ಭಾನುವಾರ, ಮೇ 17, 2020

Shailaja Teacher-Coronavirus Slayer ವೈರಸ್‌ಗೆ ತಕ್ಕ ಪಾಠ ಕಲಿಸಿದ ಟೀಚರ್

ದೇಶದಲ್ಲೇ ಮೊದಲ ಕೊರೊನಾ ಪ್ರಕರಣ ಪತ್ತೆಯಾದ ಕೇರಳದಲ್ಲೀಗ ಬಹುತೇಕ ಸೋಂಕು ಹತೋಟಿಗೆ ಬಂದಿದೆ. ಈ ಯಶಸ್ಸಿಗೆ ಕೇರಳದ ಆರೋಗ್ಯ ಸಚಿವೆ ಶೈಲಜಾ ಟೀಚರ್ ಅವರ ದೂರದೃಷ್ಟಿ, ಮಾರ್ಗದರ್ಶನ ಮತ್ತು ಪ್ರಯತ್ನವೇ ಕಾರಣ.



- ಮಲ್ಲಿಕಾರ್ಜುನ ತಿಪ್ಪಾರ
ಕೆ.ಕೆ.ಶೈಲಜಾ ಅಂದರೆ ಬಹುಶಃ ಯಾರಿಗೂ ಗೊತ್ತಾಗಲಿಕ್ಕಿಲ್ಲ. ಅದೇ ‘ಶೈಲಜಾ ಟೀಚರ್’ ಎಂದರೆ ಸಾಕು, ಕೇರಳ ಮಾತ್ರವಲ್ಲ, ಇಡೀ ದೇಶದ ಜನರ ಕಣ್ಣು ಮುಂದೆ ಅವರ ಮುಖ ಸುಳಿಯುತ್ತದೆ. ಇಡೀ ಜಗತ್ತೇ ಕೊರೊನಾ ವಿರುದ್ಧ ಸೆಣೆಸಾಡುತ್ತಿರುವಾಗ ಕೇರಳದ ಆರೋಗ್ಯ ಮತ್ತು ಸಾಮಾಜಿಕ ನ್ಯಾಯ ಸಚಿವೆಯಾಗಿರುವ ಶೈಲಜಾ ಟೀಚರ್ ಅವರು ಸದ್ದಿಲ್ಲದೇ ಕೊರೊನಾ ವೈರಸ್ ದೇವರ ನಾಡಿನಲ್ಲಿ ವ್ಯಾಪಕವಾಗಿ ಹರಡದಂತೆ ಮಾಡುವಲ್ಲಿಯಶಸ್ವಿಯಾಗಿದ್ದಾರೆ.

ಚೀನಾದಲ್ಲಿಕೊರೊನಾ ವೈರಸ್ ರುದ್ರನರ್ತನ ಮಾಡುತ್ತಿದ್ದಾಗಲೇ ತಮ್ಮ ರಾಜ್ಯಕ್ಕೂ ಕಾಲಿಟ್ಟರೆ ಏನೇನು ಮಾಡಬೇಕೆಂಬ ಎಲ್ಲಯೋಜನೆಗಳನ್ನು ಪಕ್ಕಾ ಮಾಡಿಕೊಂಡೇ ಇದ್ದರು 63 ವರ್ಷದ ಈ ಟೀಚರ್. ಅವರ ಎಣಿಕೆಯಂತೆ ಇಡೀ ದೇಶದಲ್ಲೇ ಪ್ರಥಮ ಕೊರೊನಾ ಸೋಂಕು  ಪತ್ತೆಯಾಗಿದ್ದು ಕೇರಳದಲ್ಲಿ! ಆದರೆ, ಈಗ ಬೇರೆ ಯಾವುದೇ ರಾಜ್ಯಕ್ಕಿಂತಲೂ ಅತ್ಯಂತ ಪರಿಣಾಮಕಾರಿಯಾಗಿ ಕೊರೊನಾಧಿವನ್ನು ನಿಯಂತ್ರಿಸಿದ ಕೀರ್ತಿ ಕೇರಳಕ್ಕೆ ಸಲ್ಲುತ್ತದೆ. ಇದರ ಹಿಂದೆ ಪಿಣರಾಯಿ ವಿಜಯನ್ ಸರಧಿಕಾರ, ಶೈಲಜಾ ಟೀಚರ್ ಮತ್ತು ಕೇರಳಿಗರಿದ್ದಾರೆ.

