ಶುಕ್ರವಾರ, ಡಿಸೆಂಬರ್ 5, 2014

ಜಯಂತಿಗಳಿಗೆ ವ್ಯಾಖ್ಯಾನ, ಇದ್ಯಾವ ಮೋದಿ ವಿಧಾನ?

ಪ್ರಧಾನಿ ನರೇಂದ್ರ ಮೋದಿ ಹುಟ್ಟುಹಾಕಿರುವ ಇತ್ತೀಚಿನ ಟ್ರೆಂಡ್ ಎಂದರೆ ಮಹಾಪುರುಷರ ಜಯಂತಿ ಹಾಗೂ ನಿರ್ಣಾಯಕ ಇಸ್ವಿಗಳೊಂದಿಗೆ ಅಭಿಯಾನವೊಂದನ್ನು ತಳುಕು ಹಾಕುತ್ತಿರುವುದು. ಗಾಂಧಿ ಜಯಂತಿ ಸ್ವಚ್ಛ ಭಾರತದ ಬದಟಛಿತೆಗಿರಲಿ ಎಂದು ಬ್ರಾಂಡ್ ಮಾಡಿದ್ದಾರೆ. ಗಾಂಧೀಜಿ ಆಫ್ರಿಕಾದಿಂದ ಭಾರತಕ್ಕೆ ಮರಳಿದ ೧೯೧೫ರ ಇಸ್ವಿ ಇಟ್ಟುಕೊಂಡು, ೨೦೧೫ರಲ್ಲಿ ಅದಕ್ಕೆ ನೂರು ವರ್ಷಗಳಾಗುತ್ತವೆ ಎನ್ನುತ್ತ ತಾಯ್ನೆಲದಿಂದ ದೂರವಿರುವ ಅನಿವಾಸಿಗಳ ಒಳಗೊಳ್ಳುವಿಕೆಗೆ ಏನೋ ಯೋಜನೆ ಹರವಿಡುತ್ತಾರೆ. ಜೆಪಿ ಜನ್ಮ ದಿನಾಚರಣೆಯಂದು ಸಂಸದರ ಗ್ರಾಮ ದತ್ತು ಯೋಜನೆಗೆ ಚಾಲನೆ ಕೊಡುತ್ತಾರೆ. ಬಿಜೆಪಿ ಸರ್ಕಾರವೆಂದರೆ ಶ್ಯಾಮ್ ಪ್ರಸಾದ್ ಮುಖರ್ಜಿ, ದೀನ್ ದಯಾಳ್ ಉಪಾಧ್ಯಾಯ ಹೀಗೆ ಕೆಲ ಮಹನೀಯರನ್ನಷ್ಟೇ ಸಡಗರದಿಂದ ನೆನಪಿಸಿಕೊಂಡೀತು ಎಂದುಕೊಂಡಿದ್ದ ರಾಜಕೀಯ ವಿರೋಧಿಗಳಿಗೆ ಹಾಗೂ ಮೋದಿಯ ಕಟ್ಟರ್ ಬೆಂಬಲಿಗರಿಗೆ ಸಮಾನ ರೀತಿಯಲ್ಲಿ ಆಶ್ಚರ್ಯ ಹುಟ್ಟಿಸಿರುವ ಈ ಹೊಸ ಐಡಿಯಾದ ಜಾಯಮಾನ ಏನಿದ್ದಿರಬಹುದು?


