ್ಥಾಪಿಸಿ</span>, <span lang="KN">ಅದನ್ನೀಗ ಬಹುದೊಡ್ಡ ಕಂಪನಿಯಾಗಿ ಬೆಳೆಸಿದ್ದಾರೆ</span>. <span lang="KN">ನೈಕಾ ಇತ್ತೀಚೆಗಷ್ಟೇ
ಷೇರುಪೇಟೆಯನ್ನು ಪ್ರವೇಶಿಸುತ್ತಿದ್ದಂತೆ ಅದರ ವೌಲ್ಯ ದಿಢೀರ್</span><span lang="KN">ನೇ ಏರಿಕೆಯಾಗಿದ್ದು</span>,
<span lang="KN">ಫಾಲ್ಗುಣಿ ದೇಶದ ಟಾಪ್</span> 20 <span lang="KN">ಶ್ರೀಮಂತರ ಪಟ್ಟಿಯಲ್ಲಿ ಸ್ಥಾನಪಡೆದುಕೊಂಡರು</span>.
‘<span lang="KN">ನೈಕಾ</span>’ <span lang="KN">ಪ್ರವರ್ತಕ ಕಂಪನಿ ಎ್ಎಸ್</span><span lang="KN">ಎನ್ ಇ</span>-<span lang="KN">ಕಾಮರ್ಸ್ ತಲಾ</span> 1125 <span lang="KN">ರೂ</span>.<span lang="KN">ವೌಲ್ಯದ ಷೇರು ಬಿಡುಗಡೆ ಮಾಡಿತ್ತು</span>. <span lang="KN">ಈ ಷೇರಿನ ದರ ಏಕ್ದಮ್</span>
2,001 <span lang="KN">ರೂ</span>.<span lang="KN">ಗೆ ಏರಿಕೆಯಾಗಿ</span>, <span lang="KN">ಒಂದೇ
ದಿನದಲ್ಲಿ ಕಂಪನಿಯ ವೌಲ್ಯ ದುಪ್ಪಟ್ಟಾಯಿತು</span>. <span lang="KN">ಇದರ ಪರಿಣಾಮ ಕಂಪನಿಯ ಒಟ್ಟು
ಮಾರುಕಟ್ಟೆ ವೌಲ್ಯವು</span> 1.04 <span lang="KN">ಲಕ್ಷ</span><span style="mso-spacerun: yes;"> </span><span lang="KN">ಕೋಟಿ ರೂ</span>.<span lang="KN">ದಾಟಿತು</span>.
‘<span lang="KN">ನೈಕಾ</span>’ <span lang="KN">ಫಾಲ್ಗುಣಿ ನಾಯರ್ ಲಕ್ಷ ಕೋಟಿ ರೂಪಾಯಿ ವೌಲ್ಯದ
ಕಂಪನಿಯ ಒಡತಿಯಾದರು</span>!<o:p></o:p></span></p><p class="MsoNormal" style="line-height: normal; margin-bottom: .0001pt; margin-bottom: 0in; mso-layout-grid-align: none; text-autospace: none;"></p><div class="separator" style="clear: both; text-align: center;"><a href="https://blogger.googleusercontent.com/img/b/R29vZ2xl/AVvXsEhFzq3iFD8cEAUfxcRlzdG4oIvRN-U-HsjDj8gAN8AVKALL0pEa4tghaYMJoyrOEJ3XyuTvQrq9oO92wUuonYR8MAr55sqPjLbfc4xFpphofTH9UgfnhhT0LowjaueTYizSMUXzWi9Gbz8/s650/nykaa.jpg" imageanchor="1" style="clear: left; float: left; margin-bottom: 1em; margin-right: 1em;"><img border="0" data-original-height="488" data-original-width="650" height="240" src="https://blogger.googleusercontent.com/img/b/R29vZ2xl/AVvXsEhFzq3iFD8cEAUfxcRlzdG4oIvRN-U-HsjDj8gAN8AVKALL0pEa4tghaYMJoyrOEJ3XyuTvQrq9oO92wUuonYR8MAr55sqPjLbfc4xFpphofTH9UgfnhhT0LowjaueTYizSMUXzWi9Gbz8/s320/nykaa.jpg" width="320" /></a></div><span lang="KN" style="font-family: Tunga, "sans-serif"; font-size: 14pt;">ಶೃಂಗಾರ ಮತ್ತು ಸ್ವಾಸ್ಥ</span><span style="font-family: Tunga, "sans-serif"; font-size: 14pt;">, <span lang="KN">ಫ್ಯಾಷನ್
ಉತ್ಪನ್ನಗಳ ಮಾರಾಟ ವೇದಿಕೆಯಾಗಿರುವ ನೈಕಾ ವೆಬ್</span><span lang="KN">ಸೈಟ್</span><span lang="KN">ನಲ್ಲಿ</span> 400 <span lang="KN">ಬ್ರ್ಯಾಂಡುಗಳ</span> 35,000<span lang="KN">ಕ್ಕೂ
ಅಕ ಉತ್ಪನ್ನಗಳಿವೆ</span>.<span lang="KN"> ಫ್ಯಾಷನ್, ಸೌಂದರ್ಯವರ್ಧಕ ದೊಡ್ಡ</span> <span lang="KN">ಬ್ರ್ಯಾಂಡ್</span><span lang="KN">ಗಳೆಲ್ಲವೂ
ಇಲ್ಲಿ ಲಭ್ಯ</span>. <span lang="KN">ಜನಪ್ರಿಯ ಲ್ಯಾಕ್ಮೆ</span>, <span lang="KN">ಕಾಯಾ ಸ್ಕಿನ್
ಕ್ಲಿನಿಕ್</span>, <span lang="KN">ಲೋರಿಯಲ್ ಪ್ಯಾರಿಸ್ ಇತ್ಯಾದಿ ಬ್ರ್ಯಾಂಡುಗಳ ಉತ್ಪನ್ನಗಳು ಇಲ್ಲಿ
ಬಿಕರಿಯಾಗುತ್ತವೆ</span>. 70<span lang="KN">ಕ್ಕೂ ಅಕ ಆ್ಲೈನ್ ಸ್ಟೋರ್</span><span lang="KN">ಗಳೂ ದೇಶದ ವಿವಿಧ ಭಾಗಗಳಲ್ಲಿ ಆರಂಭವಾಗಿವೆ</span>. <span lang="KN">ನೈಕಾ ವೆಬ್</span><span lang="KN">ಸೈಟ್ ಪ್ರತಿ ತಿಂಗಳು</span> 4.5 <span lang="KN">ಕೋಟಿ ವಿಸಿಟರ್ಸ್ ಪಡೆದುಕೊಳ್ಳುತ್ತದೆ</span>.</span><p></p>
<p class="MsoNormal" style="line-height: normal; margin-bottom: .0001pt; margin-bottom: 0in; mso-layout-grid-align: none; text-autospace: none;"><span lang="KN" style="font-family: "Tunga","sans-serif"; font-size: 14.0pt;">ಉದ್ಯಮದ ಯಾವುದೇ ಹಿನ್ನೆಲೆಯಿಲ್ಲದೆ
ಕೇವಲ ಒಂಬತ್ತು ವರ್ಷದಲ್ಲೇ ಕಂಪನಿಯೊಂದನ್ನು ಉನ್ನತಮಟ್ಟಕ್ಕೆ ಕೊಂಡೊಯ್ಯುವುದು ಹುಡುಗಾಟದ ಮಾತನೇಲ್ಲ</span><span style="font-family: "Tunga","sans-serif"; font-size: 14.0pt;">. <span lang="KN">ಆದರೆ</span>,
59 <span lang="KN">ವರ್ಷದ ಫಾಲ್ಗುಣಿ ಅಂಥ ಸಾಧನೆ ಮಾಡಿದ್ದಾರೆ</span>. <span lang="KN">ಫಾಲ್ಗುಣಿ
ಅವರೀಗ ಯಶಸ್ಸಿನ ಗಣಿ</span>; <span lang="KN">ಭಾರತೀಯ ಮಹಿಳೆಯರಿಗೆ</span>, <span lang="KN">ಅದರಲ್ಲೂ ಬಿಸಿನೆಸ್</span>, <span lang="KN">ಉದ್ಯಮದಲ್ಲಿ ಆಸಕ್ತಿ ಹೊಂದಿರುವ ಮಹಿಳೆಯರಿಗೆ
ಸ್ಫೂರ್ತಿಯ <span style="mso-spacerun: yes;"> </span>ಖನಿ</span>! <span lang="KN">ಗುಜರಾತಿಗಳಿಗೆ
ವ್ಯಾಪಾರ ಸಹಜ</span>. <span lang="KN">ಯಾಕೆ ಈ ಮಾತು ಹೇಳಬೇಕಾಯಿತು ಎಂದರೆ</span>, <span lang="KN">ಫಾಲ್ಗುಣಿ ನಾಯರ್ ಕೂಡ ಗುಜರಾತಿ</span>. <span lang="KN">ಆದರೆ</span>, <span lang="KN">ಹುಟ್ಟಿ ಬೆಳೆದಿದ್ದು ಎಲ್ಲ ಮಹಾರಾಷ್ಟ್ರದಲ್ಲಿ</span>. 1963<span lang="KN">ರ ಜನವರಿ</span>
19<span lang="KN">ರಂದು ಮುಂಬಯಿಯಲ್ಲಿ ಗುಜರಾತಿ ಕುಟುಂಬದಲ್ಲಿ ಫಾಲ್ಗುಣಿ ಜನಿಸಿದರು</span>. <span lang="KN">ಇವರ ತಂದೆ ಸ್ವಂತ ಮತ್ತು ಚಿಕ್ಕ ಬಿಯರಿಂಗ್ಸ್ ಕಂಪನಿಯನ್ನು ಹೊಂದಿದ್ದರು</span>. <span lang="KN">ಮುಂಬಯಿಯ ದಿ ನ್ಯೂ ಎರಾ ಸ್ಕೂಲ್</span><span lang="KN">ನಲ್ಲಿ ತಮ್ಮ ಪ್ರಾಥಮಿಕ ಹಾಗೂ
ಹೈಸ್ಕೂಲ್ ಶಿಕ್ಷಣವನ್ನು ಪೂರೈಸಿದ ಬಳಿಕ</span>, <span lang="KN">ಕಾಮರ್ಸ್ ಪದವಿಯನ್ನು ಪಡೆದುಕೊಂಡರು</span>.
<span lang="KN">ಬಳಿಕ ಐಐಎಂ ಅಹಮದಾಬಾದ್ ಸಂಸ್ಥೆಯಿಂದ ತಮ್ಮ ಸ್ನಾತಕ ಶಿಕ್ಷಣವನ್ನು ಪಡೆದುಕೊಂಡರು</span>.
<span lang="KN">ಉನ್ನತ ಶಿಕ್ಷಣವನ್ನು ಪಡೆಯುತ್ತಿದ್ದಂತೆ ಸಂಜಯ್ ನಾಯರ್ ಅವರನ್ನು ವರಿಸಿದರು</span>.
<span lang="KN">ಅಂಚಿತ್ ನಾಯರ್ ಮತ್ತು ಅದ್ವಿತಾ ನಾಯರ್ ಎಂಬ ಇಬ್ಬರು ಮಕ್ಕಳಿದ್ದಾರೆ</span>. <o:p></o:p></span></p>
<p class="MsoNormal" style="line-height: normal; margin-bottom: .0001pt; margin-bottom: 0in; mso-layout-grid-align: none; text-autospace: none;"><span lang="KN" style="font-family: "Tunga","sans-serif"; font-size: 14.0pt;">ಎಲ್ಲರಂತೆ</span><span style="font-family: "Tunga","sans-serif"; font-size: 14.0pt;">, <span lang="KN">ಫಾಲ್ಗುಣಿ
ಅವರೂ ವಿದ್ಯಾಭ್ಯಾಸ ಪೂರ್ತಿಯಾದ ಬಳಿಕ ಉದ್ಯೋಗಕ್ಕೆ ಸೇರಿಕೊಂಡರು</span>. <span lang="KN">ಕೋಟಕ್
ಮಹೀಂದ್ರಾ ಬ್ಯಾಂಕ್ ಸೇರಿದ ಅವರು</span> 18 <span lang="KN">ವರ್ಷಗಳ ಕಾಲ ದುಡಿದರು</span>. <span lang="KN">ಈ ಬ್ಯಾಂಕಿನಲ್ಲಿ ಇನ್ವೆಸ್ಟ್</span><span lang="KN">ಮೆಂಟ್ ಬ್ಯಾಂಕರ್</span><span lang="KN">ನಿಂದ ಕ್ಯಾಪಿಟಲ್ ಇನ್ವೆಸ್ಟ್</span><span lang="KN">ಮೆಂಟ್ ಮ್ಯಾನೇಜಿಂಗ್ ಡೈರೆಕ್ಟರ್</span><span lang="KN">ವರೆಗೂ ಉನ್ನತಿಯನ್ನು ಪಡೆದುಕೊಂಡರು</span>. <span lang="KN">ಬಹುಶಃ ಬೇರೆ ಯಾರೇ ಆದರೂ
ಅಷ್ಟು ಉನ್ನತ ಹುದ್ದೆಗೆ ತಲುಪಿದ ಮೇಲೆ ಮತ್ಯಾವುದೇ ಯೋಚನೆ ಮಾಡದೇ</span>, <span lang="KN">ನಿವೃತ್ತಿಯವರೆಗೂ
ಕೆಲಸ ಮಾಡುತ್ತಿದ್ದರು</span>. <span lang="KN">ಆದರೆ</span>, <span lang="KN">ಫಾಲ್ಗುಣಿ ಅವರಿಗೆ
ಮಾತ್ರ ಏನಾದರೂ ಭಿನ್ನವಾದ ಕೆಲಸವನ್ನು ಮಾಡಬೇಕು</span>, <span lang="KN">ಹೊಸತನ್ನು ಸಾಸಬೇಕೆಂಬ
ತುಡಿತ ಸದಾ ಕಾಲ ಇತ್ತು</span>. <span lang="KN">ಈ ಕನಸು ಅವರನ್ನು ನಿದ್ದೆ ಮಾಡಲು ಬಿಡುತ್ತಿರಲಿಲ್ಲ</span>.<span style="mso-spacerun: yes;"> </span><span lang="KN">ತನ್ನದೇ ಆದ ಹೆಗ್ಗರುತನ್ನು ಛಾಪಿಸುವ ಹಪಾಹಪಿ
ಅವರಲ್ಲಿ ಹೆಡೆಯಾಡುತ್ತಿತ್ತು</span>. <span lang="KN">ಆದರೆ</span>, <span lang="KN">ಅಷ್ಟೊತ್ತಿಗಾಗಲೇ</span>
50 <span lang="KN">ವರ್ಷಗಳು ಸರಿದು ಹೋಗಿದ್ದವು</span>. <span lang="KN">ಈ ಹಂತದಲ್ಲಿ ಕಂಪನಿಯೊಂದನ್ನು
ಆರಂಭಿಸುವುದು ಸರಳವೇನೂ ಆಗಿರಲಿಲ್ಲ</span>. <span lang="KN">ಅದಕ್ಕೆ ಬೇಕಾದ ಹಣಕಾಸು ನೆರವು ಆಗಲೀ</span>,
<span lang="KN">ಫ್ಯಾಮಿಲಿ ಹಿನ್ನೆಲೆಯಾಗಲೀ ಏನೂ ಇಲ್ಲ</span>. <span lang="KN">ಆದರೆ ಧೈರ್ಯ</span>,
<span lang="KN">ಛಲ</span>, <span lang="KN">ಪ್ರಾಮಾಣಿಕ ಪ್ರಯತ್ನಗಳೆಂಬ</span> ‘<span lang="KN">ಬಂಡವಾಳ</span>’<span style="mso-spacerun: yes;"> </span><span lang="KN">ಮಾತ್ರ
ಹೇರಳವಾಗಿತ್ತು</span>! <span lang="KN">ಕೊನೆಗೆ ತಮ್ಮ ಕನಸು ಬೆನ್ನು ಹತ್ತಿ</span> 2012<span lang="KN">ರಲ್ಲಿ ಕೋಟಕ್ ಮಹೀಂದ್ರಾ ಬ್ಯಾಂಕ್ ನೌಕರಿಯನ್ನು ತ್ಯಜಿಸಿದರು</span>. <span lang="KN">ಧೈರ್ಯದಿಂದ ಮುನ್ನುಗ್ಗಿ</span>, <span lang="KN">ಎಫ್ಎಸ್</span><span lang="KN">ಎನ್
ಇ ಕಾಮರ್ಸ್ ವೆಂಚರ್ ಪ್ರೈವೆಟ್ ಲಿ</span>. <span lang="KN">ಆರಂಭಿಸಿದರು</span>. <span lang="KN">ಈ ಕಂಪನಿಯಡಿ ಸೌಂದರ್ಯ</span>, <span lang="KN">ವೆಲ್</span><span lang="KN">ನೆಸ್
ಮತ್ತು ಫ್ಯಾಷನ್ ಸಂಬಂಧಿ ವಸ್ತುಗಳ ಮಾರಾಟ ಇ</span>-<span lang="KN">ಕಾಮರ್ಸ್ ತಾಣ</span> ‘<span lang="KN">ನೈಕಾ</span>’ <span lang="KN">ತೆರೆದರು</span>. <span lang="KN">ಆ ನಂತರ ಮತ್ತೆ ಅವರು
ಹಿಂದಿರುಗಿ ನೋಡಲೇ ಇಲ್ಲ</span>. <span lang="KN">ಸೌಂದರ್ಯ ಮತ್ತು ಸ್ವಾಸ್ಥ್ಯ ವಲಯದ ನೈಕಾ ಮೂಲಕ
ತಮ್ಮ ಹೆಗ್ಗರುತು ಮೂಡಿಸಲು ಅವರು ಯಶಸ್ವಿಯಾದರು</span>. <span lang="KN">ಚಿಕ್ಕದಾಗಿ ಆರಂಭವಾಗಿದ್ದ
ಇ</span>-<span lang="KN">ಕಾಮರ್ಸ್ ತಾಣ ಇದೀಗ ಹೆಮ್ಮರವಾಗಿ ಬೆಳೆದಿದೆ</span>. <span lang="KN">ಅದರ ಮಾರುಕಟ್ಟೆ ವೌಲ್ಯ ಲಕ್ಷ ಕೋಟಿ ರೂಪಾಯಿ ಮೀರಿದೆ</span>; 2000<span lang="KN">ಕ್ಕೂ
ಅಧಿಕ ಜನರಿಗೆ ಉದ್ಯೋಗ ನೀಡಿದೆ</span>. <span lang="KN">ಮಾರುಕಟ್ಟೆ ವೌಲ್ಯದಲ್ಲಿ ನೈಕಾ ಇದೀಗ ಕೋಲ್
ಇಂಡಿಯಾ</span>, <span lang="KN">ಗೋದ್ರೇಜಾ ಕಂಪನಿಗಳನ್ನು ಮೀರಿಸಿದೆ</span>. <span lang="KN">ದೇಶದ</span> 20 <span lang="KN">ಶ್ರೀಮಂತರ ಪಟ್ಟಿಯಲ್ಲಿ ಫಾಲ್ಗುಣಿ</span> 17<span lang="KN">ನೇ ಸ್ಥಾನದಲ್ಲಿದ್ದಾರೆ</span>. <span lang="KN">ಈ ಪಟ್ಟಿಯ ಅಗ್ರಸ್ಥಾನದಲ್ಲಿ ಮುಖೇಶ್
ಅಂಬಾನಿ</span>, <span lang="KN">ಗೌತಮ್ ಅದಾನಿಯಂಥವರಿದ್ದಾರೆ</span>. <span lang="KN">ಮತ್ತೊಂದು
ಗಮನಿಸಬೇಕಾದ ಸಂಗತಿ ಏನೆಂದರೆ</span>; <span lang="KN">ಟಾಪ್ ಸ್ಟಾರ್ಟ್</span><span lang="KN">ಅಪ್ ಐಪಿಒಗಳ ಪಟ್ಟಿಯಲ್ಲಿ ಫಾಲ್ಗುಣಿ ಪ್ರಥಮ ಸ್ಥಾನದಲ್ಲಿದ್ದಾರೆ</span>. <span lang="KN">ಯಾಕೆಂದರೆ</span>, <span lang="KN">ನೈಕಾದಲ್ಲಿ ಇವರದ್ದೇ ಶೇ</span>.53<span lang="KN">ರಷ್ಟು ಷೇರಿದೆ</span>. <span lang="KN">ನಂತರದ ಸ್ಥಾನದಲ್ಲಿ ಪೇಟಿಎಂ ಸಂಸ್ಥಾಪಕ ವಿಜಯ್
ಶೇಖರ್ ಶರ್ಮಾ</span>, <span lang="KN">ರೆಮಾಟೊದ ದೀಪೇಂದ್ರ ಗೋಯಲ್</span><span lang="KN">ನಂಥವರಿದ್ದಾರೆ</span>.
<o:p></o:p></span></p>
<p class="MsoNormal" style="line-height: normal; margin-bottom: .0001pt; margin-bottom: 0in; mso-layout-grid-align: none; text-autospace: none;"><span lang="KN" style="font-family: "Tunga","sans-serif"; font-size: 14.0pt;">ಯಶಸ್ಸಿನ ತುದಿಯನ್ನು ತಲುಪಿರುವ
ಫಾಲ್ಗುಣಿ ನಾಯರ್</span><span style="font-family: "Tunga","sans-serif"; font-size: 14.0pt;"><span style="mso-spacerun: yes;"> </span><span lang="KN">ತಮ್ಮ ತಂದೆಯಿಂದ ಸಾಕಷ್ಟು ಪ್ರಭಾವಿತರಾದರೆ</span>,
<span lang="KN">ಉದ್ಯಮಿ ಉದಯ್ ಕೋಟಕ್ ಮತ್ತು ಪತಿ ಸಂಜಯ್ ನಾಯರ್</span><span lang="KN">ರಿಂದ
ಸ್ಫೂರ್ತಿ ಪಡೆದುಕೊಂಡಿದ್ದಾರೆ</span>. ‘<span lang="KN">ಕರ್ಮಣ್ಯೇವಾಕಾರಸ್ತೇ ಮಾ ಫಲೇಷು ಕದಾಚನ</span>’
<span lang="KN">ಎಂಬಂತೆ ತಮ್ಮ ಕೆಲಸವನ್ನು ತಾವು ಮಾಡುತ್ತಾ ಹೊರಟಿದ್ದಾರೆ</span>, <span lang="KN">ಫಲಾಫಲ ಬಗ್ಗೆ ತಲೆಕೆಡಿಸಿಕೊಂಡಿಲ್ಲ</span>. <span lang="KN">ಯಾವುದೇ ಸಕ್ಸೆಸ್ ಆಗಲೀ
ಶಾರ್ಟ್</span><span lang="KN">ಕಟ್</span><span lang="KN">ನಲ್ಲಿ ಬರುವಂಥದ್ದಲ್ಲ</span>.
<span lang="KN">ಅದಕ್ಕಾಗಿ ತನುಮನಧನವೆನ್ನಲ್ಲ ಅರ್ಪಿಸಬೇಕಾಗುತ್ತದೆ</span>. <span lang="KN">ಅರ್ಪಣೆ</span>,
<span lang="KN">ಸಮರ್ಪಣೆಗಳಿದ್ದಾಗ ಮಾತ್ರವೇ ಅಂದುಕೊಂಡ ಗುರಿಯನ್ನು ಮುಟ್ಟಲು ಸಾಧ್ಯ ಎಂಬುದಕ್ಕೆ
ಫಾಲ್ಗುಣಿ ಈಗ ಉದಾಹರಣೆಯಾಗಿದ್ದಾರೆ</span>. <o:p></o:p></span></p>
<p class="MsoNormal" style="line-height: normal; margin-bottom: .0001pt; margin-bottom: 0in; mso-layout-grid-align: none; text-autospace: none;"><span lang="KN" style="font-family: "Tunga","sans-serif"; font-size: 14.0pt;">ಈಗಿನದ್ದು ಮೈಕ್ರೋಬ್ಲಾಗಿಂಗ್
ಜಮಾನಾ</span><span style="font-family: "Tunga","sans-serif"; font-size: 14.0pt;">. <span lang="KN">ಬಹುತೇಕ ಉದ್ದಿಮೆದಾರರು ಟ್ವಿಟರ್</span>,<span lang="KN"> ಫೇಸ್ಬುಕ್</span><span lang="KN">ನಂಥ ಸೋಷಿಯಲ್ ಮೀಡಿಯಾಗಳಲ್ಲಿದ್ದಾರೆ</span>. <span lang="KN">ಆದರೆ</span>, <span lang="KN">ಫಾಲ್ಗುಣಿ ಅವರು ಇದಕ್ಕೆ ಅಪವಾದ</span>. <span lang="KN">ನೈಕಾ ಕಂಪನಿ ಶುರು ಮಾಡಿದಾಗಿನಿಂದ
ಈ ಒಂಬತ್ತು ವರ್ಷಗಳಲ್ಲಿ ಅವರು ಒಮ್ಮೆ ಮಾತ್ರ ಟ್ವೀಟ್ ಮಾಡಿದ್ದಾರಂತೆ</span>! <span lang="KN">ಸೋಷಿಯಲ್ ಮೀಡಿಯಾದಲ್ಲಿ ವ್ಯಸ್ತವಾಗುವುದೆಂದರೆ ಸಾಕಷ್ಟು ಸಮಯ ಮತ್ತು ಪ್ರಯತ್ನ ಬೇಕಾಗುತ್ತದೆ
ಎಂಬುದು ಅವರ ಈ ನಿರ್ಧಾರಕ್ಕೆ ಕಾರಣ</span>. <o:p></o:p></span></p>
<p class="MsoNormal" style="line-height: normal; margin-bottom: .0001pt; margin-bottom: 0in; mso-layout-grid-align: none; text-autospace: none;"><span lang="KN" style="font-family: "Tunga","sans-serif"; font-size: 14.0pt;">ಯಾವುದೇ ಉದ್ಯಮಶೀಲತೆಯೊಂದು
ಯಶಸ್ಸು ಗಳಿಸಬೇಕಾದರೆ ಸಾಕಷ್ಟು ಉತ್ಸಾಹ</span><span style="font-family: "Tunga","sans-serif"; font-size: 14.0pt;">, <span lang="KN">ಕಠಿಣ ಪರಿಶ್ರಮ</span>, <span lang="KN">ದೃಢತೆ ಮತ್ತು ಸಮಯವನ್ನು ಬೇಡುತ್ತದೆ ಎಂಬುದು ಅವರು ಖಚಿತ ನುಡಿಗಳಾಗಿವೆ</span>. ‘‘<span lang="KN">ನಾನು ನೈಕಾವನ್ನು</span> 50<span lang="KN">ನೇ ವಯಸ್ಸಿನಲ್ಲಿ ಆರಂಭಿಸಿದೆ</span>. <span lang="KN">ಈ</span> ‘<span lang="KN">ನೈಕಾ</span>’ <span lang="KN">ಪಯಣವು ಪ್ರತಿಯೊಬ್ಬ ಹುಡುಗಿಯ
ತನ್ನ ಬದುಕಿನಲ್ಲಿ ತಾನೇ</span> ‘<span lang="KN">ನಾಯಕಿ</span>’<span lang="KN">ಯಾಗಲು ಪ್ರೇರಣೆ
ನೀಡಲಿ ಎಂಬುದು ನನ್ನ ಆಶಯ</span>,’’ <span lang="KN">ಎಂದು ಹೇಳಿಕೊಂಡಿದ್ದರು</span>. <span lang="KN">ಅನುಮಾನವೇ ಬೇಡ</span>. <span lang="KN">ನೈಕಾ ಹಾಗೂ ಫಾಲ್ಗುಣಿ ನಾಯರ್ ಅವರ ಯಶಸ್ಸಿನ
ಪಯಣವು ಮುಂಬರುವ ಅಸಂಖ್ಯ ಮಹಿಳೆಯರಿಗೆ ಸ್ಫೂರ್ತಿ ನೀಡಲಿದೆ</span>. <span lang="KN">ಸಮರ್ಪಣೆಯಿಂದ</span>,
<span lang="KN">ಪ್ರಾಮಾಣಿಕ ಪ್ರಯತ್ನದಿಂದ ಮುನ್ನಡೆದರೆ ಯಶಸ್ಸು ಸಿಕ್ಕೇ ಸಿಗುತ್ತದೆ ಎಂಬುದಕ್ಕೆ
ಯಶಸ್ಸಿನ ಮಾದರಿಯನ್ನು ನಮ್ಮ ಮುಂದೆ ಫಾಲ್ಗುಣಿ ಕಡೆದು ನಿಲ್ಲಿಸಿದ್ದಾರೆ</span>.</span></p><p class="MsoNormal" style="line-height: normal; margin-bottom: .0001pt; margin-bottom: 0in; mso-layout-grid-align: none; text-autospace: none;"></p><div class="separator" style="clear: both; text-align: center;"><a href="https://blogger.googleusercontent.com/img/b/R29vZ2xl/AVvXsEjd-b-4RqZr_LMqOMJHF1SP3qCrK_geTMDpavrtAzDQ4hZ2xB3aSrcNXCy3qURTGqj5DsqgEg6yruxevTWCKrpIvdeZm2e8zUaDlr8tGQnxvpqNxl8zClYwG3kqPhGHV6Up0nV_yLj5MUY/s2048/nykaa.jpg" imageanchor="1" style="margin-left: 1em; margin-right: 1em;"><img border="0" data-original-height="2048" data-original-width="1072" height="400" src="https://blogger.googleusercontent.com/img/b/R29vZ2xl/AVvXsEjd-b-4RqZr_LMqOMJHF1SP3qCrK_geTMDpavrtAzDQ4hZ2xB3aSrcNXCy3qURTGqj5DsqgEg6yruxevTWCKrpIvdeZm2e8zUaDlr8tGQnxvpqNxl8zClYwG3kqPhGHV6Up0nV_yLj5MUY/w210-h400/nykaa.jpg" width="210" /></a></div><div class="separator" style="clear: both; text-align: center;"> </div><div class="separator" style="clear: both; text-align: center;"><span style="color: #fce5cd;">ಈ ಲೇಖನವು ವಿಜಯ ಕರ್ನಾಟಕದ ವ್ಯಕ್ತಿಗತ ಅಂಕಣದಲ್ಲಿ 2021 ನವೆಂಬರ್ 21ರ ಸಂಚಿಕೆಯಲ್ಲಿ ಪ್ರಕಟವಾಗಿದೆ.</span></div><br /><span style="font-family: "Tunga","sans-serif"; font-size: 14.0pt;"><br /></span><p></p>ಮಲ್ಲಿಕಾಜು೯ನ ತಿಪ್ಪಾರhttp://www.blogger.com/profile/03103441547302200527noreply@blogger.com0tag:blogger.com,1999:blog-6897854439810696140.post-2838185279838371062021-11-21T23:45:00.000+05:302021-11-21T23:45:08.397+05:30'Jai Bhim' Real Hero Justice K Chandru: ಶೋಷಿತರ ರಿಯಲ್ ಹೀರೊ ಜಸ್ಟೀಸ್ ಕೆ ಚಂದ್ರು<p><i style="background-color: #f4cccc;"><b><span lang="KN" style="font-family: Tunga, "sans-serif"; font-size: 10pt;">ಶೋಷಿತರ ಪರ ನಿಲ್ಲುವ ನ್ಯಾಯವಾದಿಯ
ಕತೆಯ ಸಿನಿಮಾ</span><span style="font-family: Tunga, "sans-serif"; font-size: 10pt;">
‘<span lang="KN">ಜೈ ಭೀಮ್</span>’ <span lang="KN">ಸದ್ದು ಮಾಡುತ್ತಿದೆ</span>. <span lang="KN">ನೈಜ ಕತೆಯನ್ನಾಧರಿಸಿದ ಈ ಚಿತ್ರದ ಅಸಲಿ ಹೀರೊ ಜಸ್ಟೀಸ್</span> <span lang="KN">ಕೆ</span>.<span lang="KN">ಚಂದ್ರು</span>.</span></b></i></p><p><i><span style="font-family: Tunga, "sans-serif"; font-size: 10pt;"><br /></span></i></p>
<p class="MsoNormal" style="line-height: normal; margin-bottom: .0001pt; margin-bottom: 0in; mso-layout-grid-align: none; text-autospace: none;"><span style="font-family: Tunga, sans-serif;"><span style="font-size: 13.3333px;"><b>- ಮಲ್ಲಿಕಾರ್ಜುನ ತಿಪ್ಪಾರ</b><br /></span></span><span lang="KN" style="font-family: Tunga, "sans-serif"; font-size: 10pt;">ದೃಶ್ಯ ಮಾಧ್ಯಮದ ಬಹು ಸಾಧ್ಯತೆಗಳನ್ನು
ಬಳಸಿಕೊಳ್ಳುವುದಲ್ಲಿ ತಮಿಳು ಚಿತ್ರರಂಗದ್ದು ಎತ್ತಿದ ಕೈ</span><span style="font-family: Tunga, "sans-serif"; font-size: 10pt;">. <span lang="KN">ನೈಜ ಕತೆಗಳನ್ನು ಬೆಳ್ಳಿತೆರೆಗೆ
ಅನ್ವಯಿಸಿ</span>, <span lang="KN">ಜನರಿಗೆ ನಾಟುವಂತೆ ದಾಟಿಸುವ ಕಲೆಯನ್ನು ಕರಗತ ಮಾಡಿಕೊಂಡಿದೆ</span>.
<span lang="KN">ಈಗ ಸೂರ್ಯ ನಟನೆಯ</span> ‘<span lang="KN">ಜೈ ಭೀಮ್</span>’ <span lang="KN">ಸಿನಿಮಾ ಕೂಡ ಇದೇ ನೆಲೆಯಲ್ಲಿ ರೂಪುಗೊಂಡಿದ್ದು</span>, <span lang="KN">ನೈಜ ಕತೆಯಾಧರಿಸಿ
ಇತರ ಸಿನಿಮಾಗಳಿಗಿಂತ ಭಿನ್ನವಾಗಿ ನಿಂತಿದೆ</span>. <span lang="KN">ಅಪರಿಮಿತ ಅಧಿಕಾರ ಹೊಂದಿರುವ
ಪೊಲೀಸ್</span> <span lang="KN">ವ್ಯವಸ್ಥೆ ತನ್ನ ಸಂವೇದನೆ ಕಳೆದುಕೊಂಡು</span>, <span lang="KN">ಅಪ್ರಮಾಣಿಕವಾಗಿ</span>, <span lang="KN">ಅಧಿಕಾರದ ದರ್ಪದಿಂದ ವರ್ತಿಸಿದಾಗ ಧ್ವನಿ ಇಲ್ಲದವರು</span>,
<span lang="KN">ಸಮಾಜದಲ್ಲಿಯಾವ ರೀತಿಯಲ್ಲಿಶೋಷಣೆಗೊಳಗಾಗುತ್ತಾರೆ</span>, <span lang="KN">ನಿರ್ದೋಷಿಗಳು
ಹೇಗೆ ಬಲಿಯಾಗುತ್ತಾರೆಂಬ ಕತೆಯನ್ನು ಈ ಸಿನಿಮಾ ಒಳಗೊಂಡಿದೆ</span>.</span></p>
<p class="MsoNormal" style="line-height: normal; margin-bottom: .0001pt; margin-bottom: 0in; mso-layout-grid-align: none; text-autospace: none;"><span lang="KN" style="font-family: Tunga, "sans-serif"; font-size: 10pt;">ಈ ಚಿತ್ರದಲ್ಲಿಮುಖ್ಯ ಪಾತ್ರ
ನ್ಯಾಯವಾದಿ ಚಂದ್ರು</span><span style="font-family: Tunga, "sans-serif"; font-size: 10pt;">.
<span lang="KN">ಈ ಪಾತ್ರವನ್ನು ನಟ ಸೂರ್ಯ ಪರಕಾಯ ಪ್ರವೇಶ ಮಾಡಿದ್ದು</span>, <span lang="KN">ವಿಮರ್ಶಕರಿಂದಲೂ ಮೆಚ್ಚುಗೆ ದೊರೆತಿದೆ</span>. <span lang="KN">ಇದಿಷ್ಟು</span> ‘<span lang="KN">ರೀಲ್</span>’ <span lang="KN">ಕತೆಯಾದರೆ</span>, <span lang="KN">ಸೈಡ್</span><span lang="KN">ವಿಂಗ್</span><span lang="KN">ನಲ್ಲಿ </span>‘<span lang="KN">ರಿಯಲ್</span> <span lang="KN">ಕತೆ</span>’<span lang="KN">ಯನ್ನು ಬಿಚ್ಚುತ್ತಾ ಹೋದರೆ ಅದು ಇನ್ನೊಂದು ರೋಮಾಂಚನ</span>.
<span lang="KN">ಚಿತ್ರದ ಮುಖ್ಯ ಪಾತ್ರವಾಗಿರುವ ಚಂದ್ರು</span>, <span lang="KN">ನಿಜ ಜೀವನದ ಜಸ್ಟೀಸ್</span>
<span lang="KN">ಕೆ</span>. <span lang="KN">ಚಂದ್ರು</span>. <span lang="KN">ಮದ್ರಾಸ್</span>
<span lang="KN">ಹೈಕೋರ್ಟ್</span><span lang="KN">ನ ನ್ಯಾಯಮೂರ್ತಿಯಾಗಿ ದಕ್ಷ ತೆಯಿಂದ ಕೆಲಸ
ಮಾಡಿದ ವ್ಯಕ್ತಿ ಅವರು</span>. <span lang="KN">ತಮಿಳುನಾಡಿನಲ್ಲಿ ತುಂಬ ಹೆಸರಿದೆ</span>. <span lang="KN">ಆದರೆ</span>, ‘<span lang="KN">ಜೈ ಭೀಮ್</span>’ <span lang="KN">ತೆರೆಗೆ ಬರುವವರೆಗೂ
ಜ</span>.<span lang="KN">ಕೆ</span>. <span lang="KN">ಚಂದ್ರು ಅವರ ಬಗ್ಗೆ ತಮಿಳುನಾಡಿನಾಚೆ ಅಷ್ಟೇನೂ
ಗೊತ್ತಿರಲಿಲ್ಲ</span>.</span></p>
<p class="MsoNormal" style="line-height: normal; margin-bottom: .0001pt; margin-bottom: 0in; mso-layout-grid-align: none; text-autospace: none;"><span lang="KN" style="font-family: Tunga, "sans-serif"; font-size: 10pt;">ಕೆ</span><span style="font-family: Tunga, "sans-serif"; font-size: 10pt;">.<span lang="KN">ಚಂದ್ರು
ಅವರು ಮದ್ರಾಸ್</span> <span lang="KN">ಹೈಕೋರ್ಟ್</span> <span lang="KN">ನ್ಯಾಯಮೂರ್ತಿಯಾಗಿ
ಅದ್ವಿತೀಯ ಕೆಲಸ ಮಾಡಿದ್ದಾರೆ</span>. <span lang="KN">ಸಾಮಾನ್ಯಧಿವಾಗಿ ಒಬ್ಬ ಜಡ್ಜ್</span>
<span lang="KN">ತಮ್ಮ ಅವಧಿಯಲ್ಲಿ </span>10 <span lang="KN">ಸಾವಿರದಿಂದ</span> 20 <span lang="KN">ಸಾವಿರದವರೆಗೆ ಕೇಸ್</span><span lang="KN">ಗಳನ್ನು ಇತ್ಯರ್ಥಪಡಿಸುತ್ತಾರೆ</span>.
<span lang="KN">ಆದರೆ</span>, <span lang="KN">ಜ</span>. <span lang="KN">ಚಂದ್ರು ತಮ್ಮ ಆರೂವರೆ
ವರ್ಷಗಳ ಅವಧಿಯಲ್ಲಿ</span>90 <span lang="KN">ಸಾವಿರಕ್ಕೂ ಅಧಿಕ ಪ್ರಕರಣಗಳನ್ನು ಇತ್ಯರ್ಥಪಡಿಸಿ</span>,
<span lang="KN">ಕ್ಷೀಪ್ರ ನ್ಯಾಯದಾನ ಮಾಡಿದ್ದಾರೆ</span>.</span></p>
<p class="MsoNormal" style="line-height: normal; margin-bottom: .0001pt; margin-bottom: 0in; mso-layout-grid-align: none; text-autospace: none;"><span lang="KN" style="font-family: Tunga, "sans-serif"; font-size: 10pt;">ಕೆಂಪು ಗೂಟದ ಕಾರನ್ನು ಯಾರು
ಬಳಸಬೇಕು ಎಂಬ ಬಗ್ಗೆ ಚರ್ಚೆಗಳು ನಡೆದೇ ಇವೆ</span><span style="font-family: Tunga, "sans-serif"; font-size: 10pt;">. <span lang="KN">ಕೋರ್ಟ್</span> <span lang="KN">ಆದೇಶದ
ಪ್ರಕಾರ</span>, <span lang="KN">ಕೆಲವು ಸಂವಿಧಾನಬದ್ಧ ಹುದ್ದೆ ಅಲಂಕರಿಸಿದವರನ್ನು ಹೊರತುಪಡಿಸಿ
ಉಳಿದವರಿಗೆ ಈ ಸೇವೆ ಇಲ್ಲ</span>. <span lang="KN">ಈ ಬಗ್ಗೆ ಆದೇಶವಾಗುವುದಕ್ಕಿಂತ ಮುಂಚೆಯೇ ಚಂದ್ರು
ತಮ್ಮ ಕಾರಿನ ಕೆಂಪು ದೀಪವನ್ನು ತೆಗೆಸಿದ್ದರು</span>. <span lang="KN">ವಕೀಲರು ನ್ಯಾಯಾಧೀಶರನ್ನು
ಉದ್ದೇಶಿಸಿ ಬಳಸುವ</span> ‘<span lang="KN">ಮೈ ಲಾರ್ಡ್</span>’ <span lang="KN">ಪದವನ್ನು
ತಮಗೆ ಬಳಸದಂತೆ ಸೂಚಿಸಿದ್ದರು</span>! <span lang="KN">ಇದೆಲ್ಲವೂ ಅವರ ಸರಳತೆಯನ್ನು ಬಹಿರಂಗಗೊಳಿಸುತ್ತದೆ</span>.</span></p><p class="MsoNormal" style="line-height: normal; margin-bottom: .0001pt; margin-bottom: 0in; mso-layout-grid-align: none; text-autospace: none;"></p><div class="separator" style="clear: both; text-align: center;"><a href="https://blogger.googleusercontent.com/img/b/R29vZ2xl/AVvXsEjkUlTN4zLS-Bc_AtxZY2NAEA1wbcBi7n6EXZYv4IGSSvsWMv6bE3ChAwQscWmQs-7-YElDazQppCZdNd7A1b8zp8cPQjxxoI7oDiWQc9tkjscMmvtBLVrI6kH_Hxn99UeKoU6dcw8n8Vo/s1200/chandru.jpg" imageanchor="1" style="clear: left; float: left; margin-bottom: 1em; margin-right: 1em;"><img border="0" data-original-height="900" data-original-width="1200" height="240" src="https://blogger.googleusercontent.com/img/b/R29vZ2xl/AVvXsEjkUlTN4zLS-Bc_AtxZY2NAEA1wbcBi7n6EXZYv4IGSSvsWMv6bE3ChAwQscWmQs-7-YElDazQppCZdNd7A1b8zp8cPQjxxoI7oDiWQc9tkjscMmvtBLVrI6kH_Hxn99UeKoU6dcw8n8Vo/s320/chandru.jpg" width="320" /></a></div><span style="font-family: Tunga, "sans-serif"; font-size: 10pt;">2006</span><span lang="KN" style="font-family: Tunga, "sans-serif"; font-size: 10pt;">ರಲ್ಲಿಚಂದ್ರು ಮದ್ರಾಸ್</span><span style="font-family: Tunga, "sans-serif"; font-size: 10pt;">
</span><span lang="KN" style="font-family: Tunga, "sans-serif"; font-size: 10pt;">ಹೈಕೋರ್ಟ್</span><span style="font-family: Tunga, "sans-serif"; font-size: 10pt;"> </span><span lang="KN" style="font-family: Tunga, "sans-serif"; font-size: 10pt;">ಹೆಚ್ಚುವರಿ ನ್ಯಾಯಮೂರ್ತಿಯಾಗಿ ನೇಮಕಗೊಂಡರು</span><span style="font-family: Tunga, "sans-serif"; font-size: 10pt;">.
