Review ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
Review ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಶನಿವಾರ, ಜನವರಿ 1, 2022

Arjun Gowda Kannada Film: ಕತೆ ಸುಮಾರು, ಆ್ಯಕ್ಷ ನ್‌ ಜೋರು!

- ಮಲ್ಲಿಕಾರ್ಜುನ ತಿಪ್ಪಾರ

ಕನ್ನಡದ ಚಿತ್ರಗಳಿಗೆ ಅದ್ಧೂರಿತನ, ಆ್ಯಕ್ಷ ನ್‌ ಸಿನಿಮಾಗಳಿಗೆ ಹೊಸ ಖದರ್‌ ತಂದು­ಕೊಟ್ಟವರು ನಿರ್ಮಾಪಕ ‘ಕೋಟಿ’ ರಾಮು. ಅವರ ಬ್ಯಾನರ್‌ನ ಸಿನಿಮಾಗಳೆಂದರೆ ಫುಲ್‌ ಆ್ಯಕ್ಷ ನ್‌, ಸ್ವಲ್ಪ ಸೆಂಟಿಮೆಂಟ್‌ ಜತೆಗೆ ಮನರಂಜನೆ ಗ್ಯಾರಂಟಿ. ಇದಕ್ಕೆ ವರ್ಷದ ಕೊನೆಯಲ್ಲಿಬಿಡುಗಡೆಯಾಗಿರುವ ‘ಅರ್ಜುನ್‌ ಗೌಡ’ ಸಿನಿಮಾ ಹೊರತಲ್ಲ. ಚಿತ್ರ ಅದ್ಧೂರಿ­ಯಾಗಿದೆ. ಆದರೆ, ಪ್ರೇಕ್ಷ ಕರ ಮನಸ್ಸಿಗೆ ಎಷ್ಟು ನಾಟಲಿದೆ ಎಂಬುದು ನಿಗೂಢ!

ನಿರ್ದೇಶಕರು ‘ಅರ್ಜನ್‌ ಗೌಡ’ ಚಿತ್ರದ ಆರಂಭದಲ್ಲಿಪತ್ರಕರ್ತೆ ಗೌರಿ ಲಂಕೇಶ್‌, ವಿದ್ವಾಂಸ ಎಂ. ಎಂ. ಕಲಬುರ್ಗಿ ಹತ್ಯೆಗಳೇ ತಮ್ಮ ಸಿನಿಮಾಕ್ಕೆ ಸೂಧಿರ್ತಿ ಎಂದು ಹೇಳಿಸು­ತ್ತಾರೆ. ಆದರೆ, ಸಿನಿಮಾ ಮುಗಿದರೂ ಆ ಸೂಧಿರ್ತಿ ಏನೆಂಬುದು ಗೊತ್ತಾಗುವುದಿಲ್ಲ! ಪ್ರೀತಿ, ಸಮಾಜ, ದುಷ್ಟಶಕ್ತಿಗಳು, ಮಾಧ್ಯಮ... ಹೀಗೆ ಎಲ್ಲವನ್ನೂ ಹೇಳಲು ಹೋಗಿ, ಯಾವುದನ್ನೂ ಪ್ರೇಕ್ಷ ಕರ ಮನಸ್ಸಿಗೆ ಪೂರ್ತಿಯಾಗಿ ದಾಟಿಸುವಲ್ಲಿಚಿತ್ರ ಯಶಸ್ವಿಯಾಗುವುದಿಲ್ಲ. ಹಾಗಾಗಿಯೇ, ಚಿತ್ರ ನೋಡಿ ಹೊರ ಬಂದಾಗ ನಿಮಗೆ ಮನಸ್ಸು ಭಾರವೂ ಆಗುವುದಿಲ್ಲ, ಹಗುರವೂ ಆಗುವುದಿಲ್ಲ.

