Vyaktigat ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
Vyaktigat ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಶುಕ್ರವಾರ, ಜುಲೈ 15, 2022

Briton former PM Boris Johnson: ಮೋಜುಗಾರ ಬೋರಿಸ್‌ ಜಾನ್ಸನ್

ಬೋರಿಸ್‌ ಜಾನ್ಸನ್‌ ಬ್ರಿಟನ್‌ ಪಿಎಂ ಸ್ಥಾನವನ್ನು ತೊರೆದಿದ್ದಾರೆ. ವಿಲಕ್ಷ ಣ ವ್ಯಕ್ತಿತ್ವದೊಂದಿಗೆ ನಾಯಕತ್ವವನ್ನು ಪ್ರದರ್ಶಿಸುತ್ತಿದ್ದ ಬೋರಿಸ್‌ ಜೀವನವೇ ಮಜವಾಗಿದೆ.


- ಮಲ್ಲಿಕಾರ್ಜುನ ತಿಪ್ಪಾರ
ಐರೋಪ್ಯ ಒಕ್ಕೂಟದಿಂದ ಬ್ರಿಟನ್‌ ಹೊರ ಬರುವ ‘ಬ್ರೆಕ್ಸಿಟ್‌’ ಪ್ರಕ್ರಿಯೆಯನ್ನು ಅಡೆ-ತಡೆಗಳ ಮಧ್ಯೆಯೇ ಪೂರ್ಣಗೊಳಿಸಿದ ಬೋರಿಸ್‌ ಜಾನ್ಸನ್‌, ಪ್ರಧಾನಿ ಪಟ್ಟದಿಂದಲೇ ‘ಎಕ್ಸಿಟ್‌’ ಆಗಿದ್ದಾರೆ. ಇತ್ತೀಚಿನ ವರ್ಷಗಳಲ್ಲಿಬ್ರಿಟನ್‌ ಕಂಡ ‘ವಿಲಕ್ಷ ಣ’ ಪ್ರಧಾನಿ ಅವರು. ತಮ್ಮ ಮ್ಯಾನರಿಸಂ ಹಾಗೂ ನಿರ್ಧಾರಗಳ ಮೂಲಕ ಅದನ್ನು ಆಗಾಗ ಸಾಬೀತು ಮಾಡಿದ್ದಾರೆ. 58 ವರ್ಷದ ಬೋರಿಸ್‌ ಮೇಲ್ನೋಟಕ್ಕೆ ಹುಡುಗಾಟದ ಹುಡುಗನಂತೆ ಕಂಡರೂ, ಆಳದಲ್ಲಿಅವರಲ್ಲೊಬ್ಬ ನಾಯಕನಿದ್ದಾನೆ, ಸಂದರ್ಭ ಬಂದಾಗೆಲ್ಲಗಟ್ಟಿ ನಿರ್ಧಾರಕ್ಕೆ ಹಿಂಜರಿಯುವುದಿಲ್ಲಎಂಬುದನ್ನು ಈ ಮೂರು ವರ್ಷಗಳಲ್ಲಿಮನದಟ್ಟು ಮಾಡಿಸಿದ್ದಾರೆ.

ಬೋರಿಸ್‌ ಅವರು ಹಗರಣಗಳಲ್ಲೇ ಕಾಲ ಹರಣ ಮಾಡಿದಂತಿದೆ. ಕೆಲವೊಂದರಲ್ಲಿಅವರೇ ನೇರವಾಗಿ ಭಾಗಿಯಾದರೆ, ಮತ್ತೊಂದಿಷ್ಟು ಅವರಿಗೆ ಸಂಬಂಧ ಇರದಿದ್ದರೂ ತಲೆ ಕೊಡಬೇಕಾದ ಪರಿಸ್ಥಿತಿ ಎದುರಾಯಿತು. ಅವರ ರಾಜೀನಾಮೆಯ ಕೊನೆಯ ಪರದೆ ಎಳೆದಿದ್ದು, ನಾರಾಯಣಮೂರ್ತಿ ಅವರ ಅಳಿಯ ಹಾಗೂ ವಿತ್ತ ಸಚಿವರಾಗಿದ್ದ ರಿಷಿ ಸುನಾಕ್‌ ಮತ್ತು ಪಾಕಿಸ್ತಾನ ಮೂಲದ, ಆರೋಗ್ಯ ಸಚಿವ ಸಾಜಿದ್‌ ಜಾವಿದ್‌. ಇವರಿಧಿಬ್ಬರೂ ತಮ್ಮ ಹುದ್ದೆಗಳಿಂದ ನಿರ್ಗಮಿಸಿ, ಬೋರಿಸ್‌ ಅವರು ಪ್ರಧಾನಿ ಹುದ್ದೆಯನ್ನು ತ್ಯಜಿಸಲೇಬೇಕಾದ ಒತ್ತಡ ಸೃಷ್ಟಿಸಿದರು. ರಾಜಕೀಯವಾಗಿ ಬ್ರಿಟನ್‌ನ ಅತ್ಯುಧಿನ್ನತ ಹುದ್ದೆಗೇರಿದ ಬೋರಿಸ್‌ ಅವರ ಲೈಫ್‌ ಅಷ್ಟೇ ಕಲರ್‌ಫುಲ್‌. ವರ್ಣರಂಜಿತ ವ್ಯಕ್ತಿತ್ವ. ವೃತ್ತಿ, ಮದುವೆ ಹಾಗೂ ರಾಜಕೀಯದಲ್ಲಿಅವರದ್ದು ಎಂದೂ ಸರಳಧಿರೇಖೆಯಂಥ ಬದುಕಲ್ಲ; ವಕ್ರಗೆರೆಗಳೇ ಸೇರಿ ಹುಟ್ಟಿದ ಚಿತ್ತಾರ. 37ನೇ ವಯಸ್ಸಿಗೆ ಬ್ರಿಟನ್‌ ಸಂಸತ್ತಿಗೆ ಆಯ್ಕೆಯಾದ ಅವರು 7 ವರ್ಷ ಅನುಭವ ಪಡೆದರು. 2008ರಿಂದ 2016ರವರೆಗೆ ಲಂಡನ್‌ನ ಮೇಯರ್‌ ಆಗಿದ್ದರು. 2016ರಿಂದ 2018ರವರೆಗೆ ಬ್ರಿಟನ್‌ನ ವಿದೇಶಾಂಗ ಸಚಿವರಾಗಿ ತಮ್ಮ ವ್ಯಾಪ್ತಿಯನ್ನು ಇನ್ನಷ್ಟು ವಿಸ್ತರಿಸಿದರು. ಮೇಯರ್‌ ಆಗಿದ್ದ ಕಾಲದಲ್ಲಿಒಲಿಂಪಿಕ್ಸ್‌ ಕೂಟವನ್ನು ಯಶಸ್ವಿಯಾಗಿ ನಡೆಸಿದ ಹೆಗ್ಗಳಿಕೆ ಅವರಿಗಿದೆ. ಇದೇ ಸಾಧನೆಯೇ ಅವರಿಗೆ ಕನ್ಸರ್ವೇಟಿವ್‌ ಪಕ್ಷ ದೊಳಗೆ ಗಟ್ಟಿ ನಾಯಕನ ಸ್ಥಾನ ಒದಗಿಸಿ,  ಬ್ರಿಟನ್‌ ಪ್ರಧಾನಿ ಹುದ್ದೆಯವರೆಗೂ ಕರೆ ತಂದಿತು. 

· ಹಲವು ಅಡೆತಡೆಗಳ ಮಧ್ಯೆಯೇ ಬ್ರೆಕ್ಸಿಟ್‌ ಪ್ರಕ್ರಿಯೆ ಪೂರ್ಣಗೊಳಿಸಿದ ಬ್ರಿಟನ್‌ನ ಪ್ರಧಾನಿ
· ಹಲವು ಹಗರಣಗಳು, ಅಪವಾದಗಳು ಬೋರಿಸ್‌ ನೇತೃತ್ವದ ಸರಕಾರ ವಿಶ್ವಾಸ ಕಳೆದುಕೊಳ್ಳಲು ಕಾರಣ
· ಲಂಡನ್‌ ಮೇಯರ್‌ ಆಗಿ ಬೋರಿಸ್‌ ಅತ್ಯುತ್ತಮ ಕೆಲಸ ಮಾಡಿ ಹೆಸರುವಾಸಿಯಾಗಿದ್ದರು

ಬೋರಿಸ್‌ ಪೂರ್ತಿ ಹೆಸರು ಅಲೆಕ್ಸಾಂಡರ್‌ ಬೋರಿಸ್‌ ಡಿ ಪಿಫೆಲ್‌ ಜಾನ್ಸನ್‌. ಅಮೆರಿಕದ ನ್ಯೂಯಾರ್ಕ್‌ ಸಿಟಿಯಲ್ಲಿ1964 ಜೂನ್‌ 19ರಂದು ಜನಿಸಿದರು. ತಂದೆ ಇಂಗ್ಲಿಷ್‌ಮನ್‌ ಸ್ಟ್ಯಾನ್ಲಿಜಾನ್ಸನ್‌. ತಾಯಿ ಷಾರ್ಲೆಟ್‌ ಫಾಸೆಟ್‌. ಕಾಲೇಜಿನಲ್ಲಿದ್ದಾಗಲೇ ಇವರಿಬ್ಬರಿಗೆ ಬೋರಿಸ್‌ ಜನಿಸಿದರು. ಹಾಗಾಗಿ, ಬೋರಿಸ್‌ ಜಾನ್ಸನ್‌ ಅವರಿಗೆ ದ್ವಿಪೌರತ್ವವಿತ್ತು. ಆದರೆ, ತೆರಿಗೆ ಭಾರ ತಾಳಲಾರದೇ 2016ರಲ್ಲಿಅಮೆರಿಕದ ಪೌರತ್ವವನ್ನು ಬಿಟ್ಟುಕೊಟ್ಟರು. ಬೋರಿಸ್‌ಗೆ ಐದು ವರ್ಷ ಆದಾಗ, ಅವರ ತಂದೆ ಬ್ರಿಟನ್‌ಗೆ ಮರಳಿದರು. ಬಾಲ್ಯದಲ್ಲಿಬೋರಿಸ್‌ ಕಿವುಡರಾಗಿದ್ದರು. ಆದರೆ, ಈ ಸಮಸ್ಯಯೇನೂ ದೀರ್ಘಾವಧಿಗೆ ಇರಲಿಲ್ಲ. ಆಕ್ಸ್‌ಫರ್ಡ್‌ನಲ್ಲಿಶಿಕ್ಷ ಣವನ್ನು ಪಡೆದುಕೊಂಡರು. 

1987ರಲ್ಲಿಕಾಲೇಜ್‌ ಶಿಕ್ಷ ಣ ಪೂರೈಸಿದ ಬಳಿಕ ದಿ ಟೈಮ್ಸ್‌ನಲ್ಲಿಪತ್ರಕರ್ತರಾಗಿ ಕೆಲಸಕ್ಕೆ ಸೇರಿಕೊಂಡರು. ವರದಿ ವೇಳೆ ಮೂಲವನ್ನು ತಪ್ಪಾಗಿ ಉಲ್ಲೇಖಿಸಿದ ಪರಿಣಾಮ ಅವರನ್ನು ಕೆಲಸದಿಂದ ಕಿತ್ತು ಹಾಕಲಾಯಿತು. ಇಷ್ಟಾಗಿಯೂ ಬೋರಿಸ್‌ ದಿ ಡೈಲಿ ಟೆಲಿಗ್ರಾಫ್‌, ದಿ ಸ್ಪೆಕ್ಟೇಟರ್‌ನಂಥ ಪತ್ರಿಕೆಗಳಲ್ಲಿಕೆಲಸವನ್ನು ಪಡೆದುಕೊಳ್ಳಲು ಯಶಸ್ವಿಯಾದರೂ, ಹೇಳಿಕೊಳ್ಳುವಂಥ ಸಕ್ಸೆಸ್‌ ಸಿಗಲಿಲ್ಲ. ಆದರೆ, ಕಡಿಮೆ ಅವಧಿಯಲ್ಲೇ ಬಲಪಂಥೀಯ ಒಲವು ಉಳ್ಳ ಓದುಗರನ್ನು ತಮ್ಮತ್ತ ಸೆಳೆಯಲು ಯಶಸ್ವಿಯಾದರು. 80ರ ದಶಕದಲ್ಲಿ100 ಜನರ ಸಾವಿಗೆ ಕಾರಣವಾದ ಫುಟ್‌ಬಾಲ್‌ ಸ್ಟೇಡಿಯಂ ದುರಂತದ ಬಗ್ಗೆ ವಕ್ರವಾಗಿ ಮಾತನಾಡಿ, ಟೀಕೆಗೆ ಗುರಿಯಾಗಿದ್ದರು. ಸಂಪಾದಕೀಯಕ್ಕೆ ಸಂಬಂಧಿಸಿದಂತೆ ಸಂವೇದನಾ ರಹಿತವಾಗಿ ಮತ್ತು ಅಶ್ಲೀಲ ಕಮೆಂಟ್‌ ಮಾಡಿ, ಕ್ಷ ಮೆ ಕೇಳಿದ ಘಟನೆ 2004ರಲ್ಲಿನಡೆಯಿತು.

ಬೋರಿಸ್‌ ದೈಹಿಕ ಚಟುವಟಿಕೆಗಳು ಮತ್ತು ವ್ಯಾಯಾಮಗಳನ್ನು ಬಲವಾಗಿ ಪ್ರತಿಪಾದಿಸುತ್ತಾರೆ. ಅವರಿಗೆ ಫುಟ್‌ಬಾಲ್‌, ರಗ್ಬಿ ತುಂಬಾ ಇಷ್ಟ. ಜಾಗಿಂಗ್‌ ಇನ್ನೂ ಇಷ್ಟ. ಹಾಗಾಗಿ, ಲಂಡನ್‌ನ ಬೀದಿಗಳಲ್ಲಿಜಾಗಿಂಗ್‌ ಮಾಡುತ್ತಾ ಸೈಕಲ್‌ ರೈಡ್‌ ಮಾಡುತ್ತಾ ಹೋಗುವುದನ್ನು ಜನ ನೋಡಬಹುದು. ರಗ್ಬಿ ವಿಷಯದಲ್ಲಿಇವರ ಭಾವಾವೇಶ ಎಷ್ಟೆಂದರೆ, ವಿದೇಶಾಂಗ ಕಾರ್ಯದರ್ಶಿಯಾಗಿ ಜಪಾನ್‌ಗೆ ಹೋಗಿದ್ದಾಗ ಆಟವಾಡುತ್ತಾ 10 ವರ್ಷದ ಬಾಲಕನೊಬ್ಬನನ್ನು ದೂಡಿ ಹಾಕಿದ್ದು ಭಾರಿ ಸುದ್ದಿಯಾಗಿತ್ತು. 2006ರಲ್ಲಿಫಿಫಾ ವರ್ಲ್ಡ್‌ ಕಪ್‌ ಪಂದ್ಯಾವಳಿ ವೇಳೆಯೂ ಬೋರಿಸ್‌ ಟೀಕೆಗೆ ಗುರಿಯಾಗಿದ್ದರು.

ರಾಸಲೀಲೆ ಕತೆಗಳು, ಹಗರಣಗಳು, ವಿಲಕ್ಷ ಣ ವ್ಯಕ್ತಿತ್ವದಿಂದಲೇ ಬೋರಿಸ್‌ ಹೊರ ಜಗತ್ತಿಗೆ ಹೆಚ್ಚು ಗೊತ್ತು. ಆದರೆ, ‘ಮಾಡೆಲ್‌ ಬಸ್‌’ಗಳನ್ನು ತಯಾರಿಸುವ ಪ್ರತಿಭೆ ಹೊಂದಿದ್ದಾರೆಂಬುದು ಬಹಳಷ್ಟು ಜನರಿಗೆ ಗೊತ್ತಿಲ್ಲ. ಹಾಗಂತ ಅವರೇನೂ ಫ್ಯಾನ್ಸಿ ಬಸ್‌ಗಳನ್ನು ಮಾಡುವುದಿಲ್ಲ. ಬದಲಿಗೆ, ಹಳೆಯ ಮದ್ಯದ ಬಾಕ್ಸ್‌ಗಳು, ಪೇಂಟ್ಸ್‌ ಬಳಸಿಕೊಂಡು ಉತ್ಕೃಷ್ಟವಾದ ಮಾಡೆಲ್‌ ಬಸ್‌ಗಳನ್ನು ಮಾಡುವ ಹವ್ಯಾಸ ಬೆಳೆಸಿಕೊಂಡಿದ್ದಾರೆ. ಬಹುಶಃ ಅವರ ಈ ಹವ್ಯಾಸವೇ ‘ಬೋರಿಸ್‌ ಬಸ್‌’ ಯೋಜನೆಗೆ ಕಾರಣವಾಗಿರಬಹುದು. ಲಂಡನ್‌ನಲ್ಲಿಹೈಬ್ರಿಡ್‌ ಸಾರ್ವಜನಿಕ ಬಸ್‌ ಸೌಲಭ್ಯ ಕಲ್ಪಿಸಿದ್ದರು. ಆದರೆ, ಲಂಡನ್‌ ಮೇಯರ್‌ ಹುದ್ದೆಯಿಂದ ಕೆಳಗಿಳಿಯುಧಿತ್ತಿದ್ದಂತೆ ಆ ಯೋಜನೆ ಕೂಡ ರದ್ದಾಯಿತು. 

ಜಾನ್ಸನ್‌ ಅವರ ಎರಡನೇ ಪತ್ನಿಧಿಯಾಗಿದ್ದ ಮರೀನಾ ವೀಲರ್‌ ಭಾರತ ಮೂಲಧಿದವರು. ಇವರು ಪತ್ರಕರ್ತ ಸರ್‌ ಚಾರ್ಲ್ಸ್ ವೀಲರ್‌ ಮತ್ತು ದೀಪ್‌ ಸಿಂಗ್‌ ಮಗಳು. ಈ ದೀಪ್‌ ಸಿಂಗ್‌ ಯಾರೆಂದರೆ, ಖ್ಯಾತ ಬರಹಗಾರ ಖುಷ್ವಂತ್‌ ಸಿಂಗ್‌ ಅವರ ತಮ್ಮ ದಲ್ಜಿತ್‌ ಸಿಂಗ್‌ ಅವರ ಮೊದಲ ಪತ್ನಿ. ಹೀಗೆ, ಆಕೆ ಭಾರತದ ಮಗಳು. ಹಾಗಾಗಿ ಜಾನ್ಸನ್‌ ಕೂಡ ಭಾರತದ ಅಳಿಯ ಎನ್ನಬಹುದು. ಈ ಮದುವೆ 2020ರಲ್ಲಿವಿಚ್ಛೇದನದೊಂದಿಗೆ ಸಮಾಪ್ತಿಯಾಯಿತು. 2021ರಲ್ಲಿಕ್ಲೈಮೆಟ್‌ ಆ್ಯಕ್ಟಿವಿಸ್ಟ್‌ ಕ್ಯಾರಿ ಸೈಮಂಡ್ಸ್‌ ಅವರನ್ನು ಮದುವೆಯಾಗಿದ್ದಾರೆ. ಇವರ ಮೊದಲನೆಯ ಪತ್ನಿ ಹೆಸರು ಅಲ್ಲೆಗ್ರಾ. ಇವರನ್ನು 1987ರಲ್ಲಿಮದವೆಯಾದರು, 1993ರಲ್ಲಿವಿಚ್ಛೇದನ ನೀಡಿದರು. 

· ಅಮೆರಿಕ ಮತ್ತು ಇಂಗ್ಲೆಡ್‌ ದ್ವಿಪೌರತ್ವ ಹೊಂದಿದ್ದ ಜಾನ್ಸನ್‌ ಅಮೆರಿಕ ಪೌರತ್ವ ತ್ಯಜಿಸಿದ್ದಾರೆ
· ದಿ ಟೈಮ್ಸ್‌, ದಿ ಸ್ಪೆಕ್ಟೇಟರ್‌, ದಿ ಟೆಲಿಗ್ರಾಫ್‌ ಪತ್ರಿಕೆಗಳಲ್ಲಿಕೆಲಸ, ಅಂಥ ಸಕ್ಸೆಸ್‌ ಏನೂ ಸಿಗಲಿಲ್ಲ
· ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿರುವ ಬೋರಿಸ್‌ ಮುಂದಿನ ನಡೆಯ ಬಗ್ಗೆ ಕುತೂಹಲ

ಬೋರಿಸ್‌ ದಿ ಸ್ಪೆಕ್ಟೇಟರ್‌ ಪತ್ರಿಕೆಯಲ್ಲಿಕೆಲಸ ಮಾಡುತ್ತಿದ್ದಾಗ ಇಬ್ಬರು ಮಹಿಳೆರ ಮೇಲೆ ಕೈ ಹಾಕಿದ್ದರಂತೆ. ಮುಂದೆ ಪ್ರಧಾನಿಯಾದಾಗ ಆ ಮಹಿಳೆಯರು ಈ ವಿಷಯವನ್ನು ಬಹಿರಂಗಪಡಿಸಿದರು. ಶಾಡೋ ಆರ್ಟ್‌ ಮಿನಿಸ್ಟರ್‌ ಆಗಿದ್ದಾಗ ಪೆಟ್ರೋನೆಲ್ಲಾವ್ಯಾಟ್‌ ಜತೆಗಿನ ಅನೈತಿಕ ಸಂಬಂಧ ಹೊರಬೀಳುತ್ತಿದ್ದಂತೆ ಬೋರಿಸ್‌ 2004ರಲ್ಲಿತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು. 2009ರಲ್ಲಿಲಂಡನ್‌ ಮೇಯರ್‌ ಆಗಿದ್ದಾಗ, ಹೆಲೆನ್‌ ಮ್ಯಾಕಿನ್ರ್ಟೈ ಎಂಬಾಕೆ ಜತೆ ದೈಹಿಕ ಸಂಪರ್ಕದಲ್ಲಿದ್ದರು. ಅಲ್ಲದೇ ಹೆಣ್ಣು ಮಗುವಿನ ತಂದೆ ಕೂಡ ಆದರು. ಬೋರಿಸ್‌ ರಾಸಲೀಲೆ ಕತೆಗಳು ಬ್ರಿಟನ್‌ನ ಟ್ಯಾಬ್ಲಾಯ್ಡ್‌ಗಳಿಗೆ ಭಾರಿ ಸುದ್ದಿ ಭೋಜನವನ್ನು ಒದಗಿಸುತ್ತಿದ್ದವು. 

ಏನೇ ಆಗಲಿ, ಬ್ರಿಟನ್‌ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಮೆಚ್ಚಿಕೊಳ್ಳಧಿಲೇಬೇಕು. ತಮ್ಮದೇ ಪಕ್ಷ ದ ನಾಯಕನೊಬ್ಬ ಹಾದಿ ತಪ್ಪುತ್ತಿರುವುದು ಗೊತ್ತಾಗುಧಿತ್ತಿದ್ದಂತೆ ಅದನ್ನು ಪ್ರಜಾಸತ್ತಾತ್ಮಕ ರೀತಿಯಲ್ಲಿಪ್ರತಿಭಟಿಸುತ್ತಾರೆ, ಪಕ್ಷ ದೊಳಗೇ ಭಿನ್ನಭಿಪ್ರಾಯಗಳಿಗೆ ಬೆಲೆ ನೀಡುತ್ತಾರೆ. ಈ ಒಂದು ಗುಣವೇ ಜಗತ್ತಿನ ಎಲ್ಲರಾಷ್ಟ್ರಗಳ ಪ್ರಜಾ ಪ್ರಭುತ್ವಕ್ಕೆ ಮಾದರಿಯಾಗಿದೆ. ಅದೇ ಮೌಲ್ಯಗಳಿಗೆ ಬೆಲೆ ಕೊಟ್ಟು ಬೋರಿಸ್‌ ಈಗ ಬ್ರಿಟನ್‌ ಪದ ಚ್ಯುತರಾಗಿಧಿದ್ದಾರೆ. ಹಾಗಾದರೆ, ಅವರ ಮುಂದಿರುವ ದಾರಿಗಳೇನು? ಅವರೇನು ಮಾಡುತ್ತಾರೆಂಬ ಪ್ರಶ್ನೆಗಳಿಗೆ ಬ್ರಿಟನ್ನಿಗರು ಉತ್ತರ ಹುಡುಕುಧಿತ್ತಿದ್ದಾರೆ. ರಾಜಕೀಯದಲ್ಲಿಏನು ಬೇಕಾದರೂ ಆಗಬಧಿಹುದು. ಇಂದು ಹೀರೊ ಆದವರು ನಾಳೆ ವಿಲನ್‌ ಆಗಬಹುದು; ವಿಲನ್‌ಗಳು ಹೀರೊ ಆಗಬಹುದು. ಮುಂದಿನ ಪ್ರಧಾನಿ ಆಯ್ಕೆಯವರೆಗೂ ಅವರೇ ಮುಂದುಧಿವರಿಯುತ್ತಾರೆ. ಆ ಬಳಿಕ ಏನು ಮಾಡಲಿ ದ್ದಾರೆಂಬುದನ್ನು ಕಾದು ನೋಡಬೇಕು.



ಬುಧವಾರ, ಮೇ 4, 2022

Elon Musk: ಸಾಹಸಿ ಉದ್ಯಮಿ ಮಸ್ಕ್‌

ಎಲಾನ್‌ ಮಸ್ಕ್‌ ಎಂಬ ವ್ಯಕ್ತಿ ಯಾವುದೇ ಅಳತೆಗೋಲಿಗೆ ಸಿಗುವ ಜಾಯಮಾನದವರಲ್ಲ; ಅವರಿಗೆ ಅವರೇ ಅಳತೆಗೋಲು, ಹೊಡೆದಿದ್ದೆಲ್ಲಗೋಲು!


- ಮಲ್ಲಿಕಾರ್ಜುನ ತಿಪ್ಪಾರ
ಒಂದಷ್ಟು ಪ್ರತಿಭೆ; ಮತ್ತೊಂದಿಷ್ಟು ಹುಚ್ಚುತನ, ಒಂದಷ್ಟು ಉಡಾಫೆ; ಮತ್ತೊಂದಿಷ್ಟು ಧೈರ್ಯ, ಒಂದಷ್ಟು ಸಾಹಸ; ಮತ್ತೊಂದಿಷ್ಟು ಹುಚ್ಚು ಸಾಹಸ, ಒಂದಷ್ಟು ತಿಕ್ಕುಲತನ; ಮತ್ತೊಂದಿಷ್ಟು ಮೊಂಡತನ, ಒಂದಷ್ಟು ಹುಮ್ಮಸ್ಸು; ಮತ್ತೊಂದಿಷ್ಟು ಕನಸು, ಒಂದಷ್ಟು ಸೊಗಸುಗಾರ; ಮತ್ತೊಂದಿಷ್ಟು ಮೋಜುಗಾರ... ಈ ಒಂದಿಷ್ಟು ಮತ್ತು ಮತ್ತೊಂದಿಷ್ಟು ಒಟ್ಟು ಮೊತ್ತವೇ ಎಲಾನ್‌ ರೀವ್‌ ಮಸ್ಕ್‌ ಅಲಿಯಾಸ್‌ ಎಲಾನ್‌ ಮಸ್ಕ್‌.