2009</span><span lang="KN" style="font-family: Tunga, "sans-serif"; font-size: 10pt;">ರಲ್ಲಿಕಾಯಂ ನ್ಯಾಯಮೂರ್ತಿಯಾಗಿ ಬಡ್ತಿ ನೀಡಲಾಯಿತು</span><span style="font-family: Tunga, "sans-serif"; font-size: 10pt;">. </span><span lang="KN" style="font-family: Tunga, "sans-serif"; font-size: 10pt;">ಅವರ ಸರಳತೆಗೆ ಮತ್ತೊಂದು ಉದಾಹರಣೆ ಎಂದರೆ</span><span style="font-family: Tunga, "sans-serif"; font-size: 10pt;">, </span><span lang="KN" style="font-family: Tunga, "sans-serif"; font-size: 10pt;">ಅವರು ನ್ಯಾಯಮೂರ್ತಿಯಾಗಿ
ನಿವೃತ್ತಿಯಾದ ದಿನ ಬೆಳಗ್ಗೆ ಸರಕಾರಿ ಕಾರ್</span><span style="font-family: Tunga, "sans-serif"; font-size: 10pt;"> </span><span lang="KN" style="font-family: Tunga, "sans-serif"; font-size: 10pt;">ಉಪಯೋಗಿಸಿದ್ದರೆ</span><span style="font-family: Tunga, "sans-serif"; font-size: 10pt;">,
</span><span lang="KN" style="font-family: Tunga, "sans-serif"; font-size: 10pt;">ಸಾಯಂಕಾಲ ಸರಕಾರಿ ಕಾರನ್ನು ಬಿಟ್ಟು</span><span style="font-family: Tunga, "sans-serif"; font-size: 10pt;"> </span><span lang="KN" style="font-family: Tunga, "sans-serif"; font-size: 10pt;">ಲೋಕಲ್</span><span style="font-family: Tunga, "sans-serif"; font-size: 10pt;"> </span><span lang="KN" style="font-family: Tunga, "sans-serif"; font-size: 10pt;">ಟ್ರೈನ್</span><span style="font-family: Tunga, "sans-serif"; font-size: 10pt;"></span><span lang="KN" style="font-family: Tunga, "sans-serif"; font-size: 10pt;">ನಲ್ಲಿಮನೆಗೆ ಪ್ರಯಾಣಿಸಿದ್ದರು</span><span style="font-family: Tunga, "sans-serif"; font-size: 10pt;">. </span><span lang="KN" style="font-family: Tunga, "sans-serif"; font-size: 10pt;">ಸರಳತೆ</span><span style="font-family: Tunga, "sans-serif"; font-size: 10pt;">, </span><span lang="KN" style="font-family: Tunga, "sans-serif"; font-size: 10pt;">ಪ್ರಮಾಣಿಕತೆ</span><span style="font-family: Tunga, "sans-serif"; font-size: 10pt;">, </span><span lang="KN" style="font-family: Tunga, "sans-serif"; font-size: 10pt;">ಬದ್ಧತೆ ಹಾಗೂ ನಿಸ್ವಾರ್ಥ ಮೌಲ್ಯಗಳು ಅವರನ್ನು
ಒಬ್ಬ ಪರಿಪೂರ್ಣ ನ್ಯಾಯಮೂರ್ತಿಯಾಗಿ ಮಾಡಿದ್ದಲ್ಲದೆ</span><span style="font-family: Tunga, "sans-serif"; font-size: 10pt;">, </span><span lang="KN" style="font-family: Tunga, "sans-serif"; font-size: 10pt;">ಒಬ್ಬ ಕ್ರೂಸೆಡರ್</span><span style="font-family: Tunga, "sans-serif"; font-size: 10pt;">
</span><span lang="KN" style="font-family: Tunga, "sans-serif"; font-size: 10pt;">ರೀತಿಯಲ್ಲಿ ಕೆಲಸ ಮಾಡಲು ಸಾಧ್ಯವಾಯಿತು</span><span style="font-family: Tunga, "sans-serif"; font-size: 10pt;">.</span><p></p>
<p class="MsoNormal" style="line-height: normal; margin-bottom: .0001pt; margin-bottom: 0in; mso-layout-grid-align: none; text-autospace: none;"><span lang="KN" style="font-family: Tunga, "sans-serif"; font-size: 10pt;">ನ್ಯಾಯಮೂರ್ತಿಯಾಗುವ ಮೊದಲು
ಅವರು ಮದ್ರಾಸ್</span><span style="font-family: Tunga, "sans-serif"; font-size: 10pt;">
<span lang="KN">ಹೈಕೋರ್ಟ್</span><span lang="KN">ನಲ್ಲಿವಕೀಲಿಕೆ ಮಾಡುತ್ತಿದ್ದರು</span>.
<span lang="KN">ಆಗಲೂ ಅಷ್ಟೇ ವಕೀಲರಾಗಿ ಸಮಾಜದಲ್ಲಿನ ಬಡವರು</span>, <span lang="KN">ಬುಡಕಟ್ಟು
ಜನಾಂಗದವರು</span>, <span lang="KN">ಧ್ವನಿ ಇಲ್ಲದವರಿಗೆ ಧ್ವನಿಯಾಗಿ ಕಾನೂನು ಸೇವೆಯನ್ನು ಒದಗಿಸಿದ್ದಾರೆ</span>.
<span lang="KN">ಒಂದು ಪೈಸೆ ತೆಗೆದುಕೊಳ್ಳದೇ ಅವರ ಪರವಾಗಿ ಹೋರಾಡಿದ್ದಾರೆ</span>. ‘<span lang="KN">ಜೈ ಭೀಮ್</span>’ <span lang="KN">ಚಿತ್ರದಲ್ಲಿಅಳವಡಿಸಿಧಿಕೊಳ್ಳಲಾಗಿಧಿರುವುದು ಅವರ
ವೃತ್ತಿ ಬದುಕಿನ ಒಂದು ಎಪಿಸೋಡ್</span> <span lang="KN">ಅಷ್ಟೇ</span>.</span></p>
<p class="MsoNormal" style="line-height: normal; margin-bottom: .0001pt; margin-bottom: 0in; mso-layout-grid-align: none; text-autospace: none;"><span lang="KN" style="font-family: Tunga, "sans-serif"; font-size: 10pt;">ಬುಡಕಟ್ಟು ಜನಾಂಗದ ವ್ಯಕ್ತಿಯೊಬ್ಬನನ್ನು
ಪೊಲೀಸರು ಕಳ್ಳತನದ</span><span style="font-family: Tunga, "sans-serif"; font-size: 10pt;">
(<span lang="KN">ಸುಳ್ಳು ಪ್ರಕರಣ</span>) <span lang="KN">ಆರೋಪದ ಮೇಲೆ ಬಂಧಿಸುತ್ತಾರೆ</span>.
<span lang="KN">ಮಾಡದೇ ಇರುವ ತಪ್ಪನ್ನು ಒಪ್ಪಿಕೊಳ್ಳುವಂತೆ ಕಿರುಕುಳ ನೀಡುತ್ತಾರೆ</span>. <span lang="KN">ಇದರಿಂದ ಆತ ಸತ್ತು ಹೋಗುಧಿತ್ತಾನೆ</span>. <span lang="KN">ಕೇಸ್</span> <span lang="KN">ಮುಚ್ಚಿ ಹಾಕುವುದಕ್ಕಾಗಿ ಆರೋಪಿ ಪರಾರಿಧಿಯಾಗಿದ್ದಾನೆಂಬ ಕತೆ ಕಟ್ಟುತ್ತಾರೆ</span>. <span lang="KN">ಆದರೆ</span>, <span lang="KN">ಮೃತನ ಪತ್ನಿ ನಂಬುವುದಿಲ್ಲ</span>. <span lang="KN">ಆಕೆಗೆ ಕಂಡಿದ್ದೇ ಈ ನ್ಯಾಯವಾದಿ ಚಂದ್ರು</span>. <span lang="KN">ಪ್ರಕರಣವನ್ನು ಕೈಗೆತ್ತಿಕೊಳ್ಳುವ
ಅವರು</span> 13 <span lang="KN">ವರ್ಷ ಹೋರಾಡಿ</span>, <span lang="KN">ಆರೋಪಿ ಪೋಲೀಸರಿಗೆ</span>
14 <span lang="KN">ವರ್ಷ ಕಾಲ ಜೈಲು ಶಿಕ್ಷೆಯಾಗುವಂತೆ ಮಾಡುತ್ತಾರೆ</span>. <span lang="KN">ಈ ಕೇಸಿಧಿನಿಂದ ಹಿಂದೆ ಸರಿಯಲು ಸಾಕಷ್ಟು ಆಮಿಷಗಳನ್ನು ಒಡ್ಡಿದರೂ ಚಂದ್ರು ತಮ್ಮ ಬದ್ಧತೆಯನ್ನು
ಎಲ್ಲೂಬಿಟ್ಟುಕೊಡುಧಿವುದಿಲ್ಲ</span>, <span lang="KN">ಹಣ ತುಂಬಿದ ಸೂಟ್</span><span lang="KN">ಕೇಸ್</span> <span lang="KN">ಅನ್ನೇ ರೂಮಿನಿಂದ ಆಚೆ ಎಸೆದಂಥ ಘಟನೆಗಳಿವೆ</span>.
<span lang="KN">ಇಂಥ ಹತ್ತಾರು ಕತೆಗಳು</span>, <span lang="KN">ಪ್ರಕರಣಗಳು ಅವರಲ್ಲಿವೆ</span>.</span></p>
<p class="MsoNormal" style="line-height: normal; margin-bottom: .0001pt; margin-bottom: 0in; mso-layout-grid-align: none; text-autospace: none;"><span lang="KN" style="font-family: "Tunga","sans-serif"; font-size: 10.0pt;">ತಮಿಳುನಾಡಿನ ತಿರುಚಿರಾಪಳ್ಳಿ
ಜಿಲ್ಲೆಯ ಶ್ರೀರಂಗಮ್</span><span style="font-family: "Tunga","sans-serif"; font-size: 10.0pt;"><span lang="KN">ನ ಮಧ್ಯಮ ವರ್ಗದ ಕುಟುಂಬದಲ್ಲಿ</span>1951 <span lang="KN">ಮೇ</span> 8<span lang="KN">ರಂದು ಜನಿಸಿದರು</span>. <span lang="KN">ಸತ್ಯದ ಪರವಾಗಿ ಹೋರಾಟ ಅವರಿಗೆ ವಿದ್ಯಾರ್ಥಿ
ದೆಸೆಯಿಂದಲೇ ಬಂದ ಗುಣ</span>. <span lang="KN">ಕಾಲೇಜಿನಲ್ಲಿದ್ದಾಧಿಗಲೇ ಸಿಪಿಎಂ ವಿದ್ಯಾರ್ಥಿ
ನಾಯಕರಾಗಿದ್ದರು</span>. <span lang="KN">ಇದರಿಂದಾಗಿ ಚೆನ್ನೈನಲ್ಲಿಲೋಯೋಲಾ ಕಾಲೇಜ್</span><span lang="KN">ನಲ್ಲಿ ಸಾಕಷ್ಟು ತೊಂದರೆ ಎದುರಿಸಬೇಕಾಯಿತು</span>. <span lang="KN">ವಿದ್ಯಾರ್ಥಿಗಳ ಹೋರಾಟದ
ನಾಯಕತ್ವ ವಹಿಸಿಕೊಂಡಿದ್ದಕ್ಕಾಗಿ ಲೋಯೋಲಾ ಕಾಲೇಜ್</span> <span lang="KN">ಆಡಳಿತ ಮಂಡಳಿ ಇವರನ್ನು
ಕಾಲೇಜಿನಿಂದ ಹೊರ ಹಾಕಿತು</span>. <span lang="KN">ನಂತರ ಅವರು ಕ್ರಿಶ್ಚಿಯನ್</span> <span lang="KN">ಕಾಲೇಜ್</span><span lang="KN">ನಲ್ಲಿಅಧ್ಯಯನ ಮುಂದುವರಿಸಬೇಕಾಯಿತು</span>. <o:p></o:p></span></p>
<p class="MsoNormal" style="line-height: normal; margin-bottom: .0001pt; margin-bottom: 0in; mso-layout-grid-align: none; text-autospace: none;"><span lang="KN" style="font-family: Tunga, "sans-serif"; font-size: 10pt;">ವಿದ್ಯಾರ್ಥಿ ನಾಯಕನಾಗಿ</span><span style="font-family: Tunga, "sans-serif"; font-size: 10pt;">, <span lang="KN">ಟ್ರೇಡ್</span>
<span lang="KN">ಯೂನಿಯನ್</span> <span lang="KN">ನಾಯಕನಾಗಿ ಅವರು ಇಡೀ ತಮಿಳುನಾಡನ್ನು ಲಾರಿ
ಮತ್ತು ಬಸ್</span><span lang="KN">ಗಳ ಮೂಲಕವೇ ಸುತ್ತಿದ್ದಾರೆ</span>; <span lang="KN">ಜನರನ್ನು
ಸಂಘಟಿಸಿದ್ದಾರೆ</span>. <span lang="KN">ಈ ಸಂದರ್ಭದಲ್ಲಿದಲಿತರು</span>, <span lang="KN">ಕಾರ್ಮಿಕರು</span>,
<span lang="KN">ಕೃಷಿ ಕಾರ್ಮಿಕರು</span>, <span lang="KN">ಟ್ರೇಡ್</span> <span lang="KN">ಯೂನಿಯನ್</span> <span lang="KN">ನಾಯಕರನ್ನು ಭೇಟಿ ಮಾಡುವ ಅವಕಾಶ ಅವರಿಗೆ ಸಿಕ್ಕಿದೆ</span>.
<span lang="KN">ಈ ವ್ಯವಸ್ಥೆಯು ಶಕ್ತಿಹೀನರನ್ನು ಹೇಗೆ ಶೋಷಣೆ ಮಾಡುತ್ತದೆ ಎಂಬ ಸ್ಪಷ್ಟವಾದ ಪರಿಕಲ್ಪನೆ</span>,
<span lang="KN">ಅನುಭವ ಅವರಿಗಾಗಿದೆ</span>.</span></p>
<p class="MsoNormal" style="line-height: normal; margin-bottom: .0001pt; margin-bottom: 0in; mso-layout-grid-align: none; text-autospace: none;"><span lang="KN" style="font-family: Tunga, "sans-serif"; font-size: 10pt;">ಚಂದ್ರು ಅವರು ವಕೀಲಿ ವೃತ್ತಿಗೆ
ಬರಲು ಅಣ್ಣಾ ವಿವಿ ವಿದ್ಯಾರ್ಥಿಯೊಬ್ಬ ಪೊಲೀಸರ ಲಾಠಿ ಏಟಿಗೆ ಮೃತಪಟ್ಟ ಘಟನೆ ಕಾರಣವಾಯಿತು</span><span style="font-family: Tunga, "sans-serif"; font-size: 10pt;">. <span lang="KN">ಈ ಘಟನೆಯ
ತನಿಖೆಗೆ ಎಂ ಕರುಣಾನಿಧಿ ಅವರು ಹೆಚ್ಚುವರಿ ನ್ಯಾಯಧಿಮೂರ್ತಿ ನೇತೃತ್ವದಲ್ಲಿಆಯೋಗ ನೇಮಕ ಮಾಡಿದ್ದರು</span>.
<span lang="KN">ಈ ಆಯೋಗದ ಎದುರು ಚಂದ್ರು ಅವರು ವಿದ್ಯಾರ್ಥಿಗಳ ಪರವಾಗಿ ಹಾಜರಾಗಿಧಿದ್ದರು</span>.
<span lang="KN">ಅವರ ವಾದ ಮಂಡನೆ ಮತ್ತು ಜಾಣತನವನ್ನು ಗುರುತಿಸಿದ ನ್ಯಾಯಧಿಮೂರ್ತಿ</span>, <span lang="KN">ಕಾನೂನು ವೃತ್ತಿಗೆ ಬರುವಂತೆ ಸೂಚಿಸಿದರು</span>. <span lang="KN">ಪರಿಣಾಮ ಚಂದ್ರು</span>
1973<span lang="KN">ರಲ್ಲಿಕಾನೂನು ಕಾಲೇಜಿಗೆ ದಾಖಲಾದರು</span>. <span lang="KN">ಆದರೆ</span>,
<span lang="KN">ಹಾಸ್ಟೆಲ್</span> <span lang="KN">ಪ್ರವೇಶಧಿವನ್ನು ನಿರಾಕರಿಸಲಾಯಿತು</span>.
<span lang="KN">ವಿದ್ಯಾರ್ಥಿ ನಾಯಕರಾಗಿ ಅವರು ಕೈಗೊಂಡ ಹೋರಾಟಗಳೇ ಇದಕ್ಕೆ ಕಾರಣವಾಗಿತ್ತು</span>.
<span lang="KN">ಆದರೆ</span>, <span lang="KN">ಪಟ್ಟು ಸಡಿಲಿಸದ ಅವರು ಮೂರು ದಿನ ಉಪವಾಸ ಸತ್ಯಾಗ್ರಹ
ಕೈಗೊಂಡರು</span>. <span lang="KN">ಅಂತಿಮವಾಗಿ ಅಧಿಕಾರಿಗಳು ಹಾಸ್ಟೆಲ್</span> <span lang="KN">ಪ್ರವೇಶ ನೀಡಬೇಕಾಯಿತು</span></span></p>
<p class="MsoNormal" style="line-height: normal; margin-bottom: .0001pt; margin-bottom: 0in; mso-layout-grid-align: none; text-autospace: none;"><span style="font-family: "Tunga","sans-serif"; font-size: 10.0pt;"><o:p> </o:p></span><span lang="KN" style="font-family: Tunga, "sans-serif"; font-size: 10pt;">ಕಾಲೇಜಿನಲ್ಲಿದ್ದಾಗಲೇ ಬಡವರಿಗೆ
ಕಾನೂನು ಸೇವೆ ಒದಗಿಸಲಾರಂಭಿಸಿದರು</span><span style="font-family: Tunga, "sans-serif"; font-size: 10pt;">. <span lang="KN">ಬಡವರು</span>, <span lang="KN">ಶೋಷಿತರಿಗೆ ಕಾನೂನು
ಸೇವೆಯನ್ನು ಒದಗಿಸುತ್ತಿದ್ದ ರಾವ್</span> <span lang="KN">ಆಂಡ್</span> <span lang="KN">ರೆಡ್ಡಿ
ಸಂಸ್ಥೆಯನ್ನು ಸೇರಿದರು</span>. 8 <span lang="KN">ವರ್ಷ ಇಲ್ಲಿಕೆಲಸ ಮಾಡಿ</span>, <span lang="KN">ಸ್ವತಂತ್ರವಾಗಿ ವಕೀಲಿಕೆಯನ್ನು ಆರಂಭಿಸಿದರು</span>. <span lang="KN">ತಮಿಳುನಾಡು ಬಾರ್</span>
<span lang="KN">ಕೌನ್ಸಿಲ್</span><span lang="KN">ಗೆ ಆಯ್ಕೆಯಾದ ಅತ್ಯಂತ ತರುಣ ನ್ಯಾಯವಾದಿ ಎನಿಸಿಕೊಂಡರು</span>.
<span lang="KN">ಇದರ ಮಧ್ಯೆಯೇ</span>, <span lang="KN">ಶ್ರೀಲಂಕಾ ವಿಷಯದಲ್ಲಿ ರಾಜೀವ್</span>
<span lang="KN">ಗಾಂಧಿ ಆಡಳಿತ ನಡೆದುಕೊಂಡ ರೀತಿಗೆ ಸಂಬಂಧಿಸಿದಂತೆ ಭಿನ್ನಾಭಿಪ್ರಾಯದಿಂದಾಗಿ ಸಿಪಿಎಂ
ಪಕ್ಷ ವನ್ನೂ ತೊರೆದರು</span>.</span></p>
<p class="MsoNormal" style="line-height: normal; margin-bottom: .0001pt; margin-bottom: 0in; mso-layout-grid-align: none; text-autospace: none;"><span lang="KN" style="font-family: "Tunga","sans-serif"; font-size: 10.0pt;">ಮದ್ರಾಸ್</span><span style="font-family: "Tunga","sans-serif"; font-size: 10.0pt;"> <span lang="KN">ಹೈಕೋರ್ಟ್</span>
<span lang="KN">ನ್ಯಾಯಮೂರ್ತಿಯಾಗಿ ಕ್ಷೀಪ್ರವಾಗಿ ನ್ಯಾಯದಾನ ಮಾಡಿದ್ದೂ ಮಾತ್ರವಲ್ಲದೇ ಹಲವು ಐತಿಹಾಸಿಕ
ತೀರ್ಪುಗಳನ್ನು ನೀಡಿದ್ದಾರೆ</span>. <span lang="KN">ಆ ಪೈಕಿ ಮಹಿಳೆಯರಿಗೆ ಅರ್ಚಕರಾಗಲು ಅವಕಾಶ
ಕಲ್ಪಿಸುವುದು</span>, <span lang="KN">ಮಧ್ಯಾಹ್ನದ ಬಿಸಿಯೂಟ ಯೋಜನೆಯಲ್ಲಿಕೆಲಸ ಮಾಡುತ್ತಿದ್ದ</span>
25 <span lang="KN">ಸಾವಿರ ಬಡ ಹೆಣ್ಣುಮಕ್ಕಳಿಗೆ ಉದ್ಯೋಗ ಭದ್ರತೆ ಒದಗಿಸುವ ತೀರ್ಪು ಸೇರಿದಂತೆ
ಅನೇಕ ಜನಪರ ತೀರ್ಪುಗಳನ್ನು ನೀಡಿದ್ದಾರೆ</span>. <span lang="KN">ನ್ಯಾಯವಾದಿಯಾಗಿದ್ದಾಗ ಪಾಲಿಸಿಕೊಂಡಿದ್ದ
ಶೋಷಿತರಿಗೆ ಧ್ವನಿಯಾಗುವ ಕೆಲಸವನ್ನು ನ್ಯಾಯಾಧೀಶಧಿರಾದಾಗಲೂ ಮುಂದುವರಿಸಿಕೊಂಡು ಬಂದು</span>,
2013<span lang="KN">ರಲ್ಲಿನಿವೃತ್ತರಾದರು</span>. <o:p></o:p></span></p>
<p class="MsoNormal" style="line-height: normal; margin-bottom: .0001pt; margin-bottom: 0in; mso-layout-grid-align: none; text-autospace: none;"><span lang="KN" style="font-family: Tunga, "sans-serif"; font-size: 10pt;">ಅವರು ಕೇವಲ ಒಬ್ಬ ನ್ಯಾಯವಾದಿ</span><span style="font-family: Tunga, "sans-serif"; font-size: 10pt;">, <span lang="KN">ಜಸ್ಟಿಸ್</span>
<span lang="KN">ಮಾತ್ರವಲ್ಲದೆ ಬರಹಗಾರರೂ ಹೌದು</span>. <span lang="KN">ನಿವೃತ್ತಿಯಾದ ಮೇಲೂ ಹಲವು
ಹೋರಾಟಗಳಲ್ಲಿ ತೊಡಗಿಸಿಕೊಂಡಿದ್ದಾರೆ</span>. <span lang="KN">ಪತ್ರಿಕೆಗಳಿಗೆ ಅಂಕಣಗಳನ್ನು ಬರೆಯುತ್ತಾರೆ</span>;
<span lang="KN">ಪುಸ್ತಕಗಳನ್ನು ಬರೆದಿದ್ದಾರೆ</span>. Listen to My Case!: When Women
Approach the Courts of Tamil Nadu<span lang="KN">ಅವರ ಇತ್ತೀಚಿನ ಕೃತಿ</span>. <span lang="KN">ಈ ಪುಸ್ತಕದಲ್ಲಿ ಚಂದ್ರು ಅವರು</span>, <span lang="KN">ನ್ಯಾಯಕ್ಕಾಗಿ ಹೋರಾಡಿದ</span>
20 <span lang="KN">ಮಹಿಳೆಯರ ಬಗ್ಗೆ ಬರೆದಿದ್ದಾರೆ</span>.
<span lang="KN">ಜಸ್ಟೀಸ್</span> <span lang="KN">ಕೆ</span>.<span lang="KN">ಚಂದ್ರು ಅವರಂಥ
ಬದ್ಧತೆಯುಳ್ಳ ನ್ಯಾಯವಾದಗಳು</span>, <span lang="KN">ನ್ಯಾಯಮೂರ್ತಿಗಳ ಸಂಖ್ಯೆ ಹೆಚ್ಚಾದರೆ ಬಹುಶಃ
ದೀನ ದಲಿತರಿಗೆ</span>, <span lang="KN">ಬಡವರಿಗೆ</span>, <span lang="KN">ಕಾನೂನು ಎಂಬುದು ಗಗನಕುಸುಮವಾಗಲಾರದು</span>.</span></p><div class="separator" style="clear: both; text-align: center;"><a href="https://blogger.googleusercontent.com/img/b/R29vZ2xl/AVvXsEh3xEyndDbYMYm_i1_geBKC5AQJanm0qY24kGxDoNidqCesnPP6RUJfhhfvmQla0MPCShVXuPSS9ikFDpNncie70uI7VG2RD0ig1GAIpd_jAstDM2Qzpp-A6mpplErZzz0l9qJ_XyTUYJA/s2048/hero.jpg" imageanchor="1" style="margin-left: 1em; margin-right: 1em;"><img border="0" data-original-height="2048" data-original-width="1063" height="400" src="https://blogger.googleusercontent.com/img/b/R29vZ2xl/AVvXsEh3xEyndDbYMYm_i1_geBKC5AQJanm0qY24kGxDoNidqCesnPP6RUJfhhfvmQla0MPCShVXuPSS9ikFDpNncie70uI7VG2RD0ig1GAIpd_jAstDM2Qzpp-A6mpplErZzz0l9qJ_XyTUYJA/w208-h400/hero.jpg" width="208" /></a></div><br /><p class="MsoNormal" style="line-height: normal; margin-bottom: .0001pt; margin-bottom: 0in; mso-layout-grid-align: none; text-autospace: none;"><br /></p>ಮಲ್ಲಿಕಾಜು೯ನ ತಿಪ್ಪಾರhttp://www.blogger.com/profile/03103441547302200527noreply@blogger.com3tag:blogger.com,1999:blog-6897854439810696140.post-6345275739792653372021-10-25T23:39:00.002+05:302021-10-25T23:39:58.141+05:30NCB Mumbai Zonal Director Sameer Wankhede: ಡ್ರಗ್ಸ್ ವಿರುದ್ಧ ಸಮೀರ್ ವಾಂಖೆಡೆ ಸಮರ<p><i style="background-color: #f4cccc;"> ಮುಂಬಯಿಯಲ್ಲಿ ಐಆರ್ಎಸ್ ಅಧಿಕಾರಿ ವಾಂಖೆಡೆ ಅವರು ಡ್ರಗ್ಸ್ ಜಾಲದ ವಿರುದ್ಧ ಸಮರವನ್ನೇ ಸಾರಿದ್ದಾರೆ. ಮಾದಕ ದ್ರವ್ಯ ಹಾಗೂ ಬಾಲಿವುಡ್ ನಡುವಿನ ನಂಟನ್ನು ಭೇದಿಸುವಲ್ಲಿ ನಿರತರಾಗಿದ್ದಾರೆ.</i></p><p><b>- ಮಲ್ಲಿಕಾರ್ಜುನ ತಿಪ್ಪಾರ</b><br />ಸಮೀರ್ ವಾಂಖೆಡೆ. ಈ ಹೆಸರನ್ನು ಕೇಳಿದರೆ ಬಾಲಿವುಡ್ ಸೆಲೆಬ್ರಿಟಿಗಳು ಬೆಚ್ಚಿ ಬೀಳುತ್ತಿದ್ದಾರೆ. ಮಾದಕ ದ್ರವ್ಯ ಸೇವೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಮಾತ್ರವಲ್ಲಘಿ, ಈ ಹಿಂದೆ ಅವರು ಕಸ್ಟಮ್ಸ್ ಸೇವೆಯಲ್ಲಿದ್ದಾಗಲೂ ಸೆಲೆಬ್ರಿಟಿಗಳು ಥರಗುಟ್ಟಿದ್ದರು! ಅವರು ಮುಂಬಯಿ ಛತ್ರಪತಿ ಶಿವಾಜಿ ವಿಮಾನ ನಿಲ್ದಾಣದ ಕಸ್ಟಮ್ಸ್ನಲ್ಲಿದ್ದರು. ಆಗಲೂ ಹೊರ ದೇಶಗಳಿಂದ ತರುತ್ತಿದ್ದ ಬೆಲೆ ಬಾಳುವ ವಸ್ತುಗಳಿಗೆ ತೆರಿಗೆ ಪಾವತಿಸದೇ ಬಿಟ್ಟುಕೊಡುತ್ತಿರಲಿಲ್ಲ ಈ ಖಡಕ್ ಅಧಿಕಾರಿ. ಹಾಗಾಗಿ, ಬಾಲಿವುಡ್ ಹಾಗೂ ವಾಂಖೆಡೆ ಅವರ ಮಧ್ಯೆ ಮೊದಲಿನಿಂದಲೂ ಒಂಥರಾ ಲವ್ ಆ್ಯಂಡ್ ಹೇಟ್ ಸಂಬಂಧ!</p><p>ಒಂದು ವರ್ಷದಿಂದ ವಾಂಖೆಡೆ ಅವರು, ಗಣ್ಯ ವಲಯದಲ್ಲಿ ಹೆಪ್ಪುಗಟ್ಟಿರುವ ಮಾದಕ ಸೇವನೆ, ಮಾರಾಟದ ಜಾಲವನ್ನು ಭೇದಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. 2020ರ ಜೂನ್ ತಿಂಗಳಲ್ಲಿ ಬಾಲಿವುಡ್ನ ಪ್ರತಿಭಾನ್ವಿತ ನಟ ಸುಶಾಂತ್ ಸಿಂಗ್ ರಜಪೂತ ಆತ್ಮಹತ್ಯೆ ಪ್ರಕರಣ ತನಿಖೆಯು ವಿಸ್ತಾರಗೊಳ್ಳುತ್ತಿದ್ದಂತೆ ಡ್ರಗ್ಸ್ನ ಭಯಾನಕತೆಗಳು ಅನಾವರಣಗೊಂಡವು. ಅಲ್ಲಿಂದ ಶುರುವಾದ ವಾಂಖೆಡೆ ಅವರ ಡ್ರಗ್ಸ್ ವಿರುದ್ಧದ ಕಾರ್ಯಾಚರಣೆಯು ಸದ್ಯ ‘ಸೂಪರ್ ಸ್ಟಾರ್’ ಶಾರುಕ್ ಖಾನ್ ಪುತ್ರ ಆರ್ಯನ್ ಖಾನ್ ಬಂಧನವರೆಗೂ ಸಾಗಿದೆ.