ಆ ಮುದುಕಿ ಮಲಗಿದ್ದಾಳೆ
ಚೆನ್ನೈನ ಆ ಜನನಿಬಿಡ ರಸ್ತೆಯಲ್ಲಿ
ಹಾಗೇ ಹೋಗಿ ಬರುವವರನ್ನು ನೋಡುತ್ತಾಳೆ
ಸ್ಥಿತ ಪ್ರಜ್ಞೆ ಕಣ್ಣುಗಳಿಂದ..
ಅವರು ನೋಡುತ್ತಾರೆ ಅವಳನ್ನು.
ಕರುಣೆ ಇದ್ದವರು ಕಾಸು ಎಸೆಯುತ್ತಾರೆ
ಇಲ್ಲದವರು ಕಿಸಕ್ಕೆಂದು ನಕ್ಕು ಮುನ್ನಡೆಯುತ್ತಾರೆ
ಅವಳ ಮಲಗಿದ ಶೈಲಿಯೋ..
ವಿಷ್ಣು ಕಮಲಾರೂಢ ರೀತಿ
ಅವಳಗಿಲ್ಲ ಯಾರದೋ ಭೀತಿ
ದಿನಕರ ದಿನ ಬೆಳಗಿ ಮುಳುಗೋವರೆಗೂ
ಹಾಗೆಯೇ ಮಲಗಿರುತ್ತಾಳೆ
ಅವಳ ಸುತ್ತ ಬಿದ್ದ ಕಾಸು ಒಮ್ಮೊಮ್ಮೆ ಕಿಸಕ್ಕೇನ್ನುತ್ತದೆ..
ಮಹಾನಗರದ ಸಮಸ್ತ ಆಗು ಹೋಗು ಕಂಡು.
ಅವಳು ಈಗಮ್ಮೊ..ಆಗೊಮ್ಮೆ
ತನ್ನಡೆಗೆ ಬರುವ ವಾಹನ, ಸೂಟು-ಬೂಟುಧಾರಿಗಳನ್ನುನೋಡುತ್ತಾಳೆ...
ಏನೋ ಹೇಳಲು ಹೋಗುತ್ತಾಳೆ.
ಮಾತು ಮಾತ್ರ ಗಂಟಲಲ್ಲೇ ಉಳಿಯುತ್ತದೆ
ಮತ್ತ ಅದೇ ಸ್ಥಿತ ಪ್ರಜ್ಞೆ ದೃಷ್ಠಿ, ತದೇಕ ಚಿತ್ತ ಎಲ್ಲರತ್ತ
ಬಸಗಾಗಿ ಕಾಯುತ್ತ
ನೋಡುತ್ತೇನೆ ನಾನು ಅವಳತ್ತ
ಅವಳು ಮಾತ್ರ ಕಾಸು-ಪಾಸು ಎನ್ನುತ್ತ
ಇನ್ನಾವುದರತ್ತ ಹರಿಸಿ ಚಿತ್ತ
ನಗುತ್ತಾಳೆ. ಬಸ್ ಬಂತೆಂದು ಧಾವಿಸುವಾಗ
ಒಂದು- ಎರಡೋ ರೂಪಾಯಿ ಎಸೆಯುತ್ತೇನೆ
ಅವಳು ಮಾತ್ರ ಹಾಗೇ ಮಲಗಿರುತ್ತಾಳೆ.
-ಮಲ್ಲಿ
ಬುಧವಾರ, ಏಪ್ರಿಲ್ 4, 2007
ಬುಧವಾರ, ಮಾರ್ಚ್ 21, 2007
ಸಾವಿನ ಮನೆಯೆಡೆಗೆ...
ಎದ್ದು ನಡೆಯುತ್ತಿದ್ದೇನೆ ಸಾವಿನ ಮನೆಯೆಡೆಗೆ
ಸಂಬಂಧಗಳ ಸಹವಾಸ ಸಾಕು ಎಂದು
ಇರಬಹುದು ಬದುಕುವದಕ್ಕೆ ಕಾರಣಗಳು ನೂರಾರು
ನಾಯುವುದಕ್ಕೆ ನನಗೆ ಕಾರಣಗಳು ಸಾವಿರಾರು
ಬಂಧ-ಅನುಬಂಧಗಳ ಹುಡಕಾಟದಲ್ಲಿ
ದೇಹ-ಮನಸ್ಸು ಜರ್ಜರಿತ
ಕೊನೆಗೂ ನಿಲುಕುಲಿಲ್ಲ
ನಾ ಬಯಿಸಿದ ಸಬಂಧ
ಬಯಿಸಿದ್ದಾದರೂ ಏನು...
ಬಯಿಸಿದ್ದಾದರೂ ಏನು...
