ಭಾನುವಾರ, ಮೇ 9, 2021

BMC Commissioner Iqbal Singh Chahal: ಕೋವಿಡ್ ನಿಯಂತ್ರಣಕ್ಕೆ 'ಮುಂಬೈ ಮಾಡೆಲ್‌' ಸೃಷ್ಟಿಸಿದ ಚಹಲ್

ಫಿಟ್ನೆಸ್ಫ್ರೀಕ್ಐಎಎಸ್ಅಧಿಕಾರಿ, ಬಿಎಂಸಿ ಆಯುಕ್ತ ಇಕ್ಬಾಲ್ಸಿಂಗ್ಚಹಲ್ಅವರು ಮುಂಬೈನಲ್ಲಿ ಕೋವಿಡ್ನಿಯಂತ್ರಣಕ್ಕೆ ತಂದು, ‘ಮುಂಬೈ ಮಾಡೆಲ್‌’ ಸೃಷ್ಟಿಸಿದ್ದಾರೆ.


- ಮಲ್ಲಿಕಾರ್ಜುನ ತಿಪ್ಪಾರ
ಕೋವಿಡ್ಎರಡನೇ ಅಲೆಯಲ್ಲಿ ಇಡೀ ದೇಶವೇ ಸಿಲುಕಿ ಸಂಕಟದಲ್ಲಿ ಒದ್ದಾಡುತ್ತಿದೆ. ಬೆಡ್ಗಳು ಸಿಗುತ್ತಿಲ್ಲ; ಆಕ್ಸಿಜನ್ಸಾಕಾಗುತ್ತಿಲ್ಲ; ವೆಂಟಿಲೇಟರ್ಗಳಿಲ್ಲ. ಎಲ್ಲ ಇದ್ದರೂ ವೈದ್ಯರಿಲ್ಲ,

ನರ್ಸ್ಗಳಿಲ್ಲ ಅನ್ನೋ ಪರಿಸ್ಥಿತಿ ಎಲ್ಲ ಕಡೆ ಇದೆ. ಕೋವಿಡ್ನಿರ್ವಹಿಸಬೇಕಾದ ಸ್ಥಳೀಯ ಸಂಸ್ಥೆಗಳು ಕೈ ಚೆಲ್ಲಿ ಕುಳಿತಿವೆ. ಅಧಿಕಾರಿಗಳಿಗೆ ಏನು ಮಾಡಬೇಕೆಂಬುದೇ ತೋಚುತ್ತಿಲ್ಲ. ಇಡೀ ವ್ಯವಸ್ಥೆಯೇ ವಿಫಲವಾಗಿದೆ. ಒಬ್ಬರು ಇನ್ನೊಬ್ಬರು ಮೇಲೆ ದೂರುತ್ತಿದ್ದಾರೆ. ಇಂಥ ಬಿಕ್ಕಟ್ಟಿನ ಸ್ಥಿತಿಯಲ್ಲಿ ದೇಶದ ವಾಣಿಜ್ಯ ರಾಜಧಾನಿ ಮುಂಬಯಿ ನಗರ ಮಾತ್ರ ಭರವಸೆಯ ಬೆಳಕಾಗಿದೆ.

ಬೃಹನ್ಮುಂಬಯಿ ಮಹಾನಗರ ಪಾಲಿಕೆ(ಬಿಎಂಸಿ)ಯುಕೋವಿಡ್ಏರುಗತಿ ರೇಖೆಯನ್ನು ತಡೆ ಹಿಡಿಯುವಲ್ಲಿ ಯಶಸ್ವಿಯಾಗುತ್ತಿದೆ. ಕೋವಿಡ್ನಿರ್ವಹಣೆಯಲ್ಲಿ ಉಳಿದ ನಗರಗಳಿಗೆ ದಾರಿದೀಪವಾಗಿದೆ. ಸ್ವತಃ ಸುಪ್ರೀಂ ಕೋರ್ಟ್‌, ಬಿಎಂಸಿ ಅನುಸರಿಸಿದ ಮಾದರಿಯನ್ನು ಮುಕ್ತಕಂಠದಿಂದ ಹೊಗಳಿದೆ; ನೀವೂ ನೋಡಿ ಕಲಿಯಿರಿ ಎಂದು ತಾಕೀತು ಮಾಡಿದೆ!