</p><p>ಸುಶಾಂತ್ ಸಿಂಗ್ ಆತ್ಮಹತ್ಯೆ ಪ್ರಕರಣದ ತನಿಖೆ ವೇಳೆ ಮಾದಕ ದ್ರವ್ಯ ಬಳಕೆಯ ಸಂಗತಿಗಳು ಬಯಲಾಗಿದ್ದವು. ಆಗ ಸುಶಾಂತ್ನ ಗೆಳತಿ ರೇಹಾ ಚಕ್ರವರ್ತಿ ಹಾಗೂ ಆಕೆಯ ಸಹೋದರನನ್ನು ಬಂಧಿಸಲಾಗಿತ್ತು. ಜೊತೆಗೆ ನಟಿಯರಾದ ದೀಪಿಕಾ ಪಡುಕೋಣೆ, ಸಾರಾ ಅಲಿ ಖಾನ್, ರಕುಲ್ಪ್ರೀತ್ ಸಿಂಗ್, ಭಾರ್ತಿ ಸಿಂಗ್ ಇತ್ಯಾದಿ ನಟಿಯರನ್ನು ಡ್ರಗ್ಸ್ ಸಂಬಂಧ ವಿಚಾರಣೆಗೊಳಪಡಿಸಲಾಗಿತ್ತು. ಇದೀಗ ಆರ್ಯನ್ ಖಾನ್ ಪ್ರಕರಣವು ಬಾಲಿವುಡ್ನ ಇತರೆ ಸೆಲೆಬ್ರಿಟಿಗಳ ಕೊರಳಿಗೆ ಸುತ್ತಿಕೊಳ್ಳುತ್ತಿದೆ. ಈಗಾಗಲೇ ನಟಿ ಅನನ್ಯಾ ಪಾಂಡೆ ಎರಡು ಬಾರಿ ವಿಚಾರಣೆ ಎದುರಿಸಿದ್ದಾಳೆ. ಈ ಎಲ್ಲದರ ಹಿಂದೆ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ(ಎನ್ಸಿಬಿ) ಮುಂಬಯಿ ರೆನಲ್ ಡೈರೆಕ್ಟರ್ ಸಮೀರ್ ವಾಂಖೆಡೆ ಕರ್ತವ್ಯ ಎದ್ದು ಕಾಣುತ್ತಿದೆ. ಕಾನೂನು ಪಾಲನೆಯೊಂದನ್ನೇ ಕೇಂದ್ರವಾಗಿಸಿಕೊಂಡು ಕಾರ್ಯನಿರ್ವಹಿಸುತ್ತಿರುವ ಅವರಿಗೆ, ಸೆಲೆಬ್ರಿಟಿ ಅಥವಾ ಸಾಮಾನ್ಯರು ಎಂಬ ತಾರತಮ್ಯವಿಲ್ಲಘಿ. ಯಾರು ತಪ್ಪು ಮಾಡುತ್ತಾರೋ ಅವರನ್ನು ಹೆಡೆಮುರಿ ಕಟ್ಟುವ ಕೆಲಸವನ್ನು ಮಾಡುತ್ತಿದ್ದಾರೆ. </p><div class="separator" style="clear: both; text-align: center;"><a href="https://blogger.googleusercontent.com/img/b/R29vZ2xl/AVvXsEg14CaDH_HdTepAMbhl0PnZ-SgbzViA93qA3Bas_vbKnbwm592A3ihtr1Q6Z_MObnMaGTQMgl2Pm52f9OixRBmQ7wZasO_y5dlK0z9KxH2CCJIwMorBHLV2tpw0ujMOM88PqZlzD21MG6U/s640/Wankhede.jpg" imageanchor="1" style="clear: left; float: left; margin-bottom: 1em; margin-right: 1em;"><img border="0" data-original-height="360" data-original-width="640" height="180" src="https://blogger.googleusercontent.com/img/b/R29vZ2xl/AVvXsEg14CaDH_HdTepAMbhl0PnZ-SgbzViA93qA3Bas_vbKnbwm592A3ihtr1Q6Z_MObnMaGTQMgl2Pm52f9OixRBmQ7wZasO_y5dlK0z9KxH2CCJIwMorBHLV2tpw0ujMOM88PqZlzD21MG6U/s320/Wankhede.jpg" width="320" /></a></div><p>ಇಷ್ಟಾಗಿಯೂ ಅವರು ಆರೋಪಗಳಿಂದ ಹೊರತಾಗಿಲ್ಲ. ಇತ್ತೀಚಿನ ದಿನಗಳಲ್ಲಿ ಸುದ್ದಿಯಲ್ಲಿರುವುದಕ್ಕಾಗಿ ವಾಂಖೆಡೆ ಸೆಲೆಬ್ರಿಟಿಗಳ ಬೆನ್ನು ಹಿಂದೆ ಬಿದ್ದಿದ್ದಾರೆ ಎಂಬ ಆರೋಪ ಸಾಮಾನ್ಯವಾಗಿದೆ. ಜೊತೆಗೆ ಎನ್ಸಿಪಿಯ ನಾಯಕ ನವಾಬ್ ಮಲಿಕ್ ಅವರಂತೂ, ಬಾಲಿವುಡ್ ಸೆಲೆಬ್ರಿಟಿಗಳಿಂದ ವಾಂಖೆಡೆ ಅವರು ಸುಲಿಗೆಗಿಳಿದಿದ್ದಾರೆ ಎಂಬ ಗಂಭೀರ ಆರೋಪ ಮಾಡಿದ್ದುಘಿ, ಅವರನ್ನು ಜೈಲಿಗೆ ಕಳುಹಿಸುವವರೆಗೂ ವಿರಮಿಸುವುದಿಲ್ಲ ಎಂದಿದ್ದಾರೆ. ಜೊತೆಗೆ, ದುಬೈ ಮತ್ತು ಮಾಲ್ಡೀವ್ಸ್ಗೆ ವಾಂಖೆಡೆ ತೆರಳಿದ್ದ ೆಟೊಗಳನ್ನು ಬಿಡುಗಡೆ ಮಾಡಿದ್ದಾರೆ. ಇದಕ್ಕೆಲ್ಲಘಿ, ಸಮೀರ್ ಪ್ರತ್ಯುತ್ತರ ಕೊಟ್ಟಿದ್ದಾರೆ. ಜೊತೆಗೆ, ಆರ್ಯನ್ ಖಾನ್ ಬಂಧನದ ವೇಳೆಯ ಹಾಜರಿದ್ದ ಕೆಲವು ಖಾಸಗಿ ವ್ಯಕ್ತಿಗಳಿಂದಾಗಿ ವಾಂಖೆಡೆ ಅವರ ಒಟ್ಟಾರೆ ಉದ್ದೇಶದ ಮೇಲೂ ಶಂಕೆ ಮೂಡುತ್ತಿರುವುದು ಸುಳ್ಳಲ್ಲಘಿ. ಇದಕ್ಕೆಲ್ಲ ಅವರು ಸಮರ್ಥನೆ ನೀಡಿದ್ದಾರೆಂಬುದು ಬೇರೆ ಮಾತು. </p><p>ವಿಶೇಷ ಏನೆಂದರೆ, ಸಮೀರ್ ಪತ್ನಿ ಕ್ರಾಂತಿ ರೇಡ್ಕರ್ ಕೂಡಾ ಒಬ್ಬ ನಟಿ. ಮರಾಠಿ ಚಿತ್ರರಂಗದಲ್ಲಿ ಅವರಿಗೆ ದೊಡ್ಡ ಹೆಸರಿದೆ. ಅಜಯ್ ದೇವಗನ್ ನಟನೆಯ ‘ಗಂಗಾಜಲ್’ ಚಿತ್ರದಲ್ಲೂ ಕ್ರಾಂತಿ ನಟಿಸಿದ್ದಾರೆ. ಹಾಗಾಗಿ, ಸಮೀರ್ ಅವರಿಗೆ ಚಿತ್ರರಂಗ ಹೊಸದಲ್ಲ. ಅಲ್ಲಿ ನಡೆಯುವ ಬೆಳವಣಿಗೆಗಳು, ಹೈಕ್ಲಾಸ್ ಸೊಸೈಟಿಯಲ್ಲಾಗುವ ಬೆಳವಣಿಗೆಗಳ ಬಗ್ಗೆ ಸಂಪೂರ್ಣ ಅರಿವು ಅವರಿಗಿದೆ.</p><p>ಎನ್ಸಿಬಿಯ ಮುಂಬಯಿ ರೆನಲ್ ಡೈರೆಕ್ಟರ್ ಆಗಿ ಕಾರ್ಯನಿರ್ವಹಿಸುವ ಮೊದಲು ಮಹಾರಾಷ್ಟ್ರ ಸರ್ವೀಸ್ ಟ್ಯಾಕ್ಸ್ ವಿಭಾಗದಲ್ಲಿದ್ದರು. ಆಗ ಅವರು ತೆರಿಗೆ ವಂಚಿಸುತ್ತಿದ್ದ ಸುಮಾರು 2,500 ಮಂದಿ ವಿರುದ್ಧ ಕ್ರಮ ಕೈಗೊಂಡಿದ್ದರು. ಈ ಪೈಕಿ 200 ಸೆಲೆಬ್ರಿಟಿಗಳಿದ್ದರು. ಎರಡು ವರ್ಷದಲ್ಲಿ ಮುಂಬಯಿನಲ್ಲೇ ಒಟ್ಟು 87 ಕೋಟಿ ರೂಪಾಯಿಯನ್ನು ಖಜಾನೆಗೆ ಹರಿದು ಬರುವಂತೆ ಮಾಡಿದ್ದರು. 2011ರಲ್ಲಿ ಭಾರತೀಯ ಕ್ರಿಕೆಟ್ ತಂಡವು ವಿಶ್ವಕಪ್ ಗೆದ್ದಿತು. ಆಗ ತಂಡಕ್ಕೆ ನೀಡಲಾಗಿದ್ದ ಟ್ರೋಫಿಯಲ್ಲಿ ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಚಿನ್ನ ಇದೆ. ಹಾಗಾಗಿ, ತೆರಿಗೆ ಪಾವತಿಸಿಯೇ ಪಡೆದುಕೊಳ್ಳಬೇಕೆಂದು ಇವರು ಪಟ್ಟು ಹಿಡಿದಿದ್ದರು. ಕಸ್ಟಮ್ಸ್ ತೆರಿಗೆ ಕೊಟ್ಟ ಮೇಲೆಯೇ ಟ್ರೋಫಿಯನ್ನು ಕ್ಲಿಯರ್ ಮಾಡಿದ್ದರು. ಅವರ ಈ ನಡೆಯೂ ಭಾರೀ ಚರ್ಚೆಗೆ ಕಾರಣವಾಗಿತ್ತುಘಿ.</p><p>2013ರಲ್ಲಿ ವಿದೇಶಿ ಕರೆನ್ಸಿಯನ್ನು ಹೊಂದಿದ್ದ ಗಾಯಕ ಮಿಕಾ ಸಿಂಗ್ ಮುಂಬಯಿ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದಿದ್ದರು. ಅದೇ ರೀತಿ, ಅನುರಾಗ್ ಕಶ್ಯಪ್, ವಿವೇಕ್ ಒಬೇರಾಯ್ ಮತ್ತು ರಾಮಗೋಪಾಲ್ ವರ್ಮಾ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ವಾಂಖೆಡೆ ಅವರ ತನಿಖಾ ಕ್ಷಕಿರಣಕ್ಕೆ ಒಳಗಾಗಿದ್ದಾರೆ. ಕಳೆದ ಎರಡು ವರ್ಷದಲ್ಲಿ ಮುಂಬಯಿಯೊಂದರಲ್ಲೇ ವಾಂಖೆಡೆ ಹಾಗೂ ಅವರ ತಂಡವು 17 ಸಾವಿರ ಕೋಟಿ ರೂ. ವೌಲ್ಯದ ಮಾದಕ ದ್ರವ್ಯವನ್ನು ವಶಪಡಿಸಿಕೊಂಡಿದೆ! ಮಾದಕ ದ್ರವ್ಯ ಜಾಲ ಭೇದಿಸುವ ಅವರ ಈ ಕಾರ್ಯದಲ್ಲಿ ಅನೇಕ ಸವಾಲುಗಳನ್ನು ಎದುರಿಸಿದ್ದಾರೆ. ದೈಹಿಕ ಹಲ್ಲೆಗೂ ಒಳಗಾಗಿದ್ದಾರೆ ವಾಂಖೆಡೆ. 2020 ನವೆಂಬರ್ 22ರಂದು 60 ಮಂದಿ ಇದ್ದ ಡ್ರಗ್ ಪೆಡ್ಲರ್ಗಳ ಗುಂಪೊಂದು ವಾಂಖೆಡೆ ಹಾಗೂ ಎನ್ಸಿಬಿಯ ಇತರ ಐದು ಅಧಿಕಾರಿಗಳ ಮೇಲೆ ದಾಳಿ ನಡೆಸಿತ್ತು. ಈ ದಾಳಿ ವೇಳೆ ವಾಂಖೆಡೆ ಅವರಿಗೆ ಸಣ್ಣ ಪುಟ್ಟ ಗಾಯಳಾದವು. ಆದರೆ, ತಂಡದ ಇತರ ಸದಸ್ಯರು ತೀವ್ರವಾಗಿ ಗಾಯಗೊಂಡರು. ಅವರನ್ನು ಬೆದರಿಸುವ ಹಲವು ಘಟನೆಗಳು ನಡೆಯುತ್ತಲೇ ಇವೆ. ಆದರೆ, ವಾಂಖೆಡೆ ಅದಾವುದಕ್ಕೂ ತಲೆಕೆಡಿಸಿಕೊಳ್ಳದೇ ಬಾಲಿವುಡ್ ಹಾಗೂ ಮಾದಕ ದ್ರವ್ಯ ಜಾಲ ನಡುವಿನ ನಂಟನ್ನು ಭೇದಿಸುವ ಕೆಲಸವನ್ನು ಮುಂದುವರಿಸಿದ್ದಾರೆ. </p><p>2008ರ ಬ್ಯಾಚಿನ ಐಆರ್ಎಸ್ ಅಧಿಕಾರಿಯಾಗಿರುವ ಸಮೀರ್ ಅವರ ಮೊದಲಿಗೆ ಮುಂಬಯಿನ ಛತ್ರಪತಿ ಶಿವಾಜಿ ಅಂತಾರಾಷ್ಟ್ರೀಯ ವಿಮಾನದ ನಿಲ್ದಾಣದಲ್ಲಿ ಡೆಪ್ಯುಟಿ ಕಸ್ಟಮ್ಸ್ ಕಮಿಷನರ್ ಆಗಿದ್ದರು. ಆ ಬಳಿಕ ಅವರನ್ನು ದಿಲ್ಲಿ ಹಾಗೂ ಆಂಧ್ರ ಪ್ರದೇಶಕ್ಕೆ ವರ್ಗಾವಣೆ ಮಾಡಲಾಯಿತು. ಅಲ್ಲಿಂದ ಅವರು ಡೆಪ್ಯುಟಿ ಕಮಿಷನರ್ ಆ್ ಏರ್ ಇಂಟೆಲಿಜೆನ್ಸ್ ಯುನಿಟ್(ಎಐಯು), ನ್ಯಾಷನಲ್ ಇನ್ವೆಸ್ಟಿಗೇಷನ್ ಏಜೆನ್ಸಿ(ಎನ್ಐಎ) ಹೆಚ್ಚುವರಿ ಎಸ್ಪಿಯಾಗಿಯೂ ಕೆಲಸ ಮಾಡಿದ್ದಾರೆ. ಇದೀಗ ಎನ್ಸಿಬಿ ಮುಂಬಯಿ ರೆನಲ್ ನಿರ್ದೇಶಕರಾಗಿ ದಕ್ಷವಾಗಿ ಕೆಲಸ ಮಾಡುತ್ತಿದ್ದಾರೆ. </p><p>ಮೂಲತಃ ಮುಂಬೈನವರೇ ಆಗಿರುವ ಸಮೀರ್ ಅವರ ತಂದೆ ಪೊಲೀಸ್ ಅಧಿಕಾರಿಯಾಗಿದ್ದರು. ಸಮೀರ್-ಕ್ರಾಂತಿ ರೇಡ್ಕರ್ ದಂಪತಿಗೆ ಅವಳಿ ಮಕ್ಕಳಿದ್ದಾರೆ. 42 ವರ್ಷದ ಸಮೀರ್ ವಾಂಖೆಡೆ ಅವರು ಸಾರ್ವಜನಿಕ ಅಧಿಕಾರಿಯಾಗಿ ತೋರಿದ ದಕ್ಷತೆಗಾಗಿ ಮಹಾರಾಷ್ಟ್ರದ ಜಮದಾರ್ ಬಾಪು ಲಕ್ಷ್ಮಣ್ ಲಮಖೆಡೆ ಅವಾರ್ಡ್ ಕೂಡ ಬಂದಿದೆ.</p><p>ಮುಂಬಯಿನಲ್ಲಿ ಮಾದಕ ದ್ರವ್ಯ ಮಾರಾಟ, ಸೇವನೆ ವಿರುದ್ಧ ಕಾಯಿದೆಯನ್ನು ಪರಿಣಾಮಕಾರಿಯಾಗಿ ಜಾರಿ ಮಾಡುತ್ತಿರುವ ವಾಂಖೆಡೆಗೆ ಸಾಜರ್ವನಿಕರಿಂದ ಮೆಚ್ಚುಗೆಯೂ ವ್ಯಕ್ತವಾಗಿದೆ. ಅವರು ತಮ್ಮ ಕೆಲಸದಲ್ಲಿ ತೋರುತ್ತಿರುವ ಧೈರ್ಯ, ಸ್ಥೈರ್ಯ, ಕರ್ತವ್ಯ ಪ್ರಜ್ಞೆಘಿ, ವೃತ್ತಿಪರತೆಯೇ ಅವರಿಗೆ ‘ಗಣ್ಯ’ ಸ್ಥಾನವು ಲಭ್ಯವಾಗುವಂತೆ ಮಾಡಿದೆ. ಆದರೆ, ನಮ್ಮ ಆಡಳಿತ ವ್ಯವಸ್ಥೆಯಲ್ಲಿ ಯಾವ ಅಧಿಕಾರಿಯಾಗಿ ಪ್ರಮಾಣಿಕವಾಗಿ, ನಿರ್ಭೀತಿಯಿಂದ ಕೆಲಸ ಮಾಡಲು ಆರಂಭಿಸುತ್ತಾನೋ ಆಗ ಆತನನ್ನು ಹಿಂದಕ್ಕೆ ಎಳೆಯುವ ಪ್ರಯತ್ನಗಳು ಬೇಕಾದಷ್ಟು ನಡೆಯುತ್ತವೆ. ಇದಕ್ಕೆ ವಾಂಖೆಡೆ ಕೂಡ ಅವರು ಹೊರತಾಗಿಲ್ಲಘಿ. ಈಗಾಗಲೇ ಅದು ಅವರ ಅನುಭವವಕ್ಕೂ ಬಂದಿದೆ. ಇದು ವ್ಯವಸ್ಥೆಯ ದೋಷ. ಇದೆಲ್ಲವನ್ನೂ ಮೀರಿ ಮುನ್ನಡೆಯುವ ಛಾತಿ ವಾಂಖೆಡೆ ಅವರಿಗಿದೆ ಎಂಬುದು ಈಗಾಗಲೇ ಹಲವು ಸಂದರ್ಭಗಳಲ್ಲಿ ಸಾಬೀತಾಗಿದೆ.</p><div class="separator" style="clear: both; text-align: center;"><a href="https://blogger.googleusercontent.com/img/b/R29vZ2xl/AVvXsEjxliq0jFK25ZhdqtZAELtKj-LBiWC-hfTx1hSn_Ka1sj-QV0vX6jL61qEFy8ZamFbRS3kb5hv9gUSG8w5i9q_ZWvsKR-Qx0PsuWbi35DLkzYyN0FHHRvMF19jPATqvSu7D6vgEmQXr51A/s2048/sameer.jpg" imageanchor="1" style="margin-left: 1em; margin-right: 1em;"><img border="0" data-original-height="2048" data-original-width="1115" height="640" src="https://blogger.googleusercontent.com/img/b/R29vZ2xl/AVvXsEjxliq0jFK25ZhdqtZAELtKj-LBiWC-hfTx1hSn_Ka1sj-QV0vX6jL61qEFy8ZamFbRS3kb5hv9gUSG8w5i9q_ZWvsKR-Qx0PsuWbi35DLkzYyN0FHHRvMF19jPATqvSu7D6vgEmQXr51A/w347-h640/sameer.jpg" width="347" /></a></div><br /><p style="text-align: center;"><span style="color: #fce5cd;">ಈ ಲೇಖನವು ವಿಜಯ ಕರ್ನಾಟಕದ, 2021ರ ಅಕ್ಟೋಬರ್ 24ರ ಸಂಚಿಕೆಯಲ್ಲಿ ಪ್ರಕಟವಾಗಿದೆ.</span></p>ಮಲ್ಲಿಕಾಜು೯ನ ತಿಪ್ಪಾರhttp://www.blogger.com/profile/03103441547302200527noreply@blogger.com0tag:blogger.com,1999:blog-6897854439810696140.post-25879804210416303682021-09-19T23:01:00.000+05:302021-09-19T23:01:03.138+05:30Captain Amarinder Singh: ಅಮರೀಂದರ್ ಸಿಂಗ್ 'ಜನರ ಮಹಾರಾಜ'<p><span style="background-color: #fce5cd;">ನವಜೋತ್ ಸಿಧು ಜೊತೆಗಿನ ಒಳಜಗಳದಲ್ಲಿ ಕೈಸೋತ ಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ರಾಜೀನಾಮೆ ನೀಡಿದ್ದಾರೆ.</span></p><p><br /></p><p><b>- ಮಲ್ಲಿಕಾರ್ಜುನ ತಿಪ್ಪಾರ</b><br />‘‘ಇನ್ನು ನಾನು ಅವಮಾನ ಸಹಿಸಲಾರೆ,’’ ಎನ್ನುತ್ತಲೇ ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಪಂಜಾಬ್ ಕಾಂಗ್ರೆಸ್ನ ನೂತನ ಅಧ್ಯಕ್ಷ , ಮಾಜಿ ಕ್ರಿಕೆಟಿಗ ನವಜೋತ್ ಸಿಂಗ್ ಸಿಧು ಹಾಗೂ ಅಮರೀಂದರ್ ಸಿಂಗ್ ನಡುವಿನ ಕಿತ್ತಾಟ ಒಂದು ಹಂತಕ್ಕೆ ತಲುಪಿದೆ. </p><p>ಅನುಮಾನವೇ ಬೇಡ; ಕ್ಯಾಪ್ಟನ್ ಅಮರೀಂದರ್ ಸಿಂಗ್ ಪಂಜಾಬ್ ಕಾಂಗ್ರೆಸ್ನ ದಿಗ್ಗಜ ಧುರೀಣ. ರಾಜ್ಯದಲ್ಲಿ ಕಾಂಗ್ರೆಸ್ನಿಂದ ಬೇರುಮಟ್ಟದಿಂದ ಸಂಘಟಿಸಿ, ಅದಕ್ಕೊಂದು ಸಾಂಸ್ಥಿಕ ರೂಪ ನೀಡಿ, ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಅವರ ಕೊಡುಗೆ ಅನನ್ಯ, ಅನುಪಮ. ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ಅವರು ಮುಖ್ಯಮಂತ್ರಿ ಆಯ್ಕೆಯ ಮೊದಲ ಆದ್ಯತೆಯಾಗುತ್ತಿದ್ದರು. ಪರಿಣಾಮ ಎರಡು ಬಾರಿ ಸಿಎಂ ಆಗಿದ್ದಾರೆ. ಪಂಜಾಬ್ ಕಾಂಗ್ರೆಸ್ ಮೇಲೆ ಬಿಗಿ ಹಿಡಿತ ಹೊಂದಿದ್ದ ‘ಕ್ಯಾಪ್ಟನ್’ ವಿರುದ್ಧವೇ ಶಾಸಕರು, ಕೆಲವು ನಾಯಕರು ಬಂಡೆದ್ದ ಪರಿಣಾಮ, ಕಳೆದ ಎರಡ್ಮೂರು ವರ್ಷದಲ್ಲಿ ಪಂಜಾಬ್ ಕಾಂಗ್ರೆಸ್ ಬೀದಿ ಜಗಳವನ್ನು ಇಡೀ ರಾಷ್ಟ್ರವೇ ನೋಡಿದೆ. ಹಾಗೆ ನೋಡಿದರೆ, 2017ರಲ್ಲಿ ಪ್ರಚಂಡ ಬಹುಮತದಿಂದ ಕಾಂಗ್ರೆಸ್ ಅಧಿಕಾರಕ್ಕೆ ಬಂತಲ್ಲ, ಆಗಲೇ ಈ ಬಂಡಾಯದ ಕಿಚ್ಚು ಶುರವಾಗಿದ್ದು! ಹೇಗೆಂದರೆ, ಬಿಜೆಪಿಯಿಂದ ವಲಸೆ ಬಂದು ಕಾಂಗ್ರೆಸ್ ಸೇರಿದ್ದ ಮಾಜಿ ಕ್ರಿಕೆಟಿಗ ‘ಸಿಕ್ಸರ್’ ಸಿಧು, ಉಪಮುಖ್ಯಮಂತ್ರಿಯ ಹುದ್ದೆಗೆ ಹಕ್ಕು ಚಲಾಯಿಸಿದ್ದರು. </p><div class="separator" style="clear: both; text-align: center;"><a href="https://blogger.googleusercontent.com/img/b/R29vZ2xl/AVvXsEiuNdIq7l_7-Excwye2-aUvwHdxtrypOTK0gmgFmuKcEZKoJ-mAAG5gCcuCwbHdMwmSaNmcj6YONlGv3rfUj3PobrPUx4lg7p2CRZsmdiPZi9QpuYGK2CT7fnQMmSe-JDU0NQo1T7H3hkA/s650/A+Singh1.jpg" imageanchor="1" style="clear: left; float: left; margin-bottom: 1em; margin-right: 1em;"><img border="0" data-original-height="433" data-original-width="650" height="213" src="https://blogger.googleusercontent.com/img/b/R29vZ2xl/AVvXsEiuNdIq7l_7-Excwye2-aUvwHdxtrypOTK0gmgFmuKcEZKoJ-mAAG5gCcuCwbHdMwmSaNmcj6YONlGv3rfUj3PobrPUx4lg7p2CRZsmdiPZi9QpuYGK2CT7fnQMmSe-JDU0NQo1T7H3hkA/s320/A+Singh1.jpg" width="320" /></a></div><p>ಆದರೆ, ಅಂದಿನ ಸನ್ನಿವೇಶದಲ್ಲಿ ಅಮರೀಂದರ್ ಸಿಂಗ್ ಏರಿದ್ದ ಎತ್ತರಕ್ಕೆ ದಿಲ್ಲಿ ವರಿಷ್ಠ ಮಂಡಳಿ ಎದುರಾಡುವ ಮಾತೇ ಇರಲಿಲ್ಲ, ಪರಿಣಾಮ ಸಿಧು ಡಿಸಿಎಂ ಸ್ಥಾನದಿಂದ ವಂಚಿತರಾಗಿ, ಸಚಿವ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು. ಆದರೆ, ಅವರೊಳಗಿನ ಮಹತ್ವಾಕಾಂಕ್ಷಿ ಸಿಧು ತೃಪ್ತನಾಗಲಿಲ್ಲ. ಸ್ವಲ್ಪ ದಿನಗಳಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಸಿಧು, ಕ್ಯಾಪ್ಟನ್ ವಿರುದ್ಧ ಬಂಡಾಯ ಸಾರಿದರು. ಇಷ್ಟೇ ಆದರೆ ಪರ್ವಾಗಿರಲಿಲ್ಲ. ಸಿಎಂ ಆಗಿದ್ದ ಅಮರೀಂದರ್ ಅವರು ನಿಧಾನವಾಗಿ ಪಕ್ಷ ದ ಮೇಲಿನ ಹಿಡಿತ ಕಳೆದುಕೊಳ್ಳುವುದಕ್ಕೂ, ಅತೃಪ್ತ ಶಾಸಕರ ಸಂಖ್ಯೆ ಹೆಚ್ಚಾಗುವುದಕ್ಕೂ, ಸಿಧು ಅತೃಪ್ತ ಶಾಸಕರ ನಾಯಕನಾಗಿ ಹೊರಹೊಮ್ಮುವುದಕ್ಕೂ ಸರಿಹೋಗಿದೆ. ಹಲವು ಬಾರಿ ಕಾಂಗ್ರೆಸ್ನ ಕೇಂದ್ರ ನಾಯಕತ್ವ ಪಂಜಾಬ್ ಬಿಕ್ಕಟ್ಟನ್ನು ಶಮನ ಮಾಡಿದರು, ಅದು ತಾತ್ಕಾಲಿಕವಾಗಿತ್ತಷ್ಟೇ. ನವಜೋತ್ ಸಿಂಗ್ ಸಿಧು ಅವರನ್ನು ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥರನ್ನಾಗಿ ಮಾಡಿದ ಮೇಲೆ ಒಳಜಗಳ ಮತ್ತಷ್ಟು ಬಿಗಡಾಯಿಸಿತು. </p><p>ಅಮರೀಂದರ್ ರಾಜೀನಾಮೆಯು ಪಂಜಾಬ್ ಕಾಂಗ್ರೆಸ್ನ ಒಳಜಗಳದ ಫಲಿತಾಂಶವಾದರೂ ಅದಕ್ಕೆ ಸಾಕಷ್ಟು ಆಯಾಮಗಳಿವೆ. 2017ರ ಚುನಾವಣೆ ವೇಳೆಗೆ ಪ್ರಶ್ನಾತೀತ ನಾಯಕರಾಗಿದ್ದ ಅಮರೀಂದರ್ ಸಿಂಗ್ 2022ರ ಚುನಾವಣೆ ಹೊಸ್ತಿಲಲ್ಲಿ ಜನಪ್ರಿಯತೆಯಲ್ಲಿ ಕುಸಿದಿದ್ದಾರೆ. ‘ಜನರ ಮಹಾರಾಜ’ ಎಂದು ಪ್ರೀತಿಯಿಂದ ಕರೆಸಿಕೊಳ್ಳುತ್ತಿದ್ದ ಅವರು ಕೊನೆ ಕೊನೆಗೆ ಜನರಿಗೆ ಸಿಗುವುದೇ ಕಷ್ಟವಾಗಿತ್ತು. ಅಮರೀಂದರ್ ನೇತೃತ್ವದಲ್ಲಿ ಚುನಾವಣೆ ಎದುರಿಸಿದರೆ ಗೆಲುವು ಸಿಗಲಾರದು ಎಂಬ ಸಮೀಕ್ಷೆಯೂ ಅವರು ನಿರ್ಗಮನಕ್ಕೆ ಕಾರಣವಾಯಿತು. ಅವರ ನೆರಳಾಗಿದ್ದ ಬಹಳಷ್ಟು ಶಾಸಕರು ಪಾಳಯ ಬದಲಿಸಿದ್ದಾರೆ ಎನ್ನುತ್ತಾರೆ ಪಂಜಾಬ್ ರಾಜಕಾರಣ ಬಲ್ಲ ವಿಶ್ಲೇಷಕರು. </p><p>‘ಸೇನೆ ಇಲ್ಲದ ವಯೋವೃದ್ಧ ಸೇನಾನಿ’ಯಾಗಿರುವ ಅಮರೀಂದರ್ ಸಿಂಗ್ ವ್ಯಕ್ತಿತ್ವ ಕೇವಲ ರಾಜಕಾರಣಕ್ಕೆ ಸೀಮಿತವಾಗಿಲ್ಲ. ಯೋಧ, ಸೇನಾ ಇತಿಹಾಸಿಕಾರ, ಶೆಫ್, ತೋಟಗಾರ, ಬರಹಗಾರ.. ಹೀಗೆ ನಾನು ಮುಖಗಳಿವೆ. ಅವರು ಅಪರೂಪದ ರಾಜಕೀಯ ನಾಯಕರು. ರಾಯಲ್ ಫ್ಯಾಮಿಲಿಯ ಅಮರೀಂದರ್ ರಾಜಕಾರಣಕ್ಕೆ ಬಂದಿದ್ದು, ತಮ್ಮ ಶಾಲಾ ದಿನಗಳ ಸ್ನೇಹಿತ ರಾಜೀವ್ ಗಾಂಧಿಯ ಒತ್ತಾಸೆಯಿಂದಾಗಿ. 1942 ಮಾರ್ಚ್ 11ರಂದು ಪಟಿಯಾಲಾದ ರಾಜಮನೆತನದಲ್ಲಿ ಜನಿಸಿದರು. ತಂದೆ ಮಹಾರಾಜ ಸರ್ ಯಾದವೀಂದ್ರ ಸಿಂಗ್ ಮತ್ತು ತಾಯಿ ಮಹಾರಾಣಿ ಮೊಹೀಂದರ್ ಕೌರ್. ಶಿಮ್ಲಾದ ಲೊರೆಟೋ ಕಾನ್ವೆಂಟ್, ಸನಾವರ್ದ ಲಾವರೆನ್ಸ್ ಸ್ಕೂಲ್ನಲ್ಲಿ ಆರಂಭದ ಶಿಕ್ಷ ಣ ಪಡೆದು, ಡೆಹ್ರಾಡೂನ್ನ ದಿ ಡೂನ್ ಸ್ಕೂಲ್ಗೆ ಸೇರಿದರು. ಅಮರೀಂದರ್ ಅವರ ಪತ್ನಿ ಪ್ರಣೀತ್ ಕೌರ್. ರಣೀಂದರ್ ಸಿಂಗ್ ಮತ್ತು ಜೈ ಇಂದೇರ್ ಕೌರ್ ಮಕ್ಕಳು. ಪತ್ನಿ ಪ್ರಣೀತ್ ಕೌರ್ ಅವರು ಸಂಸದೆಯಾಗಿದ್ದರು ಮತ್ತು 2009ರಿಂದ ಅಕ್ಟೋಬರ್ 2012ರವರೆಗೆ ವಿದೇಶಾಂಗ ಇಲಾಖೆಯ ರಾಜ್ಯ ಸಚಿವೆಯಾಗಿ ಕೆಲಸ ನಿರ್ವಹಿಸಿದ್ದಾರೆ. ಅಮರೀಂದರ್ ಅವರ ಸಹೋದರಿ ಹೇಮಿಂದರ್ ಕೌರ್ ಮಾಜಿ ವಿದೇಶಾಂಗ ಸಚಿವರಾಗಿದ್ದ ಕೆ. ನಟ್ವರ್ ಸಿಂಗ್ ಅವರ ಪತ್ನಿ. ಹಾಗೆಯೇ, ಶಿರೋಮಣಿ ಅಕಾಲಿ ದಳ(ಎ)ದ ಮುಖ್ಯಸ್ಥ ಸಿಮ್ರಂಜಿತ್ ಸಿಂಗ್ ಮನ್ ಕೂಡ ಇವರ ಸಂಬಂಧಿ. ಅಮರೀಂದರ್ ಸಿಂಗ್ ಅವರ ಒಟ್ಟು ಫ್ಯಾಮಿಲಿ ರಾಜಕೀಯ ಹಿನ್ನೆಲೆಯನ್ನು ಹೊಂದಿದೆ.</p><p>ರಾಜಕಾರಣಕ್ಕೆ ಕಾಲಿಡುವ ಮುನ್ನ ಅಮರೀಂದರ್ ಅವರು, ಸೇನೆಯಲ್ಲಿ ಕ್ಯಾಪ್ಟನ್ ಆಗಿದ್ದರು. 1963ರಿಂದ 1966ವರೆಗೆ ಸೇವೆ ಸಲ್ಲಿಸಿದ್ದಾರೆ. ನ್ಯಾಷನಲ್ ಡಿಫೆನ್ಸ್ ಅಕಾಡೆಮಿ ಮತ್ತು ಮಿಲಿಟರಿ ಅಕಾಡೆಮಿ ಪದವೀಧರರೂ ಹೌದು. ಅವರ ಸೇನೆಯಲ್ಲಿ ಸಿಖ್ ರೆಜಿಮಂಟ್ನಲ್ಲಿದ್ದರು. 1965ರ ಇಂಡೋ-ಪಾಕ್ ಯುದ್ಧದಲ್ಲಿಸಕ್ರಿಯವಾಗಿ ಪಾಲ್ಗೊಂಡ ಹಿರಿಮೆ ಅವರಿಗಿದೆ. ರಾಜೀವ್ ಗಾಂಧಿಯ ಒತ್ತಾಸೆಯ ಮೇರೆಗೆ ಅವರು ಕಾಂಗ್ರೆಸ್ ಸೇರ್ಪಡೆಯಾಗಿ 1980ರಲ್ಲಿಮೊದಲ ಬಾರಿಗೆ ಸಂಸತ್ತಿಗೆ ಆಯ್ಕೆಯಾದರು. ಆದರೆ, ಆಪರೇಷನ್ ಬ್ಲೂಸ್ಟಾರ್ ಕಾರ್ಯಾಚರಣೆ ವಿರೋಧಿಸಿ ತಮ್ಮ ಲೋಕಸಭಾ ಸದಸ್ಯತ್ವ ಹಾಗೂ ಕಾಂಗ್ರೆಸ್ ಪಾರ್ಟಿಗೆ ರಾಜೀನಾಮೆ ನೀಡಿ ಹೊರಬಂದರು. ಬಳಿಕ ಶಿರೋಮಣಿ ಅಕಾಲಿ ದಳ ಸೇರ್ಪಡೆಯಾಗಿ ತಲವಂಡಿ ಸಾಬೋ ಕ್ಷೇತ್ರದಿಂದ ರಾಜ್ಯ ವಿಧಾನಸಭೆಗೆ ಆಯ್ಕೆಯಾಗಿ ಸಚಿವರೂ ಆದರು. ಕೃಷಿ, ಅರಣ್ಯ, ಅಭಿವೃದ್ಧಿ ಮತ್ತು ಪಂಚಾಯತ್ ಇಲಾಖೆಗಳನ್ನು ನಿರ್ವಹಣೆ ಮಾಡಿ ಅನುಭವ ಪಡೆದುಕೊಂಡರು. </p><p>ಆದರೆ, ಅಕಾಲಿದಳದಲ್ಲೂ ತುಂಬ ದಿನಗಳ ಕಾಲ ಅಮರೀಂದರ್ ಉಳಿಯಲಿಲ್ಲ. 1992ರಲ್ಲಿ ಆ ಪಕ್ಷ ವನ್ನು ತೊರೆದು ತಮ್ಮದೇ ಆದ ಶಿರೋಮಣಿ ಅಕಾಲಿ ದಳ(ಪ್ಯಾಂಥಿಕ್) ಸ್ಥಾಪಿಸಿದರು. ಆದರೆ, ವಿಧಾಸಭೆ ಚುನಾವಣೆಯಲ್ಲಿ ಹೀನಾಯವಾಗಿ ಅವರ ಪಕ್ಷ ಸೋಲು ಕಂಡಿತು. ಸ್ವತಃ ಅಮರೀಂದರ್ ಅವರು ಕೇವಲ 856 ಮತಗಳನ್ನು ಪಡೆದು ಠೇವಣಿ ಕಳೆದುಕೊಂಡರು. ಪರಿಣಾಮ ತಮ್ಮ ಪಕ್ಷ ವನ್ನು ಅವರು 1998ರಲ್ಲಿಕಾಂಗ್ರೆಸ್ ಜತೆ ವಿಲೀನಗೊಳಿಸಿದರು. ಆಗ ಕಾಂಗ್ರೆಸ್ ನಾಯಕತ್ವ ಸೋನಿಯಾ ಗಾಂಧಿ ಹೆಗಲಿಗೇರಿತ್ತು. 1998ರಲ್ಲಿ ಮತ್ತೆ ಲೋಕಸಭೆ ಚುನಾವಣೆಯಲ್ಲಿ ಸೋಲು ಕಂಡರು. ಆದರೆ, ಪಂಜಾಬ್ನಲ್ಲಿ ಕಾಂಗ್ರೆಸ್ ಪಕ್ಷ ಕಟ್ಟುವ ಹೊಣೆಗಾರಿಕೆ ಅವರನ್ನು ಮುಂಚೂಣಿಯ ನಾಯಕನನ್ನಾಗಿ ಮಾಡಿತು. 1999ರಿಂದ 2002, 2010ರಿಂದ 2013 ಮತ್ತು 2015ರಿಂದ 2017, ಹೀಗೆ ಮೂರು ಬೇರೆ ಬೇರೆ ಅವಧಿಯಲ್ಲಿ ಪಂಜಾಬ್ ಕಾಂಗ್ರೆಸ್ ಅಧ್ಯಕ್ಷರಾಗಿ ಪಕ್ಷವನ್ನು ಅಧಿಕಾರದ ಮೊಗಸಾಲೆಗೆ ತರುವಲ್ಲಿ ಯಶಸ್ವಿಯಾಗಿ, 2002ರಿಂದ 2007ರವರೆ ಮೊದಲ ಬಾರಿಗೆ ಪಂಜಾಬ್ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದರು. ಅಮರೀಂದರ್ 2013ರಿಂದಲೂ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಕಾಯಂ ಆಹ್ವಾನಿತ ಸದಸ್ಯರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. 2014ರ ಚುನಾವಣೆಯಲ್ಲಿ ಕಾಂಗ್ರೆಸ್ ಧೂಳಿಪಟವಾಯಿತು. ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂತು. ಆದರೆ, ಪಂಜಾಬ್ನಲ್ಲಿ ಮೋದಿ ಅಲೆಯ ನಡುವೆಯೂ ಅರುಣ್ ಜೇಟ್ಲಿ ಅವರನ್ನು ಸೋಲಿಸುವಲ್ಲಿ ಅಮರೀಂದರ್ ಯಶಸ್ವಿಯಾಗಿದ್ದರು. ಪಟಿಯಾಲ ನಗರ ಮೂರು ಬಾರಿ, ಸಮನಾ ಹಾಗೂ ತಲ್ವಾಂಡಿ ಸಾಬೋ ವಿಧಾನಸಭೆ ಕ್ಷೇತ್ರಗಳನ್ನು ತಲಾ ಒಂದು ಬಾರಿ ಪ್ರತಿನಿಧಿಸಿದ್ದಾರೆ. 2015ರಲ್ಲಿ ಕಾಂಗ್ರೆಸ್ ನಾಯಕತ್ವ ಇವರನ್ನು ಮತ್ತೆ ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥರನ್ನಾಗಿ ನೇಮಿಸಿತು. ಪರಿಣಾಮ 2017ರಲ್ಲಿ ಎಲೆಕ್ಷ ನ್ನಲ್ಲಿ ಕಾಂಗ್ರೆಸ್ ಭರ್ಜರಿ ಜಯ ದಾಖಲಿಸಿ ಮತ್ತೆ ಅಧಿಕಾರಕ್ಕೇರಿತು. ಅಮರೀಂದರ್ ಸಿಂಗ್ ಎರಡನೇ ಬಾರಿಗೆ ಮುಖ್ಯಮಂತ್ರಿಯಾದರು. </p><p>ಪಂಜಾಬ್ನಲ್ಲಿ ತಾವೊಬ್ಬ ನಿರ್ಣಾಯಕ ನಾಯಕ ಎಂಬುದನ್ನು ಕಾಲಕಾಲಕ್ಕೆ ಅವರು ಸಾಬೀತುಪಡಿಸುತ್ತಾ ಬಂದಿದ್ದಾರೆ. ರಾಜ್ಯ ಮತ್ತು ರಾಷ್ಟ್ರ ಹಿತಾಸಕ್ತಿ ವಿಷಯಗಳಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕತ್ವದ ತದ್ವಿರುದ್ಧವಾದ ಹೇಳಿಕೆಗಳನ್ನು ನೀಡಲು ಅವರು ಯಾವತ್ತೂ ಹಿಂಜರಿದಿಲ್ಲ. ಈಗ ಕಾಲ ಬದಲಾಗಿದೆ; ಪಂಜಾಬ್ನ ನದಿಗಳಲ್ಲಿ ಸಾಕಷ್ಟು ನೀರು ಹರಿದು ಹೋಗಿದೆ. 79 ವರ್ಷದ ಅಮರೀಂದರ್ ಅವರಿಗೀಗ ಮೊದಲಿದ್ದ ಚಾರ್ಮ್ ಇಲ್ಲ ಎಂಬುದನ್ನು ಅರಿತ ಹಲವು ಶಾಸಕರು, ನಾಯಕರು ಅವರ ವಿರುದ್ಧವೇ ನಿಂತು ಕಾಳಗ ಮಾಡುತ್ತಿದ್ದಾರೆ. ಈ ಹಂತದಲ್ಲಿ ಅವರು ನೀಡಿರುವ ರಾಜೀನಾಮೆ ಯಾವ ಪರಿಣಾಮ ಬೀರಲಿದೆ ಎಂಬುದನ್ನು ಸದ್ಯಕ್ಕೆ ಹೇಳುವುದು ಕಷ್ಟ. ಆರೇಳು ತಿಂಗಳು ಕಳೆದರೂ ಸಾಕು, ಎಲ್ಲವೂ ನಿಚ್ಚಳವಾಗಲಿದೆ.</p><div class="separator" style="clear: both; text-align: center;"><a href="https://blogger.googleusercontent.com/img/b/R29vZ2xl/AVvXsEil541i3zWGGJId7mw68L8tkPmzarQgnIVvnEsXtQnlYxhA250cQC8aaSW1XyKCmPUvilvaEC1lwaXRC5JQu9e2_LAnZcYDDigkjbaY_vh4Eo-8ugp0QF7FcD077MnMINgZIjjPaC8dZ8o/s2048/vyaktigata.jpg" imageanchor="1" style="clear: left; float: left; margin-bottom: 1em; margin-right: 1em;"><img border="0" data-original-height="2048" data-original-width="1064" height="400" src="https://blogger.googleusercontent.com/img/b/R29vZ2xl/AVvXsEil541i3zWGGJId7mw68L8tkPmzarQgnIVvnEsXtQnlYxhA250cQC8aaSW1XyKCmPUvilvaEC1lwaXRC5JQu9e2_LAnZcYDDigkjbaY_vh4Eo-8ugp0QF7FcD077MnMINgZIjjPaC8dZ8o/w208-h400/vyaktigata.jpg" width="208" /></a><a href="https://blogger.googleusercontent.com/img/b/R29vZ2xl/AVvXsEil541i3zWGGJId7mw68L8tkPmzarQgnIVvnEsXtQnlYxhA250cQC8aaSW1XyKCmPUvilvaEC1lwaXRC5JQu9e2_LAnZcYDDigkjbaY_vh4Eo-8ugp0QF7FcD077MnMINgZIjjPaC8dZ8o/s2048/vyaktigata.jpg" imageanchor="1" style="clear: left; float: left; margin-bottom: 1em; margin-right: 1em;"><br /></a><a href="https://blogger.googleusercontent.com/img/b/R29vZ2xl/AVvXsEil541i3zWGGJId7mw68L8tkPmzarQgnIVvnEsXtQnlYxhA250cQC8aaSW1XyKCmPUvilvaEC1lwaXRC5JQu9e2_LAnZcYDDigkjbaY_vh4Eo-8ugp0QF7FcD077MnMINgZIjjPaC8dZ8o/s2048/vyaktigata.jpg" imageanchor="1" style="clear: left; float: left; margin-bottom: 1em; margin-right: 1em;"><span style="color: #f4cccc;">ಈ ಲೇಖನವು ವಿಜಯ ಕರ್ನಾಟಕದ 2021 ಸೆಪ್ಟೆಂಬರ್ 19ರ ಸಂಚಿಕೆಯ ಪ್ರಕಟವಾಗಿದೆ.</span></a><br /></div><br /><p><br /></p>ಮಲ್ಲಿಕಾಜು೯ನ ತಿಪ್ಪಾರhttp://www.blogger.com/profile/03103441547302200527noreply@blogger.com0SGS Dreamland R R Nagar Bengaluru12.9654144 77.602578212.831542037469543 77.4652490984375 13.099286762530458 77.7399073015625tag:blogger.com,1999:blog-6897854439810696140.post-76563282560854804232021-09-19T22:38:00.000+05:302021-09-19T22:38:01.036+05:30Virtual RAM: ವರ್ಚುವಲ್ RAM ಇದ್ದರೆ ಆರಾಮ್!<p><b>- ಮಲ್ಲಿಕಾರ್ಜುನ ತಿಪ್ಪಾರ</b><br />ಇಂದಿದ್ದ ಟೆಕ್ನಾಲಜಿ ಮಾರನೇ ದಿನಕ್ಕೆ ಹಳೆಯದ್ದಾಗಿರುತ್ತದೆ. ಈ ಕಾರಣಕ್ಕಾಗಿಯೇ ತಂತ್ರಜ್ಞಾನವನ್ನು ನಿತ್ಯ ನೂತನ ಎಂದು ಕರೆಯುವುದು. ಇತ್ತೀಚಿನ ದಿನಗಳಲ್ಲಿಹೆಚ್ಚು ಸದ್ದು ಮಾಡುತ್ತಿರುವ ವರ್ಚವಲ್ RAM <span style="font-family: Arial, sans-serif; font-size: 8pt; letter-spacing: -0.1pt;">(Virutval