----



ಮೊದಲಿಗೆ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಜಯಂತಿ, ನಂತರ ಮಹಾತ್ಮ ಗಾಂಧಿ ಜಯಂತಿ, ಜೆಪಿ ಜನ್ಮದಿನಾಚರಣೆ
ಇದೀಗ ನೆಹರು ಮತ್ತು ಇಂದಿರಾ ಗಾಂಧಿ ಜಯಂತಿ!
ಏನೆಂದರೆ, ನರೇಂದ್ರ ಮೋದಿ ಅಧಿಕಾರ ವಹಿಸಿಕೊಂಡು ನಾಲ್ಕೈದು ತಿಂಗಳಲ್ಲಿ ಈ ಜಯಂತಿಗಳಿಗೆಲ್ಲ ಹೇಗೆ ಟ್ವಿಸ್ಟ್ ಕೊಡುತ್ತಿದ್ದಾರೆ ನೋಡಿ. ಶಿಕ್ಷಕರ ದಿನಾಚರಣೆಯಲ್ಲಿ ಇಡೀ ದೇಶಾದ್ಯಂತ ಮಕ್ಕಳ ಜತೆ ಸಂವಾದ ಮಾಡುವ ಮೂಲಕ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದರೆ, ಮಹಾತ್ಮ ಗಾಂಧಿ ಜಯಂತಿಯಂದು ತಮ್ಮ ‘ಸ್ವಚ್ಛ ಭಾರತ ಆಂದೋಲನ’ಕ್ಕೆ ಗುರಿಯಾಗಿಸಿಕೊಂಡರು. ಒಂದು ಪೀಳಿಗೆಯನ್ನು ಬಹುವಾಗಿ ಕಾಡಿದ ಮತ್ತು ಪ್ರೇರೇಪಿಸಿದ ಜಯಪ್ರಕಾಶ್ ನಾರಾಯಣ್
ಅವರ ಜಯಂತಿಯಂದು ‘ಸಂಸದ ಆದರ್ಶ ಗ್ರಾಮ ಯೋಜನೆ’ ಪ್ರಕಟಿಸುವ ಮೂಲಕ ಅವರ ಜನ್ಮ ದಿನಾಚರಣೆಗೂ ಹೊಸ
ಆಯಾಮ ಕೊಟ್ಟರು. ಎಲ್ಲರೂ ಹುಬ್ಬೇರಿಸುವಂತೆ ಮಾಡಿದ್ದು, ಕಾಂಗ್ರೆಸ್‌ನ ಪ್ರಮುಖ ನಾಯಕರಾಗಿದ್ದ ಜವಾಹರಲಾಲ್ ನೆಹರು ಮತ್ತು ಇಂದಿರಾ ಗಾಂಧಿ ಜಯಂತಿಯನ್ನು ಸ್ವಚ್ಛ ಭಾರತ ಆಂದೋಲನ ಉದ್ದೇಶ ಈಡೇರಿಕೆಗೆ ಬಳಸಿಕೊಳ್ಳಲು ಅವರು ಹಿಂಜರಿಯುತ್ತಿಲ್ಲ ಎಂಬುದು! ಇದು ಕಾಂಗ್ರೆಸಿಗರಿಗೆ ಆಶ್ಚರ್ಯ ತರುವುದು ಸಹಜವಾದರೂ ಸ್ವತಃ ಬಿಜೆಪಿಯವರಿಗೆ ಮೋದಿಯ
ನಡೆ ಹುಬ್ಬೇರಿಸುವಂತೆ ಮಾಡಿದೆ. ಮೋದಿ ಎಲ್ಲ ರಾಷ್ಟ್ರೀಯ ನಾಯಕರ ಜಯಂತಿಗಳನ್ನು ಹೈಜಾಕ್ ಮಾಡುತ್ತಿದ್ದಾರೆ. ಆದರೆ
ಅದು ಒಳ್ಳೆಯ ಕೆಲಸಕ್ಕಾಗಿ ಎನ್ನುವುದಕ್ಕಾಗಿ ಅವರ ಈ ನಡೆಗೆ ಸ್ವಾಗತವೂ ದೊರೆಯುತ್ತಿದೆ.
ಅದೇನೆ ಇರಲಿ. ಮೋದಿಯ ಎಷ್ಟೇ ಪ್ರಬಲ ವಿರೋಧಿಗಳಾದರೂ ಸದ್ಯದ ಮಟ್ಟಿಗೆ ಮೋದಿ ಸಾಗುತ್ತಿರುವ ದಿಕ್ಕು ಮತ್ತು ಅವರು ಕೈಗೊಳ್ಳುತ್ತಿರುವ ನಿರ್ಣಯಗಳ ಬಗ್ಗೆ ತೀವ್ರ ಅಭಿಮಾನ ವ್ಯಕ್ತಪಡಿಸದಿದ್ದರೂ, ಪ್ರಬಲ ವಿರೋಧ ವ್ಯಕ್ತಪಡಿಸುತ್ತಿಲ್ಲ ಎಂಬುದಂತೂ ನಿಜ. ನಾವು ಇಷ್ಟು ದಿನ ಎಲ್ಲ ರಾಷ್ಟ್ರೀಯ ನಾಯಕರ ಜನ್ಮ ದಿನಾಚರಣೆ ಮತ್ತು ಪುಣ್ಯ ತಿಥಿಗಳನ್ನು ಆಚರಿಸಿಕೊಂಡು ಬರುತ್ತಿರುವುದನ್ನು ನೋಡಿದ್ದೇವೆ. ಅದು ತುಂಬಾ ಕ್ಲೀಷೆ ಮತ್ತು ರೂಟಿನ್ ಆಗಿರುವಂಥದ್ದಾಗಿತ್ತು. ಸರ್ಕಾರಿ ನೌಕರರಿಗೆ ಮತ್ತೊಂದು ರಜೆ. ನಾಯಕರಿಗೆ ಒಂದೆಡೆ ಸೇರಿ ಒಂದಿಷ್ಟು ಮಾತುಕತೆಯಾಡಲು ಸಿಗುವ ವೇಳೆ. ಇವಿಷ್ಟು ಬಿಟ್ಟು ಬೇರೇನು ಇತ್ತು ಹೇಳಿ? ಆದರೆ, ಮೋದಿ ಮಾತ್ರ ಜನ್ಮ ದಿನಾಚರಣೆಯ ನೆಪದಲ್ಲಿ ದೇಶಕ್ಕೆ ಒಂದಿಷ್ಟು ಉಪಯೋಗವಾಗುವ ಕೆಲಸ ಮಾಡಲು ಶ್ರೀಸಾಮಾನ್ಯನಿಂದ ಹಿಡಿದು ಎಲ್ಲರೂ ಒಳಗೊಳ್ಳುವಂತೆ ಮಾಡುತ್ತಿದ್ದಾರೆ! ಹಾಗಾಗಿಯೇ ಇದನ್ನು ಮೋದಿ ಅವರ ‘ಜಯಂತಿ ರಾಜಕೀಯ ನಡೆ’ ಎಂದು ವಿಶ್ಲೇಷಿಸಬಹುದೇನೋ?
ಇತ್ತೀಚಿನ ದಿನಗಳಲ್ಲಿ ಎಲ್ಲ ರಾಷ್ಟ್ರೀಯ ನಾಯಕರನ್ನು ಕೆಲವು ಪಕ್ಷಗಳು, ಕೆಲವು ಜಾತಿಗಳು, ಸಮುದಾಯಗಳಿಗೆ ತಮಗೇ ಸಂಬಂಧಿಸಿದ್ದವರು ಎಂಬಂತೆ ವರ್ತಿಸುತ್ತಿವೆ. ಈ ಮಿಥ್ ಅನ್ನು ತೊಡೆದು ಹಾಕಿ, ರಾಷ್ಟ್ರೀಯ ನಾಯಕರು ಯಾರೇ ಆಗಿರಲಿ
ಅವರು ದೇಶದ ಹೆಮ್ಮೆ ಎಂಬ ಪ್ರಜ್ಞೆಯನ್ನು ನಾಜೂಕಾಗಿ ಬಿತ್ತುತ್ತಿದ್ದಾರೆ. ಹಾಗೆ ನೋಡಿದರೆ ಅವರಿಗೂ ಈ ಅನಿವಾರ್ಯತೆ
ಇದೆ. ಒಂದೂ ಕಾಲು ಶತಮಾನ ಇತಿಹಾಸವಿರುವ ಕಾಂಗ್ರೆಸ್ ಗೆ ಸಹಜವಾಗಿಯೇ ನಾಯಕರನ್ನು ಆರಾಧಿಸುವ, ಅವರನ್ನು
ವೈಭವೀಕರಿಸುವ ಅಗಾಧ ಸಾಧ್ಯತೆಗಳಿವೆ. ಅಂಥ ಸಾಧ್ಯತೆಗಳು ಬಿಜೆಪಿಗೆ ಇಲ್ಲ. ದೀನ್ ದಯಾಳ್ ಉಪಾಧ್ಯಾಯ, ಶ್ಯಾಮ್
ಪ್ರಸಾದ್ ಮುಖರ್ಜಿ, ವೀರ ಸಾವರ್ಕರ್ ಇವರನ್ನೆಲ್ಲ ಒಂದು ಹಂತದವರೆಗೆ ರಿಬ್ರಾಂಡ್ ಮಾಡಬಹುದಾದರೂ ಅಲ್ಲಿ ಸೈದಾಟಛಿಂತಿಕ ಚರ್ಚೆಗಳ ಗದ್ದಲವೇ ಹೆಚ್ಚಾಗಿಬಿಡುವ ಅಪಾಯವಿದೆ. ಬಹುಶಃ ಈ ಕಾರಣದಲ್ಲೇ ಮೋದಿ ‘ಎಲ್ಲರನ್ನೂ, ಎಲ್ಲ ವಿಚಾರಧಾರೆಯವರನ್ನೂ ಒಳಗೊಳ್ಳಬಲ್ಲ’ ವ್ಯಕ್ತಿತ್ವಗಳನ್ನು ಆಯ್ದುಕೊಳ್ಳುತ್ತಿದ್ದಾರೆ. ಇದಕ್ಕೆ ವಿರೋಧಿ ಪಾಳೆಯಕ್ಕಿಂತ ಹೆಚ್ಚಾಗಿ, ಸ್ವಪರಿವಾರದವರ ಪ್ರತಿಕ್ರಿಯೆಗಳು ಹೇಗೆ ಬರಬಹುದು ಎಂಬ ಆಧಾರದಲ್ಲಿಯೇ ಮೋದಿಯವರ ಮುಂದಿನ ‘ಬ್ರಾಂಡಿಂಗ್’ ನೆರವೇರಲಿದೆ.
ಈ ಬ್ರಾಂಡ್ ದರ್ಬಾರ್‌ನಲ್ಲಿ ಮೋದಿ ಚಾಕಚಕ್ಯತೆಯನ್ನು ಗಮನಿಸಬೇಕು. ಒಂದು ವ್ಯಕ್ತಿ ಇಲ್ಲವೇ ವಸ್ತು ಹಲವು ಅಂಶಗಳನ್ನು ಪ್ರತಿನಿಧಿಸುವಂಥದ್ದು. ಅದರಲ್ಲಿ ಕೆಲವು ತಕರಾರಿಗೆ- ವಿವಾದಗಳಿಗೆ ಕಾರಣವಾಗಿದ್ದಿರಬಹುದು. ಆದರೆ ಅದನ್ನೇ ಮುಂದಿರಿಸಿಕೊಂಡು ಆ ವ್ಯಕ್ತಿ-ವಸ್ತುವನ್ನೇ ದೂರ ಮಾಡಿ, ಆ ಮೂಲಕ ಪರೋಕ್ಷವಾಗಿ ಆ ವ್ಯಕ್ತಿ-ವಿಷಯಗಳಲ್ಲಿ ಆಸಕ್ತಿ ಇರುವ ಜನಸಮೂಹದಿಂದಲೂ ದೂರವಾಗಿಬಿಡುವುದು ಬುದಿಟಛಿವಂತಿಕೆ ಅಲ್ಲ ಎಂಬುದನ್ನು ಗುಜರಾತ್‌ನ ವ್ಯಾಪಾರಿ
ಮಿದುಳು ಅರ್ಥಮಾಡಿಕೊಂಡಿದ್ದರೆ ಅದರಲ್ಲಿ ಅಚ್ಚರಿಯೇನಿಲ್ಲ. ಹಾಗಾಗಿಯೇ ಸೈದಾಟಛಿಂತಿಕವಾಗಿ ಗಾಂಧೀಜಿಯವರನ್ನು ಆರ್
ಎಸ್‌ಎಸ್ ಹಲವು ವಿಚಾರಗಳಲ್ಲಿ ವಿರೋಧಿಸಿಕೊಂಡು ಬಂದಿದ್ದರೂ ಅದೇ ಗಾಂಧಿಯವರ ಜನ್ಮದಿನವನ್ನು ಒಂದಂಶಕ್ಕೆ
ಬ್ರಾಂಡ್ ಮಾಡುವಲ್ಲಿ ಮೋದಿ ಯಶಸ್ವಿಯಾಗಿದ್ದಾರೆ. ಗಾಂಧೀಜಿಯವರನ್ನು ಸೆಕ್ಯುಲರ್- ಕಮ್ಯುನಲ್ ಚರ್ಚೆಯ
ಚೌಕಟ್ಟಿನಲ್ಲಿಟ್ಟು ಜನ್ಮೇಪಿ ಪರ-ವಿರೋಧ ಮಾಡಿಕೊಂಡಿರಬಹುದು. ಆದರೆ ಸ್ವಚ್ಛತೆ, ಗ್ರಾಮ ಸ್ವರಾಜ್ಯ ಇಂಥ ಕಲ್ಪನೆಗಳೆಲ್ಲ ಕಮ್ಯುನಿಸ್ಟರಿಗೂ ಕೇಸರಿ ಪಡೆಯವರಿಗೂ ಒಟ್ಟೊಟ್ಟಿಗೇ ಒಪ್ಪಿತವಾಗಬಲ್ಲ ಅಂಶ. ಬೇರೆ ಚೌಕಾಶಿ ಏಕೆ, ಗಾಂಧಿ ಎಂದರೆ ಸ್ವಚ್ಛತೆಗೆ ಆದರ್ಶ ಎಂದಿಟ್ಟುಕೊಳ್ಳೋಣ ಎಂಬ ಸರಳ ಸಂದೇಶ ತಲುಪಿಸಿರುವ ಮೋದಿ ಸೆಕ್ಯುಲರ್- ಕಮ್ಯುನಲ್ ಡಿಬೇಟ್‌ನ ಚಕ್ರವ್ಯೆಹದಿಂದ ಹೊರಬಂದು ನಕ್ಕಿದ್ದಾರೆ!
ಮುಂದಿನ ದಿನಗಳಲ್ಲಿ ಮೋದಿ ಇನ್ನಷ್ಟು ಇತಿಹಾಸ ಪುರುಷರನ್ನು ಬ್ರಾಂಡ್ ದರ್ಬಾರಿಗೆ ಸೇರಿಸಿಕೊಂಡಾರು. ಸೈದಾಟಛಿಂತಿಕವಾಗಿ ವಿರೋಧಿ ಗುಂಪಿನಲ್ಲಿರುವ ಇತಿಹಾಸ ಪುರುಷರೂ ಜಯಂತಿ ಸಂಭ್ರಮದ ಪರಿಧಿಗೆ ಬರಬಹುದೇನೋ? ಆದರೆ ಒಂದಂತೂ ನಿಶ್ಚಿತ. ಅಂಥ ಯಾವುದೇ ವ್ಯಕ್ತಿಗಳನ್ನು ಬ್ರಾಂಡ್ ಮಾಡುವಾಗ, ಅವರಲ್ಲಿನ ಯಾವ ವಿಚಾರ ತನ್ನ ಮಾತೃಸಂಸ್ಥೆಯ ವಿಚಾರಗಳಿಗೆ ಸರಿಹೊಂದುವುದೋ, ಅದನ್ನಷ್ಟೇ ವೈಭವೀಕರಿಸುವಕೆಲಸವನ್ನಂತೂಮಾಡಿಯೇ
ಮಾಡುತ್ತಾರೆ.
ಈಗಾಗಿರುವ ಕೆಲವು ಜಯಂತಿಗಳ ಆಚರಣೆಯನ್ನು ಮುಂದಿಟ್ಟುಕೊಂಡು ನೋಡಿದರೆ ಮೋದಿ ಮುಂದೆ ಇನ್ನೂ ಅನೇಕ ರಾಷ್ಟ್ರೀಯ ಹಾಗೂ ಪ್ರಾದೇಶಿಕ ನಾಯಕರ ಜನ್ಮದಿನಾಚರಣೆಗಳನ್ನು ಮತ್ತಷ್ಟು ವೈವಿಧ್ಯದಿಂದ ಆಚರಿಸುವ
ಸಾಧ್ಯತೆಗಳಿವೆ. ಹಾಗೆಂದು ಇವು ಕೇವಲ ಉದಾತ್ತತೆ ಪ್ರತೀಕ ಮಾತ್ರವೇ? ಇಲ್ಲ. ದೀರ್ಘಾವಧಿಯಲ್ಲಿ ಬಿಜೆಪಿಗೆ ಲಾಭ ತರಬಲ್ಲ
ಸಾಧನವನ್ನಾಗಿಯೂ ಇದನ್ನು ಬಳಸಿಕೊಳ್ಳಬಹುದು. ಪ್ರಾದೇಶಿಕವಾಗಿ ತಳ ಊರುವುದಕ್ಕೆ, ಆ ಪ್ರದೇಶದ ಜನರನ್ನು
ತಮ್ಮವರನ್ನಾಗಿಸಿಕೊಳ್ಳುವುದಕ್ಕೆ ಇರುವ ಉತ್ತಮ ಮಾರ್ಗ ಎಂದರೆ ಸ್ಥಳೀಯ ಐಕಾನ್‌ಗಳನ್ನು ಗೌರವಿಸುವುದು. ಉದಾಹರಣೆಗೆ ಕೇರಳದಲ್ಲಿ ನಾರಾಯಣ ಗುರುಗಳ ಜನ್ಮ ದಿನಾಚರಣೆಯನ್ನು ರಾಷ್ಟ್ರೀಯ ಅಭಿಯಾನವೊಂದಕ್ಕೆ ಬಳಸಿಕೊಳ್ಳುವ ಯೋಜನೆ ಹಾಕಿಕೊಂಡರೆ ಸಹಜವಾಗಿಯೇ ಬಿಜೆಪಿಗೂ ಸ್ವಲ್ಪಮಟ್ಟದ ಶಹಭಾಸ್‌ಗಿರಿ, ಮೆಚ್ಚುಗೆಗಳು
ಸಂದಾಯವಾಗುತ್ತವೆ. ಹೀಗೆ ಬೇರೆ ಬೇರೆ ವಿಚಾರ ಲಹರಿಯವರನ್ನುಸೀಮಿತ ಚೌಕಟ್ಟಿನಲ್ಲಿಯೇ ತನ್ನವರೆಂದು ಸ್ವೀಕರಿಸಿ, ಅವರ ಜನ್ಮದಿನಗಳಿಗೆ ಅಭಿಯಾನದ ರೂಪ ಕೊಟ್ಟರೂ ಅಷ್ಟರಮಟ್ಟಿಗೆ ಬಿಜೆಪಿಗೆ ಆ ಪ್ರಾದೇಶಿಕ ನೆಲೆಗಳಲ್ಲಿ ಒದಗಬಹುದಾದ ಸ್ವೀಕೃತ ಮನೋಭಾವವೂ ರೂಪುಗೊಳ್ಳುತ್ತದೆ. ಅಂಬೇಡ್ಕರ್, ರವಿಂದ್ರನಾಥ್ ಠಾಗೋರ್, ಜ್ಯೋತಿ ಬಸು, ಸ್ವಾಮಿ ವಿವೇಕಾನಂದ, ಮದರ್ ತೆರೆಸಾ, ಡಾ. ಎಪಿಜೆ ಅಬ್ದುಲ್ ಕಲಾಂ, ಇಂದಿರಾ ಗಾಂಧಿ, ನೆಹರು, ಜೆ.ಎನ್. ಟಾಟಾ, ಗುರು ನಾನಕ್, ಅಬ್ದುಲ್ ಗಫಾರ್ ಖಾನ್, ಬಸವ, ಬುದಟಛಿ, ಕಬೀರ್... ಹೀಗೆ ನಾನಾ ಮೇರು ವ್ಯಕ್ತಿಗಳ ದಿನಾಚರಣೆಯನ್ನು ಅವರ ವ್ಯಕ್ತಿತ್ವದ ಒಂದು ಭಾಗವನ್ನು ಸಮಗ್ರಗೊಳಿಸಿ ರಾಷ್ಟ್ರೀಯ ಹಿತಾಸಕ್ತಿಗೆ ಅನುವಾಗುವಂತೆ ಕಾರ್ಯಕ್ರಮ ರೂಪಿಸಿಕೊಳ್ಳಲು ಮುಂದಾಗಬಹುದು. ಆಗ ಸಹಜವಾಗಿಯೇ ಜನರಲ್ಲೂ ಮೋದಿಯ ಭಿನ್ನತೆಗೆ ಒಂದಿಷ್ಟು ಮೆಚ್ಚುಗೆ ವ್ಯಕ್ತವಾಗಿ ಅದು ಅವರ ಪ್ರತಿನಿಧಿಸುವ ಪಕ್ಷಕ್ಕೂ ಒಳ್ಳೆ ಯ ಮೈಲೆಜ್ ತಂದುಕೊಡಬಲ್ಲದು. ಅದಾಗಲೇ, ಸ್ವತಃ ಶ್ರಮವರಿಯದ ವರ್ಕೊಹಾಲಿಕ್ ಎಂಬ ಇಮೇಜ್ ಪಡೆದುಕೊಂಡಿರುವ ಮೋದಿ, ಆ ವರ್ಚಸ್ಸಿಗೆ ದೀರ್ಘಾವಧಿಯಲ್ಲಿ ನ್ಯಾಯ ದೊರಕಿಸಬೇಕೆಂದರೆ ಅವರೊಂದಿಗಿನ
ಸಂಸದರೂ ಕೆಲಸ ಮಾಡಬೇಕು ತಾನೇ?
ಒಂದಂಶದ ನಿರ್ದಿಷ್ಟ ಉದ್ದೇಶವನ್ನು ಹೊತ್ತ ಮಹಾಪುರುಷರ ಜನ್ಮದಿ ಾಚರಣೆಗಳು ವಾಸ್ತವದಲ್ಲಿ ಸಂಸದರ ಮೇಲೆ ಜವಾಬ್ದಾರಿಯೊಂದನ್ನು ಹೊರೆಸುತ್ತವೆ. ಉದಾಹರಣೆಗೆ, ಮುಂದಿನ ವರ್ಷ ಜಯಪ್ರಕಾಶ ನಾರಾಯಣರ ಜನ್ಮದಿನಾಚರಣೆ ಬರುತ್ತಲೇ ಮಾಧ್ಯಮವು, ಸಂಸದರು ದತ್ತು ತೆಗೆದುಕೊಂಡ ಗ್ರಾಮಗಳ ಸ್ಥಿತಿ ಸುಧಾರಿಸಿದೆಯೇ ಇಲ್ಲವೇ ಎಂಬ ವರದಿ- ವಿಶ್ಲೇಷಣೆಗಳಿಗೆ ಗಮನ ಕೊಡುತ್ತದೆ. ಈ ಬಗೆಯಲ್ಲಿ ಕೆಲವು ಕೆಲಸಗಳನ್ನು ಮಾಡಲೇಬೇಕಾದ ಒತ್ತಡವನ್ನು, ನೆಪ ಹೇಳಲಿಕ್ಕಾಗದ ಪರಿಸ್ಥಿತಿಯನ್ನು ಮೋದಿ ತಮ್ಮ ಸಹೋದ್ಯೋ ಗಿಗಳ ಪಾಲಿಗೆ ನಿರ್ಮಿಸುವ ಬುದಿಟಛಿವಂತ ನಡೆ ಇಟ್ಟಿದ್ದಾರಾ?
ಮೋದಿ ಅವರ ರಾಷ್ಟ್ರೀಯ ನಾಯಕರ ಜನ್ಮದಿನಾಚರಣೆ ಕಾರ್ಯಸೂಚಿಗಳು ಇನ್ನಷ್ಟು ಪ್ರಭಾವಶಾಲಿಯಾಗಬೇಕಾದರೆ
ಅದು ಆ ವರ್ಷಕ್ಕೆ ಮಾತ್ರ ಸೀಮಿತವಾಗಬಾರದು. ಜೆಪಿ ಜಯಂತಿಯಂದು ಘೋಷಿಸಿದ ‘ಸಂಸದ ಆದರ್ಶ ಗ್ರಾಮ
ಯೋಜನೆ’ ಮುಂದಿನ ವರ್ಷ ಬರುವಷ್ಟರಲ್ಲಿ ಮತ್ತೊಂದು ಯೋಜನೆಗೆ ವೇದಿಕೆಯಾಗಬಾರದು. ಈಗ ಆರಂಭಿಸಿದ
ಪ್ರಯತ್ನ ಮುಂದುವರಿಯುತ್ತಲೇ ಇದ್ದರೆ ಅದಕ್ಕೊಂದು ಸಂಪೂರ್ಣತೆ ದಕ್ಕುತ್ತದೆ ಮತ್ತು ಅದು ವಿಸ್ತಾರಗೊಳ್ಳುತ್ತದೆ.
ಯಾಕೆಂದರೆ, ಈ ಹಿಂದಿನ ಸರ್ಕಾರಗಳು ತುಂಬಾ ಉತ್ಸಾಹದಲ್ಲಿ ಯೋಜನೆಗಳನ್ನು ಪ್ರಕಟಿಸುತ್ತಿದ್ದವು ಮತ್ತು ಅಷ್ಟೇ
ಉದಾಸೀನತೆಯಿಂದ ಮರೆಯುತ್ತಿದ್ದವು. ಈ ಪ್ರಕ್ರಿಯೆ ಮತ್ತೆ ಪುನಾರ್ವತನೆಯಾಗುತ್ತಿತ್ತೇ ಹೊರತು ಯೋಜನೆ ಫಲಪ್ರದ
ಬಗ್ಗೆ ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಮೋದಿ ಅವರು ಅದೇ ರೀತಿ ನಡೆದು ಕೊಂಡರೆ ಅವರು ಈ ಹೊಸ ಪ್ರಯತ್ನಕ್ಕೆ ಅರ್ಥವೇ
ಇರುವುದಿಲ್ಲ. ಹತ್ತರೊಳಗೆ ಹನ್ನೊಂದಾಗುತ್ತದಷ್ಟೇ.
ಚುನಾವಣೆ ವೇಳೆ ಪಕ್ಕಾ ಒಂದು ಪಕ್ಷದ ವಕ್ತಾರ ಹಾಗೂ ಅದು ಸಾರುವ ಸಿದಾಟಛಿಂತದ ಪ್ರಬಲ ಪ್ರತಿಪಾದಕರಂತೆ
ಕಾಣುತ್ತಿದ್ದ ಮೋದಿ, ಪ್ರಧಾನಿಯಾದ ಮೇಲೆ ಇಡೀ ದೇಶಕ್ಕೆ ಅನ್ವಯವಾಗುವಂತೆ ಮಾತುಗಳನ್ನಾಡುತ್ತಿದ್ದಾರೆ. ಇದು
ಅವರನ್ನು ವಿರೋಧಿಸುತ್ತ ಬಂದಿದ್ದ ಕೆಲವರಲ್ಲೂ ಒಂದಿಷ್ಟು ಸಹಾನುಭೂತಿಗೆ ಕಾರಣವಾಗಿದೆ. ಆದರೆ, ಒಬ್ಬ ವ್ಯಕ್ತಿಯ
ಅಧಿಕಾರ ವಿಶ್ಲೇಷಣೆಗೆ ಐದಾರು ತಿಂಗಳು ತುಂಬಾ ಚಿಕ್ಕದುಇನ್ನೂ ಒಂದಿಷ್ಟು ಸಮಯ ಕೊಟ್ಟು ನೋಡಿದರೆ ಅವರ
ನಿಜವಾದ ಕಾರ್ಯಸೂಚಿ ಗೋಚರವಾಗಬಹುದು. ಆದರೆ, ಸದ್ಯದ ಮಟ್ಟಿಗೆ ರಾಷ್ಟ್ರೀಯ ನಾಯಕರ ಜನ್ಮ ದಿನಾಚರಣೆ
ಕ್ಲೀಷೆಯನ್ನು ತೊಡೆದು ಹಾಕಿ ಅದಕ್ಕೊಂದು ನವ ಚೈತನ್ಯ ತುಂಬುವಲ್ಲಿ ಯಶಸ್ವಿಯಾಗಿದ್ದಾರೆ.
ಅದಕ್ಕಾದರೂ ನಾವು ಅವರನ್ನು ಮೆಚ್ಚಲೇಬೇಕು.