ಚೀನಾದಲ್ಲಿಕೊರೊನಾ ವೈರಸ್ ಭೀಕರತೆ ವರದಿಯಾಗುತ್ತಿದ್ದ ಜನವರಿಯ ದಿನಗಳವು. ಈ ಬಗ್ಗೆ ಮಾಹಿತಿ ಪಡೆದ ಶೈಲಜಾ ಟೀಚರ್ ಜನವರಿ 20ರಂದು ತಮ್ಮ ಅಧೀನ ಆರೋಗ್ಯ ಅಧಿಕಾರಿಗಳಿಗೆ ಕರೆ ಮಾಡಿ, ‘‘ಕೊರೊನಾ ವೈರಸ್ ನಮ್ಮಲ್ಲೂ(ಕೇರಳ) ಬರುತ್ತಾ?’’ ಎಂದು ಕೇಳುತ್ತಾರೆ. ಅದಕ್ಕೆ ಅಧಿಕಾರಿ, ‘‘ಖಂಡಿತ ಮೇಡಂ,’’ ಎಂದು ಹೇಳುತ್ತಾರೆ. ಇಷ್ಟು ಮಾಹಿತಿ ಗೊತ್ತಾಗುತ್ತಿದ್ದಂತೆ ಶೈಲಜಾ ಅವರು ಕೊರೊನಾ ಸೋಂಕು ಹರಡುವುದನ್ನು ತಡೆಯಲು ಕೈಗೊಳ್ಳಬೇಕಿರುವ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಾರೆ. ಇದು ಶೈಲಜಾ ಅವರು ಸಂಭಾವ್ಯ ಸಮಸ್ಯೆಯೊಂದನ್ನು ಗುರುತಿಸಿ, ಅದರ ಪರಿಹಾರ ಕುರಿತು ಯೋಚಿಸಿದ ರೀತಿಗೆ ಉದಾಹರಣೆಯಷ್ಟೇ.
ಚೀನಾದ ವುಹಾನ್ ಸಿಟಿಯಲ್ಲಿಸಿಲುಕಿದ್ದ ವಿದ್ಯಾರ್ಥಿಗಳು ಸೇರಿದಂತೆ ಇತರ ದೇಶಗಳಲ್ಲಿರುವ ಕೇರಳಿಗರನ್ನು ಕರೆಯಿಸಿಕೊಳ್ಳುತ್ತದೆ ಕೇರಳ ಸರಕಾರ. ಜನವರಿ 30ರಂದು ವುಹಾನ್ನಿಂದ ಬಂದ ವಿದ್ಯಾರ್ಥಿಗಳ ಪೈಕಿ ಮೂವರಿಗೆ ಸೋಂಕು ಪತ್ತೆಯಾಗುತ್ತದೆ ಮತ್ತು ಇದು ದೇಶದ ಮೊದಲ ಕೊರೊನಾ ಕೇಸ್. ಇಷ್ಟೊತ್ತಿಗಾಗಲೇ ಚೀನಾದಲ್ಲಿವೈರಸ್ನ ವಿರಾಟ್ ರೂಪ ಗೋಚರಿಸಿತ್ತು. ಇದನ್ನು ಕಂಡ ಶೈಲಜಾ ಅವರು ವೈದ್ಯಕೀಯ ತಂಡಗಳನ್ನು ರಚನೆ ಮಾಡಿಕೊಂಡು ಸೋಂಕು ಹರಡುವುದನ್ನು ತಡೆಯುವ ಕೈಂಕರ್ಯಕ್ಕೆ ಮುಂದಾದರು. ವಿಶ್ವ ಆರೋಗ್ಯ ಸಂಸ್ಥೆ(ಡಬ್ಲ್ಯೂಎಚ್ಒ) ಮಾರ್ಗದರ್ಶಿ ಪ್ರಕಾರ ಸೋಂಕು ತೀವ್ರವಾಗಿ ಹಬ್ಬುವುದನ್ನು ತಪ್ಪಿಸಲು ‘ಬ್ರೇಕ್ ದಿ ಚೈನ್’ಗೆ ಮುಂದಾದರು. ಕೇರಳದಲ್ಲಿಈ ಬಗ್ಗೆ ವ್ಯಾಪಕ ಪ್ರಚಾರ ಮಾಡಿ, ಸಾಮಾಜಿಕ ಅಂತರವನ್ನು ಜಾರಿಗೊಳಿಸಲಾಯಿತು. ಕೇಂದ್ರ ಸರಕಾರ ಹೇರಿದ ಲಾಕ್ಡೌನ್ ಕಾಲಾವಧಿಯನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲಾಯಿತು. ಸೋಂಕಿತರ ಕೇಸ್ ಹಿನ್ನಲೆ, ಅವರ ಪ್ರವಾಸದ ಇತಿಹಾಸವನ್ನು ಪತ್ತೆ ಹಚ್ಚಿ ಅವರು ಯಾರೊಂದಿಗೆ ಸಂಪರ್ಕ ಬಂದಿದ್ದಾರೋ ಅವರನ್ನೆಲ್ಲಕ್ವಾರಂಟೈನ್ ಮಾಡಲಾಯಿತು. ಹೀಗೆ ಸಾಧ್ಯವಿರುವ ಎಲ್ಲಪರಿಹಾರೋಪಾಯಗಳನ್ನು ಜಾರಿಗೆ ತರುವ ಮೂಲಕ ಸಮುದಾಯಕ್ಕೆ ಹರಡುವುದನ್ನು ತಪ್ಪಿಸಲಾಯಿತು.
ಕೊರೊನಾ ನಿಯಂತ್ರಣದ ಎಲ್ಲಕೆಲಸವನ್ನು ಶೈಲಜಾರೊಬ್ಬರೇ ಮಾಡಿದರಂತಲ್ಲ. ಅಧಿಕಾರಿಗಳ ತಂಡಗಳಿಗೆ ಸರಿಯಾದ ಮಾರ್ಗದರ್ಶನ ನೀಡಿದರು. ಅವರ ಯೋಜನೆಗಳಲ್ಲಿಸ್ಪಷ್ಟತೆ ಇತ್ತು. ಯಾಕೆಂದರೆ, 2018ರಲ್ಲಿ ಕೇರಳದಲ್ಲಿಕಾಣಿಸಿಕೊಂಡಿದ್ದ ‘ನಿಫಾ ವೈರಸ್’ ನಿರ್ವಹಣೆ ಮಾಡಿದ ಅನುಭವ ಈಗ ಹೆಚ್ಚು ಉಪಯೋಗಕ್ಕೆ ಬಂತು ಎನ್ನುತ್ತಾರೆ ರಾಜಕೀಯ ಪಂಡಿತರು. ಕ್ಯಾಲಿಕಟ್ನ ಹಳ್ಳಿಧಿಯೊಂದರಲ್ಲಿ ನಿಫಾ ಸೋಂಕು ಪತ್ತೆಧಿಯಾಗಿದ್ದಾಗ ಜನರು ಮನೆಯಿಂದ ಹೊರ ಬರಲು ಹೆದರುತ್ತಿದ್ದರು. ಆಗ, ಈ ಟೀಚರ್ ತಮ್ಮ ವೈದ್ಯಕೀಯ ತಂಡಗಳೊಂದಿಗೆ ಆ ಹಳ್ಳಿಗೆ ತೆರಳಿ, ನಿಫಾ ಗಾಳಿಯಿಂದ ಹರಡುವುದಿಲ್ಲ. ಅದು ಸಂಪರ್ಕದಿಂದ ಬರುವಂಥದ್ದು ಎಂದು ಮನವರಿಕೆ ಮಾಡಿಕೊಟ್ಟರು. ಆ ಮೂಲಕ ಹಳ್ಳಿಯ ಜನರಿಗೆ ಧೈರ್ಯ ತುಂಬಿದರು. ಹಳ್ಳಿಗರು ವೈದ್ಯಕೀಯ ತಂಡಗಳಿಗೆ ಸಹಕಾರ ನೀಡಿದ ಪರಿಣಾಮ ವ್ಯಾಪಕವಾಗಬಹುದಾಗಿದ್ದ ನಿಫಾ ವೈರಸ್ ಅನ್ನು ಆರಂಭದಲ್ಲಿ ಸಂಹರಿಸಿದರು. ಎರಡೆರಡು ವೈರಸ್ಗಳನ್ನು ಸಂಹರಿಸಿರುವ ಶೈಲಜಾ ಟೀಟರ್ಗೆ ಇದೀಗ ‘ಕೊರೊನಾವೈರಸ್ ಸ್ಲೇಯರ್’(corona virus slayer) ಎಂಬ ಮತ್ತೊಂದು ಅನ್ವರ್ಥಕ ಅಂಟಿಕೊಡಿದೆ. ‘ಸ್ಲೇಯರ್’ ಅಂದರೆ ‘ಹಂತಕ’ ಎಂಬರ್ಥವಿದೆ.

