ಸೋಮವಾರ, ಮೇ 23, 2016

ನಾವು ಏನೋ ಅಂದುಕೊಳ್ಳುತ್ತೇವೆ, ಅದು ಇನ್ನೇನೋ ಆಗುತ್ತದೆ!

ಹುಡುಗನೊಬ್ಬನ ಗಜಲ್ ಗಳು-
ಯಾವುದೇ ಕಲ್ಮಶವಿಲ್ಲದೇ ನಿರ್ವ್ಯಾಜ ಪ್ರೀತಿಯಾಗಿದ್ದರೆ ನಾವು ಹೇಗೆ ದೂರು ಆಗುತ್ತಿದ್ದೆವು..

- ಪ್ರದ್ಯುಮ್ನ
ಒಲಿದ ಹೃದಯಗಳು ಒಂದಾದರೆ ಬಾಳು ಇಂಪಾದ ಸಂಗೀತದಂತೆ ಕೇಳಿಸಲಾರಂಭಿಸುತ್ತದೆ. ಒಮ್ಮೊಮ್ಮೆ ಅಪಸ್ವರಗಳೇ ಹೆಚ್ಚಾದರೆ ಬಾಳು ನಾನೊಂದು ತೀರ... ನೀನೊಂದು ತೀರ... ಆಗುವುದು ಗ್ಯಾರಂಟಿ. ಆಗ ಕುಹಕ ಮಾತು, ವ್ಯಂಗ್ಯ ನಿಮ್ಮನ್ನು ಚುಚ್ಚಿ ಹೈರಾಣಾಗಿಸುತ್ತವೆ. ಕ್ರಿಕೆಟಿಗ ವಿರಾ್ ಕೊಹ್ಲಿ ಮತ್ತು ನಟಿ ಅನುಷ್ಕಾ ಜತೆಗಿನ ಮಧುರ ಬಾಂಧವ್ಯ ಇಂಥ ಅಪಸ್ವರದ ಮಧ್ಯೆ ಹೊರಳಾಡುತ್ತಿರುವಾಗಲೇ ಅವಳನ್ನು ಇತ್ತೀಚೆಗೆ ಸಾಮಾಜಿಕ ಜಾಲತಾಣ ಅಪಹಾಸ್ಯ ಮಾಡಿ ನಗುತ್ತಿತ್ತು. ಆದರೆ, ಒಲಿದ ಹೃದಯಕ್ಕೆ ಉಂಟಾದ ನೋವನ್ನು ನೋಡಿ ಸುಮ್ಮನಿರದ ಕೊಹ್ಲಿ, ``ನಿಮಗೆ ನಾಚಿಕೆಯಾಗಲ್ವಾ...? ಆಕೆ ನನಗೆ ಯಾವಾಗಲೂ ಸಕಾರಾತ್ಮಕ ಭಾವನೆಯನ್ನೇ ಕಟ್ಟಿಕೊಟ್ಟಿದ್ದಾಳೆ,'' ಎಂದು ಹೂಂಕರಿಸಿದಾಗಲೇ ಕುಹಕಿಗಳು ಸುಮ್ಮನಾದರು. ಇದೆಲ್ಲ ಯಾಕೆ ಹೇಳುತ್ತಿದ್ದೇನೆ ಎಂದರೆ, ನಮ್ಮಿಬ್ಬರಿಗೂ ಹಾಗೆ ಆಗಿತ್ತಲ್ಲವೇ? ನಾವು ಒಲಿದ ಸ್ವರಾಗಳಾಗಿ ಇಂಪಾದ ಸಂಗೀತ ಹಾಡುತ್ತಿರುವಾಗಲೇ ಅಪಸ್ವರ ನಾದ ಹೆಚ್ಚಾಗಿ ಸಂಗೀತ ಹಳ್ಳ ಹಿಡಿದು, ನಾವಿಬ್ಬರೂ ದೂರ ಆದದ್ದು. ಆಗ ಕಾಲೇ್ ಕಾರಿಡಾ್ನಲ್ಲಿ ನಿನ್ನ ಬಗ್ಗೆ ಆಡಿಕೊಂಡವರೆಷ್ಟು? ನಿನ್ನಡೆಗೆ ಕುಹಕ ನಗೆ ಚೆಲ್ಲಿ, ವ್ಯಂಗ್ಯವಾಗಿ ನಕ್ಕವರೆಷ್ಟು..? ಆಗ ನಾನು ಕೂಡ ಥೇ್ ಕೊಹ್ಲಿ ರೀತಿಯಲ್ಲಿ ಪ್ರತಿಕ್ರಿಯಿಸಿದ್ದೆ. ಕೊಹ್ಲಿ ಈ ಘಟನೆಯು ಆ ನೆನಪುಗಳನ್ನೆಲ್ಲ ಒಂದು ಸಾರಿ ತಿರುವಿ ಹಾಕಿದವು. ಸಿನಿಮಾ ಥಿಯೇಟ್ನ ಪ್ರೊಜೆಕ್ಟ್ನಲ್ಲಿ ಫಿ್‌ಮಗಳು ಒಂದೊಂದಾಗಿ ಒಂದರ ಹಿಂದೆ ಒಂದು ಓಡುವ ಹಾಗೆ ನನ್ನ ಮನಪಟಲದಲ್ಲಿ ಈ ನೆನಪುಗಳು ಮಿಂಚಿ ಮಾಯವಾದವು.
ನಾವಿಬ್ಬರೂ ಎಷ್ಟು ಅನ್ಯೋನ್ಯವಾಗಿದ್ದೆವಲ್ಲ. ನಮ್ಮನ್ನು ನೋಡಿ ಇಡೀ ಕ್ಯಾಂಪಸ್ಸೇ ಹೊಟ್ಟೆಕಿಚ್ಚು ಪಡುತ್ತಿತ್ತು. ಕಾಲೇ್ ಚರ್ಚಾಕೂಟಗಳಲ್ಲಿ ನನ್ನನ್ನು ಮೀರಿಸಿದವರೇ ಇರಲಿಲ್ಲ. ಸುತ್ತಲಿನ ಕಾಲೇಜುಗಳಲ್ಲೂ ಪ್ರಖ್ಯಾತಿ ಹಬ್ಬಿತ್ತು. ಚರ್ಚಾಕೂಟದಲ್ಲಿ ಭಾಗವಹಿಸಿದೆನೆಂದರೆ ಅಲ್ಲಿ ಪ್ರಥಮ ಬಹುಮಾನವನ್ನು ಮೊದಲೇ ಮೀಸಲಿಡುತ್ತಿದ್ದರು. ಆದರೆ, ಅಂದಿನ ಆ ಚರ್ಚಾಕೂಟದಲ್ಲಿ ನಾನು ಸೋತು ಹೋಗಿದ್ದೆ. ಅದಕ್ಕೆಲ್ಲ ನೀನೇ ಕಾರಣ ಎಂದು ನನ್ನ ಸ್ನೇಹಿತರಾದಿಯಾಗಿ ಎಲ್ಲರೂ ಕಾರಿಡಾ್ನಲ್ಲಿ ಹಂಗಿಸುತ್ತಿದ್ದರು. ಇದನ್ನೆಲ್ಲ ಹೇಗೆ ಸಹಿಸಿಕೊಳ್ಳಲಿ ಹೇಳು? ನೀನು ಯಾವತ್ತೂ ನನ್ನ ಸಾಧನೆಗೆ ಅಡ್ಡಿಯಾದವಳೇ ಅಲ್ಲ. ನನ್ನ ಸ್ಫೂರ್ತಿ ನೀನು. ನನ್ನ ಯಶಸ್ಸಿನ ಹಿಂದಿನ ಶಕ್ತಿ ನೀನು. ಅದು ನಿನಗೂ ಗೊತ್ತಿತ್ತು. ಆದರೆ, ನೀನು ಮಾತ್ರ ಕಾರಿಡಾ್ ರೂಮ್ಗಳಿಗೆ ಬೆಲೆ ಕೊಟ್ಟು, ಬೆಲೆಕಟ್ಟಲಾಗದ ನನ್ನ ಸ್ನೇಹವನ್ನು ಪೂರ್ತಿ ಕಡಿದುಕೊಂಡೆ. ಇದ್ಯಾವ ನ್ಯಾಯ ಹೇಳು? ನಿನಗೆ ಹಂಗಿಸುತ್ತಿದ್ದವರೆಗೆಲ್ಲ ಸರಿಯಾಗಿಯೇ ನೀರಿಳಿಸಿದ್ದೆ. ಆದರೂ ನಮ್ಮಿಬ್ಬರ ಮಧ್ಯ ಆ ಇಂಪಾದ ಸಂಗೀತ ಮತ್ತೆ ಒಡಮೂಡಲೇ ಇಲ್ಲ. ನಮ್ಮಿಬ್ಬರ ಸ್ನೇಹ-ಪ್ರೀತಿ-ಪ್ರೇಮ ತಿಳಿ ಕೊಳದಲ್ಲಿ ರೂಮ್ ಕಲ್ಲುಗಳು ದೊಡ್ಡ ಅಲ್ಲೋಲ ಕಲ್ಲೋಲ ಅಲೆಗಳನ್ನು ಸೃಷ್ಟಿಸಿದ್ದವು. ಆ ಅಲೆಗಳ ಸುಳಿಯಿಂದ ನಾನು ಹೊರ ಬಂದೆ. ಆದರೆ ನೀನು ಮಾತ್ರ ಅದೇ ಸುಳಿಯಲ್ಲಿ ಆಳವಾಗಿ ಸಿಲುಕುತ್ತಾ, ಮತ್ತಷ್ಟು ಸುಕ್ಕಾಗುತ್ತಾ ಹೋದೆ.
ಈ ಘಟನೆಗಳನ್ನೆಲ್ಲ ಈಗ ರಿವೈಂ್ ಮಾಡಿ ನೋಡಿದಾಗ ಒಂದೊಂದು ಸಾರಿ ಸಿಲ್ಲಿ ಅನ್ನಿಸುತ್ತದೆ. ಮತ್ತೊಂದು ಸಾರಿ ನಾವಿಬ್ಬರೂ ಎಂಥ ಕುಹಕಕ್ಕೆ ಬಲಿಯಾದವೆಲ್ಲ ಎಂಬ ವ್ಯಥೆಯಾಗುತ್ತದೆ. ನಮ್ಮ ನಡುವಿನ ಬಾಂಧವ್ಯ ಅಷ್ಟು ಅಲ್ಪ ಕಾಲದ್ದಾಗಿತ್ತೆಂದರೆ ಅದು ಪೂರಿಪೂರ್ಣವಾಗಿರಲಿಲ್ಲ ಎಂದರ್ಥಲ್ಲವೇ? ಬಾಂಧವ್ಯದ ಬಿಲ್ಡಿಂ್ಗೆ ನಂಬಿಕೆ ಎಂಬ ತಳಪಾಯ ಗಟ್ಟಿಯಾಗಿರಲಿಲ್ಲ.  ಇಲ್ಲದಿದ್ದರೆ, ರೂಮ್ಗಳೆಂಬ ಸಣ್ಣ ಬಿರುಗಾಳಿಗೆ ಇಡೀ ಬಿಲ್ಡಿಂ್ ಕುಸಿದು ಬಿತ್ತು ಎಂದು ನಂಬುವುದಾದರೂ ಹೇಗೆ? ಆದರೆ, ಅದೇ ವಾಸ್ತವ ಅಲ್ಲವೇ? ನಂಬಲೇ ಬೇಕು. ನಂಬಿದ್ದೇನೆ ಕೂಡ. ಇದನ್ನು ಬಿಟ್ಟು ಇನ್ಯಾವ ದಾರಿ ಇತ್ತು ಹೇಳು ನನಗೆ? ಆದರೆ, ನೀನು ಮಾತ್ರ ಏನೂ ಆಗಿಯೇ ಇಲ್ಲ ಎನ್ನುವ ಹಾಗೇ ಇದ್ದೆ. ನಿನ್ನ ಮನಸ್ಸು ಅದ್ಹೇಗೆ ಅಷ್ಟೊಂದು ಕಠೋರವಾಗಿತ್ತು? ಕಿಂಚಿ್ ಆದರೂ ಕರುಣೆ ಗಾಳಿ ತಾಕಲಿಲ್ಲವೇ? ಬಹುಶಃ ತಾಕಿದ್ದರೆ ನನ್ನಂತೆಯೇ ನೀನು ಕುಹುಕಿಗಳಿಗೆಲ್ಲ ಒಂದು ಪಾಠ ಕಲಿಸುತ್ತಿದ್ದೆ. ಈಗೀಗ ನನಗನ್ನಿಸುತ್ತದೆ ನಮ್ಮಿಬ್ಬರದ್ದು ಒತ್ತಾಯಪೂರ್ವಕವಾಗಿ ನಂಬಿಸಿಕೊಂಡು ಪ್ರೀತಿಯಾಗಿತ್ತಾ.. ಸ್ನೇಹವಾಗಿತ್ತಾ ಅಂತ. ಸಹಜವಾದ ಮತ್ತು ಯಾವುದೇ ಕಲ್ಮಶವಿಲ್ಲದ ನಿರ್ವಾಜ್ಯ ಪ್ರೀತಿಯಾಗಿದ್ದರೆ ನಾವು ಹೇಗೆ ದೂರ ಆಗುತ್ತಿದ್ದೆವು?
ಒಂದು ವಿಷಯವನ್ನು ನೀನು ಮರೆತಿದ್ದೆ. ನನ್ನನ್ನು ಎಷ್ಟು ಸಲೀಸಾಗಿ ದಿಕ್ಕರಿಸಿ ಹೋದೆಯಲ್ಲ ನೀನು. ಆದರೆ, ನೀನಾದರೂ ಸುಖವಾಗಿದ್ದಾ? ಇಲ್ಲ. ಇರಲಿಲ್ಲ. ನಿಮ್ಮ ಮನೆಯವರ ಒತ್ತಾಯಕ್ಕೆ ಕಟ್ಟುಬಿದ್ದು ಅದ್ಯಾವುದೋ ಎಂಜಿನಿಯ್ನನ್ನು ಮದುವೆಯಾಗಿ ಮುಂಬಯಿಗೆ ಹಾರಿ ಹೋದೆ. ಎಲ್ಲರಂತೆ ನಾನು, ನಿನ್ನ ಜೀವನವನ್ನು ನೀನು ಕಟ್ಟಿಕೊಂಡೇ ಬಿಡು ಎಂದು ಭಾವಿಸಿ, ಅದೇ ಹಳೆ ನೆನಪುಗಳ ಕ್ಯಾಸೆ್ ಅನ್ನು ರೀವೈಂ್ ಮಾಡುತ್ತಾ ನನ್ನದೇ ಲೋಕದಲ್ಲಿ ಕಳೆದು ಹೋದೆ. ಹಳೇ ದೇಗುಲ, ಗೋರಿಗಳನ್ನು ಹುಡುಕಿಕೊಂಡು ಹೋದೆ. ಅವುಗಳ ಹಿಂದಿರುವ ಇತಿಹಾಸ ಕೆದಕುತ್ತಾ ನಮ್ಮಿಬ್ಬರ ಗತಪ್ರೇಮ ಮರೆಯಲು ಪ್ರಯತ್ನಿಸುತ್ತಿದ್ದೆ. ಈ ಕೆಲಸ ನನಗೆ ಒಂದಿಷ್ಟು ನೆಮ್ಮದಿ ಮತ್ತು ಇನ್ನೊಂದಿಷ್ಟು ಉತ್ಸಾಹ ತುಂಬುತ್ತಿತ್ತು. ಯಾಕೆ ಗೊತ್ತಾ? ಕೆಲವು ರಾಜರು, ಶ್ರೀಮಂತರು ತಮ್ಮ ಪ್ರೀತಿಯ ಪ್ರತೀಕವಾಗಿ, ಪತ್ನಿಯರ ನೆನಪಿಗೆ ಗುಡಿಯನ್ನೋ, ಗೋರಿಯನ್ನೋ ಕಟ್ಟಿ ತಮ್ಮ ಪ್ರೇಮವನ್ನು ಚಿರಸ್ಥಾಯಿಯಾಗಿಸಲು ಪ್ರಯತ್ನಿಸಿದ್ದರು. ಇಂಥವುಗಳ ಹಿಂದೆ ದಂತಕತೆಗಳು ಹುಟ್ಟಿಕೊಂಡು, ನಿರ್ವಾಜ್ಯ ಪ್ರೇಮವೆಲ್ಲ ಗಾಳಿಗೆ ತೂರಿ ಹೋಗಿತ್ತು. ಸ್ಥಾನಪಲ್ಲಟವಾದ ಪ್ರೇಮದ ಚುಕ್ಕೆಗಳನ್ನು ಸೇರಿಸಿ ಸುಂದರವಾದ ಕಲಾಕೃತಿ ರಚಿಸಲು ಪ್ರಯತ್ನಿಸುತ್ತಿದ್ದೆ. ತುಸು ಮಟ್ಟಿಗೆ ಯಶಸ್ವಿಯಾದೆ ಅಂದುಕೊಂಡರೂ ತಪ್ಪಿಲ್ಲ. ಆದರೆ, ಎದೆಯಾಳದಲ್ಲಿ ನೀನು ಬಿಟ್ಟು ಹೋದ ನೆನಪುಗಳು ಮಾತ್ರ ಸಾಯುತ್ತಲೇ ಇರಲಿಲ್ಲ. ಆಗೆಲ್ಲ ನಾನು ಇನ್ನಾವುದೋ ಗುಡಿಯನ್ನೋ, ಗೋರಿಯನ್ನೋ ಹುಡುಕಿಕೊಂಡು ಹೋಗುತ್ತಿದ್ದೆ.
ಅಂದೊಂದು ದಿನ ನಾನು ಯಾವುದನ್ನು ಕೇಳಬಾರದು ಎಂದುಕೊಂಡಿದ್ದೇನೋ ಅದೇ ಸುದ್ದಿಯನ್ನು ಕೇಳಬೇಕಾಯಿತು. ನೀನು ಊರಿಗೆ ಬಂದಿದ್ದು ಗೊತ್ತಾಯಿತು ನಿಜ. ಆದರೆ ನಿನ್ನನ್ನು ನೋಡುವ, ನಿನ್ನ ಎದುರಿಗೆ ಬರುವ ಧೈರ್ಯ ಇರಲಿಲ್ಲ. ವಿಧಿಯಾಟ ಬೇರೆನೇ ಅಲ್ಲವೇ? ಅದೊಂದು ಸಂಜೆ ಊರ ಹೊರಗಿನ ಗುಡಿಯಲ್ಲಿ ನೀನು ನಿನ್ನ ಅಮ್ಮನ ಜತೆ ನಿಂತಿದ್ದೆ,  ಆದರೆ, ನಿನ್ನ ನೋಡಿ ನನ್ನ ನಾನೇ ನಂಬಲಿಲ್ಲ. ನಿಜಕ್ಕೂ ಅದು ನೀನೇನಾ? ಹೇಗಿದ್ದೆ ನೀನು- ಬಳಕುವ ಬಳ್ಳಿ. ಸೂಜಿಮಲ್ಲಿಗೆಯಂಥವಳು. ಸೂಜಿಗಲ್ಲಿನವಳು. ಕಾಲೇ್ನಲ್ಲಿದ್ದಾಗ ಎಲ್ಲ ಹುಡುಗರು ಒಂದು ಕ್ಷಣವಾದರೂ ನಿನ್ನನ್ನು ನೋಡದೆ ಹೋಗುತ್ತಿರಲಿಲ್ಲ. ಅಂಥ ವ್ಯಕ್ತಿತ್ವ ನಿನ್ನದು. ಅವಳೇನಾ ನೀನು ಎಂಬ ಮಟ್ಟಿಗೆ ಬದಲಾಗಿದ್ದೆ. ಮುಖದಲ್ಲಿ ಕಳೆ ಇಲ್ಲ; ನಕ್ಕು ಎಷ್ಟೋ ದಿನಗಳವಾಗಿರುವ ಹಾಗಿತ್ತು. ಕೃಶ ಶರೀರದಲ್ಲಿ ಸುಮ್ಮನೇ ನೆಪಕ್ಕೆ ಮಾತ್ರ ಎನ್ನುವಂಥ ಜೀವ. ನಿನ್ನ ಜೀವನದಲ್ಲಿ ಹೀಗೆಲ್ಲ ಆಗಬಾರದೆಂದು ನಾನು ಬಯಸಿದ್ದೆ. ಆದರೆ, ಅದೇ ಆಗಿ ಹೋಗಿತ್ತು. ನಿನ್ನ ಇಂದಿನ ಪರಿಸ್ಥಿತಿಗೆ ಆ ನಿನ್ನ ಹಣ, ಹೆಣ್ಣುಬಾಕ ಗಂಡನೇ ಕಾರಣ ಎಂಬುದು ಗೊತ್ತಾಗಿದ್ದು ನಿನ್ನ ಗೆಳತಿಯಿಂದಲೇ. ಗೊತ್ತಿದ್ದು ಗೊತ್ತಿದ್ದು ನಿಮ್ಮ ಮನೆಯವರು ಅಂಥವನ ಖೆಡ್ಡಾಕ್ಕೆ ನಿನ್ನನ್ನು ಕೆಡವಿದ್ದರು ಎಂದು ಆಕೆ ಕಣ್ಣೀರಾಗಿದ್ದಳು.
ನೋಡು ಜೀವನವೇ ಹೀಗೆ. ನಾವು ಏನು ಅಂದುಕೊಂಡು ಹೋಗುತ್ತೇವೆ. ಅದು ಇನ್ನೇನೋ ಆಗುತ್ತದೆ. ಕಾರಿಡಾ್ಗಳಲ್ಲಿನ ಹಂಗಿಸುವ ಮಾತುಗಳನ್ನು, ರೂಮ್ಗಳನ್ನು ನೀನು ಅಷ್ಟು ಸೀರಿಯ್ ಆಗಿ ತೆಗೆದುಕೊಳ್ಳದಿದ್ದರೆ ಇಂದು ನಮ್ಮಿಬ್ಬರದೇ ಒಂದು ಪುಟ್ಟ ಸಂಸಾರ ಆನಂದ ಸಾಗರವಾಗಿರುತ್ತಿತ್ತು. ಆದರೆ, ಈಗ ಕಾಲ ಮಿಂಚಿ ಹೋಗಿದೆ. ಚಿಂತಿಸಿ ಫಲವಿಲ್ಲ ಎನ್ನುವ ಹಾಗಿಲ್ಲ. ನಿನ್ನ ನೆನಪಲ್ಲಿ ನಾನು ಇಂದಿಗೂ ಹಾಗೆಯೇ ಇದ್ದೇನೆ. ಅಂದು ಹೇಗಿದ್ದೇನೋ ಹಾಗೆ. ಮುಂದಿನ ನಿರ್ಣಯ ನಿನಗೆ ಬಿಟ್ಟದ್ದು.

ಸೋಮವಾರ, ಮೇ 2, 2016

ವೀಸಾ ಗದ್ದಲ್ಲದಲ್ಲಿ ಸಿಕ್ಕ ಇಸಾ

ಪೂರ್ವ ತುರ್ಕಿಸ್ತಾನ ಎಂದೂ ಕರೆಯಲಾಗುವ ಚೀನಾದ ಕ್ಸಿ್ಜಿಯಾಂ್ ಉಯಿಗು್ ಸ್ವಾಯತ್ತ ಪ್ರದೇಶದ ಪತ್ಯೇಕತಾವಾದಿ ನಾಯಕ ದೋಲ್ಕು್ ಇಸಾ ಅಲ್ಪ ಸಂಖ್ಯಾತ ಉಯಿಗ್ ಪಂಗಡದ ನಾಯಕ.

ದೋಲ್ಕು್ ಇಸಾ.
ಕಳೆದ ವಾರ ಭಾರತದ ಮಾಧ್ಯಮಗಳಲ್ಲಿ ಕಾಣಿಸಿಕೊಂಡು ಪ್ರಸಿದ್ಧಿಯಾದ `ಅಪರಿಚಿತ' ವ್ಯಕ್ತಿ ಇವರು. ಚೀನಾದಲ್ಲಿ ಸ್ವಾಯತ್ತ ಪ್ರಾಂತವಾಗಿರುವ ಕ್ಸಿ್ಜಿಯಾಂ್ ಸ್ವಂತ್ರಗೊಳ್ಳಲು ಹೋರಾಟ ನಡೆಸುತ್ತಿರುವ ನಾಯಕ ಇವರು. ಆದರೆ, ಕಮ್ಯುನಿ್‌ಟ ಚೀನಾ ಸರಕಾರಕ್ಕೆ ಇವರೊಬ್ಬ `ಮೋ್‌ಟ ವಾಂಟೆ್ ಟೇರರಿ ್‌ಟ'.
ಇತ್ತೀಚೆಗಷ್ಟೇ ಭಾರತ ವಿಶ್ವಸಂಸ್ಥೆಯಲ್ಲಿ ತನ್ನ ಪ್ರಭಾವ ಬೀರುವ ಕೆಲಸಕ್ಕೆ ಕೈ ಹಾಕಿತ್ತು. ಪಠಾ್ಕೋ್ ವಾಯು ನೆಲೆ ದಾಳಿಯ ಪ್ರಮುಖ ಸಂಚುಕೋರ ಹಾಗೂ ಜೈಷೆ ಮೊಹಮ್ಮ್ ಉಗ್ರ ಸಂಘಟನೆಯ  ನಾಯಕ ಮಸೂ್ ಅಜ್ನನ್ನು ವಿಶ್ವಸಂಸ್ಥೆಯ ಉಗ್ರರ ಪಟ್ಟಿಗೆ ಸೇರಿಸುವ ಪ್ರಯತ್ನವನ್ನು ಭಾರತ ನಡೆಸಿತ್ತು. ಆದರೆ, ವಿಶ್ವಸಂಸ್ಥೆಯ ಭದ್ರತಾ ಸಮಿತಿಯಲ್ಲಿ ವಿಟೋ ಪವ್ ಹೊಂದಿರುವ ಚೀನಾ ಎಂದಿನಂತೆ ಭಾರತದ ಯತ್ನಕ್ಕೆ ಅಡ್ಡಗಾಲು ಹಾಕಿತ್ತು. ಚೀನಾದ ಈ ನಡೆ ಸಹಜ ಕೂಡ. ಪಾಕಿಸ್ತಾನ ಮತ್ತು ಚೀನಾ ಅತ್ಯಾಪ್ತ ರಾಷ್ಟ್ರಗಳೆಂಬುದು ಈಗೇನೂ ಗುಟ್ಟಾಗಿ ಉಳಿದಿಲ್ಲ. ಈ ವಿಷಯದಲ್ಲಿ ಕೊಂಚ ಮುಜಗರ ಎದುರಿಸಿದ್ದ ಭಾರತಕ್ಕೆ, ಚೀನಾಗೆ ತಿರುಗೇಟು ನೀಡಲು ಸಿಕ್ಕಿದ್ದ ಹೊಸ ಅಸ್ತ್ರವೇ ಈ `ದೋಲ್ಕು್ ಇಸಾ'.
ಅಮೆರಿಕ ನೆರವಿನಿಂದ ಭಾರತದ ಧರ್ಮಶಾಲಾದಲ್ಲಿ ಏಪ್ರಿ್ 30ರಿಂದ ಎರಡು ದಿನಗಳ ಕಾಲ ನಡೆದ `ಇನಿಶಿಯೇಟಿ್‌ಸ ಫಾ್ ಚೀನಾ' ಸಮಾವೇಶದಲ್ಲಿ ಪಾಲ್ಗೊಳ್ಳಲು ವಿಶ್ವ ಉಯಿಗು್ ಕಾಂಗ್ರೆ್(ಡಬ್ಲ್ಯೂಯುಸಿ)ನ ಪ್ರಧಾನ ಕಾರ್ಯದರ್ಶಿ ದೋಲ್ಕು್ ಇಸಾಗೆ ಆಹ್ವಾನ ನೀಡಲಾಗಿತ್ತು. ಇದಕ್ಕಾಗಿ ಇಸಾ ಭಾರತಕ್ಕೆ ಬರುವ ಸಿದ್ಧತೆ ನಡೆಸಿದ್ದರು. ವೀಸಾ ಕೂಡ ಸಿಕ್ಕಿತ್ತು. ಈ ವಿಷಯ ಭಾರತೀಯ ಮಾಧ್ಯಮಗಳಲ್ಲಿ `ಚೀನಾಗೆ ಭಾರತದ ಎದಿರೇಟು' ಎಂದು ಬಿಂಬಿತವಾಗುತ್ತಿದ್ದಂತೆ ಎಚ್ಚೆತ್ತುಕೊಂಡ ಚೀನಾ; ಭಾರತದ ಮೇಲೆ ಒತ್ತಡ ತಂದು, ದೋಲ್ಕು್ಗೆ ನೀಡಿದ್ದ ವೀಸಾ ರದ್ದಾಗುವಂತೆ ನೋಡಿಕೊಂಡಿತು. ಇಸಾ ಚೀನಾಕ್ಕೆ ಬೇಕಾಗಿರುವ ಮೋ್‌ಟ ವಾಟೆಂ್ ಉಗ್ರ ನಾಯಕ. ಆತನ ವಿರುದ್ಧ ಇಂಟ್ಪೋ್ನಲ್ಲಿ ರೆ್ ಕಾರ್ನ್ ನೋಟಿ್ ನೀಡಲಾಗಿದೆ. ಅಂಥವನಿಗೆ ಹೇಗೆ ವೀಸಾ ನೀಡುತ್ತೀರಿ ಎಂದು ಪ್ರಶ್ನಿಸಿತು. ಚೀನಾದ ಒತ್ತಡಕ್ಕೆ ಕೊನೆಗೂ ಮಣಿದ ಭಾರತ, ಯಾವುದೇ ವಿವರ ನೀಡದೆ ದೋಲ್ಕು್ ಇಸಾ ಅವರಿಗೆ ನೀಡಲಾಗಿದ್ದ ವೀಸಾ ರದ್ದು ಮಾಡಿತು. ಅಲ್ಲಿಗೆ ಮತ್ತೊಂದು ಬಾರಿ ಭಾರತ ಅಂತಾರಾಷ್ಟ್ರೀಯವಾಗಿ ಮುಜಗರ ಎದುರಿಸುವಂತಾಯಿತು. ಯಾವುದೇ ದೂರದೃಷ್ಟಿ ಇಲ್ಲದೆ, ಭಾವನಾತ್ಮಕ, ಸೇಡಿನ ಕ್ರಮಗಳಿಂದ ನಿರ್ಧಾರ ಕೈಗೊಂಡರೆ ಇಂಥ ಮುಜಗರದ ಸನ್ನಿವೇಶಗಳು ಎದುರಿಸಲೇಬೇಕಾಗುತ್ತದೆ. ಇದಕ್ಕೆ ಭಾರತ ಕೂಡ ಹೊರತಾಗಿಲ್ಲ.
ಇದೆಲ್ಲ ಸರಿ. ಆದರೆ, ಈ ದೋಲ್ಕು್ ಇಸಾ ಯಾರು? ಆತನ ಮೇಲೇಕೆ ಚೀನಾಗೆ ಮುನಿಸು? ಎಂಬಂಥ ಪ್ರಶ್ನೆಗಳು ಹುಟ್ಟಿಕೊಳ್ಳುವುದು ಸಹಜ. ಚೀನಾದ ವಾಯವ್ಯ ಭಾಗಕ್ಕಿರುವ ವಿಶಾಲವಾದ ಭೂ ಪ್ರದೇಶವೇ `ಕ್ಸಿ್ಜಿಯಾಂ್ ಉಯಿಗು್ ಸ್ವಾಯತ್ತ ಪ್ರದೇಶ.' ಖನಿಜಗಳು ಮತ್ತು ನೈಸರ್ಗಿಕ ಅನಿಲ ಹೇರಳವಾಗಿರುವ ಈ ಪ್ರದೇಶ ಚೀನಾಗೆ ಅಕ್ಷರಶಃ ಚಿನ್ನದ ಗಣಿ. ಈ ಪ್ರದೇಶದಲ್ಲಿ ಅನೇಕ ಪಂಗಡಗಳಿದ್ದು ಈ ಪೈಕಿ ಉಯಿಗು್ ಪಂಗಡದವರೇ ಹೆಚ್ಚಾಗಿದ್ದಾರೆ. ಚೀನಾದಲ್ಲಿ ಅಲ್ಪಸಂಖ್ಯಾತರಾಗಿರುವ ಇವರು ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸುತ್ತಲೇ ಬಂದಿದ್ದಾರೆ. `ವಿಶ್ವ ಉಯಿಗು್ ಕಾಂಗ್ರೆ್' ಎಂಬ ಸಂಘಟನೆ ಈ ಹೋರಾಟದ ನೇತೃತ್ವ ವಹಿಸಿಕೊಂಡಿದೆ. ಇದರ ಅಧ್ಯಕ್ಷ ರೆಬಿಯಾ ಖಾದಿ್. ಇವರು ಅಮೆರಿಕದಲ್ಲಿದ್ದಾರೆ. ಈ ಸಂಘಟನೆಯ ಪ್ರಧಾನ ಕಾರ್ಯದರ್ಶಿಯೇ ಈ ದೋಲ್ಕು್ ಇಸಾ. ಸದ್ಯ ಜರ್ಮನಿಯಲ್ಲಿ ವಾಸವಾಗಿರುವ ಇಸಾ, ಪ್ರಜಾಪ್ರಭುತ್ವದ ಪರ ಹೋರಾಟಗಾರ. 1997ರಲ್ಲಿ ಚೀನಾದಿಂದ ಪಲಾಯನ ಮಾಡಿ ಜರ್ಮನಿಯಲ್ಲಿ ಆಶ್ರಯ ಪಡೆದರು. 2006ರಲ್ಲಿ ಜರ್ಮನಿ ಇವರಿಗೆ ಅಲ್ಲಿನ ಪೌರತ್ವ ನೀಡಿದೆ.
ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವ ವಿಶ್ವ ಉಯಿಗು್ ಕಾಂಗ್ರೆ್ ಚಟುವಟಿಕೆಗಳನ್ನು ಚೀನಾ ಸರಕಾರ ಉಗ್ರ ಕೃತ್ಯಗಳಂದೇ ಪರಿಗಣಿಸುತ್ತದೆ. ಹೀಗಾಗಿ, ಈ ಹೋರಾಟದಲ್ಲಿ ಪಾಲ್ಗೊಳ್ಳುವವರೆಲ್ಲರೂ ಉಗ್ರರೇ. ಕ್ಸಿ್ಜಿಯಾಂ್ಗೆ ಪೂರ್ವ ತುರ್ಕಿಸ್ತಾನ ಎಂದೂ ಕರೆಯಲಾಗುತ್ತದೆ. ಹಾಗೆ ನೋಡಿದರೆ, ವೀಸಾಗೆ ಸಂಬಂಧಿಸದಂತೆ ಇಸಾ ಇದೇ ಮೊದಲ ಬಾರಿಗೇನೂ ತೊಂದರೆಯಲ್ಲಿ ಸಿಕ್ಕಿ ಹಾಕಿಕೊಂಡಿಲ್ಲ. 2003ರಿಂದಲೇ ದೋಲ್ಕು್ ಚೀನಾದ ಉಗ್ರರ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ. ಉಯಿಗು್ರ  ಹೋರಾಟಕ್ಕೆ ಅಂತಾರಾಷ್ಟ್ರೀಯ ಮಾನ್ಯತೆ ತಂದುಕೊಡಲು 2008ರಲ್ಲಿ ಬೀಜಿಂ್ನಲ್ಲಿ ನಡೆದ ಒಲಿಂಪಿಕ ಬಹಿಷ್ಕರಿಸುವಂತೆಯೂ ದೋಲ್ಕು್ ಕರೆ ನೀಡಿದ್ದರು. ಇದಕ್ಕೂ ಮುಂಚೆ 2006ರಲ್ಲಿ ತೈವಾ್ಗೆ ೇಟಿ ನೀಡಿ, ಅಲ್ಲಿನ ಹೋರಾಟದಲ್ಲಿ ಪಾಲ್ಗೊಂಡಿದ್ದರು. ಇದು ಚೀನಾಕ್ಕೆ ಗೊತ್ತಾಗುತ್ತಿದ್ದಂತೆ ಒತ್ತಡ ತಂದು, ತೈವಾ್ ಪ್ರವೇಶವನ್ನು ನಿರಾಕರಿಸುವಂತೆ ಮಾಡಿತು. ಇದೇ ವೇಳೆ, ವಿಶ್ವ ಉಯಿಗು್ ಕಾಂಗ್ರೆ್ನ ಪ್ರಧಾನ ಕಾರ್ಯದರ್ಶಿ ಸ್ಥಾನದಿಂದ ದೋಲ್ಕು್ ಹಿಂದೆ ಸರಿದರೆ ಅವರ ಮೇಲಿರುವ ನಿಷೇಧವನ್ನು ಹಿಂತೆಗದುಕೊಳ್ಳಲಾಗುವುದು ಎಂದೂ ಪ್ರಕಟಿಸಿತು. ಆದರೆ, ದೋಲ್ಕು್ ಇದಾವುದಕ್ಕೂ ಬಗ್ಗದೆ, ಉಯಿಗು್ ಪ್ರತ್ಯೇಕತೆಯ ಹೋರಾಟದ ಮುಂಚೂಣಿಯಲ್ಲೇ ಇದ್ದಾರೆ. ಇಸಾ ಮತ್ತೊಮ್ಮೆ ಇಂಥ ತೊಂದರೆಗೆ ಸಿಕ್ಕಿ ಹಾಕಿಕೊಂಡಿದ್ದು ದಕ್ಷಿಣ ಕೊರಿಯಾಗೆ ಹೋದಾಗ. ಅದು 2009ನೇ ಇಸ್ವಿ. ದಕ್ಷಿಣ ಕೊರಿಯಾದಲ್ಲಿ `ಏಷ್ಯಾ ಪ್ರಜಾಪ್ರಭುತ್ವೀಕರಣ ವಿಶ್ವ ವೇದಿಕೆ'ಯ ಸಮಾವೇಶ ಆಯೋಜನೆಯಾಗಿತ್ತು. ಇದಕ್ಕೆ ಇಸಾ ಕೂಡ ಆಮಂತ್ರಿತರಾಗಿದ್ದರು. ಈ ಹಿನ್ನೆಲೆಯಲ್ಲಿ ಅವರು ದಕ್ಷಿಣ ಕೊರಿಯಾಕ್ಕೆ ತೆರಳುತ್ತಿದ್ದಂತೆ ಅವರನ್ನು ವಿಮಾನ ನಿಲ್ದಾಣದಲ್ಲಿ ವಶಕ್ಕೆ ತೆಗೆದುಕೊಳ್ಳಲಾಗಿತ್ತು. ಈ ಬಗ್ಗೆಯೂ ಇಸಾ ತಮ್ಮ ವಿರೋಧವನ್ನು ದಾಖಲಿಸಿದ್ದರು. ಅಲ್ಲದೆ, ಅ್ರೀಪ್ರಸೆಂಟೆ್ ಆ್ಯಂ್ ಪೀಪ್‌ಸ ಆರ್ಗನೈಷೇ್ ಕೂಡ, ದಕ್ಷಿಣ ಕೊರಿಯಾದ ಕ್ರಮವನ್ನು ಖಂಡಿಸಿತ್ತು. ಇಸಾ ವಿರುದ್ಧ ಚೀನಾ ಮಾಡುತ್ತಿರುವ ಆರೋಪಗಳೆಲ್ಲವೂ ನಿರಾಧಾರ. ಅವರು ಯಾವುದೇ ಉಗ್ರ ಚಟುವಟಿಕೆ ನಡೆಸಿಲ್ಲ ಮತ್ತು ಅಂಥ ಸಂಘಟನೆಗಳ ಜತೆ ಗುರುತಿಸಿಕೊಂಡಿಲ್ಲ ಎಂದು ಹೇಳಿತು. ಎರಡು ದಿನಗಳ ಕಾಲ ದಕ್ಷಿಣ ಕೊರಿಯಾ ವಶದಲ್ಲಿದ್ದ ಇಸಾರನ್ನು ಬಿಡುಗಡೆ ಮಾಡಲಾಯಿತಾದರೂ, ಅವರಿಗೆ ದಕ್ಷಿಣ ಕೊರಿಯಾ ಪ್ರವೇಶಕ್ಕೆ ಅವಕಾಶ ಸಿಗಲೇ ಇಲ್ಲ. ಇದೀಗ ಭಾರತಕ್ಕೆ ಪ್ರವೇಶಿಸುವ ವಿಷಯದಲ್ಲೂ ಇಸಾ ಇಂಥದ್ದೇ ಸಮಸ್ಯೆಯನ್ನು ಎದುರಿಸಿದ್ದಾರೆ.
ದೋಲ್ಕು್ ಇಸಾ ಅವರ ವೈಯಕ್ತಿಕ ಜೀವನದ ಬಗ್ಗೆ ಅಷ್ಟೊಂದು ಮಾಹಿತಿ ಇಲ್ಲ. ಆದರೆ, ಅವರು ವಿದ್ಯಾರ್ಥಿ ದೆಸೆಯಿಂದಲೂ ಹೋರಾಟರರಾಗಿದ್ದರು ಎಂಬುದಂತೂ ಸತ್ಯ. 1980ರ ದಶಕದಲ್ಲಿ ಅವರು ಕ್ಸಿ್ಜಿಯಾಂ್ ವಿಶ್ವವಿದ್ಯಾಲಯದಲ್ಲಿ ಓದುತ್ತಿರುವಾಗಲೇ ಪ್ರಜಾಪ್ರಭುತ್ವ ಪರ ಹೋರಾಟಗಳನ್ನು ಸಂಘಟಿಸುತ್ತಿದ್ದರು. ಇದರಿಂದಾಗಿಯೇ ಅವರು ವಿಶ್ವವಿದ್ಯಾಲಯದಿಂದ ಹೊರಬೀಳಬೇಕಾಯಿತು. ಈ ವೇಳೆಯಲ್ಲಿ ಚೀನಾದ ಕಮ್ಯುನಿ್‌ಟ ಶಾಲೆಗಳಲ್ಲಿ ಕಲಿಯುತ್ತಿರುವ ಉಯಿಗು್ ಮಕ್ಕಳಿಗೆ, ಉಯಿಗು್ ಪಂಗಡದ ನಿಜವಾದ ಇತಿಹಾಸ, ಸಂಸ್ಕೃತಿ ತಿಳಿಸುವ ಪುಸ್ತಕಗಳನ್ನ ಹಂಚಲಾರಂಭಿಸಿದರು. ಇದು ಕೂಡ ಅಲ್ಲಿನ ಸರಕಾರದ ಕಣ್ಣು ಕೆಂಪಗಾಗುವಂತೆ ಮಾಡಿತು. ಅವರನ್ನು ಗಡಿಪಾರು ಮಾಡಿದ್ದರಿಂದ ಇಸಾ ಟರ್ಕಿಗೆ ತೆರಳಬೇಕಾಯಿತು. ಅರ್ಧಕ್ಕೆ ನಿಂತಿದ್ದ ಉನ್ನತ ವಿದ್ಯಾಭ್ಯಾಸವನ್ನು ಮುಂದುವರಿಸಲು ನಿರ್ಧರಿಸಿದ ಇಸಾ, ಟರ್ಕಿಯ ಘಾಜಿ ವಿಶ್ವವಿದ್ಯಾಲಯದಿಂದ ಪಾಲಿಟಿಕ ಮತ್ತು ಸೋಸಿಯಾಲಾಜಿ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದರು.
ಕಮ್ಯುನಿ್‌ಟ ಸರಕಾರದ ಹತ್ತಿಕ್ಕುವ ಧೋರಣೆಯ ವಿರುದ್ಧ ಹೋರಾಟ ನಡೆಸುತ್ತಲೇ ಬಂದಿರುವ ಇಸಾ, ಅಲ್ಪಸಂಖ್ಯಾತ ಉಯಿಗು್ ಮುಸ್ಲಿಮರ ಆಶಾಕಿರಣ. ಇಂದಲ್ಲ ನಾಳೆ, ಕ್ಸಿ್ಜಿಯಾಂ್ ಉಯಿಗು್ ಸ್ವಾಯತ್ತ ಪ್ರದೇಶ ಪೂರ್ವ ತುರ್ಕಿಸ್ತಾನವಾಗಿ ಬದಲಾಗುತ್ತದೆ ಎಂಬ ನಂಬಿಕೆಯಲ್ಲಿದ್ದಾರೆ. ಆದರೆ, ಅದು ಅಷ್ಟು ಸರಳವಲ್ಲ. ಟಿಬೆಟಿಯನ್ನರು ಮತ್ತು ಉಯಿಗು್ರು ಸಮಾನ ದುಃಖಿಗಳು. ಟಿಬೆಟಿಯನ್ನರು ಕೂಡ ಪ್ರತ್ಯೇಕತೆಗಾಗಿ ದಶಕಗಳಿಂದಲೂ ಹೋರಾಟ ನಡೆಸುತ್ತಲೇ ಬಂದಿದ್ದಾರೆ. ಏಷ್ಯಾದಲ್ಲೇ ಆರ್ಥಿಕ ಬಲಾಢ್ಯ ರಾಷ್ಟ್ರವಾಗಿರುವ ಚೀನಾದಲ್ಲಿ  ಪ್ರಜಾಪ್ರಭುತ್ವದ ಬೀಜಗಳನ್ನು ಬಿತ್ತುವ ಕೆಲಸವನ್ನು ದೋಲ್ಕು್ ಇಸಾ ಸೇರಿದಂತೆ ಕೆಲವರು ಮಾಡುತ್ತಿದ್ದಾರೆ. ಈ ಬೀಜ ಮೊಳಕೆಯೊಡೆಯುತ್ತಿದ್ದಂತೆ ಚೀನಾ ಅದನ್ನು ಹಿಸುಕುವುದರಲ್ಲಿ ಯಶಸ್ವಿಯಾಗುತ್ತದೆ. ವ್ಯಕ್ತಿಗಳನ್ನು ಹತ್ತಿಕ್ಕಬಹುದು. ಆದರೆ ಚಳವಳಿಗಳನ್ನ ಹತ್ತಿಕ್ಕಲಾಗುವುದಿಲ್ಲ. ಈ ಹಿನ್ನೆಲೆಯಲ್ಲಿ ದೋಲ್ಕು್ ಇಸಾರಂಥ ಅನೇಕ ಹೋರಾಟಗಾರರು ಮಹತ್ವದ ವ್ಯಕ್ತಿಗಳು ಎನಿಸಿಕೊಳ್ಳುತ್ತಾರೆ.