ಚಿತ್ರದ ನಾಯಕ ಅರ್ಜುನ್‌ ಗೌಡ (ಪ್ರಜ್ವಲ್‌ ದೇವರಾಜ್‌) ಸುದ್ದಿವಾಹಿನಿಯ ಒಡತಿ ಜಾನಕಿ (ಸ್ಪರ್ಶ ರೇಖಾ) ಅವರ ಏಕೈಕ ಪುತ್ರ. ಆಗಾಗ ಅಮ್ಮ-ಮಗನ ಮಧ್ಯೆ ಜನರೇಷನ್‌ ಗ್ಯಾಪ್‌ ಜಗಳ. ದೊಡ್ಡ ಉದ್ಯಮಿ (ರಾಜ್‌ ದೀಪಕ್‌ ಶೆಟ್ಟಿ) ಮಗಳು ಜಾಹ್ನವಿ (ಪ್ರಿಯಾಂಕಾ ತಿಮ್ಮೇಶ್‌) ಮತ್ತು ಅರ್ಜುನ್‌ ಮಧ್ಯೆ ಅಮರ ಪ್ರೇಮ. ಜಾಹ್ನವಿ ತಂದೆ ಒಪ್ಪಲ್ಲ. ಹಲವು ತಿರುವು ಘಟಿಸಿ ಜಾಹ್ನವಿ ಮದುವೆ ಎನ್‌ಆರ್‌ಐಯೊಂದಿಗೆ ಆಗುತ್ತದೆ. ಇದೇ ದುಃಖದಲ್ಲಿಮನೆ ತೊರೆದ ಅರ್ಜುನ್‌ ಗೌಡ ಮಂಗಳೂರು ಸೇರುತ್ತಾನೆ; ಲೋಕಲ್‌ ಗೂಂಡಾಗಳು ಜತೆ­ಯಾಗುತ್ತಾರೆ. ಮಗನಿಗೆ ಹೀಗೆ ಆಯ್ತಲ್ಲಅಂತ ತಾಯಿ ಉದ್ಯಮಿಯ ವ್ಯಾಪಾರವನ್ನು ತನ್ನ ವರದಿಗಾರರಿಂದ ಜಾಲಾಡಿದಾಗ ಸಮಾಜಘಾತಕಶಕ್ತಿ ಖಳನಾಯಕ­(ರಾಹುಲ್‌ ದೇವ್‌) ಅವರ ಜತೆ ಉದ್ಯ­ಮಿಯ ಸಂಪರ್ಕವಿರುವುದು ಗೊತ್ತಾಗು­ತ್ತದೆ. ಈ ವಿಷಯ ಗೊತ್ತಾಗುತ್ತಿದ್ದಂತೆ ವಿಲನ್‌, ಜಾನಕಿಯನ್ನು ಕೊಲ್ಲಲು ಕರಾವಳಿಯ ಡಾನ್‌ಗೆ ಹೇಳುತ್ತಾನೆ. ಜಾನಕಿಯನ್ನು ಯಾರು ಕೊಲ್ಲುತ್ತಾರೆ? ಆ ಸುಪಾರಿ ಕಿಲ್ಲರ್ಸ್‌ ಯಾರು? ಕೊಲೆ ಯತ್ನ ಕೇಸ್‌ನಲ್ಲಿಅರ್ಜುನ್‌ ಗೌಡ ಯಾಕೆ ಜೈಲು ಪಾಲಾಗುತ್ತಾನೆ? ಕೊನೆಗೆ ಜಾಹ್ನವಿ ಏನಾದಳು ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರ ಬೇಕಿದ್ದರೆ ಸಿನಿಮಾ ನೋಡಬೇಕು.