1956 ನವೆಂಬರ್ 20ರಂದು ಶೈಲಜಾ ಜನಿಸಿದರು. ತಂದೆ ಕೆ. ಕುಂದನ್ ಮತ್ತು ತಾಯಿ ಕೆ.ಕೆ.ಶಾಂತಾ. ಶೈಲಜಾ ಅವರ ಅಜ್ಜಿ ಅಸ್ಪೃಶ್ಯತೆ ನಿವಾರಣೆ ಹೋರಾಟದಲ್ಲಿತೊಡಗಿಸಿಕೊಂಡಿದ್ದರು. ಇವರ ಕುಟುಂಬಕ್ಕೆ ಸ್ವಾತಂತ್ರ್ಯ ಹೋರಾಟದಲ್ಲಿಪಾಲ್ಗೊಂಡ ಹಿನ್ನೆಲೆ ಇದೆ. ಕಣ್ಣೂರು ಜಿಲ್ಲೆಯ ಮಟ್ಟನೂಧಿರಿನ ಪಳಸಿರಾಜಾ ಎನ್ಎಸ್ಎಸ್ ಕಾಲೇಜಿನಿಂದ ವಿಜ್ಞಾನದಲ್ಲಿಪದವಿ ಪಡೆದ ನಂತರ 1980ರಲ್ಲಿವಿಶ್ವೇಶರಾಯ ಕಾಲೇಜು ಸೇರಿ, ಬಿಎಡ್ ಶಿಕ್ಷ ಣ ಪಡೆದರು. ವಿದ್ಯಾರ್ಥಿ ಜೀವನದಲ್ಲಿಅವರು ಎಡರಂಗ ಪಕ್ಷ ಗಳ ಸಂಘಟನೆಯಾದ ಎಸ್ಎಫ್ಐ ಸೇರಿ ಕೆಲಸ ಮಾಡಿದರು. ಅಲ್ಲಿಂದಲೇ ಅವರ ರಾಜಕೀಯ ಜೀವನಕ್ಕೆ ನಾಂದಿಯೂ ದೊರೆಯಿತು. ಮುಂದೆ ಶಿಕ್ಷ ಣ ಪೂರೈಸಿ ಏಳು ವರ್ಷ ಕಣ್ಣೂರಿನ ಶಿವಪುರಂ ಹೈಸ್ಕೂಲ್ನಲ್ಲಿವಿಜ್ಞಾನ ಶಿಕ್ಷ ಕಿಯಾಗಿ ಸೇವೆ ಸಲ್ಲಿಸಿದರು. ಶೈಲಜಾ ಅವರಿಗೆ ಅಲ್ಲಿದೊರೆತ ‘ಟೀಚರ್’ ಅನ್ವರ್ಥಕ ನಾಮ ಈಗಲೂ ಮುಂದುವರಿದಿದೆ. 2004ರಲ್ಲಿಶೈಲಜಾ ಅವರು ಸಿಪಿಎಂನ ಕೇಂದ್ರ ಸಮಿತಿ ಸದಸ್ಯರಾದರು. ಜೊತೆಗೆ, ಆಲ್ ಇಂಡಿಯಾ ಡೆಮಾಕ್ರಟಿಕ್ ವುಮನ್ಸ್ ಅಸೋಷಿಯೇಷನ್ ರಾಜ್ಯ ಕಾರ್ಯದರ್ಶಿಧಿಯಾಗಿ, ಇದೇ ಸಂಘಟನೆಯ ಕೇಂದ್ರ ಸಮಿತಿಯ ಜಂಟಿ ಕಾರ್ಯದರ್ಶಿಯಾಗಿ ಕೆಲಸ ಮಾಡಿದರು. ಸದಾ ರಾಜಕೀಯ ಚಟುವಟಿಕೆಯಲ್ಲಿದ್ದರೂ ಅವರು ‘ಇಂಡಿಯನ್ ವರ್ಧಮಾನವಂ ಸ್ತ್ರೀಸಮ್ಮೋಹಮ್’ ಮತ್ತು ‘ಚೀನಾ- ರಾಷ್ಟ್ರಂ, ರಾಷ್ಟ್ರೀಯಂ, ಕಳಕಲ್’ ಎಂಬೆರಡು ಪುಸ್ತಕಗಳನ್ನು ಬರೆದಿದ್ದಾರೆ.
1996ರಲ್ಲಿಚುನಾವಣಾ ರಾಜಕೀಯಕ್ಕೆ ಧುಮುಕಿದ ಅವರು ಅದೇ ವರ್ಷ, ಕಣ್ಣೂರು ಜಿಲ್ಲೆಯ ಕೂತುಪರಂಬಾ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಕೇರಳ ವಿಧಾನಸಭೆಗೆ ಆಯ್ಕೆಯಾದರು. ಬಳಿಕ 2006ರಲ್ಲಿಪೆರವೂರು ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಮತ್ತೆ 2016ರಲ್ಲಿತಮ್ಮ ಕೂತುಪರಂಬಾ ಕ್ಷೇತ್ರಕ್ಕೆ ಮರಳಿದರು ಮತ್ತು ಗೆದ್ದರು. ಪಿಣರಾಯಿ ವಿಜಯನ್ ಸರಕಾರದಲ್ಲಿರುವ ಇಬ್ಬರು ಮಹಿಳಾ ಸಚಿವೆಯರ ಪೈಕಿ ಇವರು ಒಬ್ಬರು. ಆರೋಗ್ಯ ಮತ್ತು ಸಾಮಾಜಿಕ ನ್ಯಾಯ ಇಲಾಖೆಯ ಹೊಣೆ ಹೊತ್ತಿದ್ದಾರೆ. ಅಂದ ಹಾಗೆ, ಶೈಲಜಾ ಟೀಚರ್ ಅವರು ‘ಸ್ತ್ರೀ ಶಬ್ದಂ’ ಮಾಸಿಕದ ಮುಖ್ಯ ಸಂಪಾದಕಿ ಆಗಿದ್ದರು. ಶೈಲಜಾ ಅವರ ಪತಿ ಕೆ ಬಾಲಕೃಷ್ಣನ್. ಶೋಭಿತ್ ಮತ್ತು ಲಸಿತ್ ಎಂಬ ಮಕ್ಕಳಿದ್ದಾರೆ.

