ಸೋಮವಾರ, ಮೇ 23, 2016

ನಾವು ಏನೋ ಅಂದುಕೊಳ್ಳುತ್ತೇವೆ, ಅದು ಇನ್ನೇನೋ ಆಗುತ್ತದೆ!

ಹುಡುಗನೊಬ್ಬನ ಗಜಲ್ ಗಳು-
ಯಾವುದೇ ಕಲ್ಮಶವಿಲ್ಲದೇ ನಿರ್ವ್ಯಾಜ ಪ್ರೀತಿಯಾಗಿದ್ದರೆ ನಾವು ಹೇಗೆ ದೂರು ಆಗುತ್ತಿದ್ದೆವು..

- ಪ್ರದ್ಯುಮ್ನ
ಒಲಿದ ಹೃದಯಗಳು ಒಂದಾದರೆ ಬಾಳು ಇಂಪಾದ ಸಂಗೀತದಂತೆ ಕೇಳಿಸಲಾರಂಭಿಸುತ್ತದೆ. ಒಮ್ಮೊಮ್ಮೆ ಅಪಸ್ವರಗಳೇ ಹೆಚ್ಚಾದರೆ ಬಾಳು ನಾನೊಂದು ತೀರ... ನೀನೊಂದು ತೀರ... ಆಗುವುದು ಗ್ಯಾರಂಟಿ. ಆಗ ಕುಹಕ ಮಾತು, ವ್ಯಂಗ್ಯ ನಿಮ್ಮನ್ನು ಚುಚ್ಚಿ ಹೈರಾಣಾಗಿಸುತ್ತವೆ. ಕ್ರಿಕೆಟಿಗ ವಿರಾ್ ಕೊಹ್ಲಿ ಮತ್ತು ನಟಿ ಅನುಷ್ಕಾ ಜತೆಗಿನ ಮಧುರ ಬಾಂಧವ್ಯ ಇಂಥ ಅಪಸ್ವರದ ಮಧ್ಯೆ ಹೊರಳಾಡುತ್ತಿರುವಾಗಲೇ ಅವಳನ್ನು ಇತ್ತೀಚೆಗೆ ಸಾಮಾಜಿಕ ಜಾಲತಾಣ ಅಪಹಾಸ್ಯ ಮಾಡಿ ನಗುತ್ತಿತ್ತು. ಆದರೆ, ಒಲಿದ ಹೃದಯಕ್ಕೆ ಉಂಟಾದ ನೋವನ್ನು ನೋಡಿ ಸುಮ್ಮನಿರದ ಕೊಹ್ಲಿ, ``ನಿಮಗೆ ನಾಚಿಕೆಯಾಗಲ್ವಾ...? ಆಕೆ ನನಗೆ ಯಾವಾಗಲೂ ಸಕಾರಾತ್ಮಕ ಭಾವನೆಯನ್ನೇ ಕಟ್ಟಿಕೊಟ್ಟಿದ್ದಾಳೆ,'' ಎಂದು ಹೂಂಕರಿಸಿದಾಗಲೇ ಕುಹಕಿಗಳು ಸುಮ್ಮನಾದರು. ಇದೆಲ್ಲ ಯಾಕೆ ಹೇಳುತ್ತಿದ್ದೇನೆ ಎಂದರೆ, ನಮ್ಮಿಬ್ಬರಿಗೂ ಹಾಗೆ ಆಗಿತ್ತಲ್ಲವೇ? ನಾವು ಒಲಿದ ಸ್ವರಾಗಳಾಗಿ ಇಂಪಾದ ಸಂಗೀತ ಹಾಡುತ್ತಿರುವಾಗಲೇ ಅಪಸ್ವರ ನಾದ ಹೆಚ್ಚಾಗಿ ಸಂಗೀತ ಹಳ್ಳ ಹಿಡಿದು, ನಾವಿಬ್ಬರೂ ದೂರ ಆದದ್ದು. ಆಗ ಕಾಲೇ್ ಕಾರಿಡಾ್ನಲ್ಲಿ ನಿನ್ನ ಬಗ್ಗೆ ಆಡಿಕೊಂಡವರೆಷ್ಟು? ನಿನ್ನಡೆಗೆ ಕುಹಕ ನಗೆ ಚೆಲ್ಲಿ, ವ್ಯಂಗ್ಯವಾಗಿ ನಕ್ಕವರೆಷ್ಟು..? ಆಗ ನಾನು ಕೂಡ ಥೇ್ ಕೊಹ್ಲಿ ರೀತಿಯಲ್ಲಿ ಪ್ರತಿಕ್ರಿಯಿಸಿದ್ದೆ. ಕೊಹ್ಲಿ ಈ ಘಟನೆಯು ಆ ನೆನಪುಗಳನ್ನೆಲ್ಲ ಒಂದು ಸಾರಿ ತಿರುವಿ ಹಾಕಿದವು. ಸಿನಿಮಾ ಥಿಯೇಟ್ನ ಪ್ರೊಜೆಕ್ಟ್ನಲ್ಲಿ ಫಿ್‌ಮಗಳು ಒಂದೊಂದಾಗಿ ಒಂದರ ಹಿಂದೆ ಒಂದು ಓಡುವ ಹಾಗೆ ನನ್ನ ಮನಪಟಲದಲ್ಲಿ ಈ ನೆನಪುಗಳು ಮಿಂಚಿ ಮಾಯವಾದವು.
ನಾವಿಬ್ಬರೂ ಎಷ್ಟು ಅನ್ಯೋನ್ಯವಾಗಿದ್ದೆವಲ್ಲ. ನಮ್ಮನ್ನು ನೋಡಿ ಇಡೀ ಕ್ಯಾಂಪಸ್ಸೇ ಹೊಟ್ಟೆಕಿಚ್ಚು ಪಡುತ್ತಿತ್ತು. ಕಾಲೇ್ ಚರ್ಚಾಕೂಟಗಳಲ್ಲಿ ನನ್ನನ್ನು ಮೀರಿಸಿದವರೇ ಇರಲಿಲ್ಲ. ಸುತ್ತಲಿನ ಕಾಲೇಜುಗಳಲ್ಲೂ ಪ್ರಖ್ಯಾತಿ ಹಬ್ಬಿತ್ತು. ಚರ್ಚಾಕೂಟದಲ್ಲಿ ಭಾಗವಹಿಸಿದೆನೆಂದರೆ ಅಲ್ಲಿ ಪ್ರಥಮ ಬಹುಮಾನವನ್ನು ಮೊದಲೇ ಮೀಸಲಿಡುತ್ತಿದ್ದರು. ಆದರೆ, ಅಂದಿನ ಆ ಚರ್ಚಾಕೂಟದಲ್ಲಿ ನಾನು ಸೋತು ಹೋಗಿದ್ದೆ. ಅದಕ್ಕೆಲ್ಲ ನೀನೇ ಕಾರಣ ಎಂದು ನನ್ನ ಸ್ನೇಹಿತರಾದಿಯಾಗಿ ಎಲ್ಲರೂ ಕಾರಿಡಾ್ನಲ್ಲಿ ಹಂಗಿಸುತ್ತಿದ್ದರು. ಇದನ್ನೆಲ್ಲ ಹೇಗೆ ಸಹಿಸಿಕೊಳ್ಳಲಿ ಹೇಳು? ನೀನು ಯಾವತ್ತೂ ನನ್ನ ಸಾಧನೆಗೆ ಅಡ್ಡಿಯಾದವಳೇ ಅಲ್ಲ. ನನ್ನ ಸ್ಫೂರ್ತಿ ನೀನು. ನನ್ನ ಯಶಸ್ಸಿನ ಹಿಂದಿನ ಶಕ್ತಿ ನೀನು. ಅದು ನಿನಗೂ ಗೊತ್ತಿತ್ತು. ಆದರೆ, ನೀನು ಮಾತ್ರ ಕಾರಿಡಾ್ ರೂಮ್ಗಳಿಗೆ ಬೆಲೆ ಕೊಟ್ಟು, ಬೆಲೆಕಟ್ಟಲಾಗದ ನನ್ನ ಸ್ನೇಹವನ್ನು ಪೂರ್ತಿ ಕಡಿದುಕೊಂಡೆ. ಇದ್ಯಾವ ನ್ಯಾಯ ಹೇಳು? ನಿನಗೆ ಹಂಗಿಸುತ್ತಿದ್ದವರೆಗೆಲ್ಲ ಸರಿಯಾಗಿಯೇ ನೀರಿಳಿಸಿದ್ದೆ. ಆದರೂ ನಮ್ಮಿಬ್ಬರ ಮಧ್ಯ ಆ ಇಂಪಾದ ಸಂಗೀತ ಮತ್ತೆ ಒಡಮೂಡಲೇ ಇಲ್ಲ. ನಮ್ಮಿಬ್ಬರ ಸ್ನೇಹ-ಪ್ರೀತಿ-ಪ್ರೇಮ ತಿಳಿ ಕೊಳದಲ್ಲಿ ರೂಮ್ ಕಲ್ಲುಗಳು ದೊಡ್ಡ ಅಲ್ಲೋಲ ಕಲ್ಲೋಲ ಅಲೆಗಳನ್ನು ಸೃಷ್ಟಿಸಿದ್ದವು. ಆ ಅಲೆಗಳ ಸುಳಿಯಿಂದ ನಾನು ಹೊರ ಬಂದೆ. ಆದರೆ ನೀನು ಮಾತ್ರ ಅದೇ ಸುಳಿಯಲ್ಲಿ ಆಳವಾಗಿ ಸಿಲುಕುತ್ತಾ, ಮತ್ತಷ್ಟು ಸುಕ್ಕಾಗುತ್ತಾ ಹೋದೆ.
ಈ ಘಟನೆಗಳನ್ನೆಲ್ಲ ಈಗ ರಿವೈಂ್ ಮಾಡಿ ನೋಡಿದಾಗ ಒಂದೊಂದು ಸಾರಿ ಸಿಲ್ಲಿ ಅನ್ನಿಸುತ್ತದೆ. ಮತ್ತೊಂದು ಸಾರಿ ನಾವಿಬ್ಬರೂ ಎಂಥ ಕುಹಕಕ್ಕೆ ಬಲಿಯಾದವೆಲ್ಲ ಎಂಬ ವ್ಯಥೆಯಾಗುತ್ತದೆ. ನಮ್ಮ ನಡುವಿನ ಬಾಂಧವ್ಯ ಅಷ್ಟು ಅಲ್ಪ ಕಾಲದ್ದಾಗಿತ್ತೆಂದರೆ ಅದು ಪೂರಿಪೂರ್ಣವಾಗಿರಲಿಲ್ಲ ಎಂದರ್ಥಲ್ಲವೇ? ಬಾಂಧವ್ಯದ ಬಿಲ್ಡಿಂ್ಗೆ ನಂಬಿಕೆ ಎಂಬ ತಳಪಾಯ ಗಟ್ಟಿಯಾಗಿರಲಿಲ್ಲ.  ಇಲ್ಲದಿದ್ದರೆ, ರೂಮ್ಗಳೆಂಬ ಸಣ್ಣ ಬಿರುಗಾಳಿಗೆ ಇಡೀ ಬಿಲ್ಡಿಂ್ ಕುಸಿದು ಬಿತ್ತು ಎಂದು ನಂಬುವುದಾದರೂ ಹೇಗೆ? ಆದರೆ, ಅದೇ ವಾಸ್ತವ ಅಲ್ಲವೇ? ನಂಬಲೇ ಬೇಕು. ನಂಬಿದ್ದೇನೆ ಕೂಡ. ಇದನ್ನು ಬಿಟ್ಟು ಇನ್ಯಾವ ದಾರಿ ಇತ್ತು ಹೇಳು ನನಗೆ? ಆದರೆ, ನೀನು ಮಾತ್ರ ಏನೂ ಆಗಿಯೇ ಇಲ್ಲ ಎನ್ನುವ ಹಾಗೇ ಇದ್ದೆ. ನಿನ್ನ ಮನಸ್ಸು ಅದ್ಹೇಗೆ ಅಷ್ಟೊಂದು ಕಠೋರವಾಗಿತ್ತು? ಕಿಂಚಿ್ ಆದರೂ ಕರುಣೆ ಗಾಳಿ ತಾಕಲಿಲ್ಲವೇ? ಬಹುಶಃ ತಾಕಿದ್ದರೆ ನನ್ನಂತೆಯೇ ನೀನು ಕುಹುಕಿಗಳಿಗೆಲ್ಲ ಒಂದು ಪಾಠ ಕಲಿಸುತ್ತಿದ್ದೆ. ಈಗೀಗ ನನಗನ್ನಿಸುತ್ತದೆ ನಮ್ಮಿಬ್ಬರದ್ದು ಒತ್ತಾಯಪೂರ್ವಕವಾಗಿ ನಂಬಿಸಿಕೊಂಡು ಪ್ರೀತಿಯಾಗಿತ್ತಾ.. ಸ್ನೇಹವಾಗಿತ್ತಾ ಅಂತ. ಸಹಜವಾದ ಮತ್ತು ಯಾವುದೇ ಕಲ್ಮಶವಿಲ್ಲದ ನಿರ್ವಾಜ್ಯ ಪ್ರೀತಿಯಾಗಿದ್ದರೆ ನಾವು ಹೇಗೆ ದೂರ ಆಗುತ್ತಿದ್ದೆವು?
