ಯಾಕೆ ಸಿಗರೆಟ್ ಬಹಳ ಸೇದ್ತಿದ್ದಾರಾ ಅಂತಾ ನನ್ನ ಸಿನಿಯರ್ ಕೇಳಿದ್ರು.... ಇಲ್ಲಾ ಅಂತಾ ನಾನು ಹಾರಿಕೆ ಉತ್ತರಾ ಕೊಟ್ಟೇನಾದರ್ರೂ. ಅಂತಾರಳದಲ್ಲಿ ಅದು ನಿಜ.
ನಾನು ಇತ್ತೀಚೆಗೆ ಸಿಗರೇಟ್ ಜಾಸ್ತಿ ಸೇದ್ತಿದೀನಿ. ಹಾಗಂತ ನನ್ನ ಎಲ್ಲ ಫ್ರೇಂಡ್ಸ್ ಹೇಳ್ತಿದ್ದೀರಾ. ಅದು ನಿಜಾನೂ ಹೌದು.....
ಹೌದು ಸಿಗರೆಟ್ ಯಾಕ್ ಸೇದ ಬೇಕು ? ಮಜಾ ಮಾಡೋಕಾ, ಟೆನ್ಸನ್ ಕಡಿಮೆ ಮಾಡೋಕಾ, ಇಲ್ಲಾ ಸುಮ್ಮನೇನಾ ಅಥವಾ ಫಲಿಸದ ಪ್ರೀತಿಗಾಗಿಯೇ.... ಸೇದೋರಿಗೆ ನೂರೆಂಟು ಕಾರಣ.
ಸೇದಿದೇ ಇರೋದಿಕ್ಕ ಕಾರಣ ಇಲ್ಲ. ನಾನಂತೂ ಸೇದೋದು ಕಾರಣ ಇಲ್ಲದೇನೆ ಹಾಗಂತ ಅನ್ಕೊಂಡ್ರೂ ಆಳದಲ್ಲಿ ಕಾರಣ ಇದ್ದೇ ಇದೆ. ಅದು ಏನು ಅನ್ನೋದು ಇಲ್ಲಿ ಹೋಳೋಕ ಆಗಲ್ಲ. ಅಂತಂದ್ರೆ ಮತ್ತೆ ಯಾಕೆ ಇಲ್ಲಿ ಇದನ್ ಬರ್ತಿರಿದ್ದಾರೆ ಅಂತೀರಾ. ಅದಕ್ಕೂ ಕಾರಣ ಇದೆ ಕೇಳಿ.
ನಾನ ಸಿಗರೇಟ್ ಸೇದಾದ್ಮೇಲೆ ಅಜಂತಾ ಬೇಕು. ಅಯ್ಯೋ ಅಜಂತಾ ಕೂಡ್ಲೇ. ಹುಡುಗಿ ಅಂತಾ ತಿಳ್ಕೋಬೇಡಿಪಾ. ಅದು ಅಡಕಿ ಚೀಟಿ ಹೆಸರು. ಅದನ್ನೆ ಯಾಕೆ ತಿನ್ನೋದು ಅಂದ್ರೆ. ಸಿಗರೆಟ್ ಸೇದಿ ಆಪಿಸಿಗೆ ಬಂದು ಕಂಪ್ಯೂಟರ ಮುಂದೆ ಕೂಡ ಬೇಕಲ್ಲ. ಆಗ ನನ್ನು ಸುತ್ತ ಸಹದ್ಯೋಗಿಗಳಿಗೆ ನನ್ನ ಸಿಗರೇಟ್ ಸುವಾಸನೆ ಬಡಿಬಾರದು ಅಂತ ಈ ಮುನ್ನೆಚ್ಚರಿಕೆ...!
ನೀವು ಏನೇ ಹೇಳ್ರೀ ಈ ಅಜಂತ ಸೊಗಸು ತುಂಬಾ ಮಜಾರೀ.. ಹಾಗೆ ಬಾಯಿಲ್ಲಿ ಹಾಕೊಂಡು ತಕ್ಷಣ ಕರಗಿ ಬಿಡುತ್ತೆ ಅನ್ಕೊಂಡ್ರಾ.. ಅದ್ನಾ ಜಗೀಬೇಕು ಆಗ ಕರುಗುತ್ತೆ ಸಣ್ಣಗೆ. ಆದ್ರೇ ಒಂದು ನಮ್ಮ ಸರ್ಕಾರಗಳು ಪ್ರತಿಭಟನೆ ತಡೆಯೋಕೆ ಸಾಕುಷ್ಟು ಮನ್ನೆಚ್ಚರಿಕೆ ವಹಿಸ್ತಾರೆ ಆದ್ರೆ ಏನಾಗುತ್ತೆ. ಏನಾಗಬೇಕಿತ್ತೋ ಅದೇ ಆಗುತ್ತೆ. ಆದ್ರೆ ನನ್ನ ಮುನ್ನೆಚ್ಚರಿಕೆ ಮಾತ್ರ ಹಾಗಲ್ಲ. ಅದು ವಿಫಲವಾಗೋದೇ ಇಲ್ಲ.
ಹೀಗಾಗಿ ನಾನು ಯಾವಗ್ಲೂ ಬಚಾವ್ . ಏನಂತೀರಾ ಸಿಗರೇಟ್ ಮಿತ್ರರರೇ ನೀವು ಒಮ್ಮೆ ಟ್ರೈ ಮಾಡಿ ನೋಡಿ.
- ಮಲ್ಲಿಕಾರ್ಜುನ
ಮಂಗಳವಾರ, ಫೆಬ್ರವರಿ 20, 2007
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
-
ಫಾಲ್ಗುಣಿ ನಾಯರ್ 50 ನೇ ವಯಸ್ಸಿನಲ್ಲಿ ಆರಂಭಿಸಿದ ‘ ನೈಕಾ ’ ಈಗ ಲಕ್ಷ ಕೋಟಿ ರೂ . ವೌಲ್ಯದ ಕಂಪನಿ . ಉದ್ಯಮದ ಹಿನ್ನೆಲೆ ಇಲ್ಲದೇ ಅವರು ಯಶಸ್ವಿ ಉದ್ಯಮಿಯಾದ ಕತೆ ಇದು ....
-
ಶೋಷಿತರ ಪರ ನಿಲ್ಲುವ ನ್ಯಾಯವಾದಿಯ ಕತೆಯ ಸಿನಿಮಾ ‘ ಜೈ ಭೀಮ್ ’ ಸದ್ದು ಮಾಡುತ್ತಿದೆ . ನೈಜ ಕತೆಯನ್ನಾಧರಿಸಿದ ಈ ಚಿತ್ರದ ಅಸಲಿ ಹೀರೊ ಜಸ್ಟೀಸ್ ಕೆ . ಚಂದ್ರು . ...
-
- ಮಲ್ಲಿಕಾರ್ಜುನ ತಿಪ್ಪಾರ ಪಂಜಾಬ್ ಅನ್ನು ಸೇರಿಸಿಕೊಂಡು ಉತ್ತರ ಭಾರತದ ಕೆಲವು ರಾಜ್ಯಗಳನ್ನೊಳಗೊಂಡ ಖಲಿಸ್ತಾನ್ ಪ್ರತ್ಯೇಕ ರಾಷ್ಟ್ರಕ್ಕಾಗಿ ಹುಟ್ಟಿಕೊಂಡಿದ್ದೇ ಖಾಲ್...
1 ಕಾಮೆಂಟ್:
yaava bhashe anna idu.......
ಕಾಮೆಂಟ್ ಪೋಸ್ಟ್ ಮಾಡಿ