ನಮ್ಮ ರಾಜ್ಯದ ವೈದ್ಯಕೀಯ ಶಿಕ್ಷ ಣ ಸಚಿವ ಡಾ.ಕೆ.ಸುಧಾಕರ್ ಅವರೂ ಶೈಲಜಾ ಟೀಚರ್ ಅವರೊಂದಿಗೆ ಸಂವಾದಿಸಿ, ಕೊರೊನಾ ವಿರುದ್ಧ ಹೋರಾಟದ ಅನುಭವದ ಮಾಹಿತಿ ಪಡೆದುಕೊಂಡಿದ್ದು ಸುದ್ದಿಯಾಗಿತ್ತು. ನಿಜವಾಗಲೂ ಅವರೊಬ್ಬ ಧೈರ್ಯಶಾಲಿ ‘ಕೊರೊನಾ ವಾರಿಯರ್’. ಅವರ ಕೆಲಸವೂ ಅನುಕರಣೀಯ. ಹಾಗಾಗಿಯೇ ಅನೇಕ ರಾಜ್ಯಗಳು ಕೊರೊನಾ ವಿರುದ್ಧ ಹೋರಾಟದಲ್ಲಿಅವರ ಮಾರ್ಗದರ್ಶ ಪಡೆಯುತ್ತಿವೆ. ಅವರು ಮಾಡಿದ ಕೆಲಸವು ಅವರನ್ನು ಅಂತಾಧಿರಾಷ್ಟ್ರೀಯವಾಗಿ ಗುರುತಿಸುವಂತೆ ಮಾಡಿದೆ. ಜಗತ್ತಿನಾದ್ಯಂತ ಕೊರೊನಾ ವಿರುದ್ಧ ಹೋರಾಟಗಾರರನ್ನು ಗುರುತಿಸಿರುವ ಬಿಬಿಸಿ, ಭಾರತದಿಂದ ಶೈಲಜಾ ಟೀಚರ್ ಅವರನ್ನು ಹೆಸರಿಸಿದೆ. ‘ದೇವರನಾಡಲ್ಲಿ ದೆವ್ವ’ (ವೈರಸ್)ದ ಉಪಟಳವನ್ನು ಯಶಸ್ವಿಯಾಗಿ ನಿಭಾಯಿಸುತ್ತಿರುವ ಅವರ ಅನುಭವ ಮತ್ತು ಮಾರ್ಗದರ್ಶನ ಇಡೀ ದೇಶಕ್ಕೂ ಸಿಗಲಿ.

(This article has been published in Vijay Karnataka on 17th of May 2020 edition)

ಕಾಮೆಂಟ್‌ಗಳಿಲ್ಲ: