ಮಂಗಳವಾರ, ಜನವರಿ 16, 2007

ನಟ, ಮೌಲ್ಯ ಮತ್ತು ಅನುಕರಣೆ

ಜನಮಾನಸದಲ್ಲಿ "ಹೀರೋ'ಗಳಾಗಿರುವ ನಮ್ಮ ಸಿನೆಮಾ 'ನಾಯಕ'ರು ನಿಜ ಜೀವನದಲ್ಲಿ ಹಾಗೇ ಇರ್ತಾರಾ.. ?
ಬಾಲಿವುಡ್ ಸ್ಟಾರ್(ಸಿನೆಮಾದಲ್ಲಿ ಮಾತ್ರ) ನಟ ಅಭಿಷೇಕ ಮತ್ತು ಮಾಜಿ ಸೌಂದರ್ಯ ರಾಣಿ(ಆಂತರಿಕ ಸೌಂದರ್ಯವಲ್ಲ) ಐಶ್ವರ್ಯ ರೈ ಅವರು ನಿಶ್ಚಿತಾರ್ಥ ಮತ್ತು ಅದರ ಪ್ರಹಸನ ನೋಡಿ ಇಂಥ ಪ್ರಶ್ನೆ ಎದ್ದಿದೆ.
ಸ್ವಲ್ಪ ನೆನಪು ಮಾಡಿಕೊಳ್ಳಿ.
ಕೆಲ ದಿನಗಳಿಂದ ಬಿಡುಗೆಡೆಯಾದ 'ಲಗೇ ರಹೋ ಮುನ್ನಾ ಭಾಯಿ' ಚಿತ್ರದಲ್ಲಿ ಅಭಿಷೇಕ ಬಚ್ಚನ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಆ ಪಾತ್ರ ಜೋತಿಷ್ಯ ದೋಷ ಹೊಂದಿದ ಯುವತಿಯನ್ನು ವರಿಸುವುದು. ಆ ಪಾತ್ರದಲ್ಲಿ ಅಭಿ, "ನಾನ ಅವಳನ್ನು ಮದುವೆಯಾದರೆ ಸಾಯ್ತಿನಿ ಇಲ್ಲವೊ ಗೋತ್ತಿಲ್ಲ. ಆದರೆ ಮದುವೆಯಾಗದಿದ್ದರೆ ಖಂಡಿತವಾಗಿರಲಾರೆ'' ಎನ್ನುತ್ತಾರೆ. ಅಂದರೆ ಜ್ಯೋತಿಷ್ಯವನ್ನು ನಿರಾಕರಿಸುವ ಹಾಗೂ ಸತ್ಯಕ್ಕೆ ಬೆಲೆ ಕೊಡುವದನ್ನು ಪ್ರತಿಪಾದಿಸುವ ಪಾತ್ರ ಅದು.
ಈಗ ನಿಜ ನಿಶ್ಚಿತಾರ್ಥಕ್ಕೆ ಬನ್ನಿ.
ಅದೇ ಅಭಿಷೇಕ ಬಚ್ಚನ್ ತನ್ನ ಪತ್ನಿಯಾಗಿ ಸ್ವೀಕರಿಸಲಿರುವ ಐಶ್ವರ್ಯ ರೈಳ ಕುಂಡಲಿಯಲ್ಲಿ ದೋಷ ಇರುವದರಿಂದ ಉಜ್ಜಯನಿ, ಕೇರಳಾ ಮತ್ತು ಬೆಂಗಳೂರು ಜ್ಯೋತಿಷಿ ಹತ್ತಿರ ಅಲೆದಾಡುತ್ತಿರುವುದು ಎಷ್ಟು ಹಾಸ್ಯಾಸ್ಪದ..! ಹಾಗಾದರೆ ನೀವ ಅನ್ನಬಹುದು. ಅದು ಸಿನೆಮಾ. ಇದು ನಿಜ ಜೀವನ. ಸಿನೆಮಾ ಮತ್ತು ನಿಜ ಜೀವನಕ್ಕೂ ತಂಬಾ ವ್ಯತ್ಯಾಸವಿದೆ. ಸೀನೆಮಾದಲ್ಲಿ ತೋರಿಸಲಾದ ಪ್ರತಿಯೊಂದು ಅನಕರಿಸಲಾಗದು ಎಂದು ವಾದ ಮಾಡಬಹುದು.