RAM)</span> ಬಗ್ಗೆ ಕೇಳಿರಬಹುದು. ಸ್ಯಾಮ್ಸಂಗ್ನಂಥ ಪ್ರಮುಖ ಕಂಪನಿಗಳು ಈ ವರ್ಚುವಲ್ RAM ಬಳಸುತ್ತಿವೆ. ಸ್ಯಾಮ್ಸಂಗ್, ‘RAM ಪ್ಲಸ್’ ಮೂಲಕ ಈ ವರ್ಚುವಲ್ RAM ಈಗಾಗಲೇ ಕಂಪ್ಯೂಟರ್ ಬಳಕೆಯಲ್ಲಿಹೆಚ್ಚು ಪ್ರಸಿದ್ಧಿಯಾಗಿವೆ. ಆದರೆ, ಸ್ಮಾರ್ಟ್ಫೋನ್ ವಿಷಯಕ್ಕೆ ಬಂದಾಗ ಅದು ಸ್ವಲ್ಪ ಭಿನ್ನವಾಗಿ ಕಾರ್ಯ ನಿರ್ವಹಿಸುತ್ತದೆ. ಸ್ಯಾಮ್ಸಂಗ್ ಮಾತ್ರವಲ್ಲದೇ 2022ರ ಹೊತ್ತಿಗೆ ಒಪ್ಪೋ, ಶವೋಮಿ, ರಿಯಲ್ಮಿ ಮತ್ತು ಒನ್ಪ್ಲಸ್ನಂಥ ಸ್ಮಾರ್ಟ್ಫೋನ್ ಬ್ರ್ಯಾಂಡ್ಗಳು ತಮ್ಮ ಸ್ಮಾರ್ಟ್ಫೋನ್ಗಳಲ್ಲಿಈ ವರ್ಚುವಲ್ RAM ಬಳಸುವ ಸಾಧ್ಯತೆಗಳಿವೆ. </p><p>ಸ್ಯಾಮ್ಸಂಗ್ ಇತ್ತೀಚೆಗಷ್ಟೇ ತನ್ನ ಗ್ಯಾಲಕ್ಸಿ ಎ52ಎಸ್ 5ಜಿ ಸ್ಮಾರ್ಟ್ ಫೋನ್ಗೆ ಹೊಸ ಸಾಫ್ಟ್ವೇರ್ ಅಪ್ಡೇಟ್ ಮಾಡಿತು. ಈ ಮೂಲಕ ಅದು ವರ್ಚುವಲ್ RAM ಕಾರ್ಯಕ್ಕೆ ಅನುಮತಿ ನೀಡಿದೆ. ಈಗ ಈ ಫೋನ್ ಬಳಕೆದಾರರು 4 ಜಿಬಿ ವರ್ಚುವಲ್ RAM ಪಡೆಯಲಿದ್ದಾರೆ. ಈ ಸಾಧನವು 4 ಜಿಬಿ ಮತ್ತು 8 ಜಿಬಿ RAMಗಳಲ್ಲಿ ಲಭ್ಯವಿದ್ದು, ಇದೀಗ ಹೆಚ್ಚುವರಿಯಾಗಿ 4 ಜಿಬಿ ವರ್ಚುವಲ್ RAM ಕೂಡ ದೊರೆಯಲಿದೆ. ಇನ್ನು ಕೆಲವೇ ವರ್ಷಗಳಲ್ಲಿ ವರ್ಚುವಲ್ RAM ಬಳಕೆ ತೀರಾ ಸಾಮಾನ್ಯವಾಗಬಹುದು. ಸದ್ಯಕ್ಕೆ ಕಂಪ್ಯೂಟರ್ನಲ್ಲೇ ಮಾತ್ರವೇ ಬಳಕೆಯಾಗುತ್ತಿದೆ. ತಂತ್ರಜ್ಞಾನದ ಹೊಸ ಸಾಧ್ಯತೆ ಇದಾಗಿದ್ದು, ವರ್ಚುವಲ್ ಮೆಮೊರಿ ಬಳಕೆಯಿಂದಾಗಿ ಒಟ್ಟಾರೆ ಸಾಧನದ ವೆಚ್ಚ ತಗ್ಗಲೂ ಕಾರಣವಾದರೂ ಆಗಬಹುದು.</p><p>ವರ್ಚುವಲ್ RAM ಯಾಕೆ?<br />ಫಿಜಿಕಲ್ RAM ಹೆಚ್ಚು ತುಟ್ಟಿಯಾದ ಪರಿಣಾಮ ವರ್ಚುವಲ್ ಮೆಮೊರಿ ಬಳಕೆಯ ಸಾಧ್ಯತೆಗಳು ಹುಟ್ಟಿಕೊಂಡವು ಮತ್ತು ಅದನ್ನು ಸಾಧ್ಯ ಕೂಡ ಮಾಡಲಾಯಿತು. ಸ್ಟೋರೇಜ್ ಮಧ್ಯಮಗಳಾದ ಹಾರ್ಡ್ ಡಿಸ್ಕ್ ಮತ್ತು ಇತರ ಸಾಧನಗಳಿಗೆ ಹೋಲಿಸಿದರೆ ಪ್ರತಿ ಗಿಗಾಬೈಟ್ಗೆ ಫಿಸಿಕಲ್ RAM ಈಗಲೂ ತುಟ್ಟಿಯೇ ಆಗಿದೆ. ಈ ಕಾರಣಕ್ಕಾಗಿಯೇ ಅಗ್ಗದ RAM ಬಳಕೆಯ ಫಲವಾಗಿ ವರ್ಚುವಲ್ ಮೆಮೋರಿಯನ್ನು ಬಳಸಿಕೊಳ್ಳಲಾಗುತ್ತಿದೆ. ಪರಿಣಾಮ ಯಾವುದೇ ಕಂಪ್ಯೂಟರ್ಗೆ ಈಗ ಫಿಸಿಕಲ್ RAM ಜತೆಗೆ ಹೆಚ್ಚುವರಿಯಾಗಿ ವರ್ಚುವಲ್ RAM ಬಳಕೆಯಾಗುತ್ತಿರುವುದರಿಂದ ಹೆಚ್ಚು ಮೆಮೊರಿ ದೊರೆಯುತ್ತಿದೆ. ಇನ್ನೊಂದು ಕಾರಣ ಏನೆಂದರೆ-ಎಲ್ಲಾಕಂಪ್ಯೂಟರ್ಗಳಲ್ಲಿಫಿಜಿಕಲ್ RAM ಇನ್ಸ್ಟಾಲ್ ಮಾಡಲು ಮಿತಿಯನ್ನು ಹೊಂದಿವೆ. ಈ ಮಿತಿಯನ್ನು ಮೀರಿ ಮೆಮೊರಿ ಬಳಕೆಗೆ ವರ್ಚುವಲ್ RAM ಅನುವು ಮಾಡಿಕೊಡುತ್ತದೆ. ಹಾಗಾಗಿ ಇತ್ತೀಚಿನ ದಿನಗಳಲ್ಲಿವರ್ಚುವಲ್ ಮೆಮೊರಿ ಬಳಕೆಯೂ ಹೆಚ್ಚಾಗುತ್ತಿದೆ.</p><p>ಪ್ರಯೋಜನಗಳೇನು?<br />ವರ್ಚುವಲ್ RAM ಬಳಕೆಯಿಂದ ಏಕಕಾಲಕ್ಕೆ ಹೆಚ್ಚೆಚ್ಚು ಅಪ್ಲಿಕೇಷನ್ಗಳನ್ನು ರನ್ ಮಾಡಲು ಸಾಧ್ಯವಾಗುತ್ತದೆ. ಫಿಜಿಕಲ್ ರಾರಯಮ್ನಲ್ಲಿರನ್ ಮಾಡಲು ಸಾಧ್ಯವಾಗದೇ ಇರುವ ಬೃಹತ್ ಅಪ್ಲಿಕೇಷನ್ಗಳನ್ನು ರನ್ ಮಾಡಲು ವರ್ಚುವಲ್ ರಾರಯಮ್ ನೆರವು ನೀಡುತ್ತದೆ. ಫಿಸಿಕಲ್ RAM ವೆಚ್ಚಕ್ಕೆ ಹೋಲಿಸಿದರೆ ಇದು ಅಗ್ಗ. ಕಡಿಮೆ ವೆಚ್ಚದಲ್ಲೇ ಹೆಚ್ಚು ಮೆಮೊರಿಯನ್ನು ಬಳಸಿಕೊಳ್ಳಬಹುದು. ಹಾರ್ಡ್ವೇರ್ ಮತ್ತು ಆಪರೇಟಿಂಗ್ ಸಿಸ್ಟಮ್ ಬೆಂಬಲಿಸುವ ಗರಿಷ್ಠ ಪ್ರಮಾಣದ ರಾರಯಮ್ ಹೊಂದಿರುವ ಸಿಸ್ಟಂನಲ್ಲಿಮೆಮೊರಿಯನ್ನು ಹೆಚ್ಚಿಸುವ ಅವಕಾಶವನ್ನು ಸೃಷ್ಟಿಸುತ್ತದೆ. ವರ್ಚುವಲ್ ರಾರಯಮ್ ಬಳಕೆಯ ಪ್ರಯೋಜನಗಳ ಜತೆಗೆ ಒಂದಿಷ್ಟು ಅನಾನುಕೂಲಗಳೂ ಇವೆ; ಫಿಸಿಕಲ್ RAMಗೆ ಹೋಲಿಸಿದರೆ ವರ್ಚುವಲ್ ಮೆಮೊರಿಯ ದಕ್ಷ ತೆಯ ಪ್ರಮಾಣ ಕಡಿಮೆ. ಸಿಸ್ಟಮ್ನ ಒಟ್ಟಾರೆ ಪ್ರದರ್ಶನದ ಮೇಲೆ ಋುಣಾತ್ಮಕ ಪರಿಣಾಮ ಬೀರಬಲ್ಲದು.</p><p>ಏನಿದು RAM?<br />RAM ಎಂದರೆ <span style="font-family: Arial, sans-serif; font-size: 8pt; letter-spacing: -0.1pt;">random-access memory</span>. ಇದು ಕಂಪ್ಯೂಟರ್ನ ಪ್ರಮುಖ ಭಾಗ. ಕಿರು ಅವಧಿಯ ಮೆಮೊರಿಯಾಗಿರುವ ರಾರಯಮ್ನಲ್ಲಿಪ್ರೊಸೆಸರ್ನ ಅಗತ್ಯಕ್ಕೆ ತಕ್ಕಂತೆ ಡೇಟಾ ಸಂಗ್ರಹವಾಗುತ್ತದೆ. RAM ಮೆಮೊರಿ ಹೆಚ್ಚಾದಷ್ಟು ಕಂಪ್ಯೂಟರ್ನ ಕಾರ್ಯಕ್ಷ ಮತೆಯೂ ಹೆಚ್ಚಾಗುತ್ತದೆ. ಏಕಕಾಲಕ್ಕೆ ಹತ್ತಾರು ಅಪ್ಲಿಕೇಷನ್ಗಳ ಮೂಲಕ ಕೆಲಸ ಮಾಡುವವರಿಗೆ RAM ಹೆಚ್ಚಿರುವ ಕಂಪ್ಯೂಟರ್ಗಳೇ ಬೇಕಾಗುತ್ತವೆ. ಹಾಗಾಗಿ, ಇದು ಕಂಪ್ಯೂಟರ್ನ ಪ್ರಮುಖ ಭಾಗ ಎಂದು ಪರಿಗಣಿಸಲಾಗುತ್ತದೆ.</p><div class="separator" style="clear: both; text-align: center;"><a href="https://blogger.googleusercontent.com/img/b/R29vZ2xl/AVvXsEjU-OgspyQOp2IDXmuhlqZr3CvCOZwluIpnBsxBPYSpuEhv44S-2GP6HwOqE-_EFd_enFoaG8phDa07r6e7zVSYQn3Gg0jHO1FXYkKHIU3zaAj0kSfHvSP056K2EGr1eFWLxsyQxW2vKD0/s2048/tech+tippar.jpg" imageanchor="1" style="clear: left; float: left; margin-bottom: 1em; margin-right: 1em;"><img border="0" data-original-height="2048" data-original-width="1248" height="400" src="https://blogger.googleusercontent.com/img/b/R29vZ2xl/AVvXsEjU-OgspyQOp2IDXmuhlqZr3CvCOZwluIpnBsxBPYSpuEhv44S-2GP6HwOqE-_EFd_enFoaG8phDa07r6e7zVSYQn3Gg0jHO1FXYkKHIU3zaAj0kSfHvSP056K2EGr1eFWLxsyQxW2vKD0/w244-h400/tech+tippar.jpg" width="244" /></a></div><br /><p><br /></p>ಮಲ್ಲಿಕಾಜು೯ನ ತಿಪ್ಪಾರhttp://www.blogger.com/profile/03103441547302200527noreply@blogger.com0tag:blogger.com,1999:blog-6897854439810696140.post-41041935794073127802021-08-10T23:39:00.001+05:302021-08-10T23:39:41.811+05:30WhatsApp Web: ‘ವಾಟ್ಸ್ಆ್ಯಪ್ ವೆಬ್’ ಅಂತ್ಯ ಸನ್ನಿಹಿತವೇ?<p><b>- ಮಲ್ಲಿಕಾರ್ಜುನ ತಿಪ್ಪಾರ</b><br />ವಾಟ್ಸ್ಆ್ಯಪ್ ಈಗ ಕೇವಲ ಸಂವಹನದ ಸಾಧನವಾಗಿ ಉಳಿದಿಲ್ಲ. ನಮ್ಮೆಲ್ಲರ ಅಗತ್ಯಗಳನ್ನು ಪೂರೈಸುವ ಮೂಲಸೌಕರ್ಯ ಎನಿಸಿಕೊಂಡಿದೆ. ವಾಟ್ಸ್ಆ್ಯಪ್ ಇಲ್ಲದ ಬದುಕನ್ನು ನೆನೆಸಿಕೊಳ್ಳುವುದು ಕಷ್ಟ. ಅಷ್ಟರ ಮಟ್ಟಿಗೆ ವಾಟ್ಸ್ಆ್ಯಪ್ ನಮ್ಮ ಬದುಕಿನ ಅವಿಭಾಜ್ಯವಾಗಿದೆ.</p><p>ಸಂವಹನದ ಜತೆಗೆ ನಿತ್ಯದ ನಮ್ಮ ಕೆಲಸಗಳಿಗೆ ಅನುಕೂಲವಾಗುವ ರೀತಿಯಲ್ಲಿವಾಟ್ಸ್ಆ್ಯಪ್ ಅನೇಕ ಫೀಚರ್ಗಳನ್ನು ಒಳಗೊಂಡಿದೆ. ಆ ಪೈಕಿ ‘ವಾಟ್ಸ್ಆ್ಯಪ್ ವೆಬ್’ ಕೂಡ ಒಂದು. ಅಂದರೆ, ನಿಮ್ಮ ವಾಟ್ಸ್ಆ್ಯಪ್ </p><p>ಅನ್ನು ಲ್ಯಾಪ್ಟಾಪ್ ಅಥವಾ ಡೆಸ್ಕ್ಟಾಪ್ನಲ್ಲೇ ಬಳಸುವುದು. ಇದರಿಂದ ವಾಟ್ಸ್ಆ್ಯಪ್ ಮೂಲಕ ನಡೆಯುವ ನಿಮ್ಮ ಕೆಲಸ ಬಹಳಷ್ಟು ಸುಲಭವಾಗುತ್ತದೆ. ಹಾಗಾಗಿಯೇ ಇತ್ತೀಚಿನ ವರ್ಷಗಳಲ್ಲಿ ವಾಟ್ಸ್ಆ್ಯಪ್ ವೆಬ್ ಫೀಚರ್ ಹೆಚ್ಚು ಬಳಕೆಯಾಗುತ್ತಿದೆ. ಆದರೆ, ಈ ಸೌಲಭ್ಯ ನಿಂತು ಹೋಗಲಿದೆಯಾ? ಇಂಥದೊಂದು ಅನುಮಾನ ಬರಲು ಕಾರಣವಿದೆ. ವಾಟ್ಸ್ಆ್ಯಪ್ ಮಲ್ಟಿ ಡಿವೈಸ್ ಸಪೋರ್ಟ್ ವೈಶಿಷ್ಟ್ಯವನ್ನು ಪರೀಕ್ಷಿಸುತ್ತಿದೆ. ಸದ್ಯ ಈ ಫೀಚರ್ ಬೀಟಾ ವರ್ಷನ್ನಲ್ಲಿದ್ದು, ನಿರ್ದಿಷ್ಟ ಬಳಕೆದಾರರಿಗೆ ಬಳಸಲು ಅವಕಾಶ ನೀಡಲಾಗಿದೆ.</p><p></p><div class="separator" style="clear: both; text-align: center;"><a href="https://blogger.googleusercontent.com/img/b/R29vZ2xl/AVvXsEi2XA8ZS9KwHF9Z9CmPQiC3PBNbkKr-XwnBgzhexNWYA-WH5KbmBSgeMCkeNDv5sAUZzNfGiDU3pj4ha1zP4uvZWUSVqvrRest1JBBLDiDijyAajBkyuCiOzW_XLVzMDWCvaVzFMDhx2Ao/s2048/tippar+tech.jpg" imageanchor="1" style="clear: left; float: left; margin-bottom: 1em; margin-right: 1em;"><img border="0" data-original-height="2048" data-original-width="1241" height="640" src="https://blogger.googleusercontent.com/img/b/R29vZ2xl/AVvXsEi2XA8ZS9KwHF9Z9CmPQiC3PBNbkKr-XwnBgzhexNWYA-WH5KbmBSgeMCkeNDv5sAUZzNfGiDU3pj4ha1zP4uvZWUSVqvrRest1JBBLDiDijyAajBkyuCiOzW_XLVzMDWCvaVzFMDhx2Ao/w387-h640/tippar+tech.jpg" width="387" /></a></div>ಏನಿದು ವಾಟ್ಸ್ಆ್ಯಪ್ ಮಲ್ಟಿ ಡಿವೈಸ್ ಎಂದು ನೀವು ಕೇಳಬಹುದು. ವಾಟ್ಸ್ಆ್ಯಪ್ ವೆಬ್ ಬಳಸಿಕೊಂಡು ಡೆಸ್ಕ್ಟಾಪ್ನಲ್ಲೂ ವಾಟ್ಸ್ಆ್ಯಪ್ ಹೇಗೆ ಬಳಸುತ್ತಿವೆಯೋ ಹಾಗೆಯೇ, ವಾಟ್ಸ್ಆ್ಯಪ್ ಅನ್ನು ನೀವು ನಾಲ್ಕು ಸಾಧನಗಳಲ್ಲಿ ಏಕಕಾಲಕ್ಕೆ ಬಳಸಬಹುದು! ಫೇಸ್ಬುಕ್ ಒಡೆತನದ ವಾಟ್ಸ್ಆ್ಯಪ್ ಈ ಫೀಚರ್ ಅನ್ನು ಶೀಘ್ರವೇ ಗ್ರಾಹಕರ ಬಳಕೆಗೆ ನೀಡುವ ಸಾಧ್ಯತೆಯಿದೆ.<p></p><p>ವಾಟ್ಸ್ಆ್ಯಪ್ ವೆಬ್ ಬಳಸುವಾಗ ಬಳಕೆದಾರರು ಒಂದಿಷ್ಟು ತೊಂದರೆಗಳನ್ನು ಎದುರಿಸುತ್ತಿದ್ದರು. ಅಂದರೆ, ನಿಮ್ಮ ಫೋನ್ ಇಂಟರ್ನೆಟ್ ಸಂಪರ್ಕದಿಂದ ಕಡಿತಗೊಂಡರೆ, ಬ್ಯಾಟರಿ ಖಾಲಿಯಾದರೆ ಆ ಕ್ಷ ಣದಿಂದ ನೀವು ಡೆಸ್ಕ್ಟಾಪ್ನಲ್ಲಿ ವಾಟ್ಸ್ಆ್ಯಪ್ ವೆಬ್ ಬಳಸಲು ಸಾಧ್ಯವಾಗುತ್ತಿರಲಿಲ್ಲ. ಬಹುಶಃ ವಾಟ್ಸ್ಆ್ಯಪ್ ಮಲ್ಟಿ ಡಿವೈಸ್ ವೈಶಿಷ್ಟ್ಯಪೂರ್ಣವಾಗಿ ಬಳಕೆದಾರರಿಗೆ ಸಿಗಲಾರಂಭಿಧಿಸಿಧಿದರೆ ಈ ಸಮಸ್ಯೆಗೆ ಪರಿಹಾರ ಸಿಗಲಿದೆ ಎಂಬುದು ವಾಟ್ಸ್ಧಿಆ್ಯಪ್ನ ಅಭಿಪ್ರಾಯವಾಗಿದೆ. ವಾಟ್ಸ್ಧಿಆ್ಯಪ್ನಲ್ಲಿಇತ್ತೀಚೆಗೆ ಪರಿಚಯಿಸಲಾದ ಮಲ್ಟಿ-ಡಿವೈಸ್ ಬೀಟಾ ಪರೀಕ್ಷೆಯು ಬಳಕೆದಾರರ ಪ್ರಾಥಮಿಕ ಸಾಧನದಲ್ಲಿ(ಸ್ಮಾರ್ಟ್ಫೋನ್) ಮತ್ತು ಪ್ರಾಥಮಿಕ ಸಾಧನವು ಇಂಟರ್ನೆಟ್ ಸಂಪರ್ಕಿತಗೊಂಡಿಲ್ಲದಿದ್ದರೂ ಇತರ ನಾಲ್ಕು ಸಾಧನಗಳಲ್ಲಿಕೆಲಸ ಮಾಡಲು ಅವಕಾಶ ನೀಡುವ ಮೂಲಕ ಈ ಸಮಸ್ಯೆಯನ್ನು ನಿವಾರಿಸುತ್ತದೆ. ಆದಾಗ್ಯೂ, ಬಹು-ಸಾಧನ ಬೆಂಬಲವು ಹೊರಬಂದ ನಂತರ </p><p>ವಾಟ್ಸ್ಆ್ಯಪ್ ವೆಬ್ ಫೀಚರ್ ಭವಿಷ್ಯ ಏನು ಎಂಬ ಪ್ರಶ್ನೆ ಇನ್ನೂ ಸ್ಪಷ್ಟವಾದ ಉತ್ತರ ಸಿಕ್ಕಿಲ್ಲ. ವಾಟ್ಸ್ಆ್ಯಪ್ ವೆಬ್ ಬಳಕೆದಾರರಿಗೆ ಒಂದು ಪ್ರಮುಖ ವೇದಿಕೆಯಾಗಿ ಉಳಿದಿದೆ. ಇಲ್ಲಿಯವರೆಗೆ, ವಾಟ್ಸ್ಆ್ಯಪ್ ಅನ್ನು ಒಂದು ಸಮಯದಲ್ಲಿಒಂದು ಸಾಧನದಲ್ಲಿ</p><p>ಮಾತ್ರ ಬಳಸಬಹುದಿತ್ತು. ಡೆಸ್ಕ್ಟಾಪ್ ಮತ್ತು ವೆಬ್ ಬೆಂಬಲವು ನಿಮ್ಮ ಫೋನ್ ಅನ್ನು ಪ್ರತಿಬಿಂಬಿಸುವ ಮೂಲಕ ಮಾತ್ರ ಕಾರ್ಯನಿರ್ವಹಿಸುತ್ತದೆ. ಅಂದರೆ ನಿಮ್ಮ ಫೋನ್ ಆನ್ ಆಗಿರಬೇಕು ಮತ್ತು ಸಕ್ರಿಯ ಇಂಟರ್ನೆಟ್ ಸಂಪರ್ಕವನ್ನು ಹೊಂದಿರಬೇಕು. ಆಗಲೇ ಅದು ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ.</p><p>ಮಲ್ಟಿ ಡಿವೈಸ್ ಬೆಂಬಲ ಸಕ್ರಿಯವಾದ ಬಳಕೆದಾರರಿಗೆ ಇನ್ನೂ ನಾಲ್ಕು ಸಾಧನಗಳನ್ನು ಸೇರಿಸಲು ಸಾಧ್ಯವಾಗುತ್ತದೆ. ಆದರೆ ವಾಟ್ಸ್ ಆ್ಯಪ್ ವೆಬ…, ವಾಟ್ಸ್ಆ್ಯಪ್ ಡೆಸ್ಕ್ಟಾಪ್ ಅಥವಾ ಫೇಸ್ಬುಕ್ ಪೋರ್ಟಲ್ಗಳನ್ನು ಮಾತ್ರ ಸೇರಿಸಬಹುದು. ಕಂಪನಿಯು ನಂತರದ ಹಂತದಲ್ಲಿಹೆಚ್ಚುವರಿ ಸಾಧನಗಳನ್ನು (ಸ್ಮಾರ್ಟ್ಫೋನ್ಗಳು ಅಥವಾ ಟ್ಯಾಬ್ಲೆಟ್ಗಳಂಥ) ಸೇರಿಸಲು ಬೆಂಬಲವನ್ನು ಸೇರಿಸಬಹುದು ಎನ್ನಲಾಗುತ್ತಿದೆ.</p><p>ಸದ್ಯದ ಪರಿಸ್ಥಿತಿಯನ್ನು ಆಧರಿಸಿ ಹೇಳುವುದಾದರೆ ವಾಟ್ಸ್ಆ್ಯಪ್ ವೆಬ್ ಫೀಚರ್ ಇರಲಿದೆ. ಜೊತೆಗೆ, ವಾಟ್ಸ್ಆ್ಯಪ್ ಮಲ್ಟಿ ಸಪೋರ್ಟ್ ಸಕ್ರಿಯಗೊಂಡ ಬಳಿಕ ಅದು ಎದುರಿಸುತ್ತಿದ್ದ ಸಮಸ್ಯೆಗಳೂ ನೀಗಲಿವೆ. ಜೊತೆಗೆ, ಒಂದಕ್ಕಿಂತ ಹೆಚ್ಚು ಸಾಧನಗಳಲ್ಲಿವಾಟ್ಸ್ಆ್ಯಪ್ ಬಳಸಲು ಸಾಧ್ಯವಾಗುವುದರಿಂದ, ಅದರ ಬಳಕೆಯ ಸಾಧ್ಯತೆಗಳು ಇನ್ನೂ ಹೆಚ್ಚಾಗಲಿವೆ.</p><p>ಭಾರತದಲ್ಲೇ 39 ಕೋಟಿ ಬಳಕೆದಾರರನ್ನು ಹೊಂದಿರುವ ವಾಟ್ಸ್ಆ್ಯಪ್ ಸಂವಹನಕ್ಕಾಗಿ ಮಾತ್ರವಲ್ಲದೇ ಬಿಸಿನೆಸ್, ಹಣಕಾಸಿನ ಸೇವೆಗೂ ಬಳಕೆಯಾಗುತ್ತಿದೆ. ಹಾಗಾಗಿ, ಅದು ತನ್ನ ಬಳಕೆದಾರರ ಅನುಕೂಲಕ್ಕೆ ತಕ್ಕ ಹಾಗೆ ಫೀಚರ್ಗಳನ್ನು ಅಭಿವೃದ್ಧಿಪಡಿಸಿ, ಬಳಕೆಯ ಅನುಭವವನ್ನು ಹೆಚ್ಚಿಸುತ್ತಿದೆ. ವಾಟ್ಸ್ಆ್ಯಪ್ ಮಲ್ಟಿ ಡಿವೈಸ್ ಸಪೋರ್ಟ್ ಕೂಡ ಅದೇ ಹಾದಿಯಲ್ಲಿದೆ.</p><p><span style="color: #f9cb9c;">ಈ ಲೇಖನವು ವಿಜಯ ಕರ್ನಾಟಕದ 2021 ಆಗಸ್ಟ್ 9ರ ಸಂಚಿಕೆಯಲ್ಲಿ ಪ್ರಕಟವಾಗಿದೆ.</span></p>ಮಲ್ಲಿಕಾಜು೯ನ ತಿಪ್ಪಾರhttp://www.blogger.com/profile/03103441547302200527noreply@blogger.com0tag:blogger.com,1999:blog-6897854439810696140.post-87394286754428246532021-08-01T22:46:00.000+05:302021-08-01T22:46:02.570+05:30Billionaire investor Rakesh Jhunjhunwala: 'ಷೇರುಪೇಟೆ ಸರದಾರ'ನ ವಿಮಾನಯಾನ<p></p><blockquote><b><span style="color: #e06666;">‘ಭಾರತೀಯ ವಾರೆನ್ ಬಫೆಟ್’ ರಾಕೇಶ್ ಜುಂಜುನ್ವಾಲಾ ಅವರೀಗ ‘ಆಕಾಶ’ಕ್ಕೆ ಏಣಿ ಹಾಕಲು ಅಣಿಯಾಗುತ್ತಿದ್ದಾರೆ. ಷೇರುಪೇಟೆ ಚತುರ ಹೂಡಿಕೆದಾರನ ವಿಮಾನಯಾನ ಸಂಸ್ಥೆಗೆ ಸಕ್ಸೆಸ್ ಸಿಗುತ್ತಾ? </span></b></blockquote><p></p><p><b><br /></b></p><p><b>-ಮಲ್ಲಿಕಾರ್ಜುನ ತಿಪ್ಪಾರ<br /></b>ಷೇರುಪೇಟೆ ವಹಿವಾಟು ಬಲ್ಲವರಿಗೆ, ಹೂಡಿಕೆದಾರರ ವಲಯಕ್ಕೆ ರಾಕೇಶ್ ಜುಂಜುನ್ವಾಲಾ ಚಿರಪರಿಚಿತ ಹೆಸರು. ಆದರೆ, ಸಾಮಾನ್ಯರಿಗೆ ಅವರ ಬಗ್ಗೆ ಗೊತ್ತಾಗಿದ್ದು ಅಗ್ಗದ ವಿಮಾನಯಾನ ಸಂಸ್ಥೆ ಆರಂಭಿಸುವ ಬಗ್ಗೆ ಘೋಷಣೆ ಮಾಡಿದಾಗಲೇ!</p><p>‘ಭಾರತದ ವಾರೆನ್ ಬಫೆಟ್’ ಎಂದು ಕರೆಸಿಕೊಳ್ಳುವ 61 ವರ್ಷದ ಈ ಚಾಣಾಕ್ಷ ಹೂಡಿಕೆದಾರ ಇಡುವ ನಡೆಗಳೇ ನಿಗೂಢ. ಅವರ ಈ ಗುಣಕ್ಕೆ ಅಲ್ಟ್ರಾ ಲೋ ಕಾಸ್ಟ್ ಏರ್ಲೈನ್ ಸ್ಥಾಪನೆಯೇ ಘೋಷಣೆಯೇ ಸಾಕ್ಷಿ. ಯಾಕೆಂದರೆ, ಕೋವಿಡ್ ಸಾಂಕ್ರಾಮಿಕ ಪರಿಸ್ಥಿತಿಯಿಂದಾಗಿ ಇಡೀ ವಿಮಾನಯಾನ ವಲಯದ ಮೇಲೆ ‘ಆಕಾಶ’ವೇ ಕಳಚಿ ಬಿದ್ದಿದೆ. ಅದರಿಂದ ಹೊರಬರಲು ಹರಸಾಹಸ ಪಡುತ್ತಿದೆ. ಸಾಂಕ್ರಾಮಿಕ ಪರಿಸ್ಥಿತಿ ಶುರುವಾಗುವ ಕೆಲವು ವರ್ಷಗಳ ಮೊದಲೇ ಕಿಂಗ್ ಫಿಶರ್ ಸಂಸ್ಥೆ ಬಾಗಿಲು ಹಾಕಿದ್ದರೆ, 2019ರಲ್ಲಿಜೆಟ್ ಏರ್ವೇಸ್ ಕೂಡ ಸೇವೆ ರದ್ದುಪಡಿಸಿತ್ತು. ಜೊತೆಗೆ, ಸರಕಾರಿ ಸ್ವಾಮ್ಯದ ಏರ್ ಇಂಡಿಯಾ ಕೂಡ ಲಾಭದಲ್ಲಿಲ್ಲ. ಟಾಟಾ ಒಡೆತನದ ವಿಸ್ತಾರ, ಸ್ಪೈಸ್ಜೆಟ್, ಇಂಡಿಗೋ, ಏರ್ ಏಷ್ಯಾ ಸೇರಿ ಕೆಲವು ಸಂಸ್ಥೆಗಳು ಸೇವೆಯನ್ನು ಒದಗಿಸುತ್ತಿವೆ. ಬಹುಶಃ ಕೊರೊನಾದಿಂದ ಅತಿ ಹೆಚ್ಚು ಹೊಡೆತ ಬಿದ್ದಿರುವುದು ವಿಮಾನಯಾನ ಕ್ಷೇತ್ರದ ಮೇಲೆ. ಹಾಗಾಗಿ, ಈ ಕ್ಷೇತ್ರದಲ್ಲಿಹೂಡಿಕೆ ಮಾಡುತ್ತಿರುವ ‘ಬಿಗ್ ಬುಲ್’ ರಾಕೇಶ್ ಜುಂಜುನ್ವಾಲಾ ಅವರ ನಡೆ ಹೆಚ್ಚು ಚರ್ಚೆಗೆ ಒಳಗಾಗುತ್ತಿದೆ.</p><p>ಇಂಥ ವಿಷಮ ಪರಿಸ್ಥಿತಿಯಲ್ಲಿ ಈತ ಕಡಿಮೆ ವೆಚ್ಚದ ವಿಮಾನಯಾನ ಸಂಸ್ಥೆ ಆರಂಭಿಸಲು ಹೊರಟಿದ್ದಾರೆ ಎಂದರೆ ಅವರ ಲೆಕ್ಕಾಚಾರದ ಬಗ್ಗೆ ಯೋಚಿಸಲೇಬೇಕಾಗುತ್ತದೆ. ಅವರ ಈ ಸಾಹಸಕ್ಕೆ ಇಂಡಿಗೋ ಹಾಗೂ ಜೆಟ್ವೇಸ್ನ ಮಾಜಿ ಅಧಿಕಾರಿಗಳೂ ಸಾಥ್ ನೀಡುತ್ತಿದ್ದಾರೆ. ತಾವು ಸ್ಥಾಪಿಸಲು ಹೊರಟಿರುವ ವಿಮಾನಯಾನ ಸಂಸ್ಥೆಗೆ ರಾಕೇಶ್, ‘ಆಕಾಶ್ ಏರ್’ ಎಂದು ನಾಮಕರಣ ಮಾಡಲಿದ್ದಾರೆ. ಈ ಸಂಸ್ಥೆಯಲ್ಲಿಅವರು ಶೇ.40 ಪಾಲು ಹೊಂದಲಿದ್ದಾರೆ. ಕೆಲವೇ ದಿನಗಳಲ್ಲಿಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯ ಒಪ್ಪಿಗೆ ನೀಡುವ ಸಾಧ್ಯತೆಯೂ ಇದೆ.</p><div class="separator" style="clear: both; text-align: center;"><a href="https://blogger.googleusercontent.com/img/b/R29vZ2xl/AVvXsEgkOQZLefxsnxXtfwMktPF7ZX8YblRXYvcBHQyrZ3jW-vUyYZiG8-6bfE77IQrfsQwdHkmFQy1ynHMQAoXo8bAc9vbkgf83rkyxbVNHBx_Fy1FQdgel03_pkc7ZXuvXRY8wPVTQZ5TcT3M/s400/Jhunjunwala.jpg" imageanchor="1" style="clear: left; float: left; margin-bottom: 1em; margin-right: 1em;"><img border="0" data-original-height="281" data-original-width="400" height="225" src="https://blogger.googleusercontent.com/img/b/R29vZ2xl/AVvXsEgkOQZLefxsnxXtfwMktPF7ZX8YblRXYvcBHQyrZ3jW-vUyYZiG8-6bfE77IQrfsQwdHkmFQy1ynHMQAoXo8bAc9vbkgf83rkyxbVNHBx_Fy1FQdgel03_pkc7ZXuvXRY8wPVTQZ5TcT3M/s320/Jhunjunwala.jpg" width="320" /></a></div><p>ದೊಡ್ಡ ವಿಮಾನ ತಯಾರಿಕಾ ಕಂಪನಿ ಎನಿಸಿಕೊಂಡಿರುವ ಬೋಯಿಂಗ್ ಭಾರತೀಯ ಆಕಾಶದಲ್ಲಿಮತ್ತೆ ರೆಕ್ಕೆ ಬಿಚ್ಚಲು ಜುಂಜುನ್ವಾಲಾ ಆರಂಭಿಸಲಿರುವ ಸಂಸ್ಥೆ ಬಲ ನೀಡುವ ಸಾಧ್ಯತೆ ಇದೆ. ಯಾಕೆಂದರೆ, ಭಾರತದಲ್ಲಿಜೆಟ್ ಏರ್ವೇಸ್ ಬೋಯಿಂಗ್ನ ಅತಿ ದೊಡ್ಡ ಗ್ರಾಹಕನಾಗಿತ್ತು. ಅದು ಬಾಗಿಲು ಹಾಕಿದ ಮೇಲೆ ಭಾರತದಲ್ಲಿಸ್ಪೈಸ್ಜೆಟ್ ಬಿಟ್ಟು ಬೋಯಿಂಗ್ಗೆ ಅಂಥ ಹೇಳಿಕೊಳ್ಳುವ ಗ್ರಾಹಕರಿರಲಿಲ್ಲ. ಉಳಿದ ವಿಯಾನಯಾನ ಕಂಪನಿಗಳು, ಏರ್ಬಸ್ ತಯಾರಿಸುವ ಕಡಿಮೆ ಅಗಲದ ವಿಮಾನಗಳನ್ನೇ ಹೆಚ್ಚಾಗಿ ಬಳಸುತ್ತಿವೆ. ಹಾಗಾಗಿ, ‘ಆಕಾಶ್ ಏರ್’ನಿಂದಾಗಿ ಭಾರತೀಯ ಆಕಾಶದಲ್ಲಿಬೋಯಿಂಗ್ ವರ್ಸಸ್ ಏರ್ಬಸ್ ಸ್ಪರ್ಧೆಯನ್ನು ಮತ್ತೆ ಕಾಣಬಹುದು. ಮುಂದಿನ ನಾಲ್ಕು ವರ್ಷಗಳಲ್ಲಿ180 ಆಸನಗಳುಳ್ಳ ಸುಮಾರು 70 ವಿಮಾನಗಳನ್ನು ಖರೀದಿಸುವ ಗುರಿಯನ್ನು ಅವರು ಹಾಕಿಕೊಂಡಿದ್ದಾರೆ.</p><p>‘ಫೋರ್ಬ್ಸ್ ಇಂಡಿಯಾ’ ಪ್ರಕಾರ ರಾಕೇಶ್ ಭಾರತದ 48ನೇ ಶ್ರೀಮಂತ ವ್ಯಕ್ತಿ. ಸುಮಾರು 34,387 ಕೋಟಿ ರೂ. ಆಸ್ತಿ ಹೊಂದಿದ್ದಾರೆ. ಸಾಧಾರಣ ವ್ಯಕ್ತಿಯೊಬ್ಬ ಇಷ್ಟು ದೊಡ್ಡ ಮಟ್ಟಕ್ಕೆ ಬೆಳೆದಿರುವ ಕತೆಯೂ ರಣರೋಚಕವಾಗಿದೆ. ರಾಕೇಶ್ ಅವರ ತಂದೆ ಮುಂಬೈಯಲ್ಲಿಆದಾಯ ತೆರಿಗೆ ಅಧಿಕಾರಿಯಾಗಿದ್ದರು. ಇವರದ್ದು ಮಧ್ಯಮ ವರ್ಗದ ಕುಟುಂಬ. ರಾಕೇಶ್ ಹುಟ್ಟಿದ್ದು 1960 ಜುಲೈ 5ರಂದು ಇಂದಿನ ತೆಲಂಗಾಣದ ಹೈದ್ರಾಬಾದ್ನಲ್ಲಿ. ಬೆಳೆದಿದ್ದೆಲ್ಲಮುಂಬಯಿಯಲ್ಲಿ. ತಂದೆ ಆದಾಯ ತೆರಿಗೆ ಅಧಿಕಾರಿಯಾಗಿದ್ದರಿಂದ ಮನೆಯಲ್ಲಿಷೇರು ಪೇಟೆ ಬಗೆಗಿನ ಮಾತುಕತೆಗಳು ಸಾಮಾನ್ಯವಾಗಿದ್ದವು. ಅದು ಯುವಕ ರಾಕೇಶ್ ಕಿವಿಯ ಮೇಲೆ ಬೀಳುತ್ತಿತ್ತು. ಪರಿಣಾಮ ಕಾಲೇಜಿನಲ್ಲಿರುವಾಗಲೇ ರಾಕೇಶ್ಗೆ ಷೇರು ಪೇಟೆ ವ್ಯವಹಾರ, ಹೂಡಿಕೆಯ ಮೇಲೆ ಆಸಕ್ತಿ ಬೆಳೆಯಿತು. 1985ರಲ್ಲಿಸಿಡನ್ಹಮ್ ಕಾಲೇಜಿನಿಂದ ಪದವಿ ಪಡೆದ ಬಳಿಕ ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟಂಟ್ ಆಫ್ ಇಂಡಿಯಾ ಸಂಸ್ಥೆ ಸೇರಿದರು. </p><p>1986ರಲ್ಲಿಅವರು ಕೇವಲ 43 ರೂಪಾಯಿಗೆ 5000 ಟಾಟಾ ಟೀ ಷೇರುಗಳನ್ನು ಖರೀದಿಸಿದ್ದರು. ಮೂರು ತಿಂಗಳ ಬಳಿಕ ಷೇರು ಮೌಲ್ಯ 143 ರೂ.ಗೆ ಏರಿಕೆಯಾಯಿತು. ಹೂಡಿಕೆಗೆಗಿಂತ ಮೂರು ಪಟ್ಟು ಲಾಭ ಮಾಡಿಕೊಂಡ ರಾಕೇಶ್ ಮುಂದಿನ ಮೂರು ವರ್ಷಗಳಲ್ಲಿಷೇರು ಹೂಡಿಕೆಗಳಲ್ಲಿ20ರಿಂದ 25 ಲಕ್ಷ ರೂಪಾಯಿ ಲಾಭ ಮಾಡಿಕೊಂಡರಂತೆ!</p><p>1987ರಲ್ಲಿರಾಕೇಶ್ ಅವರು ರೇಖಾ ಎಂಬವರನ್ನು ವಿವಾಹವಾದರು. ಪತ್ನಿ ಕೂಡ ಷೇರು ಪೇಟೆ ಹೂಡಿಕೆದಾರೆ. 2003ರಲ್ಲಿಇವರಿಬ್ಬರು ತಮ್ಮದೇ ಸ್ಟಾಕ್ ಟ್ರೇಡಿಂಗ್ ಕಂಪನಿ ಶುರು ಮಾಡಿದರು. ಅದಕ್ಕೆ ತಮ್ಮಿಬ್ಬರ ಹೆಸರಿನ ಮೊದಲನೇ ಅಕ್ಷ ರಗಳನ್ನು ಸೇರಿಸಿ ‘ರೇರಾ(್ಕಛ್ಟಿa) ಎಂಟರ್ಪ್ರೈಸಸ್’ ಎಂದು ಕರೆದಿದ್ದಾರೆ. ದಂಪತಿಗೆ ಮೂವರು ಮಕ್ಕಳಿದ್ದಾರೆ. ಷೇರುಪೇಟೆ ವ್ಯವಹಾರದಲ್ಲಿರಾಕೇಶ್ ಅವರನ್ನೇ ಅನುಸರಿಸುವ ಬಹುದೊಡ್ಡ ವರ್ಗವೇ ಇದೆ. ಅವರ ಒಂದು ಸಣ್ಣ ಇಶಾರೆಯೂ ಕಂಪನಕ್ಕೆ ಕಾರಣವಾಗುತ್ತದೆ. ತಮ್ಮ ಖಾಸಗಿ ರೇರಾ ಸ್ಟಾಕ್ ಟ್ರೇಡಿಂಗ್ ಕಂಪನಿ ಮೂಲಕ ಸಾಕಷ್ಟು ಹೂಡಿಕೆ ಮಾಡಿದ್ದಾರೆ. ಟೈಟನ್, ಕ್ರಿಸಿಲ್, ಅರಬಿಂದೋ ಫಾರ್ಮಾ, ಪ್ರಜ್ ಇಂಡಸ್ಟ್ರೀಜ್, ಎನ್ಸಿಸಿ, ಆಪ್ಟೇಕ್ ಲಿ., ಅಯಾನ್ ಎಕ್ಸ್ಚೇಂಜ್, ಎಂಸಿಎಕ್ಸ್, ಫೋರ್ಟಿಸ್ ಹೆಲ್ತ್ಕೇರ್, ಲುಪಿನ್, ವಿಐಪಿ ಇಂಡಸ್ಟ್ರೀಜ್, ಜಿಯೋಜಿತ್ ಫೈನಾನ್ಷಿಯಲ್ ಸವೀರ್ಸಸ್, ರಾರಯಲಿಸ್ ಇಂಡಿಯಾ, ಜುಬಿಲಿಯೆಂಟ್ ಲೈಫ್ ಸೈನ್ಸೀಸ್, ಸ್ಟಾರ್ ಹೆಲ್ತ್ ಇನ್ಶೂರೆನ್ಸ್ ಹೀಗೆ ಹಲವಾರು ಕಂಪನಿಗಳಲ್ಲಿರಾಕೇಶ್ ಹೂಡಿಕೆ ಮಾಡಿದ್ದಾರೆ. ಜೊತೆಗೆ, ಷೇರು ವ್ಯವಹಾರಕ್ಕೆ ಸಂಬಂಧಿಸಿದಂತೆ ತನಿಖೆಯನ್ನೂ ಎದುರಿಸುತ್ತಿದ್ದಾರೆ!</p><p>ಷೇರುಪೇಟೆ ಬಿಟ್ಟು ಅವರ ಮತ್ತೊಂದು ಆಸಕ್ತಿಯ ಕ್ಷೇತ್ರ ಬಾಲಿವುಡ್. ಹಲವು ಹಿಂದಿ ಚಿತ್ರಗಳನ್ನು ನಿರ್ಮಿಸಿದ್ದಾರೆ. ಶ್ರೀದೇವಿ ಅಭಿಯನದ ‘ಇಂಗ್ಲಿಷ್ ವಿಂಗ್ಲಿಷ್’, ಕರಿನಾ ಕಪೂರ್ ಅಭಿನಯದ ‘ಕೀ ಆ್ಯಂಡ್ ಕಾ’ ಚಿತ್ರಗಳನ್ನು ಹೆಸರಿಸಬಹುದು. ರಾಕೇಶ್ ಮಾನವ ಹಿತಾಕಾಂಕ್ಷಿ ಆಗಿಯೂ ಹೆಸರುವಾಸಿಯಾಗಿದ್ದಾರೆ. ವಿಶೇಷವಾಗಿ ಷೌಷ್ಟಿಕತೆ ಮತ್ತು ಶಿಕ್ಷ ಣಕ್ಕೆ ಸಂಬಂಧಿಸಿ ತೊಡಗಿಸಿಕೊಂಡಿದ್ದಾರೆ. ತಮ್ಮ ಆದಾಯದ ಶೇ.25ರಷ್ಟು ಹಣವನ್ನು ಸಮಾಜಮುಖಿ ಕೆಲಸಗಳಿಗೆ ಬಳುಸುತ್ತಿದ್ದಾರೆ. ಕ್ಯಾನ್ಸರ್ಪೀಡಿತ ಮಕ್ಕಳಿಗೆ ಆಶ್ರಯ, ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಕುರಿತು ಜಾಗೃತಿ ಮೂಡಿಸುವ ಸಂಸ್ಥೆಗಳಿಗೆ ಸಹಾಯ ಮಾಡುತ್ತಿದ್ದಾರೆ. ಮುಂಬೈಯಲ್ಲಿಕಣ್ಣಿನ ಆಸ್ಪತ್ರೆ ಕಟ್ಟಿಸಿ ಅದರ ಮೂಲಕ ಉಚಿತವಾಗಿ 15,000 ಕಣ್ಣಿನ ಚಿಕಿತ್ಸೆ ನಡೆಸುವ ಗುರಿ. </p><p>ಹೂಡಿಕೆ ಮಾಡಿದರೆ ‘ಹೊಳೆಯಲ್ಲಿಹುಣಸೆ ಹಣ್ಣು ತೊಳೆ’ದಂತೆ ಭಾವಿಸಲಾಗುತ್ತಿರುವ ವಿಮಾನಯಾನ ಕ್ಷೇತ್ರದಲ್ಲಿಹಣ ಸುರಿಯಲು ಜುಂಜುನ್ವಾಲಾ ಮುಂದಾಗಿದ್ದಾರೆಂದರೆ, ಅವರ ಲೆಕ್ಕಾಚಾರ ಸರಿಯಾಗೇ ಇರಬೇಕು. ಸದ್ಯ ಬಸವಳಿದಂತೆ ಕಾಣುತ್ತಿರುವ ವಿಮಾನಯಾನ ಮುಂಬರುವ ವರ್ಷಗಳಲ್ಲಿಪುಟಿದೇಳುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ. ಸೊರಗುತ್ತಿರುವ ಭಾರತೀಯ ವಿಮಾನಯಾನ ಕ್ಷೇತ್ರಕ್ಕೆ ರಾಕೇಶ್ ಜುಂಜುನ್ವಾಲಾ ಅವರ ಆಕಾಶ್ ಏರ್ ಸಂಸ್ಥೆ ಬಲ ನೀಡಲಿದೆ ಎಂಬ ವಿಶ್ಲೇಷಣೆಗಳೂ ನಡೆಯುತ್ತಿವೆ. ಎಲ್ಲವೂ ಲೆಕ್ಕಾಚಾರದಂತೆ ನಡೆದರೆ ಈ ವರ್ಷಾಂತ್ಯ ಇಲ್ಲವೇ ಮುಂದಿನ ವರ್ಷದ ಆರಂಭದಲ್ಲಿಜುಂಜುನ್ವಾಲಾ ಅವರ ‘ಆಕಾಶ ಏರ್’ ವಿಮಾನದಲ್ಲಿಹಾರಾಡಬಹುದು.