ಪ್ರಜ್ವಲ್‌ ದೇವರಾಜ್‌ ಹಾಗೂ ‘ಸ್ಪರ್ಶ’ ರೇಖಾ ಅವರು ತಮಗೆ ವಹಿಸಿರುವ ಕೆಲಸವನ್ನು ನೀಟ್‌ ಆಗಿ ಮಾಡಿದ್ದಾರೆ. ಫೈಟಿಂಗ್‌ ದೃಶ್ಯಗಳಲ್ಲಿಪ್ರಜ್ವಲ್‌ ಪವರ್‌ಫುಲ್‌ ಆಗಿ ಕಾಣಿಸುತ್ತಾರೆ. ಸಿನಿಮಾದಲ್ಲಿಹಾಸ್ಯನಟ ಸಾಧು ಕೋಕಿಲ  ಹಾಗೂ ಕಾಮಿಡಿ ಕಿಲಾಡಿ­ಯಂಥ ನಟರಿದ್ದೂ ಪ್ರೇಕ್ಷ ಕರು ನಗದಿದ್ದರೆ ಅದು ಯಾರ ತಪ್ಪು? ಖಳನಾಯಕ ರಾಹುಲ್‌ ದೇವ್‌ಗೆ ಹೆಚ್ಚು ಕೆಲಸವಿಲ್ಲ.

ಧರ್ಮೇಶ್‌ ವಿಶ್‌ ಅವರ ಸಂಗೀತ ಮಾತ್ರ ತಲೆ ಗಿಂವ್‌ ಅನ್ನುವ ಹಾಗಿದೆ! ಕ್ಯಾಮೆರಾ ವರ್ಕ್‌ ಓಕೆ. ಸಂಭಾಷಣೆ ಅಲ್ಲಲ್ಲಿಹರಿತವಾಗಿದೆ. ಅರ್ಜುನ್‌ ಗೌಡರದ್ದು ಮಧ್ಯಂತರವರೆಗೆ ‘ಸುದೀರ್ಘ’ ಪಯಣ. ಸೆಕೆಂಡ್‌ ಹಾಫ್‌ ಕೂಡ ಹೆಚ್ಚು ಕಡಿಮೆ ಹಾಗೆಯೇ. ಇಷ್ಟಾಗಿಯೂ ಆ್ಯಕ್ಷ ನ್‌ ಪ್ರಿಯರಿಗೆ ಸಿನಿಮಾ ಇಷ್ಟವಾಗಬಹುದು.

ಚಿತ್ರ: ಅರ್ಜುನ್‌ ಗೌಡ 

ನಿರ್ದೇಶನ: ಶಂಕರ್‌. ನಿರ್ಮಾಪಕ:  ರಾಮು.

ತಾರಾಗಣ: ಪ್ರಜ್ವಲ್‌ ದೇವರಾಜ್‌,  ಪ್ರಿಯಾಂಕ ತಿಮ್ಮೇಶ್‌, ರಾಹುಲ್‌ ದೇವ್‌, ಸ್ಪರ್ಶ ರೇಖಾ, ಸಾಧು ಕೋಕಿಲ ಮತ್ತಿತರರು. 


(ಈ ಲೇಖನವು ವಿಜಯ ಕರ್ನಾಟಕ ಜ.1, 2022ರ ಸಂಚಿಕೆಯಲ್ಲಿ ಪ್ರಕಟವಾಗಿದೆ)


ಶುಕ್ರವಾರ, ಡಿಸೆಂಬರ್ 31, 2021

83 Hindi Film Review: ತೆರೆಯ ಮೇಲೆ 83ರ ವಿಶ್ವಕಪ್‌ ಗೆಲುವಿನ ರೋಚಕತೆ

- ಮಲ್ಲಿಕಾರ್ಜುನ ತಿಪ್ಪಾರ

ಮೂವತ್ತೆಂಟು ವರ್ಷಗಳ ಹಿಂದೆ ರೇಡಿಯೊಗೆ ಕಿವಿಯಾನಿಸಿ ಕಾಮೆಂಟರಿ ಕೇಳಿ ಪುಳಕಗೊಂಡಿದ್ದ ಒಂದು ತಲೆಮಾರು, ಅಂದಿನ ಯಶಸ್ಸಿನ ಕತೆಯನ್ನು ಆಗಾಗ ಕೇಳುತ್ತಿದ್ದ ಹೊಸ ತಲೆಮಾರಿನ ಕ್ರಿಕೆಟ್ಅಭಿಮಾನಿಗಳಿಗೆ ‘83’ ಸಿನಿಮಾ ಒಂದು ಹೊಸ ಸಂಚಲನ. ಭಾರತವು 1983ರ ಕ್ರಿಕೆಟ್ವರ್ಲ್ಡ್ಕಪ್ಗೆದ್ದ ಪಯಣವನ್ನುಭಜರಂಗಿ ಭಾಯಿಜಾನ್‌’ ಖ್ಯಾತಿಯ ನಿರ್ದೇಶಕ ಕಬೀರ್ಖಾನ್ಸೊಗಸಾಗಿ ಕಟ್ಟಿಕೊಟ್ಟಿದ್ದಾರೆ. ಸಿನಿಮಾ ಆರಂಭವಾಗಿಕಪ್ಗೆಲ್ಲುವತನಕ ನಿಮ್ಮ ಕಣ್ಣಂಚಿನಲ್ಲಿರುವ ನೀರು ಹೊರ ಬೀಳಲು ಕಾಯುತ್ತಲೇ ಇರುತ್ತದೆ. ನಡುನಡುವೆ ಒಂಚೂರು ಹಾಸ್ಯ, ವಿಷಾದ, ತುಂಟಾಟ, ನೋವು... ಹೀಗೆ ಹಲವು ಭಾವಗಳು ನಿಮ್ಮನ್ನು ಅಪ್ಪಿಕೊಂಡು, ಸೀಟಿನಂಚಿಗೆ ಬಂದು ಕೂಡುವಂತೆ ಮಾಡುತ್ತವೆ.

ಬಯೋಪಿಕ್ಸಿನಿಮಾಗಳನ್ನು ಮಾಡುವಾಗ ಡಾಕ್ಯುಮೆಂಟರಿಯಾಗುವ ಅಪಾಯವೇ ಹೆಚ್ಚು. ಒಂಚೂರು ಆಚೆ, ಈಚೆಯಾದರೂ ಸಿನಿಮಾ ಚೌಕಟ್ಟು ಮೀರುತ್ತದೆ. ಕೆಲವೊಮ್ಮೆ ನೈಜ ಘಟನೆಗಳ ಜತೆಗೆ ನಿರ್ದೇಶಕ ತನಗಿರುವ ಸೃಜನಾತ್ಮಕ ಸ್ವಾತಂತ್ರ್ಯ­ವನ್ನು ಬಳಸಿಕೊಂಡುಕತೆಯನ್ನೂ ಕಟ್ಟುತ್ತಾನೆ. ಆದರೆ, 83 ಸಿನಿಮಾದಲ್ಲಿಫಿಲ್ಮೀ ಕತೆಗೆ ಅಷ್ಟೇನೂ ಜಾಗವಿಲ್ಲ. ರಿಯಲ್ಕತೆಯನ್ನು ರೀಲ್ನಲ್ಲಿಅಷ್ಟೇ ರಿಯಲ್ಆಗಿ ತೋರಿಸುವಲ್ಲಿಯಶಸ್ವಿಯಾಗಿದ್ದಾರೆ. ಹಾಗಾಗಿ, ಕಪಿಲ್ಆ್ಯಂಡ್ಟೀಂ ಅಂದು ಅನುಭವಿಸಿದ ಎಲ್ಲಟೀಕೆ, ಉಡಾಫೆ, ನಿರ್ಲಕ್ಷ್ಯ ಎಲ್ಲವನ್ನೂ ತೆರೆಯ ಮೇಲೆ ತರಲು ಸಾಧ್ಯವಾಗಿದೆ. ಸುಮಾರು ಎರಡೂವರೆ ಗಂಟೆಯ ಸಿನಿಮಾ ಒಂದೇ ಗಂಟೆಯಲ್ಲಿಮುಗಿದ ಅನುಭವವಾಗುತ್ತದೆ!

ಕತೆ ಏನೆಂದು ಕೇಳಿದರೆ ಅದು ಎಲ್ಲರಿಗೂ ಗೊತ್ತಿರುವಂಥದ್ದೇ! ‘ಅಂಡರ್ಡಾಗ್‌’ ಹಣೆಪಟ್ಟಿ ಹೊತ್ತಿದ್ದ ತಂಡವೊಂದು ಯಾರೂ ನಿರೀಕ್ಷಿಸದ ರೀತಿಯಲ್ಲಿಸಾಹಸ ಮೆರೆಯುವಂಥದ್ದು. 1983ರ ವಿಶ್ವಕಪ್ಪಂದ್ಯಾವಳಿಗೆ ಹೊರಟ ತಂಡದ ಮೇಲೆ ಕ್ರಿಕೆಟ್ಮಂಡಳಿಯ ಅಧಿಕಾರಿಗಳಿಂದ ಹಿಡಿದು ದೇಶ, ವಿದೇಶಗಳಲ್ಲಿರುವ ಅಭಿಮಾನಿಗಳಿಗೆ ಮಾತ್ರವಲ್ಲದೆ ತಂಡಕ್ಕೆ ಆಯ್ಕೆಯಾದ ಆಟಗಾರರಿಗೆಗೆಲ್ಲುವವಿಶ್ವಾಸವಿರುವುದಿಲ್ಲ. ಈ ಹಿಂದಿನ ಎರಡು ವರ್ಲ್ಡ್ಕಪ್ನಲ್ಲಿಭಾರತದ ಪ್ರದರ್ಶನ ಹೀನಾಯವಾಗಿರುತ್ತದೆ. ಹಾಗಾಗಿ, ಯಾರಿಗೂ ಯಾವ ನಿರೀಕ್ಷೆಗಳೂ ಇರುವುದಿಲ್ಲ; ಕಪಿಲ್ದೇವ್ಎಂಬ ಆತ್ಮವಿಶ್ವಾಸದ ನಾಯಕನೊಬ್ಬನನ್ನು ಹೊರತುಪಡಿಸಿ. ಭಾರತದ ತಂಡದ ಬಗ್ಗೆ ತೂರಿ ಬರುವ ಎಲ್ಲ ಅವಮಾನಗಳನ್ನು ಶಾಂತವಾಗಿಯೇ ಸ್ವೀಕರಿಸಿ, ಸಹ ಆಟಗಾರರನ್ನು ಹುರಿದುಂಬಿಸುತ್ತ, ಅವರಲ್ಲಿರುವ ಶಕ್ತಿ ಸಾಮರ್ಥ್ಯದ ಬಗ್ಗೆ ಅರುಹುತ್ತಾ ಹೊಸ ಇತಿಹಾಸಕ್ಕೆ ನಾಂದಿ ಹಾಡುತ್ತಾರೆಇಂಗ್ಲಿಷ್ಮೋಹಿಕಪಿಲ್‌. ಈ ಪಾತ್ರವನ್ನು ನಟ ರಣವೀರ್ಸಿಂಗ್ಅಕ್ಷ ರಶಃ ಜೀವಿಸಿದ್ದಾರೆ. ಅಂದಿನ ಕ್ರಿಕೆಟ್ತಂಡದ ಯಶಸ್ಸಿನ ಶ್ರೇಯದಲ್ಲಿಮ್ಯಾನೇಜರ್ಪಿ. ಆರ್‌. ಮಾನ್ಸಿಂಗ್ಅವರಿಗೂ ಪಾಲು ಸಲ್ಲುತ್ತದೆ. ಆ ಪಾತ್ರದಲ್ಲಿಪ್ರತಿಭಾವಂತ ನಟ ಪಂಕಜ್ತ್ರಿಪಾಠಿ ನಿಮ್ಮನ್ನು ಕಾಡುತ್ತಾರೆ. ಕ್ರಿಕೆಟ್ತಂಡದ ಮ್ಯಾನೇಜರ್ಒಬ್ಬರು, ವಿಮಾನ ಟಿಕೆಟ್ಕ್ಯಾನ್ಸಲ್ಮಾಡಿದರೆ ಎಷ್ಟು ದುಡ್ಡು ಕೊಡಬೇಕಾಗುತ್ತದೆ ಎಂಬ ಲೆಕ್ಕ ಹಾಕುತ್ತಲೇ, ‘ನಮಗೆ ಸ್ವಾತಂತ್ರ್ಯ ಸಿಕ್ಕಿದೆ, ಇನ್ನೂ ಗೌರವ ಸಿಕ್ಕಿಲ್ಲಎಂದು ಹೇಳುತ್ತಾ ವಿಷಾದ ಮತ್ತು ವಾಸ್ತವವನ್ನು ಒಟ್ಟೊಟ್ಟಿಗೆ ತಂದಿಡುತ್ತಾರೆ. ಶ್ರೀಕಾಂತ್‌, ಮೊಹಿಂದರ್ಅಮರನಾಥ್‌, ಮದನಲಾಲ್‌, ಕೀರ್ತಿ ಆಜಾದ್‌, ಸಂದೀಪ್ಪಾಟೀಲ್‌, ಸಯ್ಯದ್ಕೀರ್ಮಾನಿ, ರೋಜರ್ಬಿನ್ನಿ, ಸುನಿಲ್ಗವಾಸ್ಕರ್‌, ಯಶಪಾಲ್ಶರ್ಮಾ, ಬಲ್ವಿಂದರ್ಸಿಂಗ್ಸಂಧು, ದಿಲಿಪ್ವೆಂಗ್ಸರ್ಕಾರ್ಹೀಗೆ ಎಲ್ಲಈ ದಂತಕತೆಗಳಾದ ಆಟಗಾರರ ಪಾತ್ರವನ್ನು ಪೋಷಣೆ ಮಾಡಿರುವ ನಟರು, ಮೂಲ ಕ್ರಿಕೆಟಿಗರನ್ನು ತೆರೆಯ ಮೇಲೆ ಬಹುತೇಕ ಪ್ರಾಮಾಣಿಕವಾಗಿ ತಂದಿದ್ದಾರೆ; ಅವರದ್ದೇ ಆಂಗಿಕ ಭಾಷೆಯನ್ನು ಯಶಸ್ವಿಯಾಗಿ ಬಳಸಿಕೊಂಡಿದ್ದಾರೆ.