(ಈ ಲೇಖನ ಕನ್ನಡಪ್ರಭದ 2014ರ ಅಕ್ಟೋಬರ್ 15 ಸಂಚಿಕೆಯಲ್ಲಿ ಪ್ರಕಟವಾಗಿದೆ)

ಪಾಕಿಸ್ತಾನ: ಕೊನೆಯಿಲ್ಲದ ಕದನದ ಈಗಿನ ತಾರಾಗಣ




ಪಾಕಿಸ್ತಾನದಲ್ಲಿ ಅರಾಜಕತೆ ಎಂಬುದು ಯಾವತ್ತಿಗೂ ಹೊಸ ಸುದ್ದಿ ಅನ್ನಿಸುವುದಿಲ್ಲ. ಪ್ರತಿಬಾರಿಯ ಆಂತರಿಕ ಕಲಹಗಳಲ್ಲಿ ಪಾತ್ರಗಳು ಬದಲಾಗುತ್ತಿರುತ್ತವೆ ಅಷ್ಟೆ. ಈ ಬಾರಿ ಅಲ್ಲಿನ ಮುಖ್ಯಪಾತ್ರಗಳಲ್ಲಿರುವವರು ತಾಹಿರುಲ್ ಖಾದ್ರಿ ಎಂಬ ಧರ್ಮಗುರು, ಇಮ್ರಾನ್ ಖಾನ್ ಎಂಬ ಒಂದು ಕಾಲದ ಕ್ರಿಕೆಟಿಗ ಹಾಗೂ ಈಗಿನ ರಾಜಕಾರಣಿ ಮತ್ತು ನವಾಜ್
ಷರೀಫ್. ಈ ವ್ಯಕ್ತಿಗಳ ಜಾತಕ ಓದುತ್ತ ಪಾಕಿಸ್ತಾನದ ಪ್ರಸ್ತುತ ಬಿಕ್ಕಟ್ಟನ್ನು ಅರ್ಥಮಾಡಿಕೊಳ್ಳುವ ಪ್ರಯತ್ನ ಇದು.

