ಬುಧವಾರ, ಮಾರ್ಚ್ 25, 2015

ಮುಕ್ತ ಸ್ವಾತಂತ್ರ್ಯಕ್ಕೊದಗುತ್ತಿರುವ ಅಂತ್ಯ, ಅವಿಜಿತ್ ರಾಯ್ ಹತ್ಯೆ

ಇತ್ತೀಚೆಗೆ ಢಾಕಾದ ನಡುರಸ್ತೆಯಲ್ಲಿ ಕಗ್ಗೊಲೆಯಾದ, ಬಾಂಗ್ಲಾ ಮೂಲದ ಅಮೆರಿಕ ಬರಹಗಾರ ಅವಿಜಿತ್ ರಾಯ್ ಎಲ್ಲದರಲ್ಲೂ ‘ಮುಕ್ತ ಚಿಂತನೆ’ಯ ಪ್ರತಿಪಾದಕ. ಕೊಲೆ ಬೆದರಿಕೆ ಎದುರಿಸುತ್ತಿದ್ದ ರಾಯ್ ಅದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದೇ ‘ಮುಕ್ತ’ವಾಗಿ ತಮ್ಮ ವಿಚಾರಗಳನ್ನು ಪ್ರಚರುಪಡಿಸುತ್ತಿದ್ದರು. ಸ್ವತಃ ನಾಸ್ತಿಕರಾಗಿದ್ದ ರಾಯ್ ತಮ್ಮ ‘ಮುಕ್ತ-ಮೋನ’(ಫ್ರಿ ಮೈಂಡ್) ಬ್ಲಾಗ್ ಮೂಲಕ ಬಾಂಗ್ಲಾ ಯುವ ಜನತೆಯಲ್ಲಿ ವೈಚಾರಿಕತೆ, ಜಾತ್ಯತೀತ, ಎಲ್ಲವನ್ನೂ ಪ್ರಶ್ನಿಸದೆ ಒಪ್ಪಿಕೊಳ್ಳುವ ಮನೋಭಾವನೆಯನ್ನು ಬಿತ್ತುತ್ತಿದ್ದರು. ಈ ಬ್ಲಾಗ್‌ನಲ್ಲಿ ಕೇವಲ ಬಾಂಗ್ಲಾದೇಶದ ವಿದ್ಯಮಾನಗಳು ಮಾತ್ರವಲ್ಲದೆ ದಕ್ಷಿಣ ಏಷ್ಯಾದ ಎಲ್ಲ ಬೆಳವಣಿಗೆಗಳು ಚರ್ಚೆಯಾಗುತ್ತಿದ್ದವು. ಅಲ್ಲದೆ, ಮುಕ್ತ ಚಿಂತನೆಗೆ ವೇದಿಕೆ ಕಲ್ಪಿಸಿಕೊಟ್ಟಿತ್ತು.
ಅಮೆರಿಕದ ಪ್ರಜೆಯಾಗಿದ್ದುಕೊಂಡು ತಮ್ಮ ತಾಯ್ನಾಡಿನ ಆಗು ಹೋಗುಗಳ ಬಗ್ಗೆ, ವಿಪರೀತವಾಗಿ ಬೆಳೆಯುತ್ತಿರುವ ಇಸ್ಲಾಮ್ ಮೂಲಭೂತವಾದತನದ ಬಗ್ಗೆ, ಧಾರ್ಮಿಕ ಅಸಹಿಷ್ಣು ಬಗ್ಗೆ, ಅವಕಾಶವಾದಿ ರಾಜಕಾರಣದ ಬಗ್ಗೆ ತುಂಬಾ ಮೊನಚಾಗಿ ತಮ್ಮ ಬ್ಲಾಗ್ ಹಾಗೂ ಅಂತಾರಾಷ್ಟ್ರೀಯ ನಾನಾ ಪತ್ರಿಕೆಗಳು, ನಿಯತಕಾಲಿಕೆಗಳಲ್ಲಿ ಲೇಖನಗಳನ್ನು ಪ್ರಕಟಿಸುತ್ತಿದ್ದರು ರಾಯ್. ಎಲ್ಲಕ್ಕಿಂತ ಹೆಚ್ಚಾಗಿ ಅವರ ಇತ್ತೀಚಿನ ಎರಡು ಕೃತಿಗಳಾದ ಒಬಿಶೊಹಶೇರ್ ದೊರ್ಶೂನ್(ದಿ ಫಿಲಾಸಫಿ ಆಫ್ ಡಿಸ್‌ಬಿಲಿಫ್), ಬಿಸ್ವಾಶೇರ್ ವೈರಸ್(ದಿ ವೈರಸ್ ಆಫ್ ಫೇಥ್) ಬಾಂಗ್ಲಾದೇಶದಲ್ಲಿ ಸಂಚಲವನ್ನೇ ಸೃಷ್ಟಿಸಿದ್ದವು. ಅಲ್ಲದೇ ಇದರಿಂದಾಗಿ ಅವರು ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಕೊಲೆ ಬೆದರಿಕೆಯನ್ನೂ ಎದುರಿಸಬೇಕಾಯಿತು. ರಾಯ್‌ಗೆ ಕಟ್ಟರ್‌ವಾದಿಯೊಬ್ಬ ಫೇಸ್‌ಬುಕ್‌ನಲ್ಲಿ ‘ಅವಿಜಿತ್ ರಾಯ್ ಕೊಲೆಯಾಗುವುದು ಖಚಿತ. ಆತ ಅಮೆರಿಕದಲ್ಲಿದ್ದಾನೆ. ಅದಕ್ಕೇ ಬದುಕಿದ್ದಾನೆ. ಬಾಂಗ್ಲಾಕ್ಕೆ ಬಂದರೆ ಆತ ಖಂಡಿತ ಕೊಲೆಯಾಗುತ್ತಾನೆ’ ಎಂದು ಬರೆದುಕೊಂಡಿದ್ದ. ಆದರೆ, ಇದ್ಯಾವುದರ ಬಗ್ಗೆ ತಲೆ ಕೆಡಿಸಿಕೊಳ್ಳುವ ಜಾಯಮಾನ ರಾಯ್‌ದ್ದಾಗಿರಲಿಲ್ಲ. ಅಂದ ಹಾಗೆ, ಅವಿಜಿತ್ ರಾಯ್ ಹಿಂದೂ. ಅವರ ತಂದೆ ಅಜೋಯ್ ರಾಯ್. ಢಾಕಾ ವಿವಿಯಲ್ಲಿ ಭೌತಶಾಸ್ತ್ರ ಪ್ರಾಧ್ಯಾಪಕರು. ಅವಿಜಿತ್ ವೃತ್ತಿಯಲ್ಲಿ ಎಂಜಿನಿಯರ್ ಆಗಿದ್ದರು.