ಮುಂಬಯಿಯ ಈ ಸಕ್ಸೆಸ್ಸ್ಟೋರಿಯ ನಾಯಕ ಇಕ್ಬಾಲ್ಸಿಂಗ್ಚಹಲ್‌. ಚಹಲ್ಬೃಹನ್ಮುಂಬಯಿ ಮಹಾನಗರ ಪಾಲಿಕೆಯ ಆಯುಕ್ತರು. ಪಾಲಿಕೆ ಕಮಿಷನರ್ಆಗಿ ಒಂದು ವರ್ಷವಷ್ಟೇ ಆಗಿದೆ. ಈ ಕಡಿಮೆ ಅವಧಿಯಲ್ಲಿ ಅವರು ಅತಿದೊಡ್ಡ ಬಿಕ್ಕಟ್ಟನ್ನು ಎದುರಿಸಿದ ರೀತಿ ಮಾತ್ರ ಅನನ್ಯ. ಒಂದು ಕಾಲು ಕೋಟಿ ಜನಸಂಖ್ಯೆ ಇರುವ ದೇಶದ ಅತಿದೊಡ್ಡ ನಗರ, 39,038.83 ಕೋಟಿ ರೂಪಾಯಿ ಬಜೆಟ್ಮಂಡಿಸುವ ಪಾಲಿಕೆಯ ಆಡಳಿತವೇನೂ ತಮಾಷೆಯಲ್ಲ. ನಮ್ಮ ಬೆಂಗಳೂರು ಮಹಾನಗರ ಪಾಲಿಕೆ ಬಜೆಟ್‌ 10 ಸಾವಿರ ಕೋಟಿ ರೂ. ಅಚೆ ಈಚೆ ಇದೆ! ಇಂಥ ಮುಂಬಯಿಗೆ ಕೋವಿಡ್ಅಪ್ಪಳಿಸಿದರೆ ಅದನ್ನು ಹತೋಟಿಗೆ ತರುವುದು ಕೂಡ ಅಷ್ಟು ಸಲೀಸಲ್ಲ. ಆದರೆ, ಕಮಿಷನರ್ಚಹಲ್ಮತ್ತು ಅವರ ತಂಡ ದಿನದ 24 ಗಂಟೆಯೂ ಕೆಲಸ ಮಾಡಿ, ಅಸಾಧ್ಯವಾದುದನ್ನು ಸಾಧಿಸಿ ತೋರಿಸುತ್ತಿದೆ, ಬಿಎಂಸಿಯ ಕಾರ್ಯಕ್ಕೆ ಅಲ್ಲಿನ ರಾಜ್ಯ ಸರಕಾರವೂ ಅಷ್ಟೇ ಸಹಾಯ, ಸಹಕಾರ ನೀಡುತ್ತಿದೆ.