ಬೊಗೆಸೆಯಷ್ಟು ಪ್ರೀತಿ
ಸಿಕ್ಕಿದ್ದೇಷ್ಟು ಸಾಸಿವೆ ಕಾಳದಷ್ಟು ಅಲ್ಲ.
ಎದ್ದು ನಡೆಯುತ್ತಿದ್ದೇನೆ ಸಾವಿನ ಮನೆಯೆಡೆಗೆ
ಅಲ್ಲಿ ಎಲ್ಲೋ ನಗುತ್ತಿವೆ
ಹಳಸಿದ ಸಂಬಂಧಗಳು
ನನ್ನ ಕಥೆ-ವ್ಯಥೆ ಕಂಡು..
ನಗಲಿ, ನಕ್ಕು ನಕ್ಕು ಅಳಲಿ
ನಗಲಿ, ನಕ್ಕು ನಕ್ಕು ಅಳಲಿ
ಬಳಲಿ ಬೆಂಡಾಗಲಿ..
ನನಗಿಲ್ಲ ಅದರ ಚಿಂತೆ
ಜೀವವನ್ನೇ ಧಿಕ್ಕರಿಸೇದ್ದವನಿಗೆ
ಇನ್ನಾವದರ ಚಿಂತೆ
ತೊಡೆದು ಹಾಕಿ ಎಲ್ಲ ಭ್ರಾಂತಿ
ಸಾಗುತ್ತಿದ್ದೇನೆ ಎಲ್ಲಿಯೂ ನಿಲ್ಲದಂತೆ
ಸಾವಿನ ಮನೆಯೆಡೆಗೆ..
ನಗುವನ್ನೇ ಮರೆತವನಿಗೆ ಅಳುವಿನ ಚಿಂತೆಯೇ
ಬದುಕನ್ನು ಬೇಡ ಎಂದವನಿಗೆ ಸಾವಿನ ಅಂಜಿಕಿಯೇ
ಬದುಕು ಬವಣೆಗಳ ತಲ್ಲಣದಿಂದ
ಹೊರಬರುವುದೇ ಈ ಕ್ಷಣದ ಸತ್ಯ; ಸಾವೇ ಸಾಂಗತ್ಯ
ನೀವು ಅನ್ನಬಹುದು ನಿರಾಶಾವಾದಿ
ಆದರೆ, ಇದು ಸತ್ಯ ಆಶೆಯಲ್ಲಿ ನಿರಾಶೆ
ಮನಗಂಡವರಿಗೆ ಮಾತ್ರ
ನನ್ನ ಭಾವ ಆಗುವುದು ಅರ್ಥ
ಎದ್ದು ನಡೆಯುತ್ತಿದ್ದೇನೆ ಸಾವಿನ ಮನೆಯೆಡೆಗೆ
-ಮಲ್ಲಿ
ಸಾವಿನ ಮನೆಯೆಡೆಗೆ...
ಎದ್ದು ನಡೆಯುತ್ತಿದ್ದೇನೆ ಸಾವಿನ ಮನೆಯೆಡೆಗೆ
ಸಂಬಂಧಗಳ ಸಹವಾಸ ಸಾಕು ಎಂದು
ಇರಬಹುದು ಬದುಕುವದಕ್ಕೆ ಕಾರಣಗಳು ನೂರಾರು
ನಾಯುವುದಕ್ಕೆ ನನಗೆ ಕಾರಣಗಳು ಸಾವಿರಾರು
ಬಂಧ-ಅನುಬಂಧಗಳ ಹುಡಕಾಟದಲ್ಲಿ
ದೇಹ-ಮನಸ್ಸು ಜರ್ಜರಿತ
ಕೊನೆಗೂ ನಿಲುಕುಲಿಲ್ಲ
ನಾ ಬಯಿಸಿದ ಸಬಂಧ
ಬಯಿಸಿದ್ದಾದರೂ ಏನು...
ಬಯಿಸಿದ್ದಾದರೂ ಏನು...
ಬೊಗೆಸೆಯಷ್ಟು ಪ್ರೀತಿ
ಸಿಕ್ಕಿದ್ದೇಷ್ಟು ಸಾಸಿವೆ ಕಾಳದಷ್ಟು ಅಲ್ಲ.
ಎದ್ದು ನಡೆಯುತ್ತಿದ್ದೇನೆ ಸಾವಿನ ಮನೆಯೆಡೆಗೆ
ಅಲ್ಲಿ ಎಲ್ಲೋ ನಗುತ್ತಿವೆ
ಹಳಸಿದ ಸಂಬಂಧಗಳು
ನನ್ನ ಕಥೆ-ವ್ಯಥೆ ಕಂಡು..
ನಗಲಿ, ನಕ್ಕು ನಕ್ಕು ಅಳಲಿ
ನಗಲಿ, ನಕ್ಕು ನಕ್ಕು ಅಳಲಿ
ಬಳಲಿ ಬೆಂಡಾಗಲಿ..
ನನಗಿಲ್ಲ ಅದರ ಚಿಂತೆ
ಜೀವವನ್ನೇ ಧಿಕ್ಕರಿಸೇದ್ದವನಿಗೆ
ಇನ್ನಾವದರ ಚಿಂತೆ
ತೊಡೆದು ಹಾಕಿ ಎಲ್ಲ ಭ್ರಾಂತಿ
ಸಾಗುತ್ತಿದ್ದೇನೆ ಎಲ್ಲಿಯೂ ನಿಲ್ಲದಂತೆ
ಸಾವಿನ ಮನೆಯೆಡೆಗೆ..
ನಗುವನ್ನೇ ಮರೆತವನಿಗೆ ಅಳುವಿನ ಚಿಂತೆಯೇ
ಬದುಕನ್ನು ಬೇಡ ಎಂದವನಿಗೆ ಸಾವಿನ ಅಂಜಿಕಿಯೇ
ಬದುಕು ಬವಣೆಗಳ ತಲ್ಲಣದಿಂದ
ಹೊರಬರುವುದೇ ಈ ಕ್ಷಣದ ಸತ್ಯ; ಸಾವೇ ಸಾಂಗತ್ಯ
ನೀವು ಅನ್ನಬಹುದು ನಿರಾಶಾವಾದಿ
ಆದರೆ, ಇದು ಸತ್ಯ ಆಶೆಯಲ್ಲಿ ನಿರಾಶೆ
ಮನಗಂಡವರಿಗೆ ಮಾತ್ರ
ನನ್ನ ಭಾವ ಆಗುವುದು ಅರ್ಥ
ಎದ್ದು ನಡೆಯುತ್ತಿದ್ದೇನೆ ಸಾವಿನ ಮನೆಯೆಡೆಗೆ
-ಮಲ್ಲಿ
ಶನಿವಾರ, ಮಾರ್ಚ್ 17, 2007
ಮುಂಗಾರು ಸಿಂಚನ
ಮಲ್ಲಿಗೆಯ ಮುಖಕ್ಕೆ ಮುಂಗಾರು ಸಿಂಚನ
ಚಿತ್ತ ಚಿತ್ತಾರ ಮೂಡಿಸಿದೆ
ಆ ನಿನ್ನ ಕರಿ ಮುಂಗುರುಳಿನ ಕುಂಚ
ನನ್ನೆದೆಯ ಬಾಂದಳವೆಲ್ಲ ಕಂಪನ
ಸ್ನಿಗ್ಧ ಸೌಂದರ್ಯದ ಸುರತಿ
ನನ್ನ ನಗುವೆಲ್ಲಾ ನೀನು
ನನ್ನ ಕನಸು,ಕನವರಿಕೆ ನೀನು
ನೀನಿಲ್ಲದ ಬಾಳು ಬಾಳೇ..?
ಸಾವಿರ ಸಂಕೋಲೆ ದಾಟಿ
ಕೈಹಿಡಿವೆ ಈ ಜಗವ ಮೀಟಿ
ನೀನೊಬ್ಬಳಿದ್ದರೆ ಸಾಕು
ಕಾಲ ಕೆಳಗೆ ಆ ನಾಕು
ನಿನ್ನ ನಗುವಿನ ಅಲೆಗಳು
ನನ್ನ ಯಶಸ್ಸಿನ ಕಲೆಗಳು
ಆ ಅಳು, ದು:ಖ ದುಮ್ಮಾನ
ಇರಲಿ ಕಡಲಾಚೆ....
-Malli
ಚಿತ್ತ ಚಿತ್ತಾರ ಮೂಡಿಸಿದೆ
ಆ ನಿನ್ನ ಕರಿ ಮುಂಗುರುಳಿನ ಕುಂಚ
ನನ್ನೆದೆಯ ಬಾಂದಳವೆಲ್ಲ ಕಂಪನ
ಸ್ನಿಗ್ಧ ಸೌಂದರ್ಯದ ಸುರತಿ
ನನ್ನ ನಗುವೆಲ್ಲಾ ನೀನು
ನನ್ನ ಕನಸು,ಕನವರಿಕೆ ನೀನು
ನೀನಿಲ್ಲದ ಬಾಳು ಬಾಳೇ..?
ಸಾವಿರ ಸಂಕೋಲೆ ದಾಟಿ
ಕೈಹಿಡಿವೆ ಈ ಜಗವ ಮೀಟಿ
ನೀನೊಬ್ಬಳಿದ್ದರೆ ಸಾಕು
ಕಾಲ ಕೆಳಗೆ ಆ ನಾಕು
ನಿನ್ನ ನಗುವಿನ ಅಲೆಗಳು
ನನ್ನ ಯಶಸ್ಸಿನ ಕಲೆಗಳು
ಆ ಅಳು, ದು:ಖ ದುಮ್ಮಾನ
ಇರಲಿ ಕಡಲಾಚೆ....
-Malli
ಬುಧವಾರ, ಫೆಬ್ರವರಿ 21, 2007
ಜಾಗತೀಕರಣ ಅಂದ್ರೆ ಇದಪ್ಪಾ..
ಛೇ.. ಅತಿ ಆತ್ಪಾ ಈ ಜಾಗತಿಕರಣ ಹಾವಳಿ... ಅಂತ ತಿಪ್ಪಣ್ಣ ಆ ಕಡೆಯಿಂದ ಗುಣಗತ್ತಾ ಬಂದ. ಯಾಕೋ ತಿಪ್ಪಣ್ಣ ಅಂಥದ್ದೇನಾತೀಗ.. ಹಂಗ್ಯಾಕ್ ಗೋಣಗ್ಲಾಕತ್ತಿ ಅಂಥ ನಾನು ನನ್ನದ ಮಾಸ್ತರ್ ಠೀವಿಯೋಳಗ್ ಅವಂಗ್ ಕೇಳಿದೆ.
ಏನ್ ಬಿಡ್ರಿ ಮಾಸ್ತರ್ ಈ ಜಾಗ್ತಿಕರಣ ಬಾಳಾತ್ರಿ.. ಇಂದಿನ ಪೆಪರ್ ನೋಡಿರೇನ್ ನೀವ್.. ಚೆನ್ನೈಯೋಳಗ ಯಾವ್ದೋ ಹೋಟಲ್ದಾಗ್ ಪರದೇಶಿ ಹಜಾಮರ ಬಂದಾರಂತ್... ಅಲ್ರೀ ಮಾಸ್ತರ್ ಇಲ್ಲಿನ್ ಹಜಾಮರೇನು ಸರಿಯಾಗಿ ಕಷ್ಟ್ ಮಾಡಾಂಗಲ್ಲಂತಿ ತಿಳ್ಕೋಂಡಾರೇನ್ರಿ ಈ ಸರಕಾರದವ್ರೋ.. ಅಂತಂದ್..........
ಓಹಾ ಇದಾ ವಿಚಾರ.. ಅಂತೇಂದಾನ್ದ್ರೂ ಬೆಳಿಗ್ಗೆ ನಾನು ಈ ಸುದ್ಧಿ ಓದಿದ್ದೇ. ಈಗ ತೆಲೆಯೋಳಗ ಈ ವಿಚಾರ ಗುಂಯಿಗಡ್ಲಿಕತ್ತು.
ಅಲ್ಲೀ ಮಾಸ್ತರ್, ನಮ್ಮ ನೀರ್ ಸೋಪ ಹಚ್ಚಿ ಕೆರಿತಾರ್.. ಅವರೇನ್ ಬಂಗಾರ ಹಚ್ಚಿ ಕೇರಿತಾರ್.. ಇವತ್ತ ಚೈನೈದಾಗ ಬಂದಾರ್ ಬೆಂಗಳೂರಗೆ ಬರ್ತಾರ್...ನಾಡಿದ್ದ ನಮ್ಮೂರಿಗೆ ಬರ್ತಾರಿವ್ರು.. ಆಗ ನಮ್ಮ ಗತಿ ಏನ್ರೀ ಅಂತ್ ತನ್ನ ಜೀವನೋಪಾಯದ ದೂರಾಲಚೆನೆಯಲ್ಲಿದ್ದ ತಿಪ್ಪಣ್ಣ.
ಹೌದೋ ತಿಪ್ಪಣ್ಣ ನೀ ಹೇಳೂದು ಖರೇ ಅದ. ಜಾಗ್ತಿಕರಣದಿಂದಾಗಿ ನಮ್ಮ ಊರಾಗೀನ ಶೆಟ್ರೀಗೂ ಉಳಿಗಾಲ ಇಲ್ಲ. ವಾಲ್ಟ ಮಾರ್ಟ್ ಅಂತೋನ್ನದು ಒಂದು ದೊಡ್ಡ ಕಂಪನಿ ಭಾರತಕ್ಕ್ ಬರೂದೈತಿ. ಆಗ ನೋಡಿ ನಮ್ಮ ಚಿಲ್ಲರೆ ಅಂಗಡಿ ಇಟ್ಕೋಂಡವರೆಲ್ಲಾ ಬಕ್ಕಾ ಬರ್ಲೆ ಬಿಳ್ತಾರ. ಹಂಗ್ಯ ಈಗ ನಾವಲ್ಯಾಗರಿದೂ ಪರಿಸ್ಥಿ ಬರಬೌದುಪಾ ಅಂತಂದೆ.