</p><div class="separator" style="clear: both; text-align: center;"><a href="https://blogger.googleusercontent.com/img/b/R29vZ2xl/AVvXsEigetMQ7oUE_n6KlGJZZQTmNeak32sWXpsP34nrrXlOnFIbqcWsv0_23C19rxtSuSxX4ufUzk311apIv9i1630sLHoeHqSiGkU1zeq3zUOCxUfDVfmG-8hP0-EjXvBe1X3k0tV0cwL16i0/s2048/rakesh.jpg" imageanchor="1" style="margin-left: 1em; margin-right: 1em;"><img border="0" data-original-height="2048" data-original-width="1033" height="640" src="https://blogger.googleusercontent.com/img/b/R29vZ2xl/AVvXsEigetMQ7oUE_n6KlGJZZQTmNeak32sWXpsP34nrrXlOnFIbqcWsv0_23C19rxtSuSxX4ufUzk311apIv9i1630sLHoeHqSiGkU1zeq3zUOCxUfDVfmG-8hP0-EjXvBe1X3k0tV0cwL16i0/w322-h640/rakesh.jpg" width="322" /></a></div><div class="separator" style="clear: both; text-align: center;"><br /></div><div class="separator" style="clear: both; text-align: center;"><span style="color: #f4cccc;">ಈ ಲೇಖನವು ವಿಜಯ ಕರ್ನಾಟಕದ 2021ರ ಆಗಸ್ಟ್ 1ರ ಸಂಚಿಕೆಯಲ್ಲಿ ಪ್ರಕಟವಾಗಿದೆ</span></div><br /><p><br /></p>ಮಲ್ಲಿಕಾಜು೯ನ ತಿಪ್ಪಾರhttp://www.blogger.com/profile/03103441547302200527noreply@blogger.com0tag:blogger.com,1999:blog-6897854439810696140.post-14390781071794011182021-07-23T18:50:00.000+05:302021-07-23T18:50:17.826+05:30 clubhouse vs twitter spaces: ಕ್ಲಬ್ಹೌಸ್ ಬೇಡ್ವಾ, ಸ್ಪೇಸಸ್ಗೆ ಬನ್ನಿ!<p><b>- ಮಲ್ಲಿಕಾರ್ಜುನ ತಿಪ್ಪಾರ</b><br />ಪಾಡ್ಕಾಸ್ಟ್ಗೆ ಅಷ್ಟೇ ಸೀಮಿತವಾಗಿದ್ದ ಆಡಿಯೋ ವೇದಿಕೆಗೆ ಹೊಸ ಖದರ್ ತಂದುಕೊಟ್ಟಿದ್ದು ‘ಕ್ಲಬ್ಹೌಸ್’ ಆ್ಯಪ್. ಈ ವರ್ಷದ ಆರಂಭದಲ್ಲಿ ಆಂಡ್ರಾಯ್ಡ್ ಸಾಧನಗಳಲ್ಲೂ ಬಳಕೆಗೆ ಅವಕಾಶ ಸಿಗುತ್ತಿದಂತೆ ಕ್ಲಬ್ಹೌಸ್ನ ಬಳಕೆಯ ಒಟ್ಟು ಸಾಧ್ಯತೆಯೇ ಬದಲಾಗಿ ಹೋಗಿದೆ. ಭಾರತದಲ್ಲಂತೂ ಈ ಕ್ಲಬ್ಹೌಸ್ ನಾಗಾಲೋಟದಲ್ಲಿ ಓಡುತ್ತಿದೆ. ಅತಿ ಕಡಿಮೆ ಅವಧಿಯಲ್ಲಿ 20 ಲಕ್ಷ ಸಕ್ರಿಯ ಬಳಕೆದಾರರನ್ನು ಹೊಂದಿರುವ ಈ ಆ್ಯಪ್ ಒಟ್ಟು 50 ಲಕ್ಷಕ್ಕೂ ಅಧಿಕ ಡೌನ್ಲೋಡ್ ಕಂಡಿದೆ. </p><p>ಕ್ಲಬ್ಹೌಸ್ನ ಈ ಜನಪ್ರಿಯತೆಗೆ ಬೆಚ್ಚಿಬಿದ್ದಿರುವ ಸೋಷಿಯಲ್ ಮೀಡಿಯಾ ದೈತ್ಯ ಕಂಪನಿಗಳಾದ ೇಸ್ಬುಕ್, ಟ್ವಿಟರ್ ಅಂಥದ್ದೇ ವೇದಿಕೆಯನ್ನು ಸೃಷ್ಟಿಸಲು ಮುಂದಾಗಿವೆ. ಈ ನಿಟ್ಟಿನಲ್ಲಿ ಟ್ವಿಟರ್ನ ‘ಸ್ಪೇಸಸ್’ ವೇದಿಕೆ ಸಕ್ರಿಯವಾಗಿದೆ. ಇದು ಕೂಡ ಕ್ಲಬ್ಹೌಸ್ ಆ್ಯಪ್ ರೀತಿಯಲ್ಲೇ ಆಡಿಯೋ ವೇದಿಕೆಯಾಗಿದೆ. ಐಒಎಸ್ ಮತ್ತು ಆಂಡ್ರಾಯ್ಡ್ ಸಾಧನಗಳಿಗೆ ಇದು ಸಪೋರ್ಟ್ ಮಾಡುತ್ತದೆ. ನೀವು ಟ್ವಿಟರ್ನ ಈ ಸ್ಪೇಸಸ್ನಲ್ಲಿ ಮಾತುಗಳನ್ನು ಕೇಳಬಹುದು; ನೀವೇ ಸ್ಪೀಕರ್ ಆಗಬಹುದು; ನಿಮಗೆ ಬೇಕಾದ ವೇದಿಕೆಗಳಿಗೆ ಹೋಗಿ ಕುಳಿತುಕೊಳ್ಳಬಹುದು. ಸದ್ಯಕ್ಕೆ ಈ ಸ್ಪೇಸ್ ವೆಬ್ನಲ್ಲಿ ಸಿಗುವುದಿಲ್ಲ, ಆದರೆ ನೀವು ಕೇಳುಗರಾಗಿ ಸೇರಿಕೊಳ್ಳಬಹುದು.</p><div class="separator" style="clear: both; text-align: center;"><a href="https://blogger.googleusercontent.com/img/b/R29vZ2xl/AVvXsEhpIqhJmEUBvEQl7etvkYACi_5ATdx8jTnzTrId05jEnLp_uPFXcDzXufJNWEba2ZTU-1KgRuX74clgiALCcCe77ZfZHsCGflVNhyMu3Cnuybxpc0dkzYciq0fKohv_d7Sr3Hc1y8NcYXM/s1694/Spacess.jpg" imageanchor="1" style="clear: left; float: left; margin-bottom: 1em; margin-right: 1em;"><img border="0" data-original-height="1067" data-original-width="1694" height="202" src="https://blogger.googleusercontent.com/img/b/R29vZ2xl/AVvXsEhpIqhJmEUBvEQl7etvkYACi_5ATdx8jTnzTrId05jEnLp_uPFXcDzXufJNWEba2ZTU-1KgRuX74clgiALCcCe77ZfZHsCGflVNhyMu3Cnuybxpc0dkzYciq0fKohv_d7Sr3Hc1y8NcYXM/w320-h202/Spacess.jpg" width="320" /></a></div><p><b>ಸ್ಪೇಸಸ್ ಶುರು ಮಾಡುವುದು ಹೇಗೆ?</b></p><p>ನೀವು ಐಒಎಸ್ ಬಳಕೆದಾರರಾಗಿದ್ದರೆ, ಎರಡು ರೀತಿಯಲ್ಲಿ ಟ್ವಿಟರ್ನಲ್ಲಿ ಸ್ಪೇಸ್ ಚರ್ಚೆ ಆರಂಭಿಸಬಹುದು. ನಿಮ್ಮ ಹೋಮ್ ಟೈಮ್ಲೈನ್ ಟ್ವೀಟ್ ಕಾಂಪೋಸ್ ಮೇಲೆ ದೀರ್ಘಾವಧಿಗೆ ಒತ್ತಿ ಹಿಡಿಯಬೇಕು. ಆಗ ಕಾಣಿಸಿಕೊಳ್ಳುವ ಸ್ಪೇಸಸ್ ಐಕಾನ್ ಮೇಲೆ ಟ್ಯಾಪ್ ಮಾಡಿ, ಆಗ ನೀವು ಸ್ಪೇಸ್ ಹಾಸ್ಟ್ ಆಗಿ ಎಂಟ್ರಿ ಪಡೆದುಕೊಳ್ಳುತ್ತೀರಿ. ಅಥವಾ ನಿಮ್ಮ ಪ್ರೊೈಲ್ ಇಮೇಜ್ ಮೇಲೆ ಟ್ಯಾಪ್ ಮಾಡಿ ಮತ್ತು ಬಲಬದಿಗೆ ಸ್ಕ್ರಾಲ್ ಮಾಡಿ ಮತ್ತು ಸ್ಪೇಸಸ್ ಮೇಲೆ ಟ್ಯಾಪ್ ಮಾಡುವ ಮೂಲಕ ಆರಂಭಿಸಬಹುದು. ಆಂಡ್ರಾಯ್ಡ್ ೆನ್ಗಳಲ್ಲಾದರೆ, ಮೊದಲಿಗೆ ಟ್ವಿಟರ್ ಆ್ಯಪ್ ಓಪನ್ ಮಾಡಿ, ಸ್ಕ್ರೀನ್ನ ಬಲಬದಿಯ ಕೆಳ ತುದಿಯಲ್ಲಿ ಕಾಣುವ ಟ್ವೀಟ್ ಕಾಂಪೋಸ್ ಮಾಡುವ ಐಕಾನ್ ಮೇಲೆ ಟ್ಯಾಪ್ ಮಾಡಿ. ಆಗ ನಿಮಗೆ ಸ್ಪೇಸಸ್, ೆಟೋಸ್, ಜಿಐಎ್ ಮತ್ತು ಟ್ವೀಟ್ ಎಂಬ ಪದಗಳು ಐಕಾನ್ ಸಹಿತ ಕಾಣುತ್ತವೆ. ಸ್ಪೇಸಸ್ ಐಕಾನ್ ಮೇಲೆ ಟ್ಯಾಪ್ ಮಾಡಿದಾಗ, ಸ್ಟಾರ್ಟ್ ಯುವರ್ ಸ್ಪೇಸ್ ಪಾಪ್ ಅಪ್ ಕಾಣಿಸಿಕೊಳ್ಳುತ್ತದೆ. ಅಲ್ಲಿಯೇ ನಿಮ್ಮ ಚರ್ಚೆಗೆ ಹೆಸರನ್ನು ಕೂಡ ದಾಖಲಿಸಬಹುದು. ಬಳಿಕ ಸ್ಟಾರ್ಟ್ ಯುವರ್ ಸ್ಪೇಸ್ ಬಟನ್ ಮೇಲೆ ಟ್ಯಾಪ್ ಮಾಡಿದಾಗ ನೀವು ಹೋಸ್ಟ್ ಆಗಿ ಸಕ್ರಿಯರಾಗುತ್ತೀರಿ ಮತ್ತು ನಿಮ್ಮ ಚಾಟ್ ರೂಮ್ಗೆ ಉಳಿದವರನ್ನು ಆಮಂತ್ರಿಸಬಹುದು.</p><p><b>ಯಾರೆಲ್ಲ ಜಾಯಿನ್ ಆಗಬಹುದು?</b> <br />ಸ್ಪೇಸಸ್ ವೇದಿಕೆ ಮುಕ್ತವಾಗಿದ್ದು, ಯಾರು ಬೇಕಾದರೂ ಕೇಳುಗರಾಗಿ ಸೇರಿಕೊಳ್ಳಬಹುದು. ಟ್ವಿಟರ್ನಲ್ಲಿ ನಿಮ್ಮನ್ನು ಾಲೋ ಮಾಡದೇ ಇರುವುವರು ಕೂಡ ಇದರಲ್ಲಿ ಕೇಳುಗರಾಗಿ ಬಂದು ಕುಳಿತುಕೊಳ್ಳಲು ಅವಕಾಶವಿದೆ. ಲಿಂಕ್ ಕಳುಹಿಸುವ ಮೂಲಕ ನೇರವಾಗಿ ಕೇಳುಗರನ್ನೂ ಆಮಂತ್ರಿಸಬಹುದು. ನಿಮ್ಮ ಸ್ಪೇಸಸ್ ಲಿಂಕ್ ಅನ್ನು ಟ್ವೀಟ್ ಮಾಡುವ ಮೂಲಕ ಅಥವಾ ಇತರೆ ವೇದಿಕೆಗಳಲ್ಲಿ ಅದನ್ನು ಷೇರ್ ಮಾಡುವುದರೊಂದಿಗೆ ಕೇಳುಗರನ್ನು ಕರೆದುಕೊಳ್ಳಬಹುದಾಗಿದೆ.</p><p>ಒದಗಿಸಲಾದ ನಿಗದಿತ ವೇಳೆಯಲ್ಲಿ ಈ ವೇದಿಕೆಯಲ್ಲಿ 11 ಜನರು ಮಾತ್ರವೇ ಸ್ಪೀಕರ್ ಆಗಲು ಅವಕಾಶವಿದೆ. ಯಾವಾಗ ನೀವು ಹೊಸ ಸ್ಪೇಸ್ ಸೃಷ್ಟಿಸುತ್ತೀರಿ ಆಗ ನಿಮ್ಮ ಸ್ಪೇಸ್ಗೆ ಹೆಸರು ಕೊಡಲು ಅವಕಾಶವಿರುವುದನ್ನು ಕಾಣಬಹುದು ಮತ್ತು ಆ ಮೂಲಕ ಸ್ಪೇಸ್ ಸ್ಟಾರ್ಟ್ ಮಾಡಬಹುದು. ನೀವು ನಿಮ್ಮ ಸ್ಪೇಸ್ ಅನ್ನು ಶೆಡ್ಯೂಲ್ ಮಾಡಬಹುದು ಕೂಡ. </p><p>ಒಮ್ಮೆ ಸ್ಪೇಸಸ್ ಶುರುವಾದ ಮೇಲೆ ಹೋಸ್ಟ್ ಮಾಡುವವರು, ಪೀಪಲ್ ಐಕಾನ್ ಮೇಲೆ ಟ್ಯಾಪಿಂಗ್ ಮಾಡುವ ಮೂಲಕ ಸ್ಪೀಕರ್ ಆಗಲು ಕೇಳುಗರಿಗೆ ರಿಕ್ವೆಸ್ಟ್ ಕಳುಹಿಸಬಹುದು. ಹಾಗೆಯೇ, ಕೇಳುಗರಲ್ಲಿ ಯಾರಿಗಾದರೂ ಮಾತನಾಡಬೇಕು ಎನಿಸಿದರೆ, ಮೈಕೋ್ರೆನ್ ಕೆಳಗಡೆ ಕಾಣುವ ರಿಕ್ವೆಸ್ಟ್ ಐಕಾನ್ ಮೇಲೆ ಟ್ಯಾಪ್ ಮಾಡುವ ಮೂಲಕ ಅನುಮತಿಯನ್ನು ಪಡೆದುಕೊಳ್ಳಬಹುದು. </p><p>ಕ್ಲಬ್ಹೌಸ್ ಆ್ಯಪ್ಗೆ ಒಗ್ಗಿಕೊಂಡವರಿಗೆ ಟ್ವಿಟರ್ನ ಸ್ಪೇಸಸ್ ತುಸು ಕಷ್ಟ ಎನ್ನಬಹುದು. ಕ್ಲಬ್ಹೌಸ್ನಷ್ಟು ಇದು ಬಳಕೆದಾರಸ್ನೇಹಿಯಂತೆ ಕಾಣುತ್ತಿಲ್ಲಘಿ. ಸ್ಪೇಸಸ್ ಈಗಷ್ಟೇ ಆರಂಭವಾಗಿದೆ. ಮುಂಬರುವ ದಿನಗಳಲ್ಲಿ ಟ್ವಿಟರ್ ಈ ವೇದಿಕೆಯನ್ನು ಇನ್ನಷ್ಟು ಹೆಚ್ಚು ಆಪ್ತವಾಗಿಸಬಹುದು.</p><p><br /></p><div class="separator" style="clear: both; text-align: center;"><a href="https://blogger.googleusercontent.com/img/b/R29vZ2xl/AVvXsEjlXxefO-LIf4Zn5ed4Lz0s_fLO1uVqRL2QkoTJokb0delH0wYrgRQ6Mid_jgF27cHyC_X222NhqxNijcc8yNO0y6WR2BH6wqlXA4p7wjGQa-rl2bMJd7cfeoPl_k7t31dcO5hZz-iPUwM/s2048/club+house.jpg" imageanchor="1" style="margin-left: 1em; margin-right: 1em;"><img border="0" data-original-height="2048" data-original-width="1307" height="640" src="https://blogger.googleusercontent.com/img/b/R29vZ2xl/AVvXsEjlXxefO-LIf4Zn5ed4Lz0s_fLO1uVqRL2QkoTJokb0delH0wYrgRQ6Mid_jgF27cHyC_X222NhqxNijcc8yNO0y6WR2BH6wqlXA4p7wjGQa-rl2bMJd7cfeoPl_k7t31dcO5hZz-iPUwM/w408-h640/club+house.jpg" width="408" /></a></div><div class="separator" style="clear: both; text-align: center;"><span style="color: #fce5cd;">ಈ ಲೇಖನವು ವಿಜಯ ಕರ್ನಾಟಕ ಟೆಕ್ ನೋ ಪುರವಣಿಯಲ್ಲಿ 2021ರ ಜುಲೈ 23ರಂದು ಪ್ರಕಟವಾಗಿದೆ.</span></div><br /><p><br /></p>ಮಲ್ಲಿಕಾಜು೯ನ ತಿಪ್ಪಾರhttp://www.blogger.com/profile/03103441547302200527noreply@blogger.com0tag:blogger.com,1999:blog-6897854439810696140.post-29064705751456774922021-07-18T22:43:00.000+05:302021-07-18T22:43:02.382+05:30India-Born Sirisha Bandla flies to Space ಆಕಾಶದೆತ್ತರದ ಕನಸು ಬೆಂಬತ್ತಿದ ಬಾಂಡ್ಲಾ<p><span style="background-color: #eeeeee;">ಬಾಹ್ಯಾಕಾಶ ಯಾನ ಕೈಗೊಳ್ಳಲಿರುವ ರಿಚರ್ಡ್ ಬ್ರಾನ್ಸನ್ ನೇತೃತ್ವದ ತಂಡದಲ್ಲಿಭಾರತೀಯ ಸಂಜಾತೆ, 34 ವರ್ಷದ ಸಿರಿಶಾ ಬಾಂಡ್ಲಾಇರುವುದು ಭಾರತೀಯರಾದ ನಮಗೆ ಹೆಮ್ಮೆ.</span></p><p><b>ಮಲ್ಲಿಕಾರ್ಜುನ ತಿಪ್ಪಾರ</b><br />ಭಾನುವಾರ ಬಾಹ್ಯಾಕಾಶಕ್ಕೆ ಪ್ರಯಾಣ ಬೆಳೆಸಲಿರುವ ಭಾರತೀಯ ಸಂಜಾತೆ ಅಮೆರಿಕನ್ ಸಿರಿಶಾ ಬಾಂಡ್ಲಾಅವರ ವಿಷಯದಲ್ಲಿ ‘ಕನಸು ಕಂಡರಷ್ಟೇ ಅದನ್ನು ಸಾಕಾರಗೊಳಿಸುವುದು ಸಾಧ್ಯ’ ಎಂಬ ಮಾಜಿ ರಾಷ್ಟ್ರಪತಿ ಡಾ. ಎಪಿಜೆ ಅಬ್ದುಲ್ ಕಲಾಂ ಅವರ ಉಕ್ತಿ ಅಕ್ಷ ರಶಃ ನಿಜವಾಗಿದೆ!</p><p>ಕಂಡ ಕನಸನ್ನು ಬೆನ್ನಟ್ಟಿ ಅದನ್ನು ನಿಜವಾಗಿಸುವ ಪ್ರಯತ್ನದ ಅನುಭವ ಕೊಡುವ ಥ್ರಿಲ್ ಬೇರೆ ಯಾವುದರಿಂದಲೂ ದೊರೆಯಲು ಸಾಧ್ಯವಿಲ್ಲ. ಅಮೆರಿಕದ ಬಾಹ್ಯಾಕಾಶದ ಚಟುವಟಿಕೆಗಳ ಕೇಂದ್ರ ಸ್ಥಾನ ನಾಸಾದ ಜಾನ್ಸನ್ ಸ್ಪೇಸ್ ಸೆಂಟರ್ ಸಮೀಪದ ಹೂಸ್ಟನ್ನಲ್ಲಿ ಆಡಿ ಬೆಳೆದ ಹುಡುಗಿ ಗಗನಯಾತ್ರಿಯಾಗುವ ಕನಸು ಕಾಣುವುದು ಸಾಮಾನ್ಯ. ಆದರೆ, ಆ ಕನಸನ್ನು ಬೆಂಬತ್ತಿ ಅದನ್ನು ನನಸಾಗಿಸಿಕೊಳ್ಳುವ ಗುಣ ಸಿರಿಶಾ ಅವರಿಗೆ ಚಿಕ್ಕಂದಿನಿಂದಲೇ ಇತ್ತು. ನಾಸಾದಲ್ಲಿಗಗನಯಾತ್ರಿಯಾಗುವ ಕನಸು ಕಂಡರು. ಆದರೆ, ದೃಷ್ಟಿ ದೋಷದಿಂದಾಗಿ ಪೈಲಟ್ ಅಥವಾ ಗಗನಯಾತ್ರಿಧಿಯಾಗುವ ಅರ್ಹತೆಗಳನ್ನು ಪೂರೈಸಲು ಸಾಧ್ಯವಾಗಲಿಲ್ಲ. ಹಾಗಾಗಿ, ಏರ್ಫೋರ್ಸ್ ಮೂಲಕ ನಾಸಾ ಕದ ತಟ್ಟುವ ಕನಸು ಕೈಗೂಡಲಿಲ್ಲ. ಆದರೇನಂತೆ, ಒಂದಿಲ್ಲಒಂದು ದಿನ ಬಾಹ್ಯಾಕಾಶಕ್ಕೆ ನೆಗೆದೇ ನೆಗೆಯುತ್ತೇನೆ ಎಂಬ ಛಲದಲ್ಲಿಯಾವುದೇ ಕೊರತೆ ಇರಲಿಲ್ಲ. ಕಂಡ ಕನಸನ್ನು ನಿಜವಾಗಿಸಿಕೊಳ್ಳುವ ಯಾವುದೇ ಪ್ರಯತ್ನವನ್ನು ಅವರು ಬಿಡಲಿಲ್ಲ. ಅದಕ್ಕೀಗ ಫಲ ದೊರೆಯುತ್ತಿದೆ. ಅಗತ್ಯ ವಿದ್ಯಾಭ್ಯಾಸವನ್ನು ಪೂರೈಸಿಕೊಂಡ ಅವರೀಗ ತಮ್ಮ ಕನಸನ್ನು ನಿಜವಾಗಿಸಿಕೊಧಿಳ್ಳುತ್ತಿಧಿದ್ದಾರೆ; ಬಾಹ್ಯಾಕಾಶಕ್ಕೆ ಕಾಲಿಡುತ್ತಿರುವ ನಾಲ್ಕನೇ ಭಾರತೀಯ ಸಂಜಾತೆ ಎಂಬ ಕೀರ್ತಿಗೆ ಪಾತ್ರರಾಗುತ್ತಿದ್ದಾರೆ. </p><div class="separator" style="clear: both; text-align: center;"><a href="https://blogger.googleusercontent.com/img/b/R29vZ2xl/AVvXsEhxHnFoMKpukK6JTSTg0Ocgn-4UJmE75-gW6O5PW4k78Qcdze40pyQnYt5vfxHCBvrn3zNQd6caytWT75xWQpySHa5l1Fg3eFpMy9Coob8UnFN7nGQGJbB4T0ds_lmiFArtB4lv99gcO_Y/s397/SirishaBandla.jpg" imageanchor="1" style="clear: left; float: left; margin-bottom: 1em; margin-right: 1em;"><img border="0" data-original-height="397" data-original-width="292" height="320" src="https://blogger.googleusercontent.com/img/b/R29vZ2xl/AVvXsEhxHnFoMKpukK6JTSTg0Ocgn-4UJmE75-gW6O5PW4k78Qcdze40pyQnYt5vfxHCBvrn3zNQd6caytWT75xWQpySHa5l1Fg3eFpMy9Coob8UnFN7nGQGJbB4T0ds_lmiFArtB4lv99gcO_Y/s320/SirishaBandla.jpg" /></a></div><p>ನಾಸಾ ಗಗನಯಾತ್ರಿಯಾಗಿದ್ದ ಕಲ್ಪನಾ ಚಾವ್ಲಾಅವರು 2003ರಲ್ಲಿಕೊಲಂಬಿಯಾ ಬಾಹ್ಯಾಕಾಶ ನೌಕೆಯಲ್ಲಿಭೂಮಿಗೆ ಮರಳುವಾಗ ದುರ್ಘಟನೆ ಸಂಭವಿಸಿ ಮೃತಧಿರಾಗಿದ್ದರು. ಇದಕ್ಕೂ ಮೊದಲ ರಾಕೇಶ್ ಶರ್ಮಾ ಬಾಹ್ಯಾಕಾಶಕ್ಕೆ ತೆರಳಿದ ಮೊದಲ ಇಂಡಿಯನ್. ಮತ್ತೊಬ್ಬರು ಭಾರತೀಯ ಮೂಲದ ಸುನೀತಾ ವಿಲಯಮ್ಸ್. ಸಿರಿಶಾ ಬಾಹ್ಯಾಕಾಶಕ್ಕೆ ತಲುಪಿದರೆ ಈ ವರೆಗೆ ಭಾರತ ಮೂಲದ ನಾಲ್ವರು ಇಂಥ ಸಾಧನೆ ಮಾಡಿದ ಕೀರ್ತಿಗೆ ಪಾತ್ರರಾಗುತ್ತಾರೆ. ಸಿರಿಶಾ ಬಾಹ್ಯಾಕಾಶ ಕನಸಿಗೆ ಪ್ರೇರಣೆಯಾದವರು ರಾಕೇಶ್ ಶರ್ಮಾ! </p><p>ಬಾಹ್ಯಾಕಾಶಕ್ಕೆ ತೆರಳಲಿರುವ ವರ್ಜಿನ್ ಸಂಸ್ಥಾಪಕ ಸರ್ ರಿಚರ್ಡ್ ಬ್ರಾನ್ಸನ್ ನೇತೃತ್ವದ ತಂಡದಲ್ಲಿಒಟ್ಟು ಆರು ಜನರಿದ್ದು, ರಿಚರ್ಡ್ ಬ್ರಾನ್ಸ್ನ ಗಗನಯಾತ್ರಿ 001 ಆದರೆ ಸಿರಿಶಾ ಗಗನಯಾತ್ರಿ 004. ಇವರ ಜೊತೆಗೆ, ಮುಖ್ಯ ಗಗನಯಾತ್ರಿ ಬೆಥ್ ಮೋಸೆಸ್(ಗಗನಯಾತ್ರಿ 002), ಮುಖ್ಯ ಕಾರ್ಯಾಚರಣೆ ಎಂಜಿನಿಯರ್ ಕೊಲಿನ್ ಬೆನ್ನೆಟ್(ಗಗನಯಾತ್ರಿ 003) ಹಾಗೂ ಡೇವ್ ಮ್ಯಾಕೆ ಮತ್ತು ಮಸೂಚಿ ಇಬ್ಬರು ಪೈಲಟ್ಗಳಿದ್ದಾರೆ. ಈ ಆರು ಜನರನ್ನು ಹೊತ್ತ ವರ್ಜಿನ್ ಗ್ಯಾಲಕ್ಟಿಕ್ ವಿಎಸ್ಎಸ್ ಯೂನಿಟಿ ಗಗನ ನೌಕೆ ಭಾನುವಾರ ನ್ಯೂ ಮೆಕ್ಸಿಕೊದಿಂದ ಬಾಹ್ಯಾಕಾಶಕ್ಕೆ ಪ್ರಯಾಣ ಆರಂಭಿಸಲಿದೆ. ಇದರಲ್ಲಿಕಂಪನಿಯ ಮಾಲೀಕ ಬ್ರಾನ್ಸನ್ ಅವರದ್ದು ‘ಗ್ರಾಹಕರ ಬಾಹ್ಯಾಕಾಶ ಹಾರಾಟದ ಅನುಭವವ ಮೌಲ್ಯಮಾಪನ’ ಮಾಡುವ ಜವಾಬ್ದಾರಿಯಾದರೆ, ಏರೋನಾಟಿಕಲ್ ಎಂಜಿನಿಯರ್ ಆಗಿರುವ ಸಿರಿಶಾ ಅವರದ್ದು ‘ಸಂಶೋಧಕರ ಅನುಭವ’ವನ್ನು ಕಟ್ಟಿಕೊಡುವ ಹೊಣೆಯನ್ನ ಹೊತ್ತುಕೊಡಿದ್ದಾರೆ. ಬೆಳಕಿನ ವೇಗಕ್ಕಿಂತಲೂ ಮೂರುವರೆ ಪಟ್ಟು ವೇಗದಲ್ಲಿಈ ಸ್ಪೇಸ್ ಪ್ಲೇನ್ ಹಾರಲಿದೆ. </p><p>ಬ್ರಾನ್ಸ್ನ ಒಡೆತನದ ‘ವರ್ಜಿನ್ ಗ್ಯಾಲಕ್ಟಿಕ್’ನಲ್ಲಿ ಸರಕಾರಕ್ಕೆ ಸಂಬಂಧಿಸಿದ ವ್ಯವಹಾರ ವಿಭಾಗ ಮತ್ತು ಸಂಶೋಧನಾ ಕಾರ್ಯಚರಣೆಗಳ ವೈಸ್ ಪ್ರೆಸಿಡೆಂಟ್ ಆಗಿ ಕಾರ್ಯಧಿನಿರ್ವಧಿಹಿಸುತ್ತಿದ್ದಾರೆ. ಆಂಧ್ರದ ಗುಂಟೂರು ಜಿಲ್ಲೆಧಿಯಲ್ಲಿ1988ರಲ್ಲಿಸಿರಿಶಾ ಜನಿಸಿದರು. ತಂದೆ ಕೃಷಿ ವಿಜ್ಞಾನಿ ಡಾ.ಮುರಳಿ, ತಾಯಿ ಅನುರಾಧಾ. ಸಿರಿಶಾಗೆ ನಾಲ್ಕು ವರ್ಷವಿದ್ದಾಗ ಅವರ ಕುಟುಂಬವು ಅಮೆರಿಕದ ಹೂಸ್ಟನ್, ಟೆಕ್ಸಾಸ್ಗೆ ಸ್ಥಳಾಂತಧಿರಗೊಂಡಿತು. ಸದ್ಯ ವಾಷಿಂಗ್ಟನ್ನಲ್ಲಿವಾಸವಾಗಿದ್ದಾರೆ. ಟೆಕ್ಸಾಸ್ನ ಸ್ಥಳೀಯ ಶಾಲೆಯಲ್ಲಿಶಿಕ್ಷ ಣ ಪೂರೈಸಿದ ಬಳಿಕ 2006ರಲ್ಲಿಸಿರಿಶಾ ಪರ್ಡೂ್ಯ ವಿವಿ ಸೇರಿದರು. ಏರೋನಾಟಿಕಲ್, ಏರೋ ಸ್ಪೇಸ್ ಮತ್ತು ಆಸ್ಟ್ರೋನಾಟಿಕಲ್ ಎಂಜಿನಿಧಿಯರಿಂಗ್ ಪದವಿಯನ್ನು 2011ರಲ್ಲಿಪಡೆದುಕೊಂಡರು. 2015ರಲ್ಲಿಜಾರ್ಜಿಯಾ ವಾಷಿಂಗ್ಟನ್ ವಿಶ್ವವಿದ್ಯಾಲಯದಿಂದ ಬಿಸಿನೆಸ್ ಅಡ್ಮಿನಿಸ್ಪ್ರೇಷನ್ನಲ್ಲಿಸ್ನಾತಕೋತ್ತರ ಪದವಿಯನ್ನು ಗಳಿಸಿಕೊಂಡರು. </p><p>ಸಿರಿಶಾ ಅವರು ಶಿಕ್ಷ ಣದ ಜೊತೆ ಜತೆಗೆಯೇ 2012ರಲ್ಲಿಕಮರ್ಷಿಯಲ್ ಸ್ಪೇಸ್ಫ್ಲೈಟ್ ಫೆಡರೇಷನ್ನಲ್ಲಿಅಸೋಸಿಯೇಟ್ ಡೈರೆಕ್ಟರ್ ಆಗಿ ಮೂರು ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಬಹುಶಃ 2015ರ ನಂತರ ಅವರು ಕನಸು ಕೈಗೂಡುವ ದಿನಗಳ ಶುರುವಾದವು ಎನ್ನಬಹುದು! ಯಾಕೆಂದರೆ, 2015ರಲ್ಲಿಅವರು ವರ್ಜಿನ್ ಗ್ಯಾಲಕ್ಟಿಕ್ ಕಂಪನಿ ಸೇರಿ, 2020ರವರೆಗೂ ವ್ಯವಹಾರ ಅಭಿವೃದ್ಧಿ ಮತ್ತು ಸರಕಾರಿ ವ್ಯವಹಾರಗಳ ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸಿದರು. ಬಳಿಕ ಅವರು ವರ್ಜಿನ್ ಆರ್ಬಿಟ್ನಲ್ಲಿವಾಷಿಂಗ್ಟನ್ ಆಪರೇಷನ್ನ ಡೈರೆಕ್ಟರ್ ಆಗಿದ್ದರು. </p><p>2021ರಿಂದ ಸಿರಿಶಾ ವರ್ಜಿನ್ ಗ್ಯಾಲಕ್ಟಿಕ್ನ ಸರಕಾರ ವ್ಯವಹಾರಗಳ ಉಪಾಧ್ಯಕ್ಷ ರಾಗಿ ಬಡ್ತಿ ಪಡೆದುಕೊಂಡರು. ವರ್ಜಿನ್ ಗ್ಯಾಲಕ್ಟಿಕ್ ಎನ್ನುವುದು ರಿಚರ್ಡ್ ಬ್ರಾನ್ಸನ್ ಅವರು ಸ್ಥಾಪಿಸಿದ ಅಮೆರಿಕನ್ ಸ್ಪೇಸ್ಕ್ರಾಫ್ಟ್ ಕಂಪನಿಯಾಗಿದೆ. ಬಾಹ್ಯಾಕಾಶ ಪ್ರವಾಸೋದ್ಯಮ ಹಿನ್ನೆಲೆಯಲ್ಲಿವರ್ಜನ್ ಕಂಪನಿ ಕೈಗೊಂಡಿರುವ ಬಾಹ್ಯಾಕಾಶದಂಚಿನ ಪಯಣವು ಮೈಲುಗಲ್ಲಾಗಲಿದೆ. ಆ ಐತಿಹಾಸಿಕ ಪ್ರಯತ್ನದಲ್ಲಿಭಾರತೀಯ ಸಂಜಾತೆಯೊಬ್ಬಳು ಭಾಗಿಯಾಗುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. </p><p>ಭೂಮಿಯಿಂದ ಮೂರು ಲಕ್ಷ ಅಡಿ ಎತ್ತರದಲ್ಲಿಹಾರಾಟ ನಡೆಸಲಿರುವ ಸಿರಿಶಾಗೆ ಅಮ್ಮ ಮಾಡುವ ಊಟ ತಂಬ ಇಷ್ಟ. ಹಾಗಂತಲೇ ಅವರ ತಾಯಿ, ಫೇವರಿಟ್ ಮಟನ್ ಬಿರಿಯಾನಿ ಮಾಡಿಕೊಂಡು ಬಂದಿಧಿದ್ದರಂತೆ. ಅವರಿಗೆ ಆಂಧ್ರದ ವಿಶಿಷ್ಟ ‘ಪಪ್ಪು’(ಅನ್ನ) ತುಂಬ ಇಷ್ಟ. ಬಾಹ್ಯಾಕಾಶದಿಂದ ಮರಳಿದ ಬಳಿಕ ಅಮ್ಮನ ಕೈಯಿಂದ ಮಾಡಿದ ‘ಪಪ್ಪು’ ತಿನ್ನವ ಬಯಕೆಯನ್ಯೂ ಹೊಂದಿದ್ದಾರೆ.</p><p>ರಿಚರ್ಡ್ ಬ್ರಾನ್ಸನ್ ಬಳಿಕ ಅಮೆಜಾನ್ ಸಂಸ್ಥಾಪಕ ಜೆಫ್ ಬೆಜೂಸ್ ಕೂಡ ಜುಲೈ 20ರಂದು ಬ್ಲೂಒರಿಜಿನ್ ಕಂಪನಿಯ ನ್ಯೂ ಶೇಪರ್ಡ್ ಮೂಲಕ ಬಾಹ್ಯಾಕಾಶ ಯಾನ ಕೈಗೊಳ್ಳಲಿದ್ದಾರೆ. ಜಗತ್ತಿನ ಇಬ್ಬರು ಶ್ರೀಮಂತ ಉದ್ದಿಮೆದಾರರು ನಡೆಸುತ್ತಿರುವ ಈ ಯಾನವು ಮುಂಬರುವ ದಿನಗಳಲ್ಲಿಹೊಸ ‘ಉದ್ಯಮ ಸ್ಥಾಪನೆ’ಗೂ ಕಾರಣವಾಗಬಹುದು!</p><p>ಈ ಎಲ್ಲಕಾರಣಗಳಿಂದಾಗಿಯೇ ಖಾಸಗಿ ಬಾಹ್ಯಾಕಾಶ ಯಾನ ಹೆಚ್ಚು ಚರ್ಚಿತವಾಗುತ್ತಿದೆ ಮತ್ತು ಅಂಥ ಒಂದು ಪ್ರಯತ್ನದಲ್ಲಿಭಾರತ ಸಂಜಾತೆ ಸಿರಿಶಾ ಭಾಗಿಯಾಗುತ್ತಿದ್ದಾರೆ. ಬಾಹ್ಯಾಕಾಶಕ್ಕೆ ತೆರಳುತ್ತಿರುವ ಸಿರಿಶಾ, ತನ್ನೊಂದಿಗೆ ಭಾರತವನ್ನು ಎತ್ತರಕ್ಕೆ ಕೊಂಡೊಯ್ಯುವ ಹೆಮ್ಮೆಯ ಭಾವ ಹೊಂದಿದ್ದಾರೆ. ಇದನ್ನು ಅವರು ಸ್ವತಃ ಹೇಳಿಕೊಂಡಿದ್ದಾರೆ ಕೂಡ, ‘‘ನಾನು ಸ್ವಲ್ಪ ಭಾರತವನ್ನು ನನ್ನೊಂದಿಗೆ ಕರೆದೊಯ್ಯುತ್ತಿದ್ದೇನೆ ಎಂದು ನನಗೆ ಅನಿಸುತ್ತದೆ’’ ಎಂದು ಹೇಳಿಕೊಂಡಿದ್ದಾರೆ. </p><p>ಬಾಹ್ಯಾಕಾಶದ ಗೀಳಿನ ಹೊರತಾಗಿಯೂ ಸಿರಿಶಾ ಹಲವು ವಿಷಯಗಳಲ್ಲಿವಿಶಿಷ್ಟ ಆಸಕ್ತಿಗಳನ್ನು ಬೆಳೆಸಿಕೊಂಡಿದ್ದಾರೆ. ಹೊಸ ಹೊಸ ಸಂಗತಿಗಳಿಗೆ ಬಹಳ ಬೇಗ ಆಕರ್ಷಿತವಾಗಿವ ಅವರಿಗೆ ಬೋಟಿಂಗ್ ಮಾಡುವುದು ತುಂಬ ಇಷ್ಟ. ಇದರ ಜತೆಗೆ ಬಾಸ್ಕೆಟ್ಬಾಲ್ ಆಟವನ್ನು ನೋಡುವುದು ತುಂಬ ಎಂಜಾಯ್ ಮಾಡುತ್ತಾರೆ. ಬೆಕ್ಕು ಮತ್ತು ನಾಯಿ ಅಕ್ಕರೆ ಸಂಗಾತಿಗಳು. ನೆಚ್ಚಿನ ನಾಯಿ ‘ಚಾನ್ಸ್’ ಅವರ ಜೀವನದ ಭಾಗವೇ ಆಗಿದೆ. ಸಹೋದರಿ ಹಾಗೂ ಕುಟುಂಬದ ಸದಸ್ಯರೊಂದಿಗೆ ಎಲ್ಲಹಬ್ಬಗಳನ್ನು ಆಚರಿಸುತ್ತಾರೆ. ಪ್ರವಾಸವನ್ನು ಹೆಚ್ಚಿಗೆ ಇಷ್ಟ ಪಡುವ ಸಿರಿಶಾ ಭಾರತವು ಸೇರಿದಂತೆ ಹಲವು ದೇಶಗಳನ್ನು ಸುತ್ತಿ ವಿಶಿಷ್ಟ ಅನುಭವವನ್ನು ಪಡೆದುಕೊಂಡಿದ್ದಾರೆ. </p><p>ರಿಚರ್ಡ್ ಬ್ರಾನ್ಸನ್ ತಂಡದೊಂದಿಗೆ ಸಿರಿಶಾ ಬಾಂಡ್ಲಾ ಕೈಗೊಳ್ಳುತ್ತಿರುವ ಬಾಹ್ಯಾಕಾಶ ಯಾನ ಇತಿಹಾಸ ಸೃಷ್ಟಿಸುವುದು ಖಚಿತ. ಜೊತೆಗೆ, ಏನಾದರೂ ಹೊಸದನ್ನು ಮಾಡುವ ಹುಮ್ಮಸ್ಸು ಹೊಂದಿರುವ, ಜಗತ್ತಿನ ಪ್ರತಿಭಾವಂತ ಅಸಂಖ್ಯ ಹೆಣ್ಣುಮಕ್ಕಳಿಗೆ ಸಿರಿಶಾ ಅವರ ಈ ಜರ್ನಿ ಹುರುಪು ತುಂಬಲಿದೆ; ಕನಸುಗಳನ್ನು ಕಾಣಲು ದಾರಿ ಮಾಡಿಕೊಡಲಿದೆ. ಅಂಥದೊಂದು ಪ್ರೇರಣೆಗೆ ಕಾರಣವಾಧಿಗುತ್ತಿರುವ ಸಿರಿಶಾ ಬಾಹ್ಯಾಕಾಶ ಪಯಣಕ್ಕೆ ಗುಡ್ಲಕ್ ಹೇಳೋಣ.</p><div class="separator" style="clear: both; text-align: center;"><a href="https://blogger.googleusercontent.com/img/b/R29vZ2xl/AVvXsEiiBdqjWfWYg1IwPWGgMv-_qCea6wR6HGygxnkqwBANy5Z2gK-ON9Sln9AYkH9SOkvQiern0MFKV4APKav6C6ehI2LfkLGARtmcweEYLkKswTp4cpJH2rmZw2WiGPKsQtvD913WCf_M67w/s2515/tippar+shirisha.jpg" imageanchor="1" style="margin-left: 1em; margin-right: 1em;"><img border="0" data-original-height="2515" data-original-width="1250" height="640" src="https://blogger.googleusercontent.com/img/b/R29vZ2xl/AVvXsEiiBdqjWfWYg1IwPWGgMv-_qCea6wR6HGygxnkqwBANy5Z2gK-ON9Sln9AYkH9SOkvQiern0MFKV4APKav6C6ehI2LfkLGARtmcweEYLkKswTp4cpJH2rmZw2WiGPKsQtvD913WCf_M67w/w318-h640/tippar+shirisha.jpg" width="318" /></a></div><div class="separator" style="clear: both; text-align: center;"><br /></div><div class="separator" style="clear: both; text-align: center;"><span style="color: #f9cb9c;">ಈ ಲೇಖನವು ವಿಜಯ ಕರ್ನಾಟಕದ 2021 ಜುಲೈ 10 ಸಂಚಿಕೆಯಲ್ಲಿ ಪ್ರಕಟವಾಗಿದೆ</span></div><p><br /></p><p><br /></p>ಮಲ್ಲಿಕಾಜು೯ನ ತಿಪ್ಪಾರhttp://www.blogger.com/profile/03103441547302200527noreply@blogger.com0tag:blogger.com,1999:blog-6897854439810696140.post-41211156928152662962021-06-14T22:20:00.000+05:302021-06-14T22:20:04.064+05:30 Sunil Chhetri overtakes Lionel Messi - ಕಾಲ್ಚೆಂಡು ಮಾಂತ್ರಿಕ ಸುನಿಲ್ ಛೆತ್ರಿ<p><span style="background-color: #f4cccc;">ರಾಷ್ಟ್ರೀಯ ಫುಟ್ಬಾಲ್ ತಂಡದ ನಾಯಕ ಸುನಿಲ್ , ಅಂತಾರಾಷ್ಟ್ರೀಯ ಸಕ್ರಿಯ ಫುಟ್ಬಾಲಿಗರ ಪೈಕಿ ಅತಿ ಹೆಚ್ಚು ‘ಗೋಲ್’ ಬಾರಿಸಿದವರ ಪಟ್ಟಿಯಲ್ಲಿಮೆಸ್ಸಿಯನ್ನೇ ಮೀರಿಸಿದ್ದಾರೆ!</span></p><p><br /></p><p><b>ಮಲ್ಲಿಕಾರ್ಜುನ ತಿಪ್ಪಾರ</b><br />ಆರಾಧಿಸುವ ವ್ಯಕ್ತಿಯ ಸಾಧನೆಯನ್ನು ನೀವೇ ಹಿಂದಿಕ್ಕಿ ಮುನ್ನಡೆದರೆ ಆಗ ಆಗುವ ಆನಂದವನ್ನು ಅಭಿವ್ಯಕ್ತಿಸಲಾದೀತೆ? ಏನಿದ್ದರೂ ಆ ಅನುಭವವನ್ನು ಅನುಭವಿಸಬೇಕಷ್ಟೇ. ಇಂಥದ್ದೇ ಮನಸ್ಥಿತಿಯಲ್ಲಿದ್ದಾರೆ ಭಾರತೀಯ ಫುಟ್ಬಾಲ್ ತಂಡದ ನಾಯಕ ಸುನಿಲ್ ಛೆತ್ರಿ. </p><p>‘ಜಗತ್ತಿನ ಸಾರ್ವಕಾಲಿಕ ಶ್ರೇಷ್ಠ ಫುಟ್ಬಾಲಿಗ’ ಎಂದು ಗುರುತಿಸಿಕೊಳ್ಳುತ್ತಿರುವ ಅರ್ಜೆಂಟೀನಾದ ಆಟಗಾರ ಲಿಯೋನೆಲ್ ಮೆಸ್ಸಿ ಸಾಧನೆಯನ್ನು ನಮ್ಮ ಸುನಿಲ್ ಹಿಂದಿಕ್ಕಿದ್ದಾರೆ. ಸಕ್ರಿಯ ಫುಟ್ಬಾಲ್ ಆಟಗಾರರ ಪೈಕಿ ಅತಿ ಹೆಚ್ಚು ಅಂತಾರಾಷ್ಟ್ರೀಯ ಗೋಲ್ಗಳನ್ನು ಗಳಿಸಿದವರು ಪಟ್ಟಿಯಲ್ಲಿಪೋರ್ಚುಗಲ್ ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೋ(103) ಅಗ್ರ ಸ್ಥಾನದಲ್ಲಿದ್ದರೆ, ಲಿಯೋನೆಲ್ ಮೆಸ್ಸಿ 72 ಗೋಲುಗಳೊಂದಿಗೆ ದ್ವಿತೀಯ ಸ್ಥಾನದಲ್ಲಿದ್ದರು. ಈಗ ಭಾರತದ ಸುನಿಲ್ ಬಾಂಗ್ಲಾದೇಶದ ವಿರುದ್ಧ ಏಷ್ಯಾ ಕಪ್ ಅರ್ಹತಾ ಸುತ್ತಿನ ಪಂದ್ಯದಲ್ಲಿ2 ಗೋಲು ಬಾರಿಸಿ, ತಮ್ಮ ಗೋಲುಗಳ ಸಂಖ್ಯೆಯನ್ನು 74ಕ್ಕೆ ಹೆಚ್ಚಿಸಿಕೊಂಡು, ಮೆಸ್ಸಿ ದಾಖಲೆಯನ್ನು ಹಿಂದಿಕ್ಕಿದ್ದಾರೆ. ಈವರೆಗೆ ಅವರು 117 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ್ದಾರೆ.</p><p>ಅಂತಾರಾಷ್ಟ್ರೀಯ ಗೋಲುಗಳ ಪಟ್ಟಿಯಲ್ಲಿಮೆಸ್ಸಿಯನ್ನು ಅವರು ಹಿಂದೆ ಹಾಕುತ್ತಿದ್ದಂತೆ, ಮೆಸ್ಸಿಗಿಂತ ಯೇ ಶ್ರೇಷ್ಠ ಎಂಬ ವಾದ ಸೋಷಿಯಲ್ ಮೀಡಿಯಾಗಳಲ್ಲಿಜೋರಾಗಿತ್ತು. ಇದಕ್ಕೆಲ್ಲಉತ್ತರ ನೀಡಿರುವ ಸುನಿಲ್, ‘‘ಮೆಸ್ಸಿಯ ಅಸಂಖ್ಯ ಅಭಿಮಾನಿಗಳಲ್ಲಿನಾನೂ ಒಬ್ಬ. ನನ್ನ ಮತ್ತು ಅವರ(ಮೆಸ್ಸಿ) ಮಧ್ಯೆ ಹೋಲಿಕೆ ಸರಿಯಲ್ಲ,’’ ಎಂದಿದ್ದಾರೆ. ‘‘ಲಿಯೋನೆಲ್ ಮೆಸ್ಸಿಯನ್ನು ಭೇಟಿ ಮಾಡುವ ಅವಕಾಶ ಸಿಕ್ಕರೆ, ಕೈ ಕುಲುಕಿ ನಾನು ನಿಮ್ಮ ದೊಡ್ಡ ಅಭಿಮಾನಿ ಎಂದು ಹೇಳುವೆ,’’ ಎನ್ನುವ ಅವರಿಗೆ ಅದು ಪಕ್ಕಾ ಫ್ಯಾನ್ಬಾಯ್ ಮೊಮೆಂಟ್!</p><div class="separator" style="clear: both; text-align: center;"><a href="https://blogger.googleusercontent.com/img/b/R29vZ2xl/AVvXsEiI1pIC2XUE9ZUzV-Z0IW0M8FEoW064rjFH_u6SOFjQoSiKdeH5DzPjZMw6lJ8eNwWS4pAdOPlOIBZbzQqJgwtjD6XEXx89jY6IWfUfk8LkAJctigUBNUDmz_rtqYUuI4isy5sbRbFhJVE/s330/Sunil.jpg" imageanchor="1" style="clear: left; float: left; margin-bottom: 1em; margin-right: 1em;"><img border="0" data-original-height="330" data-original-width="220" height="400" src="https://blogger.googleusercontent.com/img/b/R29vZ2xl/AVvXsEiI1pIC2XUE9ZUzV-Z0IW0M8FEoW064rjFH_u6SOFjQoSiKdeH5DzPjZMw6lJ8eNwWS4pAdOPlOIBZbzQqJgwtjD6XEXx89jY6IWfUfk8LkAJctigUBNUDmz_rtqYUuI4isy5sbRbFhJVE/w266-h400/Sunil.jpg" width="266" /></a></div><p>ಕ್ರಿಕೆಟ್ನ್ನೇ ಉಸಿರಾಡುವ ಭಾರತದಂಥ ರಾಷ್ಟ್ರದಲ್ಲಿಫುಟ್ಬಾಲ್ ಆಟಗಾರರೊಬ್ಬರ ಈ ಸಾಧನೆಗೆ ಹೆಚ್ಚಿನ ಮಹತ್ವವಿದೆ. ಕ್ರಿಕೆಟ್ನ ಅಬ್ಬರದಲ್ಲಿಫುಟ್ಬಾಲ್ ಸೇರಿದಂತೆ ಇತರ ಆಟಗಳಿಗೆ ಪ್ರಾಧಾನ್ಯ, ಪ್ರಾಯೋಜಕತ್ವ ಸಿಗುವುದು ಕಷ್ಟ. ಹಾಗಿದ್ದೂ, ಹಲವು ಗುಂಪು ಆಟಗಾರರು ಮತ್ತು ಅಥ್ಲೀಟ್ಗಳು ದೇಶದ ಕೀರ್ತಿಯನ್ನು ಆಗಾಗ ಗಗನಕ್ಕೆ ಏರಿಸುತ್ತಲೇ ಇರುತ್ತಾರೆ. ಅಂಥ ಅಭಿಮಾನದ ಕ್ಷ ಣಕ್ಕೆ ಸುನಿಲ್ ಈಗ ಕಾರಣವಾಗಿದ್ದಾರೆ.</p><p>ದಂತಕತೆ ಬೈಚುಂಗ್ ಭುಟಿಯಾ ಬಳಿಕ ಸುನಿಲ್ ಛೆತ್ರಿ ಭಾರತೀಯ ಫುಟ್ಬಾಲ್ ನೊಗವನ್ನು ಸಮರ್ಥವಾಗಿ ಎಳೆಯುತ್ತಿದ್ದಾರೆ. ಇಂಡಿಯನ್ ಸೂಪರ್ ಲೀಗ್(ಐಸಿಎಲ್)ನಲ್ಲಿಬೆಂಗಳೂರು ಫುಟ್ಬಾಲ್ ಕ್ಲಬ್(ಬಿಎಫ್ಸಿ) ಪರವಾಗಿಯೂ ಆಡುತ್ತಿರುವ ‘ಕ್ಯಾಪ್ಟನ್ ಫೆಂಟಾಸ್ಟಿಕ್’ ಸುನೀಲ್ ಛೆತ್ರಿ ಹುಟ್ಟಿದ್ದು ಈಗಿನ ತೆಲಂಗಾಣದ ಸಿಕಂದರಾಬಾದ್ನಲ್ಲಿ1984ರ ಆಗಸ್ಟ್ 3ರಂದು. ತಂದೆ ಕೆ.ಬಿ.ಛೆತ್ರಿ, ತಾಯಿ ಸುಶೀಲಾ. ತಂದೆ ಭಾರತೀಯ ಸೇನೆಯಲ್ಲಿಎಲೆಕ್ಟ್ರಾನಿಕ್ಸ್ ಆ್ಯಂಡ್ ಮೆಕಾನಿಕಲ್ ಎಂಜಿನಿಯರ್ ಅಧಿಕಾರಿ. ಸುನಿಲ್ ಅವರು ತಂದೆ ಅವರೂ ಭಾರತೀಯ ಸೇನೆಯ ಪರವಾಗಿ ಫುಟ್ಬಾಲ್ ಆಡಿದ್ದಾರೆ. ತಾಯಿ ಸುಶೀಲಾ ಹಾಗೂ ಅವರ ಇಬ್ಬರು ಅವಳಿ ಸಹೋದರಿಯರು ನೇಪಾಳದ ಮಹಿಳಾ ರಾಷ್ಟ್ರೀಯ ಫುಟ್ಬಾಲ್ ತಂಡಕ್ಕೆ ಆಡುತ್ತಿದ್ದರು. ತಂದೆ ತಾಯಿ ಇಬ್ಬರೂ ಫುಟ್ಬಾಲ್ ಆಟಗಾರರು; ಸುನಿಲ್ಗೆ ಫುಟ್ಬಾಲ್ ರಕ್ತಗತ.</p><p>ತಂದೆ ಸೇನೆಯಲ್ಲಿಅಧಿಕಾರಿಯಾಗಿದ್ದರಿಂದಾಗಿ ಸುನಿಲ್ ಶಾಲಾ ಶಿಕ್ಷ ಣ ಒಂದೇ ರಾಜ್ಯಕ್ಕೆ ಸಿಮೀತವಾಗಲಿಲ್ಲ. ಸಿಕ್ಕಿಮ್ನ ಗ್ಯಾಂಗ್ಟಕ್ನ ಬಹಾಯಿ ಸ್ಕೂಲ್, ಪಶ್ಚಿಮ ಬಂಗಾಳದ ಡಾರ್ಜೀಲಿಂಗ್ ಬೆತ್ನೀಸ್ ಸ್ಕೂಲ್, ಕೋಲ್ಕೊತಾದ ಲೊಯೊಲಾ ಸ್ಕೂಲ್ ಮತ್ತು ದಿಲ್ಲಿಯ ಆರ್ಮಿ ಪಬ್ಲಿಕ್ ಸ್ಕೂಲ್ನಲ್ಲಿಶಾಲಾ ಶಿಕ್ಷ ಣವನ್ನು ಪೂರೈಸಿದ್ದಾರೆ. ಕೋಲ್ಕೊತಾದ ಅಶುತೋಷ ಕಾಲೇಜ್ನಲ್ಲಿಪ್ರವೇಶ ಪಡೆದು, 12ನೇ ತರಗತಿಯಲ್ಲಿಓದುತ್ತಿದ್ದಾಗಲೇ 2001ರಲ್ಲಿಮಲೇಷ್ಯಾದಲ್ಲಿಆಯೋಜಿಸಲಾಗಿದ್ದ ಏಷ್ಯನ್ ಸ್ಕೂಲ್ ಚಾಂಪಿಯನ್ಶಿಪ್ಗೆ ಭಾರತೀಯ ತಂಡಧಿವನ್ನು ಪ್ರತಿನಿಧಿಸುವ ಅವಕಾಶ ಒದಗಿ ಬಂತು. ಕಾಲೇಜು ಶಿಕ್ಷ ಣಧಿಧಿಧಿವನ್ನು ಅರ್ಧಕ್ಕೆ ಮೊಟಕುಧಿಗೊಳಿಸಧಿಬೇಕಾಧಿಯಿತು. ಮುಂದಿನ ನಾಲ್ಕೈದು ವರ್ಷದಲ್ಲಿಅವರು ಭಾರತೀಯ ರಾಷ್ಟ್ರೀಯ ಫುಟ್ಬಾಲ್ ತಂಡಕ್ಕೆ ಪ್ರವೇಶ ಪಡೆದರು. ನಂತರ ನಡೆದಿದ್ದೆಲ್ಲಇತಿಹಾಸ.</p><p>ಸುನಿಲ್ ತಮ್ಮ ಬಹುಕಾಲದ ಗೆಳತಿ ಸೋನಂ ಭಟ್ಟಾಚಾರ್ಯ ಅವರನ್ನು 2017ರಲ್ಲಿಮದುವೆಯಾದರು. ಈ ಸೋನಮ್ ಬೇರೆ ಯಾರೂ ಅಲ್ಲ. ರಾಷ್ಟ್ರೀಯ ಫುಟ್ಬಾಲ್ ತಂಡದ ಮಾಜಿ ಆಟಗಾರ, ಮೋಹನ್ ಬಗಾನ್ ತಂಡದ ದಂತಕತೆ ಸುಬ್ರತ ಭಟ್ಟಾಚಾರ್ಯ ಅವರ ಪುತ್ರಿ. ಇವರು ಛೆತ್ರಿ ಮೆಂಟರ್ ಕೂಡ. ಸುನಿಲ್ ಅವರ ಆಟ ಹಾಗೂ ವ್ಯಕ್ತಿತ್ವದ ಮೇಲೆ ಅವರ ತಾಯಿ ದಟ್ಟ ಪ್ರಭಾವ ಬೀರಿದ್ದಾರೆಂಬುದು ಅವರ ಮಾತುಗಳನ್ನು ಕೇಳಿದರೆ ಅರಿವಾಗುತ್ತದೆ. ‘‘ಆಟದ ಬಗ್ಗೆ ಹೇಳುವುದಾದರೆ ಅದು ನನ್ನ ತಂದೆ, ತಾಯಿಂದಲೇ ಆರಂಭವಾಗುತ್ತದೆ, ವಿಶೇಷವಾಗಿ ನನ್ನ ತಾಯಿ. ತಾಯಿಯೊಂದಿಗೆ ಕೇರಂ, ಚೆಸ್, ಚೀನೀಸ್ ಚೆಕರ್ಸ್ ಮತ್ತು ಇತರ ಹೊರಾಂಗಣ ಕ್ರೀಡೆಗಳನ್ನು ಆಡುವುದು ತೀರಾ ಸಾಮಾನ್ಯವಾಗಿತ್ತು. ನನಗೆ 13 ವರ್ಷವಾಗೋವರೆಗೂ ಈ ಯಾವುದೇ ಆಟದಲ್ಲೂನನ್ನ ತಾಯಿಯನ್ನು ಸೋಲಿಸಲು ನನ್ನಿಂದಾಗಲಿಲ್ಲ. ಅವರೂ ಎಂದು ಸೋಲಲು ಒಪ್ಪುತ್ತಿರಲಿಲ್ಲ. ಸೋಲು ಒಪ್ಪಿಕೊಳ್ಳದಿರುವ ಗುಣ ನನ್ನ ತಾಯಿಯಿಂದಲೇ ಬಂದಿದೆ ನನಗೂ ಬಂದಿದೆ,’’ ಎನ್ನುತ್ತಾರೆ ಅವರು. ಬೈಚುಂಗ್ ಭುಟಿಯಾ ಅವರಿಂದಲೂ ಸಾಕಷ್ಟು ಕಲಿತಿದ್ದೇನೆ. ಅವರ ಸರಳ ವ್ಯಕ್ತಿತ್ವ ತುಂಬಾ ಇಷ್ಟ ಎನ್ನುತ್ತಾರೆ ಅವರು.</p><p>ರಾಷ್ಟ್ರೀಯ ತಂಡದ ಪರವಾಗಿ ಅತಿ ಹೆಚ್ಚು ಪಂದ್ಯಗಳು ಹಾಗೂ ಗೋಲು ಬಾರಿಸಿರುವ ದಾಖಲೆಯನ್ನು ಹೊಂದಿರುವ ಸುನಿಲ್ಅವರು ತಮ್ಮ ವೃತ್ತಿಪರ ಫುಟ್ಬಾಲ್ ಆಟವನ್ನು 2002ರಲ್ಲಿಏಷ್ಯಾದ ಹಳೆಯ ಕ್ಲಬ್ಗಳಲ್ಲಿಒಂದಾಗಿರುವ ಮೋಹನ್ ಬಗಾನ್ ಕ್ಲಬ್ನೊಂದಿಗೆ ಆರಂಭಿಸಿಧಿದರು. ಬಳಿಕ ಜೆಸಿಟಿ ಕ್ಲಬ್ಗೆ ವಲಸೆ ಬಂದು, 48 ಪಂದ್ಯಗಳಲ್ಲಿ21 ಗೋಲು ಬಾರಿಸಿ ಗಮನ ಸೆಳೆದರು. 2010ರಲ್ಲಿಮೇಜರ್ ಲೀಗ್ ಸಾಕರ್ನಲ್ಲಿಕನ್ಸಾಸ್ ಸಿಟಿ ವಿಜಾರ್ಡ್ಸ್ನೊಂದಿಗೆ ಗುರುಧಿತಿಸಿಧಿಕೊಂಡರು. ಈ ಮೂಲಕ ವಿದೇಶದ ಕ್ಲಬ್ ಪರವಾಗಿ ಆಟವಾಡಿದ ಭಾರತೀಯ ಉಪಖಂಡದ ಮೂರನೇ ಆಟಗಾರ ಎನಿಸಿಕೊಂಡರು. ಅಲ್ಲಿಂದ ಹಿಂದಿರುಗಿದ ಬಳಿಕ ಚಿರಾಗ್ ಯುನೈಟೆಡ್, ಮೋಹನ್ ಬಗಾನ್ ಪರವಾಗಿ ಐ ಲೀಗ್ನಲ್ಲಿಆಡಿದರು. ಮತ್ತೆ ವಿದೇಶಕ್ಕೆ ತೆರಳಿ ಪೋರ್ಚುಗಲ್ನ ಸ್ಪೋರ್ಟಿಂಗ್ ಕ್ಲಬ್ ಸೇರಿದರು. 2005ರಲ್ಲಿಭಾರತೀಯ ರಾಷ್ಟ್ರೀಯ ಫುಟ್ಬಾಲ್ ತಂಡವನ್ನು ಸೇರಿ, ತಮ್ಮ ಮೊದಲ ಪಂದ್ಯವನ್ನು ಪಾಕಿಸ್ತಾನದ ವಿರುದ್ಧ ಆಡಿದರು. ಈ ಪಂದ್ಯದಲ್ಲಿಅವರು ತಮ್ಮ ಮೊದಲ ಅಂತಾರಾಷ್ಟ್ರೀಯ ಗೋಲು ಹೊಡೆದರು.</p><p>ಸುನಿಲ್ ಛೆತ್ರಿ ಅವರ ನೆರವಿನಿಂದಾಗಿ ಭಾರತ ತಂಡವು 2007, 2009 ಮತ್ತು 2012ರಲ್ಲಿನೆಹರು ಕಪ್ ಮತ್ತು 2011ರ ಎಸ್ಎಎಫ್ಎಫ್ ಚಾಂಪಿಯನ್ಶಿಪ್ ಗೆದ್ದುಕೊಂಡಿತು. 2008ರ ಏಷ್ಯನ್ ಫುಟ್ಬಾಲ್ ಕಾನೆಧಿಡೆರಷನ್(ಎಎಫ್ಸಿ) ಚಾಲೆಂಜ್ ಕಪ್ ಗೆಲ್ಲುವಲ್ಲಿಯೂ ಅವರ ಪಾತ್ರ ಮಹತ್ವದ್ದಾಗಿತ್ತು. ಈ ಗೆಲುವಿನಿಂದಾಗಿಯೇ ಭಾರತವು 27 ವರ್ಷಗಳ ಬಳಿಕ ಎಎಫ್ಸಿ ಏಷ್ಯನ್ ಕಪ್ ಪಂದ್ಯಾವಳಿಯಲ್ಲಿಆಡಲು ಅರ್ಹತೆ ಪಡೆದುಕೊಂಡಿತು. 2007, 2011, 2013, 2014, 2017 ಮತ್ತು 2019 ಹೀಗೆ ದಾಖಲೆಯ ಆರು ಬಾರಿ ಎಐಎಫ್ಎಫ್(ಆಲ್ ಇಂಡಿಯಾ ಫುಟ್ಬಾಲ್ ಫೆಡರೆಷನ್) ವರ್ಷದ ಆಟಗಾರ ಎಂದು ಅವರನ್ನು ಹೆಸರಿಸಲಾಗಿದೆ. 2014ರಲ್ಲಿಇವರ ನೇತೃತ್ವದಲ್ಲಿಬೆಂಗಳೂರು ಫುಟ್ಬಾಲ್ ಕ್ಲಬ್ ಚೊಚ್ಚಿಲ ಋುತುವಿನಲ್ಲಿಪ್ರಶಸ್ತಿ ಗೆದ್ದುಕೊಂಡಿತು.</p><p>ಭಾರತದಲ್ಲಿಕ್ರಿಕೆಟ್ ನಂತರ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಆಟ ಫುಟ್ಬಾಲ್. 36 ವರ್ಷದ ಸುನಿಲ್ ಭಾರಧಿತೀಯ ಫುಟ್ಬಾಲ್ ತಂಡದ ಧ್ರುವತಾರೆ. ಹೊಸ ಪೀಳಿಗೆಯ ಆಟಗಾರರಿಗೆ ಅವರು ರೋಲ್ಮಾಡೆಲ್. ಭಾರತದ ಕ್ರೀಡಾಕ್ಷೇತ್ರದ ಪ್ರಮುಖ ಪ್ರಶಸ್ತಿ ಅರ್ಜುನ್ ಅವಾರ್ಡ್ಧಿ (2011), ದೇಶದ ನಾಲ್ಕನೇ ಅತ್ಯುಚ್ಚ ನಾಗರಿಕ ಪ್ರಶಸ್ತಿ ಪದ್ಮಶ್ರೀ ಮತ್ತು ದಿಲ್ಲಿಫುಟ್ಬಾಲ್ ಅಸೋಷಿಯೇಷನ್ನ ಫುಟ್ಬಾಲ್ ರತ್ನ ಅವಾರ್ಡ್ ಸಾಧನೆಯ ಕಿರೀಟಧಿವನ್ನು ಅಲಂಕರಿಸಿವೆ. ಶಾರುಖ್ ಖಾನ್ ಮತ್ತು ಸಚಿನ್ ತೆಂಡೂಲ್ಕರ್ ಅವರನ್ನು ಇಷ್ಟಪಡುವ ಅವರಿಗೆ ಸಂಗೀತ ಕೇಳುವುದು ಸಿಕ್ಕಾಪಟ್ಟೆ ಇಷ್ಟ. ಹಾಬಿಯಾಗಿ ಕ್ರಿಕೆಟ್, ಬ್ಯಾಡ್ಮಿಂಟ್, ಟೆನ್ನಿಸ್ ಕೂಡ ಆಡುತ್ತಾರೆ. ಬೆಂಗಳೂರು ಎಫ್ಸಿ ಮೂಲಕ ಅವರು ಕನ್ನಡ ನಾಡಿಗೆ ಇನ್ನಷ್ಟು ಹತ್ತಿರವಾಗಿದ್ದೆರಂಬುದೂ ನಮಗೆ ಹೆಮ್ಮೆಯೇ ಸರಿ.</p><table align="center" cellpadding="0" cellspacing="0" class="tr-caption-container" style="margin-left: auto; margin-right: auto;"><tbody><tr><td style="text-align: center;"><a href="https://blogger.googleusercontent.com/img/b/R29vZ2xl/AVvXsEi2arO5a9Deabgjk1PN9KQw4Gm8OoS8kMNtYZkjSkfExECyPNEJrkwcesblrcbjujCPBEUhKXER-pRjtdIy_C0BjC-IbX5rEZ5pDhUtifsayoTH2A8pZcSSu6chENAhDhQAzgbfD2XZAYI/s2048/Sunil+Chhetri.jpg" imageanchor="1" style="margin-left: auto; margin-right: auto;"><img border="0" data-original-height="2048" data-original-width="1046" height="640" src="https://blogger.googleusercontent.com/img/b/R29vZ2xl/AVvXsEi2arO5a9Deabgjk1PN9KQw4Gm8OoS8kMNtYZkjSkfExECyPNEJrkwcesblrcbjujCPBEUhKXER-pRjtdIy_C0BjC-IbX5rEZ5pDhUtifsayoTH2A8pZcSSu6chENAhDhQAzgbfD2XZAYI/w326-h640/Sunil+Chhetri.jpg" width="326" /></a></td></tr><tr><td class="tr-caption" style="text-align: center;"></td></tr></tbody></table><span style="color: #cccccc;"><br /></span><div><span style="color: #cccccc;">ಈ ಲೇಖನವು ವಿಜಯ ಕರ್ನಾಟಕ ಪತ್ರಿಕೆಯ 2021ರ ಜೂನ್ 13ರ ಸಂಚಿಕೆಯಲ್ಲಿ ಪ್ರಕಟವಾಗಿದೆ.</span><br /><p><br /></p></div>ಮಲ್ಲಿಕಾಜು೯ನ ತಿಪ್ಪಾರhttp://www.blogger.com/profile/03103441547302200527noreply@blogger.com0tag:blogger.com,1999:blog-6897854439810696140.post-86616536023762739762021-06-12T21:17:00.002+05:302021-06-12T21:17:36.469+05:30Dr siddalingaiah- 'ಊರು ಕೇರಿ' ಬಿಟ್ಟು ನಡೆದ ಕವಿ ಸಿದ್ದಲಿಂಗಯ್ಯ<p><i style="background-color: #f4cccc;"> ಕವಿ ಡಾ. ಸಿದ್ದಲಿಂಗಯ್ಯ ನಿಧನದಿಂದಾಗಿ ನಮ್ಮ ನೆಲದ ಹೋರಾಟದ, ಸಾಂಸ್ಕೃತಿಕ ಚಿಂತನೆಯ ದೊಡ್ಡದೊಂದು ಸತ್ವ ನಮ್ಮೊಳಗಿಂದ ಕಳೆದುಹೋದ ಭಾವ. ನಾಡಿನೆಲ್ಲೆಡೆ ದಲಿತ ಪ್ರಜ್ಞೆ ವಿಸ್ತರಿಸಿ, ಸಾಮೂದಾಯಿಕ ಜಾಗೃತಿಯನ್ನು ತಮ್ಮ ಬಂಡಾಯ ಭಾವದ ಕವಿತೆಗಳ ಮೂಲಕವೇ ಇವರು ಅಭಿವ್ಯಕ್ತಿಸಿದ್ದರು. ಇವರ ಬರಹ, ಹೋರಾಟಗಳೆಲ್ಲವೂ ಅನುಕರಣೀಯ, ದಾರಿದೀಪ.</i></p><p><br /></p><p>ಡಾ. ಸಿದ್ದಲಿಂಗಯ್ಯ ಅವರು ದಲಿತ ಸಮುದಾಯದ ಒಳಬೇಗುದಿ, ನೋವು, ಶೋಷಣೆ, ಅಪಮಾನ, ಮಡುಗಟ್ಟಿದ ಆಕ್ರೋಶವನ್ನು ಅಭಿವ್ಯಕ್ತಿಸಲು ಬಳಸಿದ ಪದಗಳು ನಿಗಿ ನಿಗಿ ಕೆಂಡ. ಅವು ಅಷ್ಟೇ ಆಗಿದ್ದರೆ, ವ್ಯಕ್ತಿಗತ ಆಕ್ರೋಶದ ನುಡಿಗಳಾ ಗಿರುತ್ತಿದ್ದವು; ಹಾಗಾಗಲಿಲ್ಲ. ಬಂಡಾಯ, ಪ್ರತಿಭಟನೆಯ ಸತ್ವ ದೊಂದಿಗೆ ಸಾಹಿತ್ಯಿಕ ಗುಣ ಅವರ ಕವಿತೆಗಳಲ್ಲಿದ್ದುದರಿಂದ ಸಾರ್ವತ್ರಿಕ ಎನಿಸಿಕೊಂಡವು. </p><p>ಅವರ ಪ್ರಸಿದ್ಧ ಕವಿತೆ ‘ಇಕ್ರಲಾ ವದೀರ್ಲಾ...’ ಸಾಲುಗಳು ಮೇಲ್ನೋಟಕ್ಕೆ ರೋಷವನ್ನು ಅಭಿವ್ಯಕ್ತಿಸಿದರೂ ಆಳದಲ್ಲಿನೋವಿನ ನುಡಿಗಳೇ ಆಗಿವೆ. ನೋವು ಮತ್ತು ಆಕ್ರೋಶದ ಮೂಲಕವೇ ಅಭಿಧಿಧಿವ್ಯಕ್ತಿಯ ದಾರಿಯನ್ನು ಕಂಡುಕೊಂಡವರು ಅವರು. </p><p>ಬರೆದ ಪ್ರತಿ ಕವಿತೆಯೂ, ಪ್ರತಿ ಪದವೂ ಸ್ವರೂಪದಲ್ಲಿಬಂಡಾಯವನ್ನು ಪ್ರತಿನಿಧಿಸುತ್ತವೆ. ಅವರು ಸಾಹಿತ್ಯ ಕೃಷಿ ಆರಂಭಿಸಿದ ಕಾಲದ ಸಂದರ್ಭವು ಕಾವ್ಯಕ್ಕೆ ಸೂಧಿರ್ತಿಯಾಗಿತ್ತು. ಡಾ. ಸಿದ್ದಲಿಂಗಯ್ಯ ಅವರು ತಮ್ಮ ಕವಿತೆ, ನಾಟಕ, ಪ್ರಬಂಧ, ವಿಮರ್ಶೆ, ಗದ್ಯದ ಮೂಲಕ ದಲಿತರ ಪ್ರಜ್ಞೆಯನ್ನು ವಿಸ್ತರಿಸಿಧಿದರು; ಸಾಮೂದಾಯಿಕ ಜಾಗೃತಿ ಹೆಚ್ಚಿಸಿದರು. ಈ ಮೂಲಕ ನಾಡಿನ ಬಂಡಾಯ ಮತ್ತು ದಲಿತ ಸಾಹಿತ್ಯಕ್ಕೆ ಹೊಸ ಕಸುವು ತುಂಬಿದರು. ಪ್ರತಿಭಟನಾಸ್ತ್ರವನ್ನಾಗಿ ಸಾಹಿತ್ಯವನ್ನು ಬಳಸಿಕೊಂಡು ಜಾಗೃತಿಯ ದೀವಿಟಿಗೆಯನ್ನು ಮತ್ತೊಂದು ಪೀಳಿಗೆಗೆ ದಾಟಿಸಿದರು. ಕರ್ನಾಟಕದ ಮಟ್ಟಿಗೆ ದಲಿತ ಸಾಹಿತ್ಯದ ಇತಿಹಾಸವನ್ನು ಬರೆದರೆ ಅದು ಡಾ. ಸಿದ್ದಲಿಂಗಯ್ಯ ಅವರ ಸಾಹಿತ್ಯದ ಇತಿಹಾಸವೂ ಆಗುತ್ತದೆ. </p><p>ಈಗಿನ ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಮಂಚನಬೆಲೆ ಗ್ರಾಮದ ಬಡ, ಶೋಷಿತ ಕುಟುಂಬದಲ್ಲಿ1954 ಫೆಬ್ರವರಿ 3ರಂದು ಸಿದ್ದಲಿಂಗಯ್ಯ ಅವರು ಜನಿಸಿದರು. ತಂದೆ ದೇವಯ್ಯ, ತಾಯಿ ವೆಂಕಮ್ಮ. ಹಳ್ಳಿಯಲ್ಲಿಪ್ರಾಥಮಿಕ ಶಾಲೆ ಮುಗಿಸಿ ಬಂದು ಸೇರಿದ್ದು ಬೆಂಗಳೂರಿನ ಮಲ್ಲೇಶ್ವರದ ಸರಕಾರಿ ಹೈಸ್ಕೂಲ್ಗೆ. ಹಾಸ್ಟೆಲ್ನಲ್ಲಿವಾಸ್ತವ್ಯ. ಬಳಿಕ ಬೆಂಗಳೂರು ವಿವಿಯಿಂದ ಕನ್ನಡದಲ್ಲಿಎಂಎ ಸ್ನಾತಕೋತ್ತರ ಮತ್ತು ಪಿಎಚ್ಡಿ ಪದವಿ ಪಡೆದುಕೊಂಡರು. ಕವಿ ಜಿ ಎಸ್ ಶಿವರುದ್ರಪ್ಪ ಅವರು ಸಿದ್ದಲಿಂಗಯ್ಯ ಅವರನ್ನು ಸಂಶೋಧಕ ಸಹಾಯಕರನ್ನಾಗಿ ನೇಮಕ ಮಾಡಿಕೊಂಡರು. ಮುಂದೆ ಬೆಂಗಳೂರು ವಿವಿಯ ಕನ್ನಡ ಪ್ರಧ್ಯಾಪಕರಾಗಿ, ಕನ್ನಡ ವಿಭಾಗ ಮುಖ್ಯಸ್ಥರಾದರು. ಡಾ. ಅಂಬೇಡ್ಕರ್ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ನಿರ್ದೇಶಕರಾಗಿಯೂ ಕೆಲಸ ಮಾಡಿದ್ದಾರೆ. </p><div class="separator" style="clear: both; text-align: center;"><a href="https://blogger.googleusercontent.com/img/b/R29vZ2xl/AVvXsEh0H4z998vS11B4nYaarptSj2Ba9v1Yajvo9_-zYIXcvIX_eOdhcI_QeFD3z9KpXH8JK3-ogmu-D3MLiZAIi0QEsLC1RuYFXCPVgNaRmqulwLxENklc5ZnXGyRMX-N8OGxpwG_j1WZpPiQ/s417/Sidaaa.jpg" imageanchor="1" style="clear: left; float: left; margin-bottom: 1em; margin-right: 1em;"><img border="0" data-original-height="271" data-original-width="417" height="260" src="https://blogger.googleusercontent.com/img/b/R29vZ2xl/AVvXsEh0H4z998vS11B4nYaarptSj2Ba9v1Yajvo9_-zYIXcvIX_eOdhcI_QeFD3z9KpXH8JK3-ogmu-D3MLiZAIi0QEsLC1RuYFXCPVgNaRmqulwLxENklc5ZnXGyRMX-N8OGxpwG_j1WZpPiQ/w400-h260/Sidaaa.jpg" width="400" /></a></div><p>ಸಾಹಿತ್ಯ ಕೃತಿಗಳು: 1975ರಲ್ಲಿಪ್ರಕಟಗೊಂಡ ‘ಹೊಲೆ ಮಾದಿಗರ ಹಾಡು’ ಸಿದ್ದಲಿಂಗಯ್ಯರ ಮೊದಲ ಕವನ ಸಂಕಲನ. ಆ ಬಳಿಕ ಸಾವಿರಾರು ನದಿಗಳು, ಕಪ್ಪು ಕಾಡಿನ ಹಾಡು, ಮೆರವಣಿಗೆ, ನನ್ನ ಜನಗಳು ಮತ್ತು ಇತರ ಕವಿತೆಗಳು, ಆಯ್ದ ಕವನಗಳು, ಅಲ್ಲೆಕುಂತವರೆ ಕವನ ಸಂಕಲನಗಳು ಪ್ರಕಟಗೊಂಡು ಜನಮನ್ನಣೆ ಗಳಿಸಿದವು. ಏಕಲವ್ಯ(1986), ನೆಲಸಮ(1980), ಪಂಚಮ (1980) ಅವರು ರಚಿಸಿದ ನಾಟಕಗಳು. ಹಕ್ಕಿ ನೋಟ, ರಸಗಳಿಗೆಗಳು, ಎಡಬಲ, ಉರಿಕಂಡಾಯ ಅವರ ವಿಮರ್ಶಾ ಕೃತಿಗಳು. ‘ಊರು ಕೇರಿ’ ಅವರ ಸಿದ್ದಲಿಂಗಯ್ಯ ಆತ್ಮಚರಿತ್ರೆಯಾಗಿದೆ. ಇದು ಸಂಪುಟಗಳಲ್ಲಿಪ್ರಕಟವಾಗಿದೆ. ಅವತಾರಗಳು, ಸದನದಲ್ಲಿಸಿದ್ದಲಿಂಗಯ್ಯ ಭಾಗ -1, ಸದನದಲ್ಲಿಸಿದ್ದಲಿಂಗಯ್ಯ ಭಾಗ -2 ಮತ್ತು ಜನಸಂಸ್ಕೃತಿ ಅವರ ಲೇಖನ ಸಂಗ್ರಹಗಳು.</p><p><b>ಎರಡು ಬಾರಿ ಎಂಎಲ್ಸಿ</b><br />ಡಾ. ಸಿದ್ದಲಿಂಗಯ್ಯ ಅವರು 1988ರಿಂದ 1994 ಮತ್ತು 1995ರಿಂದ 2001ರ ತನಕ ಎರಡು ಅವಧಿಗೆ ಕರ್ನಾಟಕ ವಿಧಾನ ಪರಿಷತ್ ಸದಸ್ಯರಾಗಿದ್ದರು. ಈ ಅವಧಿಯಲ್ಲಿನಾಡು ನುಡಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಗಮನ ಸೆಳೆಯುವಲ್ಲಿಯಶಸ್ವಿಯಾಗಿದ್ದರು. ಜೊತೆಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮತ್ತು ಕನ್ನಡ ಪುಸ್ತಕ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಗಿಯೂ ಗಮನಾರ್ಹ ಕೆಲಸ ಮಾಡಿದ್ದಾರೆ.</p><p><b>ಇಕ್ರಲಾ ವದಿರ್ಲಾ...!</b><br />ಸಿದ್ದಲಿಂಗಯ್ಯ ಅವರ ಕವಿತೆಗಳು ಬಂಡಾಯದ ಕಹಳೆಯೂದಿ ಕ್ರಾಂತಿ ಗೀತೆಗಳು ಎನಿಸಿಧಿಕೊಂಡವು. ಆ ಪೈಕಿ ‘ಇಕ್ರಲಾ ವದೀರ್ಲಾ/ ಈ ನನ್ನ ಮಕ್ಕಳ ಚರ್ಮ ಎಬ್ರಲಾ...’, ‘ನಿನ್ನೆ ದಿನ/ ನನ್ನ ಜನ/ ಬೆಟ್ಟದಂತೆ ಬಂದರು...’, ‘ಯಾರಿಗೆ ಬಂತು, ಎಲ್ಲಿಗೆ ಬಂತು ನಲ್ವತ್ತೇಳರ ಸ್ವಾತಂತ್ರ್ಯ..’, ‘ಹಸಿವಿನಿಂದ ಸತ್ತೋರು, ಸೈಜುಗಲ್ಲುಹೊತ್ತೋರು/ ವದಿಸಿಕೊಂಡು ವರಗಿದವರು ನನ್ನ ಜನರು...’ ಕವಿತೆಗಳು ಪ್ರಮುಖವಾದವು. ಇಕ್ರಲಾ ವದೀರ್ಲಾ ಕವಿತೆಯಂತೂ ಧ್ವನಿಸುವ ಪ್ರತಿಭಟನೆ, ಬಂಡಾಯ, ಆಕ್ರೋಶದಿಂದಾಗಿ ಹೆಚ್ಚು ಜನಪ್ರಿಯವಾಗಿತ್ತು. ಇಂಥ ಕವಿತೆಗಳನ್ನು ಬರೆದಿದ್ದ ಸಿದ್ದಲಿಂಗಯ್ಯನವರು, ಆ ಬೆಟ್ಟದಲಿ ಸುಳಿದಾಡ ಬೇಡ ಗೆಳತಿ... ಎಂಬ ನವಿರು ಪ್ರೇಮಗೀತೆಯನ್ನು ಬರೆದು ಅಚ್ಚರಿ ಮೂಡಿಸಿದ್ದರು.</p><p><b>ಪ್ರಶಸ್ತಿಗಳು</b><br />ಪಂಪ, ನೃಪತುಂಗ, ಆಳ್ವಾಸ್ ನುಡಿಸಿರಿ, ನಾಡೋಜ, ಸಂದೇಶ, ಡಾ. ಅಂಬೇಡ್ಕರ್, ಜಾನಪದ ತಜ್ಞ, ರಾಜ್ಯೋತ್ಸವ ಪ್ರಶಸ್ತಿಗಳು ಅವರನ್ನು ಅರಸಿ ಬಂದಿವೆ. ಉತ್ತಮ ಚಲನಚಿತ್ರ ಗೀತ ರಚನೆಗಾಗಿ ಕರ್ನಾಟಕ ಸರಕಾರದಿಂದ ಪ್ರಶಸ್ತಿ ಕೂಡ ಬಂದಿದೆ. ಶ್ರವಣಬೆಳಗೊಳ 81ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ರಾಗಿದ್ದರು.</p><p><span style="color: #cccccc;">(2021ರ ಜೂನ್ 12ರ ವಿಜಯ ಕರ್ನಾಟಕ ವರದಿಯಲ್ಲಿ ಪ್ರಕಟವಾದ ವರದಿ)</span></p>ಮಲ್ಲಿಕಾಜು೯ನ ತಿಪ್ಪಾರhttp://www.blogger.com/profile/03103441547302200527noreply@blogger.com0tag:blogger.com,1999:blog-6897854439810696140.post-92169436013703287062021-06-03T06:00:00.007+05:302021-06-03T06:00:00.172+05:30George Fernandes- The Statesman: ಜಾರ್ಜ್... ನೀವು ಸದಾ ನೆನಪಿನಲ್ಲಿರುತ್ತೀರಿ<p><span style="background-color: #f6b26b; font-family: Tunga, sans-serif;"><b>ಕಾರ್ಮಿಕ
ಚಳವಳಿಯ ಅಗ್ರಮಾನ್ಯ ನಾಯಕರಾಗಿ, ಸಮಾಜವಾದಿ ಚಿಂತಕರಾಗಿ ಜಾರ್ಜ್ ಫರ್ನಾಂಡಿಸ್ ಅವರು ಏರಿದ ಎತ್ತರ
ಅಷ್ಟಿಷ್ಟಲ್ಲ. ರಾಜಕಾರಣಿಗಳಿಗೆ ಅವರು ರೋಲ್ ಮಾಡೆಲ್. ಜೂನ್ 3 ಜಾರ್ಜ್ ಫರ್ನಾಂಡಿಸ್ ಹುಟ್ಟಿದ
ದಿನ. ಅವರ ನೆನಪಿನಲ್ಲಿ...</b></span></p>
<p class="MsoNormal" style="mso-layout-grid-align: none; mso-pagination: none; text-autospace: none;"><span style="font-family: "Tunga","sans-serif";"><o:p> </o:p></span></p><p class="MsoNormal" style="mso-layout-grid-align: none; mso-pagination: none; text-autospace: none;"><span style="font-family: Tunga, sans-serif;"><b>- ಮಲ್ಲಿಕಾರ್ಜುನ ತಿಪ್ಪಾರ</b><br /></span><span lang="KN" style="font-family: Tunga, sans-serif;">ಹೋರಾಟದ
ಮೂಲಕವೇ ರಾಜಕೀಯ ಏಳ್ಗೆ ಕಂಡು</span><span style="font-family: Tunga, sans-serif;">,
<span lang="KN">ಜನ ಮತ್ತು ದೇಶಕ್ಕೆ ಎಷ್ಟು ಸಾಧ್ಯವೋ ಅಷ್ಟು ಒಳ್ಳೆಯದನ್ನು ಮಾಡಿದವರು ಜಾರ್ಜ್
ಫರ್ನಾಂಡಿಸ್. ಅವರನ್ನು ಕೇವಲ ರಾಜಕಾರಣಿ ಎಂಬ ಒಂದೇ ಪದದಲ್ಲಿ ಹಿಡಿದಿಡಲು ಸಾಧ್ಯವಿಲ್ಲ. ಹೋರಾಟಗಾರ</span>,
<span lang="KN">ಕಾರ್ಮಿಕ ಮುಖಂಡ</span>, <span lang="KN">ಪ್ರಖರ ಸಮಾಜವಾದಿ</span>, <span lang="KN">ಸಮತಾವಾದಿ</span>, <span lang="KN">ಅತ್ಯುತ್ತಮ ವಾಗ್ಮಿ... ಹೀಗೆ ಏನೆಲ್ಲ ವಿಶೇಷಣಗಳನ್ನು
ಅವರಿಗೆ ಧಾರಾಳವಾಗಿ ನೀಡಬಹುದು. ಅವರು ಎಂದೂ ತಾವು ನಂಬಿದ ಸಿದ್ಧಾಂತಕ್ಕೆ ತಿಲಾಂಜಲಿ ಇಡಲಿಲ್ಲ. ರಾಜಕೀಯದಲ್ಲಿ
ಏರಬೇಕಾದ ಎಲ್ಲ ಮಜಲುಗಳನ್ನು ಏರಿದರು</span>; <span lang="KN">ಯಾವುದಕ್ಕೂ ರಾಜಿಯಾಗಲಿಲ್ಲ. ಅಧಿಕಾರ
ಸುಖ ಅವರನ್ನು ಆಲಸಿಯಾಗಿ ಮಾಡಲಿಲ್ಲ</span>; <span lang="KN">ಗರ್ವಿಷ್ಠರನ್ನಾಗಿಸಲಿಲ್ಲ. ಅಧಿಕಾರ
ಬರುವ ಮುಂಚೆ ಹೇಗಿದ್ದರೋ</span>, <span lang="KN">ಕುರ್ಚಿಯಲ್ಲಿ ಕುಳಿತಾಗಲೂ ಹಾಗೆಯೇ ಇದ್ದರು.
ತಾವು ಏರಿದ ಪ್ರತಿ ಹುದ್ದೆಯಲ್ಲೂ ತಮ್ಮದೇ ಆದ ಛಾಪು ಮೂಡಿಸಿದರು.</span></span></p>
<p class="MsoNormal" style="mso-layout-grid-align: none; mso-pagination: none; text-autospace: none;"><span lang="KN" style="font-family: "Tunga","sans-serif";">ಅವರ
ಉಡುಗೆ ತೊಡುಗೆ ಸಿಂಪಲ್. ಒಂದು ಖಾದಿ ಪ್ಯಾಂಟ್</span><span style="font-family: "Tunga","sans-serif";">;
<span lang="KN">ಇಸ್ತ್ರಿಯಾಗದ ಖಾದಿ ಜುಬ್ಬಾ</span>, <span lang="KN">ಇಷ್ಟೆ ಅವರ ತೊಡುಗೆ. ಬಿಳಿ
ಕೂದಲು ತುಂಬಿದ ತಲೆ</span>, <span lang="KN">ಮುಖಕ್ಕೊಂದು ಅಗಲವಾದ ಕನ್ನಡಕ ಅವರ ಒಟ್ಟು ವ್ಯಕ್ತಿತ್ವಕ್ಕೆ
ಒಂದು ಗಂಭೀರತೆಯನ್ನು ತಂದುಕೊಟ್ಟಿತ್ತು. ಆದರೆ</span>, <span lang="KN">ಅವರ ಜೀವನ ಮಾತ್ರ ಸರಳವಾಗಿರಲಿಲ್ಲ.
ಮೂಲತಃ ಕರ್ನಾಟಕದವರಾದರೂ ಇಡೀ ಭಾರತವೇ ಅವರ ಹೋರಾಟದ ಅಂಗಣವಾಗಿತ್ತು. ಅವರು ಕಾಲಿಟ್ಟ ಕಡೆ ಹೋರಾಟದ
ಹೆಜ್ಜೆಗಳು ಮೂಡುತ್ತಿದ್ದವು. ಮಂಗಳೂರು</span>, <span lang="KN">ಬೆಂಗಳೂರು</span>, <span lang="KN">ಮುಂಬಯಿ</span>, <span lang="KN">ಬಿಹಾರ</span>, <span lang="KN">ದಿಲ್ಲಿ... ಹೀಗೆ
ಅವರ ಕಾರ್ಯಕ್ಷೇತ್ರ ಹರಡಿಕೊಳ್ಳುತ್ತದೆ. ಸಮಾಜದ ಕಟ್ಟಕಡೆಯ ವ್ಯಕ್ತಿಯ ಬಗ್ಗೆ ಯಾವಾಗಲೂ ಚಿಂತನೆಗಳಿರುತ್ತಿದ್ದವು.
ಕಾರ್ಮಿಕರ ಶ್ರೇಯೋಭಿವೃದ್ಧಿಯೇ ಮೂಲಮಂತ್ರವಾಗಿತ್ತು. ಅವರ ಹಿತರಕ್ಷ ಣೆಗೆ ಎಂಥ ಹೋರಾಟಕ್ಕೂ ಅಣಿಯಾಗುತ್ತಿದ್ದರು.
ಒಮ್ಮೆ ಅವರ ಮುಷ್ಕರ ಕರೆಗೆ ಇಡೀ ದೇಶವೇ ಸ್ತಬ್ಧವಾಗಿತ್ತು</span>; <span lang="KN">ಅಂಥ ಧೀಃಶಕ್ತಿ
ಅವರಲ್ಲಿತ್ತು. ಆದರೆ</span>, <span lang="KN">ಅವರ ಕೊನೆಯ ದಿನಗಳು ಮಾತ್ರ ಯಾತನಾಮಯವಾಗಿದ್ದವು
ಎಂಬುದು ಅವರನ್ನು ಇಷ್ಟಪಡೋರಿಗೆ ಅರಗಿಸಿಕೊಳ್ಳಲಾಗದ ಸಂಗತಿ.<o:p></o:p></span></span></p>
<p class="MsoNormal" style="mso-layout-grid-align: none; mso-pagination: none; text-autospace: none;"><span lang="KN" style="font-family: "Tunga","sans-serif";"><b>ಕನ್ನಡದ
ಕುವರ</b><br />
ಜಾರ್ಜ್ ಫರ್ನಾಂಡಿಸ್ ಕನ್ನಡದವರು ಎಂಬುದು ಬಹಳಷ್ಟು ಜನರಿಗೆ ಗೊತ್ತಿಲ್ಲ. ಅವರು ಕರಾವಳಿಯ ಮಂಗಳೂರಿನವರು.
</span><span style="mso-ascii-font-family: Calibri; mso-bidi-font-family: Calibri; mso-hansi-font-family: Calibri;">1930 </span><span lang="KN" style="font-family: "Tunga","sans-serif";">ಜೂನ್ </span><span style="mso-ascii-font-family: Calibri; mso-bidi-font-family: Calibri; mso-hansi-font-family: Calibri;">3</span><span lang="KN" style="font-family: "Tunga","sans-serif";">ರಂದು ಮಂಗಳೂರಿನ ಕ್ಯಾಥೋಲಿಕ್ ಕುಟುಂಬದಲ್ಲಿ
ಜನಿಸಿದರು. ತಂದೆ ಜೋಸೆಫ್ ಫರ್ನಾಂಡಿಸ್</span><span style="font-family: "Tunga","sans-serif";">,
<span lang="KN">ತಾಯಿ ಅಲಿಶಾ ಮಾರ್ಥಾ ಫರ್ನಾಂಡಿಸ್. ಇವರಿಗೆ ಆರು ಮಕ್ಕಳು. ಜಾರ್ಜ್ ಹಿರಿಯರು.
ಕುಟುಂಬದಲ್ಲಿ ಜಾರ್ಜ್ ಅವರನ್ನು ಪ್ರೀತಿಯಿಂದ ಎಲ್ಲರೂ ಜರ್ರಿ ಎಂದು ಕರೆಯುತ್ತಿದ್ದರು. ಜೋಸೆಫ್
ಅವರದ್ದು ಕ್ರಿಶ್ಚಿಯನ್ ಸಂಪ್ರದಾಯಸ್ಥ ಕುಟುಂಬ. ಹಾಗಾಗಿ</span>, <span lang="KN">ಹಿರಿಯ ಮಗ ಪಾದ್ರಿಯಾಗಲಿ
ಎಂದು ಅವರನ್ನು ಪಾದ್ರಿ ತರಬೇತಿಗೆ ಬೆಂಗಳೂರಿಗೆ ಕಳುಹಿಸಿಕೊಟ್ಟರು. ಆದರೆ ಜಾರ್ಜ್ ಪಾದ್ರಿಯಾಗಲಿಲ್ಲ.
ಬೆಂಗಳೂರು ಬಿಟ್ಟು ಸೀದಾ ಮುಂಬೈ(ಅಂದಿನ ಬಾಂಬೆ)ಗೆ ತೆರಳಿದರು. ಆಗ ಅವರಿಗೆ ಕೇವಲ </span></span><span style="mso-ascii-font-family: Calibri; mso-bidi-font-family: Calibri; mso-hansi-font-family: Calibri;">19 </span><span lang="KN" style="font-family: "Tunga","sans-serif";">ವರ್ಷ.
ಮುಂಬೈನ ಬೀದಿಗಳಲ್ಲಿ ಅಲೆಯುತ್ತಿದ್ದ ಜಾರ್ಜ್ಗೆ ಪರಿಚಯದವರು ಯಾರೂ ಇರಲಿಲ್ಲ. ಎಷ್ಟೋ ಸಾರಿ ಅವರು
ಸಮುದ್ರ ತೀರ ಮತ್ತು ರಸ್ತೆಗಳಲ್ಲಿ ಮಲಗುತ್ತಿದ್ದರು. ಸ್ಥಳೀಯ ಪತ್ರಿಕೆಯೊಂದರಲ್ಲಿ ಕೆಲಸ ಸಿಗುವವರೆಗೂ
ಕೈಗೆ ಸಿಕ್ಕ ಕೆಲಸಗಳನ್ನು ಮಾಡಿದರು. ಮುಂಬೈಯಲ್ಲಿ ಅವರದ್ದು ಅಕ್ಷರಶಃ ಕಷ್ಟದ ಜೀವನವೇ ಆಗಿತ್ತು.</span></p><p class="MsoNormal" style="mso-layout-grid-align: none; mso-pagination: none; text-autospace: none;"><table cellpadding="0" cellspacing="0" class="tr-caption-container" style="float: left;"><tbody><tr><td style="text-align: center;"><a href="https://blogger.googleusercontent.com/img/b/R29vZ2xl/AVvXsEhHCYIlBxhCE6hudwVUQJeSjOSNCGSdeqDi-KTyfUwvFk34OHDEJnvWgZhj-pYR-JnCKIvXvkTGpKLeLoNybAVuTZkMoLvo-vK6sBRkXZTyIVVE2f7PDH2vBSCm_rnYAWUp_SeRMiTmUr0/s1200/George.jpg" imageanchor="1" style="clear: left; margin-bottom: 1em; margin-left: auto; margin-right: auto;"><img border="0" data-original-height="1200" data-original-width="800" height="400" src="https://blogger.googleusercontent.com/img/b/R29vZ2xl/AVvXsEhHCYIlBxhCE6hudwVUQJeSjOSNCGSdeqDi-KTyfUwvFk34OHDEJnvWgZhj-pYR-JnCKIvXvkTGpKLeLoNybAVuTZkMoLvo-vK6sBRkXZTyIVVE2f7PDH2vBSCm_rnYAWUp_SeRMiTmUr0/w266-h400/George.jpg" width="266" /></a></td></tr><tr><td class="tr-caption" style="text-align: center;">ಜಾರ್ಜ್ ಫರ್ನಾಂಡಿಸ್ (ಚಿತ್ರ ಕೃಪೆ-ಇಂಟರ್ನೆಟ್)</td></tr></tbody></table><span style="font-family: Tunga, sans-serif;"><b>ಲೋಹಿಯಾ
ಮತ್ತು ಡಿಮೆಲ್ಲೊ ಸಂಪರ್ಕ<br /></b></span><span lang="KN" style="font-family: Tunga, sans-serif;">ಮುಂಬೈ ಜೀವನದಲ್ಲಿ ಹೋರಾಟ ಬದುಕು ನಡೆಸುತ್ತಿರುವಾಗಲೇ ಸಮಾಜವಾದಿ ನಾಯಕ ರಾಮಮನೋಹರ ಲೋಹಿಯಾ ಮತ್ತು
ಹಿರಿಯ ಕಾರ್ಮಿಕ ಮುಖಂಡ ಡಿ</span><span style="font-family: Tunga, sans-serif;">'<span lang="KN">ಮೆಲ್ಲೊ ಅವರ ಸಂಪರ್ಕ ಜಾರ್ಜ್ಗೆ ದೊರಕಿತು. ಇಲ್ಲಿಂದಲೇ ಜಾರ್ಜ್ ಅವರ ಹೋರಾಟದ ಮಜಲುಗಳು
ಆರಂಭವಾದವು. ಅದು ಕಾರ್ಮಿಕ ಚಳವಳಿಕ ಉಚ್ಛ್ರಾಯ ಕಾಲ. ಹಾಗಾಗಿ</span>, <span lang="KN">ನಿಧಾನವಾಗಿ
ಕಾರ್ಮಿಕ ಚಳವಳಿಯಲ್ಲಿ ಜಾರ್ಜ್ ಅಗ್ರಗಣ್ಯ ನಾಯಕರಾಗಿ ರೂಪುಗೊಂಡರು. ಅಲ್ಲಿಂದ ಅವರು </span></span>1961<span lang="KN" style="font-family: Tunga, sans-serif;">ರಲ್ಲಿ
ಬಾಂಬೆ ಮುನ್ಸಿಪಲ್ ಕಾರ್ಪೊರೇಷನ್ಗೆ ಸ್ಪರ್ಧಿಸಿ ಆಯ್ಕೆಯಾದರು. ಹೋರಾಟದ ಜತೆಗೆ ರಾಜಕೀಯ ಜೀವನವನ್ನು
ಆರಂಭಿಸಿದರು.</span></p>
<p class="MsoNormal" style="mso-layout-grid-align: none; mso-pagination: none; text-autospace: none;"><span lang="KN" style="font-family: "Tunga","sans-serif";"><b>ಜಾರ್ಜ್
ದಿ ಜೈಂಟ್ ಕಿಲ್ಲರ್!</b><br />
ಕಾರ್ಪೊರೇಷನ್ಗೆ ಆಯ್ಕೆಯಾದ ಆರು ವರ್ಷದ ಬಳಿಕ ಜಾರ್ಜ್ ಲೋಕಸಭೆ ಸ್ಪರ್ಧೆಗೆ ಮುಂದಾದರು. ದಕ್ಷಿಣ
ಮುಂಬೈ ಕ್ಷೇತ್ರದಿಂದ ಚುನಾವಣೆ ಸ್ಪರ್ಧಿಸಿದರು. ಅವರ ಎದುರಾಳಿ</span><span style="font-family: "Tunga","sans-serif";">, <span lang="KN">ಮಹಾರಾಷ್ಟ್ರದ ಅಂದಿನ ಪ್ರಖ್ಯಾತ
ಕಾಂಗ್ರೆಸ್ ನಾಯಕ ಎಸ್.ಕೆ.ಪಾಟೀಲ್. ಈ ಚುನಾವಣೆಯಲ್ಲಿ ಜಾರ್ಜ್ ಅವರನ್ನು ಯಾರೂ ಗಂಭೀರವಾಗಿ ಪರಿಗಣಿಸಿರಲಿಲ್ಲ.
ಆದರೆ</span>, <span lang="KN">ಫಲಿತಾಂಶ ಪ್ರಕಟವಾದಾಗ ಮಾತ್ರ ಎಲ್ಲರಿಗೂ ಆಶ್ಚರ್ಯವಾಗಿತ್ತು. ಪ್ರಭಾವಿ
ಪಾಟೀಲ್ರನ್ನು ಸೋಲಿಸಿ ಜಾರ್ಜ್ ಆಯ್ಕೆಯಾಗಿದ್ದರು. ಅಲ್ಲಿಂದಲೇ ಅವರಿಗೆ </span>The Giant
Killer<span lang="KN"> ಎಂಬ ಹೆಸರು ಬಂತು. ಇಲ್ಲಿಂದ ಅವರು ರಾಜಕೀಯದಲ್ಲಿ ಹಿಂದಿರುಗಿ ನೋಡಲಿಲ್ಲ.
ಹೋರಾಟದ ಜತೆಗೆ ರಾಜಕೀಯದಲ್ಲಿ ಒಂದೊಂದೇ ಮೆಟ್ಟಿಲು ಮೇಲೇರಿದರು.<o:p></o:p></span></span></p>
<p class="MsoNormal" style="mso-layout-grid-align: none; mso-pagination: none; text-autospace: none;"><span style="font-family: Tunga, sans-serif;"><b>ಭೂಗತ
ನಾಯಕ</b><br /></span>1974<span lang="KN" style="font-family: Tunga, sans-serif;">ರ
ಹೊತ್ತಿಗೆ ದೇಶದಲ್ಲಿ ಜಾರ್ಜ್ ಜನಪ್ರಿಯ ಹೆಸರಾಗಿತ್ತು. ಈ ಅವಧಿಯಲ್ಲಿ ಅವರು ರೇಲ್ವೆ ಕಾರ್ಮಿಕರ
ಮುಷ್ಕರಕ್ಕೆ ಕರೆ ಕೊಟ್ಟಿದ್ದರು. ಅದು ಎಷ್ಟು ಪರಿಣಾಮಕಾರಿ ಕರೆಯಾಗಿತ್ತು ಎಂದರೆ</span><span style="font-family: Tunga, sans-serif;">, <span lang="KN">ಇಡೀ ದೇಶ ಅಕ್ಷ ರಶಃ ಸ್ತಬ್ಧವಾಗಿತ್ತು.
ಈ ಮುಷ್ಕರಕ್ಕೆ ದೇಶದ ಎಲ್ಲ ಉದ್ಯಮ ವಲಯಗಳಿಂದ ಬೆಂಬಲ ದೊರಕಿತ್ತು. ಮೂರು ವಾರಗಳ ಈ ಮುಷ್ಕರ ಅಂದಿನ
ಪ್ರಧಾನಿ ಇಂದಿರಾ ಗಾಂಧಿಯಲ್ಲೂ ಅಭದ್ರತೆ ಹುಟ್ಟು ಹಾಕಿತ್ತು ಎಂದರೆ ಅದರ ಪರಿಣಾವನ್ನು ಯಾರಾದರೂ ಊಹಿಸಬಹುದು.
ಇದೇ ಸಂದರ್ಭದಲ್ಲಿ</span> '<span lang="KN">ಲೋಕ ನಾಯಕ</span>' <span lang="KN">ಜಯಪ್ರಕಾಶ್
ನಾರಾಯಣ್ ಅವರ ಮೂವ್ಮೆಂಟ್ ಫಾರ್ ಚೇಂಜ್ ಚಳವಳಿಯಲ್ಲಿ ವಿದ್ಯಾರ್ಥಿಗಳು ಬೀದಿಗಿಳಿದಿದ್ದರು.
ಆಂತರಿಕವಾಗಿ ಹೆಚ್ಚುತ್ತಿದ್ದ ಸರಕಾರ ವಿರೋಧಿ ಧೋರಣೆ ಮತ್ತೊಂದೆಡೆ ಕೋರ್ಟ್ನಲ್ಲಾದ ಹಿನ್ನಡೆಯನ್ನು
ಅರಗಿಸಿಕೊಳ್ಳಲಾಗದ ಇಂದಿರಾ ಗಾಂಧಿ </span></span>1975<span lang="KN" style="font-family: Tunga, sans-serif;">ರಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಿದರು.
ಪ್ರತಿಪಕ್ಷ ನಾಯಕರು ಜೈಲು ಪಾಲಾದರು. ಆಗ ಜಾರ್ಜ್ ಮತ್ತು ಅವರ ಜತೆಗಿದ್ದವರು ಭೂಗತರಾದರು. ಈ ಸಂದರ್ಭದಲ್ಲಿ
ಬರೋಡಾದಿಂದ ಡೈನಮೈಟ್ ತಂದು ಸರಕಾರಿ ಕಚೇರಿಗಳನ್ನು ಧ್ವಂಸಗೊಳಿಸುವ ಯೋಜನೆ ಜಾರ್ಜ್ ಅವರದ್ದಾಗಿತ್ತು.
ಆದರೆ</span><span style="font-family: Tunga, sans-serif;">, <span lang="KN">ಕೋಲ್ಕತಾ(ಅಂದಿನ
ಕಲ್ಕತ್ತಾ)ದಲ್ಲಿ ಸೆರೆ ಸಿಕ್ಕರು. ಡೈನಮೈಟ್ ಕದ್ದ ಆರೋಪವನ್ನು ಜಾರ್ಜ್ ಮೇಲೆ ಹಾಕಿ ಅವರನ್ನು </span></span>9 <span lang="KN" style="font-family: Tunga, sans-serif;">ತಿಂಗಳು
ಕಾಲ ತಿಹಾರ್ ಜೈಲಿನಲ್ಲಿ ಇಡಲಾಯಿತು. ಈ ಪ್ರಕರಣವೇ ಮುಂದೆ</span><span style="font-family: Tunga, sans-serif;"> '<span lang="KN">ಬರೋಡಾ ಡೈನಮೈಟ್</span>' <span lang="KN">ಎಂದು
ಪ್ರಖ್ಯಾತವಾಯಿತು. ಜೈಲಿನಲ್ಲಿದ್ದುಕೊಂಡೇ ಬಿಹಾರದ ಮುಜಾಫರ್ನಗರ ಕ್ಷೇತ್ರದಿಂದ ಲೋಕಸಭೆಗೆ ಸ್ಪರ್ಧಿಸಿ</span>,
<span lang="KN">ಮೂರು ಲಕ್ಷ ಮತಗಳ ಅಂತರದಿಂದ ಗೆದ್ದರು. ಜಾರ್ಜ್ ಅವರನ್ನು ಬಂಧಿಸಿದ ಕ್ಷ ಣದಲ್ಲಿ
ಅವರ ಕೋಳ ತೊಟ್ಟ ಕೈ ಮೇಲತ್ತಿದ ಫೋಟೋ ಈ ಗೆಲುವಿನಲ್ಲಿ ಭಾರಿ ಪ್ರಭಾವ ಬೀರಿತ್ತು!</span></span></p>
<p class="MsoNormal" style="mso-layout-grid-align: none; mso-pagination: none; text-autospace: none;"><span style="font-family: Tunga, sans-serif;"><b>ಸಚಿವರಾದರು
ಜಾರ್ಜ್</b><br /></span><span style="font-family: Tunga, sans-serif;">ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯ ಸೋಲು ಕಂಡಿತು. ಇದೇ ಮೊದಲ ಬಾರಿಗೆ
ಮೊರಾರ್ಜಿ ದೇಸಾಯಿ ನೇತೃತ್ವದ ಪ್ರಥಮ ಕಾಂಗ್ರೆಸ್ಸೇತರ ಸರಕಾರ ಕೇಂದ್ರದಲ್ಲಿ ಅಸ್ತಿತ್ವಕ್ಕೆ ಬಂತು.
ತುರ್ತು ಪರಿಸ್ಥಿತಿಯಲ್ಲಿ ಜೈಲುಪಾಲಾಗಿದ್ದ ನಾಯಕರೆಲ್ಲ ಬಿಡುಗಡೆಗೊಂಡರು. ಜಾರ್ಜ್ ಅವರು ದೇಸಾಯಿ
ಸಂಪುಟದಲ್ಲಿ ಕೈಗಾರಿಕಾ ಸಚಿವರಾದರು. ಬಂಡವಾಳ ಹೂಡಿಕೆ ನಿಯಮಗಳನ್ನು ಉಲ್ಲಂಘಿಸಿದ್ದ ಅಮೆರಿಕ ಐಬಿಎಂ
ಮತ್ತು ಕೊಕಾಕೋಲಾ ಕಂಪನಿಗಳ ವಿರುದ್ಧ ಕ್ರಮ ಕೈಗೊಂಡ ಫಲವಾಗಿ ಅವರೆಡೂ ಕಂಪನಿಗಳು ಭಾರತದಿಂದ ಕಾಲು
ಕೀಳಬೇಕಾಯಿತು. ಮುಂದೆ ಜನತಾ ದಳ ನಾಯಕ ವಿ.ಪಿ. ಸಿಂಗ್ ನೇತೃತ್ವದ ಸರಕಾರದಲ್ಲಿ ರೇಲ್ವೆ ಸಚಿವರಾಗಿ
ಅನೇಕ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡರು. ಪಶ್ಚಿಮ ಕರಾವಳಿಯನ್ನು ಸಂಪರ್ಕಿಸುವ ಕೊಂಕಣ ರೇಲ್ವೆ
ಯೋಜನೆ ಅನುಷ್ಠಾನಗೊಳಿಸಿದರು.</span></p>
<p class="MsoNormal" style="mso-layout-grid-align: none; mso-pagination: none; text-autospace: none;"><span lang="KN" style="font-family: "Tunga","sans-serif";"><b>ಬಿಜೆಪಿಯ
ಸಖ್ಯ</b></span><span style="font-family: "Tunga","sans-serif";"><br />
<span lang="KN">ಜೆಪಿ ಚಳವಳಿಯಲ್ಲಿ ಉದಯಿಸಿದ ನಾಯಕರ ಜನತಾ ಪರಿವಾರ ದಿಕ್ಕಾಪಾಲಾದ ಸಂದರ್ಭ ಅದು.
ರಾಜಕೀಯ ಅನಿವಾರ್ಯತೆ ಮತ್ತು ಕಾಂಗ್ರೆಸ್ ವಿರೋಧಿ ನೀತಿಯ ಪ್ರಮುಖ ಧ್ಯೇಯದಿಂದಾಗಿ ಜಾರ್ಜ್ ಅವರು
ಅನಿವಾರ್ಯವಾಗಿ ಬಿಜೆಪಿಯ ಅಟಲ್ ಬಿಹಾರಿ ವಾಜಪೇಯಿ</span>, <span lang="KN">ಎಲ್.ಕೆ.ಆಡ್ವಾಣಿ
ಜತೆ ಕೈ ಜೋಡಿಸಬೇಕಾಯಿತು. ವಿಶೇಷ ಎಂದರೆ</span>, <span lang="KN">ಆರ್ಎಸ್ಎಸ್ ನೀತಿಯನ್ನು ಜಾರ್ಜ್
ಟೀಕಿಸುತ್ತಿದ್ದರು. ಹಾಗಿದ್ದೂ ಅವರು ಬಿಜೆಪಿ ಜತೆ ಹೆಜ್ಜೆ ಹಾಕಬೇಕಾಯಿತು. ಜತೆಗೆ ಬಿಜೆಪಿ ನೇತೃತ್ವದ
ನ್ಯಾಷನಲ್ ಡೆಮಾಕ್ರಟಿಕ್ ಅಲಯನ್ಸ್-ಎನ್ಡಿಎ ಸಂಚಾಲಕರಾದರು. ಯಾರೂ ನಿರೀಕ್ಷಿಸದ ರೀತಿಯಲ್ಲಿ </span></span><span style="mso-ascii-font-family: Calibri; mso-bidi-font-family: Calibri; mso-hansi-font-family: Calibri;">1998</span><span lang="KN" style="font-family: "Tunga","sans-serif";">ರಲ್ಲಿ
ಎನ್ಡಿಎ ಕೇಂದ್ರದಲ್ಲಿ ಅಧಿಕಾರಕ್ಕೆ ಬಂತು. ಆಗ ಜಾರ್ಜ್ ಅವರಿಗೆ ರಕ್ಷಣಾ ಸಚಿವ ಸ್ಥಾನ ತಾನಾಗಿಯೇ
ಒಲಿದು ಬಂತು. ವಿಪರ್ಯಾಸ ಎಂದರೆ</span><span style="font-family: "Tunga","sans-serif";">,
<span lang="KN">ಜಾರ್ಜ್ ತಮ್ಮ ಬದುಕಿನುದ್ದಕ್ಕೂ ಅಣ್ವಸ್ತ್ರಗಳನ್ನು ವಿರೋಧಿಸುತ್ತಲೇ ಬಂದಿದ್ದರು.
ಆದರೆ</span>, <span lang="KN">ಅದೇ ಜಾರ್ಜ್ ಅವರು ಅಣ್ವಸ್ತ್ರ ಪರೀಕ್ಷೆಯಲ್ಲಿ ವಾಜಪೇಯಿ ಜತೆ ಪಾಲುದಾರರಾದರು!<o:p></o:p></span></span></p>
<p class="MsoNormal" style="mso-layout-grid-align: none; mso-pagination: none; text-autospace: none;"><span style="font-family: Tunga, sans-serif;"><b>ಬೆನ್ನತ್ತಿದ
ವಿವಾದಗಳು</b><br /></span><span lang="KN" style="font-family: Tunga, sans-serif;">ಜಾರ್ಜ್ ಅವರು ರಕ್ಷಣಾ ಸಚಿವರಾಗಿದ್ದಾಗಲೇ ಬಾರಾಕ್ ಕ್ಷಿಪಣಿ ಮತ್ತು ತೆಹಲ್ಕಾ ಹಗರಣಗಳು ಬೆನ್ನು
ಹತ್ತಿದವು. ಇದಕ್ಕಾಗಿ ಅವರು ರಕ್ಷಣಾ ಸಚಿವ ಸ್ಥಾನವನ್ನು ತೊರೆಯಬೇಕಾಯಿತು. ಮುಂದೆ ತನಿಖೆ ವೇಳೆ ಜಾರ್ಜ್
ಅವರು ನಿರ್ದೋಷಿ ಎಂದು ಸಾಬೀತಾದ ಮೇಲೆ ಮತ್ತೆ ರಕ್ಷ ಣಾ ಸಚಿವರಾದರು. ಆದರೆ</span><span style="font-family: Tunga, sans-serif;">, <span lang="KN">ಕಾರ್ಗಿಲ್ ಯುದ್ಧದ ವೇಳೆ ಖರೀದಿಸಲಾದ
ಶವಪೆಟ್ಟಿಗೆಗಳ ಹಗರಣ ಮತ್ತೆ ಜಾರ್ಜ್ ತಲೆಯೇರಿತು. ತೀರಾ ಇತ್ತೀಚೆಗಷ್ಟೇ ಈ ಹಗರಣದಲ್ಲೂ ಜಾರ್ಜ್
ಅವರು ನಿರ್ದೋಷಿ ಎಂದು ಸಾಬೀತಾಯಿತಾದರೂ</span>, <span lang="KN">ಅದನ್ನು ಕೇಳಿ ಸಂತೋಷ ಪಡುವ ಸ್ಥಿತಿಯಲ್ಲಿ
ಜಾರ್ಜ್ ಇರಲಿಲ್ಲ. ಸಾಮಾನ್ಯವಾಗಿ ಭಾರತದ ಮಗ್ಗಲು ಮುಳ್ಳು ಪಾಕಿಸ್ತಾನ ಎಂದು ಬಹುತೇಕ ರಾಜಕಾರಣಿಗಳು
ಹೇಳುತ್ತಾರೆ. ಆದರೆ</span>, <span lang="KN">ಜಾರ್ಜ್ ಮಾತ್ರ ಭಾರತದ ನಂ.</span></span>1<span lang="KN" style="font-family: Tunga, sans-serif;">ವೈರಿ ಪಾಕಿಸ್ತಾನವಲ್ಲ
ಚೀನಾ ಎಂದು ಬಹಿರಂಗವಾಗಿ ಹೇಳುವ ಮೂಲಕ ಭಾರಿ ಸಂಚಲನಕ್ಕೆ ಕಾರಣವಾಗಿದ್ದರು.</span></p><p class="MsoNormal" style="mso-layout-grid-align: none; mso-pagination: none; text-autospace: none;"></p><div class="separator" style="clear: both; text-align: center;"><a href="https://blogger.googleusercontent.com/img/b/R29vZ2xl/AVvXsEjLXibATT_RWNrtp9s-Md4XO1SvPYiX6o8ypitfTvDZlzZ4U1sPiWP-6nPTWPovWrtXTqC3eNp7eYYuDNMkeMRmW0hOlG6TVRi4jAH5_o4YGfbzJH5HqZVOzX9y9NlQ7BywdmHdLFCLWDU/s930/George_Fernandes.jpg" imageanchor="1" style="clear: left; float: left; margin-bottom: 1em; margin-right: 1em;"><img border="0" data-original-height="930" data-original-width="722" height="400" src="https://blogger.googleusercontent.com/img/b/R29vZ2xl/AVvXsEjLXibATT_RWNrtp9s-Md4XO1SvPYiX6o8ypitfTvDZlzZ4U1sPiWP-6nPTWPovWrtXTqC3eNp7eYYuDNMkeMRmW0hOlG6TVRi4jAH5_o4YGfbzJH5HqZVOzX9y9NlQ7BywdmHdLFCLWDU/w310-h400/George_Fernandes.jpg" width="310" /></a></div><b style="font-family: Tunga, sans-serif;">ನೇಪಥ್ಯಕ್ಕೆ
ಜಾರಿದ ಜಾರ್ಜ್</b><span style="font-family: Tunga, sans-serif;"><b><br /></b></span>2004<span lang="KN" style="font-family: Tunga, sans-serif;">ರಲ್ಲಿ
ವಾಜಪೇಯಿ ನೇತೃತ್ವದ ಎನ್ಡಿಎ ಮರಳಿ ಅಧಿಕಾರ ಹಿಡಿಯಲಿದೆ ಎಂದೇ ಭಾವಿಸಲಾಗಿತ್ತು. ಆದರೆ</span><span style="font-family: Tunga, sans-serif;">, <span lang="KN">ಯಾರೂ ನಿರೀಕ್ಷಿಸದ ರೀತಿಯಲ್ಲಿ
ಎನ್ಡಿಎ ಸೋಲು ಕಂಡು ಕಾಂಗ್ರೆಸ್ ನೇತೃತ್ವದ ಯುಪಿಎ ಅಧಿಕಾರಕ್ಕೆ ಬಂತು. ಈ ಅವಧಿಯಲ್ಲಿ ದೇಶದ ಇಬ್ಬರು
ಪ್ರಮುಖ ನಾಯಕರು ನೇಪಥ್ಯಕ್ಕೆ ಜಾರುವಂತಾಯಿತು. ಒಬ್ಬರು ಪ್ರಧಾನಿಯಾಗಿದ್ದ ಅಟಲ್ ಬಿಹಾರಿ ವಾಜಪೇಯಿ</span>,
<span lang="KN">ಮತ್ತೊಬ್ಬರು ಜಾರ್ಜ್. ನಂತರ ಅವರಿಗೆ ಅಲ್ಜೈಮರ್ ಕಾಯಿಲೆ ಉಲ್ಬಣಗೊಂಡು ಸಂಪೂರ್ಣವಾಗಿ
ಸಾರ್ವಜನಿಕ ಜೀವನದಿಂದ ಮರೆಯಾಗಬೇಕಾಯಿತು.</span></span><p></p>
<p class="MsoNormal" style="mso-layout-grid-align: none; mso-pagination: none; text-autospace: none;"><span style="font-family: Tunga, sans-serif;"><b>ಮರಳಿ
ಬಾರದ ಲೋಕಕ್ಕೆ</b><br /></span><span lang="KN" style="font-family: Tunga, sans-serif;">ಜಾರ್ಜ್ ಅದ್ಭುತ ಮಾತುಗಾರರು. ಅವರು ಭಾಷಣಕ್ಕೆ ನಿಂತರೆ ಇಡೀ ಜನಸಮೂಹ ತದೇಕ ಚಿತ್ತದಿಂದ ಆಲಿಸುತ್ತಿತ್ತು.