ಮೊದಲು ಅವರು ನಿಮ್ಮನ್ನು ನಿರ್ಲಕ್ಷಿಸುತ್ತಾರೆ; ನಂತರ ನಿಮ್ಮನ್ನು ನೋಡಿ ನಗುತ್ತಾರೆ; ನಂತರ ಸಂಘರ್ಷ ಮಾಡುತ್ತಾರೆ; ಆ ನಂತರ ಗೆಲವು ನಿನ್ನದುಎಂಬ ಮಹಾತ್ಮ ಗಾಂಧಿ ಅವರ ಉಕ್ತಿ ಇಕ್ಬಾಲ್ಸಿಂಗ್ಚಹಲ್  ವಿಷಯದಲ್ಲಿನಿಜವಾಗಿದೆ. ಯಾಕೆಂದರೆ, ಎರಡ್ಮೂರು ತಿಂಗಳ ಹಿಂದೆ ಭಾರತ ಸರಕಾರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಚಹಲ್ಅವರ ಸಹೋದ್ಯೋಗಿ ಮಿತ್ರರೇ ಕರೆ ಮಾಡಿ, ಮಹಾರಾಷ್ಟ್ರದಲ್ಲಿ ಮಾತ್ರವೇ ಯಾಕೆ ಕೊರೊನಾ ಇದೆ ಎಂದು ನಗುತ್ತಿದ್ದರಂತೆ! ಆದರೆ, ಈಗ ನಗುವ ಸರದಿ ಯಾರಿಗೆ ಬಂದಿದೆ ನೋಡಿ. ಮುಂಬಯಿಯಲ್ಲಿ ಶೇ.24.97ರಷ್ಟಿದ್ದ ಪಾಸಿಟಿವಿಟಿ ರೇಟ್ಶೇ.9ಕ್ಕೆ ಇಳಿಕೆಯಾಗಿದೆ. ದಿನದಿಂದ ದಿನಕ್ಕೆ ಕೋವಿಡ್ಪ್ರಕರಣಗಳೂ ಕಡಿಮೆಯಾಗುತ್ತಿವೆ. ವಿದೇಶಿ ಮಾಧ್ಯಮಗಳಲ್ಲೂ ಬಿಎಂಸಿ ಸಾಧನೆ ಮತ್ತು ಮಾದರಿಯ ಬಗ್ಗೆ ಮುಕ್ತ ಪ್ರಶಂಸೆ ದೊರೆಯುತ್ತಿದೆ.

ಚಹಲ್ಅವರೇನೂ ಮಂತ್ರದಂಡ ಪ್ರಯೋಗಿಸಿ, ರಾತ್ರೋರಾತ್ರಿ ಚಮತ್ಕಾರ ಮಾಡಲಿಲ್ಲ. ಕಳೆದ ವರ್ಷ ಮೊದಲನೆ ಅಲೆ ಏರುಗತಿಯಲ್ಲಿದ್ದಾಗಲೇ ಚಹಲ್ಬಿಎಂಸಿ ಆಯುಕ್ತರಾಗಿ ಅಧಿಕಾರ ಸ್ವೀಕರಿಸಿದರು. ಆ ಕ್ಷಣದಿಂದಲೇ ಕೋವಿಡ್ನಿರ್ವಹಣೆಗೆ ತಮ್ಮನ್ನು ಒಡ್ಡಿಕೊಂಡರು. ಮೊದಲನೇ ಅಲೆ ವೇಳೆ ಮಾಡಿದ ತಪ್ಪುಗಳಿಂದ ಪಾಠ ಕಲಿತು, ಸ್ಥಳೀಯಾಡಳಿತವನ್ನು ಎರಡನೇ ಅಲೆಗೆ ಸಜ್ಜುಗೊಳಿಸಿದರು. ಎರಡನೇ ಅಲೆಯ ಗಂಭೀರತೆಯನ್ನು ಗ್ರಹಿಸಿ ಅದಕ್ಕೆ ತಕ್ಕಂತೆ ವ್ಯವಸ್ಥೆಯನ್ನು ರೂಪಿಸಿದರು. ಫೆಬ್ರವರಿಯಿಂದಲೇ ಇಡೀ ಬಿಎಂಸಿ ಯುದ್ಧ ಸನ್ನದ್ಧವಾಗಿತ್ತು!