ರಾಯ್ ವ್ಯಕ್ತಿತ್ವ ಎಂಥದಿತ್ತು ಎಂಬುದನ್ನು ತಿಳಿದುಕೊಳ್ಳಲು ಅವರ ಇತ್ತೀಚಿನ ‘ದಿ ವೈರಸ್ ಆಫ್ ಫೇಥ್’ ಪುಸ್ತಕದಲ್ಲಿ ಬರೆದುಕೊಂಡಿದ್ದನ್ನು ಇಲ್ಲಿ ಉಲ್ಲೇಖಿಸುವುದು ಸೂಕ್ತ. ‘ನಾವು ಮುಕ್ತವಾಗಿಯೇ ನಮ್ಮ ನಾಸ್ತಿಕತೆಯನ್ನು ಸಾರುತ್ತಿದ್ದೇವೆ. ಬಹುಶಃ ಇದು ಕೆಲವೊಂದಿಷ್ಟು ಉಗ್ರ ಪ್ರತಿಕ್ರಿಯೆಗೂ ಕಾರಣವಾಗಬಹುದು. ಆದರೆ, ಅದಕ್ಕಾಗಿ ನಾವು ಹೆದರಲಾರೆವು. ಭಾರತೀಯ ಉಪಖಂಡಕ್ಕೇ ವಿಶಿಷ್ಟವಾಗಿರುವ ಬೆಂಗಾಲಿ ಜಾತ್ಯತೀತ ಸಂಪ್ರದಾಯದ ಬಗ್ಗೆ ನಾವು ಹೆಮ್ಮೆ ಪಡುತ್ತೇವೆ’. ಅಂದರೆ, ರಾಯ್ ಹಾಗೂ ಆತನ ಸಂಗಡಿಗರಲ್ಲಿ ಸ್ಪಷ್ಟವಾದ ಮತ್ತು ನಿಖರವಾದ ಗುರಿಯಿತ್ತು. ಬಾಂಗ್ಲಾದೇಶ ಇಂದು ಯಾವ ದಿಶೆಯಲ್ಲಿ ಸಾಗುತ್ತಿದೆಯೋ ಅದಕ್ಕೆ ತದ್ವಿರುದ್ಧವಾಗಿ ಅವರ ಆಲೋಚನೆಗಳು, ಕೃತಿಗಳಿದ್ದವು. ಹಾಗೆ ನೋಡಿದರೆ, ಪಶ್ಚಿಮ ಪಾಕಿಸ್ತಾನದಿಂದ ಬಾಂಗ್ಲಾದೇಶ ಸ್ವತಂತ್ರವಾದ ದೇಶವಾಗಿದ್ದು ಇದೇ ಕಾರಣಕ್ಕೆ. ತಮ್ಮ ತಾಯ್ನುಡಿಯಾದ ಬೆಂಗಾಲಿ ಮೇಲೆ ಪಶ್ಚಿಮ ಪಾಕಿಸ್ತಾನ ಉರ್ದು ಹೇರಲು ಹೊರಟಾಗ ಕ್ರಾಂತಿಯೇ ಸಂಭವಿಸಿತು ಎಂಬುದು ಇತಿಹಾಸದಲ್ಲಿ ದಾಖಲಾಗಿದೆ. ಅಂದು ಯಾವ ಕಾರಣಕ್ಕೆ ಕ್ರಾಂತಿ ಸಂಭವಿಸಿತ್ತೋ ಇಂದು ಅದೇ ತತ್ವ ಅಲ್ಲಿಲ್ಲ. ಆ ಜಾಗದಲ್ಲಿ ಇಸ್ಲಾಮ್ ಮೂಲಭೂತವಾದ ಅಟ್ಟಹಾಸಗೈಯುತ್ತಿದೆ. ಅಲೆಗಳ ವಿರುದ್ಧ ಈಜುವ ಪ್ರಯತ್ನ ಮಾಡುವ ರಾಯ್‌ರಂಥ ವ್ಯಕ್ತಿಗಳ ಹತ್ಯೆ ನಡೆಯುತ್ತಲೇ ಇರುತ್ತವೆ.
್ಝ
೨೦೧೫ ಫೆ.೨೬ರಂದು ಅವಿಜಿತ್ ರಾಯ್ ತಮ್ಮ ಪತ್ನಿ ರಫಿದಾ ಅಹ್ಮದ್ ಜತೆಗೂಡಿ ಢಾಕಾದಲ್ಲಿ ಆಯೋಜಿಸಲಾಗಿದ್ದ ಎಕುಶೇ ಪುಸ್ತಕ ಮೇಳಕ್ಕೆ ತೆರಳಿದ್ದರು. ಅಂದು ಸಂಜೆ ಮೇಳದಿಂದ ವಾಪಸ್ ತಮ್ಮ ಮನೆಗೆ ಸೈಕಲ್ ರಿಕ್ಷಾದಲ್ಲಿ ಬರುತ್ತಿದ್ದರು. ಢಾಕಾ ವಿವಿಯ ಟೀಚರ್ ಸ್ಟೂಡೆಂಟ್ ಸೆಂಟರ್ ಬಳಿ ಎದುರಾದ ಯಮದೂತರು, ದಂಪತಿಯನ್ನು ರಿಕ್ಷಾದಿಂದ ಎಳೆದು ರಸ್ತೆ ಮೇಲೆ ಎಸೆದರು. ಬಳಿಕ ನೋಡ ನೋಡುತ್ತಿದ್ದಂತೆ ತಮ್ಮಲ್ಲಿದ್ದ ಮಚ್ಚುಗಳಿಂದ ಮನ ಬಂದಂತೆ ಕತ್ತರಿಸಲಾರಂಭಿಸಿದರು! ಪ್ರತ್ಯಕ್ಷದರ್ಶಿಗಳು ಹೇಳುವ ಪ್ರಕಾರ, ರಾಯ್ ತಲೆಗೆ ಇಬ್ಬರು ದುಷ್ಕರ್ಮಿಗಳು ಮಾರಕಾಸ್ತ್ರವನ್ನು ನುಗ್ಗಿಸಿದ್ದರು. ಜತೆಯಲ್ಲಿದ್ದ ಪತ್ನಿ ರಫಿದಾ ಅವರನ್ನೂ ದುಷ್ಟರು ಬಿಡಲಿಲ್ಲ. ಅವರ ಮೇಲೆಯೂ ಮಾರಣಾಂತಿಕ ಹಲ್ಲೆ ನಡೆಸಿದರು. ಇಷ್ಟೆಲ್ಲ ನಡೆಯುತ್ತಿದ್ದರೂ ಅಲ್ಲಿದ್ದ ಜನರು ಮಾತ್ರ ಸಮನೇ ನೋಡುತ್ತ ನಿಂತಿದ್ದರು ಎಂದರೆ ನಂಬಲೇಬೇಕು. ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದ ರಾಯ್ ಮತ್ತು ಅವರ ಪತ್ನಿ ರಫಿದಾ ಅವರನ್ನು ಢಾಕಾ ಮೆಡಿಕಲ್ ಕಾಲೇಜ್ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಅಷ್ಟೊತ್ತಿಗೆ ರಾಯ್ ಪ್ರಾಣಪಕ್ಷಿ ಹಾರಿ ಹೋಗಿತ್ತು. ತೀವ್ರ ಹಲ್ಲೆಗೊಳಗಾದ ಪತ್ನಿ ರಫಿದಾ ಮಾತ್ರ ಬದುಕುಳಿದರು.