ಸರಿ. ಸಿನೆಮಾ ಮತ್ತು ನಿಜ ಜೀವನಕ್ಕೆ ತುಂಬಾ ವ್ಯತ್ಯಾಸವಿದೆ. ಹಾಗಾದರೆ ನಿನೆಮಾದಲ್ಲಿ ಪ್ರತಿಪಾದಿಸುವ ಅಮೂರ್ತವಾದ ಮೌಲ್ಯಗಳಿಗೆ ಮೂರ್ತ ರೂಪ ನೀಡುವ ಪಾತ್ರದಾರಿಗಳು ಜನರು ಕಣ್ಣಲ್ಲಿ ಸಾಕ್ಷಾತ ನಾಯಕರಾಗುತ್ತಾರೆ. ಆದರೆ ಅವರು ತಮ್ಮ ಜೀವನದಲ್ಲಿ ಏಕೆ (ಬೆರಳಣಿಕೆ ನಟರನ್ನು ಹೊರತುಪಡಿಸಿ) ಅಳವಡಿಸಿಕೊಳ್ಳಲಾರರು ..? ಅದು ಕೇವಲ ದುಡ್ಡ ತೆತ್ತು ನೋಡುವ ಪ್ರೇಕ್ಷಕರಿಗೆ ಮಾತ್ರವೇ ಅನ್ವಯವೇ..? ಹಾಗಾದರೆ ಅದೇ ನಾಯಕರನ್ನು ತಮ್ಮ ರೋಲ್ ಮಾಡಲ್ ಮಾಡಿಕೊಳ್ಳುವ ಅಭಿಮಾನಿಗಳದ್ದು ಕೇವಲ ಹುಚ್ಚತನವಾ..? ಇದೂಂದು ಘಟನೆ ಮಾತ್ರ. ಇಂಥ ಉದಾಹರಣೆಗಳು ಬೇಕಾದಷ್ಟು ದೊರೆಯುತ್ತವೆ.
ಇಲ್ಲಿ ಜ್ಯೋತಿಷ್ಯವನ್ನು ತೆಗಳುವ ಉದ್ದೇಶ ಇಲ್ಲ. ಚಿತ್ರದಲ್ಲಿ ಜ್ಯೋತಿಷ್ಯವನ್ನು ನಿರಾಕರಿಸುವ ನಟ ನಾಯಕ ನಿಜ ಜೀವನದಲ್ಲಿ ಅದರ ನೆರಳಿನಲ್ಲಿಯೇ ಇರುತ್ತಾನೆ ಎಂಬುದಷ್ಟೇ ಹೇಳುವುದು. ಭಾರತದಲ್ಲಿ ಸಿನೆಮಾ ತರುವ ಬದಲಾವಣೆಗಳು ಪ್ರಭಾವದಷ್ಟು ಬೇರೆ ಯಾವ ಮಾಧ್ಯಮವೂ, ವ್ಯಕ್ತಿಯೂ ಕೊಡ ತರಲಾರ. ಅದಕ್ಕಾಗಿ ತೆರೆಯ ಮೇಲಿನ ನಾಯಕರು ಪ್ರತಿಪಾದಿಸುವ ಮೌಲ್ಯದ ಒಂದಂಶವನ್ನಾದರೂ ತೆರೆ ಹಿಂದೆಯಾದರೂ ಪ್ರತಿಪಾದಿಸಬೇಕು. ಹಾಗಂತ ನಮ್ಮ ಯಾವ ಚಿತ್ರನಟರು ಇದಕ್ಕೆ ಹೊರತಾಗಿಲ್ಲ ಅಂತ ಅಲ್ಲ. ಕೆಲವು ನಟರು ಇದಕ್ಕೆ ಹೊರತಾಗಿದ್ದಾರೆ. ರಜನಿಕಾಂತ್, ಡಾ. ರಾಜಕುಮಾರು ಸೇರಿದಂತೆ ಕೆಲವು ನಟರು ತೆರೆಯ ಮೇಲೆ ಪ್ರತಿಪಾದಿಸಿದ ಮೌಲ್ಯಗಳನ್ನು ಎಲ್ಲವೂ ಅನುಕರಿಸದ್ದಿದ್ದೂ ಕೆಲವನ್ನಾಷ್ಟದರೂ ಅಳವಡಿಸಿಕೊಂಡು ನಿಜವಾದ ಸ್ಟಾರ್ ನಟರಾಗಿದ್ದಾರೆ.