ತ್ವರಿತ ಕೋವಿಡ್ಟೆಸ್ಟ್ಗಳು, 24 ಗಂಟೆಯೂ ಕಾರ್ಯನಿರ್ವಹಿಸುವ 24 ವಾರ್ರೂಮ್ಗಳು, ಎಲ್ಲರಿಗೂ ವೈದ್ಯಕೀಯ ಸೇವೆ, ಖಾಸಗಿ ಆಸ್ಪತ್ರೆಗಳ ಜತೆಗಿನ ಸಮನ್ವಯ, ಸ್ಮಶಾನಗಳ ನಿರ್ವಹಣೆ... ಹೀಗೆ ಕೋವಿಡ್ಗೆ ಅಂತರ್ಗತವಾಗಿರುವ ಎಲ್ಲವನ್ನೂ ಬಿಎಂಸಿ ಅಚ್ಚುಕಟ್ಟಾಗಿ ನಿರ್ವಹಿಸಲು ಯಶಸ್ವಿಯಾಯಿತು. ಅದರ ಪರಿಣಾಮ ಈಗ ಕೋವಿಡ್ಹತೋಟಿಗೆಮುಂಬಯಿ ಮಾಡೆಲ್‌’ ಸೃಷ್ಟಿಯಾಗಿ ನಿಂತಿದೆ. ಇದೆಲ್ಲದರ ಹಿಂದೆ 55 ವರ್ಷದ ಕಮಿಷನರ್ಚಹಲ್ದೂರದೃಷ್ಟಿ ಚಿಂತನೆ ಮತ್ತು ಪ್ರಯತ್ನಶೀಲತೆಯನ್ನು ಇಡೀ ಜಗತ್ತೇ ಗುರುತಿಸುತ್ತಿದೆ.

ರಾಜಸ್ಥಾನದ ಜೋಧಪುರದ ಮೇಲ್ಮಧ್ಯಮ ವರ್ಗದ ಕುಟುಂಬದಲ್ಲಿ 1966ರ ಜನವರಿ 20ರಂದು ಇಕ್ಬಾಲ್ಸಿಂಗ್ಚಹಲ್ಜನಿಸಿದರು. ಶಾಲಾ ದಿನಗಳಿಂದಲೇ ಕಲಿಕೆಯಲ್ಲಿ ಅಗ್ರಸ್ಥಾನಿ. 12ನೇ ತರಗತಿಯ ಬೋರ್ಡ್ಎಕ್ಸಾಮ್ನಲ್ಲಿ ನ್ಯಾಷಲ್ಮೆರಿಟ್ಲಿಸ್ಟ್ನಲ್ಲಿ ಕಾಣಿಸಿಕೊಂಡವರು. ಎಲೆಕ್ಟ್ರಾನಿಕ್ಸ್ಮತ್ತು ಕಮ್ಯುನಿಕೇಷನ್ನಲ್ಲಿ ಬಿಟೆಕ್ಪದವಿ ಪಡೆದುಕೊಂಡಿದ್ದಾರೆ. ಹಾರ್ವರ್ಡ್ಯೂನಿವರ್ಸಿಟಿಗೆ ತೆರಳಿ ಸಾರ್ವಜನಿಕ ಆಡಳಿತದಲ್ಲಿ ಪದವಿ ಗಳಿಸಿದ್ದಾರೆ. ಅಲ್ಲಿಂದ ಹಿಂದಿರುಗಿದ ಬಳಿಕ 1988ರ ಯುಪಿಎಸ್ಸಿ ಪರೀಕ್ಷೆ ಬರೆದರು. ಮೊದಲ ಯುಪಿಎಸ್ಸಿ ಪರೀಕ್ಷೆಯಲ್ಲೇ ಅತ್ಯುತ್ತಮ ಅಂಕ ಪಡೆದು ಪಾಸಾದರು. ಮಹಾರಾಷ್ಟ್ರ ಕೆಡರ್ಐಎಎಸ್ಅಧಿಕಾರಿಯಾಗಿ ಸೇರ್ಪಡೆಯಾದರು.