ಧರ್ಮಗುರುವಿಗೆ ಅಧಿಕಾರದ ಕನಸು ಬಿದ್ದೊಡೆ...
ಪಾಕ್ ಪ್ರಧಾನಿ ಷರೀಫ್ ಅವರ ಕುರ್ಚಿಗೆ ಸಂಚಕಾರ ತರಲು ಇಮ್ರಾನ್ ಖಾನ್ ಜತೆ ಜಂಟಿ ಕಾರ್ಯಾಚಾರಣೆ ನಡೆಸುತ್ತಿರುವ ತಾಹಿರುಲ್ ಖಾದ್ರಿ ಒಂದು ಕಾಲದಲ್ಲಿ ಷರೀಫ್ ಅವರಿಗೆ ಬೇಕಾದ ವ್ಯಕ್ತಿ! ಷರೀಫ್ ಅವರ ತಂದೆ ಮೊಹಮ್ಮದ್ ಅವರು ಕಬ್ಬಿಣ ಮತ್ತು ಸ್ಟೀಲ್ ಕೈಗಾರಿಕಾ ಸಮೂಹದ ಅಧ್ಯಕ್ಷರಾಗಿದ್ದಾಗ ಆಸ್ಪತ್ರೆ ಮತ್ತು ಫೌಂಡ್ರಿಸ್ ಆವರಣದಲ್ಲಿ ನಿರ್ಮಿಸಲಾಗಿದ್ದ ಮಸೀದಿಗಾಗಿ ಒಬ್ಬ ವಿದ್ವಾಂಸರನ್ನು ಹುಡುಕುತ್ತಿದ್ದರು. ಅವರ ಕಣ್ಣಿಗೆ ಬಿದ್ದಿದ್ದು ಇದೇ ಖಾದ್ರಿ. ಮುಂದೆ ನವಾಜ್ ಷರೀಫ್ ಪಂಜಾಬ್ ಸಚಿವರಾದಾಗ, ಟಿವಿಯಲ್ಲಿ ಖಾದ್ರಿ ಅವರ ಅಧ್ಯಾತ್ಮಿಕ ಕಾರ್ಯಕ್ರಮ ಪ್ರಸಾರಕ್ಕೆ ಅನುವು ಮಾಡಿಕೊಡಲಾಗಿತ್ತು. ಇಷ್ಟೆಲ್ಲ ಯಾಕೆ ಹೇಳಬೇಕಾಯಿತು ಎಂದರೆ, ಷರೀಫ್ ಜತೆ ಆ ಮಟ್ಟಿಗಿನ ಸಾಮೀಪ್ಯ ಹೊಂದಿದ್ದ ಖಾದ್ರಿ ಯಾಕೆ ಅವರು ವಿರುದಟಛಿ ತಿರುಗಿ ಬಿದ್ದಿದ್ದಾರೆ? ಇದರಲ್ಲಿ ನಿಜವಾಗಲೂ ಏನಾದರೂ ತಾರ್ಕಿಕ ವಿಚಾರಗಳಿವೆಯಾ? ಮೇಲ್ನೋಟಕ್ಕೆ ಚುನಾಯಿತ ಸರ್ಕಾರದ ವಿರುದಟಛಿದ ‘ದಂಗೆ’ ಎಬ್ಬಿಸುವ ಹುನ್ನಾರದಂತೆ ಕಂಡರೂ ಖಾದ್ರಿ ಅವರ ಹೋರಾಟದಲ್ಲಿ ಸ್ವಲ್ಪವಾದರೂ ಪ್ರಾಮಾಣಿಕತೆಯಿದೆ. ಇದೇ ಮಾತನ್ನು ಇಮ್ರಾನ್ ಖಾನ್ ಅವರಿಗೆ ಅನ್ವಯಿಸುವುದು ಕಷ್ಟ. ಖಾದ್ರಿ ಇಸ್ಲಾಂ ವಿದ್ವಾಂಸರಾದರೂ ಮತಾಂಧರಲ್ಲ. ಇಸ್ಲಾಮ್‌ನ ನಿಜವಾದ ಸಂದೇಶವನ್ನು ಪಾಕ್ ಯುವ ಜನರಿಗೆ ಹೆಚ್ಚು ಅರ್ಥವಾಗುವ ರೀತಿಯಲ್ಲಿ ಹೇಳುತ್ತಿದ್ದಾರೆ. ಇದರಿಂದಾಗಿಯೇ ಕೆನಡಾದ ‘ಮಾನಸಪುತ್ರ’ರಂತಾಗಿರುವ ಖಾದ್ರಿ ಮಾತಿಗೆ ಪಾಕ್‌ನ ಯುವ ಜನ ಮರಳಾಗಿದ್ದಾರೆ. ಸದಾ ಯುದಟಛಿದ ಭೀತಿಯಲ್ಲಿ, ಅರಾಜಕತೆ ನೆರಳಲ್ಲಿ, ಬಡತನದ ಬೇಗೆಯಲ್ಲಿ ಬೇಯುತ್ತಿರುವ ಅಲ್ಲಿನ ಜನರಿಗೆ ಖಾದ್ರಿ ಹೇಳುತ್ತಿರುವ ಮಾತುಗಳು ಮನಸ್ಸಿಗೆ ತಟ್ಟಲಾರಂಭಿಸಿವೆ. ಅವರ ಬೆಂಬಲಕ್ಕಾಗಿ ಬೀದಿಗಿಳಿಯುತ್ತಿದ್ದಾರೆ.
ಇಸ್ಲಾಮ್ ವಿದ್ವಾಂಸ ಎಂಬ ಖ್ಯಾತಿಯಿದ್ದರೂ ಕೂಡಾ ಖಾದ್ರಿಯೇನೂ ‘ಅಧಿಕಾರ ಬೇಡ ಎನ್ನುವ ತ್ಯಾಗಿ’ಯಲ್ಲ. ಈಗಿನ ಅವರ ಹೋರಾಟ ಮೇಲ್ನೋಟಕ್ಕೆ ಭ್ರಷ್ಟ ಹಾಗೂ ಅಕ್ರಮ ಮಾರ್ಗದಿಂದ ಚುನಾಯಿತರಾಗಿರುವ ಸರ್ಕಾರವನ್ನು ಕಿತ್ತೊಗೆಯುವುದು. ಚುನಾವಣೆ ಸುಧಾರಣೆ ತರುವುದು. ಆದರೆ, ಅಂತರಾಳದಲ್ಲಿ ಅವರಿಗೆ ಅಧಿಕಾರದ ದರ್ಬಾರ್ ನಡೆಸುವ ಉಮೇದು ಇದೆ. ಈಗ ಎಷ್ಟೇ ಅವರು ಸೇನೆಯ ಜೊತೆ ನೆಂಟಸ್ತನ ಇಲ್ಲ, ಅಧಿಕಾರದ ವ್ಯಾಮೋಹ ಇಲ್ಲ ಎನ್ನಬಹುದು. ಆದರೆ, ಅದನ್ನು ಅಷ್ಟು ಸುಲಭವಾಗಿ ಒಪ್ಪಿಕೊಳ್ಳಲಾಗದು. ಅವರ ಇತಿಹಾಸವನ್ನು ಗಮನಿಸಿದರೆ ಇದನ್ನು ಪುಷ್ಟೀಕರಿಸುತ್ತದೆ. ೧೯೮೧ರಲ್ಲಿ ತೆಹ್ರಿಕ್ ಮಿನ್ಹಾಜುಲ್ಕು ರಾನ್ ಪಕ್ಷ ಕಟ್ಟಿದ್ದರು. ಈ ಪಕ್ಷದ ಉದ್ದೇಶ ನಿಜವಾದ ಪ್ರಜಾಪ್ರಭುತ್ವ, ಆರ್ಥಿಕ ಪ್ರಗತಿ, ಮಾನವ ಹಕ್ಕಗಳ ರಕ್ಷಣೆ,
ನ್ಯಾಯದಾನ, ಮಹಿಳೆ ಮತ್ತು ಅಲ್ಪಸಂಖ್ಯಾತರ ರಕ್ಷಣೆಯಾಗಿತ್ತು. ಆದರೆ, ಅದ್ಯಾಕೋ ಪಾಕ್ ಜನರು ಆಗ ಇವರನ್ನು ನಂಬಲಿಲ್ಲ. ಅದಕ್ಕೂ ಕಾರಣವಿದೆ. ಖಾದ್ರಿ ಅವರು ಸ್ವಲ್ಪ ಉದಾರಿ ಎನ್ನಬಹುದಾದ ಸುನ್ನಿ ಪಂಗಡದ ಬರ್ಲೇವಿ ಒಳಪಂಗಡಕ್ಕೆ ಸೇರಿದವರು. ಇದು ಇತರರು ಅವರನ್ನು ಅನುಮಾನದಿಂದ ನೋಡುವಂತಾಗಲು ಕಾರಣವಾಯಿತು. ೧೯೯೦ ಮತ್ತು ೧೯೯೩ರಲ್ಲಿ ಖಾದ್ರಿ ಅವರ ರಾಜಕೀಯ ಪ್ರಯತ್ನಗಳು ವಿಫಲಗೊಂಡವು. ೧೯೯೫ರಲ್ಲಿ ರಾಜಕೀಯ ತೊರೆದರು. ಆದರೆ, ೧೯೯೯ರಲ್ಲಿ ಜನರಲ್ ಪರ್ವೇಜ್ಮು ಷರಫ್ ಸೇನಾ ಕ್ಷೀಪ್ರ ಕ್ರಾಂತಿಯಲ್ಲಿ ಪಾಕ್ ಅಧ್ಯಕ್ಷರಾದರು. ಆಗ ಅವರೊಂದಿಗೆ ಬೆಳೆದ ಸ್ನೇಹದ ಫಲವಾಗಿ ೨೦೦೨ರಲ್ಲಿ ನ್ಯಾಷನಲ್ ಅಸೆಂಬ್ಲಿಯ ಸದಸ್ಯರಾದರು. ಆಗಲೇ ಖಾದ್ರಿ ಅವರಿಗೆ ಸೇನೆಯ ಒಳ ದಾರಿಗಳು ಗೊತ್ತಾಗಿದ್ದು. ಖಾದ್ರಿಗೆ ಧಾರ್ಮಿಕ ವ್ಯವಹಾರಗಳ ಸಚಿವರಾಗುವ ಬಯಕೆ ಇತ್ತು. ಆದರೆ, ಸಾಧ್ಯವಾಗಲಿಲ್ಲ. ಕೊನೆಗೆ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿ ೨೦೦೫ರಲ್ಲಿ ಕೆನಡಾಕ್ಕೆ ವಲಸೆ ಹೋದರು. ಇದೆಲ್ಲವನ್ನು ಗಮನಿಸದರೆ ಪಾಕ್ ರಾಜಕೀಯ, ಅಧಿಕಾರದ ಪಡಸಾಲೆಯಲ್ಲಿ ‘ಕಾಯಂವಾಸಿ’ಯಾಗುವ ಅವರ ಬಯಕೆ ಇದ್ದೇ ಇದೆ ಎಂಬುದು ವೇದ್ಯ. ಹಾಗಾಗಿ, ಇಮ್ರಾನ್ ಖಾನ್ ಜತೆಗೂಡಿ ಷರೀಫ್ ಅವರ ರಾಜಿನಾಮೆಗೆ ಹೋರಾಟದ ಸ್ವರೂಪ ನೀಡಿದ್ದಾರೆ ಎಂಬ ಆರೋಪಗಳಿವೆ.