ಭೂಮಿ ಮೇಲಿನ ಅತಿ ದೊಡ್ಡ ಶ್ರೀಮಂತ ವ್ಯಕ್ತಿ ಎಲಾನ್‌ ಮಸ್ಕ್‌, ಹೆಚ್ಚಾಗಿ ನಷ್ಟವನ್ನು ಉಲಿಯುತ್ತಿದ್ದ ‘ಟ್ವಿಟರ್‌’ ಖರೀದಿಯ ಮೂಲಕ ತಾನೆಂಥ ಹುಚ್ಚು ಸಾಹಸಿಗ ಎಂಬುದನ್ನು ಮತ್ತೊಮ್ಮೆ ನಿರೂಪಿಸಿದ್ದಾರೆ. ಈ ಹುಚ್ಚುತನ ಅವರ ವ್ಯಕ್ತಿತ್ವದಲ್ಲಿದೆ, ಯಾರೂ ಕಾಣದ ಕನಸು ಕಂಡು ಅದನ್ನು ನನಸು ಮಾಡಿಕೊಳ್ಳುವ ಛಾತಿ ಅವರಿಗೆ ಒಗ್ಗಿದೆ ಅದೇ ಕಾರಣಕ್ಕೆ. ಎಷ್ಟೋ ರಾಷ್ಟ್ರಗಳು ಚಂದ್ರನಲ್ಲಿಗೆ ಹೋಗಲು ಪ್ಲ್ಯಾನ್‌ ಮಾಡುತ್ತಿರುವಾಗಲೇ, ಮಂಗಳನ ಅಂಗಳಲ್ಲಿ ಮಾನವರ ಕಾಲನಿ ಸೃಷ್ಟಿಸಬೇಕೆಂಬ ಹುಚ್ಚು ಕನಸು ಕಾಣಲು ಸಾಧ್ಯವಾಗುವುದು ಮಸ್ಕ್‌ಗೆ ಮಾತ್ರವೇ ಸಾಧ್ಯ. ಬರೀ ಕನಸಷ್ಟೇ ಅಲ್ಲ, ಆ ದಿಶೆಯಲ್ಲಿ ಯೋಜಿಸಿ, ರೂಪಿಸಿ ಮುಂದಡಿ ಇಡಬಲ್ಲ ಧೈರ್ಯಗಾರನೂ.

ಇಲ್ಲಿ ಒಂದು ಘಟನೆ ಹೇಳಬೇಕು; ಬಿಟ್‌ ಕಾಯಿನ್‌ ಕುರಿತು ಮಸ್ಕ್‌ ಒಂದೇ ಒಂದು ಮಸ್ಕರಿ ಟ್ವೀಟ್‌ ಮಾಡಿದ್ದರು. ಅದರಿಂದ ಅವರ ಟೆಸ್ಲಾ ಕಂಪನಿಗೆ ಒಂದು ಲಕ್ಷ  ಕೋಟಿ ರೂ.ಗೆ ಅಧಿಕ ನಷ್ಟ ಉಂಟು ಮಾಡಿತು ಮತ್ತು ವಿಶ್ವದ ನಂಬರ್‌ 1 ಶ್ರೀಮಂತ ಪಟ್ಟ ಕಳೆದುಕೊಳ್ಳಬೇಕಾಯಿತು. ಮತ್ತೊಮ್ಮೆ ಟೆಸ್ಲಾ ಕಂಪನಿಯು ವರ್ಷಕ್ಕೆ 5 ಲಕ್ಷ ಕಾರುಗಳನ್ನು ತಯಾರಿಸುತ್ತಿದೆ ಎಂಬ ಉತ್ಪ್ರೇಕ್ಷೆಯ ಹೇಳಿಕೆ ನೀಡಿದ್ದಕ್ಕಾಗಿ ಕಂಪನಿಯ ಪಾಲುದಾರರು ಮಸ್ಕ್‌ನ ಮೇಲೆ ಸಿಟ್ಟಾಗಿ ಈತನ ಟ್ವಿಟ್ಟರ್‌ ಖಾತೆಯನ್ನು ನಿಷೇಧಿಸುವಂತೆ ಆಗ್ರಹಿಸಿದ್ದರು. ಮಸ್ಕ್‌ ಅವರ ಈ ತರಹದ ಹುಚ್ಚಾಟಗಳು ಬೇಕಾದಷ್ಟಿವೆ. ಆದರೆ, ಅವರ ಒಟ್ಟಾರೆ ವ್ಯಕ್ತಿತ್ವದಲ್ಲಿನಮಗೆ ಪ್ರೇರಣೆಯಾಗಬಲ್ಲಸಾಕಷ್ಟು ಸಂಗತಿಗಳಿವೆ ಎಂಬುದೂ ಅಷ್ಟೇಸತ್ಯ. 

ಎಲಾನ್‌ ಮಸ್ಕ್‌ ಅವರ ಹೆಸರಿನಲ್ಲಿ ಕಂಪನಿಗಳಿಗೆ ಒಂದಾ, ಎರಡಾ...? ಸ್ಪೇಸ್‌ಎಕ್ಸ್‌, ಟೆಸ್ಲಾ, ಬೋರಿಂಗ್‌ ಕಂಪನಿ, ಗಿ.್ಚಟಞ, ಪೇಪಾಲ್‌, ನ್ಯೂರೊಲಿಂಕ್‌, ಓಪನ್‌ಎಐ, ಝಿಪ್‌ 2, ಮಸ್ಕ್‌ ಫೌಂಡೇಷನ್‌(ಈ ಕಂಪನಿಗಳ ಪಟ್ಟಿಯಲ್ಲಿಕೆಲವು ಮಾರಿದ್ದು ಇದೆ)... ಹೀಗೆ ಪಟ್ಟಿ ದೊಡ್ಡದಿದೆ; ಈಗ ಹೊಸದಾಗಿ ಟ್ವಿಟರ್‌ ಮಾಲೀಕ. ಅವರ ಈ ಸಾಹಸ ಕಂಡು, ನೇಟಿಜನ್ಸ್‌ ಆ ಕಂಪನಿ ಖರೀದಿಸಿ, ಈ ಕಂಪನಿ ಖರೀದಿಸಿ ಎಂಬ ಪುಕ್ಕಟೆ ಸಲಹೆಗಳನ್ನು ಕೂಡ ಕೊಡುತ್ತಿದ್ದಾರೆ! ಈ ಸಲಹೆಗಳು ನಿಜವಾದರೂ ಆಗಬಹುದು. ಯಾಕೆಂದರೆ, 2017ರಲ್ಲಿಮಸ್ಕ್‌ ಅವರು, ‘‘ಐ ಲವ್‌ ಟ್ವಿಟರ್‌,’’ ಎಂದು ಟ್ವೀಟ್‌ ಮಾಡಿದ್ದರು. ‘‘ಹಾಗಿದ್ದರೆ ನೀವು ಅದನ್ನು ಖರೀದಿಸಿ,’’ ಎಂದು ನಿರೂಪಕ ಡೇವ್‌ ಸ್ಮಿತ್‌ ಮರು ಪ್ರತಿಟ್ವೀಟಿಸಿದ್ದರು. ಇದಕ್ಕೆ ಪ್ರತಿಯಾಗಿ ಮಸ್ಕ್‌, ‘‘ಎಷ್ಟಂತೆ ಅದರ ಬೆಲೆ,’’ ಎಂದು ಪ್ರಶ್ನಿಸಿದ್ದರು. ಮೊನ್ನೆ ಮಸ್ಕ್‌ ಟ್ವಿಟರ್‌ ಖರೀದಿಸಿದಾಗ ಈ ಹಳೆಯ ಟ್ವೀಟ್‌ ಸಿಕ್ಕಾಪಟ್ಟೆ ವೈರಲ್‌ ಆಗಿತ್ತು!

ಎಲಾನ್‌ ಮಸ್ಕ್‌ ಅವರು 1971ರ ಜೂನ್‌ 28ರಂದು ದಕ್ಷಿಣ ಆಫ್ರಿಕಾದಲ್ಲಿ, ಕೆನಡಾದ ತಾಯಿತಂದೆಗಳಿಗೆ ಜನಿಸಿದರು. ಅವರ ಶಾಲಾ ದಿನಗಳು ಅಷ್ಟೇನೂ ಚೆನ್ನಾಗಿರಲಿಲ್ಲ. ಅವರೇ ಹೇಳಿಕೊಂಡಿರುವಂತೆ; ಮಸ್ಕ್‌ ಪುಸ್ತಕದ ಹುಳು. ಎನ್‌ಸೈಕ್ಲೋಪಿಡಿಯಾಗಳಿಂದ ಹಿಡಿದು ಕಾಮಿಕ್‌ ಬುಕ್‌ ಗಳವರೆಗೆ ಎಲ್ಲವನ್ನು ಓದುತ್ತಿದ್ದರಂತೆ. ಪ್ರಿಟೋರಿಯಾ ನಗರದಲ್ಲಿರುವ ವಾಟರ್‌ಕ್ಲೂಫ್‌ ಹೌಸ್‌ ಪ್ರಿಪರೇಟರಿ ಸ್ಕೂಲ್‌ ಸೇರಿಕೊಂಡರು. ಬಳಿಕ ಪ್ರಿಟೋರಿಯಾ ಬಾಯ್ಸ್‌ ಹೈಸ್ಕೂಲ್‌ನಲ್ಲಿಶಿಕ್ಷ ಣ ಪಡೆದುಕೊಂಡರು. ಈ ದಿನಗಳು ಅವರಿಗೆ ಹೆಚ್ಚು ಏಕಾಂಗಿತನವನ್ನು ಕೊಟ್ಟವು. ಆದರೆ, ಎಲಾನ್‌ ಎಂಥ ಬುದ್ಧಿಶಾಲಿ ಎಂದರೆ, 10ನೇ ವಯಸ್ಸಿನಲ್ಲೇ ಸಾಫ್ಟ್‌ವೇರ್‌ ಕೋಡಿಂಗ್‌ ಕಲಿತುಕೊಂಡು, 12ನೇ ವಯಸ್ಸಿನಲ್ಲೇ ಒಂದು ವಿಡಿಯೋ ಗೇಮ್‌ ತಯಾರಿಸಿದರು. ಮುಂದೆ, ಎಕಾನಮಿಕ್ಸ್‌ ಪದವಿಗೆ ಸೇರಿದರು. ಆದರೆ, ಈ ಕೋರ್ಸ್‌ ತಮಗಲ್ಲಎಂಬುದು ಗೊತ್ತಾಗುತ್ತಿದ್ದಂತೆ  ಸೇರಿದ ಎರಡು ದಿನದಲ್ಲೇ ಅದನ್ನು ಬಿಟ್ಟು ‘ಝಿಪ್‌2’ ಎಂಬ ಸಾಫ್ಟ್‌ವೇರ್‌ ಸಂಸ್ಥೆಯನ್ನು ಸ್ಥಾಪಿಸಿದರು. ನಂತರ ಅದನ್ನು ಕಾಂಪಾಕ್‌ ಕಂಪನಿಗೆ 340 ದಶಲಕ್ಷ  ಡಾಲರಿಗೆ ಮಾರಾಟ ಮಾಡಿದರು. ಆಗ ಮಸ್ಕ್‌ ಅವರಿಗೆ ಕೇವಲ 28 ವರ್ಷ. ಈ ವಯಸ್ಸಿಗೆ ಹೊತ್ತಿಗೆ ನಾವು- ನೀವಾದರೆ ಕೆಲಸ ಹುಡ್ಕೊಂಡು ಅಲೆಯುತ್ತಿದ್ದೆವು. ಆನಂತರ ಪೇಪಾಲ್‌ ಎಂಬ ಆನ್‌ಲೈನ್‌ ಹಣಪಾವತಿ ಕಂಪನಿಯನ್ನು ಹುಟ್ಟುಹಾಕಿ ನಂತರ ಅದನ್ನು ಇಬೇ ಕಂಪನಿಗೆ 120 ಕೋಟಿ ಡಾಲರ್‌ಗೆ ಮಾರಾಟ ಮಾಡಿದರು ಮಸ್ಕ್‌. ಟೆಸ್ಲಾಎಂಬ ವಿದ್ಯುತ್‌ ಚಾಲಿತ ಕಾರ್‌ ತಯಾರಿಕಾ ಕಂಪನಿ ಪ್ರಾರಂಭಿಸಿದರು. ಚಿಕ್ಕಂದಿನಿಂದಲೇ ಐಸಾಕ್‌ ಅಸಿಮೋವ್‌ ಮುಂತಾದ ವಿಜ್ಞಾನ ಲೇಖಕರನ್ನು ಓದುತ್ತ ಬೆಳೆದ ಮಸ್ಕ್‌ಗೆ ಬಾಹ್ಯಾಕಾಶ ಸಂಶೋಧನೆಯ ಹುಚ್ಚು. ಅದಕ್ಕಾಗಿಯೇ ಸ್ಪೇಸ್‌ ಎಕ್‌ ್ಸಪ್ಲೋರೇಷನ್‌ (ಸ್ಪೇಸ್‌ಎಕ್ಸ್‌) ಎಂಬ ಕಂಪನಿಯನ್ನು ಆಂಭಿಸಿದರು. ಮಸ್ಕ್‌ ಅವರ ಉದ್ಯಮ ಹುಚ್ಚು ಸಾಹಸಗಳು ಇಷ್ಟಕ್ಕೆ ನಿಲ್ಲುವುದಿಲ್ಲ. ಒಂದರ ಮೇಲೊಂದು ಕಂಪನಿಗಳು ಆರಂಭಿಸುವುದು, ಇಲ್ಲವೇ ಸ್ವಾಧೀನ ಮಾಡಿಕೊಳ್ಳುವುದು ಅಥವಾ ಮಾರುವುದು ಈವರೆಗೆ ನಡೆದುಕೊಂಡು ಬಂದಿದೆ. 

ಉದ್ಯಮ ಸಾಹಸದಂತೆ ಅವರ ವೈಯಕ್ತಿಕ ಜೀವನವೂ ರೋಚಕವಾಗಿದೆ. ಎರಡು ಮದುವೆಗಳಾಗಿವೆ. ಸದ್ಯಕ್ಕೆ ಅವಿವಾಹಿತ. ಮೊದಲ ಹೆಂಡತಿ ಜಸ್ಟಿನ್‌ ವಿಲ್ಸನ್‌. ಈಕೆ ಕೆನಡಾದ ಲೇಖಕಿ. 2000ರಿಂದ 2008ರವರೆಗೆ ಮದುವೆ ಬಾಳಿಕೆ ಬಂತು. ಆ ನಂತರ ಇಂಗ್ಲಿಷ್‌ ನಟಿ ತಾಲುಲಾ ರಿಲೇ ಅವರನ್ನು 2010ರಲ್ಲಿಮದುವೆಯಾದರು; 2016ರಲ್ಲಿಬೇರೆ ಬೇರೆಯಾದರು. ಮಸ್ಕ್‌ಗೆ ಒಟ್ಟು ಆರು ಮಕ್ಕಳಿದ್ದಾರೆ. 2018ರಿಂದ ಕೆನಡಾದ ಗಾಯಕಿ, ಸಾಂಗ್‌ ರೈಟರ್‌ ಗ್ರೀಮ್ಸ್‌ (ಕ್ಲೇರ್‌ ಎಲಿಸ್‌ ಬೌಚರ್‌) ಜತೆ ಸಂಬಂಧವಿಟ್ಟುಕೊಂಡಿದ್ದಾರೆ. ಒಂದು ಮಗುವಿದೆ. ಹಲವು ಗುಪ್ತ ಪ್ರಣಯಗಳೂ ಇವೆ.  ಫೋರ್ಬ್ಸ್‌ ಪತ್ರಿಕೆ ಮಸ್ಕ್‌ ಅವರನ್ನು ಜಗತ್ತಿನ 25 ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳ ಸಾಲಿನಲ್ಲಿಸೇರಿಸಿದೆ.

ಮಸ್ಕ್‌ ಅವರಲ್ಲಿಇನ್ನೂ ಏನೇನು ಕನಸುಗಳಿವೆಯೋ? ಎಂಥ ಹುಚ್ಚ ಸಾಹಸಗಳಿಗೆ ಅಣಿಯಾಗುತ್ತಿದ್ದಾರೋ ಯಾರಿಗೆ ಗೊತ್ತು? ಅನಿರೀಕ್ಷಿತ ನಿರ್ಧಾರ ಕೈಗೊಳ್ಳುವುದರಲ್ಲಿಸಿದ್ಧಹಸ್ತರಾಗಿರುವ ವ್ಯಕ್ತಿಯ ನಡೆಯನ್ನು ಊಹಿಸುವುದು ಕಷ್ಟ. ಅವರ ಈ ಗುಣವೇ ಅವರನ್ನು ಇಂದು ವಿಶ್ವದ ಶ್ರೀಮಂತ ವ್ಯಕ್ತಿಸ್ಥಾನದಲ್ಲಿತಂದುಕೂರಿಸಿದೆ. ನೆಲದಿಂದ ಚಂದ್ರನಲ್ಲಿಗೆ ನೆಗೆಯುವ ಸಾಹಸಿ ಗುಣವನ್ನು ಗಟ್ಟಿಗೊಳಿಸಿದೆ.




ಸೋಮವಾರ, ನವೆಂಬರ್ 22, 2021

Nykaa CEO Falguni Nayar: ಫಾಲ್ಗುಣಿ ಯಶಸ್ಸಿನ ಗಣಿ, ಮಹಿಳೆಯರಿಗೆ ಸ್ಫೂರ್ತಿ ಸೆಲೆ

ಫಾಲ್ಗುಣಿ ನಾಯರ್ 50ನೇ ವಯಸ್ಸಿನಲ್ಲಿ ಆರಂಭಿಸಿದನೈಕಾಈಗ ಲಕ್ಷ ಕೋಟಿ ರೂ. ವೌಲ್ಯದ ಕಂಪನಿ. ಉದ್ಯಮದ ಹಿನ್ನೆಲೆ ಇಲ್ಲದೇ ಅವರು ಯಶಸ್ವಿ ಉದ್ಯಮಿಯಾದ ಕತೆ ಇದು.

 

-ಮಲ್ಲಿಕಾರ್ಜುನ ತಿಪ್ಪಾರ
ಉದ್ಯೋಗದಲ್ಲಿದ್ದವರಿಗೆ 50 ವರ್ಷ ವಯಸ್ಸು ಎಂದರೆ ನಿವೃತ್ತಿಯ ಹತ್ತಿರದಲ್ಲಿರುತ್ತಾರೆ, ಮನೆಯಲ್ಲಿದ್ದವರಾದರೆ ಮೊಮ್ಮಕ್ಕಳೊಂದಿಗೆ ಆಟವಾಡಿಕೊಂಡು ಕಾಲ ಕಳೆಯಲು ಮನಸ್ಸನ್ನು ಸಜ್ಜುಗೊಳಿಸುವ ಕಾಲ. ಅಂಥ ವಯಸ್ಸಿನಲ್ಲಿ ಸ್ಟಾರ್ಟ್ಅಪ್ ಆರಂಭಿಸಿ, ಅಲ್ಪ ಕಾಲದಲ್ಲೇಯೂನಿಕಾರ್ನ್ಕಂಪನಿ ಅಂದರೆ ಒಂದು ಶತಕೋಟಿ ಡಾಲರ್ ವೌಲ್ಯದ ಉದ್ಯಮವಾಗಿ ಬೆಳೆಸುವುದೆಂದರೆ ಸಾಮಾನ್ಯದ ಮಾತಲ್ಲಘಿ. ಈ ಅಸಾಮಾನ್ಯ ಸಾನೆಯನ್ನು ಸಾಮಾನ್ಯ ಮಹಿಳೆಯೊಬ್ಬಳು ಮಾಡಿದ್ದಾರೆ.

ಸೆಲ್ ಮೇಡ್ ಬಿಸಿನೆಸ್ ವುಮನ್ಫಾಲ್ಗುಣಿಆ ಯಶಸ್ವಿ ಉದ್ಯಮಿ. ನೈಕಾ(www.nykaa.com) ಎಂಬ ಇ- ಕಾಮರ್ಸ್ ತಾಣವನ್ನು ಸ್ಥಾಪಿಸಿ, ಅದನ್ನೀಗ ಬಹುದೊಡ್ಡ ಕಂಪನಿಯಾಗಿ ಬೆಳೆಸಿದ್ದಾರೆ. ನೈಕಾ ಇತ್ತೀಚೆಗಷ್ಟೇ ಷೇರುಪೇಟೆಯನ್ನು ಪ್ರವೇಶಿಸುತ್ತಿದ್ದಂತೆ ಅದರ ವೌಲ್ಯ ದಿಢೀರ್ನೇ ಏರಿಕೆಯಾಗಿದ್ದು, ಫಾಲ್ಗುಣಿ ದೇಶದ ಟಾಪ್ 20 ಶ್ರೀಮಂತರ ಪಟ್ಟಿಯಲ್ಲಿ ಸ್ಥಾನಪಡೆದುಕೊಂಡರು. ‘ನೈಕಾಪ್ರವರ್ತಕ ಕಂಪನಿ ಎ್ಎಸ್ಎನ್ ಇ-ಕಾಮರ್ಸ್ ತಲಾ 1125 ರೂ.ವೌಲ್ಯದ ಷೇರು ಬಿಡುಗಡೆ ಮಾಡಿತ್ತು. ಈ ಷೇರಿನ ದರ ಏಕ್ದಮ್ 2,001 ರೂ.ಗೆ ಏರಿಕೆಯಾಗಿ, ಒಂದೇ ದಿನದಲ್ಲಿ ಕಂಪನಿಯ ವೌಲ್ಯ ದುಪ್ಪಟ್ಟಾಯಿತು. ಇದರ ಪರಿಣಾಮ ಕಂಪನಿಯ ಒಟ್ಟು ಮಾರುಕಟ್ಟೆ ವೌಲ್ಯವು 1.04 ಲಕ್ಷ  ಕೋಟಿ ರೂ.ದಾಟಿತು. ‘ನೈಕಾಫಾಲ್ಗುಣಿ ನಾಯರ್ ಲಕ್ಷ ಕೋಟಿ ರೂಪಾಯಿ ವೌಲ್ಯದ ಕಂಪನಿಯ ಒಡತಿಯಾದರು!

ಶೃಂಗಾರ ಮತ್ತು ಸ್ವಾಸ್ಥ, ಫ್ಯಾಷನ್ ಉತ್ಪನ್ನಗಳ ಮಾರಾಟ ವೇದಿಕೆಯಾಗಿರುವ ನೈಕಾ ವೆಬ್ಸೈಟ್ನಲ್ಲಿ 400 ಬ್ರ್ಯಾಂಡುಗಳ 35,000ಕ್ಕೂ ಅಕ ಉತ್ಪನ್ನಗಳಿವೆ. ಫ್ಯಾಷನ್, ಸೌಂದರ್ಯವರ್ಧಕ ದೊಡ್ಡ  ಬ್ರ್ಯಾಂಡ್ಗಳೆಲ್ಲವೂ ಇಲ್ಲಿ ಲಭ್ಯ. ಜನಪ್ರಿಯ ಲ್ಯಾಕ್ಮೆ, ಕಾಯಾ ಸ್ಕಿನ್ ಕ್ಲಿನಿಕ್, ಲೋರಿಯಲ್ ಪ್ಯಾರಿಸ್ ಇತ್ಯಾದಿ ಬ್ರ್ಯಾಂಡುಗಳ ಉತ್ಪನ್ನಗಳು ಇಲ್ಲಿ ಬಿಕರಿಯಾಗುತ್ತವೆ. 70ಕ್ಕೂ ಅಕ ಆ್ಲೈನ್ ಸ್ಟೋರ್ಗಳೂ ದೇಶದ ವಿವಿಧ ಭಾಗಗಳಲ್ಲಿ ಆರಂಭವಾಗಿವೆ. ನೈಕಾ ವೆಬ್ಸೈಟ್ ಪ್ರತಿ ತಿಂಗಳು 4.5 ಕೋಟಿ ವಿಸಿಟರ್ಸ್ ಪಡೆದುಕೊಳ್ಳುತ್ತದೆ.

ಉದ್ಯಮದ ಯಾವುದೇ ಹಿನ್ನೆಲೆಯಿಲ್ಲದೆ ಕೇವಲ ಒಂಬತ್ತು ವರ್ಷದಲ್ಲೇ ಕಂಪನಿಯೊಂದನ್ನು ಉನ್ನತಮಟ್ಟಕ್ಕೆ ಕೊಂಡೊಯ್ಯುವುದು ಹುಡುಗಾಟದ ಮಾತನೇಲ್ಲ. ಆದರೆ, 59 ವರ್ಷದ ಫಾಲ್ಗುಣಿ ಅಂಥ ಸಾಧನೆ ಮಾಡಿದ್ದಾರೆ. ಫಾಲ್ಗುಣಿ ಅವರೀಗ ಯಶಸ್ಸಿನ ಗಣಿ; ಭಾರತೀಯ ಮಹಿಳೆಯರಿಗೆ, ಅದರಲ್ಲೂ ಬಿಸಿನೆಸ್, ಉದ್ಯಮದಲ್ಲಿ ಆಸಕ್ತಿ ಹೊಂದಿರುವ ಮಹಿಳೆಯರಿಗೆ ಸ್ಫೂರ್ತಿಯ  ಖನಿ! ಗುಜರಾತಿಗಳಿಗೆ ವ್ಯಾಪಾರ ಸಹಜ. ಯಾಕೆ ಈ ಮಾತು ಹೇಳಬೇಕಾಯಿತು ಎಂದರೆ, ಫಾಲ್ಗುಣಿ ನಾಯರ್ ಕೂಡ ಗುಜರಾತಿ. ಆದರೆ, ಹುಟ್ಟಿ ಬೆಳೆದಿದ್ದು ಎಲ್ಲ ಮಹಾರಾಷ್ಟ್ರದಲ್ಲಿ. 1963ರ ಜನವರಿ 19ರಂದು ಮುಂಬಯಿಯಲ್ಲಿ ಗುಜರಾತಿ ಕುಟುಂಬದಲ್ಲಿ ಫಾಲ್ಗುಣಿ ಜನಿಸಿದರು. ಇವರ ತಂದೆ ಸ್ವಂತ ಮತ್ತು ಚಿಕ್ಕ ಬಿಯರಿಂಗ್ಸ್ ಕಂಪನಿಯನ್ನು ಹೊಂದಿದ್ದರು. ಮುಂಬಯಿಯ ದಿ ನ್ಯೂ ಎರಾ ಸ್ಕೂಲ್ನಲ್ಲಿ ತಮ್ಮ ಪ್ರಾಥಮಿಕ ಹಾಗೂ ಹೈಸ್ಕೂಲ್ ಶಿಕ್ಷಣವನ್ನು ಪೂರೈಸಿದ ಬಳಿಕ, ಕಾಮರ್ಸ್ ಪದವಿಯನ್ನು ಪಡೆದುಕೊಂಡರು. ಬಳಿಕ ಐಐಎಂ ಅಹಮದಾಬಾದ್ ಸಂಸ್ಥೆಯಿಂದ ತಮ್ಮ ಸ್ನಾತಕ ಶಿಕ್ಷಣವನ್ನು ಪಡೆದುಕೊಂಡರು. ಉನ್ನತ ಶಿಕ್ಷಣವನ್ನು ಪಡೆಯುತ್ತಿದ್ದಂತೆ ಸಂಜಯ್ ನಾಯರ್ ಅವರನ್ನು ವರಿಸಿದರು. ಅಂಚಿತ್ ನಾಯರ್ ಮತ್ತು ಅದ್ವಿತಾ ನಾಯರ್ ಎಂಬ ಇಬ್ಬರು ಮಕ್ಕಳಿದ್ದಾರೆ.

ಎಲ್ಲರಂತೆ, ಫಾಲ್ಗುಣಿ ಅವರೂ ವಿದ್ಯಾಭ್ಯಾಸ ಪೂರ್ತಿಯಾದ ಬಳಿಕ ಉದ್ಯೋಗಕ್ಕೆ ಸೇರಿಕೊಂಡರು. ಕೋಟಕ್ ಮಹೀಂದ್ರಾ ಬ್ಯಾಂಕ್ ಸೇರಿದ ಅವರು 18 ವರ್ಷಗಳ ಕಾಲ ದುಡಿದರು. ಈ ಬ್ಯಾಂಕಿನಲ್ಲಿ ಇನ್ವೆಸ್ಟ್ಮೆಂಟ್ ಬ್ಯಾಂಕರ್ನಿಂದ ಕ್ಯಾಪಿಟಲ್ ಇನ್ವೆಸ್ಟ್ಮೆಂಟ್ ಮ್ಯಾನೇಜಿಂಗ್ ಡೈರೆಕ್ಟರ್ವರೆಗೂ ಉನ್ನತಿಯನ್ನು ಪಡೆದುಕೊಂಡರು. ಬಹುಶಃ ಬೇರೆ ಯಾರೇ ಆದರೂ ಅಷ್ಟು ಉನ್ನತ ಹುದ್ದೆಗೆ ತಲುಪಿದ ಮೇಲೆ ಮತ್ಯಾವುದೇ ಯೋಚನೆ ಮಾಡದೇ, ನಿವೃತ್ತಿಯವರೆಗೂ ಕೆಲಸ ಮಾಡುತ್ತಿದ್ದರು. ಆದರೆ, ಫಾಲ್ಗುಣಿ ಅವರಿಗೆ ಮಾತ್ರ ಏನಾದರೂ ಭಿನ್ನವಾದ ಕೆಲಸವನ್ನು ಮಾಡಬೇಕು, ಹೊಸತನ್ನು ಸಾಸಬೇಕೆಂಬ ತುಡಿತ ಸದಾ ಕಾಲ ಇತ್ತು. ಈ ಕನಸು ಅವರನ್ನು ನಿದ್ದೆ ಮಾಡಲು ಬಿಡುತ್ತಿರಲಿಲ್ಲ.  ತನ್ನದೇ ಆದ ಹೆಗ್ಗರುತನ್ನು ಛಾಪಿಸುವ ಹಪಾಹಪಿ ಅವರಲ್ಲಿ ಹೆಡೆಯಾಡುತ್ತಿತ್ತು. ಆದರೆ, ಅಷ್ಟೊತ್ತಿಗಾಗಲೇ 50 ವರ್ಷಗಳು ಸರಿದು ಹೋಗಿದ್ದವು. ಈ ಹಂತದಲ್ಲಿ ಕಂಪನಿಯೊಂದನ್ನು ಆರಂಭಿಸುವುದು ಸರಳವೇನೂ ಆಗಿರಲಿಲ್ಲ. ಅದಕ್ಕೆ ಬೇಕಾದ ಹಣಕಾಸು ನೆರವು ಆಗಲೀ, ಫ್ಯಾಮಿಲಿ ಹಿನ್ನೆಲೆಯಾಗಲೀ ಏನೂ ಇಲ್ಲ. ಆದರೆ ಧೈರ್ಯ, ಛಲ, ಪ್ರಾಮಾಣಿಕ ಪ್ರಯತ್ನಗಳೆಂಬಬಂಡವಾಳ   ಮಾತ್ರ ಹೇರಳವಾಗಿತ್ತು! ಕೊನೆಗೆ ತಮ್ಮ ಕನಸು ಬೆನ್ನು ಹತ್ತಿ 2012ರಲ್ಲಿ ಕೋಟಕ್ ಮಹೀಂದ್ರಾ ಬ್ಯಾಂಕ್ ನೌಕರಿಯನ್ನು ತ್ಯಜಿಸಿದರು. ಧೈರ್ಯದಿಂದ ಮುನ್ನುಗ್ಗಿ, ಎಫ್ಎಸ್ಎನ್ ಇ ಕಾಮರ್ಸ್ ವೆಂಚರ್ ಪ್ರೈವೆಟ್ ಲಿ. ಆರಂಭಿಸಿದರು. ಈ ಕಂಪನಿಯಡಿ ಸೌಂದರ್ಯ, ವೆಲ್ನೆಸ್ ಮತ್ತು ಫ್ಯಾಷನ್ ಸಂಬಂಧಿ ವಸ್ತುಗಳ ಮಾರಾಟ ಇ-ಕಾಮರ್ಸ್ ತಾಣನೈಕಾತೆರೆದರು. ಆ ನಂತರ ಮತ್ತೆ ಅವರು ಹಿಂದಿರುಗಿ ನೋಡಲೇ ಇಲ್ಲ. ಸೌಂದರ್ಯ ಮತ್ತು ಸ್ವಾಸ್ಥ್ಯ ವಲಯದ ನೈಕಾ ಮೂಲಕ ತಮ್ಮ ಹೆಗ್ಗರುತು ಮೂಡಿಸಲು ಅವರು ಯಶಸ್ವಿಯಾದರು. ಚಿಕ್ಕದಾಗಿ ಆರಂಭವಾಗಿದ್ದ ಇ-ಕಾಮರ್ಸ್ ತಾಣ ಇದೀಗ ಹೆಮ್ಮರವಾಗಿ ಬೆಳೆದಿದೆ. ಅದರ ಮಾರುಕಟ್ಟೆ ವೌಲ್ಯ ಲಕ್ಷ ಕೋಟಿ ರೂಪಾಯಿ ಮೀರಿದೆ; 2000ಕ್ಕೂ ಅಧಿಕ ಜನರಿಗೆ ಉದ್ಯೋಗ ನೀಡಿದೆ. ಮಾರುಕಟ್ಟೆ ವೌಲ್ಯದಲ್ಲಿ ನೈಕಾ ಇದೀಗ ಕೋಲ್ ಇಂಡಿಯಾ, ಗೋದ್ರೇಜಾ ಕಂಪನಿಗಳನ್ನು ಮೀರಿಸಿದೆ. ದೇಶದ 20 ಶ್ರೀಮಂತರ ಪಟ್ಟಿಯಲ್ಲಿ ಫಾಲ್ಗುಣಿ 17ನೇ ಸ್ಥಾನದಲ್ಲಿದ್ದಾರೆ. ಈ ಪಟ್ಟಿಯ ಅಗ್ರಸ್ಥಾನದಲ್ಲಿ ಮುಖೇಶ್ ಅಂಬಾನಿ, ಗೌತಮ್ ಅದಾನಿಯಂಥವರಿದ್ದಾರೆ. ಮತ್ತೊಂದು ಗಮನಿಸಬೇಕಾದ ಸಂಗತಿ ಏನೆಂದರೆ; ಟಾಪ್ ಸ್ಟಾರ್ಟ್ಅಪ್ ಐಪಿಒಗಳ ಪಟ್ಟಿಯಲ್ಲಿ ಫಾಲ್ಗುಣಿ ಪ್ರಥಮ ಸ್ಥಾನದಲ್ಲಿದ್ದಾರೆ. ಯಾಕೆಂದರೆ, ನೈಕಾದಲ್ಲಿ ಇವರದ್ದೇ ಶೇ.53ರಷ್ಟು ಷೇರಿದೆ. ನಂತರದ ಸ್ಥಾನದಲ್ಲಿ ಪೇಟಿಎಂ ಸಂಸ್ಥಾಪಕ ವಿಜಯ್ ಶೇಖರ್ ಶರ್ಮಾ, ರೆಮಾಟೊದ ದೀಪೇಂದ್ರ ಗೋಯಲ್ನಂಥವರಿದ್ದಾರೆ.

ಯಶಸ್ಸಿನ ತುದಿಯನ್ನು ತಲುಪಿರುವ ಫಾಲ್ಗುಣಿ ನಾಯರ್  ತಮ್ಮ ತಂದೆಯಿಂದ ಸಾಕಷ್ಟು ಪ್ರಭಾವಿತರಾದರೆ, ಉದ್ಯಮಿ ಉದಯ್ ಕೋಟಕ್ ಮತ್ತು ಪತಿ ಸಂಜಯ್ ನಾಯರ್ರಿಂದ ಸ್ಫೂರ್ತಿ ಪಡೆದುಕೊಂಡಿದ್ದಾರೆ. ‘ಕರ್ಮಣ್ಯೇವಾಕಾರಸ್ತೇ ಮಾ ಫಲೇಷು ಕದಾಚನಎಂಬಂತೆ ತಮ್ಮ ಕೆಲಸವನ್ನು ತಾವು ಮಾಡುತ್ತಾ ಹೊರಟಿದ್ದಾರೆ, ಫಲಾಫಲ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಯಾವುದೇ ಸಕ್ಸೆಸ್ ಆಗಲೀ ಶಾರ್ಟ್ಕಟ್ನಲ್ಲಿ ಬರುವಂಥದ್ದಲ್ಲ. ಅದಕ್ಕಾಗಿ ತನುಮನಧನವೆನ್ನಲ್ಲ ಅರ್ಪಿಸಬೇಕಾಗುತ್ತದೆ. ಅರ್ಪಣೆ, ಸಮರ್ಪಣೆಗಳಿದ್ದಾಗ ಮಾತ್ರವೇ ಅಂದುಕೊಂಡ ಗುರಿಯನ್ನು ಮುಟ್ಟಲು ಸಾಧ್ಯ ಎಂಬುದಕ್ಕೆ ಫಾಲ್ಗುಣಿ ಈಗ ಉದಾಹರಣೆಯಾಗಿದ್ದಾರೆ.

ಈಗಿನದ್ದು ಮೈಕ್ರೋಬ್ಲಾಗಿಂಗ್ ಜಮಾನಾ. ಬಹುತೇಕ ಉದ್ದಿಮೆದಾರರು ಟ್ವಿಟರ್, ಫೇಸ್‌ಬುಕ್ನಂಥ ಸೋಷಿಯಲ್ ಮೀಡಿಯಾಗಳಲ್ಲಿದ್ದಾರೆ. ಆದರೆ, ಫಾಲ್ಗುಣಿ ಅವರು ಇದಕ್ಕೆ ಅಪವಾದ. ನೈಕಾ ಕಂಪನಿ ಶುರು ಮಾಡಿದಾಗಿನಿಂದ ಈ ಒಂಬತ್ತು ವರ್ಷಗಳಲ್ಲಿ ಅವರು ಒಮ್ಮೆ ಮಾತ್ರ ಟ್ವೀಟ್ ಮಾಡಿದ್ದಾರಂತೆ! ಸೋಷಿಯಲ್ ಮೀಡಿಯಾದಲ್ಲಿ ವ್ಯಸ್ತವಾಗುವುದೆಂದರೆ ಸಾಕಷ್ಟು ಸಮಯ ಮತ್ತು ಪ್ರಯತ್ನ ಬೇಕಾಗುತ್ತದೆ ಎಂಬುದು ಅವರ ಈ ನಿರ್ಧಾರಕ್ಕೆ ಕಾರಣ.

ಯಾವುದೇ ಉದ್ಯಮಶೀಲತೆಯೊಂದು ಯಶಸ್ಸು ಗಳಿಸಬೇಕಾದರೆ ಸಾಕಷ್ಟು ಉತ್ಸಾಹ, ಕಠಿಣ ಪರಿಶ್ರಮ, ದೃಢತೆ ಮತ್ತು ಸಮಯವನ್ನು ಬೇಡುತ್ತದೆ ಎಂಬುದು ಅವರು ಖಚಿತ ನುಡಿಗಳಾಗಿವೆ. ‘‘ನಾನು ನೈಕಾವನ್ನು 50ನೇ ವಯಸ್ಸಿನಲ್ಲಿ ಆರಂಭಿಸಿದೆ. ನೈಕಾಪಯಣವು ಪ್ರತಿಯೊಬ್ಬ ಹುಡುಗಿಯ ತನ್ನ ಬದುಕಿನಲ್ಲಿ ತಾನೇನಾಯಕಿಯಾಗಲು ಪ್ರೇರಣೆ ನೀಡಲಿ ಎಂಬುದು ನನ್ನ ಆಶಯ,’’ ಎಂದು ಹೇಳಿಕೊಂಡಿದ್ದರು. ಅನುಮಾನವೇ ಬೇಡ. ನೈಕಾ ಹಾಗೂ ಫಾಲ್ಗುಣಿ ನಾಯರ್ ಅವರ ಯಶಸ್ಸಿನ ಪಯಣವು ಮುಂಬರುವ ಅಸಂಖ್ಯ ಮಹಿಳೆಯರಿಗೆ ಸ್ಫೂರ್ತಿ ನೀಡಲಿದೆ. ಸಮರ್ಪಣೆಯಿಂದ, ಪ್ರಾಮಾಣಿಕ ಪ್ರಯತ್ನದಿಂದ ಮುನ್ನಡೆದರೆ ಯಶಸ್ಸು ಸಿಕ್ಕೇ ಸಿಗುತ್ತದೆ ಎಂಬುದಕ್ಕೆ ಯಶಸ್ಸಿನ ಮಾದರಿಯನ್ನು ನಮ್ಮ ಮುಂದೆ ಫಾಲ್ಗುಣಿ ಕಡೆದು ನಿಲ್ಲಿಸಿದ್ದಾರೆ.

 
ಈ ಲೇಖನವು ವಿಜಯ ಕರ್ನಾಟಕದ ವ್ಯಕ್ತಿಗತ ಅಂಕಣದಲ್ಲಿ 2021 ನವೆಂಬರ್ 21ರ ಸಂಚಿಕೆಯಲ್ಲಿ ಪ್ರಕಟವಾಗಿದೆ.


ಭಾನುವಾರ, ನವೆಂಬರ್ 21, 2021

'Jai Bhim' Real Hero Justice K Chandru: ಶೋಷಿತರ ರಿಯಲ್‌ ಹೀರೊ ಜಸ್ಟೀಸ್ ಕೆ ಚಂದ್ರು

ಶೋಷಿತರ ಪರ ನಿಲ್ಲುವ ನ್ಯಾಯವಾದಿಯ ಕತೆಯ ಸಿನಿಮಾಜೈ ಭೀಮ್‌’ ಸದ್ದು ಮಾಡುತ್ತಿದೆ. ನೈಜ ಕತೆಯನ್ನಾಧರಿಸಿದ ಈ ಚಿತ್ರದ ಅಸಲಿ ಹೀರೊ ಜಸ್ಟೀಸ್ಕೆ.ಚಂದ್ರು.


- ಮಲ್ಲಿಕಾರ್ಜುನ ತಿಪ್ಪಾರ
ದೃಶ್ಯ ಮಾಧ್ಯಮದ ಬಹು ಸಾಧ್ಯತೆಗಳನ್ನು ಬಳಸಿಕೊಳ್ಳುವುದಲ್ಲಿ ತಮಿಳು ಚಿತ್ರರಂಗದ್ದು ಎತ್ತಿದ ಕೈ. ನೈಜ ಕತೆಗಳನ್ನು ಬೆಳ್ಳಿತೆರೆಗೆ ಅನ್ವಯಿಸಿ, ಜನರಿಗೆ ನಾಟುವಂತೆ ದಾಟಿಸುವ ಕಲೆಯನ್ನು ಕರಗತ ಮಾಡಿಕೊಂಡಿದೆ. ಈಗ ಸೂರ್ಯ ನಟನೆಯಜೈ ಭೀಮ್‌’ ಸಿನಿಮಾ ಕೂಡ ಇದೇ ನೆಲೆಯಲ್ಲಿ ರೂಪುಗೊಂಡಿದ್ದು, ನೈಜ ಕತೆಯಾಧರಿಸಿ ಇತರ ಸಿನಿಮಾಗಳಿಗಿಂತ ಭಿನ್ನವಾಗಿ ನಿಂತಿದೆ. ಅಪರಿಮಿತ ಅಧಿಕಾರ ಹೊಂದಿರುವ ಪೊಲೀಸ್ವ್ಯವಸ್ಥೆ ತನ್ನ ಸಂವೇದನೆ ಕಳೆದುಕೊಂಡು, ಅಪ್ರಮಾಣಿಕವಾಗಿ, ಅಧಿಕಾರದ ದರ್ಪದಿಂದ ವರ್ತಿಸಿದಾಗ ಧ್ವನಿ ಇಲ್ಲದವರು, ಸಮಾಜದಲ್ಲಿಯಾವ ರೀತಿಯಲ್ಲಿಶೋಷಣೆಗೊಳಗಾಗುತ್ತಾರೆ, ನಿರ್ದೋಷಿಗಳು ಹೇಗೆ ಬಲಿಯಾಗುತ್ತಾರೆಂಬ ಕತೆಯನ್ನು ಈ ಸಿನಿಮಾ ಒಳಗೊಂಡಿದೆ.

ಈ ಚಿತ್ರದಲ್ಲಿಮುಖ್ಯ ಪಾತ್ರ ನ್ಯಾಯವಾದಿ ಚಂದ್ರು. ಈ ಪಾತ್ರವನ್ನು ನಟ ಸೂರ್ಯ ಪರಕಾಯ ಪ್ರವೇಶ ಮಾಡಿದ್ದು, ವಿಮರ್ಶಕರಿಂದಲೂ ಮೆಚ್ಚುಗೆ ದೊರೆತಿದೆ. ಇದಿಷ್ಟುರೀಲ್‌’ ಕತೆಯಾದರೆ, ಸೈಡ್ವಿಂಗ್ನಲ್ಲಿ ರಿಯಲ್ಕತೆಯನ್ನು ಬಿಚ್ಚುತ್ತಾ ಹೋದರೆ ಅದು ಇನ್ನೊಂದು ರೋಮಾಂಚನ. ಚಿತ್ರದ ಮುಖ್ಯ ಪಾತ್ರವಾಗಿರುವ ಚಂದ್ರು, ನಿಜ ಜೀವನದ ಜಸ್ಟೀಸ್ಕೆ. ಚಂದ್ರು. ಮದ್ರಾಸ್ಹೈಕೋರ್ಟ್ನ ನ್ಯಾಯಮೂರ್ತಿಯಾಗಿ ದಕ್ಷ ತೆಯಿಂದ ಕೆಲಸ ಮಾಡಿದ ವ್ಯಕ್ತಿ ಅವರು. ತಮಿಳುನಾಡಿನಲ್ಲಿ ತುಂಬ ಹೆಸರಿದೆ. ಆದರೆ, ‘ಜೈ ಭೀಮ್‌’ ತೆರೆಗೆ ಬರುವವರೆಗೂ ಜ.ಕೆ. ಚಂದ್ರು ಅವರ ಬಗ್ಗೆ ತಮಿಳುನಾಡಿನಾಚೆ ಅಷ್ಟೇನೂ ಗೊತ್ತಿರಲಿಲ್ಲ.

ಕೆ.ಚಂದ್ರು ಅವರು ಮದ್ರಾಸ್ಹೈಕೋರ್ಟ್ನ್ಯಾಯಮೂರ್ತಿಯಾಗಿ ಅದ್ವಿತೀಯ ಕೆಲಸ ಮಾಡಿದ್ದಾರೆ. ಸಾಮಾನ್ಯಧಿವಾಗಿ ಒಬ್ಬ ಜಡ್ಜ್ತಮ್ಮ ಅವಧಿಯಲ್ಲಿ 10 ಸಾವಿರದಿಂದ 20 ಸಾವಿರದವರೆಗೆ ಕೇಸ್ಗಳನ್ನು ಇತ್ಯರ್ಥಪಡಿಸುತ್ತಾರೆ. ಆದರೆ, . ಚಂದ್ರು ತಮ್ಮ ಆರೂವರೆ ವರ್ಷಗಳ ಅವಧಿಯಲ್ಲಿ90 ಸಾವಿರಕ್ಕೂ ಅಧಿಕ ಪ್ರಕರಣಗಳನ್ನು ಇತ್ಯರ್ಥಪಡಿಸಿ, ಕ್ಷೀಪ್ರ ನ್ಯಾಯದಾನ ಮಾಡಿದ್ದಾರೆ.

ಕೆಂಪು ಗೂಟದ ಕಾರನ್ನು ಯಾರು ಬಳಸಬೇಕು ಎಂಬ ಬಗ್ಗೆ ಚರ್ಚೆಗಳು ನಡೆದೇ ಇವೆ. ಕೋರ್ಟ್ಆದೇಶದ ಪ್ರಕಾರ, ಕೆಲವು ಸಂವಿಧಾನಬದ್ಧ ಹುದ್ದೆ ಅಲಂಕರಿಸಿದವರನ್ನು ಹೊರತುಪಡಿಸಿ ಉಳಿದವರಿಗೆ ಈ ಸೇವೆ ಇಲ್ಲ. ಈ ಬಗ್ಗೆ ಆದೇಶವಾಗುವುದಕ್ಕಿಂತ ಮುಂಚೆಯೇ ಚಂದ್ರು ತಮ್ಮ ಕಾರಿನ ಕೆಂಪು ದೀಪವನ್ನು ತೆಗೆಸಿದ್ದರು. ವಕೀಲರು ನ್ಯಾಯಾಧೀಶರನ್ನು ಉದ್ದೇಶಿಸಿ ಬಳಸುವಮೈ ಲಾರ್ಡ್‌’ ಪದವನ್ನು ತಮಗೆ ಬಳಸದಂತೆ ಸೂಚಿಸಿದ್ದರು! ಇದೆಲ್ಲವೂ ಅವರ ಸರಳತೆಯನ್ನು ಬಹಿರಂಗಗೊಳಿಸುತ್ತದೆ.

2006ರಲ್ಲಿಚಂದ್ರು ಮದ್ರಾಸ್ಹೈಕೋರ್ಟ್ಹೆಚ್ಚುವರಿ ನ್ಯಾಯಮೂರ್ತಿಯಾಗಿ ನೇಮಕಗೊಂಡರು. 2009ರಲ್ಲಿಕಾಯಂ ನ್ಯಾಯಮೂರ್ತಿಯಾಗಿ ಬಡ್ತಿ ನೀಡಲಾಯಿತು. ಅವರ ಸರಳತೆಗೆ ಮತ್ತೊಂದು ಉದಾಹರಣೆ ಎಂದರೆ, ಅವರು ನ್ಯಾಯಮೂರ್ತಿಯಾಗಿ ನಿವೃತ್ತಿಯಾದ ದಿನ ಬೆಳಗ್ಗೆ ಸರಕಾರಿ ಕಾರ್ಉಪಯೋಗಿಸಿದ್ದರೆ, ಸಾಯಂಕಾಲ ಸರಕಾರಿ ಕಾರನ್ನು ಬಿಟ್ಟು  ಲೋಕಲ್ಟ್ರೈನ್ನಲ್ಲಿಮನೆಗೆ ಪ್ರಯಾಣಿಸಿದ್ದರು. ಸರಳತೆ, ಪ್ರಮಾಣಿಕತೆ, ಬದ್ಧತೆ ಹಾಗೂ ನಿಸ್ವಾರ್ಥ ಮೌಲ್ಯಗಳು ಅವರನ್ನು ಒಬ್ಬ ಪರಿಪೂರ್ಣ ನ್ಯಾಯಮೂರ್ತಿಯಾಗಿ ಮಾಡಿದ್ದಲ್ಲದೆ, ಒಬ್ಬ ಕ್ರೂಸೆಡರ್ರೀತಿಯಲ್ಲಿ ಕೆಲಸ ಮಾಡಲು ಸಾಧ್ಯವಾಯಿತು.

ನ್ಯಾಯಮೂರ್ತಿಯಾಗುವ ಮೊದಲು ಅವರು ಮದ್ರಾಸ್ಹೈಕೋರ್ಟ್ನಲ್ಲಿವಕೀಲಿಕೆ ಮಾಡುತ್ತಿದ್ದರು. ಆಗಲೂ ಅಷ್ಟೇ ವಕೀಲರಾಗಿ ಸಮಾಜದಲ್ಲಿನ ಬಡವರು, ಬುಡಕಟ್ಟು ಜನಾಂಗದವರು, ಧ್ವನಿ ಇಲ್ಲದವರಿಗೆ ಧ್ವನಿಯಾಗಿ ಕಾನೂನು ಸೇವೆಯನ್ನು ಒದಗಿಸಿದ್ದಾರೆ. ಒಂದು ಪೈಸೆ ತೆಗೆದುಕೊಳ್ಳದೇ ಅವರ ಪರವಾಗಿ ಹೋರಾಡಿದ್ದಾರೆ. ‘ಜೈ ಭೀಮ್‌’ ಚಿತ್ರದಲ್ಲಿಅಳವಡಿಸಿಧಿಕೊಳ್ಳಲಾಗಿಧಿರುವುದು ಅವರ ವೃತ್ತಿ ಬದುಕಿನ ಒಂದು ಎಪಿಸೋಡ್ಅಷ್ಟೇ.

ಬುಡಕಟ್ಟು ಜನಾಂಗದ ವ್ಯಕ್ತಿಯೊಬ್ಬನನ್ನು ಪೊಲೀಸರು ಕಳ್ಳತನದ (ಸುಳ್ಳು ಪ್ರಕರಣ) ಆರೋಪದ ಮೇಲೆ ಬಂಧಿಸುತ್ತಾರೆ. ಮಾಡದೇ ಇರುವ ತಪ್ಪನ್ನು ಒಪ್ಪಿಕೊಳ್ಳುವಂತೆ ಕಿರುಕುಳ ನೀಡುತ್ತಾರೆ. ಇದರಿಂದ ಆತ ಸತ್ತು ಹೋಗುಧಿತ್ತಾನೆ. ಕೇಸ್ಮುಚ್ಚಿ ಹಾಕುವುದಕ್ಕಾಗಿ ಆರೋಪಿ ಪರಾರಿಧಿಯಾಗಿದ್ದಾನೆಂಬ ಕತೆ ಕಟ್ಟುತ್ತಾರೆ. ಆದರೆ, ಮೃತನ ಪತ್ನಿ ನಂಬುವುದಿಲ್ಲ. ಆಕೆಗೆ ಕಂಡಿದ್ದೇ ಈ ನ್ಯಾಯವಾದಿ ಚಂದ್ರು. ಪ್ರಕರಣವನ್ನು ಕೈಗೆತ್ತಿಕೊಳ್ಳುವ ಅವರು 13 ವರ್ಷ ಹೋರಾಡಿ, ಆರೋಪಿ ಪೋಲೀಸರಿಗೆ 14 ವರ್ಷ ಕಾಲ ಜೈಲು ಶಿಕ್ಷೆಯಾಗುವಂತೆ ಮಾಡುತ್ತಾರೆ. ಈ ಕೇಸಿಧಿನಿಂದ ಹಿಂದೆ ಸರಿಯಲು ಸಾಕಷ್ಟು ಆಮಿಷಗಳನ್ನು ಒಡ್ಡಿದರೂ ಚಂದ್ರು ತಮ್ಮ ಬದ್ಧತೆಯನ್ನು ಎಲ್ಲೂಬಿಟ್ಟುಕೊಡುಧಿವುದಿಲ್ಲ, ಹಣ ತುಂಬಿದ ಸೂಟ್ಕೇಸ್ಅನ್ನೇ ರೂಮಿನಿಂದ ಆಚೆ ಎಸೆದಂಥ ಘಟನೆಗಳಿವೆ. ಇಂಥ ಹತ್ತಾರು ಕತೆಗಳು, ಪ್ರಕರಣಗಳು ಅವರಲ್ಲಿವೆ.

ತಮಿಳುನಾಡಿನ ತಿರುಚಿರಾಪಳ್ಳಿ ಜಿಲ್ಲೆಯ ಶ್ರೀರಂಗಮ್ನ ಮಧ್ಯಮ ವರ್ಗದ ಕುಟುಂಬದಲ್ಲಿ1951 ಮೇ 8ರಂದು ಜನಿಸಿದರು. ಸತ್ಯದ ಪರವಾಗಿ ಹೋರಾಟ ಅವರಿಗೆ ವಿದ್ಯಾರ್ಥಿ ದೆಸೆಯಿಂದಲೇ ಬಂದ ಗುಣ. ಕಾಲೇಜಿನಲ್ಲಿದ್ದಾಧಿಗಲೇ ಸಿಪಿಎಂ ವಿದ್ಯಾರ್ಥಿ ನಾಯಕರಾಗಿದ್ದರು. ಇದರಿಂದಾಗಿ ಚೆನ್ನೈನಲ್ಲಿಲೋಯೋಲಾ ಕಾಲೇಜ್ನಲ್ಲಿ ಸಾಕಷ್ಟು ತೊಂದರೆ ಎದುರಿಸಬೇಕಾಯಿತು. ವಿದ್ಯಾರ್ಥಿಗಳ ಹೋರಾಟದ ನಾಯಕತ್ವ ವಹಿಸಿಕೊಂಡಿದ್ದಕ್ಕಾಗಿ ಲೋಯೋಲಾ ಕಾಲೇಜ್ಆಡಳಿತ ಮಂಡಳಿ ಇವರನ್ನು ಕಾಲೇಜಿನಿಂದ ಹೊರ ಹಾಕಿತು. ನಂತರ ಅವರು ಕ್ರಿಶ್ಚಿಯನ್ಕಾಲೇಜ್ನಲ್ಲಿಅಧ್ಯಯನ ಮುಂದುವರಿಸಬೇಕಾಯಿತು.

ವಿದ್ಯಾರ್ಥಿ ನಾಯಕನಾಗಿ, ಟ್ರೇಡ್ಯೂನಿಯನ್ನಾಯಕನಾಗಿ ಅವರು ಇಡೀ ತಮಿಳುನಾಡನ್ನು ಲಾರಿ ಮತ್ತು ಬಸ್ಗಳ ಮೂಲಕವೇ ಸುತ್ತಿದ್ದಾರೆ; ಜನರನ್ನು ಸಂಘಟಿಸಿದ್ದಾರೆ. ಈ ಸಂದರ್ಭದಲ್ಲಿದಲಿತರು, ಕಾರ್ಮಿಕರು, ಕೃಷಿ ಕಾರ್ಮಿಕರು, ಟ್ರೇಡ್ಯೂನಿಯನ್ನಾಯಕರನ್ನು ಭೇಟಿ ಮಾಡುವ ಅವಕಾಶ ಅವರಿಗೆ ಸಿಕ್ಕಿದೆ. ಈ ವ್ಯವಸ್ಥೆಯು ಶಕ್ತಿಹೀನರನ್ನು ಹೇಗೆ ಶೋಷಣೆ ಮಾಡುತ್ತದೆ ಎಂಬ ಸ್ಪಷ್ಟವಾದ ಪರಿಕಲ್ಪನೆ, ಅನುಭವ ಅವರಿಗಾಗಿದೆ.

ಚಂದ್ರು ಅವರು ವಕೀಲಿ ವೃತ್ತಿಗೆ ಬರಲು ಅಣ್ಣಾ ವಿವಿ ವಿದ್ಯಾರ್ಥಿಯೊಬ್ಬ ಪೊಲೀಸರ ಲಾಠಿ ಏಟಿಗೆ ಮೃತಪಟ್ಟ ಘಟನೆ ಕಾರಣವಾಯಿತು. ಈ ಘಟನೆಯ ತನಿಖೆಗೆ ಎಂ ಕರುಣಾನಿಧಿ ಅವರು ಹೆಚ್ಚುವರಿ ನ್ಯಾಯಧಿಮೂರ್ತಿ ನೇತೃತ್ವದಲ್ಲಿಆಯೋಗ ನೇಮಕ ಮಾಡಿದ್ದರು. ಈ ಆಯೋಗದ ಎದುರು ಚಂದ್ರು ಅವರು ವಿದ್ಯಾರ್ಥಿಗಳ ಪರವಾಗಿ ಹಾಜರಾಗಿಧಿದ್ದರು. ಅವರ ವಾದ ಮಂಡನೆ ಮತ್ತು ಜಾಣತನವನ್ನು ಗುರುತಿಸಿದ ನ್ಯಾಯಧಿಮೂರ್ತಿ, ಕಾನೂನು ವೃತ್ತಿಗೆ ಬರುವಂತೆ ಸೂಚಿಸಿದರು. ಪರಿಣಾಮ ಚಂದ್ರು 1973ರಲ್ಲಿಕಾನೂನು ಕಾಲೇಜಿಗೆ ದಾಖಲಾದರು. ಆದರೆ, ಹಾಸ್ಟೆಲ್ಪ್ರವೇಶಧಿವನ್ನು ನಿರಾಕರಿಸಲಾಯಿತು. ವಿದ್ಯಾರ್ಥಿ ನಾಯಕರಾಗಿ ಅವರು ಕೈಗೊಂಡ ಹೋರಾಟಗಳೇ ಇದಕ್ಕೆ ಕಾರಣವಾಗಿತ್ತು. ಆದರೆ, ಪಟ್ಟು ಸಡಿಲಿಸದ ಅವರು ಮೂರು ದಿನ ಉಪವಾಸ ಸತ್ಯಾಗ್ರಹ ಕೈಗೊಂಡರು. ಅಂತಿಮವಾಗಿ ಅಧಿಕಾರಿಗಳು ಹಾಸ್ಟೆಲ್ಪ್ರವೇಶ ನೀಡಬೇಕಾಯಿತು

 ಕಾಲೇಜಿನಲ್ಲಿದ್ದಾಗಲೇ ಬಡವರಿಗೆ ಕಾನೂನು ಸೇವೆ ಒದಗಿಸಲಾರಂಭಿಸಿದರು. ಬಡವರು, ಶೋಷಿತರಿಗೆ ಕಾನೂನು ಸೇವೆಯನ್ನು ಒದಗಿಸುತ್ತಿದ್ದ ರಾವ್ಆಂಡ್ರೆಡ್ಡಿ ಸಂಸ್ಥೆಯನ್ನು ಸೇರಿದರು. 8 ವರ್ಷ ಇಲ್ಲಿಕೆಲಸ ಮಾಡಿ, ಸ್ವತಂತ್ರವಾಗಿ ವಕೀಲಿಕೆಯನ್ನು ಆರಂಭಿಸಿದರು. ತಮಿಳುನಾಡು ಬಾರ್ಕೌನ್ಸಿಲ್ಗೆ ಆಯ್ಕೆಯಾದ ಅತ್ಯಂತ ತರುಣ ನ್ಯಾಯವಾದಿ ಎನಿಸಿಕೊಂಡರು. ಇದರ ಮಧ್ಯೆಯೇ, ಶ್ರೀಲಂಕಾ ವಿಷಯದಲ್ಲಿ ರಾಜೀವ್ಗಾಂಧಿ ಆಡಳಿತ ನಡೆದುಕೊಂಡ ರೀತಿಗೆ ಸಂಬಂಧಿಸಿದಂತೆ ಭಿನ್ನಾಭಿಪ್ರಾಯದಿಂದಾಗಿ ಸಿಪಿಎಂ ಪಕ್ಷ ವನ್ನೂ ತೊರೆದರು.

ಮದ್ರಾಸ್ಹೈಕೋರ್ಟ್ನ್ಯಾಯಮೂರ್ತಿಯಾಗಿ ಕ್ಷೀಪ್ರವಾಗಿ ನ್ಯಾಯದಾನ ಮಾಡಿದ್ದೂ ಮಾತ್ರವಲ್ಲದೇ ಹಲವು ಐತಿಹಾಸಿಕ ತೀರ್ಪುಗಳನ್ನು ನೀಡಿದ್ದಾರೆ. ಆ ಪೈಕಿ ಮಹಿಳೆಯರಿಗೆ ಅರ್ಚಕರಾಗಲು ಅವಕಾಶ ಕಲ್ಪಿಸುವುದು, ಮಧ್ಯಾಹ್ನದ ಬಿಸಿಯೂಟ ಯೋಜನೆಯಲ್ಲಿಕೆಲಸ ಮಾಡುತ್ತಿದ್ದ 25 ಸಾವಿರ ಬಡ ಹೆಣ್ಣುಮಕ್ಕಳಿಗೆ ಉದ್ಯೋಗ ಭದ್ರತೆ ಒದಗಿಸುವ ತೀರ್ಪು ಸೇರಿದಂತೆ ಅನೇಕ ಜನಪರ ತೀರ್ಪುಗಳನ್ನು ನೀಡಿದ್ದಾರೆ. ನ್ಯಾಯವಾದಿಯಾಗಿದ್ದಾಗ ಪಾಲಿಸಿಕೊಂಡಿದ್ದ ಶೋಷಿತರಿಗೆ ಧ್ವನಿಯಾಗುವ ಕೆಲಸವನ್ನು ನ್ಯಾಯಾಧೀಶಧಿರಾದಾಗಲೂ ಮುಂದುವರಿಸಿಕೊಂಡು ಬಂದು, 2013ರಲ್ಲಿನಿವೃತ್ತರಾದರು.

ಅವರು ಕೇವಲ ಒಬ್ಬ ನ್ಯಾಯವಾದಿ, ಜಸ್ಟಿಸ್ಮಾತ್ರವಲ್ಲದೆ ಬರಹಗಾರರೂ ಹೌದು. ನಿವೃತ್ತಿಯಾದ ಮೇಲೂ ಹಲವು ಹೋರಾಟಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಪತ್ರಿಕೆಗಳಿಗೆ ಅಂಕಣಗಳನ್ನು ಬರೆಯುತ್ತಾರೆ; ಪುಸ್ತಕಗಳನ್ನು ಬರೆದಿದ್ದಾರೆ. Listen to My Case!: When Women Approach the Courts of Tamil Naduಅವರ ಇತ್ತೀಚಿನ ಕೃತಿ. ಈ ಪುಸ್ತಕದಲ್ಲಿ ಚಂದ್ರು ಅವರು, ನ್ಯಾಯಕ್ಕಾಗಿ ಹೋರಾಡಿದ 20 ಮಹಿಳೆಯರ  ಬಗ್ಗೆ ಬರೆದಿದ್ದಾರೆ. ಜಸ್ಟೀಸ್ಕೆ.ಚಂದ್ರು ಅವರಂಥ ಬದ್ಧತೆಯುಳ್ಳ ನ್ಯಾಯವಾದಗಳು, ನ್ಯಾಯಮೂರ್ತಿಗಳ ಸಂಖ್ಯೆ ಹೆಚ್ಚಾದರೆ ಬಹುಶಃ ದೀನ ದಲಿತರಿಗೆ, ಬಡವರಿಗೆ, ಕಾನೂನು ಎಂಬುದು ಗಗನಕುಸುಮವಾಗಲಾರದು.



ಭಾನುವಾರ, ಸೆಪ್ಟೆಂಬರ್ 19, 2021

Captain Amarinder Singh: ಅಮರೀಂದರ್ ಸಿಂಗ್ 'ಜನರ ಮಹಾರಾಜ'

ನವಜೋತ್‌ ಸಿಧು ಜೊತೆಗಿನ ಒಳಜಗಳದಲ್ಲಿ ಕೈಸೋತ ಪಂಜಾಬ್‌ ಮುಖ್ಯಮಂತ್ರಿ ಅಮರೀಂದರ್‌ ಸಿಂಗ್‌ ರಾಜೀನಾಮೆ ನೀಡಿದ್ದಾರೆ.


- ಮಲ್ಲಿಕಾರ್ಜುನ ತಿಪ್ಪಾರ
‘‘ಇನ್ನು ನಾನು ಅವಮಾನ ಸಹಿಸಲಾರೆ,’’ ಎನ್ನುತ್ತಲೇ ಪಂಜಾಬ್‌ ಮುಖ್ಯಮಂತ್ರಿ ಕ್ಯಾಪ್ಟನ್‌ ಅಮರೀಂದರ್‌ ಸಿಂಗ್‌ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಪಂಜಾಬ್‌ ಕಾಂಗ್ರೆಸ್‌ನ ನೂತನ ಅಧ್ಯಕ್ಷ , ಮಾಜಿ ಕ್ರಿಕೆಟಿಗ ನವಜೋತ್‌ ಸಿಂಗ್‌ ಸಿಧು ಹಾಗೂ ಅಮರೀಂದರ್‌ ಸಿಂಗ್‌ ನಡುವಿನ ಕಿತ್ತಾಟ ಒಂದು ಹಂತಕ್ಕೆ ತಲುಪಿದೆ. 

ಅನುಮಾನವೇ ಬೇಡ; ಕ್ಯಾಪ್ಟನ್‌ ಅಮರೀಂದರ್‌ ಸಿಂಗ್‌ ಪಂಜಾಬ್‌ ಕಾಂಗ್ರೆಸ್‌ನ ದಿಗ್ಗಜ ಧುರೀಣ. ರಾಜ್ಯದಲ್ಲಿ ಕಾಂಗ್ರೆಸ್‌ನಿಂದ ಬೇರುಮಟ್ಟದಿಂದ ಸಂಘಟಿಸಿ, ಅದಕ್ಕೊಂದು ಸಾಂಸ್ಥಿಕ ರೂಪ ನೀಡಿ, ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಅವರ ಕೊಡುಗೆ ಅನನ್ಯ, ಅನುಪಮ. ಕಾಂಗ್ರೆಸ್‌ ಅಧಿಕಾರಕ್ಕೆ ಬಂದಾಗ ಅವರು ಮುಖ್ಯಮಂತ್ರಿ ಆಯ್ಕೆಯ ಮೊದಲ ಆದ್ಯತೆಯಾ­ಗುತ್ತಿದ್ದರು. ಪರಿಣಾಮ ಎರಡು ಬಾರಿ ಸಿಎಂ ಆಗಿದ್ದಾರೆ. ಪಂಜಾಬ್‌ ಕಾಂಗ್ರೆಸ್‌ ಮೇಲೆ ಬಿಗಿ ಹಿಡಿತ ಹೊಂದಿದ್ದ ‘ಕ್ಯಾಪ್ಟನ್‌’ ವಿರುದ್ಧವೇ ಶಾಸಕರು, ಕೆಲವು ನಾಯಕರು ಬಂಡೆದ್ದ ಪರಿಣಾಮ, ಕಳೆದ ಎರಡ್ಮೂರು ವರ್ಷದಲ್ಲಿ ಪಂಜಾಬ್‌ ಕಾಂಗ್ರೆಸ್‌ ಬೀದಿ ಜಗಳವನ್ನು ಇಡೀ ರಾಷ್ಟ್ರವೇ ನೋಡಿದೆ. ಹಾಗೆ ನೋಡಿದರೆ, 2017ರಲ್ಲಿ ಪ್ರಚಂಡ ಬಹುಮತದಿಂದ ಕಾಂಗ್ರೆಸ್‌ ಅಧಿಕಾರಕ್ಕೆ ಬಂತಲ್ಲ, ಆಗಲೇ ಈ ಬಂಡಾಯದ ಕಿಚ್ಚು ಶುರವಾಗಿದ್ದು! ಹೇಗೆಂದರೆ, ಬಿಜೆಪಿಯಿಂದ ವಲಸೆ ಬಂದು ಕಾಂಗ್ರೆಸ್‌ ಸೇರಿದ್ದ ಮಾಜಿ ಕ್ರಿಕೆಟಿಗ ‘ಸಿಕ್ಸರ್‌’ ಸಿಧು, ಉಪಮುಖ್ಯಮಂತ್ರಿಯ ಹುದ್ದೆಗೆ ಹಕ್ಕು ಚಲಾಯಿಸಿದ್ದರು. 

ಆದರೆ, ಅಂದಿನ ಸನ್ನಿವೇಶದಲ್ಲಿ ಅಮರೀಂದರ್‌ ಸಿಂಗ್‌ ಏರಿದ್ದ ಎತ್ತರಕ್ಕೆ ದಿಲ್ಲಿ ವರಿಷ್ಠ ಮಂಡಳಿ ಎದುರಾಡುವ ಮಾತೇ ಇರಲಿಲ್ಲ, ಪರಿಣಾಮ ಸಿಧು ಡಿಸಿಎಂ ಸ್ಥಾನದಿಂದ ವಂಚಿತರಾಗಿ, ಸಚಿವ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾ­ಯಿತು. ಆದರೆ, ಅವರೊಳಗಿನ ಮಹತ್ವಾಕಾಂಕ್ಷಿ ಸಿಧು ತೃಪ್ತನಾಗಲಿಲ್ಲ. ಸ್ವಲ್ಪ ದಿನಗಳಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಸಿಧು, ಕ್ಯಾಪ್ಟನ್‌ ವಿರುದ್ಧ ಬಂಡಾಯ ಸಾರಿದರು. ಇಷ್ಟೇ ಆದರೆ ಪರ್ವಾಗಿರಲಿಲ್ಲ. ಸಿಎಂ ಆಗಿದ್ದ ಅಮರೀಂದರ್‌ ಅವರು ನಿಧಾನವಾಗಿ ಪಕ್ಷ ದ ಮೇಲಿನ ಹಿಡಿತ ಕಳೆದುಕೊಳ್ಳುವುದಕ್ಕೂ, ಅತೃಪ್ತ ಶಾಸಕರ ಸಂಖ್ಯೆ ಹೆಚ್ಚಾಗುವುದಕ್ಕೂ, ಸಿಧು ಅತೃಪ್ತ ಶಾಸಕರ ನಾಯಕನಾಗಿ ಹೊರಹೊಮ್ಮುವುದಕ್ಕೂ ಸರಿಹೋಗಿದೆ. ಹಲವು ಬಾರಿ ಕಾಂಗ್ರೆಸ್‌ನ ಕೇಂದ್ರ ನಾಯಕತ್ವ ಪಂಜಾಬ್‌ ಬಿಕ್ಕಟ್ಟನ್ನು ಶಮನ ಮಾಡಿದರು, ಅದು ತಾತ್ಕಾಲಿಕವಾಗಿತ್ತಷ್ಟೇ. ನವಜೋತ್‌ ಸಿಂಗ್‌ ಸಿಧು ಅವರನ್ನು ಪಂಜಾಬ್‌ ಕಾಂಗ್ರೆಸ್‌ ಮುಖ್ಯಸ್ಥರನ್ನಾಗಿ ಮಾಡಿದ ಮೇಲೆ ಒಳಜಗಳ ಮತ್ತಷ್ಟು ಬಿಗಡಾಯಿಸಿತು. 

ಅಮರೀಂದರ್ ರಾಜೀನಾಮೆಯು ಪಂಜಾಬ್‌ ಕಾಂಗ್ರೆಸ್‌ನ ಒಳಜಗಳದ ಫಲಿತಾಂಶವಾದರೂ ಅದಕ್ಕೆ ಸಾಕಷ್ಟು ಆಯಾಮಗಳಿವೆ. 2017ರ ಚುನಾವಣೆ ವೇಳೆಗೆ ಪ್ರಶ್ನಾತೀತ ನಾಯಕರಾಗಿದ್ದ ಅಮರೀಂದರ್‌ ಸಿಂಗ್‌ 2022ರ ಚುನಾವಣೆ ಹೊಸ್ತಿಲಲ್ಲಿ ಜನಪ್ರಿಯತೆಯಲ್ಲಿ ಕುಸಿದಿದ್ದಾರೆ. ‘ಜನರ ಮಹಾರಾಜ’ ಎಂದು ಪ್ರೀತಿಯಿಂದ ಕರೆಸಿಕೊಳ್ಳುತ್ತಿದ್ದ ಅವರು ಕೊನೆ ಕೊನೆಗೆ ಜನರಿಗೆ ಸಿಗುವುದೇ ಕಷ್ಟವಾಗಿತ್ತು. ಅಮರೀಂದರ್‌ ನೇತೃತ್ವದಲ್ಲಿ ಚುನಾವಣೆ ಎದುರಿಸಿದರೆ ಗೆಲುವು ಸಿಗಲಾರದು ಎಂಬ ಸಮೀಕ್ಷೆಯೂ ಅವರು ನಿರ್ಗಮನಕ್ಕೆ ಕಾರಣವಾಯಿತು. ಅವರ ನೆರಳಾಗಿದ್ದ ಬಹಳಷ್ಟು ಶಾಸಕರು ಪಾಳಯ ಬದಲಿಸಿದ್ದಾರೆ ಎನ್ನುತ್ತಾರೆ  ಪಂಜಾಬ್ ರಾಜಕಾರಣ ಬಲ್ಲ ವಿಶ್ಲೇಷಕರು. 

‘ಸೇನೆ ಇಲ್ಲದ ವಯೋವೃದ್ಧ ಸೇನಾನಿ’ಯಾಗಿರುವ ಅಮರೀಂದರ್‌ ಸಿಂಗ್‌ ವ್ಯಕ್ತಿತ್ವ ಕೇವಲ ರಾಜಕಾರಣಕ್ಕೆ ಸೀಮಿತವಾಗಿಲ್ಲ. ಯೋಧ, ಸೇನಾ ಇತಿಹಾಸಿಕಾರ, ಶೆಫ್‌, ತೋಟಗಾರ, ಬರಹಗಾರ.. ಹೀಗೆ ನಾನು ಮುಖಗಳಿವೆ. ಅವರು ಅಪರೂಪದ ರಾಜಕೀಯ ನಾಯಕರು. ರಾಯಲ್‌ ಫ್ಯಾಮಿಲಿಯ ಅಮರೀಂದರ್‌ ರಾಜಕಾರಣಕ್ಕೆ ಬಂದಿದ್ದು, ತಮ್ಮ ಶಾಲಾ ದಿನಗಳ ಸ್ನೇಹಿತ ರಾಜೀವ್‌ ಗಾಂಧಿಯ ಒತ್ತಾಸೆಯಿಂದಾಗಿ. 1942 ಮಾರ್ಚ್‌ 11ರಂದು ಪಟಿಯಾಲಾದ ರಾಜಮನೆತನದಲ್ಲಿ ಜನಿಸಿದರು. ತಂದೆ ಮಹಾರಾಜ ಸರ್‌ ಯಾದವೀಂದ್ರ ಸಿಂಗ್‌ ಮತ್ತು ತಾಯಿ ಮಹಾರಾಣಿ ಮೊಹೀಂದರ್‌ ಕೌರ್‌. ಶಿಮ್ಲಾದ ಲೊರೆಟೋ ಕಾನ್ವೆಂಟ್‌, ಸನಾವರ್‌ದ ಲಾವರೆನ್ಸ್‌ ಸ್ಕೂಲ್‌ನಲ್ಲಿ ಆರಂಭದ ಶಿಕ್ಷ ಣ ಪಡೆದು, ಡೆಹ್ರಾಡೂನ್‌ನ ದಿ ಡೂನ್‌ ಸ್ಕೂಲ್‌ಗೆ ಸೇರಿದರು. ಅಮರೀಂದರ್‌ ಅವರ ಪತ್ನಿ ಪ್ರಣೀತ್‌ ಕೌರ್‌. ರಣೀಂದರ್‌ ಸಿಂಗ್‌ ಮತ್ತು ಜೈ ಇಂದೇರ್‌ ಕೌರ್‌ ಮಕ್ಕಳು. ಪತ್ನಿ ಪ್ರಣೀತ್‌ ಕೌರ್‌ ಅವರು ಸಂಸದೆಯಾಗಿದ್ದರು ಮತ್ತು 2009ರಿಂದ ಅಕ್ಟೋಬರ್‌ 2012ರವರೆಗೆ ವಿದೇಶಾಂಗ ಇಲಾಖೆಯ ರಾಜ್ಯ ಸಚಿವೆಯಾಗಿ ಕೆಲಸ ನಿರ್ವಹಿಸಿದ್ದಾರೆ. ಅಮರೀಂದರ್‌ ಅವರ ಸಹೋದರಿ ಹೇಮಿಂದರ್‌ ಕೌರ್‌ ಮಾಜಿ ವಿದೇಶಾಂಗ ಸಚಿವರಾಗಿದ್ದ ಕೆ. ನಟ್ವರ್‌ ಸಿಂಗ್‌ ಅವರ ಪತ್ನಿ. ಹಾಗೆಯೇ, ಶಿರೋಮಣಿ ಅಕಾಲಿ ದಳ(ಎ)ದ ಮುಖ್ಯಸ್ಥ ಸಿಮ್ರಂಜಿತ್‌ ಸಿಂಗ್‌ ಮನ್‌ ಕೂಡ ಇವರ ಸಂಬಂಧಿ. ಅಮರೀಂದರ್‌ ಸಿಂಗ್‌ ಅವರ ಒಟ್ಟು ಫ್ಯಾಮಿಲಿ ರಾಜಕೀಯ ಹಿನ್ನೆಲೆಯನ್ನು ಹೊಂದಿದೆ.

ರಾಜಕಾರಣಕ್ಕೆ ಕಾಲಿಡುವ ಮುನ್ನ ಅಮರೀಂದರ್‌ ಅವರು, ಸೇನೆಯಲ್ಲಿ ಕ್ಯಾಪ್ಟನ್‌ ಆಗಿದ್ದರು. 1963ರಿಂದ 1966ವರೆಗೆ ಸೇವೆ ಸಲ್ಲಿಸಿದ್ದಾರೆ. ನ್ಯಾಷನಲ್‌ ಡಿಫೆನ್ಸ್‌ ಅಕಾಡೆಮಿ ಮತ್ತು ಮಿಲಿಟರಿ ಅಕಾಡೆಮಿ ಪದವೀಧರರೂ ಹೌದು. ಅವರ ಸೇನೆಯಲ್ಲಿ ಸಿಖ್‌ ರೆಜಿಮಂಟ್‌ನಲ್ಲಿದ್ದರು. 1965ರ ಇಂಡೋ-ಪಾಕ್‌ ಯುದ್ಧದಲ್ಲಿಸಕ್ರಿಯವಾಗಿ ಪಾಲ್ಗೊಂಡ ಹಿರಿಮೆ ಅವರಿಗಿದೆ. ರಾಜೀವ್‌ ಗಾಂಧಿಯ ಒತ್ತಾಸೆಯ ಮೇರೆಗೆ ಅವರು ಕಾಂಗ್ರೆಸ್‌ ಸೇರ್ಪಡೆಯಾಗಿ 1980ರಲ್ಲಿಮೊದಲ ಬಾರಿಗೆ ಸಂಸತ್ತಿಗೆ ಆಯ್ಕೆಯಾದರು. ಆದರೆ, ಆಪರೇಷನ್‌ ಬ್ಲೂಸ್ಟಾರ್‌ ಕಾರ್ಯಾಚರಣೆ ವಿರೋಧಿಸಿ ತಮ್ಮ ಲೋಕಸಭಾ ಸದಸ್ಯತ್ವ ಹಾಗೂ ಕಾಂಗ್ರೆಸ್‌ ಪಾರ್ಟಿಗೆ ರಾಜೀನಾಮೆ ನೀಡಿ ಹೊರಬಂದರು. ಬಳಿಕ ಶಿರೋಮಣಿ ಅಕಾಲಿ ದಳ ಸೇರ್ಪಡೆಯಾಗಿ ತಲವಂಡಿ ಸಾಬೋ ಕ್ಷೇತ್ರದಿಂದ ರಾಜ್ಯ ವಿಧಾನಸಭೆಗೆ ಆಯ್ಕೆಯಾಗಿ ಸಚಿವರೂ ಆದರು. ಕೃಷಿ, ಅರಣ್ಯ, ಅಭಿವೃದ್ಧಿ ಮತ್ತು ಪಂಚಾಯತ್‌ ಇಲಾಖೆಗಳನ್ನು ನಿರ್ವಹಣೆ ಮಾಡಿ ಅನುಭವ ಪಡೆದುಕೊಂಡರು. 

ಆದರೆ, ಅಕಾಲಿದಳದಲ್ಲೂ ತುಂಬ ದಿನಗಳ ಕಾಲ ಅಮರೀಂದರ್‌ ಉಳಿಯಲಿಲ್ಲ. 1992ರಲ್ಲಿ ಆ ಪಕ್ಷ ವನ್ನು ತೊರೆದು ತಮ್ಮದೇ ಆದ ಶಿರೋಮಣಿ ಅಕಾಲಿ ದಳ(ಪ್ಯಾಂಥಿಕ್‌) ಸ್ಥಾಪಿಸಿದರು. ಆದರೆ, ವಿಧಾಸಭೆ ಚುನಾವಣೆಯಲ್ಲಿ ಹೀನಾಯವಾಗಿ ಅವರ ಪಕ್ಷ  ಸೋಲು ಕಂಡಿತು. ಸ್ವತಃ ಅಮರೀಂದರ್‌ ಅವರು ಕೇವಲ 856 ಮತಗಳನ್ನು ಪಡೆದು ಠೇವಣಿ ಕಳೆದುಕೊಂಡರು. ಪರಿಣಾಮ ತಮ್ಮ ಪಕ್ಷ ವನ್ನು ಅವರು 1998ರಲ್ಲಿಕಾಂಗ್ರೆಸ್‌ ಜತೆ ವಿಲೀನಗೊಳಿಸಿದರು. ಆಗ ಕಾಂಗ್ರೆಸ್‌ ನಾಯಕತ್ವ ಸೋನಿಯಾ ಗಾಂಧಿ ಹೆಗಲಿಗೇರಿತ್ತು. 1998ರಲ್ಲಿ ಮತ್ತೆ ಲೋಕಸಭೆ ಚುನಾವಣೆಯಲ್ಲಿ ಸೋಲು ಕಂಡರು. ಆದರೆ, ಪಂಜಾಬ್‌ನಲ್ಲಿ ಕಾಂಗ್ರೆಸ್‌ ಪಕ್ಷ  ಕಟ್ಟುವ ಹೊಣೆಗಾರಿಕೆ ಅವರನ್ನು ಮುಂಚೂಣಿಯ ನಾಯಕನನ್ನಾಗಿ ಮಾಡಿತು. 1999ರಿಂದ 2002, 2010ರಿಂದ 2013 ಮತ್ತು 2015ರಿಂದ 2017, ಹೀಗೆ ಮೂರು ಬೇರೆ ಬೇರೆ ಅವಧಿಯಲ್ಲಿ ಪಂಜಾಬ್‌ ಕಾಂಗ್ರೆಸ್‌ ಅಧ್ಯಕ್ಷರಾಗಿ ಪಕ್ಷವನ್ನು ಅಧಿಕಾರದ ಮೊಗಸಾಲೆಗೆ ತರುವಲ್ಲಿ ಯಶಸ್ವಿಯಾಗಿ, 2002ರಿಂದ 2007ರವರೆ ಮೊದಲ ಬಾರಿಗೆ  ಪಂಜಾಬ್‌ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದರು. ಅಮರೀಂದರ್‌ 2013ರಿಂದಲೂ ಕಾಂಗ್ರೆಸ್‌ ಕಾರ್ಯಕಾರಿ ಸಮಿತಿಯ ಕಾಯಂ ಆಹ್ವಾನಿತ ಸದಸ್ಯರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. 2014ರ ಚುನಾವಣೆಯಲ್ಲಿ ಕಾಂಗ್ರೆಸ್‌ ಧೂಳಿಪಟವಾಯಿತು. ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂತು. ಆದರೆ, ಪಂಜಾಬ್‌ನಲ್ಲಿ ಮೋದಿ ಅಲೆಯ ನಡುವೆಯೂ ಅರುಣ್‌ ಜೇಟ್ಲಿ ಅವರನ್ನು ಸೋಲಿಸುವಲ್ಲಿ ಅಮರೀಂದರ್‌ ಯಶಸ್ವಿಯಾಗಿದ್ದರು. ಪಟಿಯಾಲ ನಗರ ಮೂರು ಬಾರಿ, ಸಮನಾ ಹಾಗೂ ತಲ್ವಾಂಡಿ ಸಾಬೋ ವಿಧಾನಸಭೆ ಕ್ಷೇತ್ರಗಳನ್ನು ತಲಾ ಒಂದು ಬಾರಿ ಪ್ರತಿನಿಧಿಸಿದ್ದಾರೆ. 2015ರಲ್ಲಿ ಕಾಂಗ್ರೆಸ್‌ ನಾಯಕತ್ವ ಇವರನ್ನು ಮತ್ತೆ ಪಂಜಾಬ್‌ ಕಾಂಗ್ರೆಸ್‌ ಮುಖ್ಯಸ್ಥರನ್ನಾಗಿ ನೇಮಿಸಿತು. ಪರಿಣಾಮ 2017ರಲ್ಲಿ ಎಲೆಕ್ಷ ನ್‌ನಲ್ಲಿ ಕಾಂಗ್ರೆಸ್‌ ಭರ್ಜರಿ ಜಯ ದಾಖಲಿಸಿ ಮತ್ತೆ ಅಧಿಕಾರಕ್ಕೇರಿತು. ಅಮರೀಂದರ್‌ ಸಿಂಗ್‌ ಎರಡನೇ ಬಾರಿಗೆ ಮುಖ್ಯಮಂತ್ರಿಯಾದರು. 

ಪಂಜಾಬ್‌ನಲ್ಲಿ ತಾವೊಬ್ಬ ನಿರ್ಣಾಯಕ ನಾಯಕ ಎಂಬುದನ್ನು ಕಾಲಕಾಲಕ್ಕೆ ಅವರು ಸಾಬೀತುಪಡಿಸುತ್ತಾ ಬಂದಿದ್ದಾರೆ. ರಾಜ್ಯ ಮತ್ತು ರಾಷ್ಟ್ರ ಹಿತಾಸಕ್ತಿ ವಿಷಯಗಳಿಗೆ ಸಂಬಂಧಿಸಿದಂತೆ ಕಾಂಗ್ರೆಸ್‌ ನಾಯಕತ್ವದ ತದ್ವಿರುದ್ಧವಾದ ಹೇಳಿಕೆಗಳನ್ನು ನೀಡಲು ಅವರು ಯಾವತ್ತೂ ಹಿಂಜರಿದಿಲ್ಲ. ಈಗ ಕಾಲ ಬದಲಾಗಿದೆ; ಪಂಜಾಬ್‌ನ ನದಿಗಳಲ್ಲಿ ಸಾಕಷ್ಟು ನೀರು ಹರಿದು ಹೋಗಿದೆ. 79 ವರ್ಷದ ಅಮರೀಂದರ್‌ ಅವರಿಗೀಗ ಮೊದಲಿದ್ದ ಚಾರ್ಮ್‌ ಇಲ್ಲ ಎಂಬುದನ್ನು ಅರಿತ ಹಲವು ಶಾಸಕರು, ನಾಯಕರು ಅವರ ವಿರುದ್ಧವೇ ನಿಂತು ಕಾಳಗ ಮಾಡುತ್ತಿದ್ದಾರೆ. ಈ ಹಂತದಲ್ಲಿ ಅವರು ನೀಡಿರುವ ರಾಜೀನಾಮೆ ಯಾವ ಪರಿಣಾಮ ಬೀರಲಿದೆ ಎಂಬುದನ್ನು ಸದ್ಯಕ್ಕೆ ಹೇಳುವುದು ಕಷ್ಟ. ಆರೇಳು ತಿಂಗಳು ಕಳೆದರೂ ಸಾಕು, ಎಲ್ಲವೂ ನಿಚ್ಚಳವಾಗಲಿದೆ.



ಭಾನುವಾರ, ಸೆಪ್ಟೆಂಬರ್ 6, 2020

Kangana Ranaut: ಕಂಗನಾ ಅಂದ್ರೆ ಸುಮ್ನೇನಾ?

 

ಯಾವುದೇ ಘಟನೆ ಅಥವಾ ಪ್ರಕರಣದ ವಿರುದ್ಧ ದಿಕ್ಕಿನಲ್ಲಿಯೋಚಿಸಿ, ಅದನ್ನು ಅಷ್ಟೇ ದೊಡ್ಡ ದನಿಯಲ್ಲಿಹೇಳಿ, ಒಪ್ಪಿಸುವ ಛಾತಿ ನಟಿ ಕಂಗನಾಗೆ ಇದೆ.



- ಮಲ್ಲಿಕಾರ್ಜುನ ತಿಪ್ಪಾರ
ಕಂಗನಾ ರಣಾವತ್‌ ಎಂಬ ಫಿಯರ್‌ಲೆಸ್‌ ಮತ್ತು ಫಿಲ್ಟರ್‌ಲೆಸ್‌ ಆಗಿ ಮಾತನಾಡುವ ನಟಿ ಕಳೆದ ಎರಡ್ಮೂರು ತಿಂಗಳಿಂದ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದಾರೆ. ಬಾಲಿವುಡ್‌ನ ಭರವಸೆಯ ನಟ ಸುಶಾಂತ್‌ ಸಿಂಗ್‌ ರಜಪೂತ್‌ ಜೂನ್‌ 14ರಂದು ಆತ್ಮಹತ್ಯೆ ಮಾಡಿಕೊಂಡರು. ಆ ಬಳಿಕ, ಅದೊಂದು ಕೊಲೆ, ಮಾನಸಿಕ ಒತ್ತಡ ಮತ್ತು ಸ್ವಜನಪಕ್ಷಪಾತಕ್ಕೆ ಬೇಸತ್ತು ಆತ್ಮಹತ್ಯೆ ಎಂಬಂಥ ಕತೆಗಳನ್ನು ನಾವು ದಿನಾ ಟಿವಿಗಳಲ್ಲಿನೋಡುತ್ತಿದ್ದೇವೆ. ಈ ಸಂದರ್ಭದಲ್ಲಿ''ಸುಶಾಂತನದ್ದು ಆತ್ಮಹತ್ಯೆಯಲ್ಲ; ಅದೊಂದು ವ್ಯವಸ್ಥಿತ ಕೊಲೆ. ಬಾಲಿವುಡ್‌ನಲ್ಲಿರುವ ಸ್ವಜನಪಕ್ಷಪಾತವೇ ಇದಕ್ಕೆ ಕಾರಣ,'' ಎಂದು 'ಕ್ವೀನ್‌' ನಟಿ ಕಂಗನಾ ಯಾವಾಗ ಸೋಷಿಯಲ್‌ ಮೀಡಿಯಾದಲ್ಲಿಹೇಳಿದಳೋ ಆಗ ಸುಶಾಂತ್‌ ಪ್ರಕರಣ ಮತ್ತೊಂದು ದಿಕ್ಕಿಗೆ ಹೊರಳಿತು. ಅವಳ ಈ ಹೇಳಿಕೆಯನ್ನೇ ಇಟ್ಟುಕೊಂಡು ಕೆಲವು ಟಿವಿ ಚಾನೆಲ್‌ಗಳೂ ದಿನದ 24 ಗಂಟೆ ಅದೇ ಸುದ್ದಿ ಬಿತ್ತರಿಸಿ, ಸುಶಾಂತ್‌ ಕುಟುಂಬದ ಸದಸ್ಯರ ಒತ್ತಡ ಹಾಗೂ ಮುಂಬಯಿ ಮತ್ತು ಬಿಹಾರ ಪೊಲೀಸರ ನಡುವಿನ ಒಟ್ಟಾರೆ ಜಟಾಪಟಿಯ ಪರಿಣಾಮ ಸುಪ್ರೀಂ ಕೋರ್ಟ್‌ ಆತ್ಮಹತ್ಯೆ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಿತು.

ಆತ್ಮಹತ್ಯೆ ಪ್ರಕರಣವನ್ನು ಸಿಬಿಐ ವಹಿಸುವ ಪ್ರಕ್ರಿಯೆಯಲ್ಲಿಕಂಗನಾ ರಣಾವತಳ ಪಾತ್ರ ಎಷ್ಟಿದೆಯೋ ಇಲ್ಲವೋ ಎಂಬುದು ಬೇರೆ ವಿಷಯ. ಆದರೆ, ಅದಕ್ಕೊಂದು ಕಿಡಿ ಹೊತ್ತಿಸುವ ಪಾತ್ರವನ್ನಂತೂ ಕಂಗನಾ ಪರಿಣಾಮಕಾರಿಯಾಗಿ ನಿಭಾಯಿಸಿದರು! ಸುಶಾಂತ ಆತ್ಮಹತ್ಯೆಯ ಪ್ರಕರಣದ ತನಿಖೆಯನ್ನು ಮುಂದುವರಿಸಿದಂತೆ ಬಾಲಿವುಡ್‌ನಲ್ಲಿ ಸಕ್ರಿಯವಾಗಿರುವ ಡ್ರಗ್‌ ಜಾಲ ಕೂಡ ಬೆಳಕಿಗೆ ಬಂತು. ಇಲ್ಲೂ, ಕಂಗನಾ ದೊಡ್ಡದಾಗಿ ಕೂಗು ಹಾಕಿದಳು; ಬಾಲಿವುಡ್‌ನಲ್ಲಿದೊಡ್ಡ ಮಾಫಿಯಾ ಇದೆ ಎಂದು ಟಿವಿ ಚಾನೆಲ್‌ನಲ್ಲಿಕೂತು ಅಪ್ಪಣೆ ಹೊರಡಿಸಿದಳು. ಬಾಲಿವುಡ್‌ನಲ್ಲಿಆಳವಾಗಿ ಬೇರು ಬಿಟ್ಟಿರುವ ಸ್ವಜನಪಕ್ಷಪಾತದ ಬಗ್ಗೆ ತನ್ನ ಮಾತಿನ ಬಾಣಗಳನ್ನು ಚಿತ್ರರಂಗದಲ್ಲಿತನಗೆ ಆಗದವರನ್ನು ಕೇಂದ್ರೀಕರಿಸಿ ಗುರಿಯಿಟ್ಟಳು. ಸುಶಾಂತ್‌ ಕುಟುಂಬದ ಪರ ವಕೀಲರೂ ಮಾಧ್ಯಮಗಳ ಮುಂದೆ ಬಂದು ಇದಕ್ಕೆ ಸಂಬಂಧಿಸಿದಂತೆ ಸ್ಪಷ್ಟೀಕರಣ ನೀಡಿದರು. ಕಂಗನಾ, ಸುಶಾಂತ್‌ ಹೆಸರಿನಲ್ಲಿತನಗೆ ಆಗದವರ ವಿರುದ್ಧ ಆರೋಪ ಮಾಡುತ್ತಿದ್ದಾಳೆ ಎಂದು ಹೇಳಿದರು.

ಯಾವುದೇ ಘಟನೆ ಅಥವಾ ಪ್ರಕರಣದ ವಿರುದ್ಧ ದಿಕ್ಕಿನಲ್ಲಿಯೋಚಿಸಿ, ಅದನ್ನು ಅಷ್ಟೇ ದೊಡ್ಡ ದನಿಯಲ್ಲಿಹೇಳಿ, ಒಪ್ಪಿಸುವ ಛಾತಿ ಕಂಗನಾಗೆ ಇದೆ. ಇದೇ ಕಾರಣಕ್ಕೆ ಅನೇಕ ವಿವಾದಗಳನ್ನು ಮೈಮೇಲೆ ಹಲವು ಬಾರಿ ಎಳೆದುಕೊಡಿದ್ದಾಳೆ. ಸಹ ನಟಿಯರಾದ ತಾಪ್ಸಿ ಪನ್ನು, ಸ್ವರಾ ಭಾಸ್ಕರ್‌ ವಿರುದ್ಧ ಟೀಕೆಗಳು, ಹೃತಿಕ್‌ ರೋಷನ್‌ ಮತ್ತು ತನ್ನ ನಡುವಿನ ಸಂಬಂಧವನ್ನು ಬೀದಿ ರಂಪ ಮಾಡಿದ್ದು, ಆಮೀರ್‌ ಖಾನ್‌ ಸೇರಿದಂತೆ ದೊಡ್ಡ ನಟರ ಜತೆ ನಟಿಸಲಾರೆ ಎಂಬ ಅಹಮ್ಮಿನ ಹೇಳಿಕೆಗಳು, ತಾನೂಬ್ಬ ಅಪ್ರತಿಮ ರಾಷ್ಟ್ರವಾದಿ ಎಂಬುದನ್ನು ತೋರಿಸಿಕೊಳ್ಳುವುದಕ್ಕಾಗಿ ನ್ಯಾಷನಲ್‌-ಆ್ಯಂಟಿ ನ್ಯಾಷನಲ್‌ ವಿಷಯದಲ್ಲಿಖ್ಯಾತ ನಿರ್ದೇಶಕ ಮಣಿರತ್ನಮ್‌ ಸೇರಿದಂತೆ ಹಲವರ ವಿರುದ್ಧ ಕಿಡಿ ಕಾರಿದ್ದು, ನಾಸಿರುದ್ದೀನ್‌ ಷಾ ವಿರುದ್ಧ ಕೆಂಡ ಕಾರಿದ್ದು, ಲೇಟೆಸ್ಟ್‌ ಆಗಿ, ಮುಂಬಯಿಯನ್ನು ತಾಲಿಬಾನ್‌ ಮತ್ತು ಪಾಕ್‌ ಆಕ್ರಮಿತ ಕಾಶ್ಮೀರ(ಪಿಒಕೆ)ಗೆ ಹೋಲಿಕೆ ಮಾಡಿದ್ದು... ಹೀಗೆ ಕಂಗನಾಳ ವಿವಾದ ಸರಮಾಲೆ ಸಾಗುತ್ತಲೇ ಇರುತ್ತದೆ.

ಅಭಿನಯದಲ್ಲಿಮೂರು ರಾಷ್ಟ್ರ ಪ್ರಶಸ್ತಿಗಳು, ನಾಲ್ಕು ಫಿಲ್ಮ್‌ಫೇರ್‌ ಅವಾರ್ಡುಗಳನ್ನು ಗೆದ್ದುಕೊಂಡಿರುವ 33 ವರ್ಷದ ಈ ಕಂಗನಾಗೆ ದೇಶದ ನಾಲ್ಕೇ ಅತ್ಯುನ್ನತ ನಾಗರಿಕ ಪುರಸ್ಕಾರವಾದ ಪದ್ಮಶ್ರೀ ಕೂಡ ಸಂದಿದೆ. ಕಂಗನಾ ಬಾಲ್ಯದಿಂದಲೂ ಬಂಡಾಯ ಮತ್ತು ಪಟ್ಟುಬಿಡದ ಸ್ವಭಾವವನ್ನು ಬೆಳೆಸಿಕೊಂಡಿದ್ದಾಳೆ. ''ನನ್ನ ತಂದೆ ತಮ್ಮನಿಗೆ ಪ್ಲಾಸ್ಟಿಕ್‌ ಗನ್‌ ಕೊಡಿಸಿದಾಗ ಮಾತ್ರ ನನಗೆ ಒಂದು ಗೊಂಬೆಯನ್ನು ಕೊಡಿಸುತ್ತಿದ್ದರು. ನಾನು ಈ ತಾರತಮ್ಯವನ್ನು ಪ್ರಶ್ನಿಸುತ್ತಿದ್ದೆ,'' ಎಂದು ಕಂಗನಾ ಒಮ್ಮೆ ಹೇಳಿಕೊಂಡಿದ್ದರು.

1987ರ ಮಾರ್ಚ್ 23ರಂದು ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯ ಸಣ್ಣ ಪಟ್ಟಣ ಭಂಬ್ಲಾ(ಈಗ ಸೂರಜ್‌ಪುರ) ರಜಪೂತ ಕುಟುಂಬದಲ್ಲಿಕಂಗನಾ ಜನಿಸಿದಳು. ತಾಯಿ ಆಶಾ ರಣಾವತ್‌ ಸ್ಕೂಲ್‌ ಟೀಚರ್‌ ಮತ್ತು ತಂದೆ ಅಮರದೀಪ್‌ ರಣಾವತ್‌ ಬಿಸಿನೆಸ್‌ಮನ್‌. ಹಿರಿಯ ಸಹೋದರಿ ರಂಗೋಲಿ ಚಾಂಡೆಲ್‌, 2014ರಿಂದ ಕಂಗನಾಗೆ ಮ್ಯಾನೇಜರ್‌ ಆಗಿ ಕೆಲಸ ಮಾಡುತ್ತಿದ್ದಾಳೆ. ಅಕ್ಷತ್‌ ಎಂಬ ಸಹೋದರನಿದ್ದಾನೆ. ಕಂಗನಾಳ ಮುತ್ತಜ್ಜ ಸರ್ಜು ಸಿಂಗ್‌ ರಣಾವತ್‌ ಶಾಸಕರಾಗಿದ್ದರು ಮತ್ತು ಅಜ್ಜ ಭಾರತೀಯ ಆಡಳಿತ ಸೇವೆಯಲ್ಲಿಅಧಿಕಾರಿಯಾಗಿದ್ದರು. ಭಂಬ್ಲಾದಲ್ಲಿರುವ ಬಂಗ್ಲೆಯಲ್ಲಿವಾಸವಿದ್ದ ಅವಿಭಕ್ತ ಕುಟುಂಬದಲ್ಲಿಕಂಗನಾ ಬಾಲ್ಯವನ್ನು ಕಳೆದರು.

ಚಂಡೀಗಢದ ಡಿಎವಿ ಸ್ಕೂಲ್‌ನಲ್ಲಿಕಂಗನಾ ದಾಖಲಾದಳು. ವಿಜ್ಞಾನ ಆಕೆಯ ಅಧ್ಯಯನದ ಮುಖ್ಯ ವಿಷಯವಾಗಿತ್ತು. ತಂದೆ-ತಾಯಿಗೆ ಕಂಗನಾ ವೈದ್ಯಳಾಗಬೇಕೆಂಬ ಆಸೆ. ಕಂಗನಾ ಕೂಡ ಆ ನಿಟ್ಟಿನಲ್ಲಿಪ್ರಯತ್ನಿಸಿದ್ದಳು. ಆದರೆ, 12ನೇ ಕ್ಲಾಸ್‌ನ ಯುನಿಟ್‌ ಟೆಸ್ಟ್‌ನಲ್ಲಿಕಂಗನಾ ಕೆಮೆಸ್ಟ್ರಿ ಪರೀಕ್ಷೆಯಲ್ಲಿಫೇಲ್‌ ಆದಳು. ಈ ಫಲಿತಾಂಶವು ಕಂಗನಾಗೆ ತನ್ನ ಆದ್ಯತೆ ಕುರಿತು ಮತ್ತೊಮ್ಮೆ ಯೋಚಿಸುವಂತೆ ಮಾಡಿತು. ಹಾಗಾಗಿ, ಆಲ್‌ ಇಂಡಿಯಾ ಪ್ರಿ ಮೆಡಿಕಲ್‌ ಟೆಸ್ಟ್‌ಗೆ ಸಿದ್ಧತೆ ನಡೆಸಿದ್ದರೂ ಪರೀಕ್ಷೆಗೆ ಹಾಜರಾಗಲಿಲ್ಲ. ಸ್ವಾತಂತ್ರ್ಯ ಹಾಗೂ ಅವಕಾಶವನ್ನು ಪಡೆದುಕೊಳ್ಳುವುದಕ್ಕಾಗಿಯೇ ಹಿಮಾಚಲ ಪ್ರದೇಶದಿಂದ ದಿಲ್ಲಿಗೆ ಬಂದಳು. ಆಗ ಕಂಗನಾಗೆ 16 ವರ್ಷ. ವೈದ್ಯಕೀಯ ಶಿಕ್ಷಣ ಪಡೆಯಲು ನಿರಾಕರಿಸಿದ ಪರಿಣಾಮ ತಂದೆ-ತಾಯಿಯೊಂದಿಗೆ ಜಗಳವಾಗಿತ್ತು ಮತ್ತು ಕಂಗನಾಳ ಮುಂದಿನ ಯಾವುದೇ ಕೆಲಸಕ್ಕೆ ತಂದೆಯಿಂದ ಸಹಾಯ ಸಿಗಲಿಲ್ಲ. ದಿಲ್ಲಿಗೆ ಬಂದ ಕಂಗನಾಗೆ, ತನ್ನ ಕರಿಯರ್‌ ಆಯ್ಕೆ ಬಗ್ಗೆ ಯಾವುದೇ ಸ್ಪಷ್ಟತೆ ಇರಲಿಲ್ಲ. ಎಲೈಟ್‌ ಮಾಡೆಲಿಂಗ್‌ ಏಜೆನ್ಸಿ ಕಂಗನಾಳ ಸೌಂದರ್ಯಕ್ಕೆ ಮಾರುಹೋಗಿ ಮಾಡೆಲಿಂಗ್‌ಗೆ ಇಳಿಯುವಂತೆ ಹೇಳಿತು. ಕೆಲವು ಮಾಡೆಲಿಂಗ್‌ ಪ್ರಾಜೆಕ್ಟ್ನಲ್ಲಿಪಾಲ್ಗೊಂಡರೂ ಸೃಜನಶೀಲತೆಗೆ ಅವಕಾಶವಿಲ್ಲಎಂಬುದು ಗೊತ್ತಾಗುತ್ತಿದ್ದಂತೆ ಮಾಡೆಲಿಂಗ್‌ ಕೈ ಬಿಟ್ಟಳು. ಅಭಿನಯದತ್ತ ಗಮನ ಕೇಂದ್ರೀಕರಿಸಿದ ಕಂಗನಾ ಅಸ್ಮಿತಾ ಥಿಯೇಟರ್‌ ಗ್ರೂಪ್‌ ಸೇರಿದರು. ರಂಗ ನಿರ್ದೇಶಕ ಅರವಿಂದ ಗೌರ್‌, ಕಂಗನಾಗೆ ನಟನೆಯ ಪಟ್ಟುಗಳನ್ನು ಹೇಳಿಕೊಟ್ಟರು. ಕನ್ನಡಿಗ ಗಿರೀಶ್‌ ಕಾರ್ನಾಡ ಅವರ 'ತಲೆದಂಡ' ಸೇರಿದಂತೆ ಹಲವು ನಾಟಕಗಳಲ್ಲಿಅಭಿನಯಿಸಿ ಸಾಮರ್ಥ್ಯವನ್ನು ಸಾಬೀತುಪಡಿಸಿದಳು. ಒಮ್ಮೆ ನಾಟಕವೊಂದರ ಪುರುಷ ಪಾತ್ರಧಾರಿಯೊಬ್ಬರು ನಾಪತ್ತೆಯಾದರು. ಆಗ ಕಂಗನಾ ಆ ಪುರುಷನ ಮತ್ತು ತನ್ನ ಮೂಲ ಪಾತ್ರವನ್ನು ನಿರ್ವಹಿಸಿ ಬಹುಮೆಚ್ಚುಗೆಯನ್ನು ಪಡೆದುಕೊಂಡಳು. ಈ ಘಟನೆಯಿಂದ ಪ್ರೇರಣೆ ಪಡೆದು ತನ್ನ ಕರ್ಮಭೂಮಿಯನ್ನು ದಿಲ್ಲಿಯಿಂದ ಮುಂಬಯಿಗೆ ಸ್ಥಳಾಂತರಿಸಿ, ಅಲ್ಲಿಆಶಾ ಚಂದ್ರ ಅವರ ನಾಟಕ ಶಾಲೆಯಲ್ಲಿಮತ್ತೆ ನಾಲ್ಕು ತಿಂಗಳ ತರಬೇತಿ ಪಡೆದುಕೊಂಡಳು.

ಬಾಲಿವುಡ್‌ನ ಸಂಘರ್ಷದ ದಿನಗಳಲ್ಲಿಸಾಕಷ್ಟು ಕಷ್ಟಗಳನ್ನು ಕಂಡಿದ್ದಾಳೆ ಕಂಗನಾ. ಈ ಅವಧಿಯಲ್ಲಿತಂದೆಯ ಆರ್ಥಿಕ ನೆರವನ್ನು ತಿರಸ್ಕರಿಸಿದ ಪರಿಣಾಮ ಕೆಲವೊಮ್ಮೆ ಕೇವಲ ಬ್ರೆಡ್‌ ಮತ್ತು ಉಪ್ಪಿನಕಾಯಿ ತಿಂದು ಹೊಟ್ಟೆ ತುಂಬಿಸಿಕೊಳ್ಳಬೇಕಾದ ಪರಿಸ್ಥಿತಿ ಎದುರಾಗಿತ್ತಂತೆ. ಫಿಲ್ಮ್‌ ಕರಿಯರ್‌ ಆಯ್ಕೆಗೆ ಸಂಬಂಧಿಕರಿಂದಲೂ ವಿರೋಧವಿತ್ತು. 2007ರಲ್ಲಿ'ಲೈಫ್‌ ಇನ್‌ ಮೆಟ್ರೊ' ಚಿತ್ರ ಬಿಡುಗಡೆ ನಂತರ ಕುಟುಂಬ ಹಾಗೂ ಸಂಬಂಧಿಕರು ಕಂಗನಾ ಜೊತೆಗೆ ಸಂವಹನ ಬೆಳೆಸಿದರು.

ಮಹೇಶ್‌ ಭಟ್‌(ಕಂಗನಾ ಇವರ ವಿರುದ್ಧವೇ ಸ್ವಜನಪಕ್ಷಪಾತದ ಆರೋಪ ಮಾಡುತ್ತಿದ್ದಾರೆ) ನಿರ್ಮಾಣ ಮತ್ತು ಅನುರಾಗ್‌ ಬಸು ನಿರ್ದೇಶನದ 'ಗ್ಯಾಂಗಸ್ಟರ್‌' ಚಿತ್ರದ ಮೂಲಕ ಕಂಗನಾ ಬಾಲಿವುಡ್‌ಗೆ ಎಂಟ್ರಿ ಕೊಟ್ಟರು. 2004ರಿಂದ ಆರಂಭವಾದ ಸಿನಿ ಬದುಕಿನಲ್ಲಿಹಲವು ಏಳು ಬೀಳುಗಳನ್ನು ಕಂಡಿದ್ದಾರೆ. ವೋ ಲಮ್ಹೆ(2006), ಲೈಫ್‌ ಇನ್‌ ಮೆಟ್ರೊ(2007), ಫ್ಯಾಷನ್‌(2008) ಚಿತ್ರಗಳ ಪೈಕಿ ಕೊನೆಯ ಎರಡು ಚಿತ್ರಗಳ ಅಭಿನಯಕ್ಕಾಗಿ ರಾಷ್ಟ್ರೀಯ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡರು. 2009ರಲ್ಲಿತೆರೆಕಂಡ ರಾಝ್‌: ದಿ ಮಿಸ್ಟರಿ ಕಂಟಿನ್ಯೂಸ್‌, ತನು ವೆಡ್ಸ್‌ ಮನು(2011), ಕ್ರಿಶ್‌ 3(2023) ಮತ್ತು 2014ರಲ್ಲಿಬಿಡುಗಡೆಯಾದ 'ಕ್ವೀನ್‌' ಚಿತ್ರ ಕಂಗನಾಳಿಗೆ ಬಾಲಿವುಡ್‌ನ ಕ್ವೀನ್‌ ಕೀರ್ತಿಗೆ ಭಾಜನವಾಗುವಂತೆ ಮಾಡಿತು. ಇದರ ಅಭಿನಯಕ್ಕಾಗಿ ಅತ್ಯುತ್ತಮ ನಟಿ ಪ್ರಶಸ್ತಿ ಬಂತು. 'ಮಣಿಕರ್ಣಿಕಾ' ಚಿತ್ರದಲ್ಲಿಅಭಿನಯದೊಂದಿಗೆ ನಿರ್ದೇಶನ ಕೂಡ ಮಾಡಿದರು.

ಸಿನಿ ಜಗತ್ತಿನಲ್ಲಿತನ್ನದೇ ಛಾಪು ಮೂಡಿಸಿದ ಬಳಿಕ ಸಾರ್ವಜನಿಕವಾಗಿ ಹಲವು ವಿಷಯಗಳ ಬಗ್ಗೆ ತನ್ನ ಅಭಿಪ್ರಾಯ ವ್ಯಕ್ತಪಡಿಸಲು ಹಿಂಜರಿಯಲಿಲ್ಲ. ಆಕೆಯನ್ನು ಇಷ್ಟಪಡೋರಿಗೆ ಕಂಗನಾ ಕ್ರುಸೆಡರ್‌ ರೀತಿಯಲ್ಲೂ, ದ್ವೇಷಿಸುವವರಿಗೆ ಬಲಪಂಥೀಯ ಪ್ರಪಗಾಂಡಿಸ್ಟ್‌ ರೀತಿಯಲ್ಲೂ, ಉಪೇಕ್ಷಿಸುವವರಿಗೆ ಬಾಲಿವುಡ್‌ನ ಮ್ಯಾಡ್‌ ಕ್ವೀನ್‌ ರೀತಿಯಲ್ಲೂಕಾಣಿಸುತ್ತಾಳೆ. ಆಕೆಯನ್ನು ನೀವು ಇಷ್ಟಪಡಬಹುದು; ಇಷ್ಟಪಡದಿರಬಹುದು. ಆದರೆ, ಖಂಡಿತವಾಗಿಯೂ ಕಡೆಗಣಿಸಲಾರಿರಿ.

ಸೋಮವಾರ, ಆಗಸ್ಟ್ 31, 2020

Abe Shinzo: ಭಾರತದ ಗೆಳೆಯ ಶಿಂಜೊ ಎಂದೆಂದೂ ಜತೆಯಾಗಿರಿ

ಜಪಾನ್‌ನ ಜನಪ್ರಿಯ ಪ್ರಧಾನಿ ಅಬೆ ಶಿಂಜೊ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಭಾರತ ಮತ್ತು ಜಪಾನ್‌ ನಡುವಿನ ಬಾಂಧವ್ಯಕ್ಕೆ ಹೊಸ ರೂಪ ನೀಡಿ, ಉಭಯ ರಾಷ್ಟ್ರಗಳ ಜನರ ಪ್ರೀತಿಗೆ ಶಿಂಜೊ ಪಾತ್ರರಾಗಿದ್ದಾರೆ.


- ಮಲ್ಲಿಕಾರ್ಜುನ ತಿಪ್ಪಾರ


ಬಹುಶಃ ಭಾರತೀಯರಿಗೆ 'ಅಬೆ ಶಿಂಜೊ' ಹೆಸರು ಗೊತ್ತಿರುವಷ್ಟು ಜಪಾನ್‌ನ ಇನ್ನಾವುದೇ ಪ್ರಧಾನಿ ಅಥವಾ ನಾಯಕರ ಹೆಸರು ಪರಿಚಿತವಿಲ್ಲ. ಭಾರತದೆಡೆಗೆ ಅವರು ಹೊಂದಿರುವ ಕಾಳಜಿ ಮತ್ತು ಉಭಯ ರಾಷ್ಟ್ರಗಳ ನಡುವಿನ ಬಾಂಧವ್ಯ ವೃದ್ಧಿಗೆ ಅವರು ತುಡಿಯುತ್ತಿದ್ದ ರೀತಿಯೇ ಭಾರತೀಯರ ಮೆಚ್ಚುಗೆಗೆ ಕಾರಣವಾಗಿತ್ತು. ವಿಶೇಷವಾಗಿ ಪ್ರಧಾನಿ ಮೋದಿ ಮತ್ತು ಪ್ರಧಾನಿ ಅಬೆ ನಡುವಿನ ಗೆಳೆತನ ಅಂತಾರಾಷ್ಟ್ರೀಯವಾಗಿ ಖ್ಯಾತಿಯಾಗಿತ್ತು.

ಜಪಾನ್‌ನ 'ಆಕ್ರಮಣಕಾರಿ'(Hawkish PM) ಹಾಗೂ ಸುದೀರ್ಘ ಕಾಲದ ಪ್ರಧಾನಿ ಎಂಬ ಹೆಗ್ಗಳಿಕೆಯೊಂದಿಗೆ ಅಬೆ ತಮ್ಮ ಹುದ್ದೆಯನ್ನು ತೊರೆಯುತ್ತಿದ್ದಾರೆ. ಕರುಳು ಉರಿಯೂತ ಕಾಯಿಲೆಯಿಂದ ಜರ್ಜರಿತವಾಗಿರುವ ಅಬೆ, ತಮ್ಮ ಕೆಲಸಕ್ಕೆ ನ್ಯಾಯ ಸಲ್ಲಿಸಲು ಸಾಧ್ಯವಾಗುತ್ತಿಲ್ಲಎಂದು ಗೊತ್ತಾಗುತ್ತಿದ್ದಂತೆ ರಾಜಿನಾಮೆ ನೀಡುವ ನಿರ್ಧಾರ ಪ್ರಕಟಿಸಿದರು. ಈ ಹಿಂದೆಯೂ ಇದೇ ಕಾಯಿಲೆ ಕಾರಣಕ್ಕಾಗಿಯೇ ಅವರು ಪ್ರಧಾನಿ ಪಟ್ಟ ತೊರೆದು, ಮತ್ತೆ ಸಕ್ರಿಯ ರಾಜಕಾರಣಕ್ಕೆ ಮರಳಿದ್ದರು. ಆದರೆ, ಈ ಬಾರಿ ಅವರು ರಾಜಕಾರಣದಿಂದ ವಿಮುಖರಾಗುವ ಸ್ಪಷ್ಟ ಸೂಚನೆಗಳನ್ನು ನೀಡಿದ್ದಾರೆ. ಹಾಗಾಗಿ, ಜಪಾನ್‌ ಪ್ರಧಾನಿ ಹುದ್ದೆಗೆ ಎಲ್‌ಡಿಪಿ(ಲಿಬರಲ್‌ ಡೆಮಾಕ್ರಾಟಿಕ್‌ ಪಾರ್ಟಿ)ಯಲ್ಲಿಹುಡುಕಾಟ ಶುರುವಾಗಿದೆ.

''ಅಧಿಕಾರಾವಧಿ ಪೂರ್ಣಗೊಳ್ಳಲು ಒಂದು ವರ್ಷ ಬಾಕಿ ಇರುವಾಗಲೇ ಮತ್ತು ಕೊರೊನಾ ಸಮಸ್ಯೆ ಮಧ್ಯೆಯೇ, ವಿವಿಧ ಕಾರ್ಯನೀತಿಗಳು ಜಾರಿ ಹಂತದಲ್ಲಿರುವಾಗಲೇ ಹುದ್ದೆ ತೊರೆಯುತ್ತಿರುವುದಕ್ಕೆ ನಾನು ಜಪಾನ್‌ ಜನರ ಕ್ಷಮೆ ಕೋರುತ್ತೇನೆ,'' ಎಂದು ಅಬೆ ಶಿಂಜೊ ತಮ್ಮ ನಿರ್ಧಾರ ಪ್ರಕಟಿಸುವಾಗ ಹೇಳಿದ್ದಾರೆ. ಕೊರೊನಾ ಸಾಂಕ್ರಾಮಿಕಕ್ಕೆ ಎಲ್ಲದೇಶಗಳು ತಲ್ಲಣಗೊಂಡಿವೆ. ಇದಕ್ಕೆ ಜಪಾನ್‌ ಕೂಡ ಹೊರತಾಗಿಲ್ಲ. ಇಂಥ ಸಂದರ್ಭದಲ್ಲಿಯಾವುದೇ ದೇಶದ ನಾಯಕತ್ವ ಬದಲಾವಣೆ ಜಾಣತನದ ನಿರ್ಧಾರವಲ್ಲ.


ಅಬೆ ಶಿಂಜೊ 'ದಿ ಪ್ರಿನ್ಸ್‌' ಎಂಬ ಖ್ಯಾತಿ ಪಡೆದಿದ್ದಾರೆ. ಜಪಾನಿಗರು ಅವರನ್ನು ಹಾಗೆ ಕರೆಯುತ್ತಾರೆ; ಅವರು ಇದ್ದದ್ದು ಹಾಗೆಯೇ. ಶಿಂಜೊ ಅವರಿಗೆ ರಾಜಕೀಯ ಹೊಸದೇನಲ್ಲ. ಅವರದ್ದು ರಾಜಕೀಯ ಕುಟುಂಬ. ಜಪಾನ್‌ನ ಟೊಕಿಯೊದಲ್ಲಿ1954ರ ಸೆಪ್ಟೆಂಬರ್‌ 12ರಂದು ಅಬೆ ಶಿಂಜೊ ದೇಶದ ಪ್ರಮುಖ ರಾಜಕೀಯ ಮನೆತನದಲ್ಲಿಜನಿಸಿದರು. ಶಿಂಜೊ ಅಜ್ಜ ನೊಬುಸ್ಕೆ ಕಿಶಿ(ತಾಯಿಯ ತಂದೆ) ಅವರು 1957ರಿಂದ 1960ರವರೆಗೂ ಜಪಾನ್‌ನ ಪ್ರಧಾನಿಯಾಗಿದ್ದರು. ಮುತ್ತಜ್ಜ ವಿಸ್ಕೌಂಟ್‌ ಯೋಶಿಮಾಸಾ ಒಶಿಮಾ ಅವರು ಇಂಪಿರೀಯಲ್‌ ಜಪಾನ್‌ ಸೇನೆಯಲ್ಲಿಜನರಲ್‌ ಆಗಿದ್ದರು. ಶಿಂಜೊ ಅವರ ತಂದೆ ಶಿಂಚೊರೊ ಅವರು ಪೆಸಿಫಿಕ್‌ ಯುದ್ಧ ವೇಳೆ ಪೈಲಟ್‌ ಆಗಿದ್ದರು. ಆ ಬಳಿಕ ಜಪಾನ್‌ನ ವಿದೇಶಾಂಗ ಸಚಿವರೂ ಆಗಿದ್ದರು. ಅಂದರೆ, ಅಬೆ ಶಿಂಜೊ ಅವರಿಗೆ ರಾಜಕೀಯ ರಕ್ತಗತವಾಗಿ ಬಂದಿರುವಂಥದ್ದು ಮತ್ತು ಸಹಜವಾಗಿಯೇ ಅವರು ಜಪಾನ್‌ನ ಉನ್ನತ ಸ್ಥಾನಕ್ಕೇರಲು ಇದು ಪ್ರಭಾವ ಬೀರಿದೆ. ಜನರೂ ಶಿಂಜೊ ಕುಟುಂಬದ ಮೇಲೆ ಅಪರಿಮಿತ ವಿಶ್ವಾಸವನ್ನು ಹೊಂದಿದ್ದಾರೆ. ಈಗಲೂ, ಜಪಾನ್‌ನ ಅತ್ಯಂತ ಜನಪ್ರಿಯ ನಾಯಕರೆಂದರೆ ಅಬೆ ಶಿಂಜೊ ಮಾತ್ರ.

ಅಬೆ ಅವರು ಸೈಕಾಯ್‌ ಪ್ರಾಥಮಿಕ ಶಾಲೆ, ಜ್ಯೂನಿಯರ್‌ ಮತ್ತು ಮಾಧ್ಯಮಿಕ ಶಾಲೆಯಲ್ಲಿಶಿಕ್ಷಣ ಪಡೆದರು. 1977ರಲ್ಲಿಸೈಕಾಯ್‌ ವಿಶ್ವವಿದ್ಯಾಲಯದಲ್ಲಿಸಾರ್ವಜನಿಕ ಆಡಳಿತ ಅಧ್ಯಯನ ಮಾಡಿದರು. ಜೊತೆಗೆ ಪಾಲಿಟಿಕಲ್‌ ಸೈನ್ಸ್‌ ವಿಷಯದಲ್ಲಿಪದವಿ ಸಂಪಾದಿಸಿದರು. ಬಳಿಕ ಅಮೆರಿಕಕ್ಕೆ ತೆರಳಿ ಸದರ್ನ್‌ ಕ್ಯಾಲಿಫೋರ್ನಿಯಾದ ಸ್ಕೂಲ್‌ ಆಫ್‌ ಪಬ್ಲಿಕ್‌ ಪಾಲಿಸಿಯಲ್ಲಿಸಾರ್ವಜನಿಕ ನೀತಿಗಳಿಗೆ ಸಂಬಂಧಿಸಿದಂತೆ ಅಧ್ಯಯನ ಕೈಗೊಂಡರು. 1979ರಲ್ಲಿಕೋಬೆ ಸ್ಟೀಲ್‌ನಲ್ಲಿಕೆಲಸ ಆರಂಭಿಸಿದರು. ಶೀಘ್ರವೇ ತಮ್ಮ ಆದ್ಯತೆ ಮತ್ತು ಆಸಕ್ತಿಗಳನ್ನು ಗುರುತಿಸಿಕೊಂಡ ಅಬೆ ಕೆಲಸ ತೊರೆದು 1982ರಲ್ಲಿರಾಜಕಾರಣಕ್ಕೆ ಧುಮುಕಿದರು. ಮೊದಲಿಗೆ ಅವರು, ವಿದೇಶಾಂಗ ವ್ಯವಹಾರಗಳ ಸಚಿವಾಲಯದಲ್ಲಿ ಕಾರ್ಯಕಾರಿ ಸಹಾಯಕರಾಗಿ ಸೇರಿಕೊಂಡರು. ಆ ನಂತರ, ಜಪಾನ್‌ ಪ್ರಮುಖ ರಾಜಕೀಯ ಪಕ್ಷ ಎಲ್‌ಡಿಪಿ ಜನರಲ್‌ ಕೌನ್ಸಿಲ್‌ನ ಅಧ್ಯಕ್ಷರ ಖಾಸಗಿ ಕಾರ್ಯದರ್ಶಿ ಮತ್ತು ಎಲ್‌ಡಿಪಿ ಸೆಕ್ರೆಟರಿ-ಜನರಲ್‌ಗೆ ಖಾಸಗಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದರು.

1991ರಲ್ಲಿತಮ್ಮ ತಂದೆಯ ಮರಣದ ನಂತರ 1993ರಲ್ಲಿಶಿಂಜೊ ಅವರು ಯಮಗುಶಿ ಪ್ರಾಂತ್ಯದ ಮೊದಲ ಜಿಲ್ಲೆಗೆ ಆಯ್ಕೆಯಾದರು. ಎಸ್‌ಎನ್‌ಟಿವಿ ಬಹು ಸದಸ್ಯರ ಜಿಲ್ಲೆಯಲ್ಲಿಚುನಾಯಿತರಾದ ನಾಲ್ಕು ಪ್ರತಿನಿಧಿಗಳಲ್ಲಿಹೆಚ್ಚಿನ ಮತಗಳನ್ನು ಪಡೆದುಕೊಂಡಿದ್ದರು. 1999ರಲ್ಲಿಅವರು ಸಾಮಾಜಿಕ ವ್ಯವಹಾರಗಳ ವಿಭಾಗದ ನಿರ್ದೇಶಕರಾದರು. 2000-2003ರ ವರೆಗೆ ಯೋಶಿರೆ ಮೋರಿ ಮತ್ತು ಜುನಿಚಿರೆ ಕೊಯಿಜುಮಿ ಸಂಪುಟದಲ್ಲಿಡೆಪ್ಯುಟಿ ಚೀಫ್‌ ಕ್ಯಾಬಿನೆಟ್‌ ಕಾರ್ಯದರ್ಶಿಯಾಗಿದ್ದರು. ನಂತರ ಅವರನ್ನು ಲಿಬರಲ್‌ ಡೆಮಾಕ್ರಟಿಕ್‌ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ನೇಮಿಸಲಾಯಿತು. ಆ ಬಳಿಕ ಅವರು ತಿರುಗಿ ನೋಡಲಿಲ್ಲ.

2006ರ ಏಪ್ರಿಲ್‌ 23ರಂದು ಅಬೆ ಅವರನ್ನು ಆಡಳಿತ ಪಕ್ಷ ಎಲ್‌ಡಿಪಿಯ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು. ಅದೇ ವರ್ಷ ಜುಲೈ 14ರಂದು ಜಪಾನ್‌ನ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದರು. ಆಗ ಅವರಿಗೆ 52 ವರ್ಷ. 1941ರ ಬಳಿಕ ಜಪಾನ್‌ನ ಅತ್ಯಂತ ಕಿರಿಯ ಪ್ರಧಾನಿ ಎಂಬ ಗರಿಮೆಗೆ ಪಾತ್ರರಾದರು. ಈಗ ಬಾಧಿಸುತ್ತಿರುವ ಕರುಳು ಊರಿಯೂತ ಕಾಯಿಲೆ 2007ರಲ್ಲೂಅಬೆ ಅವರನ್ನು ತೀವ್ರವಾಗಿ ಬಾಧಿಸಿತು. ಅದೇ ಕಾರಣಕ್ಕಾಗಿ ಅವರು ಆಗಲೂ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದ್ದರು. ಆದರೆ, ಶೀಘ್ರವೇ ಅದರಿಂದ ಗುಣಮುಖರಾಗಿ ಮತ್ತೆ ಸಕ್ರಿಯ ರಾಜಕಾರಣಕ್ಕೆ ಮರು ಎಂಟ್ರಿ ಕೊಟ್ಟಿದ್ದರು. 2012ರಲ್ಲಿಮತ್ತೆ ಅಬೆ ಜಪಾನ್‌ನ ಪ್ರಧಾನಿಯಾದರು. 2014 ಮತ್ತು 2017ರಲ್ಲಿಮರು ಆಯ್ಕೆಯಾದರು. ಇಷ್ಟೂ ವರ್ಷಗಳಲ್ಲಿಜಪಾನ್‌ನಲ್ಲಿಅಬೆ ಅತ್ಯಂತ ಜನಪ್ರಿಯ ಪ್ರಧಾನಿಯಾಗಿಯೇ ಗುರುತಿಸಿಕೊಂಡರು. ತಮ್ಮದೇ ವಿದೇಶಾಂಗ ನೀತಿ ಮತ್ತು ಆರ್ಥಿಕ ನೀತಿ(ಅಬೆನಾಮಿಕ್ಸ್‌)ಗಳಿಂದಾಗಿ ಮನೆ ಮಾತಾದರು.

ಅಬೆ ಶಿಂಜೊ ಅವರ ಬಗ್ಗೆ ಮಾತನಾಡುವಾಗ ಭಾರತ ಮತ್ತು ಜಪಾನ್‌ ನಡುವಿನ ಸಂಬಂಧ ವೃದ್ಧಿಯ ಬಗ್ಗೆ ಹೇಳಲೇಬೇಕಾಗುತ್ತದೆ. ಯಾಕೆಂದರೆ, ಉಭಯ ರಾಷ್ಟ್ರಗಳ ನಡುವಿನ ಬಾಂಧವ್ಯಕ್ಕೆ ಈ ಅವಧಿಯಲ್ಲಿಹೊಸ ಭಾಷ್ಯವನ್ನೇ ಬರೆಯಲಾಗಿದೆ. ಜಪಾನ್‌ ಭಾರತದ ಸಹಜ ಮಿತ್ರ ರಾಷ್ಟ್ರವಾಗಿದ್ದರೂ, ಶಿಂಜೊ ಆಡಳಿತದಲ್ಲಿಈ ಮಿತ್ರತ್ವವನ್ನು ಮತ್ತೊಂದು ಹಂತಕ್ಕೆ ಹೋಯಿತು.

ಪ್ರಧಾನಿಯಾಗಿದ್ದ 2006-07ರ ಅವಧಿಯಲ್ಲಿಅಬೆ ಭಾರತಕ್ಕೆ ಭೇಟಿ ನೀಡಿ, ಸಂಸತ್ತನ್ನು ಉದ್ದೇಶಿಸಿ ಮಾತನಾಡಿದ್ದರು. ಎರಡನೇ ಬಾರಿ ಪ್ರಧಾನಿಯಾಗಿ ಚುಕ್ಕಾಣಿ ಹಿಡಿದ ಬಳಿಕ ಭಾರತಕ್ಕೆ 2014 ಜನವರಿ, 2015 ಡಿಸೆಂಬರ್‌ ಮತ್ತು 2017ರ ಸೆಪ್ಟೆಂಬರ್‌ನಲ್ಲಿಭೇಟಿ ನೀಡಿದರು. 2014ರ ಗಣರಾಜ್ಯೋತ್ಸವದಲ್ಲಿಮುಖ್ಯ ಅತಿಥಿಯಾಗಿ ಪಾಲ್ಗೊಂಡ ಜಪಾನ್‌ನ ಮೊದಲ ಪ್ರಧಾನಿ ಎನಿಸಿಕೊಂಡರು. ಪ್ರಧಾನಿಯಾಗಿ ಅವರು, ಯುಪಿಎ ಆಡಳಿತ ಹಾಗೂ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಆಡಳಿತಾವಧಿಯಲ್ಲಿಭಾರತಕ್ಕೆ ಬಹು ನೆರವಾಗಿದ್ದಾರೆ. ಮೋದಿ ಕಾಲದಲ್ಲಿಈ ಪ್ರಕ್ರಿಯೆ ಇನ್ನಷ್ಟು ಚುರುಕು ಪಡೆದುಕೊಂಡಿತು ಎಂದು ಹೇಳಬಹುದು. ಪ್ರಧಾನಿ ನರೇಂದ್ರ ಮೋದಿ ಅವರು, ನೆರೆ ಹೊರೆ ರಾಷ್ಟ್ರಗಳ ಬಳಿಕ ಮೊದಲಿಗೆ ಭೇಟಿ ನೀಡಿದ್ದು ಜಪಾನ್‌ಗೆ. ಅಂದರೆ, ಭಾರತ ಮತ್ತು ಜಪಾನ್‌ ನಡುವಿನ ಬಾಂಧವ್ಯ ಎಷ್ಟರ ಮಟ್ಟಿಗೆ ಮಹತ್ವದ್ದು ಎಂಬುದನ್ನು ಅದು ಸಾಂಕೇತಿಸುತ್ತದೆ. ಈ ವೇಳೆ ವಿಶೇಷ ವ್ಯೂಹಾತ್ಮಕ ಮತ್ತು ಜಾಗತಿಕ ಸಹಭಾಗಿತ್ವಕ್ಕೆ ಮೋದಿ ಮತ್ತು ಅಬೆ ಒಪ್ಪಿಗೆ ಸೂಚಿಸಿದ್ದರು. ನಾಗರಿಕ ಅಣು ಇಂಧನ, ಕರಾವಳಿ ಭದ್ರತೆ, ಬುಲೆಟ್‌ ಟ್ರೇನ್‌ ಪ್ರಾಜೆಕ್ಟ್ , ಇಂಡೋ-ಪೆಸಿಫಿಕ್‌ ಸ್ಟ್ರ್ಯಾಟಜಿ ಸೇರಿದಂತೆ ಅನೇಕ ಯೋಜನೆಗಳು ಸಾಕಾರಗೊಂಡವು. ಆ ಮೂಲಕ ಉಭಯ ರಾಷ್ಟ್ರಗಳ ನಡುವಿನ ಸಹಭಾಗಿತ್ವದ ಹೊಸ ಮಜಲಿನತ್ತ ಸಾಗಿದವು. ಇದಕ್ಕೆ ಅಬೆ ಶಿಂಜೊ ಅವರ ಕಾಣಿಕೆ ಅಪಾರ ಎಂಬುದನ್ನು ಮತ್ತೆ ಪ್ರತ್ಯೇಕವಾಗಿ ಹೇಳಬೇಕಿಲ್ಲ.

ಅಬೆ ರಾಜೀನಾಮೆ ನೀಡಿದ್ದರೂ ಮುಂದಿನ ಪ್ರಧಾನಿ ಆಯ್ಕೆಯ ತನಕ, ಅವರ ಬಳಿಯೇ ಆಡಳಿತ ಇರಲಿದೆ. ಜಪಾನ್‌ ಜನಪದೀಯ ಗೀತೆಗಳನ್ನು ಹಾಡುವ ಅಬೆ ಅವರಿಗೆ, ಐಸ್‌ಕ್ರೀಮ್‌ ಮತ್ತು ಕಲ್ಲಂಗಡಿ ಹಣ್ಣು ತುಂಬ ಇಷ್ಟ. ಸೆಪ್ಟೆಂಬರ್‌ 21ಕ್ಕೆ 65 ವರ್ಷ ಪೂರೈಸಲಿರುವ ಅಬೆ ಆದಷ್ಟು ಬೇಗ ಅನಾರೋಗ್ಯದಿಂದ ಗುಣಮುಖರಾಗಿ, ಮತ್ತೆ ಜಪಾನ್‌ನ ರಾಜಕಾರಣದಲ್ಲಿ ಮತ್ತೆ ಮಿಂಚಲಿ.

ಸೋಮವಾರ, ಆಗಸ್ಟ್ 3, 2020

Sarah Catherine Gilbert: ಸಾರಾ ‘ಲಸಿಕೆ’ ಕೊಡ್ತಾರಾ?

ಲಸಿಕೆಗಳ ತಯಾರಿಕೆಯಲ್ಲಿನಿಷ್ಣಾತರಾಗಿರುವ ಆಕ್ಸ್ಫರ್ಡ್ವಿಶ್ವವಿದ್ಯಾಲಯದ ಡಾ. ಸಾರಾ ಗಿಲ್ಬರ್ಟ್ಅವರು, ಕೊರೊನಾ ಲಸಿಕೆ ಪ್ರಯೋಗಕ್ಕೆ ತಮ್ಮ ತ್ರಿವಳಿ ಮಕ್ಕಳನ್ನೇ ಒಡ್ಡಿದ್ದಾರೆ.

 

- ಮಲ್ಲಿಕಾರ್ಜುನ ತಿಪ್ಪಾರ

ಇಡೀ ವಿಶ್ವವನ್ನೇ ತಲ್ಲಣಗೊಳಿಸಿರುವ ಕೋವಿಡ್‌-19 ವೈರಾಣು ಸೋಂಕಿತರ ಸಂಖ್ಯೆ 18 ಲಕ್ಷ  ದಾಟಿದ್ದು, ಈವರೆಗೆ ಹತ್ತಿರ 6.80 ಲಕ್ಷ  ಜನರು ಮೃತಪಟ್ಟಿದ್ದಾರೆ ಮತ್ತು ಈ ಸಂಖ್ಯೆ ಇನ್ನೂ ಏರುತ್ತಲೇ ಇದೆ. ಹಾಗಾಗಿ, ಕೋವಿಡ್‌ -19 ವಿರುದ್ಧದ ಲಸಿಕೆ ಅಥವಾ ಔಷಧ ತಯಾರಿಕೆ ಈ ಕ್ಷ ಣದ ಅಗತ್ಯಧಿವಾಗಿದ್ದು, ಅನೇಕ ರಾಷ್ಟ್ರಗಳು, ಔಷಧ ಕಂಪನಿಗಳು ಮತ್ತು ಔಷಧ ಸಂಶೋಧನಾ ಸಂಸ್ಥೆಗಳು ಈ ದಿಸೆಯಲ್ಲಿ ಕಾರ್ಯಪ್ರವೃತ್ತವಾಗಿವೆ; ಪೈಪೋಟಿಗಿಳಿದಿವೆ. ಎಲ್ಲರಿಗಿಂತ ಮೊದಲು ಲಸಿಕೆಯನ್ನೋ, ಔಷಧವನ್ನೋ ಕಂಡು ಹಿಡಿದು ಅದರ ಮೇಲೆ ಹಕ್ಕು ಸ್ವಾಮ್ಯ ಸಾಧಿಸುವುದು ಒಂದು, ಇಡೀ ಮನುಕುಲವನ್ನು ಈ ವೈರಾಣುವಿನಿಂದ ಕಾಪಾಡುವುದು ಮತ್ತೊಂದು ಉದ್ದೇಶ. ಈ ವಿಷಯದಲ್ಲಿ ಎಲ್ಲರಿಗಿಂತ ಮುಂಚೂಣಿಯಲ್ಲಿರುವುದು ಲಂಡನ್ನ ಆಕ್ಸ್ಫರ್ಡ್ವಿವಿಯ ಸಂಶೋಧಕರ ತಂಡ. ಈ ತಂಡದ ನೇತೃತ್ವ ವಹಿಸಿರುವುದು ಖ್ಯಾತ ಲಸಿಕಾಶಾಸ್ತ್ರಜ್ಞೆ ಡಾ. ಸಾರಾ ಗಿಲ್ಬರ್ಟ್‌. ವ್ಯಾಕ್ಸೀನಾಲಜಿ ಪ್ರಾಧ್ಯಾಪಕಿಯೂ ಆಗಿರುವ ಡಾ. ಸಾರಾ, ಕೋವಿಡ್ವಿರುದ್ಧ ಅಭಿವೃದ್ಧಿಪಡಿಸುತ್ತಿರುವ ಲಸಿಕೆ ಮೊದಲ ಹಂತದ ಪ್ರಯೋಗದಲ್ಲಿಹೆಚ್ಚು ಪರಿಣಾಧಿಮಕಾರಿಯಾಧಿಗಿರುವುದು ಸಂತಸಕ್ಕೆ ಕಾರಣವಾಗಿದೆ. ಹಾಗಾಗಿ, ಇಡೀ ಜಗತ್ತು ಸಾರಾ ನೇತೃತ್ವದಲ್ಲಿಅಭಿವೃದ್ಧಿಯಾಗುತ್ತಿರುವ ಆಕ್ಸ್ಫರ್ಡ್ನ ಲಸಿಕೆ ಯತ್ತಲೇ ದೃಷ್ಟಿ ನೆಟ್ಟು ಕೂತಿದೆ.

ವಿಶ್ವ ಆರೋಗ್ಯ ಸಂಸ್ಥೆ ಕೊರೊನಾ ಸಾಂಕ್ರಾಮಿಕ ಎಂದು ಘೋಷಿಸುವ ಮೊದಲೇ ಆಕ್ಸ್ಫರ್ಡ್ವಿವಿ ಮತ್ತು ಜೆನ್ನರ್ಇನ್ಸ್ಟಿಟ್ಯೂಟ್ಜಂಟಿಯಾಗಿ 250 ಸಂಶೋಧಕರ ತಂಡ  ಔಷಧ ಕುರಿತಾದ ವಿನ್ಯಾಸವನ್ನು ಸಿದ್ಧಪಡಿಸಲು ಆರಂಭಿಸಿತು. ಅಂದರೆ, ಜಗತ್ತು ಇನ್ನೂ ಕೊರೊನಾ ವೈರಸ್ಹಿನ್ನಲೆ ಮುನ್ನಲೆ ತಿಳಿಯುವ ಮೊದಲೇ ಈ ತಂಡ ಲಸಿಕೆಯ ಬಗ್ಗೆ ವಿಸ್ತೃತವಾದ ಪ್ಲ್ಯಾನ್ಹರವಿಕೊಂಡು ತಯಾರಾಗಿತ್ತು ಎಂದರೆ ಅದಕ್ಕೆ ಡಾ. ಸಾರಾ ಅವರ ಸ್ಫೂರ್ತಿ ಮತ್ತು ಅನುಭವವೂ ಕಾರಣ.

ಲಸಿಕೆ ತಯಾರಿಕೆ ಮತ್ತು ಪರೀಕ್ಷೆಯಲ್ಲಿ ಡಾ.ಸಾರಾ ಅವರಿಗಿರುವ ತಜ್ಞತೆಯ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ(ಡಬ್ಲ್ಯೂಎಚ್) ಗೆ ಈ ಮೊದಲೇ ಅರಿವಿತ್ತು. 2014ರಲ್ಲಿ ಕಾಡಿದ ಎಬೋಲಾ ಸೋಂಕಿಗೆ ಔಷಧ ತಯಾರಿಕೆಯ ಕೆಲಸವನ್ನು ಡಾ.ಸಾರಾ ಮತ್ತು ತಂಡಕ್ಕೆ ವಹಿಸಲಾಗಿತ್ತು. ಹಾಗಾಗಿ, ಚೀನಾದ ವುಹಾನ್ನಲ್ಲಿ ಮೊದಲ ಬಾರಿಗೆ ವೈರಸ್ಪತ್ತೆಯಾಗುತ್ತಿದ್ದಂತೆ ಸಾರಾ ತಂಡ ಚುರುಕಾಯಿತು. ಮರ್ಸ್‌(ಮಿಡಲ್ಈಸ್ಟ್ರೆಸ್ಪಿರೇಟರಿ ಸಿಂಡ್ರೋಮ್ಕೊರೊನಾ ವೈರಸ್‌)ಗೆ ವ್ಯಾಕ್ಸಿನ್ಗಾಗಿ ನಡೆಸಿದ ಸಂಶೋಧನೆಯು ಇದಕ್ಕೂ ಬಹುಪಾಲು ನೆರವು ನೀಡಿತು.  ಸಾರಾ ಶಾಂತ ವರ್ತನೆ ಮತ್ತು ಸ್ನೇಹಪರ ವ್ಯಕ್ತಿತ್ವವನ್ನು ಹೊಂದಿರುವ ಅತ್ಯಂತ ಬುದ್ಧಿವಂತ ಹುಡುಗಿಯಾಗಿದ್ದಳು ಎಂದು ಆಕೆಯ ಕ್ಲಾಸ್ಮೇಟ್ಗಳು ಸ್ಮರಿಸಿಕೊಳ್ಳುತ್ತಾರೆ. ಸಾರಾ ಬಗ್ಗೆ ಹೆಮ್ಮೆ ಪಡಲು ಇನ್ನೊಂದು ಕಾರಣವಿದೆ. ಅವರು ತಮ್ಮ ತ್ರಿವಳಿ ಮಕ್ಕಳನ್ನೇ ಈ ಕೊರೊನಾ ಲಸಿಕೆ ಪ್ರಯೋಗಕ್ಕೆ ಬಳಸಿಕೊಂಡಿದ್ದಾರೆ! 21 ವರ್ಷದ ಮೂವರು ಮಕ್ಕಳು ಸ್ವಯಂಪ್ರೇರಿತರಾಗಿಯೇ ಪರೀಕ್ಷೆಗೆ ತಮ್ಮನ್ನು ಒಡ್ಡಿಕೊಂಡಿದ್ದಾರೆ.

ಜಗತ್ತಿನಾದ್ಯಂತದ ಜನರನ್ನು ಸಂಕಟದಿಂದ ಪಾರು ಮಾಡುವ ಅಗತ್ಯವನ್ನು ಸತ್ಯದೊಂದಿಗೆ ಎತ್ತಿ ಹಿಡಿಯುಲು ಬೇಕಾದ ಭರವಸೆಯನ್ನು ಹೇಗೆ ಸಮತೋಲನಗೊಳಿಸಬೇಕೆಂಬುದು ಅರಿತುಕೊಂಡಿರುವುದೇ ಸಾರಾ ಅವರ ಬಹುದೊಡ್ಡ ಸಾಮರ್ಥ್ಯ‌. ತನ್ನ ಹೆಗಲ ಮೇಲೆ ಕೋಟ್ಯಂತರ ನಿರೀಕ್ಷೆಗಳ ಭಾರ ಹೊತ್ತುಕೊಂಡಿರುವ ಅರಿವು ಸ್ಪಷ್ಟವಾಗಿ ಸಾರಾಗೆ ಗೊತ್ತಿದೆ. ಹಾಗಾಗಿಯೇ ವರ್ಷಾಂತ್ಯಕ್ಕೆ ಆಕ್ಸ್ಫರ್ಡ್ಲಸಿಕೆಯನ್ನು ಸಿಗುವಂತೆ ಮಾಡುವ ದೊಡ್ಡ ಸವಾಲು ಅವರ ಮುಂದಿದೆ. ಇದೇನೂ ಅಸಾಧ್ಯವಾದುದಲ್ಲ. ಆದರೆ, ಆ ಬಗ್ಗೆ ಖಚಿತತೆ ಇಲ್ಲಎಂಬುದನ್ನು ಒಪ್ಪಿಕೊಳ್ಳಲೇಬೇಕು ಎನ್ನುವ ಅವರ ಮಾತುಗಳು ಬದ್ಧತೆಗೆ ಪ್ರತೀಕವಾಗಿವೆ. 1962ರ ಏಪ್ರಿಲ್ನಲ್ಲಿ ಜನಿಸಿದ ಸಾರಾಗೆ ಈಗ 58ರ ಹರೆಯ. ಈಸ್ಟ್ಏಂಜಿಲಿಯಾ ವಿವಿಯಲ್ಲಿ ಅಧ್ಯಯನ ಕೈಗೊಂಡ ಸಾರಾ, ಬಯೋಲಾಜಿಕಲ್ಸೈನ್ಸ್ನಲ್ಲಿಪದವಿ ಪಡೆದರು. ಅಲ್ಲಿಂದ ಡಾಕ್ಟರಲ್ಪದವಿಗಾಗಿ ಯುನಿವರ್ಸಟಿ ಆಫ್ಹಲ್ಗೆ ತೆರಳಿದರು. ಈ ವಿಶ್ವವಿದ್ಯಾಲಯದಲ್ಲೇ ಅವರು,  ಯೀಸ್ಟ್ರೋಡೋಸ್ಪೊರಿಡಿಯಮ್ಟೊರುಲಾಯ್ಡ್ಗಳ ತಳಿಶಾಸ್ತ್ರ ಮತ್ತು ಜೀವರಾಸಾಯನಿಕತೆಯ ಕುರಿತು ಅಧ್ಯಯನ ನಡೆಸಿದರು.

ಉನ್ನತ ಶಿಕ್ಷ ಣದ ಬಳಿಕ ಸಾರಾ, ಬರ್ವಿಂಗ್ಇಂಡಸ್ಟ್ರಿ ರಿಸರ್ಚ್ಫೌಂಡೇಷನ್ನಲ್ಲಿ ಪೋಸ್ಟ್ಡಾಕ್ಟರಲ್ಸಂಶೋಧಕಿಯಾಗಿ ಕೆಲಸ ಮಾಡಿದರು. ನಂತರ, ಡೆಲ್ಟಾ ಬಯೋ ಟೆಕ್ನಾಲಜಿ ಸೇರಿಕೊಂಡರು. 1994ರಲ್ಲಿಮತ್ತೆ ಅಧ್ಯಯನಕ್ಕೆ ಮರಳಿದ ಸಾರಾ, ಆಡ್ರಿನ್ವಿ ಎಸ್ಹಿಲ್ಪ್ರಯೋಗಾಲಯಕ್ಕೆ ಸೇರಿದರು. ಅಲ್ಲಿಂದ 2004ರಲ್ಲಿ ಆಕ್ಸ್ಫರ್ಡ್ವಿವಿಯ ವ್ಯಾಕ್ಸಿನಾಲಜಿ ವಿಭಾಗದಲ್ಲಿ ರೀಡರ್ಆಗಿ ನೇಮಕವಾದರು. 2010ರಲ್ಲಿಜೆನ್ನರ್ಇನ್ಸ್ಟಿಟ್ಯೂಟ್ನಲ್ಲಿ ಪ್ರೊಫೆಸರ್ಆದರು. ಅಲ್ಲಿಅವರು, ವೆಲ್ಕಮ್ಟ್ರಸ್ಟ್ಸಹಾಯದೊಂದಿಗೆ ನಾವೆಲ್ಇನ್ಫ್ಲುಯೆಂಜಾಗೆ ಲಸಿಕೆಗಳನ್ನು ತಯಾರಿಸುವ ವಿನ್ಯಾಸದ ಕೆಲಸವನ್ನು ಆರಂಭಿಸಿದರು. ಹೀಗೆ ಅವರು ಒಬ್ಬ ವ್ಯಾಕ್ಸಿನಿಸ್ಟ್ಆಗಿ ಬೆಳಕಿಗೆ ಬರತೊಡಗಿದರು. ಈ ಕ್ಷೇತ್ರದಲ್ಲಿ ಅವರು ಮಾಡಿದ ಪ್ರಯೋಗಗಳು, ಸಂಶೋಧನೆಗಳು ಹೊಸ ದಾರಿಗಳನ್ನು ತೋರಿಸಿದವು.

ಸಾರಾ ಅವರು ಯುನಿವರ್ಸಲ್ಫ್ಲುವ್ಯಾಕ್ಸಿನ್ಅಭಿವೃದ್ಧಿ ಮತ್ತು ಪರೀಕ್ಷೆಯಲ್ಲಿ ತಮ್ಮನ್ನು ಹೆಚ್ಚಾಗಿ ತೊಡಗಿಸಿಕೊಂಡಿದ್ದಾರೆ. ಸಾಂಪ್ರದಾಯಿಕ ಲಸಿಕೆಗಳಂತೆ ಈಯುನಿವರ್ಸಲ್ಫ್ಲುಲಸಿಕೆಗಳು ಪ್ರತಿಕಾಯಗಳ ಉತ್ಪಾದನೆಯನ್ನು ವೇಗಗೊಳಿಸುವುದಿಲ್ಲ. ಬದಲಿಗೆ, ಇನ್ಫ್ಲುಯೆಂಜಾಗೆ ಅಗತ್ಯವಿರುವಟಿಕೋಶಗಳನ್ನು ಸೃಷ್ಟಿಸುವಂತೆ ದೇಹದ ನಿರೋಧಕ ಶಕ್ತಿ ವ್ಯವಸ್ಥೆಗೆ ಪ್ರಚೋದನೆ ನೀಡುತ್ತವೆ. ವ್ಯಕ್ತಿಗೆ ವಯಸ್ಸಾದಂತೆ ನಿರೋಧಕ ಶಕ್ತಿ ಕುಂದುತ್ತಾ ಹೋಗುತ್ತದೆ. ಅಂಥವರಿಗೆ ಈ ಸಾಂಪ್ರದಾಯಿಕ ಲಸಿಕೆಗಳು ಪರಿಣಾಮಕಾರಿಯಾಗುವುದಿಲ್ಲ. ಬದಲಿಗೆ ಯುನಿವರ್ಸಲ್ಫ್ಲು ಲಸಿಕೆಗಳು ಹೆಚ್ಚು ಪರಿಣಾಮವನ್ನು ನೀಡಬಲ್ಲವು. ಹಾಗಾಗಿಯೇ, ಸಾರಾ ಅವರ ಪ್ರಯೋಗಕ್ಕೆ ಹೆಚ್ಚು ಮನ್ನಣೆ ಇದೆ. 2008ರಲ್ಲಿ ಅವರ ಮೊದಲ ಕ್ಲಿನಿಕಲ್ಪ್ರಯೋಗಗಳಲ್ಲಿಇನ್ಫ್ಲುಯೆಂಜಾ ಎ ವೈರಸ್  ಸಬ್ಟೈಪ್ಎಚ್‌3ಎನ್‌2 ಅನ್ನು ಬಳಸಲಾಯಿತು. ರೋಗಿಯ ರೋಗಲಕ್ಷ ಣಗಳ ದೈನಂದಿನ ಮೇಲ್ವಿಚಾರಣೆ ನಡೆಸಲಾಯಿತು. ಫ್ಲು ವೈರಸ್ಗೆ ಪ್ರತಿಕ್ರಿಯೆಯಾಗಿ ಟಿ ಕೋಶಗಳನ್ನು ಉತ್ತೇಜಿಸಲು ಸಾಧ್ಯವಿದೆ ಮತ್ತು ಜನರನ್ನು ಜ್ವರದಿಂದ ರಕ್ಷಿಸಲು ಸಾಧ್ಯವಾಗುತ್ತದೆ ಎಂಬುದನ್ನು ಕಂಡುಕೊಳ್ಳಲಾಯಿತು. ಈ ಎಲ್ಲ ಸಂಶೋಧನೆಗಳ ಫಲವಾಗಿಯೇ ಸಾರಾ ಅವರು ಮರ್ಸ್ಗೆ ಲಸಿಕೆಯನ್ನು ಕಂಡು ಹಿಡಿಯಲು ಸಾಧ್ಯವಾಯಿತು. ಇದೇ ಮಾದರಿಯನ್ನು ನಿಫಾಗೆ ತಯಾರಿಸಲಾದ ಲಸಿಕೆಯಲ್ಲಿ ಬಳಸಿಕೊಳ್ಳಲಾಯಿತು. ಹೀಗೆ, ಸಾರಾ ಅವರು, ಮಾನವ ಕುಲವನ್ನು ಕಾಡುತ್ತಿರುವ ಅನೇಕ ವೈರಾಣು ವಿರುದ್ಧಗಳ ಲಸಿಕೆಗಳನ್ನು ಸಿದ್ಧಪಡಿಸಲು ತಮ್ಮ ಜ್ಞಾನವನ್ನು ಧಾರೆ ಎರೆಯುತ್ತಿದ್ದಾರೆ.

ಬಹುಶಃ ಆಕ್ಸ್ಫರ್ಡ್ತಯಾರಿಸುತ್ತಿರುವ ಕೋವಿಡ್ಲಸಿಕೆಯೇ ಎಲ್ಲರಿಗಿಂತ ಮೊದಲು ದೊರೆಯುವ ಸಾಧ್ಯತೆಗಳು ಹೆಚ್ಚಾಗಿವೆ. ಈ ಲಸಿಕೆ  ಪರಿಣಾಮಕಾರಿಯಾದರೆ ಡಾ. ಸಾರಾಗೆ ಇಡೀ ಜಗತ್ತೇ ಋುಣಿಯಾಗಲಿದೆ. ಎಪಿಡೆಮಿಕ್ಪ್ರಿಪೇರೆಡೆನೆಸ್ಇನ್ನೋವೇಷನ್ಸ್  ಸಾರಾ ಅವರ ಲಸಿಕೆ ತಯಾರಿಕೆಗೆ ನಿಧಿ ಒದಗಿಸುತ್ತಿದೆ. ‘ಯುನಿವರ್ಸಲ್ಫ್ಲು ವ್ಯಾಕ್ಸಿನ್‌’ ಪದ್ಧತಿ ಮೂಲಕ ತಮ್ಮದೇ ಆದ ಲಸಿಕೆ ತಯಾರಿಕಾ ದಾರಿಯನ್ನು ಕಂಡುಕೊಂಡಿರುವ ಸಾರಾ ಅವರು, ಸೆಪ್ಟೆಂಬರ್ಹೊತ್ತಿಗೆ ಕೋವಿಡ್‌ 19ಗೆ ಲಸಿಕೆ ಲಭ್ಯವಾಗಲಿದೆ ಎಂದು ಹೇಳುತ್ತಾರೆ. ಅದಾಗದಿದ್ದರೂ ವರ್ಷಾಂತ್ಯಕ್ಕೆ ಲಸಿಕೆ ದೊರೆಯುವ ಸಾಧ್ಯತೆಗಳು ಹೆಚ್ಚು ಎಂಬುದು ಬಹುತೇಕ ತಜ್ಞರ ಅಭಿಪ್ರಾಯ. ಡಾ. ಸಾರಾ ಗಿಲ್ಬರ್ಟ್ಅವರ ಈ ಪ್ರಯತ್ನಗಳಿಂದಾಗಿ ಜಗತ್ತಿನಾದ್ಯಂತ ಪರಿಚಿತರಾಗುತ್ತಿದ್ದಾರೆ. ಟೈಮ್ಸ್ಪತ್ರಿಕೆಯಸೈನ್ಸ್ಪವರ್ಲಿಸ್ಟ್‌’ನಲ್ಲೂ ಕಾಣಿಸಿಕೊಂಡಿದ್ದಾರೆ. ವ್ಯಾಕಿಟೆಕ್ಸಂಸ್ಥೆಯನ್ನು ಹುಟ್ಟು ಹಾಕಿ ಸಂಶೋಧನೆಗೆ  ಒತ್ತು ನೀಡುತ್ತಿದ್ದಾರೆ.

(ಈ ಲೇಖನವು ವಿಜಯ ಕರ್ನಾಟಕದ 2020ರ ಆಗಸ್ಟ್ 2ರ ಸಂಚಿಕೆಯಲ್ಲಿ ಪ್ರಕಟವಾಗಿದೆ)




ಗುರುವಾರ, ಜುಲೈ 16, 2020

Sonam Wangchuk ವ್ಹಾವ್‌... ವಾಂಗ್‌ಚುಕ್‌


54 ವರ್ಷದ ವಾಂಗ್ಚುಕ್ಪ್ರತಿಭೆಯ ಖನಿ, ಹಲವು ಸಾಧನೆಗಳ ಸಾರಥಿ, ಬಾಯ್ಕಾಟ್ಚೀನಾ ಅಭಿಯಾನಕ್ಕೆ ವೇಗ ನೀಡಿದ ರೂವಾರಿ.

- ಮಲ್ಲಿಕಾರ್ಜುನ ತಿಪ್ಪಾರ
ಗಲ್ವಾನ್ಕಣಿವೆಯಲ್ಲಿ ಚೀನಾ ಅಟ್ಟಹಾಸಕ್ಕೆ ನಮ್ಮ ಯೋಧರು ಹುತಾತ್ಮರಾದರಲ್ಲಅದೇ ಕ್ಷಣ ದೇಶದಲ್ಲೊಂದುಬಾಯ್ಕಾಟ್ಚೀನಾಆಂದೋಲನ ಇದ್ದಕ್ಕಿಂತ ವೇಗ ಪಡೆದುಕೊಂಡಿತು. ಅದರ ಹಿಂದಿನ ಶಕ್ತಿಯೇ ಈ ಸೋನಮ್ವಾಂಗ್ಚುಕ್‌. ‘ಚೀನಾ ಕೋ ಜವಾಬ್‌’ ಸರಣಿ ವಿಡಿಯೋಗಳನ್ನು ಹರಿಬಿಟ್ಟ ಈ ಲಡಾಖಿ ವ್ಯಕ್ತಿಯ ಹಿನ್ನೆಲೆಯನ್ನು ತಿಳಿದರೆ ವ್ಯಕ್ತಿಯೊಬ್ಬ ಇಷ್ಟೆಲ್ಲ ಕೆಲಸಗಳನ್ನು ಮಾಡಬಹುದೇ, ಇಷ್ಟೊಂದು ಪ್ರತಿಭಾನ್ವಿತರಾಗಿರಲು ಸಾಧ್ಯವೇ ಎಂಬ ಅನುಮಾನ ಬರುವುದು ಗ್ಯಾರಂಟಿ.
ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ, ರಾಜಕುಮಾರ್ಹಿರಾನಿ ನಿರ್ದೇಶನದತ್ರಿ ಈಡಿಯಟ್ಸ್‌’ ಚಿತ್ರ ನೆನಪಿದೆಯಲ್ಲ. ಅದರಲ್ಲಿ ಅಮೀರ್ಖಾನ್ನಿರ್ವಹಿಸಿದ್ದಪುನ್ಷುಕ್ವಾಂಗ್ಡು/ರಂಚೋಡದಾಸ್ಶ್ಯಾಮಲದಾಸ್ಚಾಂಚಡ್‌’ ಪಾತ್ರವಿದೆಯಲ್ಲ, ಅದಕ್ಕೆ ಈ ಸೋನಮ್ವಾಂಗುಚುಕ್ಅವರೇ ಸ್ಫೂರ್ತಿ! ವಾಂಗ್ಚುಕ್ಅವರ ಪ್ರತಿಭೆ ಒಂದು ಕ್ಷೇತ್ರಕ್ಕೆ ಸೀಮಿತವಾಗಿಲ್ಲ. ಅವರು ಮೆಕ್ಯಾನಿಕಲ್ಎಂಜಿನಿಯರ್‌, ಮಾತುಗಾರ, ಶಿಕ್ಷ ಣ ತಜ್ಞ, ಸಂಶೋಧಕ, ಸುಧಾರಕ, ಪತ್ರಕರ್ತ, ರಾಜಕಾರಣಿ ಹೀಗೆ ಇನ್ನೂ ಏನೇನೋ.
ಟಿಬೆಟಿಯನ್ನರು, ಉಯಿಗೂರ್ಮುಸ್ಲಿಮರ ವಿರುದ್ಧ ಮಾನವ ಹಕ್ಕುಗಳನ್ನು ನಿರಂತರವಾಗಿ ಉಲ್ಲಂಘಿಸುತ್ತಿರುವ ಚೀನಾಕ್ಕೆ ತಕ್ಕ ಪಾಠ ಕಲಿಸಬೇಕೆಂದರೆ ಕೇವಲ ಸೇನಾ ಬಲ ಮಾತ್ರವೇ ಸಾಕಾಗುವುದಿಲ್ಲ. ಭಾರತೀಯರುವಾಲೆಟ್ಪವರ್‌’ ಬಳಸಬೇಕು ಮತ್ತು ಚೀನಾ ವಸ್ತುಗಳನ್ನು ಬಹಿಷ್ಕರಿಸಬೇಕು ಎಂದು ಹೇಳಿದರು. ಅಷ್ಟೇ ಅಲ್ಲದೇ ಅದಕ್ಕೆ ಸಂಬಂಧಿಸಿದಂತೆ ಸರಣಿ ವಿಡಿಯೋಗಳನ್ನು ಹರಿಯಬಿಟ್ಟರು. ಚೀನಾ ವಸ್ತುಗಳ ಬಹಿಷ್ಕಾರ ಯಾಕೆ ಅಗತ್ಯ ಅನ್ನುವುದನ್ನು ಎಷ್ಟು ಸೊಗಸಾಗಿ ಹೇಳಿದರಂದರೆ, ರಾತ್ರೋರಾತ್ರಿ ವಿಡಿಯೋಗಳು ವೈರಲ್ಆದವು. ಬಹುತೇಕ ಎಲ್ಲಮಾಧ್ಯಮಗಳು ಅವರ ವಿಚಾರವನ್ನು ಪ್ರಚಾರ ಮಾಡಿದವು. ಪರಿಣಾಮ ದೇಶದಲ್ಲಿಚೀನಾ ಬಾಯ್ಕಾಟ್ಅಭಿಯಾನಕ್ಕೆ ಹೆಚ್ಚಿನ ಬಲ ಬಂದು, ಕೇಂದ್ರ ಸರಕಾರ ಮೊದಲ ಹಂತದಲ್ಲಿ ಚೀನಾ ಮೂಲದ 59 ಆ್ಯಪ್ಗಳನ್ನು ನಿಷೇಧಿಸಿತು. ಚೀನಾ ಬಾಯ್ಕಾಟ್ಅಭಿಯಾನಕ್ಕೆ ಒಂದು ದಿಕ್ಕು, ಶಕ್ತಿ ತೋರಿಸಿದ್ದು ಈ ವಾಂಗ್ಚುಕ್ಎಂಬುದರಲ್ಲಿ ಅನುಮಾನವಿಲ್ಲ. ಪ್ರತಿಭೆಯ ಗಣಿಯೇ ಆಗಿರುವ ವಾಂಗ್ಚುಕ್‌, ಲಡಾಖ್‌, ಸಿಕ್ಕಿಮ್‌, ನೇಪಾಳದಲ್ಲಿಶೈಕ್ಷ ಣಿಕ ಕ್ಷೇತ್ರದ ಸುಧಾರಕರಾಗಿ ದುಡಿಯುತ್ತಿದ್ದಾರೆ.
ಲಡಾಖ್ನ ಲೇಹ್ಜಿಲ್ಲೆಯ ಅಲ್ಚಿ ಸಮೀಪದ ಉಲೆಟೊಕ್ಪೊ ಎಂಬಲ್ಲಿ1966ರಲ್ಲಿವಾಂಗ್ಚುಕ್ಜನಿಸಿದರು. ಈ ಊರು ಮತ್ತು ಸಮೀಪದ ಊರುಗಳಲ್ಲಿಯಾವುದೇ ಶಾಲೆಗಳು ಇರಲಿಲ್ಲ. ಹಾಗಾಗಿ ವಾಂಗ್ಚುಕ್‌ 9 ವರ್ಷ ಆಗೋವರೆಗೂ ಯಾವುದೇ ಶಾಲೆಗೆ ಹೋಗಲಿಲ್ಲ. ಬದಲಿಗೆ ಅವರ ತಾಯಿ ಮನೆಯಲ್ಲೇ ಮೂಲ ಪಾಠಗಳನ್ನು ಹೇಳಿಕೊಟ್ಟರು. ಇದಕ್ಕೆ ಅವರಿಗೆ ಖೇದವೇನೂ ಇಲ್ಲ. ಬದಲಿಗೆ, ಇದು ಅದೃಷ್ಟ ಎನ್ನುತ್ತಾರೆ. ಯಾಕೆಂದರೆ, ತಮ್ಮದಲ್ಲದ ಭಾಷೆಯಲ್ಲಿಒತ್ತಾಯಪೂರ್ವಕವಾಗಿ ಕಲಿಯುವುದು ತಪ್ಪಿಸಲು ಸಾಧ್ಯವಾಯಿತು. ಲಡಾಖಿ ಭಾಷೆಯಲ್ಲಿಮೂಲ ಪಾಠ ಕೇಳುವುದು ಅವಕಾಶ ಸೃಷ್ಟಿಯಾಯಿತು.
ವಾಂಗ್ಚುಕ್ಅವರ ತಂದೆ ಸೋನಮ್ವಂಗ್ಯಾಲ್ಅವರು ರಾಜಕಾರಣಿ ಮತ್ತು ಕಾಶ್ಮೀರದಲ್ಲಿಸಚಿವರಾಗಿದ್ದರು. ವಾಂಗ್ಚುಕ್ಗೆ 9 ವರ್ಷ ಆದಾಗ ಅವರು ತಮ್ಮ ನೆಲೆಯನ್ನು ಶ್ರೀನಗರಕ್ಕೆ ಬದಲಿಸಿದರು. ಅಲ್ಲಿಅವರನ್ನು ಸ್ಕೂಲ್ಗೆ ಸೇರಿಸಲಾಯಿತು. ಇತರರಿಗಿಂತ ಭಿನ್ನವಾಗಿ ಕಾಣುತ್ತಿದ್ದ ವಾಂಗ್ಚುಕ್ಗೆ ಅಲ್ಲಿನ ಭಾಷೆಯೂ ಅರ್ಥವಾಗುತ್ತಿರಲಿಲ್ಲ. ಇದರಿಂದಾಗಿ ದಡ್ಡ ವಿದ್ಯಾರ್ಥಿ ಎಂದು ಪರಿಗಣಿತರಾದರು. ಶ್ರೀನಗರ ಶಾಲೆಯ ದಿನಗಳನ್ನು ಅವರು ತಮ್ಮ ಜೀವನದ ಅತ್ಯಂತ ಕರಾಳ ದಿನಗಳೆಂದು ಹೇಳಿಕೊಂಡಿದ್ದಾರೆ. ಕೊನೆಗೆ 1977ರಲ್ಲಿದಿಲ್ಲಿಗೆ ಬಂದ ವಾಂಗ್ಚುಕ್‌, ವಿಶೇಷ ಕೇಂದ್ರೀಯ ವಿದ್ಯಾಲಯವನ್ನು ಸೇರಿಕೊಂಡರು. ಆ ನಂತರ, 1987ರಲ್ಲಿನ್ಯಾಷನಲ್ಇನ್ಸ್ಟಿಟ್ಯೂಟ್ಆಫ್ಟೆಕ್ನಾಲಜಿ ಶ್ರೀನಗರದಿಂದ ಮೆಕ್ಯಾನಿಕಲ್ಎಂಜಿನಿಯರಿಂಗ್ನಲ್ಲಿಬಿ ಟೆಕ್ಪದವಿ ಪಡೆದರು. ಎಂಜಿನಿಯರಿಂಗ್ನಲ್ಲಿವಿಷಯಗಳ ಆಯ್ಕೆ ಸಂಬಂಧ ತಂದೆ ಜೊತೆಗೆ ಭಿನ್ನಾಭಿಪ್ರಾಯ ಉಂಟಾಗಿ ತಮ್ಮ ಅಧ್ಯಯನ ವೆಚ್ಚವನ್ನು ತಾವೇ ಭರಿಸಿಕೊಂಡರು. ಫ್ರಾನ್ಸ್ಗೆ ತೆರಳಿ ಎರಡು ವರ್ಷ ಗ್ರೆನೋಬಲ್ನಲ್ಲಿರುವ ಕ್ಯಾಟರ್ಸ್ಕೂಲ್ಆಫ್ಆರ್ಕಿಟೆಕ್ಚರ್ನಲ್ಲಿಅರ್ಥೆನ್ಆರ್ಕಿಟೆಕ್ಚರ್‌(ಮಣ್ಣಿನ ವಾಸ್ತುಶಿಲ್ಪ)ನಲ್ಲಿಉನ್ನತ ಅಧ್ಯಯನ ಕೈಗೊಂಡು ಭಾರತಕ್ಕೆ ಮರಳಿದರು.
ಇದಕ್ಕೂ ಮೊದಲು ಅಂದರೆ 1988ರಲ್ಲಿವಾಂಗ್ಚುಕ್ತನ್ನ ಸಹೋದರ ಮತ್ತು ಐವರ ಜತೆಗೂಡಿ  ಸ್ಟೂಡೆಂಟ್ಸ್ಎಜ್ಯುಕೇಷನಲ್ಆ್ಯಂಡ್ಕಲ್ಚರಲ್ಮೂವ್ಮೆಂಟ್ಆಫ್ಲಡಾಖ್‌(ಎಸ್ಇಸಿಎಂಒಎಲ್‌) ಆರಂಭಿಸಿದರು. ಶೈಕ್ಷ ಣಿಕ ಸುಧಾರಣೆಯೇ ಇದರ ಗುರಿಯಾಗಿತ್ತು. ಸಸೊಧೀಲ್ಸರಕಾರಿ ಹೈಸ್ಕೂಲನ್ನು ತಮ್ಮ ಸುಧಾರಣಾ ಪ್ರಯೋಗ ಶಾಲೆಯಾಗಿ ಬಳಸಿಕೊಂಡು, ಆಪರೇಷನ್ನ್ಯೂ ಹೋಪ್ಆರಂಭಿಸಿದರು. ಇದಕ್ಕೆ ಸರಕಾರದ ಶಿಕ್ಷ ಣ ಇಲಾಖೆಯ ಸಹಯೋಗವೂ ಇತ್ತು. ಲಡಾಖ್ನ ಏಕೈಕ ಮ್ಯಾಗಜಿನ್‌ ‘ಲಡಾಖ್ಸ್ಮೆಲಾಂಗ್‌’ ಆರಂಭಿಸಿ 1993ರಿಂದ 2005ರವರೆಗೂ ಅದರ ಸಂಪಾದಕರಾಗಿ ಕೆಲಸ ಮಾಡಿದ್ದಾರೆ. ಹಿಲ್ಕೌನ್ಸಿಲ್ಗವರ್ನಮೆಂಟ್ನಲ್ಲಿಶಿಕ್ಷ ಣ ಸಲಹೆಗಾರರಾಗಿದ್ದರು. 2002ರಲ್ಲಿಲಡಾಕ್ವಾಲ್ಯುಂಟರಿ ನೆಟ್ವರ್ಕ್‌(ಎಲ್ವಿಎನ್‌) ಎನ್ಜಿಒ ಆರಂಭಿಸಿದರು. ವಿಜನ್ಡಾಕ್ಯುಮೆಂಟ್ಲಡಾಖ್-2025ರ ಕರಡು ಸಮಿತಿಯ ಸದಸ್ಯರಾಗಿದ್ದರು. ಹಾಗೆಯೇ, 2004ರಲ್ಲಿಹಿಲ್ಗವರ್ನಮೆಂಟ್ನ ಶಿಕ್ಷ ಣ ಮತ್ತು ಪ್ರವಾಸೋದ್ಯಮ ನೀತಿ ನಿರೂಪಣೆಯಲ್ಲಿಇವರು ಪ್ರಮುಖ ಪಾತ್ರ ನಿರ್ವಹಿಸಿದ್ದರು. 2005ರಲ್ಲಿಅಂದಿನ ಡಾ.ಮನಮೋಹನ್ಸಿಂಗ್ಸರಕಾರವು ಇವರನ್ನು ನ್ಯಾಷನಲ್ಗೌವರ್ನಿಂಗ್ಕೌನ್ಸಿಲ್ಫಾರ್ಎಲೆನಂಟರಿ ಎಜ್ಯುಕೇಷನ್ನ ಸಮತಿಯ ಸದಸ್ಯರನ್ನಾಗಿ ನೇಮಕ ಮಾಡಿತು.
ವಾಂಗ್ಚುಕ್ಅವರ ಮತ್ತೊಂದು ಗಮನಾರ್ಹ ಸಾಧನೆ ಎಂದರೆಐಸ್ಸ್ತೂಪಅಂದರೆ ಹಿಮದ ಸ್ತೂಪ. ಚಳಿಗಾಲದಲ್ಲಿವ್ಯರ್ಥವಾಗಿ ಹರಿದು ಹೋಗುವ ಹಳ್ಳಗಳ ನೀರನ್ನು ಕೃತಕವಾಗಿ ಹಿಮದ ಗಡ್ಡೆಗಳನ್ನಾಗಿ ಪರಿವರ್ತಿಸುವುದು ಮತ್ತು ಬೇಸಿಗೆ ಕಾಲದಲ್ಲಿಈ ಹಿಮದ ಸ್ತೂಪಗಳು ಕರಗಿ ರೈತರಿಗೆ ನೀರಿನ ಮೂಲವನ್ನು ಒದಗಿಸುತ್ತವೆ. ಇದಕ್ಕೆ ಸಂಬಂಧಿಸಿದ ಮಾದರಿಯನ್ನು ವಾಂಗ್ಚುಕ್ಸಿದ್ಧಪಡಿಸಿದ್ದರು. ಈ ಹಿಮದ ಸ್ತೂಪಗಳು ಲಡಾಖ್ನ ರೈತರಿಗೆ ತುಂಬ ನೆರವಾಗಿವೆ. 2014ರ ಬಳಿಕ ಜಮ್ಮು ಮತ್ತು ಕಾಶ್ಮೀರ ಸರಕಾರದ ಅನೇಕ ಸಮಿತಿಗಳಲ್ಲಿವಾಂಗ್ಚುಕ್ಕೆಲಸ ಮಾಡಿ­ದ್ದಾರೆ. ರಾಜ್ಯದ ಶಿಕ್ಷ ಣ ನೀತಿ ಸೇರಿದಂತೆ ಅನೇಕ ನೀತಿ ನಿರೂಪಣೆಗಳಲ್ಲಿತಮ್ಮನ್ನು ತೊಡಗಿಸಿಕೊಂಡಿದ್ದಾರೆ. 2015ರಿಂದ ಹಿಮಾಲಯನ್ಇನ್ಸ್ಟ್ಯೂಟ್ಆಫ್ಅಲ್ಟರ್ನೇಟಿವ್ಸ್ವ್ಯವಸ್ಥೆಯನ್ನು ಪ್ರತಿಷ್ಠಾಪಿಸುವಲ್ಲಿನಿರತರಾಗಿದ್ದಾರೆ. ಇದೇ ವೇಳೆ, ಹೋಮ್ಸ್ಟೇ ಮಾದರಿಯಲ್ಲಿಫಾರ್ಮ್ಸ್ಟೇ ಎಂಬ ಹೊಸ ಕಲ್ಪನೆಯನ್ನು ಸಾಕಾರಗೊಳಿಸುತ್ತಿದ್ದಾರೆ. ಲಡಾಖ್ಗೆ ಆಗಮಿಸುವ ಪ್ರವಾಸಿಗರು ಹೊಟೇಲ್ಗಳಲ್ಲಿಉಳಿಯುವ ಬದಲಿಗೆ ಸ್ಥಳೀಯ ಕುಟುಂಬಗಳಲ್ಲಿಉಳಿದುಕೊಳ್ಳುವ ಕಲ್ಪನೆಯೇ ಫಾರ್ಮ್ಸ್ಟೇ. ಇದರಿಂದ ಸ್ಥಳೀಯರಿಗೆ ಉದ್ಯೋಗವೂ ಸೃಷ್ಟಿಯಾಗುತ್ತಿದೆ.
ಪ್ರತಿ ಕ್ಷ ಣವನ್ನು ವ್ಯರ್ಥ ಮಾಡದೇ ತೊಡಗಿಸಿಕೊಂಡಿರುವ ವಾಂಗ್ಚುಕ್ಅವರ ವಿಶ್ರಾಮರಹಿತ ಜೀವನವೇ ನಮಗೆ ಸೂಧಿರ್ತಿಯಾಗುತ್ತದೆ. ಅವರ ಈ ವಿಶಿಷ್ಟ ಕಾರ್ಯಶೈಲಿ, ಹೊಸ ಹೊಸ ಹೊಳಹುಗಳು ಮತ್ತು ಅವುಗಳನ್ನು ಅನುಷ್ಠಾಗೊಳಿಸುವ ಛಾತಿಯಿಂದಾಗಿ ಎಲ್ಲರಕ್ಕಿಂತ ಭಿನ್ನವಾಗಿ ನಿಲ್ಲುತ್ತಾರೆ. ಅದಕ್ಕೆ ಪ್ರತಿಫಲವಾಗಿ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ವಾಂಗ್ಚುಕ್ಅವರನ್ನು ಹುಡುಕಿಕೊಂಡು ಬಂದಿವೆ. 2018ರಲ್ಲಿರಾಮನ್ಮ್ಯಾಗ್ಸಸೆ ಅವಾರ್ಡ್‌, ಗ್ಲೋಬಲ್ಅವಾರ್ಡ್ಫಾರ್ಸಸ್ಟೇನೇಬಲ್ಆರ್ಕಿಟೆಕ್ಚರ್‌(2017), ಇಂಟರ್ನ್ಯಾಷನಲ್ಟೆರ್ರಾ ಅವಾರ್ಡ್ಫಾರ್ಬೆಸ್ಟ್ಅರ್ಥ್ಬಿಲ್ಡಿಂಗ್‌(2016), ಯುನೆಸ್ಕೋ ಚೇರ್ಅರ್ಥೇನ್ಆರ್ಕಿಟೆಕ್ಚರ್‌(2014), ಸ್ಯಾಂಚುರಿ ಏಷ್ಯಾದ ಗ್ರೀನ್ಟೀಚರ್ಅವಾರ್ಡ್‌(2004)... ಹೀಗೆಯೇ ಅವರು ಪಡೆದುಕೊಂಡಿರುವ ಪ್ರಶಸ್ತಿಗಳ ಪಟ್ಟಿ ಬೆಳೆಯುತ್ತದೆ.
ಅಸಾಮಾನ್ಯ ವ್ಯಕ್ತಿಯಾಗಿ ರೂಪುಗೊಂಡಿರುವ ವಾಂಗ್ಚುಕ್ಅವರು, ಕೇಂದ್ರ ಸರಕಾರ ಜಮ್ಮು ಮತ್ತು ಕಾಶ್ಮೀರ ವಿಭಜಿಸಿ ಲಡಾಖ್ಪ್ರದೇಶವನ್ನು ಕೇಂದ್ರಾಡಳಿತ ಪ್ರದೇಶವಾಗಿ ಘೋಷಿಸಿದಾಗ ಅದನ್ನು ಸ್ವಾಗತಿಸಿದ ಮೊದಲಿಗರಲ್ಲಿಇವರು ಒಬ್ಬರು. ತನ್ನದೇ ಸ್ವತಂತ್ರ ಸಂಸ್ಕೃತಿ, ಭಾಷೆ ಹೊಂದಿರುವ ಲಡಾಕ್ಗೆ ಮಾನ್ಯತೆ ತಂದುಕೊಡಬೇಕೆಂಬುದು ಅವರ ಹಂಬಲವಾಗಿದೆ.

(ಈ ಲೇಖನವು ವಿಜಯ ಕರ್ನಾಟಕದ ಜುಲೈ12, 2020ರ ಸಂಚಿಕೆಯಲ್ಲಿ ಪ್ರಕಟವಾಗಿದೆ)