This article published in VK on May 1, 2016 Edition

ಸೋಮವಾರ, ಮಾರ್ಚ್ 28, 2016

ಭಾವಕೋಶ ಕಳೆದುಕೊಂಡ ಹೋಳಿಯಾಟ!

ಆಕೆಯ ಕನಸುಗಳನ್ನು ಈಡೇರಿಸುವ ಸೌಭಾಗ್ಯ ನನಗಿಲ್ಲ ಎಂದುಕೊಂಡು ಇಡೀ ದಿನ ಅತ್ತ


- ಪ್ರದ್ಯುಮ್ನ
ಮನೆಯ ಕಿಟಕಿಯಾಚೆ, ಮಕ್ಕಳು ಕೈಯಲ್ಲಿ ಪಿಚಕಾರಿ ಹಿಡಿದು ಒಬ್ಬೊರಿಗೊಬ್ಬರು ಬಣ್ಣ ಎರಚುತ್ತಿದ್ದರು. ಅವರ ಮುಖದಲ್ಲಿ ಸಂತೋಷದ ಹೊನಲು. ಬಣ್ಣದ ಓಕುಳಿಯಾಟದಲ್ಲಿ ಮಿಂದೆದ್ದ ಅವರಿಗೆ ಜಗತ್ತಿನ ಪರಿವೇ ಇರಲಿಲ್ಲ. ಖಾಲಿಯಾದ ಪಿಚಕಾರಿಗಳನ್ನು ಬಣ್ಣದ ನೀರು ತುಂಬಿದ್ದ ಕ್ಯಾ್ಗಳಲ್ಲಿ ಅದ್ದಿ ಮತ್ತೆ ಓಡುತ್ತಿದ್ದರು. ಒಬ್ಬೊರ ಮೈ ಮೇಲೆ ಒಬ್ಬರು ಬೀಳುತ್ತಿದ್ದರು, ಏಳುತ್ತಿದ್ದರು. ಮುಖದ ತುಂಬ ಬಣ್ಣ ಬಣ್ಣದ ಭಾವ. ಕೇಕೆ ನಲಿವುಗಳಿಗೆ ಮಿತಿಯೇ ಇಲ್ಲದ ಕ್ಷಣಗಳವು. ಹೋಳಿಯಾಟವೇ ಅಂಥದ್ದು. ಬಣ್ಣಗಳ ಜತೆಗಿನ ಸಂವಹನ ನಿಮ್ಮನ್ನು ಅನುಭೂತಿಯ ಸಾಂಗತ್ಯಕ್ಕೆ ಕೊಂಡೊಯ್ಯುತ್ತದೆ. ಬಣ್ಣಗಳೇ ಹಾಗೆ, ನಿಮ್ಮ ನೆನಪುಗಳ ಪುಟ್ಟ ಗೂಡನ್ನು ಹೊಕ್ಕು, ಬೆಚ್ಚಿಗೆ ಕುಳಿತಿದ್ದ ನೆನಪುಗಳಿಗೆ ರೆಕ್ಕೆ ಕಟ್ಟುತ್ತುದೆ, ಗರಿ ಬಿಚ್ಚಿ ಹಾರಾಡಲು ಪ್ರೇರೇಪಿಸುತ್ತದೆ. ಬಣ್ಣ ಬಿಂಬಿಸುವ ಭಾವಗಳೇ ನೂರಾರು. ಪ್ರತಿ ಬಣ್ಣವೂ ಸಂಕೇತಿಸುವ ಅದರದ್ದೇ ಆದ ಭಾವನಾಲೋಕ. ಆದರೆ, ಈ ಬಿಳಿ ಬಣ್ಣವಿದೆಯಲ್ಲ ಅದು ಮಾತ್ರ ನನ್ನನ್ನು ಇಂದಿಗೂ ಕಾಡುತ್ತಲೇ ಇದೆ. ಅವಳು ಆ ಬಣ್ಣದ ಸೀರೆಯುಟ್ಟು ಎದುರಾದಾಗಲೆಲ್ಲ ನನ್ನ ಎದೆಯಲ್ಲಿ ನೋವುಗಳ ಕಂಪನ, ಅವಳ ಮುಖ ನೋಡಲು ಧೈರ್ಯವೂ ಸಾಲದು. ವಿಪರ್ಯಾಸ ಎಂದರೆ, ಆಕೆ ಎಂದೂ ಬಿಳಿ ಬಣ್ಣ ಇಷ್ಟಪಟ್ಟವಳಲ್ಲ. ಅವಳಿಗೆ ತಿಳಿ ನೀಲಿ, ಎಂದರೆ ಎಲ್ಲಿಲ್ಲದ ಇಷ್ಟ. ಅದು ಆಕಾಶದ ಬಣ್ಣ. ಆಕಾಶ ಎಂದರೆ ಮಿತಿ ಇಲ್ಲದ್ದು. ಆಕೆಯ ಕನಸು, ಮಹತ್ವಾಕಾಂಕ್ಷೆಗೂ ಇರಲಿಲ್ಲ ಎಲ್ಲೆ. ಆಕಾಶದಂತೆ ಸ್ವಚ್ಛಂದವಾಗಿ ಇರಬೇಕು ಎಂದುಕೊಂಡವಳು. ಆದರೆ, ಜೀವನದಲ್ಲಿ ನಾವು ಅಂದುಕೊಂಡಂತೆ ಏನೂ ನಡೆಯುವುದಿಲ್ಲವಲ್ಲ. ಅದು ಆಕೆಗೂ ಗೊತ್ತಿತ್ತು. ಆದರೆ ಕನಸು ಕಾಣುವುದು ಬಿಟ್ಟಿರಲಿಲ್ಲ. ತನ್ನೆಲ್ಲ ಕನಸುಗಳನ್ನು ನನ್ನ ಜತೆ ಹಂಚಿಕೊಂಡಿದ್ದಳು. ಆಕಾಶವನ್ನು ಹುಚ್ಚು ರೀತಿಯಲ್ಲಿ ಇಷ್ಟಪಡುತ್ತಿದ್ದ ಅವಳು, ಗಗನ ಸಖಿಯಾಗಿ ದಿನವೆಲ್ಲ ಆಕಾಶದಲ್ಲಿ ಹಾರಾಡುತ್ತ, ದೇಶದಿಂದ ದೇಶಕ್ಕೆ ಸುತ್ತತ್ತಲೇ ಇರಬೇಕೊ ಕಣೋ ಎಂದು ದೊಡ್ಡದಾಗಿ ನಗುತ್ತಿದ್ದಳು.
ನನ್ನ ಅವಳ ಗೆಳೆತನ ತುಂಬ ಹಳೆಯದ್ದು. ಅಂದರೆ, ನಾವಿಬ್ಬರೂ ಒಟ್ಟಾಗಿಯೇ ಓದುತ್ತಿದ್ದೆವು. ನಮ್ಮ ನಡುವಿನ ಸಂಬಂಧಕ್ಕೆ ಹೆಸರೇ ಇರಲಿಲ್ಲ. ನೀವು ಅದನ್ನು ಯಾವುದೇ ಸಂಬಂಧದ ಚೌಕಟ್ಟಿಗೆ ಕಟ್ಟಿ ಹಾಕಲು ಸಾಧ್ಯವಿರಲಿಲ್ಲ. ಯಾವುದೇ ಸಂಬಂಧದ ಹೆಸರು ಹೇಳಿದರೂ ಅದನ್ನು ಮೀರಿದ ಅನುಬಂಧ ನಮ್ಮಿಬ್ಬರದ್ದು. ಆದರೆ, ಆಕೆಯ ಕುಟುಂಬ ಮಾತ್ರ ತುಂಬ ತುಂಬ ಟ್ರೆಡೀಷನ್. ಸಂಪ್ರದಾಯಸ್ಥ ಕುಟುಂಬದಲ್ಲಿ ಈಕೆ ಕಾಣುವ ಕನಸುಗಳಿಗೆ ಬೆಲೆ ದೊರೆಯುತ್ತಾ ಎಂದು ಒಂದೊಂದು ಸಾರಿ ನನಗೆ ಭಯವಾಗುತ್ತಿತ್ತು. ಆದರೆ ಆಕೆಗೆ ಹುಂಬ ಧೈರ್ಯ. ತಾನು ಅಂದುಕೊಂಡಿದ್ದನ್ನು ಸಾಧಿಸಿಯೇ ತೀರುತ್ತೇನೆಂಬ ಹುಚ್ಚು ಭರವಸೆ. ಆಕೆಯ ಇಷ್ಟಪಟ್ಟಿದ್ದೆಲ್ಲ ನೆರವೇರಲಿ ಎಂಬ ಸಣ್ಣ ಪ್ರಾರ್ಥನೆ ನನ್ನಿಂದ. ನಮ್ಮಿಬ್ಬರ ನಡುವಿನ ಸಲುಗೆ ಬೇರೆಯವರ ಕಣ್ಣಿಗೆ ಕುಕ್ಕುತ್ತಿತ್ತು. ಕಣ್ಣು ಕುಕ್ಕಿಸಿಕೊಂಡವರು ಸುಮ್ಮನಿದ್ದಾರೆಯೇ? ಏನು ಆಗಬೇಕಿತ್ತೋ.. ಅದೇ ಆಯ್ತು. ನಮ್ಮಿಬ್ಬರ ನಿರ್ವಾಜ್ಯ ಗೆಳತನಕ್ಕೆ ಕಲ್ಲು ಹಾಕುವ ಕೆಲಸವಾಗಿತ್ತು. ಹೀಗಿದ್ದಾಗ್ಯೂ.. ಕಾಲೇ್ನಲ್ಲಿ ನಾನು ಆಕೆ ಒಟ್ಟೊಟ್ಟಿಗೆ ಇರುತ್ತಿದ್ದೆವು. ಅದೊಂದು ದಿನ ಏನು ಆಯ್ತೋ ಗೊತ್ತಿಲ್ಲ. ಲೈಬ್ರರಿಯಲ್ಲಿ ಕೂತಿದ್ದವನ್ನು ಹೊರಗೆ ಕರೆ ತಂದು, ``ನನ್ನನ್ನು ಮದುವೆ ಆಗ್ತಿಯಾ? ನಿನ್ನ ಜತೆಗಿದ್ದರೆ ನನ್ನ ಕನಸೆಲ್ಲ ಈಡೇರುತ್ತದೆ,'' ಎಂದು ಒಂದೇ ಸವನೆ ಅಳಲಾರಂಭಿಸಿದಳು. ಎಂದೂ ಆ ರೀತಿಯಲ್ಲಿ ಯೋಚಿಸದ ನನಗೆ ಏನು ಹೇಳಬೇಕೋ... ಏನು ಹೇಳಬಾರದೋ ಒಂದು ಗೊತ್ತಾಗಲಿಲ್ಲ. ಆಕೆಯ ಕಣ್ಣೀರು ಮಾತ್ರ ಧಾರಾಕಾರವಾಗಿದೆ. ``ನೀನು ಮೊದಲು ಅಳುವುದನ್ನು ನಿಲ್ಲಿಸು,'' ಎಂದು ಸಂತೈಸಿದೆ. ನಮ್ಮಿಬ್ಬರ ಸಂಬಂಧಕ್ಕೆ ಹೊಸ ಅರ್ಥ, ಹೆಸರು ಕೊಡಬೇಕೆಂದು ನಿರ್ಧರಿಸಿಕೊಂಡೇ ಬಂದವಳಂತೆ ಕಾಣುತ್ತಿತ್ತು ಆಕೆ. ಆದರೆ, ನನಗೆ ಮಾತ್ರ ಆಕೆ ಹೀಗೇಕೆ ಒಮ್ಮಿಂದೊಮ್ಮೆ ಈ ರೀತಿ ಹೇಳುತ್ತಿದ್ದಾಳೆ ಎಂದು ಗೊಂದಲ. ಸ್ವಲ್ಪ ಹೊತ್ತಿನ ಬಳಿಕ ಸುಧಾರಿಸಿಕೊಂಡು, ಆಕೆ ಎಲ್ಲ ಹೇಳಿದಳು. ``ನೋಡೋ.. ನಾನು ಏನೆಲ್ಲ ಕನಸುಗಳನ್ನು ಇಟ್ಟುಕೊಂಡಿದ್ದೇನೆ. ಹೇಗೆಲ್ಲ ಬದುಕು ಕಟ್ಟಿಕೊಳ್ಳಬೇಕು ಎಂದುಕೊಂಡಿದ್ದೇನೆ. ಆದರೆ, ನಮ್ಮ ಮನೆಯಲ್ಲಿ ಮಾತ್ರ ಮದುವೆ ಮಾಡಿಕೊಡಲು ನಿರ್ಧರಿಸಿದ್ದಾರೆ. ನನ್ನ ಅತ್ತೆಯ ಮಗನಿಗೆ,'' ಎಂದವಳೇ ಮಾತು ಹೊರಡಲಾರದೆ ಮತ್ತೆ ಅಳುವಿಗೆ ಶರಣಾದಳು. ಈಗ ನನಗೆಲ್ಲ ಅರ್ಥವಾಗಿತ್ತು. ಬಹುಶಃ ಈಕೆಯ ಗಗನಸಖಿಯಾಗಿ ಆಕಾಶದಲ್ಲಿ ಹಾರಾಡುತ್ತ, ದೇಶ ದೇಶ ಸುತ್ತುವ ಆಸೆ ಮತ್ತು ನನ್ನೊಂದಿಗಿನ ಈ ಒಡನಾಟವೇ ಆಕೆಯ ಮನೆಯವರು ಇಂಥ ನಿರ್ಧಾರಕ್ಕೆ ಬರಲು ಕಾರಣ. ಆದರೆ ನಾನು ನಿಜವಾಗಲೂ ಆಕೆಯ ಆಸೆ ಆಕಾಂಕ್ಷೆಗಳನ್ನು ಈಡೇರಿಸಬಲ್ಲೆನಾ? ಅಂಥ ಶಕ್ತಿ ನನಗಿದೆಯಾ? ನನ್ನ ಜೀವನವೇ ಇನ್ನೂ ಒಂದು ಹಂತಕ್ಕೆ ಬರಬೇಕು. ಇದರ ಮಧ್ಯೆಯೇ ಆಕೆಯ ಜವಾಬ್ದಾರಿಯನ್ನು ನಾನು ತೆಗೆದುಕೊಳ್ಳಲು ಶಕ್ತನಾ? ಎಲ್ಲಕ್ಕಿಂತ ಹೆಚ್ಚಾಗಿ ನಾನು ಅವಳನ್ನು ಪ್ರೀತಿಸುತ್ತಿದ್ದೇನಾ.. ಹೀಗೆ ನಾನಾ ಪ್ರಶ್ನೆಗಳು ತಲೆಯಲ್ಲಿ ಓಡಲಾರಂಭಿಸಿದ್ದವು. ನಾನು ಕೇಳಿಕೊಂಡ ಆ ಕೊನೆಯ ಪ್ರಶ್ನೆ ಮಾತ್ರ ತುಸು ಹೊತ್ತು ಯೋಚಿಸುವಂತೆ ಮಾಡಿತು.  ಆಕೆಯೆಡೆಗೆ ನನ್ನಲ್ಲಿರುವ ಭಾವ ಪ್ರೀತಿಯದ್ದಾ.. ಬರೀ ಗೆಳೆತನದ್ದಾ..? ಹೀಗೆ ಪೂರ್ತಿ ಕ್ಪ್ಯೂಷ್. ಯಾವುದನ್ನು ನಿರ್ಧರಿಸಲಿಕ್ಕಾಗದ ಕ್ಷಣಗಳು ಅವು. ``ನನಗೆ ಒಂದಿಷ್ಟು ಸಮಯ ಕೊಡು. ಯೋಚಿಸಿ ಹೇಳುತ್ತೇನೆ,'' ಎಂದು ಆಕೆಯನ್ನು ಸಮಾಧಾನಪಡಿಸಿ ಮನೆಗೆ ಕಳುಹಿಸಿಕೊಟ್ಟೆ.
ಮನೆಗೆ ಹೋದವನಿಗೆ ತಲೆ ತುಂಬ ಇದೇ ವಿಚಾರಗಳ ಸಂಘರ್ಷ. ಕೊನೆಗೂ ಒಂದು ನಿರ್ಧಾರಕ್ಕೆ ಬಂದೆ. ಹೌದು... ನಾನು ಅವಳನ್ನು ಇಷ್ಟಪಡುತ್ತೇನೆ. ಆದರೆ, ಅದಕ್ಕೊಂದು ರೂಪವಿರಲಿಲ್ಲ ಅಷ್ಟೆ. ಅವಳೇ ಅದಕ್ಕೊಂದು ಸ್ಪಷ್ಟವಾದ ರೂಪ ಕೊಟ್ಟಿದ್ದಾಳೆ. ಇನ್ನೇನು ಕಾಲೇ್ ಮುಗಿಯುವ ಹಂತದಲ್ಲಿದೆ. ಒಂದಿಷ್ಟು ಕಷ್ಟಪಟ್ಟರೆ ಒಳ್ಳೆಯ ಕೆಲಸ ಪಡೆಯುವ ಸಾಮರ್ಥ್ಯ ನನ್ನಲ್ಲಿದೆ. ಆಕೆಯ ಕನಸು ಈಡೇರಿಸುವಷ್ಟು ಸಶಕ್ತನಾಗಬಲ್ಲೆ. ನಮ್ಮಿಬ್ಬರ ನಡುವಿನ ಈ ನಿರ್ವಾಜ್ಯ ಸಂಬಂಧಕ್ಕೆ ಒಂದು ಅರ್ಥ ಹೊಳೆಯುತ್ತಿದೆ. ಅದಕ್ಕೊಂದು ಚೌಕಟ್ಟು ವಿಧಿಸಿಕೊಳ್ಳುವುದರಲ್ಲಿ ತಪ್ಪಿಲ್ಲ ಎನಿಸುತ್ತದೆ ಎಂದು ನಿರ್ಧರಿಸಿಕೊಂಡೆ.
ಆದರೆ, ವಿಧಿಯಾಟ ಬೇರೆ ಇತ್ತು. ನನ್ನ ನಿರ್ಧಾರ ತಿಳಿಸಲು ನಾಲ್ಕೈದು ದಿನ ತೆಗೆದುಕೊಂಡೆ. ಕೊನೆಗೆ, `ನಿನ್ನೊಂದಿಗೆ ಹೆಜ್ಜೆ ಹಾಕಲು ನಾನು ಸಿದ್ಧ' ಎಂಬ ವಾಕ್ಯವನ್ನು ಆಕೆಯ ಮುಂದೆ ಕಣ್ಣುಮ್ಚುಚಿಕೊಂಡು ಹೇಳಬೇಕೆಂದುಕೊಂಡು ಕಾಲೇ್ಗೆ ಬಂದೆ. ಆದರೆ ಅಲ್ಲಿ ಆಕೆಯಿಲ್ಲ. ಒಂದು ವಾರವಾದರೂ ಆಕೆ ಕಾಲೇ್ನತ್ತ ಸುಳಿಯತ್ತಲೇ ಇಲ್ಲ. ಎಲ್ಲಿ ಹೋದಳು ಎಂಬ ಪ್ರಶ್ನೆಗೆ ಉತ್ತರ ಇಲ್ಲ. ಆಕೆಯ ಮನೆಗೆ ಹೋಗಿ ಕೇಳುವಷ್ಟು ಧೈರ್ಯ ನನ್ನಲ್ಲಿ ಇರಲಿಲ್ಲ. ಕೊನೆಗೂ ಗೊತ್ತಾಯಿತು. ಆಕೆಯನ್ನು ಬೇರೆ ಊರಿಗೆ ಕರೆದುಕೊಂಡು ಹೋಗಿದ್ದಾರೆ. ಮುಂದಿನ ವಾರದಲ್ಲಿ ಮದುವೆ ಇದೆ ಎಂಬ ಮಾಹಿತಿ. ಅಲ್ಲಿಗೆ ಸ್ಪಷ್ಟವಾಗಿತ್ತು. ಇನ್ನು ಆಕೆ ನನಗೆ ಸಿಗಲ್ಲ. ಆಕೆಯ ಕನಸುಗಳನ್ನು ಈಡೇರಿಸುವ ಸೌಭಾಗ್ಯ ನನಗಿಲ್ಲ ಎಂದುಕೊಂಡು ಇಡೀ ದಿನ ಅತ್ತೆ. ಆದರೆ, ಜೀವನ ಮುಂದೆ ಹೋಗಬೇಕಲ್ಲ. ದಿನಗಳು ಉರುಳಿದವು, ವರ್ಷವೂ ಕಳೆಯಿತು. ಅಂದೂ ಹೋಳಿ ಇತ್ತು. ಎಲ್ಲೆಲ್ಲೂ ಬಣ್ಣಗಳ ರಂಗೋಲಿ. ಅಂದು ಹೀಗೆಯೇ ಮಕ್ಕಳ ಹೋಳಿಯಾಟ ನೋಡುತ್ತ ನಿಂತಿದ್ದವನಿಗೆ ಎದುರಾದವಳು ಅವಳೇ. ಅರೇ ಏನಾಯಿತು...? ಹೇಗಿದ್ದವಳು ಹೇಗಾಗಿದ್ದಾಳೆ. ಬಿಳಿ ಬಣ್ಣ ಕಂಡರೆ ಆಗದವಳು ಅದೇ ಬಣ್ಣದ ಸೀರೆ ಉಟ್ಟುಕೊಂಡಿರುವುದ್ಯಾಕೆ? ಛೇ ಅವಳ ಜೀವನದಲ್ಲಿ ಏನೆಲ್ಲ ಅನಾಹುತಗಳಾಗಿರಬಹುದು. ಅವಳ ಕನಸುಗಳಿಗೆ ಕೊಳ್ಳಿ ಇಟ್ಟವರಾರು ಎಂದು ಅವಳನ್ನೇ ಕೇಳಬೇಕು ಎಂದುಕೊಂಡೆ. ಆದರೆ, ಆಕೆ ಮಾತ್ರ, ನಾನು ಪರಿಚಯ ಇಲ್ಲದವನಂತೆ, ನೋಡಿಯೋ ನೋಡಿದಂತೆ ಹೊರಟೇ ಹೋದಳು. ಆಕೆಯ ಮುಖದಲ್ಲೀಗ ಭಾವಗಳಿಲ್ಲ. ಕಣ್ಣುಗಳಲ್ಲಿ ಕನಸುಗಳಿಲ್ಲ. ನಿರ್ಭಾವುಕತೆಯನ್ನು ಹೊದ್ದುಕೊಂಡವಳಂತಿದ್ದಾಳೆ. ಆಕೆಯನ್ನು ನೋಡಿದ ಮೇಲೆ ತಪ್ಪಿತಸ್ಥ ಭಾವ ನನ್ನದು. ಈಗ ಹೋಳಿಗಳು ನನ್ನ ಪಾಲಿಗೆ ಅರ್ಥ ಕಳೆದುಕೊಂಡಿವೆ. ಎಲ್ಲ ಬಣ್ಣಗಳ ನಡುವೆಯೂ ಬಿಳಿ ನನ್ನನ್ನು ಇನ್ನಿಲ್ಲದಂತೆ ಕಾಡುತ್ತಿದೆ. ಆಕೆಯ ಬಾಳಿನಲ್ಲಿ ಬಣ್ಣ ಬಣ್ಣಗಳ ಚಿತ್ತಾರ ಬಿಡಿಸಬೇಕಿತ್ತು ನಾನು. ಅವಳ ಇಂದಿನ ಪರಿಸ್ಥಿತಿಗೂ ನಾನು ಕೂಡ ಕಾರಣ ಎಂದು ನೆನಪಾದಾಗಲೆಲ್ಲ ಕಣ್ಣು ತೇವವಾಗುತ್ತದೆ.
ಮೇರೆ ಲಿಯೇ ತುಮ್ಹಾರಿ ಯಾದೇ ಹೀ ಕಾಫೀ ಹೈ
ಮೊಹಬ್ಬ್ ಮೇ ಜರೂರಿ ಮುಲಾಖ್ ನಹೀ
--------------------
Published in VK on 28th March 2016 edition

ಮಂಗಳವಾರ, ಮಾರ್ಚ್ 22, 2016

ಕವಿತೆ

ಕವಿತೆ ನನ್ನೊಳಗಿನ
ಕಾಣದ ಕಡಲಿನ ಹುಡುಕಾಟ
ಭಾವಗಳ ಜತೆ ಚೆಲ್ಲಾಟ
ಎಲ್ಲೆ ಮೀರಿದ ಮೌನದ ಚೀರಾಟ
ಮಾತು ಮೌನವಾಗಿ,
ಮೌನ ಮಾತಾಗುವ ಹೊತ್ತಲ್ಲಿ
ಮೆಲ್ಲನೆ ಉಸಿರು ಪಿಸುಗುಟ್ಟುವ ಕ್ಷಣವೇ ಕವಿತೆ

ಸೋಮವಾರ, ಫೆಬ್ರವರಿ 15, 2016

ಪ್ರೇಮೋದ್ಯಾನ ಸೀಳಿದ ಆ ಮೆಟ್ರೋ ಮಾರ್ಗ!

ಬೆಂಗಳೂರೆಂಬ ಮಹಾನಗರದಲ್ಲಿ ಪಾಕ ಬರ? ಅದಕ್ಕೆ ಅಲ್ಲವೇ ಇದಕ್ಕೆ `ಉದ್ಯಾನನಗರಿ' ಎಂಬ ಅಡ್ಡ ಹೆಸರು. ಈ ಪಾಕ ಬೆಳಗ್ಗೆಯಿಂದ ರಾತ್ರಿಯವರೆಗೂ  ಮಕ್ಕಳಿಂದ ಹಿಡಿದು ವಯಸ್ಸಾದವರೂ ಇರುತ್ತಾರೆ; ಬರುತ್ತಾರೆ, ಹೋಗುತ್ತಾರೆ. ಯಾವುದೋ ಕನಸುಗಳನ್ನು ಕಟ್ಟಿಕೊಂಡು, ದೂರದ ಊರಿನಿಂದ ಬರುವ ಅಬ್ಬೇಪಾರಿಗಳಿಗೂ ಇದೇ ಆಶ್ರಯ; ನಿರ್ಗತಿಕರಿಗೂ ಇದುವೆ ಅರಮನೆ. ಬಣ್ಣ ಬಣ್ಣದ ಕನಸುಗಳನ್ನು ಕಾಣುವವರಿಗೆ ಹುಲ್ಲಿನ ಹಾಸುಗೆ.., ವೃದ್ಧಾಪ್ಯದಲ್ಲಿ ಯೌವನದ ಮೆಲಕು ಹಾಕುವವರಿಗೆ ಸಿಟ್ಟಿಂ್ ಪಾಯಿಂ್... ಜೀವನದ ಜಂಜಾಟಕ್ಕೆ ಬೇಸತ್ತು ಸ್ವಲ್ಪ ಹೊತ್ತು ಕುಳಿತು ಹೋಗುವವರಿಗೆ ವಿರಾಮ ತಾಣ... ಬೊಜ್ಜು ಕರಗಿಸಿಕೊಳ್ಳುವವರಿಗೆ ವಾಕಿಂ್ ಟ್ರ್ಯಾಕ ಇವರ ಮ`್ಯೆಯೇ ಮೈಗೆ ಮೈ ತಾಕಿಸಿಕೊಂಡು, ಒಬ್ಬರ ಉಸಿರು ಮತ್ತೊಬ್ಬರಿಗೆ ಬಿಸಿಯಾಗುವಷ್ಟು ಹತ್ತಿರ ಕುಳಿತುಕೊಳ್ಳುವ ಪ್ರೇಮಿಗಳಿಗೆ ಲವ್ ಸ್ಪಾ್... ಆಗಾಗ ಪಾಕ ನಿರ್ವಾಹಕರು ಬಂದು ಕಾಟು ಕೊಡುವುದು ಬಿಟ್ಟರೆ ಎಲ್ಲವೂ ನಿತ್ಯ ಹರಿದ್ವರ್ಣ. ಎಲ್ಲರಿಗೂ ಒಂದಲ್ಲ ರೀತಿಯಲ್ಲಿ ತನ್ನ ನೆರವಿನ ಬಾಗಿಲು ಓಪ್ ಮಾಡಿಕೊಂಡಿರುವ ಉದ್ಯಾನಗಳು ಅದೆಷ್ಟೋ ಈ ಮಾಯಾನಗರಿಯಲ್ಲಿ.
ಈ ಉದ್ಯಾನವೂ ಅಷ್ಟೇ. ತುಂಬ ಚಿಕ್ಕದೂ ಅಲ್ಲ; ತುಂಬ ದೊಡ್ಡದು ಅಲ್ಲ. ರೋಡಿಗೆ ಅಂಟಿಕೊಂಡಿರುವ ಈ ಪಾಕ ಹಕ್ಕಿಗಳ ಕಲರವ.. ಅದನ್ನು ಸೀಳುವ ವಾಹನಗಳ ಕರ್ಕಶ ಹಾರ್ನು. ಅಂದು ಹಾಗೆಯೇ ಆಗಿತ್ತು. ಬೆಳ್ಳಂಬೆಳಗ್ಗೆ ಎದ್ದು, ಇದ್ದ ಡ್ರೆ್ಗಳಲ್ಲಿ ನೀಟಾಗಿರುವ ಪ್ಯಾಂಟು, ಶರ್ಟು ಹಾಕ್ಕೊಂಡು ಆ ಪಾಕ ಮುಂದೆ ಬಂದು ನಿಂತವನಿಗೆ, ಆರ್ಕು್ನಲ್ಲಿ ಪರಿಚಯವಾಗಿ, ಮೇ್ನಲ್ಲಿ ಚಾಟಿಂ್ ಮಾಡಿಕೊಂಡು, ಮೊಬೈ್ ನಂಬ್ಗಳು ಎಕ್ಸೆಂ್ ಆದ ಮೇಲೆ, ಗಂಟೆಗಟ್ಟಲೇ ಹರಟೆ ಹೊಡ್ಕೊಂಡು, ಒಂದು ರೇಂಜಿಗೆ ಇಬ್ಬರು ಲ್ ಮಾಡಿಕೊಂಡು ಅಥವಾ ಹಾಗೆ ಅನ್ನಕೊಂಡಿದ್ದೆವು ನಾವು. ಅಂದು ಅವಳು ಕಡುಕಪ್ಪು ನೀಲಿ ಬಣ್ಣದ ಜೀ್‌ಸ ತೊಟ್ಟು, ಅದರ ಮೇಲೊಂದು ಕಂದು ಬಣ್ಣದ ಜುಬ್ಬಾ ತರಹದ್ದು ಟಾ್ ಹಾಕ್ಕೊಂಡು ಬಂದವಳ ಕೈಯಲ್ಲಿ ಇನ್ನೇನೂ ಮೂಲೆ ಸೇರಲೇಬೇಕಾದ ಸ್ಥಿತಿಯಲ್ಲಿದ್ದ ಮೊಬೈ್ ಫೋ್ ಇತ್ತು. ಅವಳು ಬರುತ್ತಿದ್ದನ್ನು ದೂರದಿಂದಲೇ ನೋಡಿದ ನನ್ನೆದೆಯೊಳಗೆ ಖಾರ ಕುಟ್ಟುವ ಮಷೀ್ನ ಸೌಂಡು. ಏನೋ ಒಂಥಾರ ಹೆದರಿಕೆ, ತಳಮಳ; ಅರೆ... ಫೋ್ನಲ್ಲಿ ಸರಿ ರಾತ್ರಿ ಮಾತಾಡಿಕೊಂಡರೂ ಆಗದ ಈ ಅವಸ್ಥೆ ಎದುರಿಗೆ ಬರುತ್ತಿದ್ದವಳನ್ನು ನೋಡಿದ ಕೂಡಲೇ ಯಾಕೆ? ಅದಕ್ಕೆ ಇರಬೇಕು, ಫೇ್ಬುಕ ಮೇ್ ಚಾ್ಗಳಲ್ಲಿ ಫ್ರೆಂ್ಶಿ್ ಸುಲ`. ಅದೇ ಮುಖ ಎದುರಾದಾಗ ಮಾತನಾಡಲು ಪದಗಳೇ ಸಿಗುವುದಿಲ್ಲ; ಚಾ್ನಲ್ಲಿ ಮಾತುಗಳಿಗೆ ಬರವೇ ಇರುವುದಿಲ್ಲ. ಏನಾಗುತ್ತಿದೆ ಎನ್ನುವಷ್ಟರಲ್ಲಿ ನನ್ನ ಮುಂದೆ ಬಂದವಳೇ ``ಆ್ ಯೂ ಪ್ರದ್ಯುಮ್ನ..?'' ಎಂದು ಕತ್ತು ಕೊಂಕಿಸಿ ಕೇಳಿದವಳಿಗೆ, ಹಂ.. ಹಂ.. ತಡಬಡಾಯಿಸುತ್ತಲೇ ಎಂದೆ. ನನಗಾದ ತಳಮಳ, ಹೆದರಿಕೆ ಅವಳಿಗಾಗುತ್ತಿತ್ತಾ? ಗೊತ್ತಿಲ್ಲ. ಒಂದು ವೇಳೆ ಆಗುತ್ತಿದ್ದರೂ ಅವಳು ಅಂದು ತೋರಿಸಿಕೊಳ್ಳಲಿಲ್ಲ ಅನ್ನಿಸುತ್ತದೆ. ಪಾಕ ಆ ಮೇ್ ಗೇ್ನಿಂದ ಒಳಗೆ ಹೊರಟವರಿಗೆ ಎಡ -ಬಲದಲ್ಲಿ ಯಾರಿದ್ದಾರೆಂಬ ಅರಿವು ನನಗೆ ಇರಲಿಲ್ಲ. ಅವಳೇನೂ ಅಂಥ ಅಪೂರ್ವ ಸುಂದರಿಯಲ್ಲದಿದ್ದರೂ ಕೃಷ್ಣ ಸುಂದರಿ. ತುಸು ಕಪ್ಪನೆ ಮುಖದಲ್ಲಿ ಬೆಳ್ಳನೆಯ ಕೊಳದಂಥ ಕಣ್ಣಿಗೆ ಹಚ್ಚಿದ್ದ ಕಾಡಿಗೆ ತುಸು ಹೆಚ್ಚೇ ಅವಳ ಸೌಂದರ್ಯ ಹೆಚ್ಚಿಸಿತ್ತು. ಅವಳ ನಡಿಗೆಯಲ್ಲಿ ಅಂಥ ಅವಸರವೇನೂ ಇರಲಿಲ್ಲ. ನಿ`ಾನವಾಗಿ, ನಾಜೂಕಾಗಿ ಹೆಜ್ಜೆ ಹಾಕುತ್ತಿದ್ದವಳನ್ನು ಹಿಂಬಾಲಿಸುತ್ತಿದ್ದೆ, ಪಾಕ ತುಸು ದೂರ ಹೋಗುತ್ತಿದ್ದಂತೆ ಖಾಲಿಯಾದ ಬೆಂ್ ಕಾಣಿಸಿತು. ಅದನ್ನು ತೋರಿಸಿ, ``ಕುಳಿತುಕೊಳ್ಳೋಣವಾ?'' ಎಂದವಳೇ ನನ್ನ ಉತ್ತರಕ್ಕೂ ಕಾಯದೇ ಕೂತೇ ಬಿಟ್ಟಳು. ಅವಳ ಪಕ್ಕದಲ್ಲೇ ಕುಳಿತುಕೊಳ್ಳಲೇ  ಮಂಗ್ಯಾ... ಅಂತಾ ಒಂದು ಮನಸ್ಸು ಹೇಳಿದರೆ, ಮತ್ತೊಂದು ಮನಸ್ಸು, ಲೋ... ಹಾಗೇನಾದರೂ ಕುತ್ಕೊಂಡ್ರೆ ಇ್ಡಿಸೆಂ್ ಫೆಲೋ ಅಂದ್ಕೊಂಡು ಬಿಟ್ಟಾಳು. ಬೆಂಚಿನ ಆ ತುದಿಯಲ್ಲಿ ಕುತ್ಕೊ ಎನ್ನುತ್ತಾ ಎರಡು ಮನಸ್ಸುಗಳು ಸಂಘರ್ಷಕ್ಕಿಳಿಯುತ್ತಿರುವಾಗಲೇ ಆಕೆ, ನನ್ನ ಕೈ ಹಿಡಿದು... ಬಾ ಕುತ್ಕೊ ಎಂದು ಜಗ್ಗಿ ಕುಳ್ಳರಿಸಿದಳು. ಅರೆ.. ಏನಾಗುತ್ತಿದೆ? ನಾನು ಪೂರ್ತಿ ಅವಳ ಅಣತಿಯಂತೆ ನಡೆದುಕೊಳ್ಳುತ್ತಿದ್ದೇನಾ? ಅವಳಿಗೆ ಶರಣಾಗಿ ಬಿಟ್ದಿದ್ದೀನಾ? ಎಲ್ಲಿ ಕುತ್ಕೊಬೇಕು ಎನ್ನುವ ಅವಕಾಶದ ಆಯ್ಕೆಯೂ ನನಗಿಲ್ಲವಲ್ಲಾ ಎಂಬ ಯೋಚನೆಯಲ್ಲಿ ಮುಳುಗಿರುವಾಗಲೇ, ಹಾಂ.., ಮತ್ತೆ ಎಂದು ಮಾತು ಶುರು ಮಾಡಿದಳು. ``ಫೋ್ನಲ್ಲಿ ಅಷ್ಟೊಂದು ಲೀಲಾಜಾಲವಾಗಿ ಮಾತಾಡೋನು, ಇವತ್ತು ಯಾಕೆ ಒಳ್ಳೆ ಮೂಗನ ತರಹ ಆಡ್ತಿದ್ದೀಯಾ? ಮಾತಾಡು,'' ಎಂದವಳ ಮುಖವನ್ನು ಒಮ್ಮೆ ದಿಟ್ಟಿಸಿ ನೋಡಿದೆ. ಆದರೆ ಬಹಳ ಹೊತ್ತಿನವರೆಗೆ ಹಾಗೆ ನೋಡುವುದು ನನ್ನಿಂದಾಗಲಿಲ್ಲ. ಆದಷ್ಟು ನಮ್ಮಿಬ್ಬರ ನಡುವಿನ ದೃಷ್ಟಿ ಯುದ್ಧವನ್ನು ತಪ್ಪಿಸಲು ಯತ್ನಿಸುತ್ತಿದ್ದೆ. ಅವಳಿಗೆ  ನನ್ನ ಮೊದಲನೆ ಬಾರಿಗೆ ನೋಡುತ್ತಿದ್ದೆನೆಂಬ ಯಾವ ಉದ್ವೇಗ, ಉನ್ಮಾದ, ತಳಮಳ ಇದ್ದಂತಿರಲಿಲ್ಲ; ನನಗಿತ್ತು.
ನಾವಿದ್ದ ಬೆಂ್ನತ್ತಲೇ ಒಬ್ಬ ಹೆಂಗಸು, ಬಗಲಲ್ಲಿ ಮಗುವನ್ನು ಎತ್ತಿಕೊಂಡು ಬಂದವಳೇ, ``ಅಣ್ಣಾ.. ನಿ್ ಜೋಡಿ `ಾಳ ಚಲೋ ಐತಿ, ನೀವು ಲಗ್ನಾ ಆಗ್ತೀರಿ. ಆ ಎಲ್ಲವ್ವನ ಆಣೆ ಮಾಡಿ ಹೇಳಕತ್ತಾನ್ರೀ,'' ಅಂದು ಬಿಟ್ಟಳು! ಈ ಮಾತು ಕೇಳಿ ಆಕೆ ನನ್ನ ಮುಖವನ್ನೊಮ್ಮೆ, ಆಕೆ ಮುಖವನ್ನೊಮ್ಮೆ ನೋಡಿ ಬಿದ್ದು ಬಿದ್ದು ನಕ್ಕಿದ್ದೇ ನಕ್ಕಿದ್ದೆ. ``ಏ.. ಏ್ ಹೇಳಾಕತ್ತೀರಿ ನೀವು. ರೊಕ್ಕಾ ಬೇಕಿದ್ದರ ಕೇಳರಿ ಕೊಡ್ತೇನಿ. ಹಿಂ್ ಬಾಯಿಗೆ ಬಂದಿಲ್ಲ ಹೇಳಬ್ಯಾಡಿ,'' ಎಂದು ಜೇಬಿನಿಂದ ಹತ್ತಿಪ್ಪತ್ತು ರೂಪಾಯಿ ತೆಗೆದು ಕೊಟ್ಟೆ. ``ಇಲ್ಲ.. ಅಣ್ಣಾರ, ನಾ ಸುಳ್ಳು  ಹೇಳಾಕತ್ತಿಲ್ಲ. ಖರೇನ ಹೇಳಾಕತ್ತೀನಿ. ಮುಂದ ನಿಮಗ ಗೊತ್ತಾಗತ್ತೈತಿ,'' ಎನ್ನುತ್ತಾ ನಮ್ಮತ್ತ ತಿರುಗಿ ನೋಡದೆ ಹೊರಟ ಹೋದಳು.
ಅವಳು ಹೋಗದ್ದೇ ತಡ, ತೀರಾ ಗಾಂಭಿರ್ಯವನ್ನು ಮುಖದ ಮೇಲೆ ತಂದುಕೊಂಡು ನನ್ನನ್ನೊಮ್ಮೆ ದೀರ್ಘವಾಗಿ ದಿಟ್ಟಿಸಿ ನೋಡಿದ ಅವಳು, ನನ್ನ ಕೆನ್ನೆಗೆ ಒಂದು ಮುತ್ತನ್ನು ಕೊಟ್ಟು ತಲೆ ತಗ್ಗಿಸಿಕೊಂಡು ಕುಳಿತಳು! ಹಾಗೇ ಮುತ್ತು ಕೊಟ್ಟವಳ ಮನಸ್ಸಿನಲ್ಲಿ ಏನಿತ್ತು? ಆ ಹೆಂಗಸು ಹೇಳಿದ `ವಿಷ್ಯದ ನುಡಿಗಳ ಬಗ್ಗೆ ಯೋಚಿಸುತ್ತಿದ್ದಳೇನೋ..? ಅಂದ ಹಾಗೆ, ಅಂದು ಪ್ರೇಮಿಗಳ ದಿನವಾಗಿತ್ತು. ಇದಕ್ಕೆ ಆ ಪಾಕ ಸಾಕ್ಷಿಯಾಗಿತ್ತು.
---
ಪೇಪ್... ಪೇಪ್... ಎಂದು ರಪ್ಪಂತ ಬಾಗಿಲಿಗೆ ಎಸೆದು ಹೋದವನನ್ನು ಬೈಯ್ದುಕೊಳ್ಳುತ್ತಾ, ಅನಾಥವಾಗಿ ಬಾಗಿಲ ಬಳಿ ಬಿದ್ದಿದ್ದ ಆ ಪೇಪ್ ಎತ್ತಿಕೊಂಡು, ಪುಟಗಳನ್ನು ತಿರುವುತ್ತಿರುವಾಗಲೇ ಕಂಡದ್ದು, `ಉದ್ಯಾನ ಸೀಳಿದ ಮೆಟ್ರೋ ಮಾರ್ಗ' ಎಂಬ ಹೆಡ್ಡಿಂಗು. ಏನಿದು ಎಂದು ಸುದ್ದಿಯ ಮೇಲೆ ಕಣ್ಣಾಡಿಸುತ್ತಿರುವಾಗಲೇ ಗೊತ್ತಾಗಿದ್ದು, ಇದು ಅದೇ ಉದ್ಯಾನ. ನಮ್ಮ ಪ್ರೀತಿಯ ಬೀಜಾಂಕುರಕ್ಕೆ ಕಾರಣವಾಗಿದ್ದ ಉದ್ಯಾನ. ಅನಿರೀಕ್ಷಿತವಾಗಿ ಮುತ್ತುಕೊಟ್ಟ ಹುಡುಗಿ ಕುಳಿತುಕೊಂಡಿದ್ದ ಅದೇ ಉದ್ಯಾನ. ಅದೇ ಉದ್ಯಾನದ ನಟ್ಟ ನಡುವೆ ಮೆಟ್ರೋ ಮಾರ್ಗ ನಿರ್ಮಾಣ ಮಾಡಲಾಗುತ್ತಿದೆ ಎಂಬುದು ಆ ಸುದ್ದಿಯ ಸಾರಾಂಶ. ಅದೆಷ್ಟೋ ಹುಡುಗ, ಹುಡುಗಿಯರ ಪ್ರೀತಿ ನಿವೇದನೆಗೆ ನಿವೇಶನ ಒದಗಿಸಿತ್ತೋ..? ಅದೆಷ್ಟು ಹಿರಿಯ ಜೀವಗಳು ತಮ್ಮ ಯೌವ್ವನ ದಿನಗಳನ್ನು ಅಲ್ಲಿ ಕುಳಿತು ನೆನಪಿಸಿಕೊಂಡಿದ್ದರೋ..? ಅದೆಷ್ಟೋ ಅಬ್ಬೇಪಾರಿಗಳು ಆ ಹುಲ್ಲು  ಹಾಸಿನ ಮೇಲೆ ಮಲಗಿ ಕನಸುಗಳನ್ನು ಕಟ್ಟಿಕೊಂಡಿದ್ದರೋ..? ನಗರ ಬದುಕಿನ ವೇಗದ ಮ`್ಯೆ ತುಸು ವಿರಾಮ ನೀಡುವ ಬ್ರೇಕ ಪಾಯಿಂ್ ಆಗಿದ್ದ ಆ ಉದ್ಯಾನ ಇನ್ನು ನೆನಪಷ್ಟೇ ಎಂದು ಯೋಚಿಸುತ್ತಿದ್ದವನಿಗೆ, ಕಣ್ಣು ತುಸು ತೇವ ಆಗಿದ್ದು ಗೊತ್ತಾಗಲಿಲ್ಲ.
- ಪ್ರದ್ಯುಮ್ನ

ಸೋಮವಾರ, ಸೆಪ್ಟೆಂಬರ್ 14, 2015

ರಾಕೇಶ್ ಮಾರಿಯಾ: ಜನರ ಪೊಲೀಸ್ ಕಮಿಷನರ್

ಮುಂಬಯಿಗರಿಗೆ ಮಹಾರಾಷ್ಟ್ರದ ಮುಖ್ಯಮಂತ್ರಿ ಹೆಸರು  ಗೊತ್ತಿರುತ್ತದೆಯೋ.. ಇಲ್ಲ ವೋ; ಆದರೆ, ಪೊಲೀಸ್ ಕಮಿಷನರ್ ಹೆಸರು ಮಾತ್ರ ಎಲ್ಲರ ನಾಲಿಗೆ ಮೇಲಿರುತ್ತದೆ. ಮುಂಬಯಿಗೆ ಕಮಿಷನರೇ ಮುಖ್ಯಮಂತ್ರಿ! ಇಂಥ ಹುದ್ದೆಗೆ ಇನ್ನೂ ಹೆಚ್ಚಿನ ಘನತೆಯನ್ನು ತಂದುಕೊಟ್ಟವರು ರಾಕೇಶ್ ಮಾರಿಯಾ.
ಛಿ ಛಿಟಟ್ಝಛಿ’ ್ಚಟಞಞಜಿಜಿಟ್ಞಛ್ಟಿ ಎಂದೇ ಖ್ಯಾತರಾಗಿರುವ ಐಪಿಎಸ್ ಅಕಾರಿ ರಾಕೇಶ್ ಅವರದ್ದು ಜನಪರ ಪೊಲೀಸ್ ವೃತ್ತಿ. ಜನರಿಗೆ ಕಮಿಷನರ್ ಕಚೇರಿಯನ್ನು ಮುಕ್ತವಾಗಿಸಿ ಅವರ ಹೃದಯಕ್ಕೆ ಮತ್ತಷ್ಟು ಹತ್ತಿರವಾಗಿಸಿದ್ದ ಅಕಾರಿ ಇವರು. ಇಂಥ ರಾಕೇಶ್ ಮಾರಿಯಾ ಅವರು ಸುದ್ದಿಯ ಕೇಂದ್ರಬಿಂದುವಾಗಿರುವುದು ಶೀನಾ ಬೋರಾ ನಿಗೂಢ ಕೊಲೆ ಪ್ರಕರಣದಲ್ಲಿ. ತನಿಖೆಯನ್ನು ಅವರು ಚುರುಕುಗೊಳಿಸುತ್ತಿದ್ದಂತೆ ಪೊಲೀಸ್ ಕಮಿಷನರ್ ಹುದ್ದೆಯಿಂದ ಅವರನ್ನು  ಮಹಾರಾಷ್ಟ್ರದ ಡೈರೆಕ್ಟರ್ ಜನರಲ್(ಹೋಮ್‌ಗಾರ್ಡ್ಸ್)ಹುದ್ದೆಗೆ ವರ್ಗ ಮಾಡಲಾಯಿತು. ಇದು ಮಾ‘್ಯಮ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ‘ಾರಿ ಚರ್ಚೆಗೆ ಕಾರಣವಾಯಿತು.
ಹಾಗೆ ನೋಡಿದರೆ, ರಾಕೇಶ್ ಮಾರಿಯಾ ಅವರು ಕೈ ಹಾಕಿದ ಪ್ರಕರಣಗಳೆಲ್ಲವೂ ಸೆನ್ಸೇಷನಲ್ ಆದಂಥವು. ಇದುವರೆಗೆ ಅವರು ‘ೇದಿಸಿರುವ ಅನೇಕ ಪ್ರಕರಣಗಳು ಅಪರಾ‘ ಜಗತ್ತಿನಲ್ಲಿ ಮೈಲಿಗಲ್ಲಾಗಿವೆ.
2003ರ ಗೇಟ್ ವೇ ಆಫ್ ಇಂಡಿಯಾ ಮತ್ತು ಜವೇರಿ ಬಜಾರ್ ಅವಳಿ ಸೋಟ ಪ್ರಕರಣ, ಸಂಜಯ್ ದತ್ ಪ್ರಕರಣ, ನೀರಜ್ ಗ್ರೋವರ್ ಕೊಲೆ ಪ್ರಕರಣಗಳನ್ನು ‘ೇದಿಸುವಲ್ಲಿ ಅವರು ಯಶಸ್ವಿಯಾಗಿದ್ದಾರೆ. ಅಷ್ಟೇ ಅಲ್ಲದೆ,  26 / 11 ರ ಮುಂಬಯಿ ದಾಳಿಯಲ್ಲಿ ಸೆರೆ ಸಿಕ್ಕ ಏಕೈಕ ಉಗ್ರ ಕಸಬ್‌ನ ವಿಚಾರಣೆಯನ್ನು ಕೂಡ ಇದೇ ಅಕಾರಿ ಮಾಡಿದ್ದು. ಕಸಬ್ ಬಾಯಿಂದಲೇ ಪಾಕಿಸ್ತಾನದ ಹಿನ್ನೆಲೆಯನ್ನು ಅವರು ಬಿಚ್ಚಿಟ್ಟಿದ್ದರು.
ಆರೋಪಿಗಳನ್ನು ‘ಥರ್ಡ್ ಡಿಗ್ರಿ’ಯ ಮೂಲಕ ವಿಚಾರಣೆ ಮಾಡುತ್ತಾರೆಂಬ ಆರೋಪ ರಾಕೇಶ್ ಮಾರಿಯಾ ಅವರ ಮೇಲಿದೆ. ಆದರೆ, ಇದನ್ನು ಅವರು ತಳ್ಳಿ ಹಾಕುತ್ತಾರೆ. ‘‘ಅದೆಲ್ಲವೂ ಸುಳ್ಳು. ಆರೋಪಿಗಳನ್ನು ಕೇವಲ ಹೊಡೆದು, ಹಿಂಸಿಸಿ ಬಾಯಿಬಿಡಿಸಲು ಸಾ‘್ಯವಿಲ್ಲ. ಅವರ ಮಾನಸಿಕ ಸ್ಥಿತಿಯನ್ನು ಅವಲೋಕಿಸಿ ವಿಚಾರಣೆ ನಡೆಸುತ್ತೇನೆ. ಹೀಗೆ ಮಾಡುವುದರಿಂದಲೇ ಸತ್ಯ ಹೊರಬರಲು ಸಾ‘್ಯ,’’ ಎನ್ನುತ್ತಾರೆ.
6 ಅಡಿ ಎತ್ತರದ ಆಜಾನುಬಾಹು ರಾಕೇಶ್ ಮಾರಿಯಾ ನಿಜಾರ್ಥದಲ್ಲಿ ‘ಡೈನಾಮಿಕ್ ಪೊಲೀಸ್ ಆಫೀಸರ್.’ ಅವರನ್ನು ಜನರು ಮಾತ್ರ ಆರಾಸುವುದಲ್ಲ, ಪೇದೆಯಿಂದ ಹಿಡಿದು ಹಿರಿಯ ಅಕಾರಿಗಳವರೆಗೂ ಅವರು ಅಚ್ಚುಮೆಚ್ಚು. ಅವರಿಗೆ ತಡರಾತ್ರಿ ಕೂಡ ಪೇದೆಗಳು ಫೋನ್ ಮಾಡಬಹುದು.
ಮಹಾರಾಷ್ಟ್ರದ ‘ಯೋತ್ಪಾದನೆ ನಿಗ್ರಹ ದಳ(ಎಟಿಎಸ್) ಎಸಿಪಿ ಸಂಜಯ್ ಕದಮ್ ಅವರು ರಾಕೇಶ್ ಮಾರಿಯಾ ಅವರನ್ನು ‘ಷರ್ಲಾಕ್ ಹೋಮ್ಸ್’ಗೆ ಹೋಲಿಸುತ್ತಾರೆ.  1994ರಲ್ಲಿ ಡಾ.ಜಲಿಸ್ ಅನ್ಸಾರಿಯನ್ನು ಸಿಬಿಐ ಬಂಸಿತ್ತು. ‘ಡಾ. ಬಾಂಬ್ ಆಫ್ ಬಾಂಬೆ’ ಎಂಬ ಕುಖ್ಯಾತಿ ಇದ್ದ ಈತನಿಂದ ಬಾಯಿ ಬಿಡಿಸಲು ಸಾ‘್ಯವಾಗಿರಲಿಲ್ಲ. ಆಗ ಸಿಬಿಐ ಮೊರೆ ಹೋಗಿದ್ದು ಇದೇ ರಾಕೇಶ್ ಮಾರಿಯಾ ಅವರನ್ನು. ಆಗ ಕ್ರೈಮ್ ಬ್ರಾಂಚ್‌ನಲ್ಲಿ ಡಿಸಿಪಿ ಆಗಿದ್ದ  ಮಾರಿಯಾ, ಅ‘ರ್ ಗಂಟೆಯೊಳಗೆ ಅನ್ಸಾರಿ ಬಾಯಿ ಬಿಡಿಸಿದ್ದರು. 1989ರಿಂದ 1994ರ ಅವಯಲ್ಲಿ ಸಂ‘ವಿಸಿದ ಗುರುದ್ವಾರ ಮತ್ತು ಪೊಲೀಸ್ ಸ್ಟೇಷನ್‌ಗಳ ಸೋಟದ ತಪ್ಪೊಪ್ಪಿಗೆಯನ್ನು ನೀಡಿದ್ದ ಆತ. ಇದು ರಾಕೇಶ್ ಅವರ ಚುರುಕು ವಿಚಾರಣೆಗೆ ಹಿಡಿದ ಕೈಗನ್ನಡಿ. ನೋಡಲು ರಫ್ ಆಗಿ ಕಂಡರೂ ಆಂತರ್ಯದಲ್ಲಿ ಮೆದುವಾಗಿದ್ದಾರೆ. ಕೆಲಸದ ವಿಷಯ ಬಂದರೆ ಅವರು ಕಠಿಣವಾಗಿ ವರ್ತಿಸುತ್ತಾರೆ.
ಸ್ವತಃ ಷರ್ಲಾಕ್ ಹೋಮ್ಸ್‌ನ ಅಭಿಮಾನಿಯಾಗಿರುವ ರಾಕೇಶ್ ಅವರದ್ದು ಅಗಾ‘ವಾದ ಓದು. ಇಂಗ್ಲಿಷ್, ಉರ್ದು ಮತ್ತು ಪಂಜಾಬಿ ‘ಾಷೆಗಳ ಮೇಲೂ ಹಿಡಿತವಿದೆ. ಈ ‘ಾಷಾಜ್ಞಾನ ಕಸಬ್ ವಿಚಾರಣೆ ವೇಳೆ ನೆರವಾಯಿತು ಅವರಿಗೆ. ಬ್ಯಾಸ್ಕೆಟ್ ಬಾಲ್ ಮತ್ತು ಫುಟ್‌ಬಾಲ್ ಆಡುತ್ತಾರೆ. ಎಷ್ಟೋ ಬಾರಿ ಪೇದೆಗಳೊಂದಿಗೆ ಫುಟ್‌ಬಾಲ್ ಆಡಿದ್ದಿದೆ.
ಇಂಥ ಖಡಕ್ ಅಕಾರಿ ರಾಕೇಶ್ ಅವರು ಮುಂಬಯಿ ಪೊಲೀಸ್ ಕಮಿಷನರ್ ಆದಾಗ ತುಂಬ ಖುಷಿಪಟ್ಟರು. ‘‘ಬಾಂದ್ರಾದ ಗಲ್ಲಿಗಳಲ್ಲಿ ಬರಿಗಾಲಿನಲ್ಲೇ  ಫುಟ್‌ಬಾಲ್ ಆಡಿಕೊಂಡಿದ್ದ ಹುಡುಗನ ಕನಸು ನನಸಾಯಿತು,’’ ಎಂದು ಮಾ‘್ಯಮಗಳಿಗೆ ಪ್ರತಿಕ್ರಿಯಿಸಿದ್ದರು.
ಆದರೆ, ಮಾರಿಯಾ ಅವರು ಕಮಿಷನರ್ ಆಗಿ ಆಯ್ಕೆಯಾಗಿದ್ದು ಕೂಡ ಅಷ್ಟು ಸರಳವಾಗೇನಲ್ಲ. ಈ ಹುದ್ದೆಗಾಗಿ, ಈಗ ಕಮಿಷನರ್ ಆಗಿರುವ ಅಹ್ಮದ್ ಜಾವೇದ್, ಮತ್ತೊಬ್ಬ ಹಿರಿಯ ಅಕಾರಿ ವಿಜಯ್ ಕಾಂಬಳೆ ಆಗ ತೀವ್ರ ಸ್ಪರ್‘ೆಯೊಡ್ಡಿದ್ದರು. ಅಲ್ಲದೆ, ರಾಜೀನಾಮೆ ನೀಡುವ ಬೆದರಿಕೆ ಕೂಡ ಹಾಕಿದ್ದರು. ಅಂದಿನ ಕಾಂಗ್ರೆಸ್ ಮತ್ತು ಎನ್‌ಸಿಪಿ ನೇತೃತ್ವದ ಸರಕಾರ, ಅಳೆದೂ ಸುರಿದೂ ಮಾರಿಯಾ ಅವರನ್ನು ಅಂತಿಮ ಕ್ಷಣದಲ್ಲಿ ಕಮಿಷನರ್ ಆಗಿ ನೇಮಕ ಮಾಡಿತ್ತು. ಪರಿಸ್ಥಿತಿ ಹೇಗಿತ್ತು ಎಂದರೆ, ಅವರು ಅಕಾರ ಸ್ವೀಕರಿಸಿ ಅ‘ರ್ ಗಂಟೆ ತಮ್ಮ ಅಕಾರಿಗಳೊಂದಿಗೆ ಮಾತುಕತೆಯಾಡುವಷ್ಟೂ ಸಮಯವಿರಲಿಲ್ಲ. ಅಂಥ ನಾಜೂಕಿನ ಸಂದ‘ರ್ದಲ್ಲಿ ಅವರು ಕಮಿಷನರ್ ಆಗಿ, ಜನರ ವಿಶ್ವಾಸ ಗಳಿಸುವಲ್ಲಿ ಯಶಸ್ವಿಯಾದರು.
ರಾಕೇಶ್ ಅವರು ಹುಟ್ಟಿದ್ದು 1957 ಜನವರಿ 19ರಂದು. ದೇಶ ಇಬ್ಭಾಗವಾದಾಗ ಇವರ ತಂದೆ ಪಾಕಿಸ್ತಾನದಿಂದ ಮುಂಬಯಿಗೆ ವಲಸೆ ಬಂದರು. ಅವರು ಚಿತ್ರ ನಿರ್ಮಾಪಕರೂ ಹೌದು. ಮನಸ್ಸು ಮಾಡಿದ್ದರೆ ರಾಕೇಶ್ ಅವರು ಅದೇ ಕ್ಷೇತ್ರದಲ್ಲಿ ಮುಂದುವರಿಯಬಹುದಿತ್ತು. ಆದರೆ, ಪೊಲೀಸ್ ವೃತ್ತಿ ಆಯ್ದುಕೊಂಡ ಅವರೇ ಈಗ ಅನೇಕ ಬಾಲಿವುಡ್ ಸಿನಿಮಾಗಳಿಗೆ ಸೂರ್ತಿಯಾಗಿದ್ದಾರೆ. 2004ರಲ್ಲಿ ತೆರೆಗೆ ಬಂದ ‘ಬ್ಲಾಕ್ ಫ್ರೈಡೇ’, ‘ಮ್ಯಾಕ್ಸಿಮಮ್ ಸಿಟಿ’, 2008ರಲ್ಲಿ ತೆರೆ ಕಂಡ ‘ಎ ವೆನ್ಸ್‌ಡೇ’, 2013ರಲ್ಲಿ ತೆರೆಕಂಡ ‘ದಿ ಅಟ್ಯಾಕ್ಸ್ ಆಫ್ 26/11’, ‘ದಿ ಸೀಜ್’ ಚಿತ್ರಗಳು ಇವರ ವ್ಯಕ್ತಿತ್ವವನ್ನೇ ಕೇಂದ್ರೀಕರಿಸಿವೆ. ಈ ಸಿನಿಮಾಗಳಲ್ಲಿ ಬಿಂಬಿತವಾಗಿರುವ ಪ್ರಮುಖ ತನಿಖಾಕಾರಿಯ ಚಿತ್ರಣಕ್ಕೆ ಇವರೇ ಸೂರ್ತಿ.  ರಾಕೇಶ್ ಮತ್ತು ಪ್ರೀತಿ ದಂಪತಿಗೆ ಕುನಾಲ್ ಮತ್ತು  ಕ್ರಿಶ್ ಮಕ್ಕಳಿದ್ದಾರೆ. ಇವರ ತಂದೆಯ ಚಿತ್ರ ನಿರ್ಮಾಣ ಕಂಪನಿ ಕಲಾನಿಕೇತನ ಇವರ ಒಡೆತನದಲ್ಲೇ ಇದೆ.
1981ರ ಬ್ಯಾಚ್‌ನ ಐಪಿಎಸ್ ಅಕಾರಿಯಾದ ರಾಕೇಶ್ ಅವರು ಮಹಾರಾಷ್ಟ್ರದ ಅಕೋಲಾ ಮತ್ತು ಬುಲ್ದಾನಾ ಜಿಲ್ಲೆಗಳ ಸಹಾಯಕ ಜಿಲ್ಲಾ ರಕ್ಷಣಾಕಾರಿಯಾಗಿ ಸೇವೆ ಸಲ್ಲಿಸುವ ಮೂಲಕ ಪೊಲೀಸ್ ವೃತ್ತಿಯ ಪರಿಯೊಳಗೆ ಬಂದರು. ನಂತರ ಅವರು, 1986ರಲ್ಲಿ ಮುಂಬಯಿಗೆ ವರ್ಗವಾದರು. 1993ರಲ್ಲಿ ಟ್ರಾಫಿಕ್‌ನ ಡೆಪ್ಯುಟಿ ಪೊಲೀಸ್ ಕಮಿಷನರ್ ಆಗಿದ್ದರು. 2014 ಫೆಬ್ರವರಿ 15ರಂದು ಮುಂಬಯಿ ಪೊಲೀಸ್ ಕಮಿಷನರ್ ಆಗಿ ನೇಮಕಗೊಂಡರು.
ರಾಕೇಶ್ ಅವರೇನೂ ವಿವಾದಗಳಿಂದ ಮುಕ್ತರಾಗಿಲ್ಲ. ಮುಂಬಯಿ ದಾಳಿ ವೇಳೆ ಮೃತಪಟ್ಟ ಅಶೋಕ ಕಾಮ್ಟೆ  ಸಾವಿಗೆ ಇವರೇ ಕಾರಣ ಎಂದು ಕಾಮ್ಟೆ  ಪತ್ನಿ ವಿನಿತಾ ಆರೋಪಿಸಿದ್ದರು. ಇತ್ತೀಚೆಗಷ್ಟೇ ‘ಾರಿ ಸುದ್ದಿಗೆ ಕಾರಣವಾಗಿದ್ದ ಲಲಿತ್ ಮೋದಿ ಅವರನ್ನು ‘ೇಟಿ ಮಾಡಿದ ಆರೋಪ ಅವರಿಗೆ ಎದುರಾಗಿತ್ತು. ಈ ಬಗ್ಗೆ ಸ್ಪಷ್ಟನೆಯನ್ನೂ ಅವರು ಮುಖ್ಯಮಂತ್ರಿ ಫಡ್ನವಿಸ್‌ಗೆ ನೀಡಿದ್ದಾರೆ. ಇದೀಗ ಶೀನಾ ಬೋರಾ ಕೊಲೆ ಪ್ರಕರಣವನ್ನು ‘ೇದಿಸಿದರೂ ವಿವಾದ ಅವರ ಬೆನ್ನು ಬಿಟ್ಟಿಲ್ಲ. ಇನ್ನೂ ಅನೇಕ ವಿವಾದಗಳು ಇವರ ಸುತ್ತ ಗಿರಕಿ ಹೊಡೆಯುತ್ತಲೇ ಇವೆ.


- Mallikarjun Tippar


(This article published in VK on 13th sept 2015 )

ಶುಕ್ರವಾರ, ಸೆಪ್ಟೆಂಬರ್ 4, 2015

Sorry Aylan



Sorry Aylan
Forgive us

We forgot humanity
In the name of Religion
Language, caste and creed color

Sorry Aylan
Forgive us

We will never learn
Peace message
A passage to happiness

Sorry Aylan
Forgive us

We will fight each other
For ever and ever
Never we think about life

Sorry Aylan
Forgive us

Blood is our priority
We stood behind hypocrisy
And power is supremacy

Sorry Aylan
Forgive us

Will wear mask of protector
Killing everybody, doesn't matter
Child, woman or humanity

- Mallikarjun Tippar

ಬುಧವಾರ, ಆಗಸ್ಟ್ 12, 2015

- ಗಜಲ್-


ಕನಸು ಕಾಣುವ ತುಡಿತ ಹಂಬಲ, ಇಲ್ಲದೆ ಯಾರ ಬೆಂಬಲ
ಕಣ್ ಮಂದಿನ ದಾರಿ ಮಬ್ಬು, ಸಾಗಬೇಕು ಇಲ್ಲದೆ ಯಾರ ಬೆಂಬಲ

ಯಾರು ಇದ್ದರೇನು, ಇಲ್ಲದಿದ್ದರೇನು, ನೊಗ ಹೊತ್ತು ನಡೆಯಬೇಕು
ಬದುಕಿನ ಬಂಡಿಯ ಕೀಲು ಕೀಳದಂತೆ, ಇಲ್ಲದೆ ಯಾರ ಬೆಂಬಲ

ಹರೆಯದ ದಿನಗಳ ನೆನೆ ನೆನೆದು, ಮುಂದಿರುವ ಜೀವನಕ್ಕೆ ದಾಟಿ,
ಕೋಟಿ ಸಂಕಟ ಮೀರಿ ಈಜಲೇಬೇಕು ಇಲ್ಲದೆ ಯಾರ ಬೆಂಬಲ

ತಂಪನೆಯ ಸುಳಿ ಗಾಳಿಗೆ ಮುಖವೊಡ್ಡಿ, ನೆನಪುಗಳ ಒಡ್ಡೋಲಗದಲ್ಲಿ
ಕನಸುಗಳ ತಳಕು ಹಾಕುತಾ, ನೆಗೆಯಬೇಕು ಆಕಾಶಕೆ, ಇಲ್ಲದೆ ಯಾರ ಬೆಂಬಲ
- Mallikarjun Tippar

ಸೋಮವಾರ, ಆಗಸ್ಟ್ 3, 2015

ವ್ಯಕ್ತಿಗತ: ನಿಸ್ವಾರ್ಥರಿಗೆ ಸಂದ ಅಮೋಘ ಪ್ರಶಸ್ತಿ

ಬಟ್ಟೆ ಇಲ್ಲದ ನಿರ್ಗತಿಕರಿಗೆ ವಸ್ತ್ರದಾನ ಮಾಡಿ ನೆಮ್ಮದಿ ಕಾಣುವ ಸಮಾಜ ಸೇವಕ ಅಂಶು ಗುಪ್ತ ಮತ್ತು ಸರಕಾರಿ ವ್ಯವಸ್ಥೆಯೊಳಗೇ ಇದ್ದು ಭ್ರಷ್ಟಾಚಾರವನ್ನು ಹತ್ತಿಕ್ಕುತ್ತಿರುವ ಸಂಜೀವ್ ಚತುರ್ವೇದಿ ಈಗ ನಮ್ಮ ಮುಂದಿರುವ ಆದರ್ಶವಂತರು.

ಸಂಸತ್ತಿನ ಉಭಯ ಸದನಗಳ ಗದ್ದಲ, ಯಾಕೂಬ್ ಮೆಮೊನ್ ಗಲ್ಲು, ಜನರ ರಾಷ್ಟ್ರಪತಿ ಅಬ್ದುಲ್ ಕಲಾಂ ನಿಧನದ ನಡುವೆ ಭಾರತೀಯರೆಲ್ಲರೂ ಖುಷಿಪಡಬಹುದಾದ ಸುದ್ದಿ ಮಾತ್ರ ಅಂದುಕೊಂಡಷ್ಟು ಸದ್ದು ಮಾಡಲಿಲ್ಲ. ನಿಸ್ವಾರ್ಥ ಸೇವೆ ಹಾಗೂ ಭ್ರಷ್ಟಾಚಾರ ವಿರುದ್ಧದ ಹೋರಾಟಕ್ಕಾಗಿ ಭಾರತದ ಇಬ್ಬರಿಗೆ ಏಷ್ಯಾದ ಅತಿದೊಡ್ಡ ಗೌರವ, ರಾಮೊನ್ ಮ್ಯಾಗ್ಸೆಸೆ ಪ್ರಶಸ್ತಿ ಸಂದಿತು. ಈ ಪೈಕಿ ಒಬ್ಬರು 'ಗೂಂಜ್' ಮುಖ್ಯಸ್ಥ ಅಂಶು ಗುಪ್ತ, ಮತ್ತೊಬ್ಬರು ಐಎಫ್‌ಎಸ್ ಅಧಿಕಾರಿ ಸಂಜೀವ್ ಚತುರ್ವೇದಿ.

ನಿರ್ಗತಿಕರ ಮಾನ ಕಾಪಾಡಿದ ಗುಪ್ತ

''ನನಗೆ ಚಳಿ ಅಂತ ಅನಿಸಿದಾಗಲೆಲ್ಲ ಶವಗಳನ್ನು ತಬ್ಬಿಕೊಂಡು ಮಲಗುತ್ತೇನೆ,''

- 6 ವರ್ಷದ ಬಾಲಕಿಯೊಬ್ಬಳು ಹೇಳಿದ ಈ ಮಾತುಗಳು ಅಂಶು ಗುಪ್ತ ಅವರ ಮನವನ್ನು ಕಲಕಿದವು, ಇನ್ನಿಲ್ಲದಂತೆ ಕಾಡಿದವು. ಸಮಾಜ ಸೇವೆಗೆ ತುಡಿಯುತ್ತಿದ್ದ ಅವರ ಮನಸ್ಸಿಗೆ ಒಂದು ಸ್ಪಷ್ಟವಾದ ದಿಸೆಯನ್ನು ತೋರಿಸಿದವು. ಅದರ ಒಟ್ಟು ಫಲವೇ 'ಗೂಂಜ್' ಎಂಬ ಸರಕಾರೇತರ ಸಂಸ್ಥೆ. ಟ್ಟ ್ಛಟ್ಟ ಇ್ಝಟಠಿ ಎನ್ನುವುದು ಸಂಸ್ಥೆಯ ಧ್ಯೇಯ.

ಸರಕಾರಗಳು, ರಾಜಕೀಯ ನಾಯಕರೂ ಸೇರಿದಂತೆ ಎಲ್ಲರೂ 'ರೋಟಿ, ಕಪಡಾ, ಮಕಾನ್'(ಆಹಾರ, ಬಟ್ಟೆ, ಮನೆ) ಬಗ್ಗೆ ಮಾತನಾಡುತ್ತಾರೆ. ಆದರೆ, ಬಟ್ಟೆ ಬಗ್ಗೆ ಅಷ್ಟೊಂದು ಗಂಭೀರವಾಗಿ ಚಿಂತಿಸುವುದಿಲ್ಲ. ಅರೆಬಟ್ಟೆ ಧರಿಸುವ ಕೋಟ್ಯಂತರ ಜನರು ಭಾರತದಲ್ಲಿದ್ದಾರೆ. ಶ್ರೀಮಂತರು ಬಳಸಿ ಬಿಸಾಡುವ ಬಟ್ಟೆಗಳನ್ನು ತಂದು, ಅವುಗಳನ್ನು ಪುನಃ ಸಿದ್ಧಪಡಿಸಿ ಅಂಥ ಬಡವರಿಗೆ ಹಂಚುವುದೇ ಈ ಸಂಸ್ಥೆಯ ಕಾರ್ಯ. 21 ರಾಜ್ಯಗಳಿಗೆ ಗೂಂಜ್ ತನ್ನ ಸೇವೆಯನ್ನು ವಿಸ್ತರಿಸಿದೆ.

ಗೂಂಜ್‌ನ ಮುಖ್ಯಸ್ಥ ಅಂಶು ಗುಪ್ತ ಅವರು ಎಲ್ಲ ವಿದ್ಯಾವಂತರಂತೆ ಯೋಚಿಸಲಿಲ್ಲ. ಅವರೊಳಗೆ ಸಮಾಜಸೇವೆಯೆಂಬ 'ಹುಳು' ಸದಾ ಕೊರೆಯುತ್ತಲೇ ಇತ್ತು. ಆದರೆ, ಅದನ್ನು ಹೊರ ತೆಗೆಯುವುದು ಹೇಗೆ? ಮತ್ತು ಯಾವಾಗ? ಎಂಬ ಸ್ಪಷ್ಟ ದಾರಿ ಇರಲಿಲ್ಲ. ದೆಹಲಿಯವರೇ ಆದ ಗುಪ್ತ, ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಮಾಸ್ ಕಮ್ಯೂನಿಕೇಷನ್‌ನಲ್ಲಿ ಪದವಿ ಹಾಗೂ ಎಕಾನಾಮಿಕ್ಸ್ ನಲ್ಲಿ ಸ್ನಾತಕೋತ್ತರ ಮುಗಿಸಿ ಜಾಹೀರಾತು ಕಂಪನಿಯೊಂದರಲ್ಲಿ ಕೆಲಸ ಮಾಡಲು ಆರಂಭಿಸಿದರು. ಆದರೆ, ಅವರೊಳಗಿದ್ದ ಸಮಾಜ ಸೇವೆ 'ಹುಳು' ಮಾತ್ರ ಕಾರ್ಪೊರೇಟ್ ಸೆಕ್ಟರ್‌ನಲ್ಲಿ ಬಹಳ ದಿನ ಉಳಿಯಲು ಬಿಡಲಿಲ್ಲ. ಮೇಲೆ ಹೇಳಿದ ಒಂದು ಘಟನೆ ಅವರ ಮನಸು ಬದಲಿಸಿತು. 1999ರಲ್ಲಿ ದೆಹಲಿಯಲ್ಲಿ 'ಗೂಂಜ್' ಸಂಸ್ಥೆ ಹುಟ್ಟು ಹಾಕಿದರು. ಆ ಮೂಲಕ ನಿರ್ಗತಿಕ, ಅನಾಥ, ಬಡವರ ಮಾನ ಮುಚ್ಚುವ ಕೆಲಸವನ್ನು ತಪಸ್ಸು ಎನ್ನುವಂತೆ ಮಾಡುತ್ತ ಬಂದರು. ಇವರ ಈ ಸೇವೆ ಇಷ್ಟಕ್ಕೇ ನಿಲ್ಲಲಿಲ್ಲ. ಭೂಕಂಪ, ಚಂಡಮಾರುತ, ಕುಂಭದ್ರೋಣ ಮಳೆ ಸೇರಿದಂತೆ ನೈಸರ್ಗಿಕ ವಿಕೋಪಗಳಲ್ಲಿ ನಿರ್ಗತಿಕರಾದವರಿಗೆ ಬಟ್ಟೆಗಳನ್ನು ಪೂರೈಸಿದರು. ಆಸರೆಯತ್ತ ಕೈಚಾಚಿದವರಿಗೆ ಕಾಮಧೇನುವಾದರು.

ಗೂಂಜ್ ಕಟ್ಟಿಕೊಂಡು 16 ವರ್ಷಗಳಿಂದ ಸಮಾಜಸೇವೆಯಲ್ಲಿ ನಿರತರಾಗಿರುವ ಗುಪ್ತ ಅವರಿಗೆ ನೆನಪಿಡುವಂಥ ಘಟನೆ ಯಾವುದಾದರೂ ಇದೆಯಾ? ಅಂದರೆ, ''ಮೈ ಕೊರೆಯುವ ಚಳಿಗಾಲದ ಮುಂಜಾವಿನಲ್ಲಿ ಮುದುಕನೊಬ್ಬನಿಗೆ ಸೆಕೆಂಡ್ ಹ್ಯಾಂಡ್ ಮೇಲುಹೊದಿಕೆ ನೀಡಿದಾಗ ಆತನ ಮೊಗದಲ್ಲಿ ಅರಳಿದ ಸಂತೋಷವೇ ಸದಾ ಕಾಡುವಂಥದ್ದು,'' ಎನ್ನುತ್ತಾರೆ. ಅಂದರೆ, ಅವರು ತಮ್ಮ ಸುಖ ಸಂತೋಷಗಳನ್ನೆಲ್ಲವನ್ನೂ ಇಂಥ ಪುಟ್ಟ ಕಾರ್ಯಗಳಲ್ಲೇ ಕಂಡುಕೊಳ್ಳುತ್ತಾರೆ. ಇಂಥ ನಿಸ್ವಾರ್ಥ, ನಿಜ ಸಮಾಜ ಸೇವಕನಿಗೆ 2015ರ ಮ್ಯಾಗ್ಸೆಸೆ ಪ್ರಶಸ್ತಿ ದೊರೆತಿರುವುದು ನಿಜಕ್ಕೂ ಸಂತೋಷದ ವಿಚಾರ. ಈ ಪ್ರಶಸ್ತಿ ಬರುವುದಕ್ಕಿಂತ ಮುಂಚೆ ಗೂಂಜ್ ಅಥವಾ ಅಂಶು ಗುಪ್ತ ಅವರು ಎಲ್ಲರಿಗೂ ಚಿರಪರಿಚಿತರಾಗಿರಲಿಲ್ಲ. ಇದೀಗ ಅವರ ಮೇಲೆ ಹೆಚ್ಚಿನ ಜವಾಬ್ದಾರಿ ಬಿದ್ದಿದೆ. ಇನ್ನಷ್ಟು ಸಮಾಜಸೇವೆಯನ್ನು ಮಾಡಲು ಈ ಪ್ರಶಸ್ತಿ ಹುರಿದುಂಬಿಸಿದೆ.

ವ್ಯವಸ್ಥೆಯ ವಿರುದ್ಧ ಹೋರಾಡುವ ಚತುರ!

ವ್ಯವಸ್ಥೆಯ ಹೊರಗಿದ್ದು ಭ್ರಷ್ಟಾಚಾರದ ವಿರುದ್ಧ ಹೋರಾಡುವುದು ಒಂದು ತೆರನಾದರೆ, ವ್ಯವಸ್ಥೆಯೊಳಗಿದ್ದು ಬಂಡಾಯಗಾರರಾಗುವುದು ಇನ್ನೊಂದು ಮಾದರಿ. ಈ ಎರಡನೇ ಮಾದರಿಯಲ್ಲಿರುವವರು ಐಎಫ್‌ಎಸ್ ಅಧಿಕಾರಿ ಸಂಜೀವ್ ಚತುರ್ವೇದಿ.

ಹರಿಯಾಣ ಕೇಡರ್‌ನ ಈ ಅಧಿಕಾರಿ ತಮ್ಮ ಮೊದಲ 5 ವರ್ಷದ ಅವಧಿಯಲ್ಲಿ 12 ಬಾರಿ ವರ್ಗಾವಣೆಯಾಗಿದ್ದಾರೆ!. ಇದರಿಂದಲೇ, ಆಳುವ ಸರಕಾರಕ್ಕೆ ಅವರ ಬಗ್ಗೆ ಎಷ್ಟು ಭಯವಿತ್ತ್ತು ಎನ್ನುವುದು ಅರಿವಿಗೆ ಬರುತ್ತದೆ. ಇಂಥ ಖಡಕ್ ಅಧಿಕಾರಿಗೆ ಇದೀಗ ಮ್ಯಾಗ್ಸೆಸೆ ಪ್ರಶಸ್ತಿ ಬಂದಿರುವುದು ವ್ಯವಸ್ಥೆಯೊಳಗೆ ಇದ್ದು ಬಂಡಾಯ ಸಾರುತ್ತಿರುವ ಅದೆಷ್ಟೋ ಅಧಿಕಾರಿಗಳಿಗೆ ಬಲ ತಂದಂತಾಗಿದೆ. ಇದಕ್ಕೆ ಪುಷ್ಟಿ ನೀಡುವಂತೆ ಚತುರ್ವೇದಿ ಅವರು, ತಮಗೆ ಬಂದಿರುವ ಈ ಪ್ರಶಸ್ತಿಯನ್ನು ವ್ಯವಸ್ಥೆಯ ವಿರುದ್ಧ ಹೋರಾಡುತ್ತಿರುವ ಎಲ್ಲರಿಗೂ ಅರ್ಪಿಸಿದ್ದಾರೆ.

13 ವರ್ಷದ ತಮ್ಮ ಸೇವಾ ವಧಿಯಲ್ಲಿ ಅವರು ಎಂದಿಗೂ ಭ್ರಷ್ಟಾಚಾರಕ್ಕೆ ಆಸ್ಪದ ಕೊಟ್ಟಿಲ್ಲ. ಇದರ ಪರಿ ಣಾಮ ಏನೆಂದರೆ, ಅವರ ವಿರುದ್ಧ ಅನೇಕ ಸುಳ್ಳು ಪ್ರಕರಣಗಳು ದಾಖಲಾದವು. ಎಲ್ಲಕ್ಕಿಂತ ಹೆಚ್ಚಾಗಿ ಅವರ ಮಾವನೇ ಅವರ ವಿರುದ್ಧ ವರದಕ್ಷಿಣೆ ಕಿರುಕುಳ ಕೇಸ್ ದಾಖಲಿಸಿದ್ದರು. ಅರಣ್ಯ ಇಲಾಖೆಯಿಂದ 4 ಬಾರಿ ತನಿಖೆಗೆಗೊಳಗಾದರು. ವಿಚಾರಣೆ ನಡೆದಾಗ ಸತ್ಯವಂತರಾಗಿ ಹೊರಬಂದಿದ್ದಾರೆ.

ಸಂಜೀವ್ ಹುಟ್ಟಿದ್ದು 1974 ರ ಡಿಸೆಂಬರ್ 21ರಂದು ಲಖನೌನಲ್ಲಿ. ಬಿ.ಟೆಕ್ ಪದವಿ ಪಡೆದಿದ್ದು ಅಲಹಾಬಾದ್‌ನ ಮೋತಿಲಾಲ ನೆಹರು ನ್ಯಾಷನಲ್ ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ. 2002ರ ಹರಿ ಯಾಣ ಕೇಡರ್‌ನ ಈ ಅಧಿಕಾರಿ ಐಎಫ್‌ಎಸ್ ಪರೀಕ್ಷೆಯಲ್ಲಿ 2ನೇ ರ‌್ಯಾಂಕ್ ಮತ್ತು ತರಬೇತಿ ವೇಳೆ 2 ಗೋಲ್ಡ್ ಮೆಡಲ್‌ಗಳನ್ನೂ ಪಡೆದಿದ್ದಾರೆ. ಹರಿಯಾಣದಲ್ಲಿ ತಮ್ಮ ಸೇವೆ ಆರಂಭಿಸಿದ ಸಂಜೀವ್, ಇತರೆ ಅಧಿಕಾರಿಗಳಂತೆ ಕಣ್ಣ ಮುಂದೆ ನಡೆಯುತ್ತಿದ್ದ ಭ್ರಷ್ಟಾಚಾರವನ್ನು ನೋಡಿ ಸುಮ್ಮನೆ ಕೂರಲಿಲ್ಲ. ಅರಣ್ಯ ಇಲಾಖೆಯಲ್ಲಿ ಕೆಲಸ ಮಾಡಿದಷ್ಟು ದಿನವೂ, ಭ್ರಷ್ಟ ಅಧಿಕಾರಿಗಳು, ರಾಜಕಾರಣಿಗಳು, ಗುತ್ತಿಗೆದಾರರಿಗೆ ಸಿಂಹಸ್ವಪ್ನವಾಗಿ ಕಾಡಿದರು. ಭ್ರಷ್ಟಾಚಾರದ ವಿರುದ್ಧದ ನಡೆಯಿಂದಾಗಿ ಅವರು 'ಚೊಚ್ಚಲೆಚ್ಚರಿಗ (ಜಿಠ್ಝಿಛಿಚ್ಝಿಟಡಿಛ್ಟಿ) ಅಧಿಕಾರಿ'ಯಾಗಿ ಗುರುತಿಸಿಕೊಂಡರು. ಇವರ ಪ್ರಯತ್ನದಿಂದಾಗಿ ಹರಿಯಾಣದ ಅಂದಿನ ಸಿಎಂ ಭೂಪೇಂದ್ರ ಸಿಂಗ್ ಹೂಡಾ, ಅರಣ್ಯ ಸಚಿವ ಹಾಗೂ ಇತರೆ ಹಿರಿಯ ಅಧಿಕಾರಿಗಳು ಇದೀಗ ಸುಪ್ರೀಂ ಕೋರ್ಟ್‌ಗೆ ಅಲೆಯುವಂತಾಗಿದೆ.

ರಾಜ್ಯ ಸರಕಾರದ ಕಿರುಕುಳದಿಂದ ಬೇಸತ್ತ ಚತುರ್ವೇದಿ, ಅಂದಿನ ರಾಷ್ಟ್ರಪತಿ ಪ್ರತಿಭಾ ಪಾಟೀಲ್‌ಗೆ ಮನವಿ ಮಾಡಿಕೊಂಡು, ಕೇಂದ್ರ ಸೇವೆಗೆ ನಿಯೋಜಿಸುವಂತೆ ಕೇಳಿಕೊಂಡರು. ಇದರ ಫಲವಾಗಿ ಅವರು 2012ರಲ್ಲಿ ದೆಹಲಿಯ ಏಮ್ಸ್‌ನ ಜಾಗೃತದಳ ಮುಖ್ಯಸ್ಥರಾಗಿ ನೇಮಕಗೊಂಡರು. ಅಧಿಕಾರ ವಹಿಸಿಕೊಂಡ ಕೆಲವೇ ದಿನಗಳಲ್ಲಿ ಅಲ್ಲಿನ ಭ್ರಷ್ಟಾಚಾರವನ್ನು ನಿಯಂತ್ರಿಸಿ, 200 ಪ್ರಕರಣ ಪತ್ತೆ ಹಚ್ಚಿದರು. ಈ ಪೈಕಿ 87 ಪ್ರಕರಣಗಳಲ್ಲಿ ಚಾರ್ಜ್‌ಶೀಟ್ ಹಾಕಲಾಗಿದ್ದು, 20 ಪ್ರಕರಣಗಳನ್ನು ಸಿಬಿಐ ತನಿಖೆಗೆ ವಹಿಸಲಾಗುತ್ತಿದೆ. ಆದರೆ, 2014ರಲ್ಲಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಸರಕಾರ ಕೂಡ ಇವರ 'ಪ್ರಾಮಾಣಿಕತೆಯ ವೇಗ'ವನ್ನು ತಡೆದುಕೊಳ್ಳಲಿಲ್ಲ. ಇದರ ಪರಿಣಾಮ ಅವರನ್ನು ಜಾಗೃತದಳದ ಜವಾಬ್ದಾರಿಯಿಂದ ಮುಕ್ತಗೊಳಿಸಿ,

ಏಮ್ಸ್‌ನ ಡೆಪ್ಯೂಟಿ ಡೈರೆಕ್ಟರ್ ಹುದ್ದೆಗೆ ಮಾತ್ರ ಸೀಮಿತಗೊಳಿಸಿತು. ಚತುರ್ವೇದಿಯಂಥ ಪ್ರಾಮಾಣಿಕರು ಇನ್ನೂ ಇರುವುದರಿಂದಲೇ ಒಂದಿಷ್ಟು ಭ್ರಷ್ಟಾಚಾರ ಹತೋಟಿಯಲ್ಲಿದೆ. ವ್ಯವಸ್ಥೆಯ ಮೇಲೆ ಜನರ ನಂಬಿಕೆ ಗಟ್ಟಿಯಾಗಲು ಕಾರಣವಾಗುತ್ತಿದೆ. 


* ಮಲ್ಲಿಕಾರ್ಜುನ ತಿಪ್ಪಾರ(publishe in VK on 2 aug 2015- Vyaktigatha)

ಭಾನುವಾರ, ಜುಲೈ 12, 2015

‘ಕಿರು ಸಂದೇಶ’ ಸಾರಿದ ಮ್ಯಾಕ್ಕೊನೆನ್

ಅದು 1984ರ ಸಮಯ. ಡೆನ್ಮಾರ್ಕ್‌ನ ಕೊಪನ್‌ಹೆಗನ್‌ನಲ್ಲಿ ಟೆಲಿಕಾಂ ಕ್ಷೇತ್ರಕ್ಕೆ ಸಂಬಂಸಿದ ಸಮ್ಮೇಳನ ನಡೆಯುತ್ತಿತ್ತುಘಿ. ಬೇರೆ ಬೇರೆ ದೇಶಗಳಿಂದ ಅನೇಕ ಎಂಜಿನಿಯರ್‌ಗಳು ಆಗಮಿಸಿದ್ದರು. ಹೀಗೆ ಸಮ್ಮೇಳನದ ಒಂದು ಮ‘್ಯಾಹ್ನ ಊಟದ ಹೊತ್ತಿಗೆ ಫಿಜಾ ಮೆಲ್ಲುತ್ತಾ ಒಬ್ಬ  ಎಂಜಿನಿಯರ್ ‘ಟೆಕ್ಸ್‌ಟಿಂಗ್’ ಪರಿಕಲ್ಪನೆಯನ್ನು ತೇಲಿ ಬಿಟ್ಟರು. ಅಲ್ಲಿಂದ 8 ವರ್ಷಗಳ ನಂತರ, 160 ಅಕ್ಷರಗಳ ಮಿತಿಯನ್ನೊಳಗೊಂಡ  ‘ಎಸ್‌ಎಂಎಸ್’( Short Message Service) ಅನ್ನು  ಕಂಪ್ಯೂಟರ್‌ನಿಂದ ಮೊಬೈಲ್ ೆನ್‌ಗೆ ರವಾನಿಸಲಾಯಿತು. ಆ ಕಿರು ಸಂದೇಶ ಏನೆಂದರೆ ‘ಮೇರಿ ಕ್ರಿಸ್ಮಸ್’. ಇದು ಜಗತ್ತಿನ ಮೊಟ್ಟ ಮೊದಲ ಎಸ್‌ಎಂಎಸ್.
ಅಂದ ಹಾಗೆ, ಈ ಎಸ್‌ಎಂಎಸ್ ಪರಿಕಲ್ಪನೆಯನ್ನು ತೇಲಿ ಬಿಟ್ಟ ಆ ವ್ಯಕ್ತಿಯ ಹೆಸರು ‘ಮಾಟಿ ಮ್ಯಾಕ್ಕೊನೆನ್‌‘. ಫಿನ್ಲೆಂಡ್‌ನ ಈ ಮಾಟಿ ಅವರಿಗೆ ‘ಾದರ್ ಆ್ ಎಸ್‌ಎಂಎಸ್’ ಎಂಬ ಹೆಸರಿದೆ. ಆದರೆ, ಇದನ್ನು ಅವರೇನೂ ಮನಪೂರ್ವಕವಾಗಿ ಒಪ್ಪಿಕೊಂಡಿದ್ದಲ್ಲಘಿ. ಎಸ್‌ಎಂಎಸ್ ಸಂಶೋ‘ನೆಗೆ 20 ವರ್ಷ ತುಂಬಿದ ಸಮಯದಲ್ಲಿ ಪತ್ರಿಕೆಯೊಂದು ಅದರ ಮೂಲ ಕೃರ್ತು ಹುಡುಕಿಕೊಂಡು ಹೋಗಿತ್ತುಘಿ. ಆಗ ಕಿರು ಸಂದೇಶ ಸಂಶೋ‘ನೆಯ ಇಡೀ ವೃತ್ತಾಂತ ಬಯಲಾಗಿ, ಮ್ಯಾಕ್ಕೊನೆನ್‌ಗೆ ‘ಾದರ್ ಆ್ ಎಸ್‌ಎಂಎಸ್’ ಬಿರುದು ತಗುಲಿತು. ಆದರೆ, ‘‘ಇದರಲ್ಲಿ ನನ್ನೊಬ್ಬನಿದ್ದು ಏನಿಲ್ಲಘಿ. ಎಸ್‌ಎಂಎಸ್ ಸಂಶೋ‘ನೆಯಲ್ಲಿ ಬೇರೆ ಎಂಜಿನಿಯರ್‌ಗಳ ಪರಿಶ್ರಮವೂ ಸಾಕಷ್ಟಿದೆ,’’ ಎಂದು ತುಂಬ ವಿನಮ್ರದಿಂದ ಮಾಟಿ ಹೇಳಿದ್ದರು. ಹಾಗಾಗಿ, ಅವರನ್ನು Reluctant Father of SMS ಎಂದೂ ಕರೆಯುತ್ತಾರೆ.
ಇದೆಲ್ಲ ಯಾಕೆ ಹೇಳಬೇಕಾಯಿತು ಎಂದರೆ, ಜೂನ್ 29ರಂದು ಮಾಟಿ ಮ್ಯಾಕ್ಕೊನೆನ್ ಅವರು ಅಸ್ತಂಗತವಾದರು. ವಿಪರ್ಯಾಸವೆಂದರೆ, ಇಡೀ ಜಗತ್ತಿನ ಸಂವಹನವನ್ನೇ 160 ಅಕ್ಷರಗಳಲ್ಲಿ ಬಂಸಿರುವ ಮಾಟಿ ಅವರ ಸಾವಿನ ಸುದ್ದಿ ಗೊತ್ತಾಗಿದ್ದುಘಿ, ಅವರು ನಿ‘ನವಾಗಿ ಎರಡು ದಿನಗಳ ಬಳಿಕ! ಅನಾರೋಗ್ಯದಿಂದ ಬಳಲುತ್ತಿದ್ದ ಮ್ಯಾಕ್ಕೊನೆನ್ ಅವರಿಗೆ 63 ವರ್ಷ ವಯಸ್ಸಾಗಿತ್ತುಘಿ.
ಇಲ್ಲಿ ಗಮನಿಸಬೇಕಾದ ಮಹತ್ವದ ಸಂಗತಿಯೊಂದಿದೆ. ಇಂದಿನ ಮೊಬೈಲ್ ಸಂವಹನ ಕ್ರಾಂತಿಯಲ್ಲಿ ಎಸ್‌ಎಂಎಸ್‌ಗೆ ಅಗ್ರಸ್ಥಾನವಿದೆ. ಒಂದು ವೇಳೆ, ಮ್ಯಾಕ್ಕೊನೆನ್ ಅವರೇನಾದರೂ ತಮ್ಮ ಈ ಸಂಶೋ‘ನೆಗೆ ಪೇಟೆಂಟ್ ಪಡೆದುಕೊಂಡಿದ್ದರೆ, ಈ ಹೊತ್ತಿಗೆ ಜಗತ್ತಿನ ಕೋಟ್ಯಪತಿಗಳಲೊಬ್ಬರಾಗಿರುತ್ತಿದ್ದರು. ಆದರೆ, ಅಂಥ ಪ್ರಯತ್ನಕ್ಕೆ ಅವರು ಮುಂದಾಗಲಿಲ್ಲಘಿ. ಈ ಬಗ್ಗೆ 2012ರಲ್ಲಿ ಬಿಬಿಸಿಗೆ ಎಸ್‌ಎಂಎಸ್ ಮೂಲಕವೇ ನೀಡಿದ ಸಂದರ್ಶನವೊಂದರಲ್ಲಿ ಅವರು, ‘‘ಎಸ್‌ಎಂಎಸ್ ಏನೂ ಪೇಟೆಂಟ್ ಮಾಡಿಸಿಕೊಳ್ಳಬೇಕಾದಷ್ಟು ಗಮನಾರ್ಹವಾದ ಸಂಶೋ‘ನೆಯಲ್ಲಘಿ. ಅದರಲ್ಲಿ ಪೂರ್ತಿಯಾಗಿ ನನ್ನ ಒಬ್ಬನದ್ದೇನೂ ಪಾತ್ರವಿಲ್ಲಘಿ. ಹಾಗಾಗಿ ಪೇಟೆಂಟ್ ಮಾಡಿಸಿಕೊಳ್ಳಲಿಲ್ಲ,’’ ಎಂದಿದ್ದರು. ಈ ಮಾತುಗಳಲ್ಲೇ ಅವರ ವಿನಮ್ರತೆ ಎದ್ದು ಕಾಣುತ್ತದೆ.  ಎಸ್‌ಎಂಎಸ್ ಪರಿಕಲ್ಪನೆ ಪೂರ್ತಿಯಾಗಿ ಮ್ಯಾಕ್ಕೊನೆನ್ ಅವರದ್ದಾದರೂ ಅದನ್ನು ಅಭಿವೃದ್ಧಿಪಡಿಸುವಲ್ಲಿ ಫ್ರೀಡ್ಮನ್‌ಹಿಲೆಬ್ರಾಂಡ್ ಮತ್ತು ನೀಲ್ ಪಾಪ್‌ವರ್ಥ್ ಅವರ ಕಾಣಿಕೆಯೂ ಸಾಕಷ್ಟಿದೆ. ನೀಲ್ ಅವರೇ ಜಗತ್ತಿನ ಮೊಟ್ಟ ಮೊದಲು ಎಸ್‌ಎಂಎಸ್ ಕಳುಹಿಸಿದ್ದು ಎಂಬುದು ಉಲ್ಲೇಖಿಸಲೇಬೇಕಾದ ಅಂಶ.
ಕಳೆದ 20 ವರ್ಷಗಳ ಅವಯಲ್ಲಿ ಎಣಿಕೆ ಇಲ್ಲದಷ್ಟು ಎಸ್‌ಎಂಎಸ್‌ಗಳು ರವಾನೆಯಾಗಿವೆ. ಅನೇಕ ತುರ್ತು ಪರಿಸ್ಥಿತಿಗಳನ್ನು ಎಸ್‌ಎಂಎಸ್‌ನಿಂದ ನಿ‘ಾಯಿಸಲಾಗಿದೆ. ಇತ್ತೀಚಿನ ಮೊಬೈಲ್ ಸಂವಹನದಲ್ಲೂ ಅನೇಕ ಕ್ರಾಂತಿಗಳಾಗಿವೆ. ‘ಟಚ್‌ಸ್ಕ್ರೀನ್ ಮೊಬೈಲ್’ ಯುಗದಲ್ಲಿ ವಾಟ್ಸ್‌ಆ್ಯಪ್, ಟ್ವಿಟರ್, ೇಸ್‌ಬುಕ್‌ಗಳು ಜನಪ್ರಿಯವಾಗಿರಬಹುದು. ಆದರೆ, ಈ ಎಲ್ಲ ಆ್ಯಪ್‌ಗಳು ನೀಡುವ ಕಿರುಸಂದೇಶಗಳು ಎಸ್‌ಎಂಎಸ್‌ನ ಮತ್ತೊಂದು ರೂಪವಷ್ಟೇಘಿ. ಅದರ್ಥ ಇವುಗಳಿಗೆ ‘ಮೂಲ ಸಂದೇಶ’ವೇ ಈ ಎಸ್‌ಎಂಎಸ್. ಹೊಸ ಮಾದರಿಯ ಆ್ಯಪ್‌ಗಳಿಂದಾಗಿ ಎಸ್‌ಎಂಎಸ್ ಸಂವಹನ ಮಾದರಿಯೂ ಅಳಸಿಹೋಗಲಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಇದು ಕೊಂಚ ಮಟ್ಟಿಗೆ ನಿಜವೂ ಹೌದು. ಇತ್ತೀಚಿನ ಅ‘್ಯಯನ ವರದಿಗಳ ಪ್ರಕಾರ, 2017ರ ಹೊತ್ತಿಗೆ ೇಸ್‌ಬುಕ್, ವಾಟ್ಸ್‌ಆ್ಯಪ್ ಸೇರಿದಂತೆ ಇತರೆ ಆ್ಯಪ್‌ಗಳ ಮೂಲಕ 32 ಲಕ್ಷ ಕೋಟಿ ಸಂದೇಶಗಳು ರವಾನೆಯಾಗಲಿವೆ. ಇದೇ ವೇಳೆ, ಎಸ್‌ಎಂಎಸ್ ಹರಿದಾಟ ಕೇವಲ 7.89 ಲಕ್ಷ ಕೋಟಿ ಮಾತ್ರಘಿ.  2013ರಲ್ಲಿ ಎಸ್‌ಎಂಎಸ್ ಸಂದೇಶದ ಪ್ರಮಾಣ ಅದರ ಉತ್ತುಂಗಕ್ಕೆ  ತಲುಪಿತ್ತುಘಿ. ಆ ವರ್ಷ 8.3 ಲಕ್ಷ ಕೋಟಿ ಸಂದೇಶಗಳು ರವಾನೆಯಾಗಿದ್ದವು.  ಬಿಬಿಸಿಗೆ ನೀಡಿದ ಸಂದರ್ಶನದಲ್ಲಿ ಮ್ಯಾಕ್ಕೊನೆನ್ ಅವರು, ‘‘ಮುಂದಿನ 20 ವರ್ಷ ಮಾತ್ರವಲ್ಲ ಎಂದಿಗೂ ಎಸ್‌ಎಂಎಸ್ ಇದ್ದೇ ಇರುತ್ತದೆ. ಆದರೆ, ಅದರ ಸ್ವರೂಪ ಬೇರೆಯದ್ದಾಗಿರಬಹುದು ಅಷ್ಟೇ,’’ ಎಂದಿದ್ದರು. ಅವರ ಮಾತು ಇದೀಗ ನಿಜವಾಗುತ್ತಿದೆ.
1992ರಲ್ಲಿ ಜಗತ್ತಿನ ಮೊದಲ ಎಸ್‌ಎಂಎಸ್ ರವಾನೆಯಾದರೂ ಕೂಡ ಅದರ  ಬಳಕೆಯ ಜನಪ್ರಿಯತೆ ಹೆಚ್ಚಾಗಿದ್ದು 1994ರಲ್ಲಿ. ನೊಕಿಯಾ ಕಂಪನಿ ಆ ವರ್ಷ ಬಿಡುಗಡೆ ಮಾಡಿದ ‘ನೊಕಿಯಾ 2010 ಮೊಬೈಲ್ ೆನ್’ ಎಸ್‌ಎಂಎಸ್ ಬಳಕೆಗೆ ಅನುಕೂಲವಾಗುವಂತೆ ಇತ್ತುಘಿ. ಅಲ್ಲಿಂದಾಚೆಗೆ ಎಸ್‌ಎಂಎಸ್ ತುಂಬ ಜನಪ್ರಿಯವಾಗಿ, ಮೊಬೈಲ್ ಸಂವಹನದಲ್ಲಿ ಬೃಹತ್ ಕ್ರಾಂತಿಯೇ ನಡೆದಿದ್ದು ಈಗ ಇತಿಹಾಸ.
--
ಮಾಟಿ ಮ್ಯಾಕ್ಕೊನೆನ್ ಅವರು 1952 ಏಪ್ರಿಲ್ 16ರಂದು ಫಿನ್ಲೆಂಡ್‌ನ ಸೌಮಾಸೊಮಾಯಿ ಎಂಬ ಪಟ್ಟಣದಲ್ಲಿಘಿ ಜನಿಸಿದರು. ಅವರು 1976ರಲ್ಲಿ ಊಲು ಟೆಕ್ನಿಕಲ್ ಕಾಲೇಜಿನಿಂದ ಎಲೆಕ್ಟ್ರಿಕಲ್ ಎಂಜನಿಯರಿಂಗ್ ಪದವಿ ಪಡೆದು, ಪೋಸ್ಟಲ್ ಏಜೆನ್ಸಿ(ಪಿಟಿಎಲ್)ಯಲ್ಲಿ ಸಿಸ್ಟಮ್ ಎಂಜಿನಿಯರ್ ಆಗಿ ತಮ್ಮ ವೃತ್ತಿಯನ್ನು ಆರಂಭಿಸಿದರು. ಇದೇ ಸಮಯದಲ್ಲಿ  ಎನ್‌ಎಂಟಿ ಮೊಬೈಲ್ ನೆಟ್‌ವರ್ಕ್‌ಗೆ ವೈರ್‌ಲೆಸ್ ಕಮ್ಯೂನಿಕೇಷನ್ ಸರ್ವಿಸ್ ಅಭಿವೃದ್ಧಿಪಡಿಸಿಕೊಟ್ಟರು. ಇದಲ್ಲದೆ 1984ರಿಂದ 1988ರವರೆಗೂ ಮ್ಯಾಕ್ಕೊನೆನ್ ಅವರು ಪಿಟಿಎಲ್‌ನ ಉಪಾ‘್ಯಕ್ಷರೂ ಆಗಿದ್ದರು. ಈ ಅವಯಲ್ಲಿ ಅವರು ಜಿಎಸ್‌ಎಂ ಟೆಕ್ನಾಲಜಿ ಅಭಿವೃದ್ಧಿಯ ತಂಡದಲ್ಲೂ ಕೆಲಸ ಮಾಡಿದ್ದರು. ಬಳಿಕ 1989ರಲ್ಲಿ ಮೊಬೈಲ್ ಯೂನಿಟ್‌ನ ಅ‘್ಯಕ್ಷರಾಗಿ, ಅದನ್ನು ‘ಟೆಲಿಕಾಂ ಫಿನ್ಲೆಂಡ್’ ಎಂದು ಮರು ನಾಮಕರಣ ಮಾಡಿದರು. ಹೀಗೆ ಅವರು ತಮ್ಮ ಕ್ಷೇತ್ರದಲ್ಲಿ ಅಗಾ‘ವಾದ ಸಾ‘ನೆ ಮಾಡುತ್ತ ಒಂದೊಂದೇ ಹುದ್ದೆಗಳನ್ನು ಅಲಂಕರಿಸಿ, ಅವುಗಳಿಗೆ ನ್ಯಾಯ ಸಲ್ಲಿಸಿದರು. 1995ರಿಂದ 2000ವರೆಗೂ ಮ್ಯಾಕ್ಕೊನೆನ್ ಅವರು ಮೊಬೈಲ್ ಕಮ್ಯೂನಿಕೇಷನ್ ಗ್ರೂಪ್‌ನ ಉಪಾ‘್ಯಕ್ಷರಾದರು. 2000ರಲ್ಲಿ ಕಂಪನಿಯ ಮೊಬೈಲ್ ಇಂಟರ್ನೆಟ್ ಯೂನಿಟ್‌ನ ಅ‘್ಯಕ್ಷ ಹಾಗೂ ಆಡಳಿತ ಮಂಡಳಿಯ ನಿರ್ದೇಶಕರಾಗಿ ಸ್ವಲ್ಪ ಕಾಲದವರೆಗೂ ಇದ್ದರು. ಈ ಸಮಯದಲ್ಲಿ ಯೂನಿಟ್‌ನ ಹೆಸರನ್ನು ‘ಸೊನೆರಾ’ ಎಂದು ಬದಲಿಸಿದರು. ಇದಾದ ಬಳಿಕ ಅವರು ನೊಕಿಯಾ ನೆಟ್‌ವರ್ಕ್ಸ್ ಪ್ರೊೆಷನಲ್ ಸರ್ವಿಸ್‌ಗೆ ಯೂನಿಟ್ ನಿರ್ದೇಶಕರಾಗಿ ಸೇರ್ಪಡೆಯಾಗಿ, 2003ರಲ್ಲಿ  ಫಿನ್ನೆಟ್ ಒಯ್‌ನ ಸಿಇಒ ಹುದ್ದೆಗೇರಿದರು. ಬಳಿಕ  2005ರಲ್ಲಿ ನಿವೃತ್ತರಾದರು. ಇದಿಷ್ಟು ಅವರ ವೃತ್ತಿಗೆ ಸಂಬಂಸಿದ ಟೆಕ್ನಿಕಲ್ ಮಾಹಿತಿ.
--
ಕೆಲವರು ಎಷ್ಟೇ ಅದ್ಭುತ ಕಾರ್ಯಗಳನ್ನು ಮಾಡಿದರೂ ಎಲೆಮರೆಯ ಕಾಯಿಯಂತೆ ಇದ್ದು ಬಿಡುತ್ತಾರೆ. ಈ ಸಾಲಿಗೆ ಮಾಟಿ ಮ್ಯಾಕ್ಕೊನೆನ್ ಅವರಿಗೆ ಅಗ್ರಸ್ಥಾನ. ಸಂವಹನದಲ್ಲಿ ಕ್ರಾಂತಿಕಾರಿ ಸಂಶೋ‘ನೆ ಮಾಡಿದರೂ ಸಾರ್ವಜನಿಕ ಜೀವನದಲ್ಲಿ ಅವರು ಲೋ ಪ್ರೊೈಲ್ ವ್ಯಕ್ತಿಯಾಗಿಯೇ ಇದ್ದುಬಿಟ್ಟರು. ಇದರಿಂದಾಗಿ ಏನೋ ಅವರಿಗೆ ಸಲ್ಲಬೇಕಾದ ಗೌರವ ಸಲ್ಲಲಿ, ಪ್ರಶಸ್ತಿಗಳು ಅವರನ್ನು ಹುಡುಕೊಂಡು ಬರಲಿಲ್ಲಘಿ. ಅವರ ಜೀವಿತಾವಯಲ್ಲಿ ಸಿಕ್ಕ ಪ್ರಮುಖ ಗೌರವ ಎಂದರೆ The economist Innovation  award ಮಾತ್ರಘಿ. 2008ರಲ್ಲಿ Computing and Telecommunication ವಿ‘ಾಗದಲ್ಲಿ ಅವರಿಗೆ ಈ ಪ್ರಶಸ್ತಿ ನೀಡಲಾಯಿತಷ್ಟೇಘಿ. ಕೆಲವು ವ್ಯಕ್ತಿಗಳನ್ನು ಅವರಿಗೆ ಸಿಕ್ಕ ಪ್ರಶಸ್ತಿಘಿ, ಗೌರವಗಳಿಂದಲೇ ಅಳೆಯಲು ಸಾ‘್ಯವಿಲ್ಲಘಿ. ಅದೆಲ್ಲವನ್ನೂ ಮೀರಿ ಬೆಳೆದು ಬಿಡುತ್ತಾರೆ. ಇದಕ್ಕೆ ಮಾಟಿ ಮ್ಯಾಕ್ಕೊನೆನ್ ಕೂಡ ಹೊರತಲ್ಲಘಿ. ಎಲ್ಲಿವರೆಗೂ ನಾವು ಮೊಬೈಲ್‌ಗಳಲ್ಲಿ ಎಸ್‌ಎಂಎಸ್ ಅನ್ನು ಕಳುಹಿಸುತ್ತೇವೋ ಅಲ್ಲಿವರೆಗೂ ಅವರು ಅಜರಾಮರರಾಗಿಯೇ ಇರುತ್ತಾರೆ. ಇದರಲ್ಲಿ ಯಾವುದೇ ಸಂದೇಹವಿಲ್ಲ.

- Mallikarjun Tippar
(This article published on VK. (12 July 2015)

ಭಾನುವಾರ, ಮೇ 24, 2015

ಅರ್ಥ ಕಳೆದುಕೊಂಡ ‘ಸಬ್ ಕಾ ಸಾಥ್’

‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್’ ಮಂತ್ರ ದೊಂದಿಗೆ
ನರೇಂದ್ರ ಮೋದಿ ಈ ದೇಶದ ಪ್ರಧಾನಿಯಾದದ್ದು.
ಆದರೆ, ವರ್ಷದ ಅವಧಿಯಲ್ಲಿ ‘ಸಬ್ ಕಾ ಸಾಥ್’ ಅನ್ನುವ
ಘೋಷಣೆ ಯಾಕೋ ಅಷ್ಟೊಂದು ಹೊಂದಾಣಿಕೆ
ಯಾಗುತ್ತಿಲ್ಲ. ಅಭಿವೃದಿಟಛಿ ಅಜೆಂಡಾ, ಯುವಕರೇ ದೇಶದ
ಆಸ್ತಿ ಎಂದು ಹುರಿದುಂಬಿಸಿಕೊಂಡು ಬಂದ ಪ್ರಧಾನಿ
ಮೋದಿ, ಒಂದಿಷ್ಟು ಹೊಸ ಆಶಾ ಕಿರಣ ಬೀರಲು
ಕಾರಣವಾಗಿದ್ದರು ಎಂಬುದಂತೂ ನಿಜ. ಆದರೆ, ಇದೇ
ಮಾತನ್ನು ಅವರು ಪ್ರತಿನಿಧಿಸುವ ಬಿಜೆಪಿ, ಆರ್‌ಎಸ್‌ಎಸ್
ಹಾಗೂ ಅದರ ಸಹವರ್ತಿ ಸಂಸ್ಥೆಗಳಿಗೆ ಅನ್ವಯಿಸಲಾಗದು.
ಅವರದ್ದೇ ಸಚಿವ ಸಂಪುಟದ ಗಿರಿರಾಜ್ ಸಿಂಗ್,
ಸಾಧ್ವಿ ನಿರಂಜನಾ ಜ್ಯೋತಿ ಸೇರಿದಂತೆ ಸಂಸದರಾದ ಸಾಕ್ಷಿ
ಮಹಾರಾಜ್, ಯೋಗಿ ಆದಿತ್ಯನಾಥ್, ಹಿರಿಯ ನಾಯಕ
ಸುಬ್ರಹ್ಮಣ್ಯ ಸ್ವಾಮಿ ಸೇರಿದಂತೆ ಅನೇಕರು, ‘ಅನೇಕ
ಬೇಡವಾದ’ ಮಾತುಗಳನ್ನಾಡಿದ್ದಾರೆ. ಬಿಜೆಪಿ ಅಧಿಕಾರಕ್ಕೆ
ಬಂದರೆ ಅಲ್ಪಸಂಖ್ಯಾತರಲ್ಲಿ ಒಂದು ಅಳಕು ಇದ್ದೇ
ಇರುತ್ತದೆ. ಮೋದಿ ಪ್ರಚಾರದಲ್ಲಿ ‘ಸಬ್ ಕಾ ಸಾಥ್,
ಸಬ್ ಕಾ ವಿಕಾಸ್’ ಮಂತ್ರ ಪಠಿಸುತ್ತಾ ಆ ಅಳಕನ್ನು ದೂರ
ಮಾಡಲು ಯತ್ನಿಸಿದ್ದರು. ಆದರೆ, ಅಧಿಕಾರಕ್ಕೆ ಬಂದ
ಮೇಲೆ ಅವರು, ಅವರದ್ದೇ ಪಕ್ಷದ ಕೆಲವರ ಮಾತಿನ
ಮೇಲೆ ಕಡಿವಾಣ ಹಾಕಲು ವಿಫಲರಾದರೂ ಎಂಬುದು
ಈ ಒಂದು ವರ್ಷದಲ್ಲಂತೂ ಸುಸ್ಪಷ್ಟ. ಅವರ ಈ ‘ಮೌನ’
ಕೂಡಾ ಇನ್ನೊಂದಿಷ್ಟು ಆಕ್ಷೇಪಾರ್ಹ, ಭಯಭೀತ,
ದ್ವೇಷಪೂರಿತವಾಗಿ ಮಾತನಾಡುವವರಿಗೆ ಪ್ರಚೋದನೆ
ನೀಡಿದಂತಿತ್ತು ಎನ್ನುವುದು ವಿಶ್ಲೇಷಣೆ. ಹಾಗೆ
ನೋಡಿದರೆ, ಇದು ಸುಳ್ಳಲ್ಲ. ಸಾದ್ವಿ ನಿರಂಜನಾ ಜ್ಯೋತಿ
‘ಹರಾಮ್‌ಜಾದೆ’ ಹಾಗೂ ಗಿರಿರಾಜ್ ಸಿಂಗ್ ಅವರು
ಸೋನಿಯಾ ಗಾಂಧಿ ವಿರುದಟಛಿ ಮಾಡಿದ ಜನಾಂಗೀಯ
ಆಕ್ಷೇಪಾರ್ಹ ಟೀಕೆಗೆ ಸಂಬಂಧಿಸಿದಂತೆ ವ್ಯಾಪಕ ಒತ್ತಡ
ಎದುರಾದಾಗ ಮಾತ್ರ ಬಾಯಿಬಿಟ್ಟರೇ ಹೊರತು,
ಇನ್ನುಳಿದವರ ಮಾತುಗಳ ಬಗ್ಗೆ ತಲೆ ಕೆಡಿಸಿಕೊಳ್ಳಲಿಲ್ಲ!
ಘರ್ ವಾಪಸಿ, ಮುಸ್ಲಿಮರಿಗೆ ಮತದಾನ ಹಕ್ಕು
ನಿರಾಕರಣೆ, ಉತ್ತರಪ್ರದೇಶದಲ್ಲಿನ ಲವ್ ಜಿಹಾದ್,
ಹರ್ಯಾಣ ಮತ್ತು ದೆಹಲಿಗಳಲ್ಲಿ ನಡೆದ ಚರ್ಚ್‌ಗಳ
ಮೇಲೆ ದಾಳಿ.. ಹೀಗೆ ಅನೇಕ ‘ಬೇಡವಾದ ಸಂಗತಿಗಳು’
ಘಟಿಸಿದರೂ ಅಥವಾ ಅವರ ಕಣ್ಣಮುಂದೆ ನಡೆದರೂ
ಅವು ತಪ್ಪು ಎನ್ನುವಂಥ ಒಂದೇ ಒಂದು ಸಂದೇಶವನ್ನು
ರವಾನಿಸಲಿಲ್ಲ ಎಂಬ ದೂರು ಕೆಲವು
ಸಮುದಾಯಗಳಲ್ಲಿದೆ. ಎಲ್ಲಕ್ಕಿಂತ ಹೆಚ್ಚಾಗಿ ಸಂಸದ ಸಾಕ್ಷಿ
ಮಹಾರಾಜ್ ಗಾಂಧಿ ಹಂತಕ ‘ನಾಥೂರಾಮ್ ಗೊಡ್ಸೆ
ಒಬ್ಬ ದೇಶಭಕ್ತ’ ಎಂದರೂ ಯಾವುದೇ ಪ್ರತಿಕ್ರಿಯೆ
ವ್ಯಕ್ತವಾಗಲಿಲ್ಲ. ಇನ್ನೂ ವಿಚಿತ್ರ ಎಂದರೆ, ನರೇಂದ್ರ
ಮೋದಿ ಅವರು ಪ್ರತಿ ವಿದೇಶ ಪ್ರವಾಸದಲ್ಲೂ ಮಹಾತ್ಮ
ಗಾಂಧಿ ಹಾಗೂ ಅವರ ಜೀವನವೇ ನಮಗೆ ಆದರ್ಶ,
ಅವರು ಹಾಕಿಕೊಟ್ಟ ಮಾರ್ಗದಲ್ಲಿ ಸಾಗಬೇಕೆಂಬ
ಸಂದೇಶ ಸಾರುತ್ತಾರೆ.
ಅಷ್ಟೇ ಅಲ್ಲದೆ, ಮಹಾತ್ಮ ಗಾಂಧಿ ಜಯಂತಿಗೆ ‘ಸ್ವಚ್ಛ
ಭಾರತ್ ಆಂದೋಲನ’ವನ್ನೇ ಆರಂಭಿಸುತ್ತಾರೆ.
ಅವರದ್ದೇ ಪಕ್ಷದ ಸಂಸದರು ಮಾತ್ರ ಗಾಂಧಿಯನ್ನು
‘ಖಳನಾಯಕ’ನ ರೀತಿ ಬಿಂಬಿಸುತ್ತಾರೆ. ಗಾಂಧಿಯನ್ನು
ಕೊಂದವರನ್ನು ‘ದೇಶಭಕ್ತ’ ಎಂದು ‘ಗುಡಿ
ಕಟ್ಟಲು’ ಮುಂದಾಗುತ್ತಾರೆ. ಇದೆಲ್ಲವೂ ಮೋದಿ
ಅಧಿಕಾರಕ್ಕೆ ಬಂದ ಬಳಿಕ ನಡೆದ ‘ಮಾತಿನ
ಮಲ್ಲಯುದಟಛಿ’ಗಳು. ಇವುಗಳಲ್ಲಿ ಕೆಲವು ಚಟುವಟಿಕೆ
ಗಳು ಮೊದಲಿಂದಲೂ ಇದ್ದವು. ಆದರೆ, ಘರ್
ವಾಪಸಿಯಂಥ ಕಾರ್ಯಕ್ರಮಗಳು ಈ ಒಂದು ವರ್ಷದ
ಅವಧಿಯಲ್ಲಿ ಹೆಚ್ಚು ಪ್ರಚಾರಕ್ಕೆ ಬಂದವು ಎಂಬುದು
ಕೂಡಾ ಸುಳ್ಳೇನೂ ಅಲ್ಲ.
---------------

ನಾವು ಪ್ರತಿ ಮಸೀದಿಯಲ್ಲೂ ಗೌರಿ, ಗಣೇಶ ಮತ್ತು
ನಂದಿಯನ್ನು ಪ್ರತಿಷ್ಠಾಪಿಸುತ್ತೇವೆ.

ಲವ್ ಜಿಹಾದ್‌ನಲ್ಲಿ ಒಬ್ಬ ಹಿಂದೂ ಹುಡುಗಿ
ಮತಾಂತರ ಗೊಂಡರೆ, ೧೦೦ ಮುಸ್ಲಿಮ
ಹುಡುಗಿಯರು ಹಿಂದೂ ಧರ್ಮಕ್ಕೆ
ಮತಾಂತರಗೊಳ್ಳುವಂತೆ ಮಾಡಬೇಕು.
- ಯೋಗಿ ಆದಿತ್ಯನಾಥ್  ಬಿಜೆಪಿ ಸಂಸದ

ಜ್ಯಾತ್ಯತೀತ ಹಣೆಪಟ್ಟಿಯಿಂದಾಗಿ ನಾವು
ಬಳಲುತ್ತಿದ್ದೇವೆ. ಸಾಮಾಜಿಕ ಬೆದರಿಕೆಗೆ
ಕಾರಣವಾಗಿರುವ ಲವ್ ಜಿಹಾದ್ ಬಗ್ಗೆ ಜನರಲ್ಲಿ ಜಾಗೃತಿ
ಮೂಡಿಸಬೇಕಿದೆ. ಅದರಲ್ಲಿ ಸೋಲುತ್ತೇವೆಯೋ
ಅಥವಾ ಗೆಲ್ಲುತ್ತೇವೆಯೋ ಎಂಬುದು ನಂತರದ ಮಾತು.

ಒಂದು ವೇಳೆ ರಾಜೀವ್ ಗಾಂಧಿ ಅವರು
ಸೋನಿಯಾ ಗಾಂಧಿ ಬದಲಾಗಿ ನೈಜೀರಿಯನ್
ಮದುವೆಯಾಗಿದ್ದರೆ, ಕಾಂಗ್ರೆಸಿಗರು ತಮ್ಮ
ಅಧ್ಯಕ್ಷೆಯನ್ನಾಗಿ ಒಪ್ಪಿಕೊಳ್ಳುತ್ತಿದ್ದರೆ?
- ಗಿರಿರಾಜ್ ಸಿಂಗ್, ಕೇಂದ್ರ ಸಚಿವ

ದೆಹಲಿಯಲ್ಲಿ ಸರ್ಕಾರ ರಾಮನ ಮಕ್ಕಳಿಂದ ಕೂಡಿರ
ಬೇಕಾ ಅಥವಾ ಇತರರಿಂದ (ಸೂ.. ಮಕ್ಕಳಿಂದ)
ಕೂಡಿರಬೇಕಾ ಎಂದು ನೀವು ನಿರ್ಧರಿಸಬೇಕು.
- ನಿರಂಜನ ಜ್ಯೋತಿ, ಕೇಂದ್ರ ಸಚಿವೆ

ಹಿಂದೂ ಮಹಿಳೆಯರು ಕನಿಷ್ಠ ನಾಲ್ಕು ಮಕ್ಕಳನ್ನು
ಹೆರಬೇಕು. ಅವುಗಳಲ್ಲಿ ಒಂದು ಮಗುವನ್ನು ಸೇನೆಗೆ
ಕಳುಹಿಸಬೇಕು. ಮತ್ತೊಂದು ಮಗುವನ್ನು ಧಾರ್ಮಿಕ
ಮತ್ತು ಬೋಧಕರಿಗೆ ನೀಡಬೇಕು.

ಮಹಾತ್ಮ ಗಾಂಧಿಯಷ್ಟೇ ನಾಥೂರಾಮ್ ಗೋಡ್ಸೆ
ಕೂಡಾ ದೇಶಭಕ್ತ. ಅವರೊಬ್ಬ ಹುತಾತ್ಮ.
- ಸಾಕ್ಷಿ ಮಹಾರಾಜ್, ಬಿಜೆಪಿ ಸಂಸದ

ಮುಸ್ಲಿಮರಿಗೆ ನೀಡಿರುವ ಮತದಾನ ಹಕ್ಕನ್ನು
ವಾಪಸ್ ಪಡೆಯಬೇಕು.
- ಸಂಜಯ್ ರಾವತ್, ಸಂಸದ, ಶಿವಸೇನೆ

ಮತ್ತೆ ಕೇಳಿದ ಸ್ಕಾಟ್ಲೆಂಡ್ ಜನಮತ ಗಣನೆ ಕೂಗು

ಸ್ಕಾಟ್ಲೆಂಡ್‌ನಲ್ಲಿ ಮತ್ತೊಮ್ಮೆ ಜನಮತಗಣನೆ ನಡೆಯಲಿದೆಯಾ?
ಇತ್ತೀಚೆಗೆ ನಡೆದ ಸಾರ್ವತ್ರಿಕ ಬ್ರಿಟನ್ ಚುನಾವಣೆಯ ಫಲಿತಾಂಶ
ಗಮನಿಸಿದರೆ ಇಂಥದೊಂದು ಪ್ರಶ್ನೆ ಹುಟ್ಟಿಕೊಳ್ಳುವುದು ಸಹಜ. ಸ್ಕಾಟಿಷ್
ನ್ಯಾಷನಲಿಸ್ಟ್ ಪಾರ್ಟಿ(ಎಸ್‌ಎನ್‌ಪಿ) ಸ್ಕಾಟ್ಲೆಂಡ್‌ನ ೫೯ ಸ್ಥಾನಗಳ ಪೈಕಿ ೫೬
ಗೆಲ್ಲುವ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದು, ಈ ಅನುಮಾನಕ್ಕೆ ಕಾರಣ.
‘ಸದ್ಯಕ್ಕೆ ತಮಗೆ ಸಿಕ್ಕಿರುವ ಈ ಜಯ ಸ್ಕಾಟ್ಲೆಂಡ್‌ನ ಸ್ವಾತಂತ್ರ್ಯಕ್ಕೆ ದೊರೆತ
ಜನಾದೇಶವಲ್ಲ. ಆದರೆ, ವೆಸ್ಟ್‌ಮಿನಿಸ್ಟರ್ ಸ್ಕಾಟ್ಲೆಂಡ್‌ನ ಕೂಗನ್ನು
ಹಿಂದೆಂದಿಗಿಂತಲೂ ಅತ್ಯಂತ ಪರಿಣಾಮಕಾರಿಯಾಗಿ ಕೇಳಿಸಿಕೊಳ್ಳಬೇಕಾದ
ಅನಿವಾರ್ಯತೆ ಸೃಷ್ಟಿಸಿದೆ’ ಎಂದು ಎಸ್‌ಎನ್‌ಪಿ ನಾಯಕಿ ನಿಕೋಲ್
ಸ್ಟುರ್ಜೋನ್ ಹೇಳಿರುವುದು ಅನೇಕ ರಾಜಕೀಯ ಲೆಕ್ಕಾಚಾರಗಳಿಗೆ ದಾರಿ
ಮಾಡಿ ಕೊಟ್ಟಿದೆ. ಇದೇ ಮಾತನ್ನು ಎರಡನೇ ಬಾರಿ ಅಧಿಕಾರಕ್ಕೇರಿರುವ
ಪ್ರಧಾನಿ ಡೇವಿಡ್ ಕೆಮರಾನ್ ಕೂಡಾ ಪುಷ್ಠೀಕರಿಸುತ್ತಾರೆ. ಮತ್ತೆ ಅವರ
ಮುಂದಿರುವ ತಕ್ಷಣದ ಸವಾಲು ಕೂಡಾ ಸ್ಕಾಟ್ಲೆಂಡ್‌ಗೆ ಹಸ್ತಾಂತರಿಸಬೇಕಾಗಿರುವ
ಅಧಿಕಾರಗಳ ಪರಾಮರ್ಶೆಯೂ ಹೌದು.
ಈ ಇಬ್ಬರು ನಾಯಕರ ಸದ್ಯದ ಮನಸ್ಥಿತಿಗೆ ಅನುಗುಣವಾಗಿ
ಹೇಳುವುದಾದರೆ, ಇಂಗ್ಲೆಂಡ್ ಒಕ್ಕೂಟದಿಂದ ಸ್ಕಾಟ್ಲೆಂಡ್ ಸಿಡಿದು ಹೋಗುವ
ಯತ್ನ ಸದ್ಯಕ್ಕೆ ಘಟಿಸದಿರಬಹುದು. ಆದರೆ, ಅಂಥದೊಂದು ಸಾಧ್ಯತೆಯನ್ನಂತೂ
ಖಡಾಖಂಡಿತವಾಗಿ ತಳ್ಳಿ ಹಾಕುವಂತಿಲ್ಲ. ಇದಕ್ಕಾಗಿ ಬಹಳ ದಿನಗಳವರೆಗೂ
ಕಾಯಬೇಕಿಲ್ಲ. ಯಾಕೆಂದರೆ, ಮುಂದಿನ ವರ್ಷ ಅಂದರೆ, ೨೦೧೬ರ ಮೇ
ತಿಂಗಳಲ್ಲಿ ಸ್ಕಾಟ್ಲೆಂಡ್ ಸಂಸತ್ತಿಗೆ ಚುನಾವಣೆ ನಡೆಯಲಿದೆ. ಆಗ
ಖಂಡಿತವಾಗಿಯೂ ಎಸ್‌ಎನ್‌ಪಿ ಜನಮತ ಗಣನೆಯನ್ನು ತನ್ನ ಪ್ರಣಾಳಿಕೆಯಲ್ಲಿ
ಸೇರಿಸಿ, ಚುನಾವಣಾ ಅಖಾಡಕ್ಕಿಳಿಯುವುದು ಈಗಾಗಲೇ ಜನಜನಿತ.
ಹಾಗಾಗಿ, ಅಬ್ಬಾಬ್ಬ ಅಂದರೆ ಇನ್ನೊಂದು ವರ್ಷದ ಮಟ್ಟಿಗೆ ಸ್ಕಾಟ್ಲೆಂಡ್
ಸ್ವತಂತ್ರವಾಗುವ ಪ್ರಯತ್ನ ಮುಂದಕ್ಕೆ ಹೋಗಬಹುದು. ಈ ಅವಧಿಯಲ್ಲಿ
ಕೆಮರಾನ್ ನೇತೃತ್ವದ ಹೊಸ ಸರ್ಕಾರ ಯಾವ ರೀತಿ ಮತ್ತು ಹೇಗೆ ಸ್ಕಾಟ್ಲೆಂಡ್
ಸಮಸ್ಯೆಯನ್ನು ನಿರ್ವಹಿಸುತ್ತದೆ ಎಂಬುದರ ಮೇಲೆ ‘ಜನಮತಗಣನೆ’
ಹಣೆಬರಹ ನಿಂತಿದೆ.
ಇನ್ನೂ ವಿವರವಾಗಿ ನೋಡುವು ದಾದರೆ, ಬ್ರಿಟನ್ ಚುನಾವಣೆ ಫಲಿತಾಂಶ
ಪ್ರಕಟವಾಗುತ್ತಿದ್ದಂತೆ ಇಂಗ್ಲೆಂಡ್‌ನ ಬಹುತೇಕ ಪತ್ರಿಕೆಗಳು ತಮ್ಮ
ಸಂಪಾದಕೀಯನ್ನು ಒಂದೇ ಧ್ವನಿಯಲ್ಲಿ ಕೇಂದ್ರೀಕರಿಸಿದ್ದವು. ಡೇವಿಡ್
ಕೆಮರಾನ್ ಅಖಂಡ ಇಂಗ್ಲೆಂಡ್‌ನ ಕೊನೆಯ ಪ್ರಮುಖ ನಾಯಕರಾಗಲಿದ್ದಾರೆ
ಎಂಬ ಅಂಶವದು. ಅಂದರೆ, ಈಗಾಗಲೇ ಅಲ್ಲಿ ಅಂಥದೊಂದು ಮೂಡ್
ಸೃಷ್ಟಿಯಾಗಿರುವುದು ಸತ್ಯ. ಯಾಕೆಂದರೆ, ಎಸ್‌ಎನ್‌ಪಿ ನಾಯಕಿ ನಿಕೋಲ್ ಅವರು,
ಈಗ ದೊರೆತಿರುವ ಜಯ ಸ್ವಾತಂತ್ರ್ಯಕ್ಕೆ ಸಿಕ್ಕ ಆದೇಶವಲ್ಲ ಎನ್ನಬಹುದು. ಆದರೆ,
ವಾಸ್ತವದಲ್ಲಿ ಸ್ಕಾಟ್ಲೆಂಡ್ ಪೂರ್ತಿ, ವ್ಯಾಪಕವಾದ ಬೆಂಬಲ ದೊರೆತಿರುವುದು
ಪ್ರತ್ಯೇಕ ವಾಗಬೇಕೆಂಬ ದ್ಯೋತಕದ ಪ್ರಕ್ರಿಯೆಯ ಒಂದು ಭಾಗವಾಗಿ.
ಹಾಗೆಯೇ, ಕಳೆದ ಬಾರಿ ಸಮ್ಮಿಶ್ರ ಸರ್ಕಾರವನ್ನು ಮುನ್ನಡೆ ಸಿದ್ದ ಕೆಮರಾನ್‌ಗೆ
ಈ ಬಾರಿ ಸ್ಕಾಟ್ಲೆಂಡ್ ಹೊರತುಪಡಿಸಿ, ಇಡೀ ಬ್ರಿಟನ್ ಹಾಗೂ ಇಂಗ್ಲೆಂಡ್
ನಲ್ಲಿ ಅಭೂತಪೂರ್ವ ಜಯ ಸಿಕ್ಕಿದ್ದು, ಇಂಗ್ಲೆಂಡ್‌ನಿಂದ ಸ್ಕಾಟ್ಲೆಂಡ್ ಸಿಡಿದು
ಹೋಗದಂತೆ ನೋಡಿಕೊಳ್ಳುವುದು ಹಾಗೂ ಐರೋಪ್ಯ ಒಕ್ಕೂಟದಿಂದ ಹೊರ
ಬನ್ನಿ ಎಂಬ ಸಂದೇಶದ ಭಾಗವಾಗಿ. ಆದರೆ, ಕೆಮರಾನ್ ಅಧಿಕಾರಾವಧಿಯಲ್ಲೇ
ಬ್ರಿಟನ್ ಛಿದ್ರವಾಯಿತು ಮತ್ತು ಐರೋಪ್ಯ ಒಕ್ಕೂಟದಿಂದ ಹೊರ ಬಿತ್ತು
ಎಂಬ ಅಪವಾದ ಹೊತ್ತುಕೊಳ್ಳಲು ಸಿದಟಛಿರಿಲ್ಲ ಎಂಬುದನ್ನು ಪೀಟರ್ ರೆಡೆಲ್
‘ಟೆಲಿಗ್ರಾಫ್’ಗೆ ಬರೆದ ಲೇಖನದಲ್ಲಿ ವಿಶ್ಲೇಷಿಸಿದ್ದಾರೆ. ಹೀಗೆ, ಈ ಸಾರ್ವತ್ರಿಕ
ಚುನಾವಣೆ ಫಲಿತಾಂಶ ಮುಂಬರುವ ದಿನಗಳಲ್ಲಿ ಅನೇಕ ಹಾಗೂ ನಾನಾ
ಆಯಾಮಗಳನ್ನು ಒಳಗೊಂಡಿರುವ ಸಾಧ್ಯತೆಗಳನ್ನು ತೆರೆದಿಟ್ಟಿದೆ.
ಡೇವಿಡ್ ಕೆಮರಾನ್ ಮುಂದಿರುವ ಮೊದಲ ಸವಾಲು ಎಂದರೆ,
ಸ್ಕಾಟ್ಲೆಂಡ್‌ಗೆ ಆರ್ಥಿಕ ಸ್ವಾಯತ್ತೆಯನ್ನು ಕಲ್ಪಿಸುವುದು. ಇದಕ್ಕೆ ಸಂಬಂಧಿಸಿದ
ಕಾಯ್ದೆ ಈಗಾಗಲೇ ಕರಡು ರೂಪದಲ್ಲಿದೆ. ಅದನ್ನು ಯಾವ ರೀತಿಯ
ಕಾಯ್ದೆಯಾಗಿ ಮಾರ್ಪಡಿಸಿ ಅನುಷ್ಠಾನಗೊಳಿಸುತ್ತಾರೆ ಎಂಬುದರ ಮೇಲೆ
ಅವರ ಜಾಣ್ಮೆ ನಿಂತಿದೆ. ಯಾಕೆಂದರೆ, ಸ್ಕಾಟಿಷ್ ಸರ್ಕಾರಕ್ಕೆ ತೆರಿಗೆ ಸಂಗ್ರಹ
ವಿಷಯದಲ್ಲಿ ಹೆಚ್ಚಿನ ಅಧಿಕಾರವನ್ನು ಕೊಟ್ಟು, ಆ ಮೂಲಕ ಆರ್ಥಿಕ
ಸ್ವಾಯತ್ತೆಯನ್ನು ಕಲ್ಪಿಸಬೇಕಿದೆ. ಹಾಗಾಗಿಯೇ ಅವರು, ‘ಅಧಿಕಾರ
ಹಸ್ತಾಂತರಕ್ಕೊಳಗಾದ ಜಗತ್ತಿನಲ್ಲೇ ಅತ್ಯಂತ ಪ್ರಬಲವಾದ ಸರ್ಕಾರವನ್ನು
ಸೃಷ್ಟಿಸಲಾಗುವುದು’ ಎಂಬ ಕೆಮರಾನ್ ಹೇಳಿಕೆಯಲ್ಲಿ ಅನೇಕ ಅರ್ಥಗಳ
ಹೊಳವುಗಳಿವೆ. ಆದರೆ, ಎಸ್‌ಎನ್‌ಪಿ ಮಾತ್ರ ಇದಕ್ಕೆ ವಿರೋಧ
ವ್ಯಕ್ತಪಡಿಸಿದಂತೆ ಕಾಣುತ್ತಿದೆ. ಈ ಬಿಲ್ ಹುಟ್ಟಿಗೆ ಕಾರಣವಾಗಿದ್ದು ಸ್ಮಿತ್
ಕಮಿಷನ್. ಆದರೆ, ಸ್ಕಾಟ್ಲೆಂಡ್ ಆಶೋತ್ತರಗಳನ್ನು ಈಡೇರಿಸುವಲ್ಲಿ ಇದು
ಅಷ್ಟೊಂದು ಯಶಸ್ಸು ಕಾಣದು. ತೆರಿಗೆಗಳ ಮೇಲೆ ಸಂಪೂರ್ಣ ಹಿಡಿತ
ಹೊಂದಿರುವ ಪೂರ್ಣ ಪ್ರಮಾಣ ಆರ್ಥಿಕ ಸ್ವಾಯತ್ತೆಯನ್ನು ಕಲ್ಪಿಸುವಂಥ
ವಾತಾವರಣ ನಿರ್ಮಾಣವಾಗಬೇಕು ಎಂಬುದು ಎಸ್‌ಎನ್‌ಪಿಯ ವಾದ.
ಲೇಬರ್ ಪಾರ್ಟಿ ಸೋತಿರುವುದು ಕೂಡ ಎಸ್‌ಎನ್‌ಪಿ ಮೂಲ ಉದ್ದೇಶಕ್ಕೆ
ಕೊಡಲಿ ಪೆಟ್ಟು ಬಿದ್ದಿದೆ. ಹಾಗಾಗಿ, ಕನ್ಸರ್ವೇಟಿವ್ ಜತೆ ಜತೆಗೂಡಿ
ಸಾಗಬೇಕಾಗಿರುವ ಅನಿವಾರ್ಯತೆ ಎಸ್‌ಎನ್‌ಪಿಗೆ ಎದುರಾಗಿದೆ.
ಹಾಗಾಗಿಯೇ, ನಿಕೋಲ್ ಸ್ಟುರ್ಜೋನ್ ಅವರು, ಈಗ ಸಿಕ್ಕಿರುವ ಜಯ
ಸ್ವಾತಂತ್ರ್ಯದ ಜನಾದೇಶವಲ್ಲ ಎಂದು ಹೇಳುತ್ತಿರುವುದು. ಆದರೆ, ಎಸ್‌ಎನ್
ಪಿಯ ಹಿಂದಿನ ಮುಖ್ಯಸ್ಥ ಅಲೆಕ್ಸ್ ಸಾಲ್ಮಂಡ್ ಮಾತ್ರ ನನ್ನ ಜೀವಿತಾವಧಿಯಲ್ಲಿ
ಸ್ಕಾಟ್ಲೆಂಡ್ ಸಂಪೂರ್ಣ ಸ್ವತಂತ್ರವಾಗುವುದನ್ನು ಕಾಣುತ್ತೇನೆ ಎಂದಿದ್ದಾರೆ.
ಅಂದರೆ, ಎಸ್‌ಎನ್‌ಪಿಯು ಸ್ಕಾಟ್ಲೆಂಡ್ ಸ್ವತಂತ್ರಗೊಳಿಸುವ ಪ್ರಯತ್ನವನ್ನು
ಕೈಬಿಡುವ ಸಾಧ್ಯತೆಯೇ ಇಲ್ಲ ಎಂದು ಇದರಿಂದ ವೇದ್ಯವಾಗುತ್ತದೆ.

ಸ್ಕಾಟ್ಲೆಂಡ್ ಸಿಡಿದು ಹೋಗುತ್ತಿರುವುದೇಕೆ?
ಬಹುತೇಕವಾಗಿ ಆರ್ಥಿಕ ಅಸಮಾನತೆಯೇ ಇದಕ್ಕೆಲ್ಲ ಕಾರಣ. ಇಂಗ್ಲೆಂಡ್
ಸರ್ಕಾರದ ಜತೆಗಿನ ಆರ್ಥಿಕ ವ್ಯವಹಾರಗಳ ಸಮನ್ವಯತೆ ಕೊರತೆ, ತೆರಿಗೆ
ಸುಧಾರಣೆಗಳು ಸೇರಿದಂತೆ ಅನೇಕ ಕಾರಣಗಳು ಇದಕ್ಕಿವೆ. ವಿಶೇಷವಾಗಿ ಕೃಷಿ,
ಗಡಿ ನಿಯಂತ್ರಣ ಮತ್ತು ವಲಸೆ, ಶಿಶು ಆರೋಗ್ಯ, ನಾಗರಿಕತ್ವ, ರಕ್ಷಣೆ, ನ್ಯಾಟೋ
ಸದಸ್ಯತ್ವ, ಬೇಹುಗಾರಿಕೆ, ಅಣ್ವಸಉಗಳು, ಆರ್ಥಿಕ ಸ್ಥಿತಿ-ಗತಿ, ಕರೆನ್ಸಿ, ಸರ್ಕಾರದ
ಆದಾಯ ಮತ್ತು ವೆಚ್ಚ, ಇಂಧನ, ಐರೋಪ್ಯ ಒಕ್ಕೂಟದ ಜತೆಗಿನ ಸಂಬಂಧ,
ಐರೋಪ್ಯ ಒಕ್ಕೂಟದಲ್ಲಿ ಇಂಗ್ಲೆಂಡ್‌ನ ಭವಿಷ್ಯ, ಆರೋಗ್ಯ, ಅಂತಾ ರಾಷ್ಟ್ರೀಯ
ಸಂಬಂಧಗಳು... ಹೀಗೆ ಹತ್ತುಹಲವು ಕಾರಣಗಳು ‘ಯೆಸ್ ಸ್ಕಾಟ್ಲೆಂಡ್’ ಕೂಗಿಗೆ
ಕಾರಣವಾಗಿವೆ. ‘ಯೆಸ್ ಸ್ಕಾಟ್ಲೆಂಡ್’ ಎನ್ನುವುದು ಸ್ಕಾಟ್ಲೆಂಡ್ ಸ್ವಾತಂತ್ರ್ಯಕ್ಕೆ
ಹುಟ್ಟಿಕೊಂಡ ಗುಂಪು. ಇದಕ್ಕೆ ವಿರೋಧವಾಗಿ ‘ಬೆಟರ್ ಟುಗೇದರ್’ ಎಂಬ
ಗುಂಪು ಇಂಗ್ಲೆಂಡ್ ಒಕ್ಕೂಟ ಬಲಪಡಿಸಲು ಪ್ರಯತ್ನಿಸುತ್ತಿದೆ.
೨೦೧೪ರ ಸೆಪ್ಟೆಂಬರ್ ೧೮ರಂದು ಸ್ಕಾಟಿಷ್ ಸ್ವಾತಂತ್ರ್ಯ ಜನಮತ ಗಣನೆ
ನಡೆಯಿತು. ಈ ಪ್ರಕ್ರಿಯೆಯಲ್ಲಿ ‘ಯೆಸ್ ಸ್ಕಾಟ್ಲೆಂಡ್’ ಆಂದೋಲನಕ್ಕೆ
ಸೋಲಾಯಿತು. ಜನಮನತ ಗಣನೆಯಲ್ಲಿ ಶೇ.೪೪.೭ರಷ್ಟು ಜನ ಸ್ಕಾಟ್ಲೆಂಡ್
ಬೇಕು ಎಂದರೆ, ಶೇ.೫೫.೩ರಷ್ಟು ಜನ ಬೇಡ ಎಂದು ತಮ್ಮ ಮುದ್ರೆ ಒತ್ತಿದರು.
ಈ ಜನಮತ ಗಣನೆಯಲ್ಲಿ ಒಟ್ಟು ಶೇ.೮೪.೬ರಷ್ಟು ಜನ ಪಾಲ್ಗೊಂಡಿದ್ದರು.
ಬ್ರಿಟನ್ ಮತ್ತು ಸ್ಕಾಟಿಷ್ ಸರ್ಕಾರದ ಒಪ್ಪಂದದಂತೆ ಛಿ ಖ್ಚಟಠಿಠಿಜಿ
ಐ್ಞಛಿಛ್ಞಿಛ್ಞ್ಚಿಛಿ ್ಕಛ್ಛಿಛ್ಟಿಛ್ಞಿಛ್ಠಞ ಆಜ್ಝ್ಝಿ
ಅನ್ನು ಸ್ಕಾಟಿಷ್ ಸಂಸತ್ತು ೨೦೧೩ರ
ನವೆಂಬರ್‌ನಲ್ಲಿ ಕಾಯ್ದೆಯಾಗಿ ಜಾರಿ ಮಾಡಿತ್ತು. ಬಳಿಕ ಜನಮತ ಗಣನೆ
ನಡೆಯಿತು.

ಒಂದು ಕಾಲದಲ್ಲಿ ‘ಸೂರ್ಯ ಮುಳುಗದ ಸಾಮ್ರಾಜ್ಯ’ವಾಗಿದ್ದ ಗ್ರೇಟ್
ಬ್ರಿಟನ್ ೨೧ನೇ ಶತಮಾನದಲ್ಲಿ ಛಿದ್ರವಾಗುವ ಹಾದಿಯಲ್ಲಿ ಸಾಗುತ್ತಿದೆ
ಎಂಬುದಂತೂ ಸತ್ಯ. ಸದ್ಯಕ್ಕೆ ಪ್ರಧಾನಿ ಡೇವಿಡ್ ಕೆಮರಾನ್ ಮುಂದೆ
ಸ್ಕಾಟ್ಲೆಂಡ್ ಜನಮತಗಣನೆ ಮತ್ತು ಐರೋಪ್ಯ ಒಕ್ಕೂಟ ಎಂಬ ಎರಡು
ಬೃಹತ್ ಸಮಸ್ಯೆಗಳಿವೆ. ಇವುಗಳನ್ನು ಕೆಮರಾನ್ ಹೇಗೆ ನಿಭಾಯಿಸುತ್ತಾರೆ
ಎಂಬುದರ ಮೇಲೆಯ ಇಡೀ ಬ್ರಿಟನ್‌ನ ಭವಿಷ್ಯ ನಿರ್ಧಾರವಾಗಲಿದೆ.
ಸ್ಕಾಟ್ಲೆಂಡ್ ಮತ್ತೊಂದು ಜನಮತಗಣನೆಗೆ ವೇದಿಕೆ ಸಿದಟಛಿಪಡಿಸಿಕೊಳ್ಳ
ಲಿದೆಯಾ? ಬ್ರಿಟನ್ ತನ್ನ ಐಕ್ಯತೆಯನ್ನು ಮುಂದುವರಿಸಿಕೊಂಡು
ಹೋಗಲಿದೆಯಾ? ಎಂಬುದನ್ನು ನೋಡಬೇಕಿದ್ದರೆ ಕನಿಷ್ಠ ಇನ್ನು ಒಂದು
ವರ್ಷವಾದರೂ ಕಾಯಲೇಬೇಕು. ಆದರೆ, ಈಗ ದೊರೆತಿರುವ
ಜನಾದೇಶವಂತೂ ಈ ಎಲ್ಲ ಅಂಶಗಳಿಗೆ ಒಂದು ದಿಕ್ಕನ್ನು ಮಾತ್ರ ಸೂಚಿಸಿದೆ.
ಆದರೆ, ಆ ದಿಕ್ಕು ಯಾವುದು ಎಂಬುದು ಮಾತ್ರ ಸದ್ಯಕ್ಕೆ ನಿಗೂಢ.

- ಮಲ್ಲಿಕಾರ್ಜುನ ತಿಪ್ಪಾರ

ಗುರುವಾರ, ಏಪ್ರಿಲ್ 9, 2015

ಇರಾನ್ ಅಣು ಒಪ್ಪಂದ ಕಸರತ್ತು, ಏನಿದರ ಹಕೀಕತ್ತು?

ಇರಾನ್‌ನ ೧೨ ವರ್ಷಗಳ ವನವಾಸ ಅಂತ್ಯವಾಗುವ ಕ್ಷಣಗಳು ಹತ್ತಿರವಾಗುತ್ತಿವೆ.
‘ಅಣು ಬಾಂಬ್’ಗಳನ್ನು ತಯಾರಿಸುತ್ತಿದೆ ಎಂಬ ಗುಮಾನಿಯ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ಸಮುದಾಯ ಹೇರಿದ್ದ ಆರ್ಥಿಕ ದಿಗ್ಬಂಧನ ಹಿಂತೆಗೆಯುವ ಪ್ರಕ್ರಿಯೆಗೆ ಚಾಲನೆ ಸಿಕ್ಕಿದೆ. ಇದರ ಮೊದಲ ಹಂತವಾಗಿ ಇರಾನ್ ಮತ್ತು ‘ಪಿ೫ ಪ್ಲಸ್ ೧’(ಅಮೆರಿಕ, ಇಂಗ್ಲೆಂಡ್, ಫ್ರಾನ್ಸ್, ರಷ್ಯಾ, ಚೀನಾ ಮತ್ತು ಜರ್ಮನಿ) ಜಾಗತಿಕ ಪ್ರಬಲ ರಾಷ್ಟ್ರಗಳ ನಾಯಕರ ನಡುವೆ ಇತ್ತೀಚೆಗೆ ನಡೆದ ‘ಇರಾನ್ ಅಣು ಒಪ್ಪಂದ’ ಮಾತುಕತೆ ಒಂದು ಹಂತಕ್ಕೆ ಬಂದು ನಿಂತಿದೆ. ‘ಇರಾನ್ ತನ್ನ ಅಣು ಚಟುವಟಿಕೆಗಳನ್ನು ಶಾಂತಿ ಉದ್ದೇಶಕ್ಕೆ ಸೀಮಿತಗೊಳಿಸುವುದು ಮತ್ತು ಅಂತಾರಾಷ್ಟ್ರೀಯ ಸಮುದಾಯ ಹೇರಿರುವ ಆರ್ಥಿಕ ದಿಗ್ಬಂಧನವನ್ನು ಹಿಂತೆಗೆದುಕೊಳ್ಳುವುದು ಈ ಉದ್ದೇಶಿತ ಮಾತುಕತೆಯ ಮುಖ್ಯ ಅಜೆಂಡಾ’. ಅಷ್ಟರಲ್ಲಾಗಲೇ ಈ ಪ್ರಕ್ರಿಯೆಯನ್ನು ‘ಐತಿಹಾಸಿಕ’ ಎಂದು ಅಮೆರಿಕ ಮತ್ತು ಇರಾನ್ ನಾಯಕರು ಬಣ್ಣಿಸಿದ್ದಾರೆ. ಈ ಪ್ರಕ್ರಿಯೆಗೆ ಅಂತಿಮವಾಗಿ, ಸುಸ್ಪಷ್ಟವಾದ ಮೂರ್ತರೂಪ ದೊರೆಯಲು ಜೂನ್ ೩೦ ಗಡವು. ಒಂದಿಷ್ಟು ಕೊರತೆಗಳು ಎರಡೂ ಕಡೆ ಇವೆ. ಆ ಓರೆಕೋರೆಗಳನ್ನು ತುಂಬಿಕೊಂಡು ಅಂತಿಮವಾಗಿ ಅಂಕಿತ ಬಿದ್ದರೆ ೧೯೭೯ರ ಇಸ್ಲಾಮಿಕ್ ಕ್ರಾಂತಿಯ ನಂತರ ಇರಾನ್, ಅಂತಾರಾಷ್ಟ್ರೀಯ ಸಮುದಾಯದ ಜತೆ ಸಾಧಿಸಿದ ಅತಿದೊಡ್ಡ, ಬಹು ಪ್ರಾಮುಖ್ಯವಾದ ಒಪ್ಪಂದಕ್ಕೆ ಸಾಕ್ಷಿಯಾಗಲಿದೆ.
೨೦೦೨ರಲ್ಲಿ ಇರಾನ್‌ನ ವಿಧ್ವಂಸಕ ಅಣು ಚಟುವಟಿಕೆಗಳು ಬಹಿರಂಗವಾಗುತ್ತಿದ್ದಂತೆ ವಿಶ್ವಸಂಸ್ಥೆ ಹಾಗೂ ಐರೋಪ್ಯ ಒಕ್ಕೂಟ ರಾಷ್ಟ್ರಗಳು ದಿಗ್ಬಂಧನವನ್ನು ಮತ್ತಷ್ಟು ವಿಸ್ತರಿಸಿದ್ದವು. ತನ್ನೆಲ್ಲ ಅಣು ಚಟುವಟಿಕೆಗಳು ಶಾಂತಿ ಉದ್ದೇಶಕ್ಕಾಗಿಯೇ ಇವೆ ಎಂದು ಇರಾನ್ ಅಲವತ್ತುಕೊಂಡಿತ್ತು. ಆದರೆ, ಅದನ್ನು ನಿರೂಪಿಸಲು ಸಾಧ್ಯವಾಗಿರಲಿಲ್ಲ. ಇದೀಗ ಅಂತಾರಾಷ್ಟ್ರೀಯ ಸಮುದಾಯಕ್ಕೂ ತಾನು ಶಾಂತಿಯುತ ರಾಷ್ಟ್ರ ಎಂಬುದನ್ನು ಇರಾನ್ ಮನವರಿಕೆ ಮಾಡುವ ನಿಟ್ಟಿನಲ್ಲಿ ಯಶ ಕಾಣುತ್ತಿದೆ. ಈ ಪ್ರಯತ್ನದಲ್ಲಿ ಇರಾನ್ ವಿದೇಶಾಂಗ ಸಚಿವ ಮೊಹಮ್ಮದ್ ಜಾವೇದ್ ಝರೀಫ್ ಅವರ ಕೊಡುಗೆ ಗಣನೀಯ. ಈ ಹಿನ್ನೆಲೆಯಲ್ಲಿ ಅವರು ಮಾತುಕತೆ ಮುಗಿಸಿಕೊಂಡು ಕಳೆದ ಶುಕ್ರವಾರ ಟೆಹ್ರಾನ್‌ನಲ್ಲಿ ಬಂದಿಳಿದಾಗ ಭವ್ಯ ಸ್ವಾಗತವೇ ದೊರೆತಿದೆ. ಇದರಿಂದಲೇ ಅಂದಾಜು ಮಾಡಬಹುದು. ಆರ್ಥಿಕ ದಿಗ್ಬಂಧನದಿಂದಾಗಿ ಇರಾನ್ ಎಂಥ ಸಂಕಷ್ಟಕ್ಕೆ ಸಿಲುಕಿಕೊಂಡಿತ್ತು ಎಂಬುದನ್ನು. ಇರಾನ್‌ನ ಅಧ್ಯಕ್ಷ ಹಸನ್ ರೌಹಾನಿ ಅವರು ೨೦೧೩ರಲ್ಲಿ ನಡೆದ ಚುನಾವಣೆಯಲ್ಲಿ ಜಗತ್ತಿನ ಇತರೆ ರಾಷ್ಟ್ರಗಳ ಜತೆ ಅಣು ಒಪ್ಪಂದವನ್ನು ಮುಂದು ಮಾಡಿಕೊಂಡು ಮತ ಕೇಳಿದ್ದರು. ಅದಕ್ಕಾಗೇ ಅಲ್ಲಿನ ಜನ ಅವರನ್ನು ಚುನಾಯಿಸಿ–ದ್ದರು. ಇದೀಗ ಅವರು ತಮ್ಮ ಭರವಸೆಯನ್ನು ಈಡೇರಿಸುವ ಹಂತಕ್ಕೆ ಬಂದು ಮುಟ್ಟಿದ್ದಾರೆ. ಅಲ್ಲದೆ, ತಮ್ಮ ದೇಶದ ‘ಮಾತುಕತೆಯ ತಂಡದ ಪ್ರಯತ್ನ’ವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಆದರೆ, ಈ ಒಪ್ಪಂದದ ಬಗ್ಗೆ ಇರಾನ್ ಪರಮೋಚ್ಚ ನಾಯಕ ಅಯಾತುಲ್ಲಾ ಅಲಿ ಖೋಮೇನಿಯಿಂದ ತಕ್ಷಣದ ಪ್ರಕ್ರಿಯೆ ಹೊರಬಿದ್ದಿಲ್ಲ!
ಇನ್ನು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಕೂಡ ಇದು ತಮ್ಮ ವಿದೇಶಾಂಗ ನೀತಿಗೆ ದೊರೆತ ಯಶಸ್ಸು ಎಂದು ಭಾವಿಸಿದ್ದಾರೆ. ಈ ಯಶಸ್ಸಿನ ಪಾಲನ್ನು ಅವರು ಕಾರ್ಯದರ್ಶಿ ಜಾನ್ ಕೆರ‌್ರಿ ಅವರಿಗೆ ಕೊಡಲೇಬೇಕು. ಇರಾನ್ ಜತೆಗಿನ ‘ಮುಳ್ಳಿನ ಸ್ನೇಹ’ವನ್ನು ನಾಜೂಕಾಗಿ ದೇಶದ ಒಳಗೂ ಮತ್ತು ಹೊರಗೂ ನಿಭಾಯಿಸಿದ್ದಾರೆ. ಈ ಎಲ್ಲದರ ಮಧ್ಯೆಯೂ ಒಬಾಮ, ಇನ್ನೂ ಕಾಂಗ್ರೆಸ್‌ಗೆ ಈ ಒಪ್ಪಂದ ಬಗ್ಗೆ ಮನವರಿಕೆ ಮಾಡಿಕೊಡಬೇಕಿದೆ. ಅದರಲ್ಲಿ ಎಷ್ಟು ಸಫಲರಾಗುತ್ತಾರೋ?
ಇರಾನ್ ಜತೆಗಿನ ಅಂತಾರಾಷ್ಟ್ರೀಯ ಸಮುದಾಯ ಬಾಂಧವ್ಯ ಮರುಸ್ಥಾಪಿಸಿರುವುದನ್ನು ಭಾರತ ಸೇರಿದಂತೆ ಬಹುತೇಕ ರಾಷ್ಟ್ರಗಳು ಸ್ವಾಗತಿಸಿವೆ. ಆದರೆ, ಅಮೆರಿಕದ ಎರಡು ಪ್ರಮುಖ ಸ್ನೇಹಿತ ರಾಷ್ಟ್ರಗಳಾದ ಸೌದಿ ಅರೇಬಿಯಾ ಹಾಗೂ ಇಸ್ರೇಲ್ ಮಾತ್ರ ತೀವ್ರ ವಿರೋಧ ದಾಖಲಿಸಿವೆ. ಇರಾನ್ ಈಗ ಸಿಕ್ಕಿರುವ ಅವಕಾಶವನ್ನು ಸರಿಯಾದ ಹಾಗೂ ಸೂಕ್ತ ರೀತಿಯಲ್ಲಿ ಬಳಸಿಕೊಂಡರೆ ನಿಗದಿತ ಅವಧಿಯಲ್ಲೇ ಸೌದಿಗೆ ಸೆಡ್ಡು ಹೊಡೆಯುವ ಮಟ್ಟಿಗೆ ಆರ್ಥಿಕವಾಗಿ ಪ್ರಗತಿ ಕಾಣುವ ಸಾಧ್ಯತೆಗಳೇ ಹೆಚ್ಚು. ಆದ್ದರಿಂದಲೇ ಮಧ್ಯಪ್ರಾಚ್ಯ–ದಲ್ಲಿ ಇರಾನ್ ಆರ್ಥಿಕ
ವಾಗಿ ಬಲಾಢ್ಯ–ವಾಗುವುದನ್ನು ಸೌದಿ ಇಷ್ಟಪಡುವುದಿಲ್ಲ. ಹೀಗಿದ್ದಾಗ್ಯೂ, ಸೌದಿ ರಾಜನನ್ನು ಒಪ್ಪಿಸುವುದು ಅಮೆರಿಕದ ಅಧ್ಯಕ್ಷ ಬರಾಕ್‌ಗೆ ಕಷ್ಟವೇನಲ್ಲ ಎಂಬುದು ಕೂಡ ಅಷ್ಟೇ ಸತ್ಯ. ಇನ್ನು ಇಸ್ರೇಲ್‌ಗಂತೂ ಇದು ನುಂಗಲಾರದ ತುತ್ತಾಗಿದೆ. ಆದರೆ, ಇಸ್ರೇಲ್ ಪ್ರಧಾನಿ ನೆತಾನ್ಯುಹು ಬಹಿರಂಗವಾಗಿಯೇ ವಿರೋಧಿಸಿದ್ದಾರೆ. ಅಷ್ಟೇ ಅಲ್ಲದೆ, ‘ಇಸ್ರೇಲ್ ಅಸ್ತಿತ್ವ’ವನ್ನು ಇರಾನ್ ಗೌರವಿಸಬೇಕು. ಇದೊಂದು ಗ್ರೇವ್‌ಯಾರ್ಡ್ ಒಪ್ಪಂದ ಎಂದು ಟೀಕಿಸಿದ್ದಾರೆ. ಇದೇ ವೇಳೆ, ಸೋಮವಾರ ನ್ಯೂಯಾರ್ಕ್ ಟೈಮ್ಸ್‌ನಲ್ಲಿ ಪ್ರಕಟವಾದ ಸಂದರ್ಶನದಲ್ಲಿ ಇಸ್ರೇಲ್‌ನ ಆತಂಕವನ್ನು ದೂರ ಮಾಡುವ ಮಾತುಗಳನ್ನಾಡಿದ್ದಾರೆ ಒಬಾಮ.
=
ಈಗ ನಡೆದಿರುವ ಮಾತುಕತೆಯ ಒಟ್ಟು ಫಲಶ್ರುತಿ ಏನೆಂದರೆ, ಇರಾನ್ ತನ್ನೆಲ್ಲ ಅಣು ಚಟುವಟಿಕೆಗಳನ್ನು ಶಾಂತಿ ಉದ್ದೇಶಕ್ಕೆ ಮಾತ್ರ ಬಳಸುವುದು. ಒಟ್ಟು ಅಣು ಘಟಕಗಳ ಪೈಕಿ ಎರಡನ್ನು ಮಾತ್ರ ಸಂಶೋಧನಾ ಉದ್ದೇಶಕ್ಕೆ ಬಳಸುವುದು. ಬೃಹತ್ ರಿಯಾಕ್ಟರ್‌ಗಳನ್ನು ಮರು ವಿನ್ಯಾಸಗೊಳಿಸಿ, ಅಣು ಬಾಂಬ್‌ಗೆ ಬೇಕಾಗುವ ಪ್ಲುಟೋನಿಯಂ ಇಂಧನ ತಯಾರಿಕೆಯ ಸಾಮರ್ಥ್ಯವನ್ನು ನಿಸ್ತೇಜ–ಗೊಳಿ–ಸುವುದು. ಅಲ್ಲದೇ ಯುರೇನಿಯಂ ಸಂಸ್ಕರಣೆಯನ್ನು ೧೦,೦೦೦ ಕೆಜಿಯಿಂದ ೩೦೦ ಕೆಜಿಗೆ ಸೀಮಿತಗೊಳಿಸವುದು. ಹೀಗೆ ಮಾಡಿದಾಗ ಇರಾನ್ ಅಣುಬಾಂಬ್ ತಯಾರಿಸಲು ಸಾಧ್ಯವಾಗುವುದಿಲ್ಲ. ಹಾಗೊಂದು ವೇಳೆ, ಅಂತಾರಾಷ್ಟ್ರೀಯ ಸಮುದಾಯವನ್ನು ಕತ್ತಲ–ಲ್ಲಿಟ್ಟು ತಯಾರಿಕೆಗೆ ಮುಂದಾದರೆ, ಅದು ಒಂದು ವರ್ಷದೊಳಗೆ ಹೊರಜಗತ್ತಿಗೆ ಗೊತ್ತೇ ಆಗುತ್ತದೆ. ಇದಕ್ಕೆ ಪ್ರತಿಯಾಗಿ ಅಂತಾ–ರಾಷ್ಟ್ರೀಯ ಸಮುದಾಯ ಎಲ್ಲ ರೀತಿಯ ಆರ್ಥಿಕ ದಿಗ್ಬಂಧನವನ್ನು ಹಿಂತೆಗೆದುಕೊಂಡು ಮುಕ್ತ ವ್ಯಾಪಾರಕ್ಕೆ ಅನುಕೂಲ ಮಾಡಿಕೊಡ–ಬೇಕು. ಇದಲ್ಲದೆ, ಆ ದೇಶ ಆರ್ಥಿಕ ಸ್ಥಿತಿಗೆ ತೊಂದರೆಯಾಗದಂತೆ ನೋಡಿಕೊಳ್ಳುವುದು. ಇವೆಲ್ಲವೂ ಇನ್ನೂ ತೀರಾ ಪ್ರಾಥಮಿಕ ಹಂತದಲ್ಲಿವೆ. ಇದೆಲ್ಲದಕ್ಕೂ ಒಂದು ಸ್ಪಷ್ಟವಾದ ಕರಡು ರೂಪಿಸಲು ಜೂನ್ ೩೦ ಕೊನೆಯ ದಿನ. ಆ ಹೊತ್ತಿಗೆ, ಈಗ ಎದುರಾಗಿರುವ ಸೌದಿ ಅರೇಬಿಯಾ ಹಾಗೂ ಇಸ್ರೇಲ್‌ನ ಆತಂಕಗಳನ್ನು ಶಮನ ಮಾಡುವಂಥ ಒಂದಿಷ್ಟು ಉಪಕ್ರಮಗಳು ಕೂಡ ಅಂತಿಮ ಒಪ್ಪಂದದಲ್ಲಿ ಸೇರಿಕೊಳ್ಳುವುದನ್ನು ಅಲ್ಲಗಳೆಯಲಾಗದು.
=
ಇರಾನ್ ಜತೆಗಿನ ಉದ್ದೇಶಿತ ಅಣು ಒಪ್ಪಂದದಿಂದ ಭಾರತದಂಥ ಅಭಿವೃದ್ಧಿಶೀಲ ರಾಷ್ಟ್ರಗಳು ಖುಷಿಪಟ್ಟಿರಲಿಕ್ಕೂ ಸಾಕು. ಇರಾನ್ ಜಗತ್ತಿನ ಪ್ರಮುಖ ಕಚ್ಚಾ ತೈಲ ರಫ್ತು ಮಾಡುವ ರಾಷ್ಟ್ರ. ಇತ್ತೀಚಿನವರೆಗೂ ದಿಗ್ಬಂಧನ ಹೊರತಾಗಿಯೂ ಇರಾನ್ ಸ್ವಲ್ಪಮಟ್ಟಿಗೆ ಕಚ್ಚಾ ತೈಲ ರಫ್ತು ಮಾಡುತ್ತಿತ್ತು. ಅಲ್ಲದೆ, ಭಾರತವೇ ಅತಿ ದೊಡ್ಡ ಆಮದು ರಾಷ್ಟ್ರವಾಗಿತ್ತು ಇರಾನ್‌ಗೆ. ಇನ್ನು ದಿಗ್ಬಂಧನ ಇಲ್ಲ ಎಂದಾದರೆ ನೀವೇ ಊಹಿಸಿ! ಭಾರತದಲ್ಲಿ ಇನ್ನೊಂದು ವರ್ಷದಲ್ಲಿ ತೈಲೋತ್ಪನ್ನಗಳ ಬೆಲೆ ಯಾವ ಮಟ್ಟಕ್ಕೆ ಕೆಳಕ್ಕಿಳಿಯಬಹುದು ಎಂಬುದನ್ನು ಅಂದಾಜಿಸಿ.
ಹಾಗೆ ನೋಡಿದರೆ, ಇರಾನ್ ಯಾವತ್ತಿದ್ದರೂ ಭಾರತದ ‘ಸಹಜ ಸ್ನೇಹ’ ರಾಷ್ಟ್ರ. ೧೯೪೭ಕ್ಕಿಂತ ಮುಂಚೆ ಇರಾನ್ ಭಾರತದ ಗಡಿಯನ್ನು ಹಂಚಿಕೊಂಡಿತ್ತು. ಈ ಎರಡೂ ರಾಷ್ಟ್ರಗಳ ಬಾಂಧವ್ಯದ ಬೇರು ಹುಡುಕುತ್ತಾ ಹೊರಟರೆ ನಿಮಗೆ ನವಶೀಲಾಯುಗದವರೆಗೂ ಹಿಂದೆ ಸಾಗಬೇಕು. ಹಾಗಾಗಿಯೇ ಉತ್ತರ ಭಾರತ ಹಾಗೂ ಇರಾನ್‌ನ ಸಂಸ್ಕೃತಿ, ಜನಾಂಗ, ಭಾಷಾ ಲಕ್ಷಣಗಳಲ್ಲಿ ಇಂದಿಗೂ ಸಾಮ್ಯತೆ ಕಂಡು ಬರುತ್ತದೆ. ಇದು ಹಳೆ ಕಾಲದ ಮಾತಾಯಿತು ಬಿಡಿ. ಆಧುನಿಕ ದಿನಮಾನಗಳಲ್ಲಿ ಎಂದಿಗೂ ಇರಾನ್ ಭಾರತದ ಜತೆಗೆ ಇದೆ. ಸಂಕಷ್ಟದ ದಿನಗಳಲ್ಲಿ ಇರಾನ್ ಕೈ ಬಿಟ್ಟಿಲ್ಲ. ಅನೇಕ ಬಾರಿ ಅಂತಾರಾಷ್ಟ್ರೀಯ ವಿಷಯಗಳಿಗೆ ಸಂಬಂಧಿಸಿದಂತೆ ವಿಶ್ವಸಂಸ್ಥೆಯಲ್ಲಿ ಭಾರತದ ಪರವಾಗಿಯೇ ತನ್ನ ಮತ ಚಲಾಯಿಸಿದೆ. ಇಷ್ಟೆಲ್ಲಾ ವಿವರಣೆ ಏಕೆಂದರೆ, ಇರಾನ್ ಅಂತಾರಾಷ್ಟ್ರೀಯ ಸಮುದಾಯ ಜತೆ ಸಾಧಿಸುತ್ತಿರುವ ಸಮನ್ವಯತೆಯಿಂದ ಅಗಾಧ ಲಾಭ ಭಾರತದ ಪರವಾಗಿಯೇ ಇರಲಿದೆ!
ಈಗಾಗಲೇ ಸೌದಿ ಅರೇಬಿಯಾ, ಅಮೆರಿಕ ಹಾಗೂ ರಷ್ಯಾಗಳ ನಡುವಿನ ರಾಜಕೀಯ ತಿಕ್ಕಾಟಕ್ಕಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಊಹೆಗೆ ಮೀರಿ ಪಾತಾಳ ಕಂಡಿದೆ. ಇದರ ಪರಿಣಾಮ ಭಾರತದಲ್ಲೀಗ ವಾರ ವಾರಕ್ಕೂ ತೈಲ ಬೆಲೆ ಪೈಸೆ ಲೆಕ್ಕದಲ್ಲಿ ಕಡಿಮೆಯಾಗುತ್ತಿದೆ. ಇನ್ನು ಇರಾನ್‌ನಿಂದ ಹೇರಳವಾಗಿ ಕಚ್ಚಾ ತೈಲ ಆಮದು ಮಾಡಿಕೊಳ್ಳುವಂತಾದರೆ, ಪೆಟ್ರೋಲ್, ಡಿಸೇಲ್ ಬೆಲೆ ಇನ್ನೂ ಯಾವ ಹಂತಕ್ಕೆ ಇಳಿಯಬಹುದು ಎಂದು ಯೋಚಿಸಿ. ಹಾಗೇನಾದರೂ ಆದರೆ, ಅಂತಾರಾಷ್ಟ್ರೀಯ ಮಾರುಕಟ್ಟೆ–ಯಲ್ಲಿ ಭಾರತ ಈಗ ಪಡೆದುಕೊಳ್ಳುತ್ತಿರುವ ಪ್ರತಿ ಬ್ಯಾರೆಲ್‌ಗೆ ಇನ್ನೂ ೨ ಡಾಲರ್ ಕಡಿಮೆ ಹಣ ತೆತ್ತು ಖರೀದಿಸಬಹುದು.
ತೈಲ ಎಂಬ ಏಕೈಕ ಅಂಶವನ್ನು ಹೊರಗಿಟ್ಟು ನೋಡುವುದಾದರೆ, ಸಂಸ್ಕರಿತ ಡಿಸೇಲ್‌ನೊಂದಿಗೆ ಭಾರತದ ಜವಳಿ, ಬಾಸ್ಮತಿ ಅಕ್ಕಿ ಹೇರಳವಾಗಿ ರಫ್ತು ಮಾಡಬಹುದು. ಭಾರತೀಯ ಔಷಧ, ಕಾರು, ಮಾರ್ಜಕ ತಯಾರಿಕೆ ಕಂಪನಿಗಳು ದಾಂಗುಡಿ ಇಡಬಹುದು. ಇದೆಲ್ಲದರ ಒಟ್ಟಾರೆ ಪರಿಣಾಮ ಇರಾನ್ ಹಾಗೂ ಭಾರತದ ಮೇಲೆ ಸಕಾರಾತ್ಮಕವಾಗಿ ಬೀರಲಿದೆ.
ಇದು ಭಾರತದ ಮಟ್ಟಿಗಿನ ಲೆಕ್ಕಾಚಾರವಾದರೆ, ಅಂತಾರಾಷ್ಟ್ರೀಯ–ವಾಗಿಯೂ ವ್ಯಾಪಾರಿಕ ಲೆಕ್ಕಾಚಾರಗಳು ಈಗಾಗಲೇ ಶುರುವಾಗಿವೆ. ಬಹುತೇಕ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಆರ್ಥಿಕ ಚೇತರಿಕೆ ದೊರೆಯಲಿದೆ. ಈ ಕುರಿತು ಈಗಾಗಲೇ ಬ್ಯಾಂಕ್ ಆಫ್ ಇಂಗ್ಲೆಂಡ್ ಗವರ್ನರ್ ಮಾರ್ಕ್ ಕಾರ್ನಿ ತಮ್ಮ ಸಹಮತ ವ್ಯಕ್ತಪಡಿಸಿದ್ದಾರೆ. ‘ಇರಾನ್ ಜತೆಗಿನ ಉದ್ದೇಶಿತ ಒಪ್ಪಂದದಿಂದಾಗಿ ತೈಲ ಬೆಲೆಯಲ್ಲಿ ಭಾರಿ ಇಳಿಕೆಯಾಗಲಿದ್ದು, ಇದು ಇಂಗ್ಲೆಂಡ್ ಹಾಗೂ ಜಾಗತಿಕ ಆರ್ಥಿಕತೆಗೆ ಹೊಸ ಭರವಸೆದಾಯಕ ಹಾದಿಯನ್ನು ತೋರಿಸಲಿದೆ’ ಎಂದಿದ್ದಾರೆ. ಈ ಮಾತು ನಿಜವಾಗಬೇಕಿದ್ದರೆ ಇನ್ನೂ ಹೆಚ್ಚು ಕಡಿಮೆ ಒಂದು ವರ್ಷ ಕಾಯಬೇಕು. ಆದರೆ, ಅವರ ಮಾತಿನಲ್ಲಿ ಉತ್ಪ್ರೇಕ್ಷೆ ಏನಿಲ್ಲ. ರಾಜಕೀಯ ಕಾರಣಕ್ಕಾಗಿ ಈಗ ಇಳಿಕೆಯಾಗಿರುವ ತೈಲ ಬೆಲೆ ಯಾವುದೇ ಸಮಯದಲ್ಲಿ ಅದೇ ಕಾರಣಕ್ಕಾಗಿ ಹೆಚ್ಚಳವಾಗುವ ಎಲ್ಲ ಅಪಾಯಗಳಿವೆ. ಇಂಥ ಸಂದಿಗ್ಧ ಸ್ಥಿತಿಯಲ್ಲಿ ಕಚ್ಚಾತೈಲದ ಗಣಿಯಾಗಿರುವ ಇರಾನ್ ತನ್ನ ಒಡಲಲ್ಲಿರುವ ಎಲ್ಲ ಎಣ್ಣೆಯನ್ನು ಮಾರುಕಟ್ಟೆಗೆ ಹರಿದು ಬಿಟ್ಟರೆ ಸಹಜವಾಗಿಯೇ ಒಂದಿಷ್ಟು ಚೇತರಿಕೆ ಕಂಡು ಕೊಳ್ಳಲು ಸಾಧ್ಯ. ಇದರಿಂದ ಭಾರತ ಕೂಡ ಹೊರತಾಗಿಲ್ಲ.

- ಮಲ್ಲಿಕಾರ್ಜುನ ತಿಪ್ಪಾರ


ಬುಧವಾರ, ಮಾರ್ಚ್ 25, 2015

ಮುಕ್ತ ಸ್ವಾತಂತ್ರ್ಯಕ್ಕೊದಗುತ್ತಿರುವ ಅಂತ್ಯ, ಅವಿಜಿತ್ ರಾಯ್ ಹತ್ಯೆ

ಇತ್ತೀಚೆಗೆ ಢಾಕಾದ ನಡುರಸ್ತೆಯಲ್ಲಿ ಕಗ್ಗೊಲೆಯಾದ, ಬಾಂಗ್ಲಾ ಮೂಲದ ಅಮೆರಿಕ ಬರಹಗಾರ ಅವಿಜಿತ್ ರಾಯ್ ಎಲ್ಲದರಲ್ಲೂ ‘ಮುಕ್ತ ಚಿಂತನೆ’ಯ ಪ್ರತಿಪಾದಕ. ಕೊಲೆ ಬೆದರಿಕೆ ಎದುರಿಸುತ್ತಿದ್ದ ರಾಯ್ ಅದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದೇ ‘ಮುಕ್ತ’ವಾಗಿ ತಮ್ಮ ವಿಚಾರಗಳನ್ನು ಪ್ರಚರುಪಡಿಸುತ್ತಿದ್ದರು. ಸ್ವತಃ ನಾಸ್ತಿಕರಾಗಿದ್ದ ರಾಯ್ ತಮ್ಮ ‘ಮುಕ್ತ-ಮೋನ’(ಫ್ರಿ ಮೈಂಡ್) ಬ್ಲಾಗ್ ಮೂಲಕ ಬಾಂಗ್ಲಾ ಯುವ ಜನತೆಯಲ್ಲಿ ವೈಚಾರಿಕತೆ, ಜಾತ್ಯತೀತ, ಎಲ್ಲವನ್ನೂ ಪ್ರಶ್ನಿಸದೆ ಒಪ್ಪಿಕೊಳ್ಳುವ ಮನೋಭಾವನೆಯನ್ನು ಬಿತ್ತುತ್ತಿದ್ದರು. ಈ ಬ್ಲಾಗ್‌ನಲ್ಲಿ ಕೇವಲ ಬಾಂಗ್ಲಾದೇಶದ ವಿದ್ಯಮಾನಗಳು ಮಾತ್ರವಲ್ಲದೆ ದಕ್ಷಿಣ ಏಷ್ಯಾದ ಎಲ್ಲ ಬೆಳವಣಿಗೆಗಳು ಚರ್ಚೆಯಾಗುತ್ತಿದ್ದವು. ಅಲ್ಲದೆ, ಮುಕ್ತ ಚಿಂತನೆಗೆ ವೇದಿಕೆ ಕಲ್ಪಿಸಿಕೊಟ್ಟಿತ್ತು.
ಅಮೆರಿಕದ ಪ್ರಜೆಯಾಗಿದ್ದುಕೊಂಡು ತಮ್ಮ ತಾಯ್ನಾಡಿನ ಆಗು ಹೋಗುಗಳ ಬಗ್ಗೆ, ವಿಪರೀತವಾಗಿ ಬೆಳೆಯುತ್ತಿರುವ ಇಸ್ಲಾಮ್ ಮೂಲಭೂತವಾದತನದ ಬಗ್ಗೆ, ಧಾರ್ಮಿಕ ಅಸಹಿಷ್ಣು ಬಗ್ಗೆ, ಅವಕಾಶವಾದಿ ರಾಜಕಾರಣದ ಬಗ್ಗೆ ತುಂಬಾ ಮೊನಚಾಗಿ ತಮ್ಮ ಬ್ಲಾಗ್ ಹಾಗೂ ಅಂತಾರಾಷ್ಟ್ರೀಯ ನಾನಾ ಪತ್ರಿಕೆಗಳು, ನಿಯತಕಾಲಿಕೆಗಳಲ್ಲಿ ಲೇಖನಗಳನ್ನು ಪ್ರಕಟಿಸುತ್ತಿದ್ದರು ರಾಯ್. ಎಲ್ಲಕ್ಕಿಂತ ಹೆಚ್ಚಾಗಿ ಅವರ ಇತ್ತೀಚಿನ ಎರಡು ಕೃತಿಗಳಾದ ಒಬಿಶೊಹಶೇರ್ ದೊರ್ಶೂನ್(ದಿ ಫಿಲಾಸಫಿ ಆಫ್ ಡಿಸ್‌ಬಿಲಿಫ್), ಬಿಸ್ವಾಶೇರ್ ವೈರಸ್(ದಿ ವೈರಸ್ ಆಫ್ ಫೇಥ್) ಬಾಂಗ್ಲಾದೇಶದಲ್ಲಿ ಸಂಚಲವನ್ನೇ ಸೃಷ್ಟಿಸಿದ್ದವು. ಅಲ್ಲದೇ ಇದರಿಂದಾಗಿ ಅವರು ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಕೊಲೆ ಬೆದರಿಕೆಯನ್ನೂ ಎದುರಿಸಬೇಕಾಯಿತು. ರಾಯ್‌ಗೆ ಕಟ್ಟರ್‌ವಾದಿಯೊಬ್ಬ ಫೇಸ್‌ಬುಕ್‌ನಲ್ಲಿ ‘ಅವಿಜಿತ್ ರಾಯ್ ಕೊಲೆಯಾಗುವುದು ಖಚಿತ. ಆತ ಅಮೆರಿಕದಲ್ಲಿದ್ದಾನೆ. ಅದಕ್ಕೇ ಬದುಕಿದ್ದಾನೆ. ಬಾಂಗ್ಲಾಕ್ಕೆ ಬಂದರೆ ಆತ ಖಂಡಿತ ಕೊಲೆಯಾಗುತ್ತಾನೆ’ ಎಂದು ಬರೆದುಕೊಂಡಿದ್ದ. ಆದರೆ, ಇದ್ಯಾವುದರ ಬಗ್ಗೆ ತಲೆ ಕೆಡಿಸಿಕೊಳ್ಳುವ ಜಾಯಮಾನ ರಾಯ್‌ದ್ದಾಗಿರಲಿಲ್ಲ. ಅಂದ ಹಾಗೆ, ಅವಿಜಿತ್ ರಾಯ್ ಹಿಂದೂ. ಅವರ ತಂದೆ ಅಜೋಯ್ ರಾಯ್. ಢಾಕಾ ವಿವಿಯಲ್ಲಿ ಭೌತಶಾಸ್ತ್ರ ಪ್ರಾಧ್ಯಾಪಕರು. ಅವಿಜಿತ್ ವೃತ್ತಿಯಲ್ಲಿ ಎಂಜಿನಿಯರ್ ಆಗಿದ್ದರು.
ರಾಯ್ ವ್ಯಕ್ತಿತ್ವ ಎಂಥದಿತ್ತು ಎಂಬುದನ್ನು ತಿಳಿದುಕೊಳ್ಳಲು ಅವರ ಇತ್ತೀಚಿನ ‘ದಿ ವೈರಸ್ ಆಫ್ ಫೇಥ್’ ಪುಸ್ತಕದಲ್ಲಿ ಬರೆದುಕೊಂಡಿದ್ದನ್ನು ಇಲ್ಲಿ ಉಲ್ಲೇಖಿಸುವುದು ಸೂಕ್ತ. ‘ನಾವು ಮುಕ್ತವಾಗಿಯೇ ನಮ್ಮ ನಾಸ್ತಿಕತೆಯನ್ನು ಸಾರುತ್ತಿದ್ದೇವೆ. ಬಹುಶಃ ಇದು ಕೆಲವೊಂದಿಷ್ಟು ಉಗ್ರ ಪ್ರತಿಕ್ರಿಯೆಗೂ ಕಾರಣವಾಗಬಹುದು. ಆದರೆ, ಅದಕ್ಕಾಗಿ ನಾವು ಹೆದರಲಾರೆವು. ಭಾರತೀಯ ಉಪಖಂಡಕ್ಕೇ ವಿಶಿಷ್ಟವಾಗಿರುವ ಬೆಂಗಾಲಿ ಜಾತ್ಯತೀತ ಸಂಪ್ರದಾಯದ ಬಗ್ಗೆ ನಾವು ಹೆಮ್ಮೆ ಪಡುತ್ತೇವೆ’. ಅಂದರೆ, ರಾಯ್ ಹಾಗೂ ಆತನ ಸಂಗಡಿಗರಲ್ಲಿ ಸ್ಪಷ್ಟವಾದ ಮತ್ತು ನಿಖರವಾದ ಗುರಿಯಿತ್ತು. ಬಾಂಗ್ಲಾದೇಶ ಇಂದು ಯಾವ ದಿಶೆಯಲ್ಲಿ ಸಾಗುತ್ತಿದೆಯೋ ಅದಕ್ಕೆ ತದ್ವಿರುದ್ಧವಾಗಿ ಅವರ ಆಲೋಚನೆಗಳು, ಕೃತಿಗಳಿದ್ದವು. ಹಾಗೆ ನೋಡಿದರೆ, ಪಶ್ಚಿಮ ಪಾಕಿಸ್ತಾನದಿಂದ ಬಾಂಗ್ಲಾದೇಶ ಸ್ವತಂತ್ರವಾದ ದೇಶವಾಗಿದ್ದು ಇದೇ ಕಾರಣಕ್ಕೆ. ತಮ್ಮ ತಾಯ್ನುಡಿಯಾದ ಬೆಂಗಾಲಿ ಮೇಲೆ ಪಶ್ಚಿಮ ಪಾಕಿಸ್ತಾನ ಉರ್ದು ಹೇರಲು ಹೊರಟಾಗ ಕ್ರಾಂತಿಯೇ ಸಂಭವಿಸಿತು ಎಂಬುದು ಇತಿಹಾಸದಲ್ಲಿ ದಾಖಲಾಗಿದೆ. ಅಂದು ಯಾವ ಕಾರಣಕ್ಕೆ ಕ್ರಾಂತಿ ಸಂಭವಿಸಿತ್ತೋ ಇಂದು ಅದೇ ತತ್ವ ಅಲ್ಲಿಲ್ಲ. ಆ ಜಾಗದಲ್ಲಿ ಇಸ್ಲಾಮ್ ಮೂಲಭೂತವಾದ ಅಟ್ಟಹಾಸಗೈಯುತ್ತಿದೆ. ಅಲೆಗಳ ವಿರುದ್ಧ ಈಜುವ ಪ್ರಯತ್ನ ಮಾಡುವ ರಾಯ್‌ರಂಥ ವ್ಯಕ್ತಿಗಳ ಹತ್ಯೆ ನಡೆಯುತ್ತಲೇ ಇರುತ್ತವೆ.
್ಝ
೨೦೧೫ ಫೆ.೨೬ರಂದು ಅವಿಜಿತ್ ರಾಯ್ ತಮ್ಮ ಪತ್ನಿ ರಫಿದಾ ಅಹ್ಮದ್ ಜತೆಗೂಡಿ ಢಾಕಾದಲ್ಲಿ ಆಯೋಜಿಸಲಾಗಿದ್ದ ಎಕುಶೇ ಪುಸ್ತಕ ಮೇಳಕ್ಕೆ ತೆರಳಿದ್ದರು. ಅಂದು ಸಂಜೆ ಮೇಳದಿಂದ ವಾಪಸ್ ತಮ್ಮ ಮನೆಗೆ ಸೈಕಲ್ ರಿಕ್ಷಾದಲ್ಲಿ ಬರುತ್ತಿದ್ದರು. ಢಾಕಾ ವಿವಿಯ ಟೀಚರ್ ಸ್ಟೂಡೆಂಟ್ ಸೆಂಟರ್ ಬಳಿ ಎದುರಾದ ಯಮದೂತರು, ದಂಪತಿಯನ್ನು ರಿಕ್ಷಾದಿಂದ ಎಳೆದು ರಸ್ತೆ ಮೇಲೆ ಎಸೆದರು. ಬಳಿಕ ನೋಡ ನೋಡುತ್ತಿದ್ದಂತೆ ತಮ್ಮಲ್ಲಿದ್ದ ಮಚ್ಚುಗಳಿಂದ ಮನ ಬಂದಂತೆ ಕತ್ತರಿಸಲಾರಂಭಿಸಿದರು! ಪ್ರತ್ಯಕ್ಷದರ್ಶಿಗಳು ಹೇಳುವ ಪ್ರಕಾರ, ರಾಯ್ ತಲೆಗೆ ಇಬ್ಬರು ದುಷ್ಕರ್ಮಿಗಳು ಮಾರಕಾಸ್ತ್ರವನ್ನು ನುಗ್ಗಿಸಿದ್ದರು. ಜತೆಯಲ್ಲಿದ್ದ ಪತ್ನಿ ರಫಿದಾ ಅವರನ್ನೂ ದುಷ್ಟರು ಬಿಡಲಿಲ್ಲ. ಅವರ ಮೇಲೆಯೂ ಮಾರಣಾಂತಿಕ ಹಲ್ಲೆ ನಡೆಸಿದರು. ಇಷ್ಟೆಲ್ಲ ನಡೆಯುತ್ತಿದ್ದರೂ ಅಲ್ಲಿದ್ದ ಜನರು ಮಾತ್ರ ಸಮನೇ ನೋಡುತ್ತ ನಿಂತಿದ್ದರು ಎಂದರೆ ನಂಬಲೇಬೇಕು. ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದ ರಾಯ್ ಮತ್ತು ಅವರ ಪತ್ನಿ ರಫಿದಾ ಅವರನ್ನು ಢಾಕಾ ಮೆಡಿಕಲ್ ಕಾಲೇಜ್ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಅಷ್ಟೊತ್ತಿಗೆ ರಾಯ್ ಪ್ರಾಣಪಕ್ಷಿ ಹಾರಿ ಹೋಗಿತ್ತು. ತೀವ್ರ ಹಲ್ಲೆಗೊಳಗಾದ ಪತ್ನಿ ರಫಿದಾ ಮಾತ್ರ ಬದುಕುಳಿದರು.
ರಾಯ್ ಕಗ್ಗೊಲೆ ಸುದ್ದಿ ಗೊತ್ತಾಗುತ್ತಿದ್ದಂತೆ ರಾಯ್ ಅವರನ್ನು ಪ್ರೀತಿಸುವವರು, ವಿದ್ಯಾರ್ಥಿಗಳು, ಬ್ಲಾಗರ್ ಢಾಕಾ ವಿಶ್ವವಿದ್ಯಾಲಯದತ್ತ ಧಾವಿಸಿ, ಕೊಲೆಗಾರರನ್ನು ಬಂಧಿಸುವಂತೆ ಒತ್ತಾಯಿಸಿದರು. ಏತನ್ಮಧ್ಯೆ, ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲಿ ‘ಚಾರ್ಲಿ ಹೆಬ್ಡೋ’ ದಾಳಿಗೆ ಸಮೀಕರಿಸಿ ವರದಿಗಳು ಬರಲಾರಂಭಿಸಿದವು. ರಾಯ್ ಕಗ್ಗೊಲೆ ದೆಸೆಯಿಂದ ಅಂತಾರಾಷ್ಟ್ರೀಯ ಮಾಧ್ಯಮ, ಅಂತಾರಾಷ್ಟ್ರೀಯ ಮಾನವಹಕ್ಕುಗಳ ಸಂಘಟನೆ ಬಾಂಗ್ಲಾದೇಶದಲ್ಲಿ ಅಭಿವ್ಯಕ್ತಿ ಸ್ವಾತಂತ್ರ ಹರಣವಾಗುತ್ತಿರುವ ಬಗ್ಗೆ ಕೂಗಲಾರಂಭಿಸದವು.
್ಝ
ರಾಯ್‌ನೊಬ್ಬನದ್ದೇ ಹತ್ಯೆಯೇ?
ಈ ವರೆಗೂ ರಾಯ್ ಮಾತ್ರ ಉಲ್ಬಣಗೊಳ್ಳುತ್ತಿರುವ ಉಗ್ರವಾದ, ಮೂಲಭೂತವಾದಕ್ಕೆ ಬಲಿಯಾಗಿದ್ದಾರಾ? ಖಂಡಿತ ಇಲ್ಲ. ಈ ಬಗ್ಗೆ ‘ಓಪನ್ ಡೆಮಾಕ್ರಸಿ’ ಜಾಲತಾಣಕ್ಕೆ ಮಾಹಿನ್ ಖಾನ್ ಬರೆದ ಲೇಖನ ಇನ್ನಷ್ಟು ಬೆಳಕು ಚೆಲ್ಲುತ್ತದೆ. ರಾಜಕೀಯ ಕಾರಣಕ್ಕೂ ಅನೇಕ ಹತ್ಯೆಗಳೂ ಬಾಂಗ್ಲಾದಲ್ಲಾಗುತ್ತಿವೆ. ೨೦೧೪ರಲ್ಲಿ ಅವಾಮಿ ಲೀಗ್ ಅಧಿಕಾರಕ್ಕೆ ಬಂದ ಮೇಲೆ ಇಂಥ ಕೊಲೆಗಳು, ಹಲ್ಲೆಗಳು ಸಾಕಷ್ಟು ನಡೆದಿವೆ. ನಿತ್ಯ ಪ್ರತಿಭಟನೆಗಳು, ಹರತಾಳಗಳು ಬಾಂಗ್ಲಾದೇಶವನ್ನು ಸ್ತಬ್ಧಗೊಳಿಸಿವೆ. ತೀರಾ ಅಲ್ಪ ಅವಧಿಯಲ್ಲೇ ಸರ್ಕಾರ ಕನಿಷ್ಠ ೨೦೦೦ ಜನರನ್ನು ಬಂಧಿಸಿದೆ. ಅವರಲ್ಲಿ ಬಹುತೇಕರು ಪ್ರತಿಪಕ್ಷದ ಕಾರ್ಯಕರ್ತರು. ಬಾಲಕ-ಬಾಲಕಿಯರೆನ್ನದೇ ಎಲ್ಲರನ್ನೂ ಬಂಧಿಸಲಾಗುತ್ತಿದೆ, ಹಿಂಸಿಸಲಾಗುತ್ತಿದೆ. ಇದಕ್ಕೆ ಉದಾಹರಣೆ ಎಂದರೆ, ಪ್ರತಿಪಕ್ಷದ ನಾಯಕರೊಬ್ಬರ ೧೫ ವರ್ಷದ ಪುತ್ರ ರಿಫ್ತಾ ಅಬ್ದುಲ್ ಖಾನ್‌ನನ್ನು ಬಂಧಿಸಿ, ಅತ್ಯಂತ ಕ್ರೂರವಾಗಿ ಹಿಂಸಿಸಲಾಗಿದೆ. ಎಲ್ಲಕ್ಕಿಂತ ಹೆಚ್ಚಾಗಿ ಜನವರಿ ಮತ್ತು ಫೆಬ್ರವರಿ ತಿಂಗಳಲ್ಲಿ ೫೪ ಜನರನ್ನು ಕೊಲೆ ಮಾಡಲಾಗಿದೆ. ಇವರ ಪೈಕಿ ನಾಲ್ವರ ಶರೀರದಲ್ಲಂತೂ ೬೨ ಬುಲೆಟ್‌ಗಳು ಪತ್ತೆಯಾಗಿವೆ. ಇದೆಲ್ಲ ಏನು ತೋರಿಸುತ್ತದೆ ಎಂದು ಪ್ರಶ್ನಿಸುತ್ತಾರೆ ಮಾಹಿನ್ ಖಾನ್. ರಾಯ್ ಕೊಲೆಯಾದ ತಕ್ಷಣ ಅಂತಾರಾಷ್ಟ್ರೀಯ ಮಾಧ್ಯಮಗಳು ಎಚ್ಚೆತ್ತುಕೊಂಡಂತೆ ಕಾಣಿಸುತ್ತವೆ. ಆದರೆ, ಇಂಥ ಅದೆಷ್ಟೋ ಹೆಣಗಳು ಇಲ್ಲಿ ಉರುಳುತ್ತಿವೆ. ಅವುಗಳ ಬಗ್ಗೆ ಯಾರೂ ಮಾತನಾಡುತ್ತಿಲ್ಲ ಎಂಬುದು ಅವರ ಒಟ್ಟು ಅಭಿಪ್ರಾಯ.
ಮೂಲಭೂತವಾದಕ್ಕೆ ರಾಯ್ ಮಾತ್ರ ಹುತಾತ್ಮನಾಗಿಲ್ಲ. ಇದಕ್ಕೂ ಮೊದಲು ಇದೇ ವ್ಯಕ್ತಿತ್ವದ, ಮುಕ್ತ ಚಿಂತನೆಯನ್ನು ಪ್ರತಿಪಾದಿಸುತ್ತಿದ್ದ ಅಂದರೆ, ೨೦೧೨ರಲ್ಲಿ ಬ್ಲಾಗರ್‌ಗಳಾದ ಸಾಗರ್ ಸರೋವರ್ ಮತ್ತು ಮೆಹೆರ್ರುನ್ ರುನಿ ಜೋಡಿಯನ್ನು ಇದೇ ರೀತಿ ಕೊಲ್ಲಲಾಗಿತ್ತು. ೨೦೧೩ರಲ್ಲಿ ಮತ್ತೊಬ್ಬ ಬ್ಲಾಗರ್ ರಾಜಿಬ್ ಹೈದರ್, ಆಸೀಫ್ ಮೊಹಿದ್ದೀನ್, ಪ್ರೊ.ಷಫಿಉಲ್ ಇಸ್ಲಾಮ್ ಕೂಡಾ ಇಸ್ಲಾಮ್ ಮೂಲಭೂತವಾದಿಗಳ ಅಟ್ಟಹಾಸಕ್ಕೆ ಬಲಿಯಾಗಿದ್ದಾರೆ. ಇನ್ನೂ ಕೆಲವು ಬ್ಲಾಗರ್‌ಗಳನ್ನು ಬಂಧಿಸಿ ಜೈಲಿಗಟ್ಟಲಾಗಿದೆ. ಒಂದೇ ಒಂದು ವ್ಯತ್ಯಾಸವೆಂದರೆ, ಕೆಲವು ಹತ್ಯೆಗಳು ಮಾಧ್ಯಮಗಳಲ್ಲಿ ಒಂದಿಷ್ಟು ಸ್ಥಾನ ಪಡೆದು ಸಂಚಲನ ಸೃಷ್ಟಿಸಿವೆ. ಇನ್ನೊಂದಿಷ್ಟು ಹತ್ಯೆಗಳು ಯಾರ ಕಣ್ಣಿಗೂ ಬೀಳದೆ ಮುಗಿದು ಹೋಗುತ್ತಿವೆ.
್ಝ
ರಾಯ್ ಹತ್ಯೆಯಿಂದಲೂ ಭಾರತಕ್ಕೂ ಪಾಠವಿದೆ. ನಮ್ಮಲ್ಲೂ ಒಂದಿಷ್ಟು ಅಸಹಿಷ್ಣು ಮನಸ್ಸುಗಳು ಇಂಥ ಘಟನೆಗಳಿಗೆ ಕಾರಣವಾಗುತ್ತಿವೆ. ಮಹಾರಾಷ್ಟ್ರದ ವಿಚಾರವಾದಿ ಗೋವಿಂದ್ ಪಣೇಸರ್, ನರೇಂದ್ರ ದಾಬೋಲ್ಕರ್ ಸೇರಿದಂತೆ ಸಾಮಾಜಿಕ, ಆರ್‌ಟಿಐ ಕಾರ್ಯಕರ್ತರು ದುಷ್ಟರ ಅಟ್ಟಹಾಸಕ್ಕೆ ಬಲಿಯಾಗುತ್ತಿದ್ದಾರೆ. ಪ್ರಜಾಪ್ರಭುತ್ವದ ರಾಷ್ಟ್ರಗಳಲ್ಲಿ ಭಿನ್ನಾಭಿಪ್ರಾಯಕ್ಕೂ, ಭಿನ್ನ ಸಿದ್ಧಾಂತಕ್ಕೂ ತನ್ನದೇ ಆದ ಮಹತ್ವವಿದೆ. ಆದರೆ, ಎಲ್ಲವನ್ನೂ ಏಕೀಕೃತ ಸೈದ್ಧಾಂತಿಕ ನೆಲೆಯಲ್ಲಿ ನೋಡುವ ಪ್ರವೃತ್ತಿ ಇತ್ತೀಚೆಗೆ ಹೆಚ್ಚಾಗುತ್ತಿದೆ. ಈ ಪ್ರಕ್ರಿಯೆ ಹೀಗೆಯೇ ಮುಂದುವರಿದರೆ, ಬಹು ಸಾಂಸ್ಕೃತಿಕ, ವೈವಿಧ್ಯದ ಬುನಾದಿಯಲ್ಲೇ ಎದ್ದು ನಿಂತಿರುವ ಭಾರತದ ಕಟ್ಟಡವೂ ಅಲುಗಾಡುವುದರಲ್ಲಿ ಅನುಮಾನವೇ ಇಲ್ಲ.

ಮಲ್ಲಿಕಾರ್ಜುನ ತಿಪ್ಪಾರ
(ಕನ್ನಡಪ್ರಭ-24-3-2015)

ಶುಕ್ರವಾರ, ಮಾರ್ಚ್ 6, 2015

ಭೂಸ್ವಾಧೀನ: ‘ಪರಿವಾರ’ದ ವಿರೋಧ ಮುಚ್ಚಿಟ್ಟು ಕಾಂಗ್ರೆಸ್ ದೂಷಣೆ ಏಕೆ?

ಒಪ್ಪಿಕೊಳ್ಳೋಣ. ದೇಶದ ಅಭಿವೃದಿಟಛಿಗೆ ಕೈಗಾರಿಕೆಗಳು ಬೇಕು. ಲೆಕ್ಕವಿಲ್ಲ ದಷ್ಟು ಅವಕಾಶ ಸೃಷ್ಟಿಯಾಗುವ ದಿನಮಾನ ಗಳಲ್ಲಿ ನಾವು ಬದುಕುತ್ತಿದ್ದೇವೆ. ಒಂಚೂರು ನಿರ್ಲಕ್ಷ್ಯ ವಹಿಸಿದರೂ ಹಿಂದೆ ಬೀಳುತ್ತೇವೆ. ಹಾಗೆಂದ ಮಾತ್ರಕ್ಕೆ, ಕೃಷಿಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿ, ಅದನ್ನೇ ನಂಬಿ ಬದುಕುತ್ತಿರುವ ಕೋಟ್ಯಂತರ ರೈತರ ಹಿತಾಸಕ್ತಿಯನ್ನು ಗಣನೆಗೆ ತೆಗೆದುಕೊಳ್ಳದೇ ಹೋದರೆ ಅದು ಕೂಡ ವ್ಯರ್ಥ. ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಸಂಸತ್ತಿನಲ್ಲಿ ಮಂಡಿಸಿ ಒಪ್ಪಿಗೆ ಪಡೆಯಲು ಹವಣಿಸುತ್ತಿರುವ ಭೂ ಸ್ವಾಧೀನ ಸುಗ್ರೀವಾಜ್ಞೆ ಮೇಲ್ನೋಟಕ್ಕೆ ರೈತ ಪರ, ಅಭಿವೃದಿಟಛಿ ಪರ ಕಂಡರೂ ಆಂತರ್ಯದಲ್ಲಿ ಬೇರೆಯದ್ದೇ ರೈತರ ಕೈ ಕಚ್ಚುವ ಆಯಾಮಗಳಿವೆ. ಹಾಗಾಗಿಯೇ ದೇಶದ ಎಲ್ಲ ರೈತ ವರ್ಗ, ಸಂಘಟನೆಗಳು, ಬಹುತೇಕ ಎಲ್ಲ ರಾಜಕೀಯ ಪಕ್ಷಗಳು ಇದನ್ನು ಖಡಾಖಂಡಿತವಾಗಿ ಖಂಡಿಸುತ್ತಿವೆ.
‘ಗುಜರಾತ್ ಭೂ ಸ್ವಾಧೀನ ಪರಿ, ಇದು ವಿಶ್ವಾಸ ಇಡಬಹುದಾದ ದಾರಿ’ ಲೇಖನದಲ್ಲಿ ಶ್ರೀನಿವಾಸ ರಾವ್ ಅವರು ಪ್ರತಿಪಾದಿಸಿರುವಂತೆ ಕೇವಲ ಕಾಂಗ್ರೆಸ್ ಮಾತ್ರ ಈ ಸುಗ್ರೀವಾಜ್ಞೆಯನ್ನು ವಿರೋಧಿಸುತ್ತಿಲ್ಲ. ಒಂದು ವೇಳೆ, ಕಾಂಗ್ರೆಸ್ ಮಾತ್ರ ವಿರೋಧಿಸುತ್ತಿದ್ದರೆ ನರೇಂದ್ರ ಮೋದಿ ಕೂಡ ಸುಗ್ರೀವಾಜ್ಞೆಯನ್ನು ಅಷ್ಟೊಂದು ಪ್ರತಿಷ್ಠೆಯಾಗಿ ಪರಿಗಣಿಸುತ್ತಿರಲ್ಲಿಲ್ಲ. ಕಾಂಗ್ರೆಸ್ ಎಲ್ಲದರಲ್ಲೂ ರಾಜಕೀಯ ಮಾಡುತ್ತಿದೆ ಎಂದು ಸುಮ್ಮನಿರಬಹುದಿತ್ತು.
ಆದರೆ, ಎನ್‌ಡಿಎ ಮಿತ್ರ ಪಕ್ಷಗಳಾದ ಶಿರೋಮಣಿ ಅಕಾಲಿ ದಳ ಮತ್ತು ಶಿವಸೇನೆ ಕೂಡ ಈ ಸುಗ್ರೀವಾಜ್ಞೆಯನ್ನು ತೀವ್ರವಾಗಿ ವಿರೋಧಿಸುತ್ತಿವೆ. ಜೊತೆಗೆ ಈಗಿನ ಸ್ಥಿತಿಯಲ್ಲೇ ಕಾಯ್ದೆಯಾಗುವುದಕ್ಕೆ ತಮ್ಮ ವಿರೋಧವಿದೆ ಎಂದು ಹೇಳಿವೆ. ಈ ಪಕ್ಷಗಳನ್ನು ಬಿಟ್ಹಾಕಿ. ಈ ಎರಡೂ ಪಕ್ಷಗಳು ತಮ್ಮ ರಾಜಕೀಯ ಹಿತಾಸಕ್ತಿಗೋ ಸ್ಕರವೇ ವಿರೋ ಧಿ ಸು ತ್ತಿವೆ ಎಂದಿಟ್ಟುಕೊಳ್ಳೋಣ. ಬಿಜೆಪಿಯ ಮಾತೃಸಂಸ್ಥೆ ಯಾದ ಆರ್‌ಎಸ್ ಎಸ್‌ನ ಭಾರತೀಯ ಕಿಸಾನ್ ಸಂಘ (ಬಿಕೆಎಸ್), ಭಾರತೀಯ ಮಜ್ದೂರ್ ಸಂಘ ಮತ್ತು ಸ್ವದೇಶಿ ಜಾಗರಣ ಮಂಚ್ ಕೂಡ ವಿರೋಧ ವ್ಯಕ್ತಪಡಿಸಿವೆ. ಇದಕ್ಕೇನಂತೀರಿ? ಇಷ್ಟೆಲ್ಲ ವಿರೋಧ ಕ್ತವಾಗುತ್ತಿದೆಯೆಂದರೆ, ಬಿಜೆಪಿ ನೇತೃತ್ವದ ಎನ್‌ಡಿಎ ಹೊರಡಿಸಿರುವ ಸುಗ್ರೀವಾಜ್ಞೆಯಲ್ಲಿ ಖಂಡಿತವಾಗಿಯೂ ರೈತ ಹಿತಾಸಕ್ತಿ ವಿರೋಧಿ ಅಂಶಗಳು ಇರಲೇಬೇಕು ಅಲ್ಲವೇ? ಭೂಮಿ ಕೊಡುವ ರೈತನಿಗೆ ಮಾರುಕಟ್ಟೆ ದರಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ, ಅತ್ಯಂತ ಶೀಘ್ರದಲ್ಲೇ ಪರಿಹಾರ ನೀಡುತ್ತೇವೆ ಎಂಬುದು ಮಾತ್ರವೇ ರೈತ ಪರ ಅಂಶವೇ? ಹೀಗೆ, ಕೇವಲ ಹಣದಾಸೆಗೆ ಭೂಮಿ ನೀಡಿದ ರೈತರ ಸ್ಥಿತಿ ಈಗ ಹೇಗಿದೆ ಎಂಬುದನ್ನು ತಾವು ಆಲಮಟ್ಟಿ ಅಣೆಕಟ್ಟೆ ಸಂತ್ರಸ್ತರ ಸದ್ಯದ ಸ್ಥಿತಿ ಚೂರು ಗಮನಿಸಿದರೆ ಅರ್ಥವಾದೀತು. ಇಂಥ ಸ್ಥಿತಿ ದೊಡ್ಡ ದೊಡ್ಡ ಯೋಜನೆಗಳಿಗಾಗಿ ಭೂಮಿ ನೀಡಿದ ದೇಶದ ಬಹುತೇಕ ರೈತರದ್ದಾಗಿದೆ. ಸರ್ಕಾರವೇ ಆಗಿರಲಿ, ಖಾಸಗಿ ಕಂಪನಿಗಳೇ ಆಗಿರಲಿ, ಭೂಮಿ ಪಡೆಯುವಾಗ ಮನೆಗೊಬ್ಬರಿಗೆ ಕೆಲಸ ಕೊಡುತ್ತೇವೆ, ಆಸ್ಪತ್ರೆ ಕಟ್ಟಿ ಕೊಡುತ್ತೇವೆ, ಶಾಲೆ ಕಟ್ಟಿಸ್ತೀವಿ, ರಸ್ತೆ ಮಾಡುತ್ತೇವೆ ಎಂದು ಹೇಳುತ್ತಾರೆ. ಈ ಭರವಸೆಗಳು ಈಡೇರಿವೆಯೇ? ಖಂಡಿತ ಇಲ್ಲ. ಕಾಂಗ್ರೆಸ್ ಇಲ್ಲವೇ ಎಡಪಕ್ಷಗಳ ಜತೆ ಗುರುತಿಸಿಕೊಂಡಿರುವ ರೈತ ಸಂಘಟನೆಗಳ ವಿರೋಧವನ್ನು ಕೂಡ ಒಂದು ಹಂತದಲ್ಲಿ ತಳ್ಳಿ ಹಾಕಬಹು ದಿತ್ತು. ಆದರೆ, ಭಾರತೀಯ ಕಿಸಾನ್ ಸಂಘ, ಭಾರತೀಯ ಮಜ್ದೂರ್ ಸಂಘಗಳೂ ಅಷ್ಟೇ ಪ್ರಬಲವಾಗಿ ವಿರೋಧಿಸುತ್ತಿವೆ. ಭಾರತೀಯ ಕಿಸಾನ್ಸಂಘವಂತೂ ೨೫೦ ಸಂಸದರಿಗೆ ಪತ್ರ ಬರೆದು, ಸುಗ್ರೀವಾಜ್ಞೆಯನ್ನು
ಬೆಂಬಲಿಸದಂತೆ ಕೋರಿವೆ. ಇನ್ನೂ ಆಸಕ್ತಿಕರ ಸಂಗತಿ ಎಂದರೆ, ಸಂಘ ಯಾವ ಯಾವ ಸಂಸದರನ್ನು ಕೇಳಿಕೊಂಡಿದೆಯೋ ಅವರೆಲ್ಲರೂ ತಮ್ಮ ವಿರೋಧವನ್ನು ದಾಖಲಿಸಿದ್ದಾರೆ ಎನ್ನುತ್ತಾರೆ ಭಾರತೀಯ ಕಿಸಾನ್ಸಂ ಘದ ಅಧ್ಯಕ್ಷ ಪ್ರಭಾಕರ್ ಕೇಳ್ಕರ್. ಅಂದರೆ, ಕೇವಲ ರಾಜಕೀಯ ಪಕ್ಷಗಳು, ರೈತ ಸಂಘಟನೆಗಳು ಮಾತ್ರವಲ್ಲದೆ, ಸಂಸದರು ಕೂಡ ಇದಕ್ಕೆ ತಮ್ಮ ಅಸಮ್ಮತಿ ತೋರುತ್ತಿದ್ದಾರೆ ಎಂದರ್ಥವಲ್ಲವೇ? ಅಷ್ಟೇ ಅಲ್ಲ, ಸುಗ್ರೀವಾಜ್ಞೆ ಖಂಡಿತವಾಗಿಯೂ ಕಾರ್ಪೊರೇಟ್ ಕಂಪನಿಗಳ ಪರವಾಗಿಯೇ ಇದೆ ಎಂಬುದು ಖಚಿತವಾಗುತ್ತಿದೆ.
ಶ್ರೀನಿವಾಸ್ ರಾವ್ ಅವರು ತಮ್ಮ ಲೇಖನದಲ್ಲಿ ಈಗಿರುವ ಸುಗ್ರೀವಾಜ್ಞೆ ಗುಜರಾತ್‌ನಲ್ಲಿ ಈಗಾಗಲೇ ಜಾರಿಯಲ್ಲಿರುವ ಕಾಯ್ದೆಯ ಸಂಗತಿಗಳನ್ನು ತನ್ನ ಒಡಲೊಳಗೆ ಇಟ್ಟುಕೊಂಡಿದೆ. ಅಲ್ಲಿ ರೈತರು ಇದನ್ನು ಒಪ್ಪಿಕೊಂಡಿರುವಾಗ ದೇಶದ ಇತರೆ ರೈತರು ಯಾಕೆ ಒಪ್ಪಿಕೊಳ್ಳಬಾರದು ಎಂಬ ಧಾಟಿಯಲ್ಲಿ ಹೇಳಿದ್ದಾರೆ. ಇದು ಒಪ್ಪತಕ್ಕ ಮಾತಲ್ಲ. ಗುಜರಾತ್ ರೈತರು ಒಪ್ಪಿಕೊಂಡ ತಕ್ಷಣ ಬೇರೆಯವರು ಒಪ್ಪಿಕೊಳ್ಳಲೇಬೇಕೆಂಬ ಸರ್ವಾಧಿಕಾರದ ದನಿ ಸಲ್ಲ. ಇನ್ನು ಸುಪ್ರೀಂ ಕೋರ್ಟ್‌ನ ಉದಾಹರಣೆ ನೀಡಿದ್ದಾರೆ. ಆದರೆ, ಕೋರ್ಟ್ ಆ ಮಾತು ಹೇಳಬೇಕಾದರೆ, ಯಾವ ಸಂದರ್ಭದಲ್ಲಿ ಮತ್ತು ಏತಕ್ಕಾಗಿ ಹಾಗೆ ಹೇಳಿದೆ ಎಂಬುದನ್ನು ಕೂಡ ಅಷ್ಟೇ ಮುಖ್ಯವಾಗುತ್ತದೆ. ಅದೇ ರೀತಿ, ಈ ಸುಗ್ರೀವಾಜ್ಞೆ ವಿರುದಟಛಿ ಕಾಂಗ್ರೆಸ್‌ನ ಪಿತೂರಿಯೇ ಹೆಚ್ಚಾಗಿ ಎಂಬರ್ಥದಲ್ಲಿ ಮಾತನಾಡಿದ್ದಾರೆ. ಅದನ್ನು ಒಪ್ಪಿಕೊಳ್ಳಲಾಗದು. ಅದು ಅಷ್ಟೇ ಆಗಿದ್ದರೆ ಈ ಪರಿ, ಇಷ್ಟೊಂದು ವ್ಯಾಪಕವಾಗಿ ವಿರೋಧ ವ್ಯಕ್ತವಾಗುತ್ತಿರಲಿಲ್ಲ. ಅಣ್ಣಾ ಹಜಾರೆ ಕೂಡ ಧರಣಿಗೆ ಧುಮುಕುತ್ತಿರಲಿಲ್ಲ. ದೇಶದ ರೈತ ಸಂಘಟನೆಗಳು ಒಂದೇ ದನಿಯಲ್ಲಿ ಮಾತನಾಡುತ್ತಿರಲಿಲ್ಲ. ಭ್ರಷ್ಟಾಚಾರ ವಿರುದಟಛಿ ಚಳವಳಿ ನಡೆಸಿದ ಅಣ್ಣಾ ಹಜಾರೆ ಆಗ ಬಿಜೆಪಿಗೆ ಹೀರೋ ಆಗಿದ್ದರು. ಈಗ ಭೂಸ್ವಾಧೀನ ಸುಗ್ರೀವಾಜ್ಞೆ ವಿರುದಟಛಿ ದನಿ ಎತ್ತುತ್ತಿದ್ದಂತೆ ಅವರು ವಿಲನ್ ಥರ
ಕಾಣಿಸುತ್ತಿದ್ದಾರೆ. ಎಂಥ ವಿಪರ್ಯಾಸ ನೋಡಿ!
ಅಷ್ಟಕ್ಕೂ ಈ ಸುಗ್ರೀವಾಜ್ಞೆಗೆ ಯಾಕೆ ವಿರೋಧ ವ್ಯಕ್ತವಾಗುತ್ತಿದೆಯೆಂದರೆ: ೨೦೧೪ ಜನವರಿ ೧ರಿಂದ ಜಾರಿಯಾಗಿರುವ ಛಿ ್ಕಜಿಜಠಿ ಠಿಟ ಊಜ್ಟಿ ಇಟಞಛ್ಞಿಠಿಜಿಟ್ಞ ಚ್ಞ ಖ್ಟಚ್ಞಚ್ಟಛ್ಞ್ಚಿ ಜ್ಞಿ ಔಚ್ಞ ಅಟ್ಠಿಜಿಜಿಠಿಜಿಟ್ಞ, ್ಕಛಿಚಿಜ್ಝಿಜಿಠಿಠಿಜಿಟ್ಞ ಚ್ಞ ್ಕಛಿಛಿಠಿಠ್ಝಿಛಿಞಛ್ಞಿಠಿ ಕಾಯ್ದೆಗೆ ಸಂಬಂಧಿಸಿದಂತೆ ತರಲಾಗಿರುವ ಸುಗ್ರೀವಾಜ್ಞೆಯಲ್ಲಿ ಕೆಲವು ಅಂಶಗಳು ಸಂಪೂರ್ಣವಾಗಿ ರೈತ ಹಿತಾಸಕ್ತಿ ಯನ್ನು ಕಡೆಗಣಿಸಿವೆ. ಅದರಲ್ಲೂ ವಿಶೇಷವಾಗಿ ಸೆಕ್ಷನ್ ೧೦(ಎ)ಗೆ ಸಂಬಂಧಿಸಿ ದಂತೆ, ಕಾಯ್ದೆಯಲ್ಲಿ ಹೇಳಿರುವ ರಾಷ್ಟ್ರೀಯ
ಹೆದ್ದಾರಿ, ಭದ್ರತೆ, ರಕ್ಷಣೆ, ಗ್ರಾಮೀಣ ಮೂಲಭೂತ ಸೌಕರ್ಯ,
ಕೈಗಾರಿಕಾ ಕಾರಿಡಾರ್‌ಗಳಿಗೆ ಸಂಬಂಧಿಸಿದಂತೆ ಈ ಭೂಸ್ವಾಧೀನ ಮಾಡುವಾಗ ರೈತರ ಒಪ್ಪಿಗೆಯನ್ನು ಕಡ್ಡಾಯವಾಗಿ ಪಡೆಯಲೇ ಬೇಕಿಲ್ಲ. ಈ ಹಿಂದೆ ಸರ್ಕಾರಿ ಪ್ರಯೋಜ ನಕ್ಕೆ ಭೂಸ್ವಾಧೀನ ಮಾಡಿಕೊಳ್ಳುವಾಗ ಸಂಬಂಧಿಸಿದ ಶೇ.೭೦ರಷ್ಟು ಮತ್ತು ಖಾಸಗಿ ಉದ್ದೇಶಕ್ಕಾಗಿ ಸ್ವಾಧೀನ ಮಾಡಿಕೊಳ್ಳುವಾಗ ಶೇ.೮೦ರಷ್ಟು ರೈತರ ಒಪ್ಪಿಗೆ ಪಡೆಯಲೇಬೇಕಿತ್ತು. ಈಗಿರುವ ಸುಗ್ರೀವಾಜ್ಞೆಯಲ್ಲಿ ಇದಕ್ಕೆ ಅವಕಾಶವಿಲ್ಲ. ಸರ್ಕಾರಕ್ಕೆ ಬೇಕಾದ ಜಮೀನನ್ನು ನೇರವಾಗಿ ಸ್ವಾಧೀನಪಡಿಸಿಕೊಳ್ಳಬಹುದು. ಅಷ್ಟೇ ಅಲ್ಲದೆ, ಈ ಹಿಂದೆ ಇದ್ದ ಕಾಯ್ದೆಯಲ್ಲಿ ಸೋಷಿಯಲ್ ಇಂಪ್ಯಾಕ್ಟ್ ಅಸೆಸ್ ಮೆಂಟ್(ಎಸ್‌ಎಐ) ಕೂಡ ಮಾನ್ಯ ಮಾಡಬೇಕಾದ
ಅಗತ್ಯವಿಲ್ಲ. ಸ್ವಾಧೀನ ಪ್ರಕ್ರಿಯೆಯ ವೇಳೆ ನಿಯಮಗಳನ್ನು ಉಲ್ಲಂಘಿಸಿದ ಯಾವುದೇ ಅಧಿಕಾರ ವಿರುದಟಛಿ ನೇರವಾಗಿ ಕ್ರಮ ಕೈಗೊಳ್ಳುವ ಅಧಿಕಾರವಿತ್ತು. ಈಗಿನ ತಿದ್ದುಪಡಿಯಲ್ಲಿ ಹಾಗೇನಾದರೂ ಆದರೆ, ಅದಕ್ಕೆ ಸರ್ಕಾರದಿಂದ ಒಪ್ಪಿಗೆ ಪಡೆಯಲೇಬೇಕು. ಒಂದು ವೇಳೆ, ಸ್ವಾಧೀನಪಡಿಸಿಕೊಂಡ ಜಾಗದಲ್ಲಿ ಕೈಗಾರಿಕೆಗಳನ್ನು ೫ ವರ್ಷಗಳವರೆಗೂ ಸ್ಥಾಪಿಸಲಿಲ್ಲ ಎಂದಿಟ್ಟುಕೊಳ್ಳಿ. ಆಗ, ಮತ್ತೆ ಸ್ವಾಧೀನಕ್ಕೆ ಮೊದಲಿನಿಂದ ಪ್ರಕ್ರಿಯೆ ಆರಂಭಿಸಬೇಕಿತ್ತು. ಆದರೆ, ಈಗ ಈ ಮಿತಿಯನ್ನು ತೆಗೆದು ಹಾಕಲಾಗಿದೆ. ಒಮ್ಮೆ ಸ್ವಾಧೀನವಾದರೆ ಮುಗೀತು. ಅದು ಸರ್ಕಾರದ ವಶದಲ್ಲೇ ಇರುತ್ತದೆ. ಹೀಗೆ, ಭೂಮಿಯನ್ನು ಸರ್ಕಾರದ ಉದ್ದೇಶಕ್ಕಾಗಿ ಇಲ್ಲವೇ ಖಾಸಗಿ ಉದ್ದೇಶಕ್ಕಾಗಲಿ ವಶಪಡಿಸಿಕೊಂಡಾಗ, ರೈತರು ತಮ್ಮ ಜಮೀನಿನ ಹಕ್ಕನ್ನು ಸಂಪೂರ್ಣವಾಗಿ ಕಳೆದುಕೊಳ್ಳುತ್ತಾರೆ. ಇಂಥ ಸೂಕ್ಷ್ಮವಾದ ಅನೇಕ ಸಂಗತಿಗಳು ಮೋದಿ ಸರ್ಕಾರ ಹೊರಡಿಸಿರುವ ಸುಗ್ರೀವಾಜ್ಞೆಯಲ್ಲಿವೆ. ಈ ಎಲ್ಲದರ ಬಗ್ಗೆ ಸಾರ್ವಜನಿಕವಾಗಿ ಚರ್ಚೆಯಾಗಬೇಕೆಂಬುದು ಎಲ್ಲರ ಅಪೇಕ್ಷೆ. ಕೇವಲ ವಶಪಡಿಸಿಕೊಂಡ ಭೂಮಿಗೆ ಪಾರದರ್ಶಕವಾಗಿ, ಶೀಘ್ರವಾಗಿ ಹಣ ನೀಡುತ್ತೇವೆ, ನೀವು ಭೂಮಿ ಕೊಡಿ ಎಂದರೆ ಹೇಗೆ? ಸ್ವಾಧೀನಕ್ಕೆ ಇದೇ ಪ್ರಮುಖ ಸಂಗತಿಯಾದರೆ ಹೇಗೆ? ಭೂ ಸ್ವಾಧೀನ ನಂತರ ಸಂತ್ರಸ್ತರಾಗುವ ಜನರ ಸ್ಥಿತಿ ಏನಾಗಬೇಡ? ಇಂಥ ಎಲ್ಲ ಅಂಶಗಳ ಬಗ್ಗೆ
ಚರ್ಚೆಯಾಗದೆ, ‘ಮೇಕ್ ಇನ್ ಇಂಡಿಯಾ’ಗೋಸ್ಕರ, ಅತಿ ಕಡಿಮೆ ಅವಧಿಯಲ್ಲೇ ಜನರಿಗೆ ‘ಅಚ್ಛೇ ದಿನಗಳ ್ಛಛಿಛ್ಝಿ’ ಕೊಡುವುದಕ್ಕೆ ಫಲವತ್ತಾದ ಕೃಷಿ ಭೂಮಿಯನ್ನು ಕೂಡ ಕೊಡಲೇಬೇಕು ಎಂಬ ಸರ್ಕಾರದ ಸರ್ವಾಧಿಕಾರದ ಧೋರಣೆ ವಿರುದಟಛಿ ಸಿಡಿದೇಳುವುದು ಅಪರಾಧವೇ? ಪ್ರಧಾನಿ ಮೋದಿ ಎಲ್ಲವನ್ನೂ ಸರಿಯಾಗೇ ಮಾಡುತ್ತಾರೆ. ಅವರನ್ನು ನಂಬಿ ಎಂದರೆ ಹೇಗೆ? ಒಂದು ಕಾಯ್ದೆಯಾಗಿ ರೂಪಗೊಳ್ಳಬೇಕಿದ್ದರೆ ಅದು ಸಾರ್ವಜನಿಕವಾಗಿ ಚರ್ಚೆಯಾಗಲೇಬೇಕು. ಅದನ್ನೇ ಕಾಂಗ್ರೆಸ್ ಸೇರಿದಂತೆ ಎಲ್ಲ ಪ್ರತಿಪಕ್ಷಗಳು, ರೈತ ಸಂಘಟನೆಗಳು ಕೇಳುತ್ತಿವೆ. ಅದನ್ನೇ ತಪ್ಪು ಎಂದರೆ ಹೇಗೆ?

ಶುಕ್ರವಾರ, ಡಿಸೆಂಬರ್ 5, 2014

ಸಾಮ್ರಾಜ್ಯಶಾಹಿ ನರಕ, ಈ ‘ದೇವಮಾನವ’ರ ಲೋಕ

ದೇವರು ಸರ್ವವ್ಯಾಪಿ, ನಿರಾಕಾರ, ನಿರ್ಗುಣ. ಆದರೆ, ಈ ದೇವಮಾನವರು, ಬಾಬಾಗಳು, ಗುರೂಜಿಗಳು ಎಲ್ಲಿಂದ ಬರುತ್ತಾರೋ?
ದೇವರ ಹೆಸರಲ್ಲಿ ಮುಗಟಛಿ, ದುರ್ಬಲ ಮನಸ್ಸಿನ ಜನರನ್ನು ಮೋಸ ಮಾಡಿ, ತಮ್ಮ ಸಾಮ್ರಾಜ್ಯವನ್ನು ಕಟ್ಟಿಕೊಳ್ಳುವ ಇವರಿಗೆ
ನಮ್ಮ ರಾಜಕಾರಣಿಗಳು ಬೆಂಗಾವಲಾಗಿ ನಿಂತು ಬಿಡುತ್ತಾರೆ. ದೇವರ ಹೆಸರಲ್ಲಿ ಅತ್ಯಾಚಾರ, ಅನಾಚಾರ, ಎಲ್ಲ ಪಾಪ
ಕರ್ಮ ಮಾಡಿ, ಅದರಿಂದ ಬಚಾವಾಗಲು ಆಡಳಿತದ ನೆರವು ಪಡೆಯುತ್ತಾರೆ. ಆಡಳಿತಗಾರರು, ರಾಜಕಾರಣಿಗಳಿಗೆ ದೇವಮಾನವರ ಹಿಂದಿರುವ ‘ಕುರಿ ಮಂದೆ’ ಮತದಾರರ ಮೇಲೆ ಕಣ್ಣು. ಎಲ್ಲಕ್ಕಿಂತ ಹೆಚ್ಚಾಗಿ ಇವರ ಅನಾಚಾರ ರಕ್ಷಿಸಿಕೊಳ್ಳಲು ಅವರ ನೆರವು. ಇದೊಂದು ರೀತಿ ಕೊಡು- ಕೊಳ್ಳುವಿಕೆಯ ಭ್ರಷ್ಟ್ರ ಪ್ರಕ್ರಿಯೆ. ಹರ್ಯಾಣದ ಸ್ವಯಂಘೋಷಿತ ದೇವಮಾನವ ಸಂತ ರಾಮ್‌ಪಾಲ್ ಬಂಧನದ ಘಟನೆಯನ್ನೇ ನೋಡಿ. ಈ ನೆಲದ ಕಾನೂನನ್ನು ಗೌರವಿಸದಷ್ಟು ದಾರ್ಷ್ಟ್ಯ ಪ್ರದರ್ಶಿಸುತ್ತಾನೆ. ತನಗಾಗಿ ಖಾಸಗಿ ಸೇನೆಯನ್ನು ಸಾಕಿಕೊಳ್ಳುತ್ತಾನೆಂದರೆ ಆತ ಎಷ್ಟು ಹಣವಂತನಾಗಿರಬೇಕು? ಆಧ್ಯಾತ್ಮ, ದೇವರ ಹೆಸರಲ್ಲಿ
ಎಷ್ಟೊಂದು ಸುಲಿಗೆ ಮಾಡಿರಬೇಕು? ಇಷ್ಟೆಲ್ಲ ಮಾಡಬೇಕಿದ್ದರೆ ರಾಜಕಾರಣಿಗಳ ನೆರವು ಇರಲೇಬೇಕು. ಯಾಕೆಂದರೆ ಸ್ವತಂತ್ರ
ಸಂವಿಧಾನ ಹೊಂದಿರುವ ಭಾರತದಂಥ ದೇಶದಲ್ಲಿ ಒಬ್ಬ ಖಾಸಗಿ ವ್ಯಕ್ತಿ ಏಕಾಂಗಿಯಾಗಿ, ಇಡೀ ವ್ಯವಸ್ಥೆಯನ್ನು ಮೀರಿ ಬೆಳೆಯಲು ಸಾಧ್ಯವಿಲ್ಲ. ಇಲ್ಲಿ ದೇವಮಾನವರು ಅಥವಾ ಸೋ ಕಾಲ್ಡ್ ಗುರೂಜಿಗಳು ಹಾಗೂ ರಾಜಕಾರಣಿಗಳು ಜಂಟಿಯಾಗಿ
ಹೆಜ್ಜೆ ಹಾಕುತ್ತಾರೆ.
ಸಂತ ರಾಮ್‌ಪಾಲ್‌ನಂಥ ಘಟನೆಗಳು ಕೇವಲ ಭಾರತದಲ್ಲಿ ಮಾತ್ರ ನಡೆಯುತ್ತವೆ ಅಂದುಕೊಳ್ಳಬೇಡಿ. ಇವು ಸರ್ವವ್ಯಾಪಿ. ರಾಮ್‌ಪಾಲ್ ಬಂಧನ ಕುರಿತು ನಡೆದ ೨ ದಿನಗಳ ಹೈಡ್ರಾಮಾ ನಿಮಗೆ ಅಮೆರಿಕದ ಟೆಕ್ಸಾಸ್‌ನ ವಾಕೋ ಘಟನೆಯನ್ನೂ ನೆನೆಪಿಸಬಹುದು. ೧೯೯೩ರಲ್ಲಿ ಬ್ರಾಂಚ್ ದ್ರಾವಿಡಿಯನ್ಸ್ ಧಾರ್ಮಿಕ ಗುಂಪು ಮತ್ತು ಪೊಲೀಸರ ಮಧ್ಯೆ ೫೨ ದಿನಗಳ
ಕಾಳಗ ನಡೆದಿತ್ತು. ವಾಕೋದ ಮೌಂಟ್ ಕಾರ್ಮೆಲ್ ಸೆಂಟರ್ ನಲ್ಲಿ ತನ್ನ ಬೆಂಬಲಿಗರನ್ನು ಗುರಾಣಿ ರೀತಿಯಲ್ಲಿ ಬ್ರಾಂಚ್ ದ್ರಾವಿಡಿಯನ್ಸ್‌ನ ಮುಖ್ಯಸ್ಥ ಡೇವಿಡ್ ಕೊರೆಶ್ ಬಳಸಿಕೊಂಡಿದ್ದ. ಅಂತಿಮವಾಗಿ ೫೨ನೇ ದಿನ ಆತ ಶರಣಾಗುವ ಮೂಲಕ ಪ್ರಕರಣ ಅಂತ್ಯ ಕಂಡಿತ್ತು.
‘ಎಕನಾಮಿಕ್ಸ್ ಟೈಮ್ಸ್’ಗೆ ನೀಡಿದ ಹೇಳಿಕೆಯಲ್ಲಿ ಆರೆಸ್ಸೆಸ್ ಚಿಂತಕ ಕೆ.ಎನ್.ಗೋವಿಂದಾಚಾರ್ಯ ಅವರು ಈ ದೇವಮಾನವರು ಮತ್ತು ರಾಜಕಾರಣಿಗಳ ನಡುವಿನ ಅಪವಿತ್ರ ಮೈತ್ರಿಯನ್ನು ಧ್ವನಿಸುತ್ತಾರೆ. ‘ರಾಜಕೀಯ ಪಕ್ಷಗಳು ಮತ್ತು ಈ
ದೇವಮಾನವರು ಪರಸ್ಪರ ಒಪ್ಪಿತ ಮಾರ್ಗದಲ್ಲಿ ಸಾಗುತ್ತಾರೆ. ಪಕ್ಷಗಳು ದೇವಮಾನವರ ಜನಪ್ರಿಯತೆಯನ್ನು ತಮಗೆ ಅನುಕೂಲಕರ ಸರಕಾಗಿಸಿಕೊಂಡರೆ, ದೇವಮಾನವರು ಇವರಿಂದ ವ್ಯವಸ್ಥೆಯ ಮಾನ್ಯತೆ ಪಡೆದುಕೊಳ್ಳುತ್ತಾರೆ. ಇದೊಂದು ಅವಕಾಶವಾದಿತನ ಮತ್ತು ಅಂತಿಮವಾಗಿ ಇಂಥ ಪ್ರಕರಣಗಳು ತೀರಾ ಕೆಟ್ಟದಾಗಿ ಅವಸಾನ ಕಾಣುತ್ತವೆ’.
 ಇದನ್ನು ಇನ್ನಷ್ಟು ಸರಳವಾಗಿ ಉದಾಹರಣೆ ಸಹಿತ ಹೇಳುವುದಾದರೆ, ಇಂದಿರಾ ಗಾಂಧಿ ಅವರಿಗೆ ಯೋಗ ಗುರುವಾಗಿದ್ದ ಬ್ರಹ್ಮಚಾರಿ ಧೀರೇಂದ್ರ ಹಾಗೂ ಮತ್ತೊಬ್ಬ ಸ್ವಯಂಘೋಷಿತ ದೇವಮಾನವ ಚಂದ್ರಸ್ವಾಮಿ. ಇವರಿಬ್ಬರೂ ‘ಅವಕಾಶವಾದಿತನದ ಪ್ರಮುಖ ಶಿಲ್ಪಿಗಳು’. ೧೯೭೫-೭೭ರಲ್ಲಿ ಇಂದಿರಾ ಗಾಂಧಿ ತುರ್ತು ಪರಿಸ್ಥಿತಿ ಘೋಷಿಸಿದಾಗ ಈ
ಬ್ರಹ್ಮಚಾರಿ ಧೀರೇಂದ್ರ ಅತ್ಯಂತ ಪ್ರಭಾವಿ ವ್ಯಕ್ತಿಯಾಗಿದ್ದ. ಈತನನ್ನು ಆಗ ’ಛಿ ಐ್ಞಜಿಚ್ಞ ್ಕಟ್ಠಠಿಜ್ಞಿ’
(ರಾಸ್‌ಪುಟಿನ್ ರಷ್ಯಾದ ರೋಮನೋವ್ಸ್ ರಾಜಕೀಯ ಮನೆತನಕ್ಕೆ ಸಲಹೆಗಾರ. ಎಲ್ಲಕ್ಕಿಂತ ಹೆಚ್ಚಾಗಿಈತಕೂಡ ದೇವಮಾನವ. ಚ್ಟ ಘೆಜ್ಚಿಟ್ಝ ಐಐ ರಷ್ಯಾ ಸೇನೆಯನ್ನು ತನ್ನ ಹಿಡಿತಕ್ಕೆ ತೆಗೆದುಕೊಂಡಾಗ ಈ ರಾಸ್ ಪುಟಿನ್ ಆತನಿಗೆ ಪ್ರಮುಖ
ಸಲಹೆಗಾರನಾಗಿ, ರಷ್ಯಾದ ನಿರಂಕು ಶಪ್ರಭುತ್ವ ಅವನತಿಗೆ ಕಾರಣನಾದ) ಎಂದೇ ಕುಖ್ಯಾತಿ ಯಾಗಿದ್ದ. ಈ ಧೀರೇಂದ್ರ ಕೂಡ
ಇಂದಿರಾ ಗಾಂಧಿಯ ಒಂಚೂರು ಅವನತಿಗೂ ಕಾರಣನಾದ. ರಾಜಕೀಯ ವ್ಯವಸ್ಥೆ ಬಳಸಿಕೊಂಡು ತನ್ನ ಸಾಮ್ರಾಜ್ಯ ವಿಸ್ತರಿಸಿದ. ಅದೇ ರೀತಿ, ಚಂದ್ರಸ್ವಾಮಿಗೂ ನಿಕಟವಾದ ರಾಜಕೀಯ ನಂಟು ಇತ್ತು. ಈತನ ಆಶ್ರಮದ ಮೇಲೆ ದಾಳಿ ಮಾಡಿದಾಗ ಶಸಾಉಸಉ ದಲ್ಲಾಳಿಗಳಿಗೆ ೧೧ ದಶಲಕ್ಷ ಡಾಲರ್ ಪಾವತಿಸಿದ ಅಸಲಿ ದಾಖಲೆಗಳು ಸಿಕ್ಕಿದ್ದವು! ಅಂದರೆ, ಈ
ದೇವಮಾನವರು, ಗುರೂಜಿಗಳು ಕೇವಲ ಆಧ್ಯಾತ್ಮ ಬೋಧಿಸುವುದು, ಅನುಯಾಯಿಗಳನ್ನು ವಂಚಿಸುವುದು ಮಾತ್ರ ಮಾಡುತ್ತಿರಲಿಲ್ಲ. ಪಕ್ಕಾ ವ್ಯಾಪಾರಿಗಳು. ಭಾರತದ ಪಾರಂಪರಿಕ ಜ್ಞಾನವಾದ ಯೋಗ, ಆಧ್ಯಾತ್ಮವನ್ನು ಮಾರಾಟದ ಸರಕಾಗಿಸಿದವರು. ಆಯು ರ್ವೇದ ಪದ್ಛಿಧಿತಿಔಷಧಗಳನ್ನು ಮಾರಿದ ವರು. ಕೋಟಿ ಕೋಟಿ ಹಣ ಬಾಚಿ, ತಮ್ಮ ಸಾಮ್ರಾಜ್ಯ ವಿಸ್ತರಿಸಿ ಕೊಂಡವರು. ಮತ್ತೆ ಇದಕ್ಕೆಲ್ಲ ರಾಜ ಕಾರಣಿಗಳ ಬೆಂಬಲ ಇದ್ದೇ ಇರುತ್ತದೆ ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ!
ಬ್ರಹ್ಮಚಾರಿ ಧೀರೇಂದ್ರ, ಚಂದ್ರಸ್ವಾಮಿ ಯಂಥ ಖ್ಚಚ್ಞಚ್ಝಟ್ಠ ಜ್ಞಿಠಿ ಪಟ್ಟಿ ಚಿಕ್ಕದೇನಿಲ್ಲ. ಈ ಪಟ್ಟಿಗೆ ಸ್ವಾಮಿ ಸದಾಚಾರಿ, ಜ್ಞಾನ ಚೈತನ್ಯ, ಗುರ್ಮಿತ್ ರಾಮ್ ರಹೀಂ ಸಿಂಗ್, ಆಸಾರಾಮ್ ಬಾಪು, ನಿತ್ಯಾನಂದ ಸ್ವಾಮಿ, ಪ್ರೇಮಾನಂದ, ಇಚ್ಛಾಧಾರಿ ಸಂತ ಸ್ವಾಮಿ ಭೀಮಾನಂದ ಮಹಾರಾಜ್... ಹೀಗೆ ಪಟ್ಟಿ ಬೆಳೆಯುತ್ತದೆ. ಇವರೆಲ್ಲರೂ ಕೇವಲ ಅತ್ಯಾಚಾರ, ಕೊಲೆ, ಅನಾಚಾರಕ್ಕಾಗಿ
ಸುದ್ದಿಯಲ್ಲಿದ್ದವರಲ್ಲ. ಇವರು ಕಟ್ಟಿದ ಹಣದ ಸಾಮ್ರಾಜ್ಯ ಕೂಡ ಇವರನ್ನು ಕುಖ್ಯಾತಿಗೆ ತಳ್ಳಿದೆ. ಇವರಿಗಾರಿಗೂ ನಮ್ಮ
ನೆಲದ ಕಾನೂನು, ಕಟ್ಟಳೆ, ವ್ಯವಸ್ಥೆ ಬಗ್ಗೆ ಕಿಂಚಿತ್ ಗೌರವ ಇಲ್ಲ. ಏನು ಬೇಕಾದರೂ ಮಾಡಿ ದಕ್ಕಿಸಿಕೊಳ್ಳಬಲ್ಲೆ ಎಂಬ ಹುಸಿ
ವಿಶ್ವಾಸಕ್ಕೆ ಇದೇ ರಾಜಕಾರಣಿಗಳು, ಭ್ರಷ್ಟ ವ್ಯವಸ್ಥೆ ನೀರೇರೆದಿರುತ್ತದೆ. ಇದೆಲ್ಲದರ ಜತೆಗೆ ನಮ್ಮ ಈ ಮೂಢ ಜನರ ಕುರುಡು ನಂಬಿಕೆ ಅವರಿಗೆಲ್ಲ ಎಲ್ಲಿಲ್ಲದ ಬಲ ತಂದುಕೊಡುತ್ತದೆ. ಹಾಗಾಗಿಯೇ ಅವರು, ಒಂದು ಚೌಕಟ್ಟಿನೊಳಗೇ ಇದ್ದುಕೊಂಡು, ಅದಕ್ಕೆ ಮತ್ತೊಂದು ಚೌಕಟ್ಟು ಹಾಕುವ ವಿಫಲ ಯತ್ನಕ್ಕೆ ಮುಂದಾಗುತ್ತಾರೆ. ಸಂತ ರಾಮ್‌ಪಾಲ್ ವಿಷಯದಲ್ಲೂ ಆಗಿದ್ದು ಇದೆ.
ಇದು ಕೇವಲ ಹಿಂದೂ ಧರ್ಮಕ್ಕೆ ಮಾತ್ರ ಅಂಟಿದ ಜಾಢ್ಯವಲ್ಲ. ಮುಸ್ಲಿಂ, ಕ್ರೈಸ್ತ ಧರ್ಮವೂ ಸೇರಿದಂತೆ ಎಲ್ಲದರಲ್ಲೂ ಇಂಥ ಕಿರಾತಕರು ಇದ್ದೇ ಇರುತ್ತಾರೆ. ರಾಜಕೀಯ ನಂಟನ್ನು ತಮ್ಮ ಸ್ವಾರ್ಥಕ್ಕೆ ಹೇಗೆ ಬಳಸಿಕೊಳ್ಳುತ್ತಾ ರೆಂಬುದಕ್ಕೆ ದೆಹಲಿಯ ಸಯ್ಯದ್ ಅಹ್ಮದ್ ಬುಖಾರಿ ಉದಾಹರಣೆ. ೨೦೦೧ ಸೆಪ್ಟೆಂಬರ್ ೩ರಂದು ಪೊಲೀಸ್ ಅಧಿಕಾರಿ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬುಖಾರಿ ಹಾಗೂ ಹಬಿಬ್‌ವುರ್ ರೆಹಮಾನ್ ವಿರುದಟಛಿ ಪ್ರಕರಣ ದಾಖಲಾಗಿದೆ. ಇವರ ವಿರುದಟಛಿ ದೆಹಲಿ ಕೋರ್ಟ್ ಜಾಮೀನು ರಹಿತ ವಾರೆಂಟ್ ಹೊರಡಿಸಿದರೂ ಇವರನ್ನು ಬಂಧಿಸಿ ಕೋರ್ಟ್‌ಗೆ ಹಾಜರಪಡಿಸಲು ದೆಹಲಿ ಪೊಲೀಸರಿಗೆ ಸಾಧ್ಯವಾಗಿರಲಿಲ್ಲ. ಇದಕ್ಕೆಲ್ಲ ಏನು ಕಾರಣ? ನೆಲದ ಕಾನೂನು ಧಿಕ್ಕರಿಸುವಂತೆ ಪ್ರೇರೇಪಿಸುವ ಶಕ್ತಿಗಳು ಯಾವುವು ಎಂಬುದನ್ನು ಮತ್ತೆ ಪ್ರತ್ಯೇಕವಾಗಿ ಹೇಳಬೇಕಿಲ್ಲ.
 ಮತ್ತೆ ಕೆಲವು ಬಾಬಾಗಳು, ದೇವಮಾ ನವರು, ಗುರೂಜಿಗಳು ತುಂಬಾ ಸೌಜನ್ಯ ಮುಖವಾಡ ಧರಿಸಿಕೊಂಡು ತಮ್ಮ
ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಯಾವುದಾದರೊಂದು ರಾಜಕೀಯ ಪಕ್ಷದಲ್ಲೇ ಗುರುತಿಸಿಕೊಂಡು ಬಿಡುತ್ತಾರೆ.
ಇವರು ಕೂಡ ತಮ್ಮ ಸಾಮ್ರಾಜ್ಯ ವಿಸ್ತರಿಸಿಕೊಳ್ಳುವುದರ ಜತೆಗೆ ರಾಜಕೀಯ ಮಹತ್ವಾಕಾಂಕ್ಷೆ ಹೊಂದಿರುತ್ತಾರೆ. ಇಂಥವರು ಇನ್ನೂಡೇಂಜರ್!
ಭಾರತದಲ್ಲೇಕೆ ಈ ಗುರೂಜಿ, ದೇವಮಾನವರತ್ತ ಜನರು ಅಷ್ಟೊಂದು ಆಕರ್ಷಿತರಾಗುತ್ತಾರೆ? ಎನ್ನುವುದರ ಕುರಿತು ವರದಿಗಾರ ಸೌತಿಕ್ ಬಿಸ್ವಾಸ್ ಬಿಬಿಸಿಗೆ ಬರೆದಿದ್ದಾರೆ. ಅದರಲ್ಲಿ ಅವರು ಹೇಳುತ್ತಾರೆ- ‘ತೀವ್ರವಾಗಿ ನಗರೀಕರಣಗೊಳ್ಳುತ್ತಿರುವ
ಈ ದೇಶದ ಜನರ ಮಹತ್ವಾಕಾಂಕ್ಷೆ, ಗೊಂದಲ, ಹತಾಶೆಗೆ ಮದ್ದು ನೀಡುವ ರೀತಿಯಲ್ಲಿ ಈ ಗುರೂಜಿಗಳು ಗೋಚರವಾಗುತ್ತಾರೆ. ಈ ಗುರೂಜಿಗಳು, ದೇವಮಾನವರು ನಮ್ಮ ಜೀವನದಲ್ಲಿ ದೊಡ್ಡ ಸಂತೋಷವನ್ನು ತಂದು ಕೊಡಬಲ್ಲರು ಎಂಬ ಕಾರಣಕ್ಕೆ ಆಕರ್ಷಿತರಾಗುತ್ತಾರೆ. ತಮ್ಮ ಕುಟುಂಬದ ಅನಾರೋಗ್ಯಪೀಡಿತರನ್ನು ಮ್ಯಾಜಿಕ್‌ನಿಂದ ಸರಿ ಮಾಡಬಲ್ಲರು ಎಂಬ ನಂಬಿಕೆ. ಗುಜರಾತ್‌ನ ಸಬರ್ ಕಾಂತಾ ಜಿಲ್ಲೆಯಲ್ಲಿ ಒಬ್ಬ ಗುರು, ಮ್ಯಾಜಿಕ್‌ನಿಂದಲೇ ರೋಗಪೀಡಿತರನ್ನು ಗುಣ ಮಾಡುತ್ತೇನೆ ಎಂದು ನಂಬಿಸಿದ್ದ. ಆತನಿಗೆ ಸಾವಿರಾರು ಅನುಯಾಯಿಗಳು. ಇವರಲ್ಲಿ ಅನೇಕರು ಸತ್ತರೂ ಆತನ ಮೇಲೆ ನಂಬಿಕೆಯೇನೂ ಕುಂದಲಿಲ್ಲ’.
ಓಕೆ.. ಈ ಗುರೂಜಿಗಳು, ದೇವಮಾನವರು ತಮ್ಮ ಹಿತಾಸಕ್ತಿಗೆ ತಂತ್ರ ಹೆಣೆಯುತ್ತಾರೆ ಎಂದಿಟ್ಟುಕೊಳ್ಳೋಣ. ಆದರೆ, ಈ ಜನರಿಗೇನಾಗಿದೆ? ಒಬ್ಬ ಢೋಂಗಿ ಬಾಬಾ, ಗುರೂಜಿ, ದೇವಮಾನವರ ಸಲುವಾಗಿ ಪ್ರಾಣ ಬಿಡಲು ಮುಂದಾಗುತ್ತಾರೆ ಅಂದರೆ ಅದೆಂಥ ಮೂಢರು. ಇನ್ನೂ ದುರಂತ ಎಂದರೆ, ಹೀಗೆ ಯಾವುದೇ ವಿವೇಚನೆ ಇಲ್ಲದೆ ಇವರಿಗೆ ಶರಣು ಹೋಗುವವರು ಎಲ್ಲ ಬಲ್ಲವರು! ಆಧುನಿಕ ಪರಿಭಾಷೆಯಲ್ಲಿ ಇವರನ್ನು ವಿದ್ಯಾವಂತರು (ಬುದ್ದಿವಂತರು?) ಎಂದು ಕರೆಯುತ್ತಾರೆ. ಇವರಿಗೂ ಗೊತ್ತು. ಆತ ಸುಳ್ಳು ಹೇಳುತ್ತಿದ್ದಾನೆ. ಮಂತ್ರದಿಂದ ಮಾವಿನ ಕಾಯಿ ಉದುರುವುದಿಲ್ಲ ಎಂಬುದು. ಇನ್ನು ಒಂದಿಷ್ಟು ಜನರಿದ್ದಾರೆ. ಇವರು ಅನಕ್ಷರಸ್ಥರು. ದುರ್ಬಲ ಮನಸ್ಸಿನವರು. ಮೂಢನಂಬಿಕೆಯುಳ್ಳವರು. ಇವರಿಂದಾಗಿಯೂ ಈ ರಾಮ್‌ಪಾಲ್‌ನಂಥ ಬಾಬಾಗಳು,
ದೇವಮಾನವರಿಗೆ ಶಕ್ತಿ ಬಂದು ಬಿಡುತ್ತದೆ. ಆದರೆ, ಇವರೆಲ್ಲರೂ ಯಾವುದೋ‘ಜಾದೂ’ವೊಂದರ ನಿರೀಕ್ಷೆಯಲ್ಲಿ ದೇವಮಾನವರ ಪದತಲಕ್ಕೆ ಬಂದು ಬಿಡುತ್ತಾರೆ. ಇಂಥದ್ದಕ್ಕೆ ಕಡಿವಾಣ ಹಾಕಬೇಕಿದ್ದರೆ ಮೊದಲು ನಾನು ದೇವಮಾನವ, ನಿಮ್ಮ ಕಷ್ಟಗಳನ್ನು ಸರಿ ಮಾಡುತ್ತೇನೆಂದು ನಂಬಿಸುವ ಗುರೂಜಿ, ಬಾಬಾಗಳನ್ನು ಮಾನಸಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಬೇಕು. ಆದರೆ, ಕೊಡಿಸೋರು ಯಾರು? ಈ ಕೆಲಸ ಮಾಡಬೇಕಾದವರೇ ಅವರ ಜತೆ ಸೇರಿಕೊಂಡಿರುವಾಗ ಅದು ಹೇಗೆ ಸಾಧ್ಯ? ಸಾಧ್ಯ ಇಲ್ಲ ಎಂದಾದರೆ, ರಾಮ್‌ಪಾಲ್ ಬಂಧನದಂಥ ಘಟನೆಗಳು ನಡೆಯುತ್ತಲೇ ಇರುತ್ತವೆ. ಒಂದಿಷ್ಟು ಜನರು ತಮ್ಮ ಪ್ರಾಣವನ್ನು ಪುಗ್ಸಟ್ಟೆಯಾಗಿ ಕಳೆದುಕೊಳ್ಳುತ್ತಲೆ ಇರುತ್ತಾರೆ. ಕೊನೆಪಕ್ಷ, ದೇವರು- ನಂಬಿಕೆಗಳಲ್ಲಿ ಸಮಾಧಾನ ಕಂಡು
ಕೊಳ್ಳುವುದಕ್ಕೆ ತಮಗೆ ಮಧ್ಯವರ್ತಿಗಳ ಅವಶ್ಯವಿಲ್ಲ ಅಂತ ಜನರಾದರೂ ಎಚ್ಚೆತ್ತು ಇಂಥ ತಥಾಕಥಿತ ದೇವಮಾನವರಿಂದ
ದೂರವಾಗುವುದು ಸಾಧ್ಯವಾದರೆ ಮಾತ್ರವೇ ಪರಿಹಾರದ ದಾರಿ ತೆರೆದುಕೊಳ್ಳುತ್ತದೆ.

(ಈ ಲೇಖನ ಕನ್ನಡಪ್ರಭದ ೨೦೧೪   ನವೆಂಬರ್ ನ ೨೧ರ ಸಂಚಿಕೆಯಲ್ಲಿ ಪ್ರಕಟವಾಗಿದೆ)