ಇಮ್ರಾನ್ ಖಾನ್ ಪಾಕ್‌ನ ಕೇಜ್ರಿವಾಲಾ?
೧೯೯೨ರಲ್ಲಿ ಕ್ರಿಕೆಟ್ ವಿಶ್ವಕಪ್ ಗೆದ್ದ ಪಾಕಿಸ್ತಾನ ತಂಡದ ನಾಯಕ ಇಮ್ರಾನ್ ಖಾನ್. ಅಂದಿನಿಂದ ಈವರೆಗೂ ಪಾಕ್ ವಿಶ್ವಕಪ್ ಗೆಲ್ಲಲು ಸಾಧ್ಯವಾಗಿಲ್ಲ. ಹಾಗಾಗಿ, ಕ್ರಿಕೆಟಿಗರಾಗಿ ಈಗಲೂ ಇಮ್ರಾನ್ ಖಾನ್ ಪಾಕಿಸ್ತಾನದ ಹೀರೋ. ರಾಜಕೀಯದಲ್ಲೂ ಅದೇ ‘ನಾಯಕ’ನಾಗುವ ಹುಮ್ಮಸ್ಸಿನಲ್ಲಿ ಸ್ವಲ್ಪ ಆತುರಕ್ಕೆ ಬಿದ್ದಿದ್ದಾರೆ ಅನ್ನಿಸುತ್ತದೆ. ಒಂದು ರೀತಿಯಲ್ಲಿ ನಮ್ಮ ಅರವಿಂದ್ ಕೇಜ್ರಿವಾಲ್ ಅವರಿಗೂ ಇವರನ್ನು ೋಲಿಸಬಹುದು. ಪಾಕ್‌ನ ನಗರವಾಸಿಗಳ ಬೆಂಬಲ ಇರುವಇಮ್ರಾನ್ ಅವರ ಪಾರ್ಟಿ ಆಫ್ ತೆಹ್ರಿಕ್ ಇ ಇನ್ಸಾಫ್(ಪಿಟಿಐ)2೦೧೩ರ ನ್ಯಾಷನಲ್ ಅಸೆಂಬ್ಲಿ ಚುನಾವಣೆಯಲ್ಲಿ ೩೪ ಸ್ಥಾನ ಗೆದ್ದಿದೆ. ಇದೇ ಉತ್ಸಾಹದಲ್ಲಿ ಸೇನೆಯ ಬೆಂಬಲದೊಂದಿಗೆ ಸದ್ಯ ಪಾಕ್‌ನಲ್ಲಿ ಹೋರಾಟಕ್ಕಿಳಿದಿದ್ದಾರೆ. ಆದರೆ, ಅವರ ಈ ನಡೆ ಅವರ ಬೆಂಬಲಿಗರಲ್ಲಿ ಸಮಾಧಾನ ತಂದಿಲ್ಲ. ಇಮ್ರಾನ್ ಖಾನ್ ಅವರ ಹೋರಾಟ ಅರಾಜಕತೆ ಮತ್ತು ಸೇನಾಡಳಿತಕ್ಕೆ ದಾರಿ ಮಾಡಿಕೊಡುತ್ತಿದೆ ಎಂಬುದು ಅವರ ಆರೋಪ. ಆದರೆ, ಇಮ್ರಾನ್ ಇದ್ಯಾವುದನ್ನೂ ಲೆಕ್ಕಕ್ಕೆ ತೆಗೆದುಕೊಂಡಂತೆ ಕಾಣುತ್ತಿಲ್ಲ.
ಸದ್ಯ ಇಮ್ರಾನ್ ಹೆಗಲ ಮೇಲೆ ಬಂದೂಕು ಇಟ್ಟು ಸೇನೆ ಷರೀಫ್‌ರತ್ತ ಗುಂಡು ಹಾರಿಸುತ್ತಿದೆ. ಖಾದ್ರಿ ಮತ್ತು ಇಮ್ರಾನ್ ಅವರು ಸೇನೆ ಜತೆ ನಂಟಿಲ್ಲ ಎಂದು ಎಷ್ಟೇ ಹೇಳಿದರೂ ಯಾರೂ ನಂಬಲಾರರು. ಯಾಕೆಂದರೆ, ಸದ್ಯದ ರಾಜಕೀಯ ಬಿಕ್ಕಟ್ಟು ಬಗೆಹರಿಸಲು ಅವರು ಸಂಧಾನಕಾರರನ್ನಾಗಿ ಆಯ್ಕೆ ಮಾಡಿಕೊಂಡಿರುವುದು ಸೇನಾಧಿಕಾರಿಯನ್ನೇ! ಪಾಕ್ ಸೇನೆಗೂ
ಷರೀಫ್ ತಮ್ಮ ಮೇಲೆ ಸವಾರಿ ಮಾಡುವುದು ಸಹಿಸಿಕೊಳ್ಳಲಾಗುತ್ತಿಲ್ಲ. ಇದು ಈಗಾಗಲೇ ಷರೀಫ್ ಅವರ ಭಾರತದ ಭೇಟಿ ವೇಳೆ ಜಗಜ್ಜಾಹೀರಾಗಿದೆ. ಪ್ರಧಾನಿ ಯಾಗಲೇಬೇಕು ಎಂಬ ಅದಮ್ಯ ಬಯಕೆ ಹೊಂದಿರುವ ಖಾನ್, ೨೦೧೩ರ ಚುನಾವಣೆಯನ್ನು ‘ಫೇಕ್ ಮ್ಯಾಂಡೆಟ್’ ಎನ್ನುತ್ತಾ, ಷರೀಫ್ ಅವರ ರಾಜಿನಾಮೆ ಹಾಗೂ ಹೊಸದಾಗಿ ಚುನಾವಣೆಯ ಬೇಡಿಕೆಯನ್ನು ಮುಂದಿಟ್ಟಿದ್ದಾರೆ. ಇದಕ್ಕೆಲ್ಲ ತೆರೆಮರೆಯಲ್ಲಿ ಸೇನೆಯ ಕರಾಮತ್ತು ಇದ್ದೇ ಇದೆ. ಇನ್ನೊಂದು ಗಮನಿಸಬೇಕಾದ ಅಂಶವೆಂದರೆ, ಕಳೆದ ಸಾರ್ವತ್ರಿಕ ಚುನಾವಣೆಯಲ್ಲಿ ಕೆಲವು ಸ್ಥಾನಗಳ ಬಗ್ಗೆ ಮರು ಎಣಿಕೆಯನ್ನು ಇಮ್ರಾನ್ ಬಯಸಿದ್ದರು. ಆದರೆ, ಇದು ಸಾಧ್ಯವಾಗಿರಲಿಲ್ಲ. ಇದಕ್ಕೆಲ್ಲ ಕಾರಣ ಷರೀಫ್ ಎಂಬುದು ಅವರ ಗುಮಾನಿ. ಈಗತಮ್ಮ ಸ್ವಹಿತಾಸಕ್ತಿ ಮತ್ತು ಸೇನೆಯ ಆಸಕ್ತಿಗಳೆರಡನ್ನು ಸೇರಿಸಿ ಕೊಂಡು ಷರೀಫ್ ಅವರಿಗೆ ಮಗ್ಗುಲು ಮುಳ್ಳಾಗುತ್ತಿದ್ದಾರೆ.

ಷರೀಫ್‌ಗೆ ಸಾಮ್ರಾಜ್ಯ ಉಳಿಸಿಕೊಳ್ಳುವ ತವಕ 
೨೦೧೩ಕ್ಕೆ ಮುಂಚೆ ಪಾಕ್ ಜನ ಇವರ ಮೇಲಿಟ್ಟಿದ್ದ ವಿಶ್ವಾಸ ಈಗ ಉಳಿದಿಲ್ಲ. ಇದು ಪ್ರಧಾನಿ ಷರೀಫ್ ಅವರ ಸ್ವಯಂಕೃತ ಅಪರಾಧ. ಷರೀಫ್ ಅವರ ಅತಿಯಾದ ಸ್ವಜನ ಪಕ್ಷಪಾತ ಮತ್ತು ಅತಿಯಾದ ಭ್ರಷ್ಟಾಚಾರ ಜನರಲ್ಲಿ ಭ್ರಮನಿರಸನಕ್ಕೆ ಕಾರಣ. ಷರೀಫ್ ಅವರ ನೀತಿ ಯಾವಾಗಲೂ ಬಿಸಿನೆಸ್ ಪರವಾಗಿರುತ್ತ ವೆ ಎಂಬುದು ಗೊತ್ತಿರುವ ಸಂಗತಿ. ಪಾಕಿಸ್ತಾನದಲ್ಲಿರುವ ಸಕ್ಕರೆ, ಉಕ್ಕು ಸೇರಿದಂತೆ ಸುಮಾರು ಕೈಗಾರಿಕೆಗಳು ಇವರು ಮತ್ತು ಇವರ ಸಂಬಂಧಿಕರ ಹಿಡಿತದಲ್ಲಿವೆ. ಹಾಗೆ ನೋಡಿದರೆ ಇಡೀ ಕೈಗಾರಿಕೋದ್ಯಮ ಇವರ ಅಂಗೈಯಲ್ಲಿದೆ ಎಂದರೆ ಉತ್ಪ್ರೇಕ್ಷೆ ಅಲ್ಲ. ಚುನಾವಣೆಯ ಮುಂಚೆ ‘ಅಂಗೈಯಲ್ಲಿ ಆಕಾಶ’ ತೋರಿಸುವ ಭರವಸೆ ನೀಡಿದ್ದ ಷರೀಫ್ ಅದರತ್ತ ಕಿಂಚಿತ್ ಪ್ರಯತ್ನ ಮಾಡಿಲ್ಲ. ಇದುವರೆಗೆ ಒಂದೇ ಒಂದು ಕಾಯ್ದೆಯನ್ನು ಅವರು ಜಾರಿಗೆ ತಂದಿಲ್ಲ. ಅವರ ಆಡಳಿತ ನಿಷ್ಕ್ರಿಯತೆ ಎಷ್ಟಿದೆ ಎಂದರೆ, ಇದುವರೆಗೂ ಪ್ರಮುಖ ಖಾತೆಗಳಿಗೆ ಸಚಿವರನ್ನೇ ನೇಮಿಸಿಲ್ಲ! ಷರೀಫ್ ಅವರ ಸ್ವಜನ ಪಕ್ಷಪಾತಕ್ಕೆ ಮಿತಿಯೇ ಇಲ್ಲ. ಇರುವ ಮಂತ್ರಿಗಳ ಪೈಕಿ ಬಹುತೇಕರು ಅವರ ಸಂಬಂಧಿಕರೇ ಇದ್ದಾರೆ. ಅವರ ವಿರುದಟಛಿ ಭ್ರಷ್ಟಾಚಾರ ಆರೋಪಗಳು ಹೇರಳ. ಎಲ್ಲಕ್ಕಿಂತ ಹೆಚ್ಚಾಗಿ ಸೇನೆಯ ಜತೆ ಷರೀಫ್ ಅವರು ಸಂಘರ್ಷಕ್ಕಿಳಿದಿದ್ದು ಈಗಿನ ಪರಿಸ್ಥಿತಿಗೆ ಕಾರಣ. ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಷರೀಫ್ ಬಂದಿದ್ದು ಕೂಡಾ ಯಡವಟ್ಟಾಗಿದೆ. ಸದ್ಯಕ್ಕಂತೂ ಅತ್ತ ಸೇನೆಯ ಜತೆಗೂ ಸಂಬಂಧ
ನೆಟ್ಟಗಿಲ್ಲ, ಇತ್ತ ಜನರು ತಮ್ಮ ಮೇಲಿಟ್ಟ ವಿಶ್ವಾಸವನ್ನು ಉಳಿಸಿಕೊಂಡಿಲ್ಲ ಎಂಬ ಪರಿಸ್ಥಿತಿಯಲ್ಲಿದ್ದಾರೆ ಷರೀಫ್. ಪಾಕ್ ಸಂಸತ್ತು ಷರೀಫ್ ಬೆನ್ನಿಗೆ ನಿಂತಿದೆಯಾದರೂ ಅದು ಎಷ್ಟು ದಿನ ಎಂಬುದು ಯಾರಿಗೂ ಗೊತ್ತಿಲ್ಲ. ಅಲ್ಲದೆ, ಅವರ ಎದುರಾಳಿ ಜನರಲ್ ಪರ್ವೇಜ್ಮು ಷರ‌್ರಫ್ ಕೂಡಾ ಖಾದ್ರಿ ಜೊತೆ ಕೈಜೋಡಿಸಿದ್ದಾರೆ.
------
ಮೂರು ಮುಖ್ಯ ಪಾತ್ರಗಳು ಹೀಗಿರಲಾಗಿ ಪಾಕಿಸ್ತಾನದ ಭವಿಷ್ಯದ ಕುರಿತ ಭರತವಾಕ್ಯ ಏನು? ಉತ್ತರ: ಥರಹೇವಾರಿ ಪಾತ್ರಗಳ ಆಟ ಮತ್ತು ಪಾಕ್ ಸಂಘರ್ಷ ಎರಡಕ್ಕೂಕನ್‌ಕ್ಲೂಷನ್ ಇಲ್ಲ!

(ಈ ಲೇಖನ 10-09-2014ರಲ್ಲಿ ಕನ್ನಡಪ್ರಭದಲ್ಲಿ ಪ್ರಕಟವಾಗಿದೆ.)