ಮಹಾರಾಷ್ಟ್ರದ ಹಲವು ಜಿಲ್ಲೆಗಳಲ್ಲಿಕೆಲಸ ಮಾಡಿರುವ ಚಹಲ್‌, ಕೆಲವು ಕಾಲ ಕೇಂದ್ರ ಸೇವೆಯಲ್ಲಿಯೂ ಇದ್ದರು. ಮಹಾರಾಷ್ಟ್ರದ ಔರಂಗಾಬಾದ್ಮತ್ತು ಥಾಣೆಯ ಜಿಲ್ಲಾಧಿಕಾರಿಯಾಗಿ ಅವರು ಮಾಡಿದ ಕಾರ್ಯಗಳನ್ನು ಜನ ಈಗಲೂ ನೆನೆಯುತ್ತಾರೆ. ಈ ಜಿಲ್ಲೆಗಳಲ್ಲಿನ ಕೆಲಸದಿಂದಾಗಿ ಜನರ ಅಧಿಕಾರಿ ಎನಿಸಿಕೊಂಡರು. ಮುಂಬಯಿನಧಾರಾವಿಏಷ್ಯಾದ ಅತಿದೊಡ್ಡ ಕೊಳಗೇರಿ. ಈ ಕೊಳಗೇರಿ ಅಭಿವೃದ್ಧಿಗೆ ಮಹಾರಾಷ್ಟ್ರ ಸರಕಾರಧಾರಾವಿ ರಿಡೆವಲಪ್ಮೆಂಟ್ಪ್ರಾಜೆಕ್ಟ್ಆರಂಭಿಸಿ, ಸಾರಥ್ಯವನ್ನು ಚಹಲ್ಗೆ ವಹಿಸಿತ್ತು. ಈ ಪ್ರಾಜೆಕ್ಟ್‌ ನ ಸಿಇಒ ಆಗಿ ಕಾರ್ಯನಿರ್ವಹಿಸಿದ್ದಾರೆ. ಮೊದಲ ಕೊರೊನಾ ಅಲೆಯಲ್ಲಿ ಧಾರಾವಿಯನ್ನು ದೊಡ್ಡ ಅಪಾಯದಿಂದ ಪಾರು ಮಾಡುವಲ್ಲಿಯೂ ಯಶಸ್ವಿಯಾಗಿದ್ದರು. ಈ ಪ್ರಾಜೆಕ್ಟ್ನ ಯಶಸ್ಸು ಅವರನ್ನು ಬಿಎಂಸಿ ಕಮಿಷನರ್ಹುದ್ದೆಗೆ ಕರೆದುಕೊಂಡು ಬಂತು.

ಚಹಲ್ಅವರನ್ನುಫಿಟ್ನೆಸ್ಫ್ರೀಕ್‌’ ಎಂದೂ ಗುರುತಿಸಲಾಗುತ್ತದೆ. ಚಹಲ್ಫಿಜಿಕಲ್ಫಿಟ್ಐಎಎಸ್ಆಫೀಸರ್‌! ಹಲವು ಮ್ಯಾರಥಾನ್ಗಳಲ್ಲಿ ಭಾಗವಹಿಸಿದ್ದಾರೆ. 2004ರಿಂದಲೂ ಮುಂಬಯಿ ಮ್ಯಾರಥಾನ್ನಲ್ಲಿ ಓಡುತ್ತಿದ್ದಾರೆ. ಯೋಗ, ಫಿಟ್ನೆಸ್‌, ಓಟದ ಫೋಟೊಗಳನ್ನು ಆಗಾಗ ತಮ್ಮ ಸೋಷಿಯಲ್ಮೀಡಿಯಾ ವೇದಿಕೆಗಳಲ್ಲಿ ಷೇರ್ಮಾಡಿಕೊಳ್ಳುತ್ತಾರೆ.

ಕೋವಿಡ್ಅತ್ಯುತ್ತಮ ನಿರ್ವಹಣೆಗಾಗಿ ಇಂಡೋ ಅಮೆರಿಕನ್ಚೇಂಬರ್ಸ್ಆಫ್ಕಾಮರ್ಸ್‌(ಐಎಸಿಸಿ) ‘ಕೋವಿಡ್ಕ್ರುಸೆಡರ್ಅವಾರ್ಡ್‌-2020’ ನೀಡಿ ಗೌರವಿಸಿದೆ. ಲೋಕಮತ್  ಮಹಾರಾಷ್ಟ್ರಿಯನ್ಆಫ್ಇಯರ್‌-2020’ ಸೇರಿದಂತೆ ಹಲವು ಸಂಘ ಸಂಸ್ಥೆಗಳು ಪ್ರಶಸ್ತಿ ನೀಡಿ ಗೌರವಿಸಿವೆ. ಕೇಂದ್ರ ಹಾಗೂ ರಾಜ್ಯ ಸರಕಾರದಿಂದಲೂ ಗೌರವಗಳು ಸಂದಿವೆ. ಕೋವಿಡ್ಎರಡನೇ ಅಲೆಯನ್ನು ನಿರ್ವಹಿಸುತ್ತಲೇ ಬಿಎಂಸಿಯನ್ನು ಸಂಭಾವ್ಯ ಮೂರನೇ ಅಲೆಗೆ ಸಜ್ಜುಗೊಳಿಸುವ ಕೆಲಸವನ್ನು ಚಹಲ್ಮಾಡುತ್ತಿದ್ದಾರೆ. ಹಲವು ತಜ್ಞರ ಪ್ರಕಾರ, ಮೂರನೇ ಅಲೆಯು ಎರಡನೇ ಅಲೆಗಿಂತಲೂ ಭೀಕರವಾಗಿದ್ದು, ಮಕ್ಕಳು ಹೆಚ್ಚು ಅಪಾಯಕ್ಕೆ ಈಡಾಗಲಿಧಿದ್ದಾರೆ. ಈ ಹಿನ್ನೆಲೆಯಲ್ಲಿ, ಬಿಎಂಸಿಯು ಮಕ್ಕಳ ಕೋವಿಡ್ಕೇರ್ಸೆಂಟರ್ಗಳನ್ನು ಈಗಿನಿಂದಲೇ ಆರಂಭಿಸುತ್ತಿದೆ.

ಚಹಲ್ಅವರನ್ನು ವಿವಾದಗಳೇನೂ ಬಿಟ್ಟಿಲ್ಲ. ಶಿವಸೇನೆ ಮತ್ತು ನಟಿ ಕಂಗನಾ ರಣಾವತ್ನಡುವಿನ ಬೀದಿ ಕಾಳಗದಲ್ಲಿ ಬಿಎಂಸಿಯೂ ಭಾಗಿಯಾಗಬೇಕಾಯಿತು. ನಿಯಮ ಮೀರಿ ಬಿಲ್ಡಿಂಗ್ಕಟ್ಟಿದ್ದಾರೆಂದು ಬಿಎಂಸಿ ಕಂಗನಾಳ ಮನೆಯನ್ನು ಧ್ವಂಸ ಮಾಡಿತ್ತು. ಆಗ, ಪಾಲಿಕೆ ಆಯುಕ್ತ ಚಹಲ್ವಿರುದ್ಧವೂ ಆರೋಪಗಳು ಕೇಳಿ ಬಂದವು. ಕೋರ್ಟ್ಕೂಡ ಪಾಲಿಕೆ ಕ್ರಮದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿತ್ತು. ಅದೇನೇ ಇರಲಿ, ಕೋವಿಡ್ಬಿಕ್ಕಟ್ಟನ್ನು ನಿರ್ವಹಿಸುತ್ತಿರುವ ಅವರ ರೀತಿ ಎಲ್ಲ ಅಧಿಕಾರಿಗಳಿಗೂ ದಾರಿದೀಪವಾಗಿದೆ.


* ಈ ಲೇಖನವು ವಿಜಯ ಕರ್ನಾಟಕ ಪತ್ರಿಕೆಯ 2021ರ ಮೇ 9ರ ಸಂಚಿಕೆಯಲ್ಲಿ ಪ್ರಕಟವಾಗಿದೆ.


ಕಾಮೆಂಟ್‌ಗಳಿಲ್ಲ: