ಕಷ್ಟದ ಕಣ್ಣೀರು ಕೋಡಿ ಹರಿದಾಗಲೂ
ಸ್ಥೈರ್ಯ ತುಂಬಿ ಬೆಳೆಸಿದಾಕೆ,
ಬರೀ ಸೋಲು ಕಂಡುವನಿಗೆ
ಗೆಲುವಿನ ದಾರಿ ತೋರಿಸಿದಾಕೆ.. ಅವ್ವ
ಗೆದ್ದು ಬಂದಾಗ...
ಮರೆಯಲ್ಲಿ ನಿಂತು ಆನಂದಭಾಷ್ಪ ಸುರಿಸಿದಾಕೆ
ಎಂಥ ನೋವಿನಲ್ಲೂ ನಗು ತಂದಾಕೆ
ತಾನುಣ್ಣುವ ತುತ್ತನ್ನು
ತನ್ನ ಕರಳು ಕುಡಿಗೆ ತಿನ್ನಿಸಿದಾಕೆ.. ಅವ್ವ
ಮುನ್ನುಗ್ಗಲು ಕಸವು ತುಂಬಲು
ಹಿಮ್ಮೇಳವಾಗಿ ಶಕ್ತಿ ನೀಡಿದಾಕೆ
ರಾಗ ಕೆಟ್ಟು ಭಾವ ಸೋತಾಗ
ತಾನೇ ತಂಬೂರಿ ಕೈಗಿತ್ತಿಕೊಂಡಾಕೆ.. ಅವ್ವ
ಮಾತು ಕಲಿಸಿ; ನೀತಿ ತಿಳಿಸಿ
ಸದ್ಗತಿಯ ಸಾಧ್ಯತೆ ತೋರಿಸಿದಾಕೆ
ಸಾಧ್ಯ-ಅಸಾಧ್ಯಗಳ ತೋಳಲಾಟದಲ್ಲಿ
ತಾನೇ ನಿಂತು ನೆರವಾದಾಕೆ.. ಅವ್ವ
ಆದರೆ
ಆಕೆಗೆ ನೀ ಕೊಟ್ಟಿದ್ದಾರೂ ಏನು
ಬರೀ ಕಣ್ಣೀರು.. ತೋರಿಸಿದ್ದು
ವೃದ್ಧಾಶ್ರಮ ಬಾಗಿಲು...
-ಮಲ್ಲಿ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)
Featured Post
Is Signal more secure than Whatsapp?- ವಾಟ್ಸ್ಆ್ಯಪ್ಗಿಂತ ಸಿಗ್ನಲ್ ಹೇಗೆ ಬೆಸ್ಟು?
- ಮಲ್ಲಿಕಾರ್ಜುನ ತಿಪ್ಪಾರ ಜಗತ್ತಿನ ನಂಬರ್ 1 ಶ್ರೀಮಂತ , ಟೆಸ್ಲಾ ಕಂಪನಿಯ ಮಾಲೀಕ ಎಲಾನ್ ಮಸ್ಕ್ ಆ ಒಂದು ಟ್ವೀಟ್ ಮಾಡ ದಿದ್ದರೆ ಈ ಜಗತ್ತು ‘ ಸಿಗ್ನಲ್ ...

-
- ಮಲ್ಲಿಕಾರ್ಜುನ ತಿಪ್ಪಾರ/ಕಿರಣ್ ಕುಮಾರ್ ಡಿ.ಕೆ Yes, the show must go on... ನಾವೀಗ ಕೊರೊನಾ ವೈರಸ್ ಜತೆಗೆ ಬದುಕುವುದನ್ನು ಕಲಿಯಲೇಬೇಕಿದೆ. ಯಾಕೆಂದರೆ, ಸದ್...
-
ಕನಸು ಕಾಣುವ ತುಡಿತ ಹಂಬಲ, ಇಲ್ಲದೆ ಯಾರ ಬೆಂಬಲ ಕಣ್ ಮಂದಿನ ದಾರಿ ಮಬ್ಬು, ಸಾಗಬೇಕು ಇಲ್ಲದೆ ಯಾರ ಬೆಂಬಲ ಯಾರು ಇದ್ದರೇನು, ಇಲ್ಲದಿದ್ದರೇನು, ನೊಗ ಹೊತ್ತು ನಡೆಯ...
-
- ಮಲ್ಲಿಕಾರ್ಜುನ ತಿಪ್ಪಾರ ಗೂಗಲ್ ಹೊರ ತಂದಿರುವ ಅನೇಕ ಉತ್ಪನ್ನಗಳಲ್ಲಿ'ಗೂಗಲ್ ಅಸಿಸ್ಟೆಂಟ್' ಭಿನ್ನವಾಗಿದ್ದು, ಅತ್ಯುಪಯುಕ್ತ ಮತ್ತು ಬಳಕೆದಾರರ ಸ್ನೇಹ...