ಅವನು ಏನೋನೂ ಅನ್ತಾ ತನ್ನ ಕಟಿಂಗ್ ಶಾಪ್ ಹಾದಿ ಹೊಡೆದ ಹೊರಟ. ನನ್ನಾಕೆ ಸ್ಕೂಲಿಗೆ ಟೈಮಾಯ್ತು ಬನ್ನಿ ಎಂದು ಕರೆದಳು ನಾನು ಎದ್ದು ಒಳ ಹೋದೆ.
-ಮಲ್ಲಿಕಾರ್ಜನ್
ಏನ್ ಬಿಡ್ರಿ ಮಾಸ್ತರ್ ಈ ಜಾಗ್ತಿಕರಣ ಬಾಳಾತ್ರಿ.. ಇಂದಿನ ಪೆಪರ್ ನೋಡಿರೇನ್ ನೀವ್.. ಚೆನ್ನೈಯೋಳಗ ಯಾವ್ದೋ ಹೋಟಲ್ದಾಗ್ ಪರದೇಶಿ ಹಜಾಮರ ಬಂದಾರಂತ್... ಅಲ್ರೀ ಮಾಸ್ತರ್ ಇಲ್ಲಿನ್ ಹಜಾಮರೇನು ಸರಿಯಾಗಿ ಕಷ್ಟ್ ಮಾಡಾಂಗಲ್ಲಂತಿ ತಿಳ್ಕೋಂಡಾರೇನ್ರಿ ಈ ಸರಕಾರದವ್ರೋ.. ಅಂತಂದ್..........
ಓಹಾ ಇದಾ ವಿಚಾರ.. ಅಂತೇಂದಾನ್ದ್ರೂ ಬೆಳಿಗ್ಗೆ ನಾನು ಈ ಸುದ್ಧಿ ಓದಿದ್ದೇ. ಈಗ ತೆಲೆಯೋಳಗ ಈ ವಿಚಾರ ಗುಂಯಿಗಡ್ಲಿಕತ್ತು.
ಅಲ್ಲೀ ಮಾಸ್ತರ್, ನಮ್ಮ ನೀರ್ ಸೋಪ ಹಚ್ಚಿ ಕೆರಿತಾರ್.. ಅವರೇನ್ ಬಂಗಾರ ಹಚ್ಚಿ ಕೇರಿತಾರ್.. ಇವತ್ತ ಚೈನೈದಾಗ ಬಂದಾರ್ ಬೆಂಗಳೂರಗೆ ಬರ್ತಾರ್...ನಾಡಿದ್ದ ನಮ್ಮೂರಿಗೆ ಬರ್ತಾರಿವ್ರು.. ಆಗ ನಮ್ಮ ಗತಿ ಏನ್ರೀ ಅಂತ್ ತನ್ನ ಜೀವನೋಪಾಯದ ದೂರಾಲಚೆನೆಯಲ್ಲಿದ್ದ ತಿಪ್ಪಣ್ಣ.
ಹೌದೋ ತಿಪ್ಪಣ್ಣ ನೀ ಹೇಳೂದು ಖರೇ ಅದ. ಜಾಗ್ತಿಕರಣದಿಂದಾಗಿ ನಮ್ಮ ಊರಾಗೀನ ಶೆಟ್ರೀಗೂ ಉಳಿಗಾಲ ಇಲ್ಲ. ವಾಲ್ಟ ಮಾರ್ಟ್ ಅಂತೋನ್ನದು ಒಂದು ದೊಡ್ಡ ಕಂಪನಿ ಭಾರತಕ್ಕ್ ಬರೂದೈತಿ. ಆಗ ನೋಡಿ ನಮ್ಮ ಚಿಲ್ಲರೆ ಅಂಗಡಿ ಇಟ್ಕೋಂಡವರೆಲ್ಲಾ ಬಕ್ಕಾ ಬರ್ಲೆ ಬಿಳ್ತಾರ. ಹಂಗ್ಯ ಈಗ ನಾವಲ್ಯಾಗರಿದೂ ಪರಿಸ್ಥಿ ಬರಬೌದುಪಾ ಅಂತಂದೆ.
ಅವನು ಏನೋನೂ ಅನ್ತಾ ತನ್ನ ಕಟಿಂಗ್ ಶಾಪ್ ಹಾದಿ ಹೊಡೆದ ಹೊರಟ. ನನ್ನಾಕೆ ಸ್ಕೂಲಿಗೆ ಟೈಮಾಯ್ತು ಬನ್ನಿ ಎಂದು ಕರೆದಳು ನಾನು ಎದ್ದು ಒಳ ಹೋದೆ.
-ಮಲ್ಲಿಕಾರ್ಜನ್
ಮಂಗಳವಾರ, ಫೆಬ್ರವರಿ 20, 2007
ನನ್ನ ಅಜಂತಾ
ಯಾಕೆ ಸಿಗರೆಟ್ ಬಹಳ ಸೇದ್ತಿದ್ದಾರಾ ಅಂತಾ ನನ್ನ ಸಿನಿಯರ್ ಕೇಳಿದ್ರು.... ಇಲ್ಲಾ ಅಂತಾ ನಾನು ಹಾರಿಕೆ ಉತ್ತರಾ ಕೊಟ್ಟೇನಾದರ್ರೂ. ಅಂತಾರಳದಲ್ಲಿ ಅದು ನಿಜ.
ನಾನು ಇತ್ತೀಚೆಗೆ ಸಿಗರೇಟ್ ಜಾಸ್ತಿ ಸೇದ್ತಿದೀನಿ. ಹಾಗಂತ ನನ್ನ ಎಲ್ಲ ಫ್ರೇಂಡ್ಸ್ ಹೇಳ್ತಿದ್ದೀರಾ. ಅದು ನಿಜಾನೂ ಹೌದು.....
ಹೌದು ಸಿಗರೆಟ್ ಯಾಕ್ ಸೇದ ಬೇಕು ? ಮಜಾ ಮಾಡೋಕಾ, ಟೆನ್ಸನ್ ಕಡಿಮೆ ಮಾಡೋಕಾ, ಇಲ್ಲಾ ಸುಮ್ಮನೇನಾ ಅಥವಾ ಫಲಿಸದ ಪ್ರೀತಿಗಾಗಿಯೇ.... ಸೇದೋರಿಗೆ ನೂರೆಂಟು ಕಾರಣ.
ಸೇದಿದೇ ಇರೋದಿಕ್ಕ ಕಾರಣ ಇಲ್ಲ. ನಾನಂತೂ ಸೇದೋದು ಕಾರಣ ಇಲ್ಲದೇನೆ ಹಾಗಂತ ಅನ್ಕೊಂಡ್ರೂ ಆಳದಲ್ಲಿ ಕಾರಣ ಇದ್ದೇ ಇದೆ. ಅದು ಏನು ಅನ್ನೋದು ಇಲ್ಲಿ ಹೋಳೋಕ ಆಗಲ್ಲ. ಅಂತಂದ್ರೆ ಮತ್ತೆ ಯಾಕೆ ಇಲ್ಲಿ ಇದನ್ ಬರ್ತಿರಿದ್ದಾರೆ ಅಂತೀರಾ. ಅದಕ್ಕೂ ಕಾರಣ ಇದೆ ಕೇಳಿ.
ನಾನ ಸಿಗರೇಟ್ ಸೇದಾದ್ಮೇಲೆ ಅಜಂತಾ ಬೇಕು. ಅಯ್ಯೋ ಅಜಂತಾ ಕೂಡ್ಲೇ. ಹುಡುಗಿ ಅಂತಾ ತಿಳ್ಕೋಬೇಡಿಪಾ. ಅದು ಅಡಕಿ ಚೀಟಿ ಹೆಸರು. ಅದನ್ನೆ ಯಾಕೆ ತಿನ್ನೋದು ಅಂದ್ರೆ. ಸಿಗರೆಟ್ ಸೇದಿ ಆಪಿಸಿಗೆ ಬಂದು ಕಂಪ್ಯೂಟರ ಮುಂದೆ ಕೂಡ ಬೇಕಲ್ಲ. ಆಗ ನನ್ನು ಸುತ್ತ ಸಹದ್ಯೋಗಿಗಳಿಗೆ ನನ್ನ ಸಿಗರೇಟ್ ಸುವಾಸನೆ ಬಡಿಬಾರದು ಅಂತ ಈ ಮುನ್ನೆಚ್ಚರಿಕೆ...!
ನೀವು ಏನೇ ಹೇಳ್ರೀ ಈ ಅಜಂತ ಸೊಗಸು ತುಂಬಾ ಮಜಾರೀ.. ಹಾಗೆ ಬಾಯಿಲ್ಲಿ ಹಾಕೊಂಡು ತಕ್ಷಣ ಕರಗಿ ಬಿಡುತ್ತೆ ಅನ್ಕೊಂಡ್ರಾ.. ಅದ್ನಾ ಜಗೀಬೇಕು ಆಗ ಕರುಗುತ್ತೆ ಸಣ್ಣಗೆ. ಆದ್ರೇ ಒಂದು ನಮ್ಮ ಸರ್ಕಾರಗಳು ಪ್ರತಿಭಟನೆ ತಡೆಯೋಕೆ ಸಾಕುಷ್ಟು ಮನ್ನೆಚ್ಚರಿಕೆ ವಹಿಸ್ತಾರೆ ಆದ್ರೆ ಏನಾಗುತ್ತೆ. ಏನಾಗಬೇಕಿತ್ತೋ ಅದೇ ಆಗುತ್ತೆ. ಆದ್ರೆ ನನ್ನ ಮುನ್ನೆಚ್ಚರಿಕೆ ಮಾತ್ರ ಹಾಗಲ್ಲ. ಅದು ವಿಫಲವಾಗೋದೇ ಇಲ್ಲ.
ಹೀಗಾಗಿ ನಾನು ಯಾವಗ್ಲೂ ಬಚಾವ್ . ಏನಂತೀರಾ ಸಿಗರೇಟ್ ಮಿತ್ರರರೇ ನೀವು ಒಮ್ಮೆ ಟ್ರೈ ಮಾಡಿ ನೋಡಿ.
- ಮಲ್ಲಿಕಾರ್ಜುನ
ನಾನು ಇತ್ತೀಚೆಗೆ ಸಿಗರೇಟ್ ಜಾಸ್ತಿ ಸೇದ್ತಿದೀನಿ. ಹಾಗಂತ ನನ್ನ ಎಲ್ಲ ಫ್ರೇಂಡ್ಸ್ ಹೇಳ್ತಿದ್ದೀರಾ. ಅದು ನಿಜಾನೂ ಹೌದು.....
ಹೌದು ಸಿಗರೆಟ್ ಯಾಕ್ ಸೇದ ಬೇಕು ? ಮಜಾ ಮಾಡೋಕಾ, ಟೆನ್ಸನ್ ಕಡಿಮೆ ಮಾಡೋಕಾ, ಇಲ್ಲಾ ಸುಮ್ಮನೇನಾ ಅಥವಾ ಫಲಿಸದ ಪ್ರೀತಿಗಾಗಿಯೇ.... ಸೇದೋರಿಗೆ ನೂರೆಂಟು ಕಾರಣ.
ಸೇದಿದೇ ಇರೋದಿಕ್ಕ ಕಾರಣ ಇಲ್ಲ. ನಾನಂತೂ ಸೇದೋದು ಕಾರಣ ಇಲ್ಲದೇನೆ ಹಾಗಂತ ಅನ್ಕೊಂಡ್ರೂ ಆಳದಲ್ಲಿ ಕಾರಣ ಇದ್ದೇ ಇದೆ. ಅದು ಏನು ಅನ್ನೋದು ಇಲ್ಲಿ ಹೋಳೋಕ ಆಗಲ್ಲ. ಅಂತಂದ್ರೆ ಮತ್ತೆ ಯಾಕೆ ಇಲ್ಲಿ ಇದನ್ ಬರ್ತಿರಿದ್ದಾರೆ ಅಂತೀರಾ. ಅದಕ್ಕೂ ಕಾರಣ ಇದೆ ಕೇಳಿ.
ನಾನ ಸಿಗರೇಟ್ ಸೇದಾದ್ಮೇಲೆ ಅಜಂತಾ ಬೇಕು. ಅಯ್ಯೋ ಅಜಂತಾ ಕೂಡ್ಲೇ. ಹುಡುಗಿ ಅಂತಾ ತಿಳ್ಕೋಬೇಡಿಪಾ. ಅದು ಅಡಕಿ ಚೀಟಿ ಹೆಸರು. ಅದನ್ನೆ ಯಾಕೆ ತಿನ್ನೋದು ಅಂದ್ರೆ. ಸಿಗರೆಟ್ ಸೇದಿ ಆಪಿಸಿಗೆ ಬಂದು ಕಂಪ್ಯೂಟರ ಮುಂದೆ ಕೂಡ ಬೇಕಲ್ಲ. ಆಗ ನನ್ನು ಸುತ್ತ ಸಹದ್ಯೋಗಿಗಳಿಗೆ ನನ್ನ ಸಿಗರೇಟ್ ಸುವಾಸನೆ ಬಡಿಬಾರದು ಅಂತ ಈ ಮುನ್ನೆಚ್ಚರಿಕೆ...!
ನೀವು ಏನೇ ಹೇಳ್ರೀ ಈ ಅಜಂತ ಸೊಗಸು ತುಂಬಾ ಮಜಾರೀ.. ಹಾಗೆ ಬಾಯಿಲ್ಲಿ ಹಾಕೊಂಡು ತಕ್ಷಣ ಕರಗಿ ಬಿಡುತ್ತೆ ಅನ್ಕೊಂಡ್ರಾ.. ಅದ್ನಾ ಜಗೀಬೇಕು ಆಗ ಕರುಗುತ್ತೆ ಸಣ್ಣಗೆ. ಆದ್ರೇ ಒಂದು ನಮ್ಮ ಸರ್ಕಾರಗಳು ಪ್ರತಿಭಟನೆ ತಡೆಯೋಕೆ ಸಾಕುಷ್ಟು ಮನ್ನೆಚ್ಚರಿಕೆ ವಹಿಸ್ತಾರೆ ಆದ್ರೆ ಏನಾಗುತ್ತೆ. ಏನಾಗಬೇಕಿತ್ತೋ ಅದೇ ಆಗುತ್ತೆ. ಆದ್ರೆ ನನ್ನ ಮುನ್ನೆಚ್ಚರಿಕೆ ಮಾತ್ರ ಹಾಗಲ್ಲ. ಅದು ವಿಫಲವಾಗೋದೇ ಇಲ್ಲ.
ಹೀಗಾಗಿ ನಾನು ಯಾವಗ್ಲೂ ಬಚಾವ್ . ಏನಂತೀರಾ ಸಿಗರೇಟ್ ಮಿತ್ರರರೇ ನೀವು ಒಮ್ಮೆ ಟ್ರೈ ಮಾಡಿ ನೋಡಿ.
- ಮಲ್ಲಿಕಾರ್ಜುನ
ಮಂಗಳವಾರ, ಫೆಬ್ರವರಿ 13, 2007
ಪ್ರೀತಿ...
ಪ್ರೀತಿ ಎಂಬ ಎರಡೂವರೆ ಅಕ್ಷರ
ಆಶೆ ಆಕಾಂಕ್ಷೆಗಳು ಆಗರ
ಹೆಣ್ಣಿನ ಅಂತರಾಳ
ಹೊಕ್ಕು ನೋಡವ ತವಕ
ಒಮ್ಮೊಮ್ಮೆ ಎಟುಕಿತು..
ಮತ್ಚೋಮ್ಮೆ ಕುಟುಕೀತು..
ಪ್ರತಿ ಜೀವಿಯೂ ಬಯಸುವುದೂ
ಬೊಗಸೆಯಷ್ಟು ಹಿಡಿ ಪ್ರೀತಿಯನ್ನ
ಸಿಗದಿದ್ದರೆ ಜೀವನವೇ ಚಿತ್ರಾನ್ನ..!
ಸಹಿಸಿಕೊಂಡಷ್ಟು ಪ್ರೀತಿ ಸಹನೀಯ
ಇಲ್ಲದಿದ್ದರೇ ಜೀವನವೇ ನಿರಸ..
ಆಗದರಲಿ ಹಾಗೆ...
ಬೆಳಗಲಿ ಪತಿ ಪ್ರೇಮಿಯ ಹೃದಯ ಹಣತೆ
ಸಾಗಲಿ ಪ್ರೇಮಿಗಳ ನಿತ್ಯ ನೂತನ
ಜೀವನ ಪ್ರೇಮ ಕೊನೆಯಾಗದರಲಿ
ಎಲ್ಲಿಯೂ ನಿಲ್ಲದಿರಲಿ..
-ಮಲ್ಲಿಕಾರ್ಜುನ್
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)
-
ಕಷ್ಟದ ಕಣ್ಣೀರು ಕೋಡಿ ಹರಿದಾಗಲೂ ಸ್ಥೈರ್ಯ ತುಂಬಿ ಬೆಳೆಸಿದಾಕೆ, ಬರೀ ಸೋಲು ಕಂಡುವನಿಗೆ ಗೆಲುವಿನ ದಾರಿ ತೋರಿಸಿದಾಕೆ.. ಅವ್ವ ಗೆದ್ದು ಬಂದಾಗ... ಮರೆಯಲ್ಲಿ ನಿಂತು ಆನಂದ...
-
ಸುರಿ ಮಳೆಯೇ ಸುರಿ ಮೈಗಂಟಿದ ಅವಳ ಕಂಪು ತೊಳೆಯೋವರೆಗೂ ನೆನಪುಗಳು ಮಾಸೋವರೆಗೂ ಎಡಬಿಡದೆ ಸುರಿ... ಹರಿ... ನಿನ್ನ ಹನಿಗಳನ್ನೇ ಮುತ್ತುಗಳನ್ನಾಗಿ ಧಾರೆ ಎರೆದೆ ಅವಳಿಗೆ ಕನ್...
-
ಎದೆಯ ನೋವು ಹೂವಾಗಲು, ಸೂರ್ಯನ ಕಿರಣಬೇಕೀಗ, ಮೋಡ ಸರಿದು, ಕತ್ತಲೆ ಚಿಮ್ಮಿ, ಬೆಳಕು ಬರುವ ಮುನ್ನ ಹೋಗಬೇಡ ಕವಲು ದಾರಿಗಳ ನಡುವೆ ನಿಂತಿದೆ ಪ್ರಾಣ, ಅದಕೆ ನೀನೇ ಉಸಿರು, ಬಿಕ...