ಶುಕ್ರವಾರ, ಜನವರಿ 12, 2007

ಪ್ರೇಮ ದಿಗಂತ

ಪ್ರೇಮ ದಿಗಂತದತ್ತ
ಹಾರುತ್ತಿವೇ ಹಕ್ಕಿಗಳು
ರೆಕ್ಕೆ ಚಾಚುತ್ತ..
ಪಟ ಪಟನೆ ಬಡಿದು
ಏನೋ ಹೇಳುತಿವೆ
ನಿನ್ನ ಕಣ್ಣ ರೆಪ್ಪೆಗಳು...
ಹಕ್ಕಿಗೋ ಆಕಾಶವೇ
ಅವಕಾಶ..
ನಿನ್ನ ಕಣ್ಣಿಗೆ ನನ್ನೆದೆಯ
ಶೋಧ..
ಗೆಳತಿ,
ಹೃದಯದ ಹೆಬ್ಬಾಗಿಲು ಕಣ್ಣು
ಅಂದಿದ್ದು ನಿನ್ನ ನೋಡಿಯೇ ?
ಭಾವನೆಗಳು ಮಾಹಪೂರ
ನಿನ್ನ ಕಣ್ಣ ಸಾಗರ
ನನಗದೇ ನಿತ್ಯ ನಾಗರ..
-ಮಲ್ಲ

ಬೇಸರವೇಕೆ ಬೆಡಗಿ


ಜೀವನಾ ನಿಕೃಷ್ಟ ಅಲ್ಲ
ಸಾವು ಖಚಿತ,
ತಂದಕೋಬ್ಯಾಡ ಮುಂಚಿತ
ಬ್ಯಾಸರ್ ಯಾಕ್ ಬೆಡಗಿ..


ಪ್ರೀತಿ ಅಂದ್ರ್ ಅಲ್ಲ ಅಸಹ್ಯ
ಅದು ಜೀವನ್ಮುಖಿ
ತಿಳ್ಕೋ ಚಂದ್ರಮುಖಿ
ಬ್ಯಾಸರ್ ಯಾಕ್ ಬೆಡಗಿ..

ಪ್ರೀತಿಗೂ ನೀತಿಗೂ ಅಂತ್ರ
ಅಂತ್ ನೀ ಅಳುತ ಕುಂತ್ರ
ಇದ್ದ ಬಾಳು ಬೇಳಕಾಗತೈತೇನು ?
ಬ್ಯಾಸರ್ ಯಾಕ್ ಬೆಡಗಿ..
-ಮಲ್ಲ





ಶನಿವಾರ, ಜನವರಿ 6, 2007

ಮುಂಗಾರಿನ ನೆನಪು...


ಧೋ ಎಂದು ಸುರಿಯುವ
ಮುಂಗಾರು ಮಳೆಗೆ
ನನ್ನವಳ ನೆನಪು ಉಮ್ಮಳಿಸುತ್ತಿದೆ,
ಕೈ-ಕೈ ಹಿಡಿದು ಮಳೆಯಲ್ಲಿ ಹಾಕಿದ ಹೆಜ್ಜೆಗಳು
ಎದೆಯಲ್ಲಿ ಅಚ್ಚಳಿಯದೇ ಉಳಿದಿವೆ.

ಮುಂಗಾರಿನ ಮಳೆಗೆ ಹೆಣೆದ ಕನಸುಗಳು
ಇನ್ನೂ ಹಾಗೆ ಇವೆ, ನೀರ ನಿಂತ ಮಡಿಗಳಂತೆ
ಕಟ್ಟೆಯೊಡೆದು ನೀರು ಜೀನುಗುವಂತೆ
ಈಗಲೋ ಆಗಲೋ ಒಮ್ಮೊಮ್ಮೆ ಇಣಕುತ್ತಿವೆ.
ಗೂಡಿನಿಂದ ಮರಿಹಕ್ಕಿ ಗೋಣು ಹೊರ ಹಾಕಿದಂತೆ

ಮುಂಗಾರಿನಲ್ಲಿ ಅಲ್ಲವೇ ನಾನವಳಿಗೆ
ಕೊಟ್ಟದ್ದು ಮೊದಲ ಮುತ್ತು...
ಆಕೆ ನಾಚಿ ನೀರಾಗಿದ್ದು, ಎಲ್ಲವೂ ನೆನಪಾಗಿ ಕಾಡುತ್ತಿದೆ.

ಹಸಿಯಾದ ರಸ್ತೆಯಲ್ಲಿ ನಡೆಯಾಗದೂ
ನಡೆಯದೇ ಇರಲಾಗದೂ
ಕೈ ಹಾಕಿ ಮಾಡಿದ ಆಣೆ ಪ್ರಮಾಣಗಳು
ಮುಂಗಾರಿನ ಮಳೆಯಲ್ಲಿ ಅಲ್ಲವೇ
ಮತ್ತೆ ಏಕೆ ಮರೆತಳು....?

-ಮಲ್ಲಿಕಾರ್ಜುನ