ಭಾನುವಾರ, ಸೆಪ್ಟೆಂಬರ್ 1, 2013

ಗಜಲ್


ನಿನ್ನ ಈ ಮೌನ ಹೊಮ್ಮಿಸಿದೆ ಅರ್ಥ ನೂರು
ನಿನ್ನ ಈ ಕಣ್ಣ ಕಾಂತೀಯ ಹೊಳಪು ನೂರು

ಅರ್ಥವಾಗದೇ ನನ್ನ ಈ ಹೃದಯದ ತಕರಾರು?
ಕಲೆತರೂ ಕಲಿಯದಂತಿರುವುದು ನಿನ್ನದು ಕಲೆ ನೂರು

ನೀನಾಡುವ ಮಾತಿನೊಳಗೆ ಸಾವಿರ ಚುಕ್ಕಿ, ರೇಖೆ
ಹೇಗೇ ಜೋಡಿಸಿದರೂ ಪ್ರೀತಿಯ ತೇರು ನೂರು

ನಿನ್ನ ಈ ಸ್ನಿಗ್ಧ ನಗೆಗೆ ಅರಳವವು ಮುಂಜಾನೆ ಮೊಗ್ಗಗಳು
ನನಗೇ ನಾನರಿಯುವ, ಬೆಳಕು ಚುಂಬಿಸುವ ದಾರಿ ನೂರು

ಮೌನಕ್ಕೆ ಅರ್ಥ ಕಲ್ಪಿಸಿ ಕಲ್ಪಿಸಿ ಸಾಯುವ ಸಮ್ಮೋಹಿ
ಆದಿ-ಅಂತ್ಯದೊಳಗೆ ಸ್ಥಿತ್ಯಂತರ ಕಾಣುತ್ತಿವೆ ನೂರು

ಪರವಾಗಿಲ್ಲ ಬಿಡು ಕೊನೆಯಾದರೂ ಕಾಯುವೆ ಕರಗದೆ
ದೊರೆತೀತು ನನ್ನ ಕಾಯುವಿಕೆ, ನಿನ್ನ ಮೌನಕೆ ಅರ್ಥ ನೂರು

(published in KP's Saptahikprabha)

ಶನಿವಾರ, ಡಿಸೆಂಬರ್ 24, 2011

ಇದು ಟೇಕನ್ ಫಾರ್ ಗ್ರಾಂಟೆಡ್ ಅಲ್ಲ!


ಟೇಕನ್..  ಹಾಲಿವುಡ್ ನ ಸ್ಟಂಟ್ ಚಿತ್ರಗಳಂತೆ ಭಾಸವಾದರೂ ಒಳಪದುರುಗಳಲ್ಲಿ ಫ್ರಾನ್ಸ್್ನಲ್ಲಿ ನಡೆಯುವ ಹುಡುಗಿಯರ ಕಳ್ಳ ಸಾಗಣೆ ಸಮಸ್ಯೆಯನ್ನು ತುಂಬಾ ಪ್ರಭಾವಿಯಾಗಿ ಚಿತ್ರಿಸಿದೆ. ಈ ಚಿತ್ರದ ಸ್ಟಂಟ್ಗೂ ಒಂದು ಸ್ಟೇಟಸ್ ಇದೆ. 2008ರಲ್ಲಿ ಬಿಡುಗಡೆಯಾದ ಈ ಚಿತ್ರ ಸಮ್ಮಿಶ್ರ ಪ್ರತಿಕ್ರಿಯೆ ದಕ್ಕಿಸಿಕೊಂಡಿತ್ತು. ಹಾಗೆಯೇ ನಿಮಾ೯ಪಕರ ಜೇಬನ್ನು ಕೂಡಾ ಭತಿ೯ ಮಾಡಿತ್ತು ಎಂದು ಬೇರೆ ಹೇಳಬೇಕಿಲ್ಲ.

ಇದೊಂಥರಾ ಅಪ್ಪ-ಮಗಳ ನಡುವಿನ ಬಾಂಧವ್ಯ ಚಿತ್ರ. ಒಬ್ಬ ತಂದೆ ತನ್ನ ಮಕ್ಕಳ ಮೇಲೆ ಎಷ್ಟೊಂದು ಮಮಕಾರ ಇಟ್ಟಿರುತ್ತಾನೆ. ಅವರನ್ನು ಎಂಥ ಸಂದಭ೯ದಲ್ಲೂ ಪ್ರಾಣದ ಹಂಗು ತೊರೆದು ರಕ್ಷಿಸುವ ಹೊಣೆಯನ್ನು ನಿಭಾಯಿಸುತ್ತಾನೆ. ಅದರಲ್ಲೂ ವಿಶೇಷವಾಗಿ ಹೆಣ್ಣು ಮಕ್ಕಳ ರಕ್ಷಣೆ ವಿಷಯಕ್ಕೆ ಬಂದಾಗ ಅಪ್ಪ ನಿಜವಾಗಲೂ ರಾಕ್ಷಸನೇ ಸರಿ.

ಕೇವಲ ಸಿಐಎನಿಂದ ನಿವೖತ್ತಿಯಾದ ಏಜೆಂಟನೊಬ್ಬಳ ಮಗಳನ್ನು ಮಾನವ ಕಳ್ಳ ಸಾಗಣೆದಾರರು ಅಪಹರಿಸಿ ಅವಳನ್ನು ಸೂಳೆಗಾರಿಕೆಗೆ ತಳ್ಳುವ ಯತ್ನದ ಕಥೆ ಅಷ್ಟೇ ಅಲ್ಲ ಇದು. ಅಪ್ಪ ಮಗಳ ನಡುವಿನ ನವಿರಾದ ಬಂಧ, ಸಂಬಂಧ, ವಾತ್ಸಲ್ಯವನ್ನು ಕೂಡಾ ವೈಭವೀಕರಿಸುತ್ತಾರೆ ಚಿತ್ರದ ನಿದೇ೯ಶಕ ಪಿರೆ ಮಾರೆಲ್. ಅದರ ಜತೆಗೆ ಫ್ರಾನ್ಸ್್ನಲ್ಲಿ ಅಕ್ರಮ ವಲಸೆಗಾರರಾದ ಅಲ್ಬೆರಿಯನ್ನರು ನಡೆಸುವ ಒತ್ತಾಯ ಸೂಳೆಗಾರಿಕೆಯ ವಾಸ್ತವ ಚಿತ್ರಣವನ್ನು ನೀಡುತ್ತಾರೆ. ಇದರೊಟ್ಟಿಗೆ ಸ್ಥಳೀಯ ಪೊಲೀಸರು ಹೇಗೆ ಶಾಮಿಲಾಗಿರುತ್ತಾರೆ ಎಂಬುದನ್ನು ತುಂಬಾ ಸೂಕ್ಷ್ಮವಾಗಿ ಚಿತ್ರಿಸಿದ್ದಾರೆ ಮಾರೆಲ್.

ಫ್ರಾನ್ಸ್್ಗೆ ಬರುವ ಹದಿಹರಿಯ ಹುಡಿಗಿಯರನ್ನು ಹೊಂಚು ಹಾಕಿ ಪಟಾಯಿಸಿ ಅವರನ್ನು ಒತ್ತಾಯವಾಗಿ ಸೂಳೆಗಾರಿಕೆಗೆ ನೂಕುವ ಅಲ್ಬೆರಿಯನ್ನರ ದೊಡ್ಡ ಜಾಲವೇ ಕ್ರಿಯಾಶೀಲವಾಗಿರುತ್ತದೆ. ಹಾಗೇ ಅಪಹರಿಸಿದ ಹುಡುಗಿಯರಿಗೆ ಡ್ರಗ್ಸ್್ ನೀಡಿ ಅವರನ್ನು ಅವರ ಅರವಿಗೆ ಬಾರದಂತೆ ಪಾಪದ ಕೂಪಕ್ಕೆ ತಳ್ಳಲಾಗುತ್ತದೆ. ಈ ಪ್ರಕ್ರಿಯೆಯಲ್ಲಿ ಅದೆಷ್ಟೋ ಹಣ್ಣುಮಕ್ಕಳು ಓವರ್್ ಡ್ರಗ್್ನಿಂದ ಸಾವಿಗೀಡಾಗುತ್ತಾರೆ. ಇದೆಲ್ಲವನ್ನೂ ದಾಟಿ ಬದುಕಿದ ಹುಡುಗಿಯರು ಕಾಮಪಿಪಾಸುಗಳ ಹಸಿವೆಗೆ ಆಹಾರವಾಗುತ್ತಾರೆ. ಅರಬ್್ ದೇಶಗಳ ಶ್ರೀಮಂತ ವ್ಯಕ್ತಿಗಳ ಕಾಮತೖಷೆ ತೀರಿಸಲು ಏನೂ ಅರಿಯದ ಮುಗ್ಧ ಹೆಣ್ಣು ಮಕ್ಕಳ ಮಾರಣಹೋಮವೇ ನಡೆಯುತ್ತಿರುತ್ತದೆ. ಇದೆಲ್ಲವನ್ನೂ ಸ್ಥಳೀಯ ಪೊಲೀಸರು ಕಣ್ಣು ಮುಚ್ಚಿ ನೋಡುತ್ತಿರುತ್ತಾರೆ!

ಇಂಥದ್ದೇ ಕಥೆಯನ್ನು ಇಟ್ಟುಕೊಂಡು ಕಮಷಿ೯ಯಲ್ಲಾಗಿ ಕನ್ನಡದಲ್ಲಿ ಯಶಸ್ವಿಯಾದ ಚಿತ್ರವೆಂದರೆ ಸೂರಿ ನಿದೇ೯ಶನದ ಹಾಗೂ ಪುನೀತ್ ರಾಜಕುಮಾರ ಅಭಿನಯದ ಜಾಕಿಯೂ ಒಂದು.