ಒಂದು ವಿಷಯವನ್ನು ನೀನು ಮರೆತಿದ್ದೆ. ನನ್ನನ್ನು ಎಷ್ಟು ಸಲೀಸಾಗಿ ದಿಕ್ಕರಿಸಿ ಹೋದೆಯಲ್ಲ ನೀನು. ಆದರೆ, ನೀನಾದರೂ ಸುಖವಾಗಿದ್ದಾ? ಇಲ್ಲ. ಇರಲಿಲ್ಲ. ನಿಮ್ಮ ಮನೆಯವರ ಒತ್ತಾಯಕ್ಕೆ ಕಟ್ಟುಬಿದ್ದು ಅದ್ಯಾವುದೋ ಎಂಜಿನಿಯ್ನನ್ನು ಮದುವೆಯಾಗಿ ಮುಂಬಯಿಗೆ ಹಾರಿ ಹೋದೆ. ಎಲ್ಲರಂತೆ ನಾನು, ನಿನ್ನ ಜೀವನವನ್ನು ನೀನು ಕಟ್ಟಿಕೊಂಡೇ ಬಿಡು ಎಂದು ಭಾವಿಸಿ, ಅದೇ ಹಳೆ ನೆನಪುಗಳ ಕ್ಯಾಸೆ್ ಅನ್ನು ರೀವೈಂ್ ಮಾಡುತ್ತಾ ನನ್ನದೇ ಲೋಕದಲ್ಲಿ ಕಳೆದು ಹೋದೆ. ಹಳೇ ದೇಗುಲ, ಗೋರಿಗಳನ್ನು ಹುಡುಕಿಕೊಂಡು ಹೋದೆ. ಅವುಗಳ ಹಿಂದಿರುವ ಇತಿಹಾಸ ಕೆದಕುತ್ತಾ ನಮ್ಮಿಬ್ಬರ ಗತಪ್ರೇಮ ಮರೆಯಲು ಪ್ರಯತ್ನಿಸುತ್ತಿದ್ದೆ. ಈ ಕೆಲಸ ನನಗೆ ಒಂದಿಷ್ಟು ನೆಮ್ಮದಿ ಮತ್ತು ಇನ್ನೊಂದಿಷ್ಟು ಉತ್ಸಾಹ ತುಂಬುತ್ತಿತ್ತು. ಯಾಕೆ ಗೊತ್ತಾ? ಕೆಲವು ರಾಜರು, ಶ್ರೀಮಂತರು ತಮ್ಮ ಪ್ರೀತಿಯ ಪ್ರತೀಕವಾಗಿ, ಪತ್ನಿಯರ ನೆನಪಿಗೆ ಗುಡಿಯನ್ನೋ, ಗೋರಿಯನ್ನೋ ಕಟ್ಟಿ ತಮ್ಮ ಪ್ರೇಮವನ್ನು ಚಿರಸ್ಥಾಯಿಯಾಗಿಸಲು ಪ್ರಯತ್ನಿಸಿದ್ದರು. ಇಂಥವುಗಳ ಹಿಂದೆ ದಂತಕತೆಗಳು ಹುಟ್ಟಿಕೊಂಡು, ನಿರ್ವಾಜ್ಯ ಪ್ರೇಮವೆಲ್ಲ ಗಾಳಿಗೆ ತೂರಿ ಹೋಗಿತ್ತು. ಸ್ಥಾನಪಲ್ಲಟವಾದ ಪ್ರೇಮದ ಚುಕ್ಕೆಗಳನ್ನು ಸೇರಿಸಿ ಸುಂದರವಾದ ಕಲಾಕೃತಿ ರಚಿಸಲು ಪ್ರಯತ್ನಿಸುತ್ತಿದ್ದೆ. ತುಸು ಮಟ್ಟಿಗೆ ಯಶಸ್ವಿಯಾದೆ ಅಂದುಕೊಂಡರೂ ತಪ್ಪಿಲ್ಲ. ಆದರೆ, ಎದೆಯಾಳದಲ್ಲಿ ನೀನು ಬಿಟ್ಟು ಹೋದ ನೆನಪುಗಳು ಮಾತ್ರ ಸಾಯುತ್ತಲೇ ಇರಲಿಲ್ಲ. ಆಗೆಲ್ಲ ನಾನು ಇನ್ನಾವುದೋ ಗುಡಿಯನ್ನೋ, ಗೋರಿಯನ್ನೋ ಹುಡುಕಿಕೊಂಡು ಹೋಗುತ್ತಿದ್ದೆ.
ಅಂದೊಂದು ದಿನ ನಾನು ಯಾವುದನ್ನು ಕೇಳಬಾರದು ಎಂದುಕೊಂಡಿದ್ದೇನೋ ಅದೇ ಸುದ್ದಿಯನ್ನು ಕೇಳಬೇಕಾಯಿತು. ನೀನು ಊರಿಗೆ ಬಂದಿದ್ದು ಗೊತ್ತಾಯಿತು ನಿಜ. ಆದರೆ ನಿನ್ನನ್ನು ನೋಡುವ, ನಿನ್ನ ಎದುರಿಗೆ ಬರುವ ಧೈರ್ಯ ಇರಲಿಲ್ಲ. ವಿಧಿಯಾಟ ಬೇರೆನೇ ಅಲ್ಲವೇ? ಅದೊಂದು ಸಂಜೆ ಊರ ಹೊರಗಿನ ಗುಡಿಯಲ್ಲಿ ನೀನು ನಿನ್ನ ಅಮ್ಮನ ಜತೆ ನಿಂತಿದ್ದೆ,  ಆದರೆ, ನಿನ್ನ ನೋಡಿ ನನ್ನ ನಾನೇ ನಂಬಲಿಲ್ಲ. ನಿಜಕ್ಕೂ ಅದು ನೀನೇನಾ? ಹೇಗಿದ್ದೆ ನೀನು- ಬಳಕುವ ಬಳ್ಳಿ. ಸೂಜಿಮಲ್ಲಿಗೆಯಂಥವಳು. ಸೂಜಿಗಲ್ಲಿನವಳು. ಕಾಲೇ್ನಲ್ಲಿದ್ದಾಗ ಎಲ್ಲ ಹುಡುಗರು ಒಂದು ಕ್ಷಣವಾದರೂ ನಿನ್ನನ್ನು ನೋಡದೆ ಹೋಗುತ್ತಿರಲಿಲ್ಲ. ಅಂಥ ವ್ಯಕ್ತಿತ್ವ ನಿನ್ನದು. ಅವಳೇನಾ ನೀನು ಎಂಬ ಮಟ್ಟಿಗೆ ಬದಲಾಗಿದ್ದೆ. ಮುಖದಲ್ಲಿ ಕಳೆ ಇಲ್ಲ; ನಕ್ಕು ಎಷ್ಟೋ ದಿನಗಳವಾಗಿರುವ ಹಾಗಿತ್ತು. ಕೃಶ ಶರೀರದಲ್ಲಿ ಸುಮ್ಮನೇ ನೆಪಕ್ಕೆ ಮಾತ್ರ ಎನ್ನುವಂಥ ಜೀವ. ನಿನ್ನ ಜೀವನದಲ್ಲಿ ಹೀಗೆಲ್ಲ ಆಗಬಾರದೆಂದು ನಾನು ಬಯಸಿದ್ದೆ. ಆದರೆ, ಅದೇ ಆಗಿ ಹೋಗಿತ್ತು. ನಿನ್ನ ಇಂದಿನ ಪರಿಸ್ಥಿತಿಗೆ ಆ ನಿನ್ನ ಹಣ, ಹೆಣ್ಣುಬಾಕ ಗಂಡನೇ ಕಾರಣ ಎಂಬುದು ಗೊತ್ತಾಗಿದ್ದು ನಿನ್ನ ಗೆಳತಿಯಿಂದಲೇ. ಗೊತ್ತಿದ್ದು ಗೊತ್ತಿದ್ದು ನಿಮ್ಮ ಮನೆಯವರು ಅಂಥವನ ಖೆಡ್ಡಾಕ್ಕೆ ನಿನ್ನನ್ನು ಕೆಡವಿದ್ದರು ಎಂದು ಆಕೆ ಕಣ್ಣೀರಾಗಿದ್ದಳು.
ನೋಡು ಜೀವನವೇ ಹೀಗೆ. ನಾವು ಏನು ಅಂದುಕೊಂಡು ಹೋಗುತ್ತೇವೆ. ಅದು ಇನ್ನೇನೋ ಆಗುತ್ತದೆ. ಕಾರಿಡಾ್ಗಳಲ್ಲಿನ ಹಂಗಿಸುವ ಮಾತುಗಳನ್ನು, ರೂಮ್ಗಳನ್ನು ನೀನು ಅಷ್ಟು ಸೀರಿಯ್ ಆಗಿ ತೆಗೆದುಕೊಳ್ಳದಿದ್ದರೆ ಇಂದು ನಮ್ಮಿಬ್ಬರದೇ ಒಂದು ಪುಟ್ಟ ಸಂಸಾರ ಆನಂದ ಸಾಗರವಾಗಿರುತ್ತಿತ್ತು. ಆದರೆ, ಈಗ ಕಾಲ ಮಿಂಚಿ ಹೋಗಿದೆ. ಚಿಂತಿಸಿ ಫಲವಿಲ್ಲ ಎನ್ನುವ ಹಾಗಿಲ್ಲ. ನಿನ್ನ ನೆನಪಲ್ಲಿ ನಾನು ಇಂದಿಗೂ ಹಾಗೆಯೇ ಇದ್ದೇನೆ. ಅಂದು ಹೇಗಿದ್ದೇನೋ ಹಾಗೆ. ಮುಂದಿನ ನಿರ್ಣಯ ನಿನಗೆ ಬಿಟ್ಟದ್ದು.

ಸೋಮವಾರ, ಮೇ 2, 2016

ವೀಸಾ ಗದ್ದಲ್ಲದಲ್ಲಿ ಸಿಕ್ಕ ಇಸಾ

ಪೂರ್ವ ತುರ್ಕಿಸ್ತಾನ ಎಂದೂ ಕರೆಯಲಾಗುವ ಚೀನಾದ ಕ್ಸಿ್ಜಿಯಾಂ್ ಉಯಿಗು್ ಸ್ವಾಯತ್ತ ಪ್ರದೇಶದ ಪತ್ಯೇಕತಾವಾದಿ ನಾಯಕ ದೋಲ್ಕು್ ಇಸಾ ಅಲ್ಪ ಸಂಖ್ಯಾತ ಉಯಿಗ್ ಪಂಗಡದ ನಾಯಕ.

ದೋಲ್ಕು್ ಇಸಾ.
ಕಳೆದ ವಾರ ಭಾರತದ ಮಾಧ್ಯಮಗಳಲ್ಲಿ ಕಾಣಿಸಿಕೊಂಡು ಪ್ರಸಿದ್ಧಿಯಾದ `ಅಪರಿಚಿತ' ವ್ಯಕ್ತಿ ಇವರು. ಚೀನಾದಲ್ಲಿ ಸ್ವಾಯತ್ತ ಪ್ರಾಂತವಾಗಿರುವ ಕ್ಸಿ್ಜಿಯಾಂ್ ಸ್ವಂತ್ರಗೊಳ್ಳಲು ಹೋರಾಟ ನಡೆಸುತ್ತಿರುವ ನಾಯಕ ಇವರು. ಆದರೆ, ಕಮ್ಯುನಿ್‌ಟ ಚೀನಾ ಸರಕಾರಕ್ಕೆ ಇವರೊಬ್ಬ `ಮೋ್‌ಟ ವಾಂಟೆ್ ಟೇರರಿ ್‌ಟ'.
ಇತ್ತೀಚೆಗಷ್ಟೇ ಭಾರತ ವಿಶ್ವಸಂಸ್ಥೆಯಲ್ಲಿ ತನ್ನ ಪ್ರಭಾವ ಬೀರುವ ಕೆಲಸಕ್ಕೆ ಕೈ ಹಾಕಿತ್ತು. ಪಠಾ್ಕೋ್ ವಾಯು ನೆಲೆ ದಾಳಿಯ ಪ್ರಮುಖ ಸಂಚುಕೋರ ಹಾಗೂ ಜೈಷೆ ಮೊಹಮ್ಮ್ ಉಗ್ರ ಸಂಘಟನೆಯ  ನಾಯಕ ಮಸೂ್ ಅಜ್ನನ್ನು ವಿಶ್ವಸಂಸ್ಥೆಯ ಉಗ್ರರ ಪಟ್ಟಿಗೆ ಸೇರಿಸುವ ಪ್ರಯತ್ನವನ್ನು ಭಾರತ ನಡೆಸಿತ್ತು. ಆದರೆ, ವಿಶ್ವಸಂಸ್ಥೆಯ ಭದ್ರತಾ ಸಮಿತಿಯಲ್ಲಿ ವಿಟೋ ಪವ್ ಹೊಂದಿರುವ ಚೀನಾ ಎಂದಿನಂತೆ ಭಾರತದ ಯತ್ನಕ್ಕೆ ಅಡ್ಡಗಾಲು ಹಾಕಿತ್ತು. ಚೀನಾದ ಈ ನಡೆ ಸಹಜ ಕೂಡ. ಪಾಕಿಸ್ತಾನ ಮತ್ತು ಚೀನಾ ಅತ್ಯಾಪ್ತ ರಾಷ್ಟ್ರಗಳೆಂಬುದು ಈಗೇನೂ ಗುಟ್ಟಾಗಿ ಉಳಿದಿಲ್ಲ. ಈ ವಿಷಯದಲ್ಲಿ ಕೊಂಚ ಮುಜಗರ ಎದುರಿಸಿದ್ದ ಭಾರತಕ್ಕೆ, ಚೀನಾಗೆ ತಿರುಗೇಟು ನೀಡಲು ಸಿಕ್ಕಿದ್ದ ಹೊಸ ಅಸ್ತ್ರವೇ ಈ `ದೋಲ್ಕು್ ಇಸಾ'.
ಅಮೆರಿಕ ನೆರವಿನಿಂದ ಭಾರತದ ಧರ್ಮಶಾಲಾದಲ್ಲಿ ಏಪ್ರಿ್ 30ರಿಂದ ಎರಡು ದಿನಗಳ ಕಾಲ ನಡೆದ `ಇನಿಶಿಯೇಟಿ್‌ಸ ಫಾ್ ಚೀನಾ' ಸಮಾವೇಶದಲ್ಲಿ ಪಾಲ್ಗೊಳ್ಳಲು ವಿಶ್ವ ಉಯಿಗು್ ಕಾಂಗ್ರೆ್(ಡಬ್ಲ್ಯೂಯುಸಿ)ನ ಪ್ರಧಾನ ಕಾರ್ಯದರ್ಶಿ ದೋಲ್ಕು್ ಇಸಾಗೆ ಆಹ್ವಾನ ನೀಡಲಾಗಿತ್ತು. ಇದಕ್ಕಾಗಿ ಇಸಾ ಭಾರತಕ್ಕೆ ಬರುವ ಸಿದ್ಧತೆ ನಡೆಸಿದ್ದರು. ವೀಸಾ ಕೂಡ ಸಿಕ್ಕಿತ್ತು. ಈ ವಿಷಯ ಭಾರತೀಯ ಮಾಧ್ಯಮಗಳಲ್ಲಿ `ಚೀನಾಗೆ ಭಾರತದ ಎದಿರೇಟು' ಎಂದು ಬಿಂಬಿತವಾಗುತ್ತಿದ್ದಂತೆ ಎಚ್ಚೆತ್ತುಕೊಂಡ ಚೀನಾ; ಭಾರತದ ಮೇಲೆ ಒತ್ತಡ ತಂದು, ದೋಲ್ಕು್ಗೆ ನೀಡಿದ್ದ ವೀಸಾ ರದ್ದಾಗುವಂತೆ ನೋಡಿಕೊಂಡಿತು. ಇಸಾ ಚೀನಾಕ್ಕೆ ಬೇಕಾಗಿರುವ ಮೋ್‌ಟ ವಾಟೆಂ್ ಉಗ್ರ ನಾಯಕ. ಆತನ ವಿರುದ್ಧ ಇಂಟ್ಪೋ್ನಲ್ಲಿ ರೆ್ ಕಾರ್ನ್ ನೋಟಿ್ ನೀಡಲಾಗಿದೆ. ಅಂಥವನಿಗೆ ಹೇಗೆ ವೀಸಾ ನೀಡುತ್ತೀರಿ ಎಂದು ಪ್ರಶ್ನಿಸಿತು. ಚೀನಾದ ಒತ್ತಡಕ್ಕೆ ಕೊನೆಗೂ ಮಣಿದ ಭಾರತ, ಯಾವುದೇ ವಿವರ ನೀಡದೆ ದೋಲ್ಕು್ ಇಸಾ ಅವರಿಗೆ ನೀಡಲಾಗಿದ್ದ ವೀಸಾ ರದ್ದು ಮಾಡಿತು. ಅಲ್ಲಿಗೆ ಮತ್ತೊಂದು ಬಾರಿ ಭಾರತ ಅಂತಾರಾಷ್ಟ್ರೀಯವಾಗಿ ಮುಜಗರ ಎದುರಿಸುವಂತಾಯಿತು. ಯಾವುದೇ ದೂರದೃಷ್ಟಿ ಇಲ್ಲದೆ, ಭಾವನಾತ್ಮಕ, ಸೇಡಿನ ಕ್ರಮಗಳಿಂದ ನಿರ್ಧಾರ ಕೈಗೊಂಡರೆ ಇಂಥ ಮುಜಗರದ ಸನ್ನಿವೇಶಗಳು ಎದುರಿಸಲೇಬೇಕಾಗುತ್ತದೆ. ಇದಕ್ಕೆ ಭಾರತ ಕೂಡ ಹೊರತಾಗಿಲ್ಲ.
ಇದೆಲ್ಲ ಸರಿ. ಆದರೆ, ಈ ದೋಲ್ಕು್ ಇಸಾ ಯಾರು? ಆತನ ಮೇಲೇಕೆ ಚೀನಾಗೆ ಮುನಿಸು? ಎಂಬಂಥ ಪ್ರಶ್ನೆಗಳು ಹುಟ್ಟಿಕೊಳ್ಳುವುದು ಸಹಜ. ಚೀನಾದ ವಾಯವ್ಯ ಭಾಗಕ್ಕಿರುವ ವಿಶಾಲವಾದ ಭೂ ಪ್ರದೇಶವೇ `ಕ್ಸಿ್ಜಿಯಾಂ್ ಉಯಿಗು್ ಸ್ವಾಯತ್ತ ಪ್ರದೇಶ.' ಖನಿಜಗಳು ಮತ್ತು ನೈಸರ್ಗಿಕ ಅನಿಲ ಹೇರಳವಾಗಿರುವ ಈ ಪ್ರದೇಶ ಚೀನಾಗೆ ಅಕ್ಷರಶಃ ಚಿನ್ನದ ಗಣಿ. ಈ ಪ್ರದೇಶದಲ್ಲಿ ಅನೇಕ ಪಂಗಡಗಳಿದ್ದು ಈ ಪೈಕಿ ಉಯಿಗು್ ಪಂಗಡದವರೇ ಹೆಚ್ಚಾಗಿದ್ದಾರೆ. ಚೀನಾದಲ್ಲಿ ಅಲ್ಪಸಂಖ್ಯಾತರಾಗಿರುವ ಇವರು ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸುತ್ತಲೇ ಬಂದಿದ್ದಾರೆ. `ವಿಶ್ವ ಉಯಿಗು್ ಕಾಂಗ್ರೆ್' ಎಂಬ ಸಂಘಟನೆ ಈ ಹೋರಾಟದ ನೇತೃತ್ವ ವಹಿಸಿಕೊಂಡಿದೆ. ಇದರ ಅಧ್ಯಕ್ಷ ರೆಬಿಯಾ ಖಾದಿ್. ಇವರು ಅಮೆರಿಕದಲ್ಲಿದ್ದಾರೆ. ಈ ಸಂಘಟನೆಯ ಪ್ರಧಾನ ಕಾರ್ಯದರ್ಶಿಯೇ ಈ ದೋಲ್ಕು್ ಇಸಾ. ಸದ್ಯ ಜರ್ಮನಿಯಲ್ಲಿ ವಾಸವಾಗಿರುವ ಇಸಾ, ಪ್ರಜಾಪ್ರಭುತ್ವದ ಪರ ಹೋರಾಟಗಾರ. 1997ರಲ್ಲಿ ಚೀನಾದಿಂದ ಪಲಾಯನ ಮಾಡಿ ಜರ್ಮನಿಯಲ್ಲಿ ಆಶ್ರಯ ಪಡೆದರು. 2006ರಲ್ಲಿ ಜರ್ಮನಿ ಇವರಿಗೆ ಅಲ್ಲಿನ ಪೌರತ್ವ ನೀಡಿದೆ.
ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವ ವಿಶ್ವ ಉಯಿಗು್ ಕಾಂಗ್ರೆ್ ಚಟುವಟಿಕೆಗಳನ್ನು ಚೀನಾ ಸರಕಾರ ಉಗ್ರ ಕೃತ್ಯಗಳಂದೇ ಪರಿಗಣಿಸುತ್ತದೆ. ಹೀಗಾಗಿ, ಈ ಹೋರಾಟದಲ್ಲಿ ಪಾಲ್ಗೊಳ್ಳುವವರೆಲ್ಲರೂ ಉಗ್ರರೇ. ಕ್ಸಿ್ಜಿಯಾಂ್ಗೆ ಪೂರ್ವ ತುರ್ಕಿಸ್ತಾನ ಎಂದೂ ಕರೆಯಲಾಗುತ್ತದೆ. ಹಾಗೆ ನೋಡಿದರೆ, ವೀಸಾಗೆ ಸಂಬಂಧಿಸದಂತೆ ಇಸಾ ಇದೇ ಮೊದಲ ಬಾರಿಗೇನೂ ತೊಂದರೆಯಲ್ಲಿ ಸಿಕ್ಕಿ ಹಾಕಿಕೊಂಡಿಲ್ಲ. 2003ರಿಂದಲೇ ದೋಲ್ಕು್ ಚೀನಾದ ಉಗ್ರರ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ. ಉಯಿಗು್ರ  ಹೋರಾಟಕ್ಕೆ ಅಂತಾರಾಷ್ಟ್ರೀಯ ಮಾನ್ಯತೆ ತಂದುಕೊಡಲು 2008ರಲ್ಲಿ ಬೀಜಿಂ್ನಲ್ಲಿ ನಡೆದ ಒಲಿಂಪಿಕ ಬಹಿಷ್ಕರಿಸುವಂತೆಯೂ ದೋಲ್ಕು್ ಕರೆ ನೀಡಿದ್ದರು. ಇದಕ್ಕೂ ಮುಂಚೆ 2006ರಲ್ಲಿ ತೈವಾ್ಗೆ ೇಟಿ ನೀಡಿ, ಅಲ್ಲಿನ ಹೋರಾಟದಲ್ಲಿ ಪಾಲ್ಗೊಂಡಿದ್ದರು. ಇದು ಚೀನಾಕ್ಕೆ ಗೊತ್ತಾಗುತ್ತಿದ್ದಂತೆ ಒತ್ತಡ ತಂದು, ತೈವಾ್ ಪ್ರವೇಶವನ್ನು ನಿರಾಕರಿಸುವಂತೆ ಮಾಡಿತು. ಇದೇ ವೇಳೆ, ವಿಶ್ವ ಉಯಿಗು್ ಕಾಂಗ್ರೆ್ನ ಪ್ರಧಾನ ಕಾರ್ಯದರ್ಶಿ ಸ್ಥಾನದಿಂದ ದೋಲ್ಕು್ ಹಿಂದೆ ಸರಿದರೆ ಅವರ ಮೇಲಿರುವ ನಿಷೇಧವನ್ನು ಹಿಂತೆಗದುಕೊಳ್ಳಲಾಗುವುದು ಎಂದೂ ಪ್ರಕಟಿಸಿತು. ಆದರೆ, ದೋಲ್ಕು್ ಇದಾವುದಕ್ಕೂ ಬಗ್ಗದೆ, ಉಯಿಗು್ ಪ್ರತ್ಯೇಕತೆಯ ಹೋರಾಟದ ಮುಂಚೂಣಿಯಲ್ಲೇ ಇದ್ದಾರೆ. ಇಸಾ ಮತ್ತೊಮ್ಮೆ ಇಂಥ ತೊಂದರೆಗೆ ಸಿಕ್ಕಿ ಹಾಕಿಕೊಂಡಿದ್ದು ದಕ್ಷಿಣ ಕೊರಿಯಾಗೆ ಹೋದಾಗ. ಅದು 2009ನೇ ಇಸ್ವಿ. ದಕ್ಷಿಣ ಕೊರಿಯಾದಲ್ಲಿ `ಏಷ್ಯಾ ಪ್ರಜಾಪ್ರಭುತ್ವೀಕರಣ ವಿಶ್ವ ವೇದಿಕೆ'ಯ ಸಮಾವೇಶ ಆಯೋಜನೆಯಾಗಿತ್ತು. ಇದಕ್ಕೆ ಇಸಾ ಕೂಡ ಆಮಂತ್ರಿತರಾಗಿದ್ದರು. ಈ ಹಿನ್ನೆಲೆಯಲ್ಲಿ ಅವರು ದಕ್ಷಿಣ ಕೊರಿಯಾಕ್ಕೆ ತೆರಳುತ್ತಿದ್ದಂತೆ ಅವರನ್ನು ವಿಮಾನ ನಿಲ್ದಾಣದಲ್ಲಿ ವಶಕ್ಕೆ ತೆಗೆದುಕೊಳ್ಳಲಾಗಿತ್ತು. ಈ ಬಗ್ಗೆಯೂ ಇಸಾ ತಮ್ಮ ವಿರೋಧವನ್ನು ದಾಖಲಿಸಿದ್ದರು. ಅಲ್ಲದೆ, ಅ್ರೀಪ್ರಸೆಂಟೆ್ ಆ್ಯಂ್ ಪೀಪ್‌ಸ ಆರ್ಗನೈಷೇ್ ಕೂಡ, ದಕ್ಷಿಣ ಕೊರಿಯಾದ ಕ್ರಮವನ್ನು ಖಂಡಿಸಿತ್ತು. ಇಸಾ ವಿರುದ್ಧ ಚೀನಾ ಮಾಡುತ್ತಿರುವ ಆರೋಪಗಳೆಲ್ಲವೂ ನಿರಾಧಾರ. ಅವರು ಯಾವುದೇ ಉಗ್ರ ಚಟುವಟಿಕೆ ನಡೆಸಿಲ್ಲ ಮತ್ತು ಅಂಥ ಸಂಘಟನೆಗಳ ಜತೆ ಗುರುತಿಸಿಕೊಂಡಿಲ್ಲ ಎಂದು ಹೇಳಿತು. ಎರಡು ದಿನಗಳ ಕಾಲ ದಕ್ಷಿಣ ಕೊರಿಯಾ ವಶದಲ್ಲಿದ್ದ ಇಸಾರನ್ನು ಬಿಡುಗಡೆ ಮಾಡಲಾಯಿತಾದರೂ, ಅವರಿಗೆ ದಕ್ಷಿಣ ಕೊರಿಯಾ ಪ್ರವೇಶಕ್ಕೆ ಅವಕಾಶ ಸಿಗಲೇ ಇಲ್ಲ. ಇದೀಗ ಭಾರತಕ್ಕೆ ಪ್ರವೇಶಿಸುವ ವಿಷಯದಲ್ಲೂ ಇಸಾ ಇಂಥದ್ದೇ ಸಮಸ್ಯೆಯನ್ನು ಎದುರಿಸಿದ್ದಾರೆ.
ದೋಲ್ಕು್ ಇಸಾ ಅವರ ವೈಯಕ್ತಿಕ ಜೀವನದ ಬಗ್ಗೆ ಅಷ್ಟೊಂದು ಮಾಹಿತಿ ಇಲ್ಲ. ಆದರೆ, ಅವರು ವಿದ್ಯಾರ್ಥಿ ದೆಸೆಯಿಂದಲೂ ಹೋರಾಟರರಾಗಿದ್ದರು ಎಂಬುದಂತೂ ಸತ್ಯ. 1980ರ ದಶಕದಲ್ಲಿ ಅವರು ಕ್ಸಿ್ಜಿಯಾಂ್ ವಿಶ್ವವಿದ್ಯಾಲಯದಲ್ಲಿ ಓದುತ್ತಿರುವಾಗಲೇ ಪ್ರಜಾಪ್ರಭುತ್ವ ಪರ ಹೋರಾಟಗಳನ್ನು ಸಂಘಟಿಸುತ್ತಿದ್ದರು. ಇದರಿಂದಾಗಿಯೇ ಅವರು ವಿಶ್ವವಿದ್ಯಾಲಯದಿಂದ ಹೊರಬೀಳಬೇಕಾಯಿತು. ಈ ವೇಳೆಯಲ್ಲಿ ಚೀನಾದ ಕಮ್ಯುನಿ್‌ಟ ಶಾಲೆಗಳಲ್ಲಿ ಕಲಿಯುತ್ತಿರುವ ಉಯಿಗು್ ಮಕ್ಕಳಿಗೆ, ಉಯಿಗು್ ಪಂಗಡದ ನಿಜವಾದ ಇತಿಹಾಸ, ಸಂಸ್ಕೃತಿ ತಿಳಿಸುವ ಪುಸ್ತಕಗಳನ್ನ ಹಂಚಲಾರಂಭಿಸಿದರು. ಇದು ಕೂಡ ಅಲ್ಲಿನ ಸರಕಾರದ ಕಣ್ಣು ಕೆಂಪಗಾಗುವಂತೆ ಮಾಡಿತು. ಅವರನ್ನು ಗಡಿಪಾರು ಮಾಡಿದ್ದರಿಂದ ಇಸಾ ಟರ್ಕಿಗೆ ತೆರಳಬೇಕಾಯಿತು. ಅರ್ಧಕ್ಕೆ ನಿಂತಿದ್ದ ಉನ್ನತ ವಿದ್ಯಾಭ್ಯಾಸವನ್ನು ಮುಂದುವರಿಸಲು ನಿರ್ಧರಿಸಿದ ಇಸಾ, ಟರ್ಕಿಯ ಘಾಜಿ ವಿಶ್ವವಿದ್ಯಾಲಯದಿಂದ ಪಾಲಿಟಿಕ ಮತ್ತು ಸೋಸಿಯಾಲಾಜಿ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದರು.
ಕಮ್ಯುನಿ್‌ಟ ಸರಕಾರದ ಹತ್ತಿಕ್ಕುವ ಧೋರಣೆಯ ವಿರುದ್ಧ ಹೋರಾಟ ನಡೆಸುತ್ತಲೇ ಬಂದಿರುವ ಇಸಾ, ಅಲ್ಪಸಂಖ್ಯಾತ ಉಯಿಗು್ ಮುಸ್ಲಿಮರ ಆಶಾಕಿರಣ. ಇಂದಲ್ಲ ನಾಳೆ, ಕ್ಸಿ್ಜಿಯಾಂ್ ಉಯಿಗು್ ಸ್ವಾಯತ್ತ ಪ್ರದೇಶ ಪೂರ್ವ ತುರ್ಕಿಸ್ತಾನವಾಗಿ ಬದಲಾಗುತ್ತದೆ ಎಂಬ ನಂಬಿಕೆಯಲ್ಲಿದ್ದಾರೆ. ಆದರೆ, ಅದು ಅಷ್ಟು ಸರಳವಲ್ಲ. ಟಿಬೆಟಿಯನ್ನರು ಮತ್ತು ಉಯಿಗು್ರು ಸಮಾನ ದುಃಖಿಗಳು. ಟಿಬೆಟಿಯನ್ನರು ಕೂಡ ಪ್ರತ್ಯೇಕತೆಗಾಗಿ ದಶಕಗಳಿಂದಲೂ ಹೋರಾಟ ನಡೆಸುತ್ತಲೇ ಬಂದಿದ್ದಾರೆ. ಏಷ್ಯಾದಲ್ಲೇ ಆರ್ಥಿಕ ಬಲಾಢ್ಯ ರಾಷ್ಟ್ರವಾಗಿರುವ ಚೀನಾದಲ್ಲಿ  ಪ್ರಜಾಪ್ರಭುತ್ವದ ಬೀಜಗಳನ್ನು ಬಿತ್ತುವ ಕೆಲಸವನ್ನು ದೋಲ್ಕು್ ಇಸಾ ಸೇರಿದಂತೆ ಕೆಲವರು ಮಾಡುತ್ತಿದ್ದಾರೆ. ಈ ಬೀಜ ಮೊಳಕೆಯೊಡೆಯುತ್ತಿದ್ದಂತೆ ಚೀನಾ ಅದನ್ನು ಹಿಸುಕುವುದರಲ್ಲಿ ಯಶಸ್ವಿಯಾಗುತ್ತದೆ. ವ್ಯಕ್ತಿಗಳನ್ನು ಹತ್ತಿಕ್ಕಬಹುದು. ಆದರೆ ಚಳವಳಿಗಳನ್ನ ಹತ್ತಿಕ್ಕಲಾಗುವುದಿಲ್ಲ. ಈ ಹಿನ್ನೆಲೆಯಲ್ಲಿ ದೋಲ್ಕು್ ಇಸಾರಂಥ ಅನೇಕ ಹೋರಾಟಗಾರರು ಮಹತ್ವದ ವ್ಯಕ್ತಿಗಳು ಎನಿಸಿಕೊಳ್ಳುತ್ತಾರೆ.

This article published in VK on May 1, 2016 Edition

ಸೋಮವಾರ, ಮಾರ್ಚ್ 28, 2016

ಭಾವಕೋಶ ಕಳೆದುಕೊಂಡ ಹೋಳಿಯಾಟ!

ಆಕೆಯ ಕನಸುಗಳನ್ನು ಈಡೇರಿಸುವ ಸೌಭಾಗ್ಯ ನನಗಿಲ್ಲ ಎಂದುಕೊಂಡು ಇಡೀ ದಿನ ಅತ್ತ


- ಪ್ರದ್ಯುಮ್ನ
ಮನೆಯ ಕಿಟಕಿಯಾಚೆ, ಮಕ್ಕಳು ಕೈಯಲ್ಲಿ ಪಿಚಕಾರಿ ಹಿಡಿದು ಒಬ್ಬೊರಿಗೊಬ್ಬರು ಬಣ್ಣ ಎರಚುತ್ತಿದ್ದರು. ಅವರ ಮುಖದಲ್ಲಿ ಸಂತೋಷದ ಹೊನಲು. ಬಣ್ಣದ ಓಕುಳಿಯಾಟದಲ್ಲಿ ಮಿಂದೆದ್ದ ಅವರಿಗೆ ಜಗತ್ತಿನ ಪರಿವೇ ಇರಲಿಲ್ಲ. ಖಾಲಿಯಾದ ಪಿಚಕಾರಿಗಳನ್ನು ಬಣ್ಣದ ನೀರು ತುಂಬಿದ್ದ ಕ್ಯಾ್ಗಳಲ್ಲಿ ಅದ್ದಿ ಮತ್ತೆ ಓಡುತ್ತಿದ್ದರು. ಒಬ್ಬೊರ ಮೈ ಮೇಲೆ ಒಬ್ಬರು ಬೀಳುತ್ತಿದ್ದರು, ಏಳುತ್ತಿದ್ದರು. ಮುಖದ ತುಂಬ ಬಣ್ಣ ಬಣ್ಣದ ಭಾವ. ಕೇಕೆ ನಲಿವುಗಳಿಗೆ ಮಿತಿಯೇ ಇಲ್ಲದ ಕ್ಷಣಗಳವು. ಹೋಳಿಯಾಟವೇ ಅಂಥದ್ದು. ಬಣ್ಣಗಳ ಜತೆಗಿನ ಸಂವಹನ ನಿಮ್ಮನ್ನು ಅನುಭೂತಿಯ ಸಾಂಗತ್ಯಕ್ಕೆ ಕೊಂಡೊಯ್ಯುತ್ತದೆ. ಬಣ್ಣಗಳೇ ಹಾಗೆ, ನಿಮ್ಮ ನೆನಪುಗಳ ಪುಟ್ಟ ಗೂಡನ್ನು ಹೊಕ್ಕು, ಬೆಚ್ಚಿಗೆ ಕುಳಿತಿದ್ದ ನೆನಪುಗಳಿಗೆ ರೆಕ್ಕೆ ಕಟ್ಟುತ್ತುದೆ, ಗರಿ ಬಿಚ್ಚಿ ಹಾರಾಡಲು ಪ್ರೇರೇಪಿಸುತ್ತದೆ. ಬಣ್ಣ ಬಿಂಬಿಸುವ ಭಾವಗಳೇ ನೂರಾರು. ಪ್ರತಿ ಬಣ್ಣವೂ ಸಂಕೇತಿಸುವ ಅದರದ್ದೇ ಆದ ಭಾವನಾಲೋಕ. ಆದರೆ, ಈ ಬಿಳಿ ಬಣ್ಣವಿದೆಯಲ್ಲ ಅದು ಮಾತ್ರ ನನ್ನನ್ನು ಇಂದಿಗೂ ಕಾಡುತ್ತಲೇ ಇದೆ. ಅವಳು ಆ ಬಣ್ಣದ ಸೀರೆಯುಟ್ಟು ಎದುರಾದಾಗಲೆಲ್ಲ ನನ್ನ ಎದೆಯಲ್ಲಿ ನೋವುಗಳ ಕಂಪನ, ಅವಳ ಮುಖ ನೋಡಲು ಧೈರ್ಯವೂ ಸಾಲದು. ವಿಪರ್ಯಾಸ ಎಂದರೆ, ಆಕೆ ಎಂದೂ ಬಿಳಿ ಬಣ್ಣ ಇಷ್ಟಪಟ್ಟವಳಲ್ಲ. ಅವಳಿಗೆ ತಿಳಿ ನೀಲಿ, ಎಂದರೆ ಎಲ್ಲಿಲ್ಲದ ಇಷ್ಟ. ಅದು ಆಕಾಶದ ಬಣ್ಣ. ಆಕಾಶ ಎಂದರೆ ಮಿತಿ ಇಲ್ಲದ್ದು. ಆಕೆಯ ಕನಸು, ಮಹತ್ವಾಕಾಂಕ್ಷೆಗೂ ಇರಲಿಲ್ಲ ಎಲ್ಲೆ. ಆಕಾಶದಂತೆ ಸ್ವಚ್ಛಂದವಾಗಿ ಇರಬೇಕು ಎಂದುಕೊಂಡವಳು. ಆದರೆ, ಜೀವನದಲ್ಲಿ ನಾವು ಅಂದುಕೊಂಡಂತೆ ಏನೂ ನಡೆಯುವುದಿಲ್ಲವಲ್ಲ. ಅದು ಆಕೆಗೂ ಗೊತ್ತಿತ್ತು. ಆದರೆ ಕನಸು ಕಾಣುವುದು ಬಿಟ್ಟಿರಲಿಲ್ಲ. ತನ್ನೆಲ್ಲ ಕನಸುಗಳನ್ನು ನನ್ನ ಜತೆ ಹಂಚಿಕೊಂಡಿದ್ದಳು. ಆಕಾಶವನ್ನು ಹುಚ್ಚು ರೀತಿಯಲ್ಲಿ ಇಷ್ಟಪಡುತ್ತಿದ್ದ ಅವಳು, ಗಗನ ಸಖಿಯಾಗಿ ದಿನವೆಲ್ಲ ಆಕಾಶದಲ್ಲಿ ಹಾರಾಡುತ್ತ, ದೇಶದಿಂದ ದೇಶಕ್ಕೆ ಸುತ್ತತ್ತಲೇ ಇರಬೇಕೊ ಕಣೋ ಎಂದು ದೊಡ್ಡದಾಗಿ ನಗುತ್ತಿದ್ದಳು.
ನನ್ನ ಅವಳ ಗೆಳೆತನ ತುಂಬ ಹಳೆಯದ್ದು. ಅಂದರೆ, ನಾವಿಬ್ಬರೂ ಒಟ್ಟಾಗಿಯೇ ಓದುತ್ತಿದ್ದೆವು. ನಮ್ಮ ನಡುವಿನ ಸಂಬಂಧಕ್ಕೆ ಹೆಸರೇ ಇರಲಿಲ್ಲ. ನೀವು ಅದನ್ನು ಯಾವುದೇ ಸಂಬಂಧದ ಚೌಕಟ್ಟಿಗೆ ಕಟ್ಟಿ ಹಾಕಲು ಸಾಧ್ಯವಿರಲಿಲ್ಲ. ಯಾವುದೇ ಸಂಬಂಧದ ಹೆಸರು ಹೇಳಿದರೂ ಅದನ್ನು ಮೀರಿದ ಅನುಬಂಧ ನಮ್ಮಿಬ್ಬರದ್ದು. ಆದರೆ, ಆಕೆಯ ಕುಟುಂಬ ಮಾತ್ರ ತುಂಬ ತುಂಬ ಟ್ರೆಡೀಷನ್. ಸಂಪ್ರದಾಯಸ್ಥ ಕುಟುಂಬದಲ್ಲಿ ಈಕೆ ಕಾಣುವ ಕನಸುಗಳಿಗೆ ಬೆಲೆ ದೊರೆಯುತ್ತಾ ಎಂದು ಒಂದೊಂದು ಸಾರಿ ನನಗೆ ಭಯವಾಗುತ್ತಿತ್ತು. ಆದರೆ ಆಕೆಗೆ ಹುಂಬ ಧೈರ್ಯ. ತಾನು ಅಂದುಕೊಂಡಿದ್ದನ್ನು ಸಾಧಿಸಿಯೇ ತೀರುತ್ತೇನೆಂಬ ಹುಚ್ಚು ಭರವಸೆ. ಆಕೆಯ ಇಷ್ಟಪಟ್ಟಿದ್ದೆಲ್ಲ ನೆರವೇರಲಿ ಎಂಬ ಸಣ್ಣ ಪ್ರಾರ್ಥನೆ ನನ್ನಿಂದ. ನಮ್ಮಿಬ್ಬರ ನಡುವಿನ ಸಲುಗೆ ಬೇರೆಯವರ ಕಣ್ಣಿಗೆ ಕುಕ್ಕುತ್ತಿತ್ತು. ಕಣ್ಣು ಕುಕ್ಕಿಸಿಕೊಂಡವರು ಸುಮ್ಮನಿದ್ದಾರೆಯೇ? ಏನು ಆಗಬೇಕಿತ್ತೋ.. ಅದೇ ಆಯ್ತು. ನಮ್ಮಿಬ್ಬರ ನಿರ್ವಾಜ್ಯ ಗೆಳತನಕ್ಕೆ ಕಲ್ಲು ಹಾಕುವ ಕೆಲಸವಾಗಿತ್ತು. ಹೀಗಿದ್ದಾಗ್ಯೂ.. ಕಾಲೇ್ನಲ್ಲಿ ನಾನು ಆಕೆ ಒಟ್ಟೊಟ್ಟಿಗೆ ಇರುತ್ತಿದ್ದೆವು. ಅದೊಂದು ದಿನ ಏನು ಆಯ್ತೋ ಗೊತ್ತಿಲ್ಲ. ಲೈಬ್ರರಿಯಲ್ಲಿ ಕೂತಿದ್ದವನ್ನು ಹೊರಗೆ ಕರೆ ತಂದು, ``ನನ್ನನ್ನು ಮದುವೆ ಆಗ್ತಿಯಾ? ನಿನ್ನ ಜತೆಗಿದ್ದರೆ ನನ್ನ ಕನಸೆಲ್ಲ ಈಡೇರುತ್ತದೆ,'' ಎಂದು ಒಂದೇ ಸವನೆ ಅಳಲಾರಂಭಿಸಿದಳು. ಎಂದೂ ಆ ರೀತಿಯಲ್ಲಿ ಯೋಚಿಸದ ನನಗೆ ಏನು ಹೇಳಬೇಕೋ... ಏನು ಹೇಳಬಾರದೋ ಒಂದು ಗೊತ್ತಾಗಲಿಲ್ಲ. ಆಕೆಯ ಕಣ್ಣೀರು ಮಾತ್ರ ಧಾರಾಕಾರವಾಗಿದೆ. ``ನೀನು ಮೊದಲು ಅಳುವುದನ್ನು ನಿಲ್ಲಿಸು,'' ಎಂದು ಸಂತೈಸಿದೆ. ನಮ್ಮಿಬ್ಬರ ಸಂಬಂಧಕ್ಕೆ ಹೊಸ ಅರ್ಥ, ಹೆಸರು ಕೊಡಬೇಕೆಂದು ನಿರ್ಧರಿಸಿಕೊಂಡೇ ಬಂದವಳಂತೆ ಕಾಣುತ್ತಿತ್ತು ಆಕೆ. ಆದರೆ, ನನಗೆ ಮಾತ್ರ ಆಕೆ ಹೀಗೇಕೆ ಒಮ್ಮಿಂದೊಮ್ಮೆ ಈ ರೀತಿ ಹೇಳುತ್ತಿದ್ದಾಳೆ ಎಂದು ಗೊಂದಲ. ಸ್ವಲ್ಪ ಹೊತ್ತಿನ ಬಳಿಕ ಸುಧಾರಿಸಿಕೊಂಡು, ಆಕೆ ಎಲ್ಲ ಹೇಳಿದಳು. ``ನೋಡೋ.. ನಾನು ಏನೆಲ್ಲ ಕನಸುಗಳನ್ನು ಇಟ್ಟುಕೊಂಡಿದ್ದೇನೆ. ಹೇಗೆಲ್ಲ ಬದುಕು ಕಟ್ಟಿಕೊಳ್ಳಬೇಕು ಎಂದುಕೊಂಡಿದ್ದೇನೆ. ಆದರೆ, ನಮ್ಮ ಮನೆಯಲ್ಲಿ ಮಾತ್ರ ಮದುವೆ ಮಾಡಿಕೊಡಲು ನಿರ್ಧರಿಸಿದ್ದಾರೆ. ನನ್ನ ಅತ್ತೆಯ ಮಗನಿಗೆ,'' ಎಂದವಳೇ ಮಾತು ಹೊರಡಲಾರದೆ ಮತ್ತೆ ಅಳುವಿಗೆ ಶರಣಾದಳು. ಈಗ ನನಗೆಲ್ಲ ಅರ್ಥವಾಗಿತ್ತು. ಬಹುಶಃ ಈಕೆಯ ಗಗನಸಖಿಯಾಗಿ ಆಕಾಶದಲ್ಲಿ ಹಾರಾಡುತ್ತ, ದೇಶ ದೇಶ ಸುತ್ತುವ ಆಸೆ ಮತ್ತು ನನ್ನೊಂದಿಗಿನ ಈ ಒಡನಾಟವೇ ಆಕೆಯ ಮನೆಯವರು ಇಂಥ ನಿರ್ಧಾರಕ್ಕೆ ಬರಲು ಕಾರಣ. ಆದರೆ ನಾನು ನಿಜವಾಗಲೂ ಆಕೆಯ ಆಸೆ ಆಕಾಂಕ್ಷೆಗಳನ್ನು ಈಡೇರಿಸಬಲ್ಲೆನಾ? ಅಂಥ ಶಕ್ತಿ ನನಗಿದೆಯಾ? ನನ್ನ ಜೀವನವೇ ಇನ್ನೂ ಒಂದು ಹಂತಕ್ಕೆ ಬರಬೇಕು. ಇದರ ಮಧ್ಯೆಯೇ ಆಕೆಯ ಜವಾಬ್ದಾರಿಯನ್ನು ನಾನು ತೆಗೆದುಕೊಳ್ಳಲು ಶಕ್ತನಾ? ಎಲ್ಲಕ್ಕಿಂತ ಹೆಚ್ಚಾಗಿ ನಾನು ಅವಳನ್ನು ಪ್ರೀತಿಸುತ್ತಿದ್ದೇನಾ.. ಹೀಗೆ ನಾನಾ ಪ್ರಶ್ನೆಗಳು ತಲೆಯಲ್ಲಿ ಓಡಲಾರಂಭಿಸಿದ್ದವು. ನಾನು ಕೇಳಿಕೊಂಡ ಆ ಕೊನೆಯ ಪ್ರಶ್ನೆ ಮಾತ್ರ ತುಸು ಹೊತ್ತು ಯೋಚಿಸುವಂತೆ ಮಾಡಿತು.  ಆಕೆಯೆಡೆಗೆ ನನ್ನಲ್ಲಿರುವ ಭಾವ ಪ್ರೀತಿಯದ್ದಾ.. ಬರೀ ಗೆಳೆತನದ್ದಾ..? ಹೀಗೆ ಪೂರ್ತಿ ಕ್ಪ್ಯೂಷ್. ಯಾವುದನ್ನು ನಿರ್ಧರಿಸಲಿಕ್ಕಾಗದ ಕ್ಷಣಗಳು ಅವು. ``ನನಗೆ ಒಂದಿಷ್ಟು ಸಮಯ ಕೊಡು. ಯೋಚಿಸಿ ಹೇಳುತ್ತೇನೆ,'' ಎಂದು ಆಕೆಯನ್ನು ಸಮಾಧಾನಪಡಿಸಿ ಮನೆಗೆ ಕಳುಹಿಸಿಕೊಟ್ಟೆ.
ಮನೆಗೆ ಹೋದವನಿಗೆ ತಲೆ ತುಂಬ ಇದೇ ವಿಚಾರಗಳ ಸಂಘರ್ಷ. ಕೊನೆಗೂ ಒಂದು ನಿರ್ಧಾರಕ್ಕೆ ಬಂದೆ. ಹೌದು... ನಾನು ಅವಳನ್ನು ಇಷ್ಟಪಡುತ್ತೇನೆ. ಆದರೆ, ಅದಕ್ಕೊಂದು ರೂಪವಿರಲಿಲ್ಲ ಅಷ್ಟೆ. ಅವಳೇ ಅದಕ್ಕೊಂದು ಸ್ಪಷ್ಟವಾದ ರೂಪ ಕೊಟ್ಟಿದ್ದಾಳೆ. ಇನ್ನೇನು ಕಾಲೇ್ ಮುಗಿಯುವ ಹಂತದಲ್ಲಿದೆ. ಒಂದಿಷ್ಟು ಕಷ್ಟಪಟ್ಟರೆ ಒಳ್ಳೆಯ ಕೆಲಸ ಪಡೆಯುವ ಸಾಮರ್ಥ್ಯ ನನ್ನಲ್ಲಿದೆ. ಆಕೆಯ ಕನಸು ಈಡೇರಿಸುವಷ್ಟು ಸಶಕ್ತನಾಗಬಲ್ಲೆ. ನಮ್ಮಿಬ್ಬರ ನಡುವಿನ ಈ ನಿರ್ವಾಜ್ಯ ಸಂಬಂಧಕ್ಕೆ ಒಂದು ಅರ್ಥ ಹೊಳೆಯುತ್ತಿದೆ. ಅದಕ್ಕೊಂದು ಚೌಕಟ್ಟು ವಿಧಿಸಿಕೊಳ್ಳುವುದರಲ್ಲಿ ತಪ್ಪಿಲ್ಲ ಎನಿಸುತ್ತದೆ ಎಂದು ನಿರ್ಧರಿಸಿಕೊಂಡೆ.
ಆದರೆ, ವಿಧಿಯಾಟ ಬೇರೆ ಇತ್ತು. ನನ್ನ ನಿರ್ಧಾರ ತಿಳಿಸಲು ನಾಲ್ಕೈದು ದಿನ ತೆಗೆದುಕೊಂಡೆ. ಕೊನೆಗೆ, `ನಿನ್ನೊಂದಿಗೆ ಹೆಜ್ಜೆ ಹಾಕಲು ನಾನು ಸಿದ್ಧ' ಎಂಬ ವಾಕ್ಯವನ್ನು ಆಕೆಯ ಮುಂದೆ ಕಣ್ಣುಮ್ಚುಚಿಕೊಂಡು ಹೇಳಬೇಕೆಂದುಕೊಂಡು ಕಾಲೇ್ಗೆ ಬಂದೆ. ಆದರೆ ಅಲ್ಲಿ ಆಕೆಯಿಲ್ಲ. ಒಂದು ವಾರವಾದರೂ ಆಕೆ ಕಾಲೇ್ನತ್ತ ಸುಳಿಯತ್ತಲೇ ಇಲ್ಲ. ಎಲ್ಲಿ ಹೋದಳು ಎಂಬ ಪ್ರಶ್ನೆಗೆ ಉತ್ತರ ಇಲ್ಲ. ಆಕೆಯ ಮನೆಗೆ ಹೋಗಿ ಕೇಳುವಷ್ಟು ಧೈರ್ಯ ನನ್ನಲ್ಲಿ ಇರಲಿಲ್ಲ. ಕೊನೆಗೂ ಗೊತ್ತಾಯಿತು. ಆಕೆಯನ್ನು ಬೇರೆ ಊರಿಗೆ ಕರೆದುಕೊಂಡು ಹೋಗಿದ್ದಾರೆ. ಮುಂದಿನ ವಾರದಲ್ಲಿ ಮದುವೆ ಇದೆ ಎಂಬ ಮಾಹಿತಿ. ಅಲ್ಲಿಗೆ ಸ್ಪಷ್ಟವಾಗಿತ್ತು. ಇನ್ನು ಆಕೆ ನನಗೆ ಸಿಗಲ್ಲ. ಆಕೆಯ ಕನಸುಗಳನ್ನು ಈಡೇರಿಸುವ ಸೌಭಾಗ್ಯ ನನಗಿಲ್ಲ ಎಂದುಕೊಂಡು ಇಡೀ ದಿನ ಅತ್ತೆ. ಆದರೆ, ಜೀವನ ಮುಂದೆ ಹೋಗಬೇಕಲ್ಲ. ದಿನಗಳು ಉರುಳಿದವು, ವರ್ಷವೂ ಕಳೆಯಿತು. ಅಂದೂ ಹೋಳಿ ಇತ್ತು. ಎಲ್ಲೆಲ್ಲೂ ಬಣ್ಣಗಳ ರಂಗೋಲಿ. ಅಂದು ಹೀಗೆಯೇ ಮಕ್ಕಳ ಹೋಳಿಯಾಟ ನೋಡುತ್ತ ನಿಂತಿದ್ದವನಿಗೆ ಎದುರಾದವಳು ಅವಳೇ. ಅರೇ ಏನಾಯಿತು...? ಹೇಗಿದ್ದವಳು ಹೇಗಾಗಿದ್ದಾಳೆ. ಬಿಳಿ ಬಣ್ಣ ಕಂಡರೆ ಆಗದವಳು ಅದೇ ಬಣ್ಣದ ಸೀರೆ ಉಟ್ಟುಕೊಂಡಿರುವುದ್ಯಾಕೆ? ಛೇ ಅವಳ ಜೀವನದಲ್ಲಿ ಏನೆಲ್ಲ ಅನಾಹುತಗಳಾಗಿರಬಹುದು. ಅವಳ ಕನಸುಗಳಿಗೆ ಕೊಳ್ಳಿ ಇಟ್ಟವರಾರು ಎಂದು ಅವಳನ್ನೇ ಕೇಳಬೇಕು ಎಂದುಕೊಂಡೆ. ಆದರೆ, ಆಕೆ ಮಾತ್ರ, ನಾನು ಪರಿಚಯ ಇಲ್ಲದವನಂತೆ, ನೋಡಿಯೋ ನೋಡಿದಂತೆ ಹೊರಟೇ ಹೋದಳು. ಆಕೆಯ ಮುಖದಲ್ಲೀಗ ಭಾವಗಳಿಲ್ಲ. ಕಣ್ಣುಗಳಲ್ಲಿ ಕನಸುಗಳಿಲ್ಲ. ನಿರ್ಭಾವುಕತೆಯನ್ನು ಹೊದ್ದುಕೊಂಡವಳಂತಿದ್ದಾಳೆ. ಆಕೆಯನ್ನು ನೋಡಿದ ಮೇಲೆ ತಪ್ಪಿತಸ್ಥ ಭಾವ ನನ್ನದು. ಈಗ ಹೋಳಿಗಳು ನನ್ನ ಪಾಲಿಗೆ ಅರ್ಥ ಕಳೆದುಕೊಂಡಿವೆ. ಎಲ್ಲ ಬಣ್ಣಗಳ ನಡುವೆಯೂ ಬಿಳಿ ನನ್ನನ್ನು ಇನ್ನಿಲ್ಲದಂತೆ ಕಾಡುತ್ತಿದೆ. ಆಕೆಯ ಬಾಳಿನಲ್ಲಿ ಬಣ್ಣ ಬಣ್ಣಗಳ ಚಿತ್ತಾರ ಬಿಡಿಸಬೇಕಿತ್ತು ನಾನು. ಅವಳ ಇಂದಿನ ಪರಿಸ್ಥಿತಿಗೂ ನಾನು ಕೂಡ ಕಾರಣ ಎಂದು ನೆನಪಾದಾಗಲೆಲ್ಲ ಕಣ್ಣು ತೇವವಾಗುತ್ತದೆ.
ಮೇರೆ ಲಿಯೇ ತುಮ್ಹಾರಿ ಯಾದೇ ಹೀ ಕಾಫೀ ಹೈ
ಮೊಹಬ್ಬ್ ಮೇ ಜರೂರಿ ಮುಲಾಖ್ ನಹೀ
--------------------
Published in VK on 28th March 2016 edition

ಮಂಗಳವಾರ, ಮಾರ್ಚ್ 22, 2016

ಕವಿತೆ

ಕವಿತೆ ನನ್ನೊಳಗಿನ
ಕಾಣದ ಕಡಲಿನ ಹುಡುಕಾಟ
ಭಾವಗಳ ಜತೆ ಚೆಲ್ಲಾಟ
ಎಲ್ಲೆ ಮೀರಿದ ಮೌನದ ಚೀರಾಟ
ಮಾತು ಮೌನವಾಗಿ,
ಮೌನ ಮಾತಾಗುವ ಹೊತ್ತಲ್ಲಿ
ಮೆಲ್ಲನೆ ಉಸಿರು ಪಿಸುಗುಟ್ಟುವ ಕ್ಷಣವೇ ಕವಿತೆ

ಸೋಮವಾರ, ಫೆಬ್ರವರಿ 15, 2016

ಪ್ರೇಮೋದ್ಯಾನ ಸೀಳಿದ ಆ ಮೆಟ್ರೋ ಮಾರ್ಗ!

ಬೆಂಗಳೂರೆಂಬ ಮಹಾನಗರದಲ್ಲಿ ಪಾಕ ಬರ? ಅದಕ್ಕೆ ಅಲ್ಲವೇ ಇದಕ್ಕೆ `ಉದ್ಯಾನನಗರಿ' ಎಂಬ ಅಡ್ಡ ಹೆಸರು. ಈ ಪಾಕ ಬೆಳಗ್ಗೆಯಿಂದ ರಾತ್ರಿಯವರೆಗೂ  ಮಕ್ಕಳಿಂದ ಹಿಡಿದು ವಯಸ್ಸಾದವರೂ ಇರುತ್ತಾರೆ; ಬರುತ್ತಾರೆ, ಹೋಗುತ್ತಾರೆ. ಯಾವುದೋ ಕನಸುಗಳನ್ನು ಕಟ್ಟಿಕೊಂಡು, ದೂರದ ಊರಿನಿಂದ ಬರುವ ಅಬ್ಬೇಪಾರಿಗಳಿಗೂ ಇದೇ ಆಶ್ರಯ; ನಿರ್ಗತಿಕರಿಗೂ ಇದುವೆ ಅರಮನೆ. ಬಣ್ಣ ಬಣ್ಣದ ಕನಸುಗಳನ್ನು ಕಾಣುವವರಿಗೆ ಹುಲ್ಲಿನ ಹಾಸುಗೆ.., ವೃದ್ಧಾಪ್ಯದಲ್ಲಿ ಯೌವನದ ಮೆಲಕು ಹಾಕುವವರಿಗೆ ಸಿಟ್ಟಿಂ್ ಪಾಯಿಂ್... ಜೀವನದ ಜಂಜಾಟಕ್ಕೆ ಬೇಸತ್ತು ಸ್ವಲ್ಪ ಹೊತ್ತು ಕುಳಿತು ಹೋಗುವವರಿಗೆ ವಿರಾಮ ತಾಣ... ಬೊಜ್ಜು ಕರಗಿಸಿಕೊಳ್ಳುವವರಿಗೆ ವಾಕಿಂ್ ಟ್ರ್ಯಾಕ ಇವರ ಮ`್ಯೆಯೇ ಮೈಗೆ ಮೈ ತಾಕಿಸಿಕೊಂಡು, ಒಬ್ಬರ ಉಸಿರು ಮತ್ತೊಬ್ಬರಿಗೆ ಬಿಸಿಯಾಗುವಷ್ಟು ಹತ್ತಿರ ಕುಳಿತುಕೊಳ್ಳುವ ಪ್ರೇಮಿಗಳಿಗೆ ಲವ್ ಸ್ಪಾ್... ಆಗಾಗ ಪಾಕ ನಿರ್ವಾಹಕರು ಬಂದು ಕಾಟು ಕೊಡುವುದು ಬಿಟ್ಟರೆ ಎಲ್ಲವೂ ನಿತ್ಯ ಹರಿದ್ವರ್ಣ. ಎಲ್ಲರಿಗೂ ಒಂದಲ್ಲ ರೀತಿಯಲ್ಲಿ ತನ್ನ ನೆರವಿನ ಬಾಗಿಲು ಓಪ್ ಮಾಡಿಕೊಂಡಿರುವ ಉದ್ಯಾನಗಳು ಅದೆಷ್ಟೋ ಈ ಮಾಯಾನಗರಿಯಲ್ಲಿ.
ಈ ಉದ್ಯಾನವೂ ಅಷ್ಟೇ. ತುಂಬ ಚಿಕ್ಕದೂ ಅಲ್ಲ; ತುಂಬ ದೊಡ್ಡದು ಅಲ್ಲ. ರೋಡಿಗೆ ಅಂಟಿಕೊಂಡಿರುವ ಈ ಪಾಕ ಹಕ್ಕಿಗಳ ಕಲರವ.. ಅದನ್ನು ಸೀಳುವ ವಾಹನಗಳ ಕರ್ಕಶ ಹಾರ್ನು. ಅಂದು ಹಾಗೆಯೇ ಆಗಿತ್ತು. ಬೆಳ್ಳಂಬೆಳಗ್ಗೆ ಎದ್ದು, ಇದ್ದ ಡ್ರೆ್ಗಳಲ್ಲಿ ನೀಟಾಗಿರುವ ಪ್ಯಾಂಟು, ಶರ್ಟು ಹಾಕ್ಕೊಂಡು ಆ ಪಾಕ ಮುಂದೆ ಬಂದು ನಿಂತವನಿಗೆ, ಆರ್ಕು್ನಲ್ಲಿ ಪರಿಚಯವಾಗಿ, ಮೇ್ನಲ್ಲಿ ಚಾಟಿಂ್ ಮಾಡಿಕೊಂಡು, ಮೊಬೈ್ ನಂಬ್ಗಳು ಎಕ್ಸೆಂ್ ಆದ ಮೇಲೆ, ಗಂಟೆಗಟ್ಟಲೇ ಹರಟೆ ಹೊಡ್ಕೊಂಡು, ಒಂದು ರೇಂಜಿಗೆ ಇಬ್ಬರು ಲ್ ಮಾಡಿಕೊಂಡು ಅಥವಾ ಹಾಗೆ ಅನ್ನಕೊಂಡಿದ್ದೆವು ನಾವು. ಅಂದು ಅವಳು ಕಡುಕಪ್ಪು ನೀಲಿ ಬಣ್ಣದ ಜೀ್‌ಸ ತೊಟ್ಟು, ಅದರ ಮೇಲೊಂದು ಕಂದು ಬಣ್ಣದ ಜುಬ್ಬಾ ತರಹದ್ದು ಟಾ್ ಹಾಕ್ಕೊಂಡು ಬಂದವಳ ಕೈಯಲ್ಲಿ ಇನ್ನೇನೂ ಮೂಲೆ ಸೇರಲೇಬೇಕಾದ ಸ್ಥಿತಿಯಲ್ಲಿದ್ದ ಮೊಬೈ್ ಫೋ್ ಇತ್ತು. ಅವಳು ಬರುತ್ತಿದ್ದನ್ನು ದೂರದಿಂದಲೇ ನೋಡಿದ ನನ್ನೆದೆಯೊಳಗೆ ಖಾರ ಕುಟ್ಟುವ ಮಷೀ್ನ ಸೌಂಡು. ಏನೋ ಒಂಥಾರ ಹೆದರಿಕೆ, ತಳಮಳ; ಅರೆ... ಫೋ್ನಲ್ಲಿ ಸರಿ ರಾತ್ರಿ ಮಾತಾಡಿಕೊಂಡರೂ ಆಗದ ಈ ಅವಸ್ಥೆ ಎದುರಿಗೆ ಬರುತ್ತಿದ್ದವಳನ್ನು ನೋಡಿದ ಕೂಡಲೇ ಯಾಕೆ? ಅದಕ್ಕೆ ಇರಬೇಕು, ಫೇ್ಬುಕ ಮೇ್ ಚಾ್ಗಳಲ್ಲಿ ಫ್ರೆಂ್ಶಿ್ ಸುಲ`. ಅದೇ ಮುಖ ಎದುರಾದಾಗ ಮಾತನಾಡಲು ಪದಗಳೇ ಸಿಗುವುದಿಲ್ಲ; ಚಾ್ನಲ್ಲಿ ಮಾತುಗಳಿಗೆ ಬರವೇ ಇರುವುದಿಲ್ಲ. ಏನಾಗುತ್ತಿದೆ ಎನ್ನುವಷ್ಟರಲ್ಲಿ ನನ್ನ ಮುಂದೆ ಬಂದವಳೇ ``ಆ್ ಯೂ ಪ್ರದ್ಯುಮ್ನ..?'' ಎಂದು ಕತ್ತು ಕೊಂಕಿಸಿ ಕೇಳಿದವಳಿಗೆ, ಹಂ.. ಹಂ.. ತಡಬಡಾಯಿಸುತ್ತಲೇ ಎಂದೆ. ನನಗಾದ ತಳಮಳ, ಹೆದರಿಕೆ ಅವಳಿಗಾಗುತ್ತಿತ್ತಾ? ಗೊತ್ತಿಲ್ಲ. ಒಂದು ವೇಳೆ ಆಗುತ್ತಿದ್ದರೂ ಅವಳು ಅಂದು ತೋರಿಸಿಕೊಳ್ಳಲಿಲ್ಲ ಅನ್ನಿಸುತ್ತದೆ. ಪಾಕ ಆ ಮೇ್ ಗೇ್ನಿಂದ ಒಳಗೆ ಹೊರಟವರಿಗೆ ಎಡ -ಬಲದಲ್ಲಿ ಯಾರಿದ್ದಾರೆಂಬ ಅರಿವು ನನಗೆ ಇರಲಿಲ್ಲ. ಅವಳೇನೂ ಅಂಥ ಅಪೂರ್ವ ಸುಂದರಿಯಲ್ಲದಿದ್ದರೂ ಕೃಷ್ಣ ಸುಂದರಿ. ತುಸು ಕಪ್ಪನೆ ಮುಖದಲ್ಲಿ ಬೆಳ್ಳನೆಯ ಕೊಳದಂಥ ಕಣ್ಣಿಗೆ ಹಚ್ಚಿದ್ದ ಕಾಡಿಗೆ ತುಸು ಹೆಚ್ಚೇ ಅವಳ ಸೌಂದರ್ಯ ಹೆಚ್ಚಿಸಿತ್ತು. ಅವಳ ನಡಿಗೆಯಲ್ಲಿ ಅಂಥ ಅವಸರವೇನೂ ಇರಲಿಲ್ಲ. ನಿ`ಾನವಾಗಿ, ನಾಜೂಕಾಗಿ ಹೆಜ್ಜೆ ಹಾಕುತ್ತಿದ್ದವಳನ್ನು ಹಿಂಬಾಲಿಸುತ್ತಿದ್ದೆ, ಪಾಕ ತುಸು ದೂರ ಹೋಗುತ್ತಿದ್ದಂತೆ ಖಾಲಿಯಾದ ಬೆಂ್ ಕಾಣಿಸಿತು. ಅದನ್ನು ತೋರಿಸಿ, ``ಕುಳಿತುಕೊಳ್ಳೋಣವಾ?'' ಎಂದವಳೇ ನನ್ನ ಉತ್ತರಕ್ಕೂ ಕಾಯದೇ ಕೂತೇ ಬಿಟ್ಟಳು. ಅವಳ ಪಕ್ಕದಲ್ಲೇ ಕುಳಿತುಕೊಳ್ಳಲೇ  ಮಂಗ್ಯಾ... ಅಂತಾ ಒಂದು ಮನಸ್ಸು ಹೇಳಿದರೆ, ಮತ್ತೊಂದು ಮನಸ್ಸು, ಲೋ... ಹಾಗೇನಾದರೂ ಕುತ್ಕೊಂಡ್ರೆ ಇ್ಡಿಸೆಂ್ ಫೆಲೋ ಅಂದ್ಕೊಂಡು ಬಿಟ್ಟಾಳು. ಬೆಂಚಿನ ಆ ತುದಿಯಲ್ಲಿ ಕುತ್ಕೊ ಎನ್ನುತ್ತಾ ಎರಡು ಮನಸ್ಸುಗಳು ಸಂಘರ್ಷಕ್ಕಿಳಿಯುತ್ತಿರುವಾಗಲೇ ಆಕೆ, ನನ್ನ ಕೈ ಹಿಡಿದು... ಬಾ ಕುತ್ಕೊ ಎಂದು ಜಗ್ಗಿ ಕುಳ್ಳರಿಸಿದಳು. ಅರೆ.. ಏನಾಗುತ್ತಿದೆ? ನಾನು ಪೂರ್ತಿ ಅವಳ ಅಣತಿಯಂತೆ ನಡೆದುಕೊಳ್ಳುತ್ತಿದ್ದೇನಾ? ಅವಳಿಗೆ ಶರಣಾಗಿ ಬಿಟ್ದಿದ್ದೀನಾ? ಎಲ್ಲಿ ಕುತ್ಕೊಬೇಕು ಎನ್ನುವ ಅವಕಾಶದ ಆಯ್ಕೆಯೂ ನನಗಿಲ್ಲವಲ್ಲಾ ಎಂಬ ಯೋಚನೆಯಲ್ಲಿ ಮುಳುಗಿರುವಾಗಲೇ, ಹಾಂ.., ಮತ್ತೆ ಎಂದು ಮಾತು ಶುರು ಮಾಡಿದಳು. ``ಫೋ್ನಲ್ಲಿ ಅಷ್ಟೊಂದು ಲೀಲಾಜಾಲವಾಗಿ ಮಾತಾಡೋನು, ಇವತ್ತು ಯಾಕೆ ಒಳ್ಳೆ ಮೂಗನ ತರಹ ಆಡ್ತಿದ್ದೀಯಾ? ಮಾತಾಡು,'' ಎಂದವಳ ಮುಖವನ್ನು ಒಮ್ಮೆ ದಿಟ್ಟಿಸಿ ನೋಡಿದೆ. ಆದರೆ ಬಹಳ ಹೊತ್ತಿನವರೆಗೆ ಹಾಗೆ ನೋಡುವುದು ನನ್ನಿಂದಾಗಲಿಲ್ಲ. ಆದಷ್ಟು ನಮ್ಮಿಬ್ಬರ ನಡುವಿನ ದೃಷ್ಟಿ ಯುದ್ಧವನ್ನು ತಪ್ಪಿಸಲು ಯತ್ನಿಸುತ್ತಿದ್ದೆ. ಅವಳಿಗೆ  ನನ್ನ ಮೊದಲನೆ ಬಾರಿಗೆ ನೋಡುತ್ತಿದ್ದೆನೆಂಬ ಯಾವ ಉದ್ವೇಗ, ಉನ್ಮಾದ, ತಳಮಳ ಇದ್ದಂತಿರಲಿಲ್ಲ; ನನಗಿತ್ತು.
ನಾವಿದ್ದ ಬೆಂ್ನತ್ತಲೇ ಒಬ್ಬ ಹೆಂಗಸು, ಬಗಲಲ್ಲಿ ಮಗುವನ್ನು ಎತ್ತಿಕೊಂಡು ಬಂದವಳೇ, ``ಅಣ್ಣಾ.. ನಿ್ ಜೋಡಿ `ಾಳ ಚಲೋ ಐತಿ, ನೀವು ಲಗ್ನಾ ಆಗ್ತೀರಿ. ಆ ಎಲ್ಲವ್ವನ ಆಣೆ ಮಾಡಿ ಹೇಳಕತ್ತಾನ್ರೀ,'' ಅಂದು ಬಿಟ್ಟಳು! ಈ ಮಾತು ಕೇಳಿ ಆಕೆ ನನ್ನ ಮುಖವನ್ನೊಮ್ಮೆ, ಆಕೆ ಮುಖವನ್ನೊಮ್ಮೆ ನೋಡಿ ಬಿದ್ದು ಬಿದ್ದು ನಕ್ಕಿದ್ದೇ ನಕ್ಕಿದ್ದೆ. ``ಏ.. ಏ್ ಹೇಳಾಕತ್ತೀರಿ ನೀವು. ರೊಕ್ಕಾ ಬೇಕಿದ್ದರ ಕೇಳರಿ ಕೊಡ್ತೇನಿ. ಹಿಂ್ ಬಾಯಿಗೆ ಬಂದಿಲ್ಲ ಹೇಳಬ್ಯಾಡಿ,'' ಎಂದು ಜೇಬಿನಿಂದ ಹತ್ತಿಪ್ಪತ್ತು ರೂಪಾಯಿ ತೆಗೆದು ಕೊಟ್ಟೆ. ``ಇಲ್ಲ.. ಅಣ್ಣಾರ, ನಾ ಸುಳ್ಳು  ಹೇಳಾಕತ್ತಿಲ್ಲ. ಖರೇನ ಹೇಳಾಕತ್ತೀನಿ. ಮುಂದ ನಿಮಗ ಗೊತ್ತಾಗತ್ತೈತಿ,'' ಎನ್ನುತ್ತಾ ನಮ್ಮತ್ತ ತಿರುಗಿ ನೋಡದೆ ಹೊರಟ ಹೋದಳು.
ಅವಳು ಹೋಗದ್ದೇ ತಡ, ತೀರಾ ಗಾಂಭಿರ್ಯವನ್ನು ಮುಖದ ಮೇಲೆ ತಂದುಕೊಂಡು ನನ್ನನ್ನೊಮ್ಮೆ ದೀರ್ಘವಾಗಿ ದಿಟ್ಟಿಸಿ ನೋಡಿದ ಅವಳು, ನನ್ನ ಕೆನ್ನೆಗೆ ಒಂದು ಮುತ್ತನ್ನು ಕೊಟ್ಟು ತಲೆ ತಗ್ಗಿಸಿಕೊಂಡು ಕುಳಿತಳು! ಹಾಗೇ ಮುತ್ತು ಕೊಟ್ಟವಳ ಮನಸ್ಸಿನಲ್ಲಿ ಏನಿತ್ತು? ಆ ಹೆಂಗಸು ಹೇಳಿದ `ವಿಷ್ಯದ ನುಡಿಗಳ ಬಗ್ಗೆ ಯೋಚಿಸುತ್ತಿದ್ದಳೇನೋ..? ಅಂದ ಹಾಗೆ, ಅಂದು ಪ್ರೇಮಿಗಳ ದಿನವಾಗಿತ್ತು. ಇದಕ್ಕೆ ಆ ಪಾಕ ಸಾಕ್ಷಿಯಾಗಿತ್ತು.
---
ಪೇಪ್... ಪೇಪ್... ಎಂದು ರಪ್ಪಂತ ಬಾಗಿಲಿಗೆ ಎಸೆದು ಹೋದವನನ್ನು ಬೈಯ್ದುಕೊಳ್ಳುತ್ತಾ, ಅನಾಥವಾಗಿ ಬಾಗಿಲ ಬಳಿ ಬಿದ್ದಿದ್ದ ಆ ಪೇಪ್ ಎತ್ತಿಕೊಂಡು, ಪುಟಗಳನ್ನು ತಿರುವುತ್ತಿರುವಾಗಲೇ ಕಂಡದ್ದು, `ಉದ್ಯಾನ ಸೀಳಿದ ಮೆಟ್ರೋ ಮಾರ್ಗ' ಎಂಬ ಹೆಡ್ಡಿಂಗು. ಏನಿದು ಎಂದು ಸುದ್ದಿಯ ಮೇಲೆ ಕಣ್ಣಾಡಿಸುತ್ತಿರುವಾಗಲೇ ಗೊತ್ತಾಗಿದ್ದು, ಇದು ಅದೇ ಉದ್ಯಾನ. ನಮ್ಮ ಪ್ರೀತಿಯ ಬೀಜಾಂಕುರಕ್ಕೆ ಕಾರಣವಾಗಿದ್ದ ಉದ್ಯಾನ. ಅನಿರೀಕ್ಷಿತವಾಗಿ ಮುತ್ತುಕೊಟ್ಟ ಹುಡುಗಿ ಕುಳಿತುಕೊಂಡಿದ್ದ ಅದೇ ಉದ್ಯಾನ. ಅದೇ ಉದ್ಯಾನದ ನಟ್ಟ ನಡುವೆ ಮೆಟ್ರೋ ಮಾರ್ಗ ನಿರ್ಮಾಣ ಮಾಡಲಾಗುತ್ತಿದೆ ಎಂಬುದು ಆ ಸುದ್ದಿಯ ಸಾರಾಂಶ. ಅದೆಷ್ಟೋ ಹುಡುಗ, ಹುಡುಗಿಯರ ಪ್ರೀತಿ ನಿವೇದನೆಗೆ ನಿವೇಶನ ಒದಗಿಸಿತ್ತೋ..? ಅದೆಷ್ಟು ಹಿರಿಯ ಜೀವಗಳು ತಮ್ಮ ಯೌವ್ವನ ದಿನಗಳನ್ನು ಅಲ್ಲಿ ಕುಳಿತು ನೆನಪಿಸಿಕೊಂಡಿದ್ದರೋ..? ಅದೆಷ್ಟೋ ಅಬ್ಬೇಪಾರಿಗಳು ಆ ಹುಲ್ಲು  ಹಾಸಿನ ಮೇಲೆ ಮಲಗಿ ಕನಸುಗಳನ್ನು ಕಟ್ಟಿಕೊಂಡಿದ್ದರೋ..? ನಗರ ಬದುಕಿನ ವೇಗದ ಮ`್ಯೆ ತುಸು ವಿರಾಮ ನೀಡುವ ಬ್ರೇಕ ಪಾಯಿಂ್ ಆಗಿದ್ದ ಆ ಉದ್ಯಾನ ಇನ್ನು ನೆನಪಷ್ಟೇ ಎಂದು ಯೋಚಿಸುತ್ತಿದ್ದವನಿಗೆ, ಕಣ್ಣು ತುಸು ತೇವ ಆಗಿದ್ದು ಗೊತ್ತಾಗಲಿಲ್ಲ.
- ಪ್ರದ್ಯುಮ್ನ

ಸೋಮವಾರ, ಸೆಪ್ಟೆಂಬರ್ 14, 2015

ರಾಕೇಶ್ ಮಾರಿಯಾ: ಜನರ ಪೊಲೀಸ್ ಕಮಿಷನರ್

ಮುಂಬಯಿಗರಿಗೆ ಮಹಾರಾಷ್ಟ್ರದ ಮುಖ್ಯಮಂತ್ರಿ ಹೆಸರು  ಗೊತ್ತಿರುತ್ತದೆಯೋ.. ಇಲ್ಲ ವೋ; ಆದರೆ, ಪೊಲೀಸ್ ಕಮಿಷನರ್ ಹೆಸರು ಮಾತ್ರ ಎಲ್ಲರ ನಾಲಿಗೆ ಮೇಲಿರುತ್ತದೆ. ಮುಂಬಯಿಗೆ ಕಮಿಷನರೇ ಮುಖ್ಯಮಂತ್ರಿ! ಇಂಥ ಹುದ್ದೆಗೆ ಇನ್ನೂ ಹೆಚ್ಚಿನ ಘನತೆಯನ್ನು ತಂದುಕೊಟ್ಟವರು ರಾಕೇಶ್ ಮಾರಿಯಾ.
ಛಿ ಛಿಟಟ್ಝಛಿ’ ್ಚಟಞಞಜಿಜಿಟ್ಞಛ್ಟಿ ಎಂದೇ ಖ್ಯಾತರಾಗಿರುವ ಐಪಿಎಸ್ ಅಕಾರಿ ರಾಕೇಶ್ ಅವರದ್ದು ಜನಪರ ಪೊಲೀಸ್ ವೃತ್ತಿ. ಜನರಿಗೆ ಕಮಿಷನರ್ ಕಚೇರಿಯನ್ನು ಮುಕ್ತವಾಗಿಸಿ ಅವರ ಹೃದಯಕ್ಕೆ ಮತ್ತಷ್ಟು ಹತ್ತಿರವಾಗಿಸಿದ್ದ ಅಕಾರಿ ಇವರು. ಇಂಥ ರಾಕೇಶ್ ಮಾರಿಯಾ ಅವರು ಸುದ್ದಿಯ ಕೇಂದ್ರಬಿಂದುವಾಗಿರುವುದು ಶೀನಾ ಬೋರಾ ನಿಗೂಢ ಕೊಲೆ ಪ್ರಕರಣದಲ್ಲಿ. ತನಿಖೆಯನ್ನು ಅವರು ಚುರುಕುಗೊಳಿಸುತ್ತಿದ್ದಂತೆ ಪೊಲೀಸ್ ಕಮಿಷನರ್ ಹುದ್ದೆಯಿಂದ ಅವರನ್ನು  ಮಹಾರಾಷ್ಟ್ರದ ಡೈರೆಕ್ಟರ್ ಜನರಲ್(ಹೋಮ್‌ಗಾರ್ಡ್ಸ್)ಹುದ್ದೆಗೆ ವರ್ಗ ಮಾಡಲಾಯಿತು. ಇದು ಮಾ‘್ಯಮ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ‘ಾರಿ ಚರ್ಚೆಗೆ ಕಾರಣವಾಯಿತು.
ಹಾಗೆ ನೋಡಿದರೆ, ರಾಕೇಶ್ ಮಾರಿಯಾ ಅವರು ಕೈ ಹಾಕಿದ ಪ್ರಕರಣಗಳೆಲ್ಲವೂ ಸೆನ್ಸೇಷನಲ್ ಆದಂಥವು. ಇದುವರೆಗೆ ಅವರು ‘ೇದಿಸಿರುವ ಅನೇಕ ಪ್ರಕರಣಗಳು ಅಪರಾ‘ ಜಗತ್ತಿನಲ್ಲಿ ಮೈಲಿಗಲ್ಲಾಗಿವೆ.
2003ರ ಗೇಟ್ ವೇ ಆಫ್ ಇಂಡಿಯಾ ಮತ್ತು ಜವೇರಿ ಬಜಾರ್ ಅವಳಿ ಸೋಟ ಪ್ರಕರಣ, ಸಂಜಯ್ ದತ್ ಪ್ರಕರಣ, ನೀರಜ್ ಗ್ರೋವರ್ ಕೊಲೆ ಪ್ರಕರಣಗಳನ್ನು ‘ೇದಿಸುವಲ್ಲಿ ಅವರು ಯಶಸ್ವಿಯಾಗಿದ್ದಾರೆ. ಅಷ್ಟೇ ಅಲ್ಲದೆ,  26 / 11 ರ ಮುಂಬಯಿ ದಾಳಿಯಲ್ಲಿ ಸೆರೆ ಸಿಕ್ಕ ಏಕೈಕ ಉಗ್ರ ಕಸಬ್‌ನ ವಿಚಾರಣೆಯನ್ನು ಕೂಡ ಇದೇ ಅಕಾರಿ ಮಾಡಿದ್ದು. ಕಸಬ್ ಬಾಯಿಂದಲೇ ಪಾಕಿಸ್ತಾನದ ಹಿನ್ನೆಲೆಯನ್ನು ಅವರು ಬಿಚ್ಚಿಟ್ಟಿದ್ದರು.
ಆರೋಪಿಗಳನ್ನು ‘ಥರ್ಡ್ ಡಿಗ್ರಿ’ಯ ಮೂಲಕ ವಿಚಾರಣೆ ಮಾಡುತ್ತಾರೆಂಬ ಆರೋಪ ರಾಕೇಶ್ ಮಾರಿಯಾ ಅವರ ಮೇಲಿದೆ. ಆದರೆ, ಇದನ್ನು ಅವರು ತಳ್ಳಿ ಹಾಕುತ್ತಾರೆ. ‘‘ಅದೆಲ್ಲವೂ ಸುಳ್ಳು. ಆರೋಪಿಗಳನ್ನು ಕೇವಲ ಹೊಡೆದು, ಹಿಂಸಿಸಿ ಬಾಯಿಬಿಡಿಸಲು ಸಾ‘್ಯವಿಲ್ಲ. ಅವರ ಮಾನಸಿಕ ಸ್ಥಿತಿಯನ್ನು ಅವಲೋಕಿಸಿ ವಿಚಾರಣೆ ನಡೆಸುತ್ತೇನೆ. ಹೀಗೆ ಮಾಡುವುದರಿಂದಲೇ ಸತ್ಯ ಹೊರಬರಲು ಸಾ‘್ಯ,’’ ಎನ್ನುತ್ತಾರೆ.
6 ಅಡಿ ಎತ್ತರದ ಆಜಾನುಬಾಹು ರಾಕೇಶ್ ಮಾರಿಯಾ ನಿಜಾರ್ಥದಲ್ಲಿ ‘ಡೈನಾಮಿಕ್ ಪೊಲೀಸ್ ಆಫೀಸರ್.’ ಅವರನ್ನು ಜನರು ಮಾತ್ರ ಆರಾಸುವುದಲ್ಲ, ಪೇದೆಯಿಂದ ಹಿಡಿದು ಹಿರಿಯ ಅಕಾರಿಗಳವರೆಗೂ ಅವರು ಅಚ್ಚುಮೆಚ್ಚು. ಅವರಿಗೆ ತಡರಾತ್ರಿ ಕೂಡ ಪೇದೆಗಳು ಫೋನ್ ಮಾಡಬಹುದು.
ಮಹಾರಾಷ್ಟ್ರದ ‘ಯೋತ್ಪಾದನೆ ನಿಗ್ರಹ ದಳ(ಎಟಿಎಸ್) ಎಸಿಪಿ ಸಂಜಯ್ ಕದಮ್ ಅವರು ರಾಕೇಶ್ ಮಾರಿಯಾ ಅವರನ್ನು ‘ಷರ್ಲಾಕ್ ಹೋಮ್ಸ್’ಗೆ ಹೋಲಿಸುತ್ತಾರೆ.  1994ರಲ್ಲಿ ಡಾ.ಜಲಿಸ್ ಅನ್ಸಾರಿಯನ್ನು ಸಿಬಿಐ ಬಂಸಿತ್ತು. ‘ಡಾ. ಬಾಂಬ್ ಆಫ್ ಬಾಂಬೆ’ ಎಂಬ ಕುಖ್ಯಾತಿ ಇದ್ದ ಈತನಿಂದ ಬಾಯಿ ಬಿಡಿಸಲು ಸಾ‘್ಯವಾಗಿರಲಿಲ್ಲ. ಆಗ ಸಿಬಿಐ ಮೊರೆ ಹೋಗಿದ್ದು ಇದೇ ರಾಕೇಶ್ ಮಾರಿಯಾ ಅವರನ್ನು. ಆಗ ಕ್ರೈಮ್ ಬ್ರಾಂಚ್‌ನಲ್ಲಿ ಡಿಸಿಪಿ ಆಗಿದ್ದ  ಮಾರಿಯಾ, ಅ‘ರ್ ಗಂಟೆಯೊಳಗೆ ಅನ್ಸಾರಿ ಬಾಯಿ ಬಿಡಿಸಿದ್ದರು. 1989ರಿಂದ 1994ರ ಅವಯಲ್ಲಿ ಸಂ‘ವಿಸಿದ ಗುರುದ್ವಾರ ಮತ್ತು ಪೊಲೀಸ್ ಸ್ಟೇಷನ್‌ಗಳ ಸೋಟದ ತಪ್ಪೊಪ್ಪಿಗೆಯನ್ನು ನೀಡಿದ್ದ ಆತ. ಇದು ರಾಕೇಶ್ ಅವರ ಚುರುಕು ವಿಚಾರಣೆಗೆ ಹಿಡಿದ ಕೈಗನ್ನಡಿ. ನೋಡಲು ರಫ್ ಆಗಿ ಕಂಡರೂ ಆಂತರ್ಯದಲ್ಲಿ ಮೆದುವಾಗಿದ್ದಾರೆ. ಕೆಲಸದ ವಿಷಯ ಬಂದರೆ ಅವರು ಕಠಿಣವಾಗಿ ವರ್ತಿಸುತ್ತಾರೆ.
ಸ್ವತಃ ಷರ್ಲಾಕ್ ಹೋಮ್ಸ್‌ನ ಅಭಿಮಾನಿಯಾಗಿರುವ ರಾಕೇಶ್ ಅವರದ್ದು ಅಗಾ‘ವಾದ ಓದು. ಇಂಗ್ಲಿಷ್, ಉರ್ದು ಮತ್ತು ಪಂಜಾಬಿ ‘ಾಷೆಗಳ ಮೇಲೂ ಹಿಡಿತವಿದೆ. ಈ ‘ಾಷಾಜ್ಞಾನ ಕಸಬ್ ವಿಚಾರಣೆ ವೇಳೆ ನೆರವಾಯಿತು ಅವರಿಗೆ. ಬ್ಯಾಸ್ಕೆಟ್ ಬಾಲ್ ಮತ್ತು ಫುಟ್‌ಬಾಲ್ ಆಡುತ್ತಾರೆ. ಎಷ್ಟೋ ಬಾರಿ ಪೇದೆಗಳೊಂದಿಗೆ ಫುಟ್‌ಬಾಲ್ ಆಡಿದ್ದಿದೆ.
ಇಂಥ ಖಡಕ್ ಅಕಾರಿ ರಾಕೇಶ್ ಅವರು ಮುಂಬಯಿ ಪೊಲೀಸ್ ಕಮಿಷನರ್ ಆದಾಗ ತುಂಬ ಖುಷಿಪಟ್ಟರು. ‘‘ಬಾಂದ್ರಾದ ಗಲ್ಲಿಗಳಲ್ಲಿ ಬರಿಗಾಲಿನಲ್ಲೇ  ಫುಟ್‌ಬಾಲ್ ಆಡಿಕೊಂಡಿದ್ದ ಹುಡುಗನ ಕನಸು ನನಸಾಯಿತು,’’ ಎಂದು ಮಾ‘್ಯಮಗಳಿಗೆ ಪ್ರತಿಕ್ರಿಯಿಸಿದ್ದರು.
ಆದರೆ, ಮಾರಿಯಾ ಅವರು ಕಮಿಷನರ್ ಆಗಿ ಆಯ್ಕೆಯಾಗಿದ್ದು ಕೂಡ ಅಷ್ಟು ಸರಳವಾಗೇನಲ್ಲ. ಈ ಹುದ್ದೆಗಾಗಿ, ಈಗ ಕಮಿಷನರ್ ಆಗಿರುವ ಅಹ್ಮದ್ ಜಾವೇದ್, ಮತ್ತೊಬ್ಬ ಹಿರಿಯ ಅಕಾರಿ ವಿಜಯ್ ಕಾಂಬಳೆ ಆಗ ತೀವ್ರ ಸ್ಪರ್‘ೆಯೊಡ್ಡಿದ್ದರು. ಅಲ್ಲದೆ, ರಾಜೀನಾಮೆ ನೀಡುವ ಬೆದರಿಕೆ ಕೂಡ ಹಾಕಿದ್ದರು. ಅಂದಿನ ಕಾಂಗ್ರೆಸ್ ಮತ್ತು ಎನ್‌ಸಿಪಿ ನೇತೃತ್ವದ ಸರಕಾರ, ಅಳೆದೂ ಸುರಿದೂ ಮಾರಿಯಾ ಅವರನ್ನು ಅಂತಿಮ ಕ್ಷಣದಲ್ಲಿ ಕಮಿಷನರ್ ಆಗಿ ನೇಮಕ ಮಾಡಿತ್ತು. ಪರಿಸ್ಥಿತಿ ಹೇಗಿತ್ತು ಎಂದರೆ, ಅವರು ಅಕಾರ ಸ್ವೀಕರಿಸಿ ಅ‘ರ್ ಗಂಟೆ ತಮ್ಮ ಅಕಾರಿಗಳೊಂದಿಗೆ ಮಾತುಕತೆಯಾಡುವಷ್ಟೂ ಸಮಯವಿರಲಿಲ್ಲ. ಅಂಥ ನಾಜೂಕಿನ ಸಂದ‘ರ್ದಲ್ಲಿ ಅವರು ಕಮಿಷನರ್ ಆಗಿ, ಜನರ ವಿಶ್ವಾಸ ಗಳಿಸುವಲ್ಲಿ ಯಶಸ್ವಿಯಾದರು.
ರಾಕೇಶ್ ಅವರು ಹುಟ್ಟಿದ್ದು 1957 ಜನವರಿ 19ರಂದು. ದೇಶ ಇಬ್ಭಾಗವಾದಾಗ ಇವರ ತಂದೆ ಪಾಕಿಸ್ತಾನದಿಂದ ಮುಂಬಯಿಗೆ ವಲಸೆ ಬಂದರು. ಅವರು ಚಿತ್ರ ನಿರ್ಮಾಪಕರೂ ಹೌದು. ಮನಸ್ಸು ಮಾಡಿದ್ದರೆ ರಾಕೇಶ್ ಅವರು ಅದೇ ಕ್ಷೇತ್ರದಲ್ಲಿ ಮುಂದುವರಿಯಬಹುದಿತ್ತು. ಆದರೆ, ಪೊಲೀಸ್ ವೃತ್ತಿ ಆಯ್ದುಕೊಂಡ ಅವರೇ ಈಗ ಅನೇಕ ಬಾಲಿವುಡ್ ಸಿನಿಮಾಗಳಿಗೆ ಸೂರ್ತಿಯಾಗಿದ್ದಾರೆ. 2004ರಲ್ಲಿ ತೆರೆಗೆ ಬಂದ ‘ಬ್ಲಾಕ್ ಫ್ರೈಡೇ’, ‘ಮ್ಯಾಕ್ಸಿಮಮ್ ಸಿಟಿ’, 2008ರಲ್ಲಿ ತೆರೆ ಕಂಡ ‘ಎ ವೆನ್ಸ್‌ಡೇ’, 2013ರಲ್ಲಿ ತೆರೆಕಂಡ ‘ದಿ ಅಟ್ಯಾಕ್ಸ್ ಆಫ್ 26/11’, ‘ದಿ ಸೀಜ್’ ಚಿತ್ರಗಳು ಇವರ ವ್ಯಕ್ತಿತ್ವವನ್ನೇ ಕೇಂದ್ರೀಕರಿಸಿವೆ. ಈ ಸಿನಿಮಾಗಳಲ್ಲಿ ಬಿಂಬಿತವಾಗಿರುವ ಪ್ರಮುಖ ತನಿಖಾಕಾರಿಯ ಚಿತ್ರಣಕ್ಕೆ ಇವರೇ ಸೂರ್ತಿ.  ರಾಕೇಶ್ ಮತ್ತು ಪ್ರೀತಿ ದಂಪತಿಗೆ ಕುನಾಲ್ ಮತ್ತು  ಕ್ರಿಶ್ ಮಕ್ಕಳಿದ್ದಾರೆ. ಇವರ ತಂದೆಯ ಚಿತ್ರ ನಿರ್ಮಾಣ ಕಂಪನಿ ಕಲಾನಿಕೇತನ ಇವರ ಒಡೆತನದಲ್ಲೇ ಇದೆ.
1981ರ ಬ್ಯಾಚ್‌ನ ಐಪಿಎಸ್ ಅಕಾರಿಯಾದ ರಾಕೇಶ್ ಅವರು ಮಹಾರಾಷ್ಟ್ರದ ಅಕೋಲಾ ಮತ್ತು ಬುಲ್ದಾನಾ ಜಿಲ್ಲೆಗಳ ಸಹಾಯಕ ಜಿಲ್ಲಾ ರಕ್ಷಣಾಕಾರಿಯಾಗಿ ಸೇವೆ ಸಲ್ಲಿಸುವ ಮೂಲಕ ಪೊಲೀಸ್ ವೃತ್ತಿಯ ಪರಿಯೊಳಗೆ ಬಂದರು. ನಂತರ ಅವರು, 1986ರಲ್ಲಿ ಮುಂಬಯಿಗೆ ವರ್ಗವಾದರು. 1993ರಲ್ಲಿ ಟ್ರಾಫಿಕ್‌ನ ಡೆಪ್ಯುಟಿ ಪೊಲೀಸ್ ಕಮಿಷನರ್ ಆಗಿದ್ದರು. 2014 ಫೆಬ್ರವರಿ 15ರಂದು ಮುಂಬಯಿ ಪೊಲೀಸ್ ಕಮಿಷನರ್ ಆಗಿ ನೇಮಕಗೊಂಡರು.
ರಾಕೇಶ್ ಅವರೇನೂ ವಿವಾದಗಳಿಂದ ಮುಕ್ತರಾಗಿಲ್ಲ. ಮುಂಬಯಿ ದಾಳಿ ವೇಳೆ ಮೃತಪಟ್ಟ ಅಶೋಕ ಕಾಮ್ಟೆ  ಸಾವಿಗೆ ಇವರೇ ಕಾರಣ ಎಂದು ಕಾಮ್ಟೆ  ಪತ್ನಿ ವಿನಿತಾ ಆರೋಪಿಸಿದ್ದರು. ಇತ್ತೀಚೆಗಷ್ಟೇ ‘ಾರಿ ಸುದ್ದಿಗೆ ಕಾರಣವಾಗಿದ್ದ ಲಲಿತ್ ಮೋದಿ ಅವರನ್ನು ‘ೇಟಿ ಮಾಡಿದ ಆರೋಪ ಅವರಿಗೆ ಎದುರಾಗಿತ್ತು. ಈ ಬಗ್ಗೆ ಸ್ಪಷ್ಟನೆಯನ್ನೂ ಅವರು ಮುಖ್ಯಮಂತ್ರಿ ಫಡ್ನವಿಸ್‌ಗೆ ನೀಡಿದ್ದಾರೆ. ಇದೀಗ ಶೀನಾ ಬೋರಾ ಕೊಲೆ ಪ್ರಕರಣವನ್ನು ‘ೇದಿಸಿದರೂ ವಿವಾದ ಅವರ ಬೆನ್ನು ಬಿಟ್ಟಿಲ್ಲ. ಇನ್ನೂ ಅನೇಕ ವಿವಾದಗಳು ಇವರ ಸುತ್ತ ಗಿರಕಿ ಹೊಡೆಯುತ್ತಲೇ ಇವೆ.


- Mallikarjun Tippar


(This article published in VK on 13th sept 2015 )