ರಾಯ್ ಕಗ್ಗೊಲೆ ಸುದ್ದಿ ಗೊತ್ತಾಗುತ್ತಿದ್ದಂತೆ ರಾಯ್ ಅವರನ್ನು ಪ್ರೀತಿಸುವವರು, ವಿದ್ಯಾರ್ಥಿಗಳು, ಬ್ಲಾಗರ್ ಢಾಕಾ ವಿಶ್ವವಿದ್ಯಾಲಯದತ್ತ ಧಾವಿಸಿ, ಕೊಲೆಗಾರರನ್ನು ಬಂಧಿಸುವಂತೆ ಒತ್ತಾಯಿಸಿದರು. ಏತನ್ಮಧ್ಯೆ, ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲಿ ‘ಚಾರ್ಲಿ ಹೆಬ್ಡೋ’ ದಾಳಿಗೆ ಸಮೀಕರಿಸಿ ವರದಿಗಳು ಬರಲಾರಂಭಿಸಿದವು. ರಾಯ್ ಕಗ್ಗೊಲೆ ದೆಸೆಯಿಂದ ಅಂತಾರಾಷ್ಟ್ರೀಯ ಮಾಧ್ಯಮ, ಅಂತಾರಾಷ್ಟ್ರೀಯ ಮಾನವಹಕ್ಕುಗಳ ಸಂಘಟನೆ ಬಾಂಗ್ಲಾದೇಶದಲ್ಲಿ ಅಭಿವ್ಯಕ್ತಿ ಸ್ವಾತಂತ್ರ ಹರಣವಾಗುತ್ತಿರುವ ಬಗ್ಗೆ ಕೂಗಲಾರಂಭಿಸದವು.
್ಝ
ರಾಯ್‌ನೊಬ್ಬನದ್ದೇ ಹತ್ಯೆಯೇ?
ಈ ವರೆಗೂ ರಾಯ್ ಮಾತ್ರ ಉಲ್ಬಣಗೊಳ್ಳುತ್ತಿರುವ ಉಗ್ರವಾದ, ಮೂಲಭೂತವಾದಕ್ಕೆ ಬಲಿಯಾಗಿದ್ದಾರಾ? ಖಂಡಿತ ಇಲ್ಲ. ಈ ಬಗ್ಗೆ ‘ಓಪನ್ ಡೆಮಾಕ್ರಸಿ’ ಜಾಲತಾಣಕ್ಕೆ ಮಾಹಿನ್ ಖಾನ್ ಬರೆದ ಲೇಖನ ಇನ್ನಷ್ಟು ಬೆಳಕು ಚೆಲ್ಲುತ್ತದೆ. ರಾಜಕೀಯ ಕಾರಣಕ್ಕೂ ಅನೇಕ ಹತ್ಯೆಗಳೂ ಬಾಂಗ್ಲಾದಲ್ಲಾಗುತ್ತಿವೆ. ೨೦೧೪ರಲ್ಲಿ ಅವಾಮಿ ಲೀಗ್ ಅಧಿಕಾರಕ್ಕೆ ಬಂದ ಮೇಲೆ ಇಂಥ ಕೊಲೆಗಳು, ಹಲ್ಲೆಗಳು ಸಾಕಷ್ಟು ನಡೆದಿವೆ. ನಿತ್ಯ ಪ್ರತಿಭಟನೆಗಳು, ಹರತಾಳಗಳು ಬಾಂಗ್ಲಾದೇಶವನ್ನು ಸ್ತಬ್ಧಗೊಳಿಸಿವೆ. ತೀರಾ ಅಲ್ಪ ಅವಧಿಯಲ್ಲೇ ಸರ್ಕಾರ ಕನಿಷ್ಠ ೨೦೦೦ ಜನರನ್ನು ಬಂಧಿಸಿದೆ. ಅವರಲ್ಲಿ ಬಹುತೇಕರು ಪ್ರತಿಪಕ್ಷದ ಕಾರ್ಯಕರ್ತರು. ಬಾಲಕ-ಬಾಲಕಿಯರೆನ್ನದೇ ಎಲ್ಲರನ್ನೂ ಬಂಧಿಸಲಾಗುತ್ತಿದೆ, ಹಿಂಸಿಸಲಾಗುತ್ತಿದೆ. ಇದಕ್ಕೆ ಉದಾಹರಣೆ ಎಂದರೆ, ಪ್ರತಿಪಕ್ಷದ ನಾಯಕರೊಬ್ಬರ ೧೫ ವರ್ಷದ ಪುತ್ರ ರಿಫ್ತಾ ಅಬ್ದುಲ್ ಖಾನ್‌ನನ್ನು ಬಂಧಿಸಿ, ಅತ್ಯಂತ ಕ್ರೂರವಾಗಿ ಹಿಂಸಿಸಲಾಗಿದೆ. ಎಲ್ಲಕ್ಕಿಂತ ಹೆಚ್ಚಾಗಿ ಜನವರಿ ಮತ್ತು ಫೆಬ್ರವರಿ ತಿಂಗಳಲ್ಲಿ ೫೪ ಜನರನ್ನು ಕೊಲೆ ಮಾಡಲಾಗಿದೆ. ಇವರ ಪೈಕಿ ನಾಲ್ವರ ಶರೀರದಲ್ಲಂತೂ ೬೨ ಬುಲೆಟ್‌ಗಳು ಪತ್ತೆಯಾಗಿವೆ. ಇದೆಲ್ಲ ಏನು ತೋರಿಸುತ್ತದೆ ಎಂದು ಪ್ರಶ್ನಿಸುತ್ತಾರೆ ಮಾಹಿನ್ ಖಾನ್. ರಾಯ್ ಕೊಲೆಯಾದ ತಕ್ಷಣ ಅಂತಾರಾಷ್ಟ್ರೀಯ ಮಾಧ್ಯಮಗಳು ಎಚ್ಚೆತ್ತುಕೊಂಡಂತೆ ಕಾಣಿಸುತ್ತವೆ. ಆದರೆ, ಇಂಥ ಅದೆಷ್ಟೋ ಹೆಣಗಳು ಇಲ್ಲಿ ಉರುಳುತ್ತಿವೆ. ಅವುಗಳ ಬಗ್ಗೆ ಯಾರೂ ಮಾತನಾಡುತ್ತಿಲ್ಲ ಎಂಬುದು ಅವರ ಒಟ್ಟು ಅಭಿಪ್ರಾಯ.
ಮೂಲಭೂತವಾದಕ್ಕೆ ರಾಯ್ ಮಾತ್ರ ಹುತಾತ್ಮನಾಗಿಲ್ಲ. ಇದಕ್ಕೂ ಮೊದಲು ಇದೇ ವ್ಯಕ್ತಿತ್ವದ, ಮುಕ್ತ ಚಿಂತನೆಯನ್ನು ಪ್ರತಿಪಾದಿಸುತ್ತಿದ್ದ ಅಂದರೆ, ೨೦೧೨ರಲ್ಲಿ ಬ್ಲಾಗರ್‌ಗಳಾದ ಸಾಗರ್ ಸರೋವರ್ ಮತ್ತು ಮೆಹೆರ್ರುನ್ ರುನಿ ಜೋಡಿಯನ್ನು ಇದೇ ರೀತಿ ಕೊಲ್ಲಲಾಗಿತ್ತು. ೨೦೧೩ರಲ್ಲಿ ಮತ್ತೊಬ್ಬ ಬ್ಲಾಗರ್ ರಾಜಿಬ್ ಹೈದರ್, ಆಸೀಫ್ ಮೊಹಿದ್ದೀನ್, ಪ್ರೊ.ಷಫಿಉಲ್ ಇಸ್ಲಾಮ್ ಕೂಡಾ ಇಸ್ಲಾಮ್ ಮೂಲಭೂತವಾದಿಗಳ ಅಟ್ಟಹಾಸಕ್ಕೆ ಬಲಿಯಾಗಿದ್ದಾರೆ. ಇನ್ನೂ ಕೆಲವು ಬ್ಲಾಗರ್‌ಗಳನ್ನು ಬಂಧಿಸಿ ಜೈಲಿಗಟ್ಟಲಾಗಿದೆ. ಒಂದೇ ಒಂದು ವ್ಯತ್ಯಾಸವೆಂದರೆ, ಕೆಲವು ಹತ್ಯೆಗಳು ಮಾಧ್ಯಮಗಳಲ್ಲಿ ಒಂದಿಷ್ಟು ಸ್ಥಾನ ಪಡೆದು ಸಂಚಲನ ಸೃಷ್ಟಿಸಿವೆ. ಇನ್ನೊಂದಿಷ್ಟು ಹತ್ಯೆಗಳು ಯಾರ ಕಣ್ಣಿಗೂ ಬೀಳದೆ ಮುಗಿದು ಹೋಗುತ್ತಿವೆ.
್ಝ
ರಾಯ್ ಹತ್ಯೆಯಿಂದಲೂ ಭಾರತಕ್ಕೂ ಪಾಠವಿದೆ. ನಮ್ಮಲ್ಲೂ ಒಂದಿಷ್ಟು ಅಸಹಿಷ್ಣು ಮನಸ್ಸುಗಳು ಇಂಥ ಘಟನೆಗಳಿಗೆ ಕಾರಣವಾಗುತ್ತಿವೆ. ಮಹಾರಾಷ್ಟ್ರದ ವಿಚಾರವಾದಿ ಗೋವಿಂದ್ ಪಣೇಸರ್, ನರೇಂದ್ರ ದಾಬೋಲ್ಕರ್ ಸೇರಿದಂತೆ ಸಾಮಾಜಿಕ, ಆರ್‌ಟಿಐ ಕಾರ್ಯಕರ್ತರು ದುಷ್ಟರ ಅಟ್ಟಹಾಸಕ್ಕೆ ಬಲಿಯಾಗುತ್ತಿದ್ದಾರೆ. ಪ್ರಜಾಪ್ರಭುತ್ವದ ರಾಷ್ಟ್ರಗಳಲ್ಲಿ ಭಿನ್ನಾಭಿಪ್ರಾಯಕ್ಕೂ, ಭಿನ್ನ ಸಿದ್ಧಾಂತಕ್ಕೂ ತನ್ನದೇ ಆದ ಮಹತ್ವವಿದೆ. ಆದರೆ, ಎಲ್ಲವನ್ನೂ ಏಕೀಕೃತ ಸೈದ್ಧಾಂತಿಕ ನೆಲೆಯಲ್ಲಿ ನೋಡುವ ಪ್ರವೃತ್ತಿ ಇತ್ತೀಚೆಗೆ ಹೆಚ್ಚಾಗುತ್ತಿದೆ. ಈ ಪ್ರಕ್ರಿಯೆ ಹೀಗೆಯೇ ಮುಂದುವರಿದರೆ, ಬಹು ಸಾಂಸ್ಕೃತಿಕ, ವೈವಿಧ್ಯದ ಬುನಾದಿಯಲ್ಲೇ ಎದ್ದು ನಿಂತಿರುವ ಭಾರತದ ಕಟ್ಟಡವೂ ಅಲುಗಾಡುವುದರಲ್ಲಿ ಅನುಮಾನವೇ ಇಲ್ಲ.

ಮಲ್ಲಿಕಾರ್ಜುನ ತಿಪ್ಪಾರ
(ಕನ್ನಡಪ್ರಭ-24-3-2015)

ಶುಕ್ರವಾರ, ಮಾರ್ಚ್ 6, 2015

ಭೂಸ್ವಾಧೀನ: ‘ಪರಿವಾರ’ದ ವಿರೋಧ ಮುಚ್ಚಿಟ್ಟು ಕಾಂಗ್ರೆಸ್ ದೂಷಣೆ ಏಕೆ?

ಒಪ್ಪಿಕೊಳ್ಳೋಣ. ದೇಶದ ಅಭಿವೃದಿಟಛಿಗೆ ಕೈಗಾರಿಕೆಗಳು ಬೇಕು. ಲೆಕ್ಕವಿಲ್ಲ ದಷ್ಟು ಅವಕಾಶ ಸೃಷ್ಟಿಯಾಗುವ ದಿನಮಾನ ಗಳಲ್ಲಿ ನಾವು ಬದುಕುತ್ತಿದ್ದೇವೆ. ಒಂಚೂರು ನಿರ್ಲಕ್ಷ್ಯ ವಹಿಸಿದರೂ ಹಿಂದೆ ಬೀಳುತ್ತೇವೆ. ಹಾಗೆಂದ ಮಾತ್ರಕ್ಕೆ, ಕೃಷಿಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿ, ಅದನ್ನೇ ನಂಬಿ ಬದುಕುತ್ತಿರುವ ಕೋಟ್ಯಂತರ ರೈತರ ಹಿತಾಸಕ್ತಿಯನ್ನು ಗಣನೆಗೆ ತೆಗೆದುಕೊಳ್ಳದೇ ಹೋದರೆ ಅದು ಕೂಡ ವ್ಯರ್ಥ. ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಸಂಸತ್ತಿನಲ್ಲಿ ಮಂಡಿಸಿ ಒಪ್ಪಿಗೆ ಪಡೆಯಲು ಹವಣಿಸುತ್ತಿರುವ ಭೂ ಸ್ವಾಧೀನ ಸುಗ್ರೀವಾಜ್ಞೆ ಮೇಲ್ನೋಟಕ್ಕೆ ರೈತ ಪರ, ಅಭಿವೃದಿಟಛಿ ಪರ ಕಂಡರೂ ಆಂತರ್ಯದಲ್ಲಿ ಬೇರೆಯದ್ದೇ ರೈತರ ಕೈ ಕಚ್ಚುವ ಆಯಾಮಗಳಿವೆ. ಹಾಗಾಗಿಯೇ ದೇಶದ ಎಲ್ಲ ರೈತ ವರ್ಗ, ಸಂಘಟನೆಗಳು, ಬಹುತೇಕ ಎಲ್ಲ ರಾಜಕೀಯ ಪಕ್ಷಗಳು ಇದನ್ನು ಖಡಾಖಂಡಿತವಾಗಿ ಖಂಡಿಸುತ್ತಿವೆ.
‘ಗುಜರಾತ್ ಭೂ ಸ್ವಾಧೀನ ಪರಿ, ಇದು ವಿಶ್ವಾಸ ಇಡಬಹುದಾದ ದಾರಿ’ ಲೇಖನದಲ್ಲಿ ಶ್ರೀನಿವಾಸ ರಾವ್ ಅವರು ಪ್ರತಿಪಾದಿಸಿರುವಂತೆ ಕೇವಲ ಕಾಂಗ್ರೆಸ್ ಮಾತ್ರ ಈ ಸುಗ್ರೀವಾಜ್ಞೆಯನ್ನು ವಿರೋಧಿಸುತ್ತಿಲ್ಲ. ಒಂದು ವೇಳೆ, ಕಾಂಗ್ರೆಸ್ ಮಾತ್ರ ವಿರೋಧಿಸುತ್ತಿದ್ದರೆ ನರೇಂದ್ರ ಮೋದಿ ಕೂಡ ಸುಗ್ರೀವಾಜ್ಞೆಯನ್ನು ಅಷ್ಟೊಂದು ಪ್ರತಿಷ್ಠೆಯಾಗಿ ಪರಿಗಣಿಸುತ್ತಿರಲ್ಲಿಲ್ಲ. ಕಾಂಗ್ರೆಸ್ ಎಲ್ಲದರಲ್ಲೂ ರಾಜಕೀಯ ಮಾಡುತ್ತಿದೆ ಎಂದು ಸುಮ್ಮನಿರಬಹುದಿತ್ತು.
ಆದರೆ, ಎನ್‌ಡಿಎ ಮಿತ್ರ ಪಕ್ಷಗಳಾದ ಶಿರೋಮಣಿ ಅಕಾಲಿ ದಳ ಮತ್ತು ಶಿವಸೇನೆ ಕೂಡ ಈ ಸುಗ್ರೀವಾಜ್ಞೆಯನ್ನು ತೀವ್ರವಾಗಿ ವಿರೋಧಿಸುತ್ತಿವೆ. ಜೊತೆಗೆ ಈಗಿನ ಸ್ಥಿತಿಯಲ್ಲೇ ಕಾಯ್ದೆಯಾಗುವುದಕ್ಕೆ ತಮ್ಮ ವಿರೋಧವಿದೆ ಎಂದು ಹೇಳಿವೆ. ಈ ಪಕ್ಷಗಳನ್ನು ಬಿಟ್ಹಾಕಿ. ಈ ಎರಡೂ ಪಕ್ಷಗಳು ತಮ್ಮ ರಾಜಕೀಯ ಹಿತಾಸಕ್ತಿಗೋ ಸ್ಕರವೇ ವಿರೋ ಧಿ ಸು ತ್ತಿವೆ ಎಂದಿಟ್ಟುಕೊಳ್ಳೋಣ. ಬಿಜೆಪಿಯ ಮಾತೃಸಂಸ್ಥೆ ಯಾದ ಆರ್‌ಎಸ್ ಎಸ್‌ನ ಭಾರತೀಯ ಕಿಸಾನ್ ಸಂಘ (ಬಿಕೆಎಸ್), ಭಾರತೀಯ ಮಜ್ದೂರ್ ಸಂಘ ಮತ್ತು ಸ್ವದೇಶಿ ಜಾಗರಣ ಮಂಚ್ ಕೂಡ ವಿರೋಧ ವ್ಯಕ್ತಪಡಿಸಿವೆ. ಇದಕ್ಕೇನಂತೀರಿ? ಇಷ್ಟೆಲ್ಲ ವಿರೋಧ ಕ್ತವಾಗುತ್ತಿದೆಯೆಂದರೆ, ಬಿಜೆಪಿ ನೇತೃತ್ವದ ಎನ್‌ಡಿಎ ಹೊರಡಿಸಿರುವ ಸುಗ್ರೀವಾಜ್ಞೆಯಲ್ಲಿ ಖಂಡಿತವಾಗಿಯೂ ರೈತ ಹಿತಾಸಕ್ತಿ ವಿರೋಧಿ ಅಂಶಗಳು ಇರಲೇಬೇಕು ಅಲ್ಲವೇ? ಭೂಮಿ ಕೊಡುವ ರೈತನಿಗೆ ಮಾರುಕಟ್ಟೆ ದರಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ, ಅತ್ಯಂತ ಶೀಘ್ರದಲ್ಲೇ ಪರಿಹಾರ ನೀಡುತ್ತೇವೆ ಎಂಬುದು ಮಾತ್ರವೇ ರೈತ ಪರ ಅಂಶವೇ? ಹೀಗೆ, ಕೇವಲ ಹಣದಾಸೆಗೆ ಭೂಮಿ ನೀಡಿದ ರೈತರ ಸ್ಥಿತಿ ಈಗ ಹೇಗಿದೆ ಎಂಬುದನ್ನು ತಾವು ಆಲಮಟ್ಟಿ ಅಣೆಕಟ್ಟೆ ಸಂತ್ರಸ್ತರ ಸದ್ಯದ ಸ್ಥಿತಿ ಚೂರು ಗಮನಿಸಿದರೆ ಅರ್ಥವಾದೀತು. ಇಂಥ ಸ್ಥಿತಿ ದೊಡ್ಡ ದೊಡ್ಡ ಯೋಜನೆಗಳಿಗಾಗಿ ಭೂಮಿ ನೀಡಿದ ದೇಶದ ಬಹುತೇಕ ರೈತರದ್ದಾಗಿದೆ. ಸರ್ಕಾರವೇ ಆಗಿರಲಿ, ಖಾಸಗಿ ಕಂಪನಿಗಳೇ ಆಗಿರಲಿ, ಭೂಮಿ ಪಡೆಯುವಾಗ ಮನೆಗೊಬ್ಬರಿಗೆ ಕೆಲಸ ಕೊಡುತ್ತೇವೆ, ಆಸ್ಪತ್ರೆ ಕಟ್ಟಿ ಕೊಡುತ್ತೇವೆ, ಶಾಲೆ ಕಟ್ಟಿಸ್ತೀವಿ, ರಸ್ತೆ ಮಾಡುತ್ತೇವೆ ಎಂದು ಹೇಳುತ್ತಾರೆ. ಈ ಭರವಸೆಗಳು ಈಡೇರಿವೆಯೇ? ಖಂಡಿತ ಇಲ್ಲ. ಕಾಂಗ್ರೆಸ್ ಇಲ್ಲವೇ ಎಡಪಕ್ಷಗಳ ಜತೆ ಗುರುತಿಸಿಕೊಂಡಿರುವ ರೈತ ಸಂಘಟನೆಗಳ ವಿರೋಧವನ್ನು ಕೂಡ ಒಂದು ಹಂತದಲ್ಲಿ ತಳ್ಳಿ ಹಾಕಬಹು ದಿತ್ತು. ಆದರೆ, ಭಾರತೀಯ ಕಿಸಾನ್ ಸಂಘ, ಭಾರತೀಯ ಮಜ್ದೂರ್ ಸಂಘಗಳೂ ಅಷ್ಟೇ ಪ್ರಬಲವಾಗಿ ವಿರೋಧಿಸುತ್ತಿವೆ. ಭಾರತೀಯ ಕಿಸಾನ್ಸಂಘವಂತೂ ೨೫೦ ಸಂಸದರಿಗೆ ಪತ್ರ ಬರೆದು, ಸುಗ್ರೀವಾಜ್ಞೆಯನ್ನು
ಬೆಂಬಲಿಸದಂತೆ ಕೋರಿವೆ. ಇನ್ನೂ ಆಸಕ್ತಿಕರ ಸಂಗತಿ ಎಂದರೆ, ಸಂಘ ಯಾವ ಯಾವ ಸಂಸದರನ್ನು ಕೇಳಿಕೊಂಡಿದೆಯೋ ಅವರೆಲ್ಲರೂ ತಮ್ಮ ವಿರೋಧವನ್ನು ದಾಖಲಿಸಿದ್ದಾರೆ ಎನ್ನುತ್ತಾರೆ ಭಾರತೀಯ ಕಿಸಾನ್ಸಂ ಘದ ಅಧ್ಯಕ್ಷ ಪ್ರಭಾಕರ್ ಕೇಳ್ಕರ್. ಅಂದರೆ, ಕೇವಲ ರಾಜಕೀಯ ಪಕ್ಷಗಳು, ರೈತ ಸಂಘಟನೆಗಳು ಮಾತ್ರವಲ್ಲದೆ, ಸಂಸದರು ಕೂಡ ಇದಕ್ಕೆ ತಮ್ಮ ಅಸಮ್ಮತಿ ತೋರುತ್ತಿದ್ದಾರೆ ಎಂದರ್ಥವಲ್ಲವೇ? ಅಷ್ಟೇ ಅಲ್ಲ, ಸುಗ್ರೀವಾಜ್ಞೆ ಖಂಡಿತವಾಗಿಯೂ ಕಾರ್ಪೊರೇಟ್ ಕಂಪನಿಗಳ ಪರವಾಗಿಯೇ ಇದೆ ಎಂಬುದು ಖಚಿತವಾಗುತ್ತಿದೆ.
ಶ್ರೀನಿವಾಸ್ ರಾವ್ ಅವರು ತಮ್ಮ ಲೇಖನದಲ್ಲಿ ಈಗಿರುವ ಸುಗ್ರೀವಾಜ್ಞೆ ಗುಜರಾತ್‌ನಲ್ಲಿ ಈಗಾಗಲೇ ಜಾರಿಯಲ್ಲಿರುವ ಕಾಯ್ದೆಯ ಸಂಗತಿಗಳನ್ನು ತನ್ನ ಒಡಲೊಳಗೆ ಇಟ್ಟುಕೊಂಡಿದೆ. ಅಲ್ಲಿ ರೈತರು ಇದನ್ನು ಒಪ್ಪಿಕೊಂಡಿರುವಾಗ ದೇಶದ ಇತರೆ ರೈತರು ಯಾಕೆ ಒಪ್ಪಿಕೊಳ್ಳಬಾರದು ಎಂಬ ಧಾಟಿಯಲ್ಲಿ ಹೇಳಿದ್ದಾರೆ. ಇದು ಒಪ್ಪತಕ್ಕ ಮಾತಲ್ಲ. ಗುಜರಾತ್ ರೈತರು ಒಪ್ಪಿಕೊಂಡ ತಕ್ಷಣ ಬೇರೆಯವರು ಒಪ್ಪಿಕೊಳ್ಳಲೇಬೇಕೆಂಬ ಸರ್ವಾಧಿಕಾರದ ದನಿ ಸಲ್ಲ. ಇನ್ನು ಸುಪ್ರೀಂ ಕೋರ್ಟ್‌ನ ಉದಾಹರಣೆ ನೀಡಿದ್ದಾರೆ. ಆದರೆ, ಕೋರ್ಟ್ ಆ ಮಾತು ಹೇಳಬೇಕಾದರೆ, ಯಾವ ಸಂದರ್ಭದಲ್ಲಿ ಮತ್ತು ಏತಕ್ಕಾಗಿ ಹಾಗೆ ಹೇಳಿದೆ ಎಂಬುದನ್ನು ಕೂಡ ಅಷ್ಟೇ ಮುಖ್ಯವಾಗುತ್ತದೆ. ಅದೇ ರೀತಿ, ಈ ಸುಗ್ರೀವಾಜ್ಞೆ ವಿರುದಟಛಿ ಕಾಂಗ್ರೆಸ್‌ನ ಪಿತೂರಿಯೇ ಹೆಚ್ಚಾಗಿ ಎಂಬರ್ಥದಲ್ಲಿ ಮಾತನಾಡಿದ್ದಾರೆ. ಅದನ್ನು ಒಪ್ಪಿಕೊಳ್ಳಲಾಗದು. ಅದು ಅಷ್ಟೇ ಆಗಿದ್ದರೆ ಈ ಪರಿ, ಇಷ್ಟೊಂದು ವ್ಯಾಪಕವಾಗಿ ವಿರೋಧ ವ್ಯಕ್ತವಾಗುತ್ತಿರಲಿಲ್ಲ. ಅಣ್ಣಾ ಹಜಾರೆ ಕೂಡ ಧರಣಿಗೆ ಧುಮುಕುತ್ತಿರಲಿಲ್ಲ. ದೇಶದ ರೈತ ಸಂಘಟನೆಗಳು ಒಂದೇ ದನಿಯಲ್ಲಿ ಮಾತನಾಡುತ್ತಿರಲಿಲ್ಲ. ಭ್ರಷ್ಟಾಚಾರ ವಿರುದಟಛಿ ಚಳವಳಿ ನಡೆಸಿದ ಅಣ್ಣಾ ಹಜಾರೆ ಆಗ ಬಿಜೆಪಿಗೆ ಹೀರೋ ಆಗಿದ್ದರು. ಈಗ ಭೂಸ್ವಾಧೀನ ಸುಗ್ರೀವಾಜ್ಞೆ ವಿರುದಟಛಿ ದನಿ ಎತ್ತುತ್ತಿದ್ದಂತೆ ಅವರು ವಿಲನ್ ಥರ
ಕಾಣಿಸುತ್ತಿದ್ದಾರೆ. ಎಂಥ ವಿಪರ್ಯಾಸ ನೋಡಿ!
ಅಷ್ಟಕ್ಕೂ ಈ ಸುಗ್ರೀವಾಜ್ಞೆಗೆ ಯಾಕೆ ವಿರೋಧ ವ್ಯಕ್ತವಾಗುತ್ತಿದೆಯೆಂದರೆ: ೨೦೧೪ ಜನವರಿ ೧ರಿಂದ ಜಾರಿಯಾಗಿರುವ ಛಿ ್ಕಜಿಜಠಿ ಠಿಟ ಊಜ್ಟಿ ಇಟಞಛ್ಞಿಠಿಜಿಟ್ಞ ಚ್ಞ ಖ್ಟಚ್ಞಚ್ಟಛ್ಞ್ಚಿ ಜ್ಞಿ ಔಚ್ಞ ಅಟ್ಠಿಜಿಜಿಠಿಜಿಟ್ಞ, ್ಕಛಿಚಿಜ್ಝಿಜಿಠಿಠಿಜಿಟ್ಞ ಚ್ಞ ್ಕಛಿಛಿಠಿಠ್ಝಿಛಿಞಛ್ಞಿಠಿ ಕಾಯ್ದೆಗೆ ಸಂಬಂಧಿಸಿದಂತೆ ತರಲಾಗಿರುವ ಸುಗ್ರೀವಾಜ್ಞೆಯಲ್ಲಿ ಕೆಲವು ಅಂಶಗಳು ಸಂಪೂರ್ಣವಾಗಿ ರೈತ ಹಿತಾಸಕ್ತಿ ಯನ್ನು ಕಡೆಗಣಿಸಿವೆ. ಅದರಲ್ಲೂ ವಿಶೇಷವಾಗಿ ಸೆಕ್ಷನ್ ೧೦(ಎ)ಗೆ ಸಂಬಂಧಿಸಿ ದಂತೆ, ಕಾಯ್ದೆಯಲ್ಲಿ ಹೇಳಿರುವ ರಾಷ್ಟ್ರೀಯ
ಹೆದ್ದಾರಿ, ಭದ್ರತೆ, ರಕ್ಷಣೆ, ಗ್ರಾಮೀಣ ಮೂಲಭೂತ ಸೌಕರ್ಯ,
ಕೈಗಾರಿಕಾ ಕಾರಿಡಾರ್‌ಗಳಿಗೆ ಸಂಬಂಧಿಸಿದಂತೆ ಈ ಭೂಸ್ವಾಧೀನ ಮಾಡುವಾಗ ರೈತರ ಒಪ್ಪಿಗೆಯನ್ನು ಕಡ್ಡಾಯವಾಗಿ ಪಡೆಯಲೇ ಬೇಕಿಲ್ಲ. ಈ ಹಿಂದೆ ಸರ್ಕಾರಿ ಪ್ರಯೋಜ ನಕ್ಕೆ ಭೂಸ್ವಾಧೀನ ಮಾಡಿಕೊಳ್ಳುವಾಗ ಸಂಬಂಧಿಸಿದ ಶೇ.೭೦ರಷ್ಟು ಮತ್ತು ಖಾಸಗಿ ಉದ್ದೇಶಕ್ಕಾಗಿ ಸ್ವಾಧೀನ ಮಾಡಿಕೊಳ್ಳುವಾಗ ಶೇ.೮೦ರಷ್ಟು ರೈತರ ಒಪ್ಪಿಗೆ ಪಡೆಯಲೇಬೇಕಿತ್ತು. ಈಗಿರುವ ಸುಗ್ರೀವಾಜ್ಞೆಯಲ್ಲಿ ಇದಕ್ಕೆ ಅವಕಾಶವಿಲ್ಲ. ಸರ್ಕಾರಕ್ಕೆ ಬೇಕಾದ ಜಮೀನನ್ನು ನೇರವಾಗಿ ಸ್ವಾಧೀನಪಡಿಸಿಕೊಳ್ಳಬಹುದು. ಅಷ್ಟೇ ಅಲ್ಲದೆ, ಈ ಹಿಂದೆ ಇದ್ದ ಕಾಯ್ದೆಯಲ್ಲಿ ಸೋಷಿಯಲ್ ಇಂಪ್ಯಾಕ್ಟ್ ಅಸೆಸ್ ಮೆಂಟ್(ಎಸ್‌ಎಐ) ಕೂಡ ಮಾನ್ಯ ಮಾಡಬೇಕಾದ
ಅಗತ್ಯವಿಲ್ಲ. ಸ್ವಾಧೀನ ಪ್ರಕ್ರಿಯೆಯ ವೇಳೆ ನಿಯಮಗಳನ್ನು ಉಲ್ಲಂಘಿಸಿದ ಯಾವುದೇ ಅಧಿಕಾರ ವಿರುದಟಛಿ ನೇರವಾಗಿ ಕ್ರಮ ಕೈಗೊಳ್ಳುವ ಅಧಿಕಾರವಿತ್ತು. ಈಗಿನ ತಿದ್ದುಪಡಿಯಲ್ಲಿ ಹಾಗೇನಾದರೂ ಆದರೆ, ಅದಕ್ಕೆ ಸರ್ಕಾರದಿಂದ ಒಪ್ಪಿಗೆ ಪಡೆಯಲೇಬೇಕು. ಒಂದು ವೇಳೆ, ಸ್ವಾಧೀನಪಡಿಸಿಕೊಂಡ ಜಾಗದಲ್ಲಿ ಕೈಗಾರಿಕೆಗಳನ್ನು ೫ ವರ್ಷಗಳವರೆಗೂ ಸ್ಥಾಪಿಸಲಿಲ್ಲ ಎಂದಿಟ್ಟುಕೊಳ್ಳಿ. ಆಗ, ಮತ್ತೆ ಸ್ವಾಧೀನಕ್ಕೆ ಮೊದಲಿನಿಂದ ಪ್ರಕ್ರಿಯೆ ಆರಂಭಿಸಬೇಕಿತ್ತು. ಆದರೆ, ಈಗ ಈ ಮಿತಿಯನ್ನು ತೆಗೆದು ಹಾಕಲಾಗಿದೆ. ಒಮ್ಮೆ ಸ್ವಾಧೀನವಾದರೆ ಮುಗೀತು. ಅದು ಸರ್ಕಾರದ ವಶದಲ್ಲೇ ಇರುತ್ತದೆ. ಹೀಗೆ, ಭೂಮಿಯನ್ನು ಸರ್ಕಾರದ ಉದ್ದೇಶಕ್ಕಾಗಿ ಇಲ್ಲವೇ ಖಾಸಗಿ ಉದ್ದೇಶಕ್ಕಾಗಲಿ ವಶಪಡಿಸಿಕೊಂಡಾಗ, ರೈತರು ತಮ್ಮ ಜಮೀನಿನ ಹಕ್ಕನ್ನು ಸಂಪೂರ್ಣವಾಗಿ ಕಳೆದುಕೊಳ್ಳುತ್ತಾರೆ. ಇಂಥ ಸೂಕ್ಷ್ಮವಾದ ಅನೇಕ ಸಂಗತಿಗಳು ಮೋದಿ ಸರ್ಕಾರ ಹೊರಡಿಸಿರುವ ಸುಗ್ರೀವಾಜ್ಞೆಯಲ್ಲಿವೆ. ಈ ಎಲ್ಲದರ ಬಗ್ಗೆ ಸಾರ್ವಜನಿಕವಾಗಿ ಚರ್ಚೆಯಾಗಬೇಕೆಂಬುದು ಎಲ್ಲರ ಅಪೇಕ್ಷೆ. ಕೇವಲ ವಶಪಡಿಸಿಕೊಂಡ ಭೂಮಿಗೆ ಪಾರದರ್ಶಕವಾಗಿ, ಶೀಘ್ರವಾಗಿ ಹಣ ನೀಡುತ್ತೇವೆ, ನೀವು ಭೂಮಿ ಕೊಡಿ ಎಂದರೆ ಹೇಗೆ? ಸ್ವಾಧೀನಕ್ಕೆ ಇದೇ ಪ್ರಮುಖ ಸಂಗತಿಯಾದರೆ ಹೇಗೆ? ಭೂ ಸ್ವಾಧೀನ ನಂತರ ಸಂತ್ರಸ್ತರಾಗುವ ಜನರ ಸ್ಥಿತಿ ಏನಾಗಬೇಡ? ಇಂಥ ಎಲ್ಲ ಅಂಶಗಳ ಬಗ್ಗೆ
ಚರ್ಚೆಯಾಗದೆ, ‘ಮೇಕ್ ಇನ್ ಇಂಡಿಯಾ’ಗೋಸ್ಕರ, ಅತಿ ಕಡಿಮೆ ಅವಧಿಯಲ್ಲೇ ಜನರಿಗೆ ‘ಅಚ್ಛೇ ದಿನಗಳ ್ಛಛಿಛ್ಝಿ’ ಕೊಡುವುದಕ್ಕೆ ಫಲವತ್ತಾದ ಕೃಷಿ ಭೂಮಿಯನ್ನು ಕೂಡ ಕೊಡಲೇಬೇಕು ಎಂಬ ಸರ್ಕಾರದ ಸರ್ವಾಧಿಕಾರದ ಧೋರಣೆ ವಿರುದಟಛಿ ಸಿಡಿದೇಳುವುದು ಅಪರಾಧವೇ? ಪ್ರಧಾನಿ ಮೋದಿ ಎಲ್ಲವನ್ನೂ ಸರಿಯಾಗೇ ಮಾಡುತ್ತಾರೆ. ಅವರನ್ನು ನಂಬಿ ಎಂದರೆ ಹೇಗೆ? ಒಂದು ಕಾಯ್ದೆಯಾಗಿ ರೂಪಗೊಳ್ಳಬೇಕಿದ್ದರೆ ಅದು ಸಾರ್ವಜನಿಕವಾಗಿ ಚರ್ಚೆಯಾಗಲೇಬೇಕು. ಅದನ್ನೇ ಕಾಂಗ್ರೆಸ್ ಸೇರಿದಂತೆ ಎಲ್ಲ ಪ್ರತಿಪಕ್ಷಗಳು, ರೈತ ಸಂಘಟನೆಗಳು ಕೇಳುತ್ತಿವೆ. ಅದನ್ನೇ ತಪ್ಪು ಎಂದರೆ ಹೇಗೆ?