ಅಷ್ಟಕ್ಕೂ ಟೇಕನ್ ಚಿತ್ರದ ಕಥೆ ಏನೆಂದರೆ, ಬ್ರಿಯಾನ್ ಮಿಲ್ಸ್(ಲಿಯಾಂ ನೀಸನ್)ಸಿಐಎ ಏಜೆಂಟ್ ಹುದ್ದೆಯಿಂದ ನಿವೖತ್ತಿಯಾಗುತ್ತಾನೆ. ಈತನಿಗೆ ಮಗಳಿರುತ್ತಾಳೆ. ಆಕೆಯ ಹೆಸರು ಕಿಮ್(ಮ್ಯಾಗಿ ಗ್ರೇಸ್). ಆಕೆಗೆ ಆಗಷ್ಟೇ 17 ವಷ೯ ತುಂಬಿರುತ್ತದೆ. ಆಕೆಯ ತಾಯಿ ಅಂದರೆ ಮಿಲ್ಸ್್ನ ಪ ತ್ನಿ ಲೆನೋರ್(ಫಾಮ್ಕೆ ಜಾನ್ಸನ್) ಮಿಲ್ಸನನ್ನು ತೊರೆದು ಮತ್ತೊಬ್ಬನನ್ನು ವಿವಾಹವಾಗಿರುತ್ತಾಳೆ. ಅದಕ್ಕೂ ಕಾರಣವಿದೆ. ಮಿಲ್ಸ್ ತನ್ನ ಕೆಲಸದ ಮಧ್ಯೆ ಕುಟುಂಬ, ಮಗಳನ್ನು ತುಂಬಾ ನಿಲ೯ಕ್ಷಿಸುತ್ತಾನೆ. ಹಾಗಾಗಿ ಲೆನೋರ್ ಮಿಲ್ಸ್ನನ್ನು ತೊರೆದಿರುತ್ತಾಳೆ. 17ನೇ ವಯಸ್ಸಿಗೆ ಕಾಲಿಟ್ಟ ಕಿಮ್ ತನ್ನ ಗೆಳತಿಯ ಜತೆ ಫ್ರಾನ್ಸ್ಗೆ ರಜೆ ಕಳೆಯಲು ಹೋಗಲು ಇಚ್ಛಿಸುತ್ತಾಳೆ. ಆದರೆ, ಇದಕ್ಕೆ ತಂದೆ ಮಿಲ್ಸ್ ಮೊದಲು ಒಪ್ಪಲ. ಕೊನೆಗೆ ಮೂರು ಷರತ್ತುಗಳೊಂದಿಗೆ ಅನುಮತಿ ನೀಡುತ್ತಾನೆ. ಕಿಮ್ ಫ್ರಾನ್ಸ್್ಗೆ ಹೋದ ನಂತರ ಪ್ರತಿ ರಾತ್ರಿ ಅಪ್ಪ ಮಿಲ್ಸ್್ನಿಗೆ ಫೋನ್್ ಮಾಡಬೇಕೆಂಬುದು ಮೂರು ಷರತ್ತುಗಳಲ್ಲಿ ಒಂದು. ಫ್ರಾನ್ಸ್್ಗೆ ಬರುವ ಕಿಮ್ ಮತ್ತು ಆಕೆಯ ಗೆಳತಿಗೆ ಏರ್್ಪೋಟ್೯ ಹೊರಗೆ ಅಪರಿಚಿತನ ಭೇಟಿಯಾಗುತ್ತದೆ. ಆತನೇ ಹುಡುಗಿಯರ ಕಳ್ಳ ಸಾಗಣೆಯ ಮೊದಲ ಕೊಂಡಿ. ಹೀಗೆ ಕಿಮ್ ಮತ್ತು ಆಕೆಯ ಗೆಳತಿ ಅಪಾಟ್೯ಮೆಂಟ್ ಗೆ ಹೋದ ಸಂಗತಿಯನ್ನು ಆತ ತನ್ನ ಬಾಸ್್ಗೆ ತಿಳಿಸುತ್ತಾನೆ. ಇದೇ ವೇಳೆ, ರಾತ್ರಿ ಕಿಮ್ ಹಾಗೂ ಆಕೆಯ ಗೆಳತಿಯನ್ನು ಸೂಳೆಗಾರಿಕೆಗೆ ನಡೆಸುವವರು ಅಪಹರಿಸುತ್ತಾರೆ. ಬ್ರಿಯಾನ್ ತನ್ನ ಮಗಳನ್ನು ಅಪಹರಣಕಾರರಿಂದ ಹೇಗೆ ಬಿಡಿಸಿಕೊಂಡು ಬರುತ್ತಾನೆ ಎಂಬುದೇ ಕಥೆಯ ತಿರುಳು.

ಇದು ಪಕ್ಕಾ ಸ್ಟಂಟ್್ ಸಿನಿಮಾದಂತೆ ತೋರಿದರೂ ಕೂಡಾ ಚಿತ್ರದ ವೈಭವ ಎದ್ದು ಕಾಣುವುದು ಅದರ ಹಿನ್ನೆಲೆ ಸಂಗೀತ ಮತ್ತು ಸ್ಟಂಟ್್ಗಳಿಂದಾಗಿ. ಚಿತ್ರ ಚಕ ಚಕ ಸಾಗುತ್ತಾ ನೂರು ಕಿ.ಮೀ. ವೇಗದಲ್ಲಿ ಓಡುತ್ತದೆ. ಮುಖ್ಯ ಪಾತ್ರ ಬ್ರಿಯಾನ್ ಕೂಡಾ ಚಿತ್ರದ ಪೂತಿ೯ ಓಡುತ್ತಲೇ ಇರುತ್ತಾರೆ ಎಂಬುದು ಕೂಡಾ ಇದಕ್ಕೆ ರೂಪಕವಾಗಬಹುದು. ಹಾಗೆಯೇ, ಮಗಳ ಗೆಳತಿಯನ್ನು ಓವರ್ ಡ್ರಗ್ ನೀಡಿ ಸಾಯಿಸಿರುವುದನ್ನು ಕಂಡ ಬ್ರಿಯಾನ್ ಕೂಡಾ ನಿಮ್ಮನ್ನು ಕಲಕುತ್ತಾನೆ. ಪ್ರತಿ ಸೀನಿನಲ್ಲೂ ನಿದೇ೯ಶಕರ ಕೈಚಳಕ ಎದ್ದು ಕಾಣುತ್ತದೆ. ಹಾಗಾಗಿಯೇ ಕಥೆ ತುಂಬಾ ಸರಳವಾಗಿದ್ದರೂ ಅದನ್ನು ತೆರೆಗೆ ತಂದ ಪರಿ ಬೆರಗು ಮೂಡಿಸುತ್ತದೆ. ಅತಿಯಾದ ಸ್ಟಂಟ್ ಸಿನಿಮಾ ಆಗಿರುವುದರಿಂದ ನೀವು ಆಳಕ್ಕಿಳಿದು ನೋಡದಿದ್ದರೆ ಮಾಮೂಲಿ ಹಾಲಿವುಡ್ ಸಿನಿಮಾಂತೆ ಭಾಸವಾಗುತ್ತದೆ. ಆದರೆ, ಒಂದು ಸರಳವಾದ ಕಥೆಯನ್ನು ಇಟ್ಟುಕೊಂಡು ಗಂಭೀರವಾದ ಸಮಸ್ಯೆಯನ್ನು ತುಂಬಾ ಚೊಕ್ಕವಾಗಿ ಮನಕ್ಕೆ ಮುಟ್ಟುವಂತೆ ಮಾಡುವ ನಿದೇ೯ಶಕರ ಕರಾಮತ್ತು ಮೆಚ್ಚಲೇ ಬೇಕು.



ಚಿತ್ರ- ಟೇಕನ್, ಭಾಷೆ-ಇಂಗ್ಲಿಷ್, ನಿದೇ೯ಶನ- ಪಿರ್ರೆ ಮರೆಲ್, ತಾರಾಗಣ- ಲಿಯಾಂ ನೀಸನ್, ಫಾಮ್ ಜಾನ್ಸನ್, ಮ್ಯಾಗಿ ಗೇಸ್, ಅಲೆಕ್ಸಾಂಡರ್ ಬ್ರೇಕಲೀ ಇತರರು.

ಶುಕ್ರವಾರ, ಆಗಸ್ಟ್ 26, 2011

ಬದಲಾವಣೆ ರಿಮೋಟ್ ಕಂಟ್ರೋಲ್ಲಾ..?

ನಿರಾಶೆಯಲ್ಲಿ ಮಡುವಿನಲ್ಲಿತ್ತು


ಆ ಸಮುದಾಯ, ಇದು ಇಷ್ಟೇ ಲೈಫು

ಏನೇ ತಿಪ್ಪರಲಾಗ ಹಾಕಿದರೂ

ಬದಲಾಗಲ್ಲ ಸಿಸ್ಟಮ್ಮು

ಟೀವಿ ರಿಮೋಟ್ ಕಂಟ್ರೋಲ್ ಹಿಡಿದುಕೊಂಡೇ

ಹಿಡಿ ಶಾಪ ಹಾಕುತ್ತಿದ್ದರು

ಬದಲಾವಣೆ ಕೂಡಾ ರಿಮೋಟ್

ಹಾಗೇ ಇದ್ದರೆ ಎಷ್ಟು ಚೆನ್ನ

ಎಂದು ಗೊಣಗುತ್ತಿರುವಾಗಲೇ

ಅದ್ಯಾವುದೋ ಹಳ್ಳಿಯಲ್ಲಿ

ಸದ್ದಿಲ್ಲದೇ ಸುಧಾರಿಸಿದ

ಸದ್ದು ಮಾಡುವವರ ಮಧ್ಯೆ

ಕಮ೯ಕ್ಕೆ ತಾರುಣ್ಯ ತಂದುಕೊಟ್ಟ

ಮಹಾತ್ಮನ ಕೋಲು ಹಿಡಿದುಕೊಂಡೇ

ಹೊರಟು ನಿಂತ ಭ್ರಷ್ಟಾಚಾರದ ವಿರುದ್ಧ

ಮತ ಹಾಕುವ ದಿನವನ್ನು ರಜೆಯಾಗಿ

ಅನುಭವಿಸುವ ವಗಾ೯ವಗಿ೯

ಎದ್ದು ನಿಂತಿತ್ತು ಬೆನ್ನು ಹಿಂದೆ, ಮುಂದೆ

ಜೈಕಾರ, ಜೈಘೋಷ

ಅಣ್ಣಾ ಬಂದೇ ಬಿಟ್ಟ, ಗಾಂಧಿ ಪ್ರತಿರೂಪಿ

ತಂದೇ ಬಿಟ್ಟ ಭ್ರಷ್ಟಾಚಾರ ಮುಕ್ತ

ಸ್ವಾತಂತ್ರ್ಯ, ಬದಲಾಗೇ ಹೊಯ್ತು

ಎಂಬ ನಿಟ್ಟಿಸಿರುವ ಬಿಡುವ ಮೊದಲೇ

ಅಲ್ಲಲ್ಲಿ ವೈರುಧ್ಯ, ವೈರತ್ವ ಹೆಡೆ

ಎತ್ತಿ ಕುಕ್ಕುವಾಗಲೇ ಕುಳಿತು ಬಿಟ್ಟ

ಅನ್ನ ನೀರು ಬಿಟ್ಟು ಅಣ್ಣ

ಬದಲಾವಣೆ ರಿಮೋಟ್ ಕಂಟ್ರೋಲ್ಲಾ..?

ಹಾಗಿದ್ದರೆ ಎಷ್ಟು ಚೆನ್ನಣ್ಣ.

ಹೇಗಿದ್ದರೂ ಹಾಗಿದ್ದರೂ

ಏನಂದರೂ ಏನ್ ಅನ್ನದಿದ್ದರೂ

ನಮ್ಮೊಳಗೇ ಕಿಚ್ಚು ಹಚ್ಚಿದ್ದು ಮಾತ್ರ

ನಿಜವಣ್ಣ, ರಜೆಯ ಮಜೆಯಲ್ಲಿದ್ದ

ಮಂದಿಯನ್ನು ಕೊಂಚವಾದರೂ

ಎಬ್ಬಿಸಿದೆಯಲ್ಲ ನಿನಗಿದೋ ಸಲಾಂ





ಗುರುವಾರ, ಆಗಸ್ಟ್ 25, 2011

ಸಾರಿ ಪ್ರೇಮ್... ಯು ಆರ್ ನಾಟ್ ಎ ಜೋಗಿ ಪ್ರೇಮ್!

ತುಂಬಾ ನಿರೀಕ್ಷೆ ಇಟ್ಟುಕೊಂಡು ಜೋಗಯ್ಯ ನೋಡಲು ಹೋಗಿದ್ದೆ. ಆದರೆ, ಸಿನಿಮಾ ನೋಡುತ್ತಿದ್ದ ಅರೆಗಳಿಗೆಯಲ್ಲೇ ನಿರೀಕ್ಷೆಯಲ್ಲಿ ಠುಸ್ ಆಯ್ತು. ಹ್ಯಾಟ್ರಿಕ್ ಸೂಪರ್ ಚಿತ್ರಗಳನ್ನು ನೀಡಿದ್ದ ಪ್ರೇಮ್, ಜೋಗಯ್ಯ ಚಿತ್ರವನ್ನು ಕಥೆಯಿಲ್ಲದೇ ಎಳೆಯಬಾರದಿತ್ತು. ಪ್ರಥಮಾಧ೯ದಲ್ಲಿ ರವಿಶಂಕರ್ ಪಾತ್ರ ನಿಮಗೆ ಕೊಂಚ ರಿಲೀಫ್ ನೀಡುತ್ತದೆ. ಅದೇ ಪಾತ್ರವನ್ನು ದ್ವಿತೀಯಾಧ೯ದಲ್ಲೂ ವಿಸ್ತರಿಸಿದ್ದರೆ ವೀಕ್ಷಕನಿಗೆ ಕೊಂಚವಾದರೂ ನೆಮ್ಮದಿ ಸಿಗುತ್ತಿತ್ತು.