1983ರ ವರ್ಲ್ಡ್ಕಪ್ನ ಯಶಸ್ಸು ಭಾರತದಲ್ಲಿಸಾಮಾಜಿಕವಾಗಿ, ಕ್ರೀಡಾ ಕ್ಷೇತ್ರದಲ್ಲಿಹೇಗೆ ಬದಲಾವಣೆಗೆ ಕಾರಣವಾಯಿತು ಎಂಬುದನ್ನು ಸೂಚ್ಯವಾಗಿ ನಿರ್ದೇಶಕರು ಹೇಳುತ್ತಾರೆ. ಫೈನಲ್ಮ್ಯಾಚ್ಆರಂಭವಾದಾಗ, ಬಾಲಕ ಸಚಿನ್ತೆಂಡೂಲ್ಕರ್ಟಿವಿ ಮುಂದೆ ಕುಳಿತುಕೊಳ್ಳುವುದು; ತಂಡ ಗೆದ್ದಾಗ ಭಾರತದ ಪರ ಆಡುವೆ ಎಂದು ಕೂಗುವುದು, ಕೋಮು ಹಿಂಸಾಚಾರದಿಂದಾಗಿ ಒಡೆದಿದ್ದ ಮನಸ್ಸುಗಳು ಒಂದಾಗುವುದು, ಕ್ರಿಕೆಟ್ಅನ್ನೇ ಸಮಸ್ಯೆಗೆ ಪರಿಹಾರವಾಗಿ ಬಳಸಿಕೊಳ್ಳುವ ನಾಯಕತ್ವ, ವಿದೇಶಗಳಲ್ಲಿಭಾರತೀಯ ಕ್ರಿಕೆಟ್ಅಭಿಮಾನಿಗಳು ನೋವು-ನಲಿವು, ಕ್ರಿಕೆಟ್ಅಂಗಣ­ದಲ್ಲಿಭಾರತ ರನ್ಹೊಡೆದಾಗಲೆಲ್ಲ ಗಡಿಯಿಂದ ತೂರಿ ಬರುವ ಗುಂಡುಗಳು... ಹೀಗೆ ಆ ಕಾಲಘಟ್ಟದ ಎಲ್ಲತಳಮಳಗಳನ್ನು ಕ್ರಿಕೆಟ್ನೊಟ್ಟಿಗೆ ಚಿತ್ರಿಸುವಲ್ಲಿಯಶಸ್ವಿಯಾಗಿದ್ದಾರೆ ಕಬೀರ್‌. ಸಿನಿಮಾದಲ್ಲಿಅಲ್ಲಲ್ಲಿಮೂಲ ಪಂದ್ಯಾವಳಿಯ ಫೋಟೊಗ್ರಾಫ್ಗಳನ್ನು, ವಿಡಿಯೊ ತುಣುಕುಗಳನ್ನು ಬಳಸಿಕೊಳ್ಳುವ ಮೂಲಕ ಕತೆ ಹೇಳುವ ರೀತಿಗೆ ಹೊಸ ಶೈಲಿಯನ್ನು ಶೋಧಿಸಿದ್ದಾರೆ ನಿರ್ದೇಶಕರು.

ಬಿಬಿಸಿ ನಿರ್ಲಕ್ಷ್ಯದಿಂದಾಗಿ ಜಿಂಬಾಬ್ವೆ ವಿರುದ್ಧ ಕಪಿಲ್ದೇವ್ಆಟವನ್ನು ನೋಡಲು ಅಂದಿನವರಿಗೆ ಸಾಧ್ಯವಾಗಿರಲಿಲ್ಲ. ಆ ಪಂದ್ಯದಲ್ಲಿಏಕಾಂಗಿಯಾಗಿ ಕಪಿಲ್ಅವರ ವಿಶ್ವದಾಖಲೆಯ ಆಟವನ್ನು ಕಣ್ತುಂಬಿ­ಕೊಳ್ಳಬೇಕಿದ್ದರೆ 83 ಮಿಸ್ಮಾಡಿಕೊಳ್ಳಬೇಡಿ.

 

ನಿರ್ದೇಶನ: ಕಬೀರ್ಖಾನ್‌, ತಾರಾಗಣ: ರಣವೀರ್ಸಿಂಗ್‌, ಜೀವಾ, ಪಂಕಜ್ತ್ರಿಪಾಠಿ, ದೀಪಿಕಾ ಪಡುಕೋಣೆ, ತಾಹಿರ್ರಾಜ್ಬಾಷಿನ್‌, ಜತಿನ್ಸರಣ್ಮತ್ತಿತರರು. ರೇಟಿಂಗ್‌: ****

(ಈ ವಿಮರ್ಶೆ ವಿಜಯ ಕರ್ನಾಟಕದ ಪತ್ರಿಕೆಯಲ್ಲಿ ಪ್ರಕಟವಾಗಿದೆ.)