ಸಂಸತ್ತಿನಲ್ಲಿ ಮಾತನಾಡಲು ಆರಂಭಿಸಿದರೆ ಇಡೀ ಸಂಸತ್ತೇ ಕಿವಿಯಾಗುತ್ತಿತ್ತು. ಕೊಂಕಣಿ</span><span style="font-family: Tunga, sans-serif;">, <span lang="KN">ಕನ್ನಡ</span>, <span lang="KN">ಇಂಗ್ಲಿಷ್</span>, <span lang="KN">ಹಿಂದಿ</span>, <span lang="KN">ಮರಾಠಿ</span>,
<span lang="KN">ತುಳು</span>, <span lang="KN">ತಮಿಳು</span>, <span lang="KN">ಉರ್ದು ಸೇರಿದಂತೆ
</span></span>10 <span lang="KN" style="font-family: Tunga, sans-serif;">ಭಾಷೆಗಳಲ್ಲಿ ಜಾರ್ಜ್ ನಿರರ್ಗಳವಾಗಿ ಮಾತನಾಡುತ್ತಿದ್ದರು. ಪ್ರಖರ ಸಮಾಜವಾದಿಯಾಗಿದ್ದ
ಜಾರ್ಜ್ ತುಂಬ ದಿನಗಳ ಕಾಲ ಅನಾರೋಗ್ಯಪೀಡಿತರಾಗಿ ಕೊನೆಯ ದಿನಗಳನ್ನು ಅತ್ಯಂತ ಯಾತನೆಯಲ್ಲಿ ಕಳೆದರು.
</span><span style="font-family: Tunga, sans-serif;">2019<span lang="KN">ರ ಜನವರಿ
29ರಂದು ಇಹಲೋಕ ತ್ಯಜಿಸಿದರು.</span></span></p>
<p class="MsoNormal" style="mso-layout-grid-align: none; mso-pagination: none; text-autospace: none;"><span style="font-family: Tunga, sans-serif;"><b>ವಿಯೆಟ್ನಾಮಿಯಾಗಿ
ಹುಟ್ಟುವೆ!</b><br /></span>''<span lang="KN" style="font-family: Tunga, sans-serif;">ಒಂದು
ವೇಳೆ ಪುನರ್ಜನ್ಮ ಎಂಬುದಿದ್ದರೆ ನಾನು ವಿಯೆಟ್ನಾಮಿಯಾಗಿ(ವಿಯೆಟ್ನಾಮ್ ಪ್ರಜೆ) ಹುಟ್ಟುವೆ</span><span style="font-family: Tunga, sans-serif;">,'' <span lang="KN">ಎಂದು ಜಾರ್ಜ್ ಒಮ್ಮೆ ಹೇಳಿದ್ದರು.
ಒಂದುವರೆ ದಶಕದ ಹಿಂದೆ ಬೆಂಗಳೂರಲ್ಲಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಈ ಬಯಕೆಯನ್ನು ಅವರು ಹೊರಹಾಕಿದ್ದರು.
</span>''<span lang="KN">ವಿಯೆಟ್ನಾಮಿ ಜನರು ತಮ್ಮ ಬದ್ಧತೆಯನ್ನು ಪೂರೈಸಲು ಸಾಯಲು ಸಿದ್ಧರಾಗಿರುತ್ತಾರೆ.
ಅಂಥ ಶಿಸ್ತು ಅವರಲ್ಲಿರುತ್ತದೆ. ನಾನು ವಿಯೆಟ್ನಾಮ್ನ ಅಭಿಮಾನಿ</span>,'' <span lang="KN">ಎಂದು
ಹೇಳಿದ್ದರು.</span></span></p>ಮಲ್ಲಿಕಾಜು೯ನ ತಿಪ್ಪಾರhttp://www.blogger.com/profile/03103441547302200527noreply@blogger.com0tag:blogger.com,1999:blog-6897854439810696140.post-75452022544812159052021-05-23T09:00:00.006+05:302021-05-23T09:00:00.197+05:30Remembering Sundarlal Bahuguna: ಪರಿಸರದ ಪರಮಾಪ್ತ ಸುಂದರಲಾಲ್ ಬಹುಗುಣ<p><b style="background-color: #cfe2f3;"><span lang="KN" style="font-family: Tunga, sans-serif; font-size: 14pt;">ಪರಿಸರ ರಕ್ಷಣೆಯಲ್ಲೂ ಗಾಂಧಿ
ಮಾರ್ಗದ ಮೂಲಕವೇ ಯಶಸ್ಸು ಕಂಡ ಸುಂದರಲಾಲ್</span><span style="font-family: Tunga, sans-serif; font-size: 14pt;"> <span lang="KN">ಬಹುಗುಣ ಅವರು ಚಿಪ್ಕೋ ಚಳವಳಿಯ ಮೂಲಕ
ಜಗದ್ವಿಖ್ಯಾತರಾದವರು</span>.</span></b></p>
<p class="MsoNormal" style="line-height: normal; margin-bottom: .0001pt; margin-bottom: 0in; mso-layout-grid-align: none; text-autospace: none;"><span style="font-family: "Tunga","sans-serif"; font-size: 14.0pt;"><o:p><br /></o:p></span></p><p class="MsoNormal" style="line-height: normal; margin-bottom: .0001pt; margin-bottom: 0in; mso-layout-grid-align: none; text-autospace: none;"><span style="font-size: 14pt;"><o:p><b style="font-family: Tunga, sans-serif;">- ಮಲ್ಲಿಕಾರ್ಜುನ ತಿಪ್ಪಾರ</b><span style="font-family: Tunga, sans-serif;"> <br /></span></o:p></span><span lang="KN" style="font-family: Tunga, sans-serif; font-size: 14pt;">ಈಗಿನ ತಲೆಮಾರಿಗೆ ಸುಂದರಲಾಲ್</span><span style="font-family: Tunga, sans-serif; font-size: 14pt;"> <span lang="KN">ಬಹುಗುಣ
ಹೆಸರು ಪರಿಚಿತವಲ್ಲ</span>. 70<span lang="KN">ರಿಂದ</span> 90<span lang="KN">ರ ದಶಕದವರೆಗಿನ
ಯುವ ಸಮುದಾಯಕ್ಕೆ</span>, <span lang="KN">ಪರಿಸರ ಪ್ರೇಮಿಗಳಿಗೆ ಸುಂದರಲಾಲ್</span> <span lang="KN">ಬಹುಗುಣ ಎಂಬುದು ಕೇವಲ ಹೆಸರಾಗಿರಲಿಲ್ಲ</span>. <span lang="KN">ಅದು ಪ್ರೇರಕ ಮಂತ್ರ</span>;
<span lang="KN">ಹೋರಾಟದ ದೀವಟಿಗೆ</span>. <span lang="KN">ಪರಿಸರವಾದಿ</span>, <span lang="KN">ಪರಿಸರ ಚಳವಳಿಗಾರ ಮಾತ್ರವಲ್ಲದೇ ಅವರ ಹೆಸರಿನಂತೆ ಬಹುಗುಣ ಅವರು</span>, <span lang="KN">ಸ್ವಾತಂತ್ರ್ಯ ಚಳವಳಿಯಿಂದ ಹಿಡಿದು ಮಹಿಳಾ ಹಕ್ಕುಗಳ ಹೋರಾಟದವರೆಗೂ ವ್ಯಕ್ತಿತ್ವ ಆವರಿಸಿಕೊಂಡಿದೆ</span>.
<span lang="KN">ನಮಗೆ ನಿಮಗೆಲ್ಲ ಅವರು ಪರಿಚತರಾಗಿದ್ದೇ</span> ‘<span lang="KN">ಚಿಪ್ಕೋ ಚಳವಳಿ</span>’<span lang="KN">ಯ ಮೂಲಕ</span>. <span lang="KN">ಗಾಂಧಿ ಮಾರ್ಗದ ಮೂಲಕವೇ ಪರಿಸರ ರಕ್ಷಣೆಯನ್ನೂ ಮಾಡಬಹುದು
ಎಂಬುದನ್ನು ತೋರಿಸಿಕೊಟ್ಟವರು</span>.</span><span style="font-family: Tunga, sans-serif; font-size: 14pt;"> </span></p>
<p class="MsoNormal" style="line-height: normal; margin-bottom: .0001pt; margin-bottom: 0in; mso-layout-grid-align: none; text-autospace: none;"><span lang="KN" style="font-family: "Tunga","sans-serif"; font-size: 14.0pt;">ಬಹುಶಃ ಹಿಮಾಲಯದ ತಪ್ಪಲಿನಲ್ಲಿಇಂದು
ಅರಣ್ಯ ಉಳಿದಿರಲು ಬಹುಗುಣ ರೂಪಿಸಿದ ಚಳವಳಿಯೇ ಕಾರಣ</span><span style="font-family: "Tunga","sans-serif"; font-size: 14.0pt;">. <span lang="KN">ಇಲ್ಲದಿದ್ದರೆ ಅಭಿವೃದ್ಧಿಯ ಹೆಸರಲ್ಲಿ
ಹಿಮಾಲಯದ ತಪ್ಪಲಿನ ಕಾಡು ನಾಶವಾಗಿ</span>, <span lang="KN">ಬೋಳು ದಿನ್ನೆಯಾಗಿರುತ್ತಿತ್ತು</span>.
<span lang="KN">ಇತ್ತೀಚಿನ ವರ್ಷಗಳಲ್ಲಿಹೆಚ್ಚು ಪ್ರಚಲಿತವಾಗುತ್ತಿರುವ ಗಂಗಾ ಉಳಿಸಿ ಚಳವಳಿಗೂ ಬಹುಗುಣ
ಅವರು ಪ್ರೇರಕ ಎಂಬುದನ್ನು ಬಹುತೇಕ ಪರಿಸರ ಹೋರಾಟಗಾರರು ಒಪ್ಪಿಕೊಳ್ಳುತ್ತಾರೆ</span>. <o:p></o:p></span></p><p class="MsoNormal" style="line-height: normal; margin-bottom: .0001pt; margin-bottom: 0in; mso-layout-grid-align: none; text-autospace: none;"></p><div class="separator" style="clear: both; text-align: center;"><a href="https://blogger.googleusercontent.com/img/b/R29vZ2xl/AVvXsEhbIQnLCefXsD6tMrb0an8xhVovlZYlMwwdHaypJ2wFSmugKdzAHlzw36vYKSmUTbtXwHSM0uXWEaWQi4JeUSOzz9i3m0WVCwcvQeIxZjyxMXJpcFkzQ3_3BIPasT6TzkbVYLCjpuXnV6g/s696/Sunder.jpeg" imageanchor="1" style="clear: left; float: left; margin-bottom: 1em; margin-right: 1em;"><img border="0" data-original-height="392" data-original-width="696" height="225" src="https://blogger.googleusercontent.com/img/b/R29vZ2xl/AVvXsEhbIQnLCefXsD6tMrb0an8xhVovlZYlMwwdHaypJ2wFSmugKdzAHlzw36vYKSmUTbtXwHSM0uXWEaWQi4JeUSOzz9i3m0WVCwcvQeIxZjyxMXJpcFkzQ3_3BIPasT6TzkbVYLCjpuXnV6g/w400-h225/Sunder.jpeg" width="400" /></a></div><span style="font-family: Tunga, sans-serif; font-size: 14pt;"><o:p> </o:p></span><span lang="KN" style="font-family: Tunga, sans-serif; font-size: 14pt;">ಅರಣ್ಯ ಗುತ್ತಿಗೆದಾರರು ನಡೆಸುತ್ತಿದ್ದ
ಅರಣ್ಯ ನಾಶ ತಪ್ಪಿಸುವುದಕ್ಕಾಗಿಯೇ ಸುಂದರಲಾಲ್</span><span style="font-family: Tunga, sans-serif; font-size: 14pt;"> <span lang="KN">ಬಹುಗುಣ ನೇತೃತ್ವದಲ್ಲಿ</span>
1974<span lang="KN">ರ ಮಾರ್ಚ್</span> 26<span lang="KN">ರಂದು ಉತ್ತರ ಪ್ರದೇಶದಲ್ಲಿ ಮೊದಲಿಗೆ
ಚಿಪ್ಕೋ ಚಳವಳಿ ಆರಂಭವಾಯಿತು</span>. <span lang="KN">ಅಂದಿನ ಉತ್ತರ ಪ್ರದೇಶದ ಅರಣ್ಯದ ಒಂದಿಷ್ಟು
ಭಾಗವನ್ನು ಕಡಿಯಲು ಗುತ್ತಿಗೆದಾರರಿಗೆ ಅನುಮತಿ ನೀಡಲಾಯಿತು</span>. <span lang="KN">ಆಗ ಅಲಕನಂದಾ
ಕಣಿವೆಯ ಮೇಲ್ಭಾಗದ ಮಂಡಲ್</span> <span lang="KN">ಹಳ್ಳಿಯಲ್ಲಿ ಜನರು ಮರ ಕಡಿಯುವುದನ್ನು ಪ್ರತಿಭಟಿಸಿದರು</span>.
<span lang="KN">ಹಾಗೆ</span>, <span lang="KN">ಚಿಪ್ಕೋ ಚಳವಳಿ ಆರಂಭವಾಯಿತು</span>. <span lang="KN">ಅದಕ್ಕೆ ಬಹುಗುಣ ನಾಯಕತ್ವವನ್ನು ವಹಿಸಿ</span>, <span lang="KN">ವಿಶ್ವವ್ಯಾಪಿ ಮಾನ್ಯತೆ</span><span lang="KN">ಯನ್ನು ದೊರಕಿಸಿಕೊಟ್ಟರು</span>. <span lang="KN">ಹಿಂದಿ ಭಾಷೆಯಲ್ಲಿ </span>‘<span lang="KN">ಚಿಪ್ಕೋ</span>’ <span lang="KN">ಅಂದರೆ</span> ‘<span lang="KN">ಅಪ್ಪಿಕೊಳ್ಳು</span>’
<span lang="KN">ಎಂಬರ್ಥವಿದೆ</span>. <span lang="KN">ಮರಗಳನ್ನು ಕಡಿಯಲು ಮುಂದಾದಾಗ ಚಳವಳಿ ನಿರತರು
ಮರಗಳನ್ನು ತಬ್ಬಿಕೊಂಡು ಅವುಗಳ ರಕ್ಷ ಣೆಗೆ ಮುಂದಾದರು</span>. <span lang="KN">ಈ ಚಳವಳಿ ಆ ನಂತರ
ಜನರ ಚಳವಳಿಯಾಯಿತು</span>; <span lang="KN">ರೈತರ ಚಳವಳಿಯಾಯಿತು</span>; <span lang="KN">ಯುವ
ಜನತೆಯ ಚಳವಳಿಯಾಯಿತು</span>. <span lang="KN">ಚಿಪ್ಕೋ ಚಳವಳಿಯ ವ್ಯಾಪಕತೆ ಹೆಚ್ಚುತ್ತಾ ಹೋದಂತೆ
ಬಹುಗುಣ ಅವರ ಪರಿಸರ ಕಾಳಜಿ ಸಂದೇಶಗಳು</span>, <span lang="KN">ಗಾಂಧಿ ಹಾದಿಯ ಹೋರಾಟ ಜನರನ್ನು
ಸೆಳೆಯಿತು</span>. <span lang="KN">ಚಿಪ್ಕೋ ಚಳವಳಿ ಮತ್ತು ಪರಿಸರ ಹೋರಾಟಕ್ಕೆ ಬಹುಗುಣ ಅವರ ಅನನ್ಯ
ಕೊಡುಗೆ ಎಂದರೆ</span>, <span lang="KN">ಅವರು ಚಳವಳಿಗೆ ರೂಪಿಸಿದ </span></span><span style="font-family: Arial, sans-serif; font-size: 8pt; letter-spacing: -0.1pt;">Ecology is permanent economy</span><span lang="KN" style="font-family: Tunga, sans-serif; font-size: 14pt;"> ಸ್ಲೋಗನ್</span><span style="font-family: Tunga, sans-serif; font-size: 14pt;">. <span lang="KN">ಹಾಗೆ
ನೋಡಿದರೆ</span>, <span lang="KN">ಇದು ಕೇವಲ ಘೋಷಣೆಯಲ್ಲ</span>. <span lang="KN">ಅವರ ಹೋರಾಟದ
ತಿರುಳು</span>; <span lang="KN">ಪ್ರತಿಪಾದಿಸಿದ ಫಿಲಾಸಫಿ</span>.</span><p></p>
<p class="MsoNormal" style="line-height: normal; margin-bottom: .0001pt; margin-bottom: 0in; mso-layout-grid-align: none; text-autospace: none;"><span lang="KN" style="font-family: "Tunga","sans-serif"; font-size: 14.0pt;">ಚಿಪ್ಕೋ ಚಳವಳಿ ಭಾಗವಾಗಿ
ಬಹುಗುಣ ಅವರು</span><span style="font-family: "Tunga","sans-serif"; font-size: 14.0pt;">,
<span lang="KN">ಅಂದಿನ ಉತ್ತರ ಪ್ರದೇಶದ ಹಿಮಾಲಯದ ವ್ಯಾಪ್ತಿಯ ಹಳ್ಳಿಹಳ್ಳಿಗಳಿಗೆ ನಡೆದುಕೊಂಡೇ ಹೋಗಿ
ಜನರನ್ನು ಜಾಗೃತಗೊಳಿಸಿದರು</span>. 1981<span lang="KN">ರಿಂದ</span> 1983<span lang="KN">ರ
ಅವಧಿಯಲ್ಲಿ ಹಿಮಾಲಯದ ಸುಮಾರು</span> 5000 <span lang="KN">ಕಿ</span>.<span lang="KN">ಮೀ</span>.
<span lang="KN">ಕಾಲ್ನಡಿಗೆಯಲ್ಲಿ ಪ್ರವಾಸ ಮಾಡಿದರು</span>. <span lang="KN">ಚಳವಳಿಗೆ ಸ್ಥಳೀಯರಿಂದ
ದೊಡ್ಡ ಮಟ್ಟದ ಬೆಂಬಲ ಪಡೆ</span><span lang="KN">ದರು</span>. <span lang="KN">ಇದರ ಪರಿಣಾಮ
ಅಂದಿನ ಪ್ರಧಾನಿ ಇಂದಿರಾ ಗಾಂಧಿ ಹಿಮಾಲಯ ವ್ಯಾಪ್ತಿಯ ಕಾಡು ನಾಶಕ್ಕೆ ಅಂಕುಶ ಹಾಕುವ ಕಾನೂನನ್ನು ಜಾರಿಗೆ
ತರಬೇಕಾ</span><span lang="KN">ಯಿತು</span>. <span lang="KN">ಇಲ್ಲಿಂದ ಭಾರತದ ಪರಿಸರ ಹೋರಾಟಕ್ಕೆ
ಬಹುಗುಣ ಅವರು ಮುಖವಾದರು</span>, <span lang="KN">ವಕ್ತಾರರೆನಿಸಿಕೊಂಡರು</span>.<span style="mso-spacerun: yes;"> </span><o:p></o:p></span></p>
<p class="MsoNormal" style="line-height: normal; margin-bottom: .0001pt; margin-bottom: 0in; mso-layout-grid-align: none; text-autospace: none;"><span lang="KN" style="font-family: "Tunga","sans-serif"; font-size: 14.0pt;">ದಶಕಗಳವರೆಗೆ ನಡೆದ ತೆಹ್ರಿ
ಡ್ಯಾಮ್</span><span style="font-family: "Tunga","sans-serif"; font-size: 14.0pt;"> <span lang="KN">ವಿರೋಧಿ ಹೋರಾಟಕ್ಕೆ ಬಹುಗುಣ ಚಾಲಕಶಕ್ತಿಯಾಗಿದ್ದರು</span>. <span lang="KN">ಈ ಡ್ಯಾಮ್</span>
<span lang="KN">ನಿರ್ಮಾಣ ವಿರೋಧಿಸಿ ಹಲವು ಬಾರಿ ಸತ್ಯಾಗ್ರಹ ಕೈಗೊಂಡರು</span>. <span lang="KN">ಉತ್ತರಾಖಂಡದಲ್ಲಿ ಹರಿಯುವ ಭಾಗಿರಥಿ ನದಿಗೆ ತೆಹ್ರಿ ಎಂಬ ಹಳ್ಳಿಯ ಸಮೀಪ ಡ್ಯಾಮ್</span>
<span lang="KN">ನಿರ್ಮಾಣ ಮಾಡಲಾಗುತ್ತಿತ್ತು</span>. <span lang="KN">ಈ ಡ್ಯಾಮ್</span><span lang="KN">ನಿಂದ ಪರಿಸರದ ಮೇಲಾಗುವ ದುಷ್ಪರಿಣಾಮದ ಬಗ್ಗೆ ಬಹುಗುಣ ಜಾಗೃತಿ ಮೂಡಿಸಿದರು</span>. <span lang="KN">ಆಡಳಿತ ಶಕ್ತಿಗಳು ಹೋರಾಟಕ್ಕೆ ಬೆಲೆ ನೀಡದೇ ಇದ್ದಾಗ ಸತ್ಯಾಗ್ರಹಗಳನ್ನು ಕೈಗೊಂಡರು</span>.
<o:p></o:p></span></p>
<p class="MsoNormal" style="line-height: normal; margin-bottom: .0001pt; margin-bottom: 0in; mso-layout-grid-align: none; text-autospace: none;"><span style="font-family: "Tunga","sans-serif"; font-size: 14.0pt;">1995<span lang="KN">ರಲ್ಲಿ ಬಹುಗುಣ ಅವರು ಭಾಗಿರಥಿ
ನದಿಯ ದಂಡೆಯಲ್ಲಿ </span>45 <span lang="KN">ದಿನಗಳ ಉಪವಾಸ ಸತ್ಯಾಗ್ರಹ ನಡೆಸಿದರು</span>. <span lang="KN">ಅಂದಿನ ಪ್ರಧಾನಿ ಪಿ</span>.<span lang="KN">ವಿ</span>.<span lang="KN"> ನರಸಿಂಹರಾವ್</span>
<span lang="KN">ಡ್ಯಾಮ್</span><span lang="KN">ಗೆ ಸಂಬಂಧಿಸಿ ಪರಿಶೀಲನಾ ಸಮಿತಿ ನೇಮಕ ಮಾಡಿದ
ನಂತರವೇ ತಮ್ಮ ಸತ್ಯಾಗ್ರಹವನ್ನು ಹಿಂತೆಗೆದುಕೊಂಡರು</span>. <span lang="KN">ಇಷ್ಟಾಗಿಯೂ ಪ್ರಗತಿ
ಕಾಣದ ಹಿನ್ನೆಲೆಯಲ್ಲಿ ಮತ್ತೆ ದಿಲ್ಲಿಯ ರಾಜಘಾಟ್</span><span lang="KN">ನಲ್ಲಿ ಗಾಂಧಿ ಸಮಾಧಿ
ಬಳಿ</span> 74 <span lang="KN">ದಿನ ಉಪವಾಸ ಸತ್ಯಾಗ್ರಹ ಕೈಗೊಂಡರು</span>. <span lang="KN">ಆಗ
ಪ್ರಧಾನಿಯಾಗಿದ್ದವರು ಎಚ್</span>.<span lang="KN">ಡಿ</span>.<span lang="KN">ದೇವೇಗೌಡ</span>.
<span lang="KN">ಯೋಜನೆಯ ಬಗ್ಗೆ ಪರಿಶೀಲಿಸುವ ವಾಗ್ದಾನವನ್ನು ದೇವೇಗೌಡರು ನೀಡಿದ ಬಳಿಕ ಬಹುಗುಣ ಸತ್ಯಾಗ್ರಹವನ್ನು
ಅಂತ್ಯಗೊಳಿಸಿದ್ದರು</span>. <span lang="KN">ಡ್ಯಾಮ್</span> <span lang="KN">ನಿರ್ಮಾಣವೇನೂ
ಸ್ಥಗಿತಗೊಳ್ಳಲಿಲ್ಲ</span>. <span lang="KN">ಈ ಪ್ರಕರಣ ಸ್ಥಳೀಯ ನ್ಯಾಯಾಲಯ ಮತ್ತು ಸುಪ್ರೀಂ ಕೋರ್ಟ್</span><span lang="KN">ನಲ್ಲಿ ದಶಕಗಳ ಕಾಲ ನಡೆದು</span>, 2001<span lang="KN">ರಲ್ಲಿ ಡ್ಯಾಮ್</span> <span lang="KN">ನಿರ್ಮಾಣವು ಪುನರಾರಂಭವಾಯಿತು</span>. <span lang="KN">ಇಷ್ಟಾದರೂ ಬಹುಗುಣ ಹೋರಾಟವನ್ನು
ಕೈಬಿಡಲಿಲ್ಲ</span>. <span lang="KN">ಅವರನ್ನು</span> 2004<span lang="KN">ರಲ್ಲಿ ಡೆಹ್ರಾಡೂನ್</span><span lang="KN">ಗೆ ಸ್ಥಳಾಂತರಿಸಲಾಯಿತು</span>. <o:p></o:p></span></p>
<p class="MsoNormal" style="line-height: normal; margin-bottom: .0001pt; margin-bottom: 0in; mso-layout-grid-align: none; text-autospace: none;"><span lang="KN" style="font-family: "Tunga","sans-serif"; font-size: 14.0pt;">ಬಹುಗುಣ ಅವರು ಹಿಮಾಲಯ ಜನರ
ಬದುಕನ್ನು ರಕ್ಷಿಸಲು ಕಂಕಣಬದ್ಧರಾಗಿದ್ದರು</span><span style="font-family: "Tunga","sans-serif"; font-size: 14.0pt;">. <span lang="KN">ವಿಶೇಷವಾಗಿ ಬೆಟ್ಟಗಳಲ್ಲಿ ದುಡಿಯುವ
ಮಹಿಳೆಯರ ಹಕ್ಕುಗಳ ಪರವಾಗಿದ್ದರು</span>. <span lang="KN">ಪರಿಸರ ಹೋರಾಟದ ಜತೆಗೆ ನದಿಗಳ ರಕ್ಷಣೆಗೂ
ಮುಂದಾಳತ್ವ ವಹಿಸಿಕೊಂಡಿದ್ದರು</span>. <span lang="KN">ಅವರ ಹೋರಾಟದ ಹಾದಿ ಸರಳ ರೇಖೆಯಲ್ಲ</span>;
<span lang="KN">ಅದು ಟಿಸಿಲೊಡೆದ ಅನೇಕ ಹಾದಿಗಳ ಸಂಗಮ</span>. <span lang="KN">ತಮ್ಮ ಜೀವಿತಾವಧಿಯ
ಪೈಕಿ ಒಟ್ಟು</span> 76 <span lang="KN">ವರ್ಷಗಳನ್ನು ಸಾಮಾಜಿಕ ಹೋರಾಟಗಳಿಗೆ ತ್ಯಾಗ ಮಾಡಿದ್ದಾರೆ</span>.
<o:p></o:p></span></p>
<p class="MsoNormal" style="line-height: normal; margin-bottom: .0001pt; margin-bottom: 0in; mso-layout-grid-align: none; text-autospace: none;"><span lang="KN" style="font-family: "Tunga","sans-serif"; font-size: 14.0pt;">ಉತ್ತರಾಖಂಡದ ಮರೋದಾ ಎಂಬ ಸಣ್ಣ
ಹಳ್ಳಿಯಲ್ಲಿ </span><span style="font-family: "Tunga","sans-serif"; font-size: 14.0pt;">1927
<span lang="KN">ಜನವರಿ</span> 9<span lang="KN">ರಂದು ಬಹುಗುಣ ಜನಿಸಿದರು</span>. <span lang="KN">ಇವರ ತಂದೆ ಅಂಬಾದತ್ತ ಅವರು ಅಂದಿನ ತೆಹ್ರಿ ಗರ್ವಾಲ್</span> <span lang="KN">ರಾಜ್ಯಾಡಳಿತದಲ್ಲಿ
ಅರಣ್ಯ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದರು</span>. <span lang="KN">ದೇಶದೆಲ್ಲೆಡೆ ಸ್ವಾತಂತ್ರ್ಯದ
ಕಿಡಿ ಹೊತ್ತಿದ ಸಂದರ್ಭವದು</span>. <span lang="KN">ಬಹುಗುಣ</span> 14 <span lang="KN">ವರ್ಷ
ಇದ್ದಾಗಲೇ ಮಹಾತ್ಮ ಗಾಂಧಿ ಅವರಿಂದ ಪ್ರಭಾವಿತರಾದರು</span>. <span lang="KN">ಅಹಿಂಸೆ</span>,
<span lang="KN">ಸತ್ಯಾಗ್ರಹಗಳು ಅವರನ್ನು ಬಹುವಾಗಿ ಆಕರ್ಷಿಸಿದವು</span>. <span lang="KN">ಗಾಂಧಿ
ನಂತರ ಬಹುಗುಣರನ್ನು ಪ್ರಭಾವಿಸಿದವರು ಎಂದರೆ ಶ್ರೀದೇವ್</span> <span lang="KN">ಸುಮನ್</span>
<span lang="KN">ಅವರು</span>. <span lang="KN">ತೆಹ್ರಿ ಗರ್ವಾಲ್</span> <span lang="KN">ರಾಜ್ಯಾಡಳಿತವನ್ನು
ಕೊನೆಗಾಣಿಸಲು ಅವರು ಹೋರಾಟ ನಡೆಸುತ್ತಿದ್ದರು</span>. <o:p></o:p></span></p>
<p class="MsoNormal" style="line-height: normal; margin-bottom: .0001pt; margin-bottom: 0in; mso-layout-grid-align: none; text-autospace: none;"><span lang="KN" style="font-family: "Tunga","sans-serif"; font-size: 14.0pt;">ಗಾಂಧಿ ಮತ್ತು ಸುಮನ್</span><span style="font-family: "Tunga","sans-serif"; font-size: 14.0pt;"> <span lang="KN">ಅವರಿಂದ
ಬಹಳಷ್ಟು ಪ್ರಭಾವಿತಗೊಂಡಿದ್ದ ಬಹುಗುಣ ಚಿಕ್ಕವಯಸ್ಸಿನಲ್ಲೇ ಹೋರಾಟಕ್ಕೆ ಧುಮುಕಿದರು</span>. <span lang="KN">ತೆಹ್ರಿ ಗರ್ವಾಲ್</span> <span lang="KN">ರಾಜ್ಯಾಡಳಿತ ವಿರುದ್ಧದ ಹೋರಾಟದಲ್ಲಿ ಪಾಲ್ಗೊಂಡರು</span>.
<span lang="KN">ಪರಿಣಾಮ ಏಳು ತಿಂಗಳು ಸೆರೆವಾಸ ಅನುಭವಿಸಬೇಕಾಯಿತು</span>. <span lang="KN">ತಮ್ಮ</span>
24<span lang="KN">ನೇ ವಯಸ್ಸಿನಲ್ಲಿ ಬಹುಗುಣ ಕಾಂಗ್ರೆಸ್</span> <span lang="KN">ಪಾರ್ಟಿ ಸೇರಿದರು</span>.
1947<span lang="KN">ರಲ್ಲಿ ಭಾರತ ಸ್ವತಂತ್ರಗೊಂಡರೂ ತೆಹ್ರಿ ರಾಜ್ಯಾಡಳಿತದ ವಿರುದ್ಧ ಹೋರಾಟ ಮುಂದುವರಿದೇ
ಇತ್ತು</span>. <span lang="KN">ಅಂತಿಮವಾಗಿ</span> 1949 <span lang="KN">ಆಗಸ್ಟ್</span>
1<span lang="KN">ರಂದು ತೆಹ್ರಿ ರಾಜ್ಯ ಭಾರತದ ಒಕ್ಕೂಟವನ್ನು ಸೇರಿತು</span>. <o:p></o:p></span></p>
<p class="MsoNormal" style="line-height: normal; margin-bottom: .0001pt; margin-bottom: 0in; mso-layout-grid-align: none; text-autospace: none;"><span lang="KN" style="font-family: "Tunga","sans-serif"; font-size: 14.0pt;">ಸ್ವಾತಂತ್ರ್ಯ ಹೋರಾಟದ ಬಳಿಕ
ಬಹುಗುಣ ಅವರು ಮದ್ಯಪಾನ ವಿರೋಧಿ</span><span style="font-family: "Tunga","sans-serif"; font-size: 14.0pt;">, <span lang="KN">ಮಹಿಳೆಯರ ಹಕ್ಕು ಹೋರಾಟಗಳಲ್ಲಿ ತೊಡಗಿಸಿಕೊಂಡರು</span>.
<span lang="KN">ಕೊನೆಗೆ ಚಿಪ್ಕೋ ಚಳವಳಿ ಮೂಲಕ ಪರಿಸರ ಸಂರಕ್ಷ ಣೆಯ ಪ್ರತಿನಿಧಿಯಾದರು</span>.
<span lang="KN">ವ್ಯಕ್ತಿಯೊಬ್ಬ ನಿಸ್ವಾರ್ಥವಾಗಿ ಸಮಾಜ ಸೇವೆಗೆ ತೊಡಗಿಸಿಕೊಂಡಾಗ ಅವರನ್ನು ಪ್ರಶಸ್ತಿಗಳು
ಹುಡುಕಿಕೊಂಡು ಬರುತ್ತವೆ</span>. <span lang="KN">ಚಿಪ್ಕೋ ಚಳವಳಿಗೆ</span> 1987<span lang="KN">ರಲ್ಲಿ ರೈಟ್</span> <span lang="KN">ಲೈವ್ಲೀಹುಡ್</span> <span lang="KN">ಅವಾರ್ಡ್</span>
<span lang="KN">ಸಂದಿತು</span>. <span lang="KN">ದೇಶದ ಪರಮೋಚ್ಚ ನಾಗರಿಕ ಗೌರವಗಳಾದ ಪದ್ಮಶ್ರೀ</span>(1981)
<span lang="KN">ಮತ್ತು</span><span style="mso-spacerun: yes;"> </span><span lang="KN">ಪದ್ಮವಿಭೂಷಣ</span>(2009) <span lang="KN">ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗಿದೆ</span>.
<span lang="KN">ಐಐಟಿಗಳು</span>, <span lang="KN">ಸಂಘ ಸಂಸ್ಥೆಗಳು ಬಹುಗುಣ ಅವರನ್ನು ಸನ್ಮಾನಿಸಿವೆ</span>.
<span lang="KN">ಅವರ ಜೀವನ</span>, <span lang="KN">ಹೋರಾಟ</span>, <span lang="KN">ಫಿಲಾಸಫಿಗಳು
ಹಲವು ಪುಸ್ತಕಗಳಿಗೆ ವಿಷಯಗಳಾಗಿವೆ</span>. <span lang="KN">ಬಹುಗುಣ ಕೆಲವು ಕೃತಿಗಳನ್ನು ರಚಿಸಿದ್ದಾರೆ</span>.
<o:p></o:p></span></p>
<p class="MsoNormal" style="line-height: normal; margin-bottom: .0001pt; margin-bottom: 0in; mso-layout-grid-align: none; text-autospace: none;"><span lang="KN" style="font-family: "Tunga","sans-serif"; font-size: 14.0pt;">ಅವರು ಕರ್ನಾಟಕಕ್ಕೆ ಹಲವು
ಬಾರಿ ಭೇಟಿ ನೀಡಿದ್ದಾರೆ</span><span style="font-family: "Tunga","sans-serif"; font-size: 14.0pt;">.
<span lang="KN">ಇಲ್ಲಿನ ಪರಿಸರ ಚಳವಳಿಗಳಿಗೆ ಪ್ರತ್ಯಕ್ಷ</span><span style="mso-spacerun: yes;"> </span><span lang="KN">ಹಾಗೂ ಪರೋಕ್ಷವಾಗಿ ಪ್ರೇರಕ ಶಕ್ತಿಯಾಗಿದ್ದರು</span>.
94 <span lang="KN">ವರ್ಷ ವಯಸ್ಸಾಗಿದ್ದ ಬಹುಗುಣ ಕೋವಿಡ್</span> <span lang="KN">ಸೋಂಕಿನಿಂದಾಗಿ
ದಿಲ್ಲಿಯ ಏಮ್ಸ್</span> <span lang="KN">ಆಸ್ಪತ್ರೆಗೆ ದಾಖಲಾಗಿದ್ದರು</span>. <span lang="KN">ಚಿಕಿತ್ಸೆಗೆ ಸ್ಪಂದಿಸದೇ ಮೇ</span> 21<span lang="KN">ರಂದು ಕೊನೆಯುಸಿರೆಳೆದರು</span>.
<span lang="KN">ಪರಿಸರ ಮೇಲಿನ ಪ್ರೀತಿ</span>, <span lang="KN">ಬದುಕಿನ ಮೇಲಿನ ವ್ಯಾಮೋಹದಿಂದಾಗಿ
ಅವರು ಚಿರಸ್ಥಾಯಿ</span>. <span lang="KN">ಅವರನ್ನು ಕಳೆದುಕೊಂಡ ಹಿಮಾಲಯದ ಮರ ಗಿಡಗಳು ಕಣ್ಣೀರು
ಸುರಿಸುತ್ತಿರಬಹುದು</span>! </span><span style="font-size: 14.0pt;"><o:p></o:p></span></p><p class="MsoNormal" style="line-height: normal; margin-bottom: .0001pt; margin-bottom: 0in; mso-layout-grid-align: none; text-autospace: none;"></p><div class="separator" style="clear: both; text-align: center;"><a href="https://blogger.googleusercontent.com/img/b/R29vZ2xl/AVvXsEjMFPL1InQ6IxUjdEnF_3iK_3PopAXA6u2RqnGE2Zr5DE8zGKgCWs6IHLVFyWgxlRJq3xTIgntTFbfa9X6nk4D29-40EzKK1E1q-gCG3akEQOYdlWdT0j7IJ_alUNTOneXeNMegN4w6LdQ/s1617/Bahuguna.jpg" imageanchor="1" style="margin-left: 1em; margin-right: 1em;"><img border="0" data-original-height="1617" data-original-width="794" height="640" src="https://blogger.googleusercontent.com/img/b/R29vZ2xl/AVvXsEjMFPL1InQ6IxUjdEnF_3iK_3PopAXA6u2RqnGE2Zr5DE8zGKgCWs6IHLVFyWgxlRJq3xTIgntTFbfa9X6nk4D29-40EzKK1E1q-gCG3akEQOYdlWdT0j7IJ_alUNTOneXeNMegN4w6LdQ/w314-h640/Bahuguna.jpg" width="314" /></a></div><div class="separator" style="clear: both; text-align: center;"><br /></div><div class="separator" style="clear: both; text-align: center;"><span style="color: #d0e0e3;">ಈ ಲೇಖನವು ವಿಜಯ ಕರ್ನಾಟಕದ 2021ರ ಮೇ 23ರ ಸಂಚಿಕೆಯಲ್ಲಿ ಪ್ರಕಟವಾಗಿದೆ.</span></div><br /><span style="font-family: "Tunga","sans-serif"; font-size: 14.0pt;"><br /></span><p></p>ಮಲ್ಲಿಕಾಜು೯ನ ತಿಪ್ಪಾರhttp://www.blogger.com/profile/03103441547302200527noreply@blogger.com0