ಅಷ್ಟಕ್ಕೂ ಈ ಚಿತ್ರದ ಕಥೆ ಏನು ಎಂದು ಹುಡುಕಲು ಹೊರಟರೆ ನಿಮ್ಮಂಥ ಮೂಖ೯ರು ಯಾರು ಇಲ್ಲ. ಯಾಕೆಂದರೆ ಕಥೆ ಇಲ್ಲದೆ ಸಿನಿಮಾ ಹೇಗೆ ಮಾಡಬಹುದು ಎಂಬುದನ್ನು ಪ್ರೇಂರಿಂದ ಕಲಿಯಬಹುದು(?). ಕೇವಲ್ ಗಿಮಿಕ್ ಗಳಿಂದ ಚಿತ್ರವನ್ನು ಗೆಲ್ಲಿಸುವುದಾದರೆ ಇಷ್ಟೊತ್ತಿಗೆ ಸುಮಾರು ಚಿತ್ರಗಳು ಗೆಲ್ಲಬೇಕಾಗಿತ್ತು. ಯಾವುದೇ ಗಿಮಿಕ್ ಮಾಡಿದರೂ ಪ್ರೇಕ್ಷಕನನ್ನು ಎರಡು ದಿನಗಳವರೆಗೆ ಚಿತ್ರಮಂದಿರಕ್ಕೆ ಬರವಂತೆ ಮಾಡಬಹುದೇ ಹೊರತು ಪೂತಿ೯ಯಾಗಿಲ್ಲ. ಒಂದು ಚಿತ್ರ ಯಶಸ್ವಿಯಾಗಲು ಗಿಮಿಕ್(ಅತಿಯಾದ ಗಿಮಿಕ್ ಅಲ್ಲ) ಕೂಡಾ ಒಂದು ಅಂಶವಷ್ಟೇ. ಅದನ್ನೇ ನೆಚ್ಚಿಕೊಂಡರೆ ಜೋಗಯ್ಯ ತರಹವಾಗುತ್ತದೆ. ಯಾಕೆಂದರೆ, ಚಿತ್ರ ಬಿಡುಗಡೆಯ ಮುಂಚೆಯೇ ನೀವು ಬೆಟ್ಟದಷ್ಟು ನಿರೀಕ್ಷೆ ಮೂಡಿಸುತ್ತೀರಿ. ಆ ಚಿತ್ರವನ್ನು ನೋಡಿ ಹೊರ ಬಂದಾಗ ಪ್ರೇಕ್ಷಕನ ಮನದಲ್ಲಿ ನಿರೀಕ್ಷೆ ಠುಸ್ಸಾಗಿದ್ದರೆ ಮುಗೀತು ಚಿತ್ರದ ಕಥೆ ಅಲ್ಲಿಗೆ. ನೀವು ಎಷ್ಟು ನಿರೀಕ್ಷೆಯನ್ನು ಹೆಚ್ಚಿಸುತ್ತೀರೋ ಅಷ್ಟೇ ಚೆನ್ನಾಗಿ ಚಿತ್ರವನ್ನು ನಿರೂಪಿಸಬೇಕು. ಆಗಲೇ ಪ್ರೇಕ್ಷಕ ಮರಳಿ ಚಿತ್ರಮಂದಿರಕ್ಕೆ ಹೋಗಲು ಸಾಧ್ಯ. ಆದರೆ, ಪ್ರಚಾರ ಮಾಡಿದಂತೆ ಎಷ್ಟೋ ಸಿನಿಮಾಗಳು ಹಾಗೆ ಇರುವುದೇ ಇಲ್ಲ. ಪ್ರಚಾರ ನಂಬಿ ಚಿತ್ರಮಂದಿರಕ್ಕೆ ಹೋದರೆ ನಿರಾಶೆ ಗ್ಯಾರಂಟಿ. ಜೋಗಯ್ಯ ಕೂಡಾ ಇದೇ ಸಾಲಿಗೆ ಸೇರುತ್ತದೆ.

ಇದರ ಮಧ್ಯೆಯೇ, ಶಿವಣ್ಣ ಜೋಗಯ್ಯದಲ್ಲಿ ಅಚ್ಚರಿ ಮೂಡಿಸುತ್ತಾರೆ. ಅಭಿಯನಕ್ಕೆ ಸಂಬಂಧಿಸಿದಂತೆ ತುಂಬಾ ಸಾಧ್ಯತೆಗಳನ್ನು ಹೊರ ಹಾಕುವುದಕ್ಕೆ ತಮ್ಮಿಂದ ಸಾಧ್ಯ ಎಂಬುದನ್ನು ಮತ್ತೆ ನಿರೂಪಿಸಿದ್ದಾರೆ. ಚಿತ್ರದಲ್ಲಿ ಅವರು ವೈಸ್ ಮಾಡ್ಯೂಲೇಷನ್ ಗೆ ಪ್ರಯತ್ನಿಸಿದ್ದಾರೆ. ಚಿತ್ರ ನೋಡುವಾಗ ಕೆಲವು ಸನ್ನಿವೇಶಗಳಲ್ಲಿ ಅವರ ಮುಖ ಭಾವ ರಾಜಕುಮಾರ ಅವರನ್ನು ನೆನಪಿಸಿದರೆ ಅದು ಅವರ ಅಭಿನಯಕ್ಕೆ ಸಂದ ಜಯ.

ಇನ್ನು ಚಿತ್ರದ ಹಾಡುಗಳ ವಿಷಯಕ್ಕೆ ಬಂದರೆ ವಿ.ಹರಿಕೖಷ್ಣ ಫುಲ್ ಸ್ಕೋರ್ ಮಾಡುತ್ತಾರೆ. ಅದ್ಭುತ ಎನ್ನುವಂಥ ಟ್ಯೂನ್ ಗಳನ್ನು ಕೊಟ್ಟಿಲ್ಲವಾದರೂ ಇಂಪಾಗಿವೆ. ಮನಸ್ಸಿಗೆ ಹಿಡಿಸುತ್ತವೆ. ಹಾಗೆಯೇ ಹಾಡುಗಳನ್ನು ಚಿತ್ರೀಕರಣ ಮಾಡಿರುವ ಪರಿ ಹಾಗೂ ಅವುಗಳ ಕಲ್ಪನೆಯಲ್ಲಿ ಪ್ರೇಮ್ ಗೆಲ್ಲುತ್ತಾರೆ. ಅದೇ ಕಲ್ಪನೆ, ರೀತಿ, ಕ್ರಮವನ್ನು ಸ್ಕ್ರೀನ್ ಪ್ಲೆ, ಕಥೆ, ನಿದೇ೯ಶನದಲ್ಲಿ ತೋರಿದ್ದರೆ ಜೋಗಯ್ಯ ಅದ್ಭುತ ಚಿತ್ರವಾಗುತ್ತಿತ್ತು. ಆದರೆ, ಪ್ರೇಮ್ ಸಂಪೂಣ೯ವಾಗಿ ಎಡವಿದ್ದಾರೆ. ಅವರಷ್ಟೇ ಎಡುವುದಲ್ಲದೇ ಪ್ರೇಕ್ಷಕರನ್ನು ಕೂಡಾ ಎಡುವಂತೆ ಮಾಡುತ್ತಿದ್ದಾರೆ. ನಾವು ಚಿತ್ರವನ್ನು ಹಾಗೆ ತೆಗೆದಿದ್ದೇವೆ. ಹೀಗೆ ತೆಗಿದಿದ್ದೇವೆ. ಅಷ್ಟೊಂದು ಕಷ್ಟಪಟ್ಟಿದ್ದೇವೆ. ಇಷ್ಟೊಂದು ಕಷ್ಟಪಟ್ಟಿದ್ದೇವೆ ಎಂದು ಟೀವಿಗಳಲ್ಲಿ ಹೇಳುತ್ತಿದ್ದಾರೆ ಪ್ರೇಮ್. ನೀವು ಕಷ್ಟಪಟ್ಟಿದ್ದು ನಿಜವೇ ಇರಬಹುದು. ನಿಮ್ಮ ಕಷ್ಟಕ್ಕೆ ಬಲ, ಫಲ ಸಿಗಬೇಕಿದ್ದರೆ ಚಿತ್ರದ ಒಟ್ಟು ಫಲಿತಾಂಶವನ್ನು ನಿಧ೯ರಿಸುತ್ತದೆ ಎಂಬುದನ್ನು ಮರೆಯಬಾರದು. ಪ್ರೇಮ್ ತುಂಬಾ ಕಷ್ಟಪಟ್ಟಿದ್ದಾರೆಂದು ಎಂದು ನಿಮಗಿರುವ ಅಭಿಮಾನಿಗಳು ಚಿತ್ರಮಂದಿರಕ್ಕೆ ಹೋಗಬಹುದು. ಆದರೆ, ಕೇವಲ ಉತ್ತಮ ಚಿತ್ರಗಳನ್ನು ನೋಡಬೇಕು ಎಂದು ಅಭಿಮಾನ ಇಟ್ಟುಕೊಂಡವರನ್ನು ನೀವು ಚಿತ್ರಮಂದಿರಕ್ಕೆ ಎಳೆಯಲು ಸಾಧ್ಯವಿಲ್ಲ. ಅವರೂ ಬಂದಾಗಲೇ ಚಿತ್ರ ಗೆಲ್ಲೋದು. ಅಂದರೆ, ಒಂದು ಚಿತ್ರ ಗೆಲ್ಲಬೇಕಾದರೆ ಎಲ್ಲ ವಗ೯ದ ಜನರು ಬರವಂತಾಗಬೇಕು. ಬರಬೇಕು. ಆಗಲೇ ಗೆಲವು ಅಲ್ಲವೇ..?

ಜೋಗಯ್ಯ ಇಡೀ ಚಿತ್ರವಾಗಿ ಇಷ್ಟ ಆಗೋದಿಲ್ಲ. ಹಾಡುಗಳಿಗೆ ಇಷ್ಟವಾಗುತ್ತದೆ. ಕೆಲವು ದೖಶ್ಯಗಳಾಗಿ ಇಷ್ಟವಾಗುತ್ತದೆ ಅಷ್ಟೆ. ಬಿಡಿ ಬಿಡಿಯಾಗಿ ಚಿತ್ರ ಇಷ್ಟವಾಗುವುದಾದರೆ ಗೆಲ್ಲವುದು ಹೇಗೆ..? ಚಿತ್ರಕಥೆಯಲ್ಲಿ ಬಿಗುವಿಲ್ಲ. ಶಿವಣ್ಣನ ನೂರನೇ ಚಿತ್ರವಾಗಿರುವುದರಿಂದ ಸಶಕ್ತ ವಿಲನ್ ಕ್ಯಾರೆಕ್ಟರೇ ಇಲ್ಲ!!.

ಇದಿಷ್ಟು ಜೋಗಯ್ಯ ನೋಡಿದ ಮೇಲೆ ನನಗನ್ನಿಸಿದ್ದು. ನನಗೆ ಅನ್ನಿಸಿದ ಹಾಗೆಯೇ ನಿಮಗೆ ಅನ್ನಿಸಬೇಕಿಲ್ಲ. ನಿಮಗೆ ಇಷ್ಟವಾಗಬಹುದು. ಪ್ರೇಮ್ ಮೇಲೆ ತುಂಬಾ ಅಭಿಮಾನ ಇಟ್ಟುಕೊಂಡು, ನಿರೀಕ್ಷೆ ಇಟ್ಟುಕೊಂಡಿದ್ದರಿಂದ ನನಗೆ ಹಾಗೆ ಅನ್ನಿಸರಬಹುದು ಕೂಡಾ. ಇದು ನನ್ನ ಪ್ರಾಮಾಣಿಕ ಅನಿಸಿಕೆ ಅಷ್ಟೇ.

ಸಾರಿ ಪ್ರೇಮ್... ಯು ಆರ್ ನಾಟ್ ಎ ಜೋಗಿ ಪ್ರೇಮ್!
ಹೀಗೆ ಹೇಳದೇ ಬೇರೆ ದಾರಿ ಇಲ್ಲ.