ಶುಕ್ರವಾರ, ಏಪ್ರಿಲ್ 13, 2007

ಮಾತನಾಡು...

ಕೆಂಡವಾದ ಭೂ ಒಡಲಿಗೆ
ತಂಪನೆರದ ಬೆಸಿಗೆಯ ಬಿರು ಮಳೆ
ಈ ಬೆಂದ ಹೃದಯಕ್ಕೆ
ಪ್ರೀತಿಯಮಳೆಗರೆಯಬಾರದೇ..?

ಆ ನಿನ್ನ ನಿರವ ಮೌನ,
ನನ್ನಲ್ಲೆಬ್ಬಿಸಿದೆ ನೂರಾರು ಅನುಮಾನ
ನಿನ್ನ ಮಾತಿಗೆ, ಹೂ ನಗೆಗೆ
ನಿರೀಕ್ಷೆ ನೊಗ ಹೊತ್ತು.

ನೊಗಭಾರ ಇಳಿಸಿ
ಭಾರವಾದ ಹೃದಯವನ್ನು
ಬರಸೆಳೆಯಬಾರದೇ..?

ಅಷ್ಟುಕ್ಕೂ ಯಾಕೆ ಮೌನ
ಮೌನ ಮಾತಾಗಿ, ಮೆತ್ತಗಾಗಿ
ಮುತ್ತಿಕ್ಕಬಾರದೇ, ಕಾಯುವ ಹೃದಯವನ್ನ.

ಕನಸು ಕಟ್ಚಿಕೊಂಡು ಅಲೆಮಾರಿಯಾಗಿದ್ದೇನೆ
ಕಾಣದ ದಾರಿಯಲ್ಲಿ ಕಾಲಿಡುತ್ತಿದ್ದೇನೆ
ನಿನ್ನ ಮೌನ ಮಾತಾಗುತ್ತದೆ, ಉಸಿರಾಗುತ್ತದೆ ಎಂದು

ಹೇಳು ಮಾತನಾಡಲಾರೆಯಾ..?

-ಮಲ್ಲಿ

ಸೋಮವಾರ, ಏಪ್ರಿಲ್ 9, 2007

ಎಲ್ಲಿರುವೆ..?


ಪ್ರತಿ ವರುಷ ವಸಂತ
ನನಗೆ ಮಾತ್ರ ನಿತ್ಯ ನವ ದಿಗಂತ
ಭಾನತ್ತೆರಕ್ಕೆ ಹಾರಿ ಬಾನಾಡಿಯಂತೆ
ಹುಡುಕುತ್ತಿದ್ದೇನೆ ಕಾಣದ ಚೆಲವು, ಮೂಡದ ಒಲವು..

ನಾನು ಅರಸುತ್ತಿದ್ದೇನೆ ಪ್ರೀತಿ,
ನೀ ಸಿಕ್ಕು ಸಿಗದಂತಿರುವ ಆತ್ಮ ಸಂಗಾತಿ
ಬಳಕುವ ಲತೆಯಲ್ಲಿ, ಬಿರಿವ ಹೂ ಮೊಗ್ಗೆ
ಸೂರ್ಯಕಾಂತಿಗೆ ಕಾಯುವಂತೆ
ಮೊಡದ ಮರೆಯಲಿ ಮುಖ ತೋರಿಸಿ
ಮರೆಯಾಗುವ ಚಂದಿರನಂತೆ
ಕನಸಲ್ಲಿ ಕಣ್ಣು ಮಿಟುಕಿಸಿ
ಎಲ್ಲಿ ಮಾಯಾವಾದೇ ಅಂದಗಾತಿಯೇ..?

ಎಲೆಯ ಮೇಲಿನ ಮಂಜಿನ ಹನಿಯಂತೆ
ಸಿಗದೆ ಜಾರುವ ಜಾಯಮಾನದವಳೆ
ಕಂಡಷ್ಟು, ಕಾಣದಷ್ಟು ನೀ ಸನಿಹ
ನನ್ನ ಕಲ್ಪನಾ ಲೋಕದಲಿ...

- ಮಲ್ಲಿ

ಗುರುವಾರ, ಏಪ್ರಿಲ್ 5, 2007

ಕನ್ನಡ ಚಂದ್ರ

ಕನ್ನಡದ ಪೂರ್ಣಚಂದ್ರ
ಅಸ್ತಂಗತ
ಕಂಬಿನಿ ಮೀಡಿಯುತ್ತಿವೆ
ಅಸಂಖ್ಯಾತ

ಕನ್ನಡ ಕಷ್ಟಕ್ಕೆ ಬಿದ್ದಾಗ
ಅಲ್ಲಿ ಎಲ್ಲೋ ಹೂಂಕರಿಸುತ್ತಿತ್ತು
ಧ್ವನಿಯೊಂದು..
ಈಗ ಸ್ತಬ್ಧ-ನಿಶ್ಯಬ್ಧ
ಪರಿಸರ-ಅಕ್ಷರ ಎರಡು ಉಸಿರು
ಮಹಾ ಚೇತನದ ಅನಿಕೇತನಕೆ

ಕನ್ನಡಿಗರಿಗೆ ತಬರನ ಕಥೆ -ವ್ಯಥೆ
ಹೇಳಿದವ ಕಥೆಯಾದ ಈಗ
ವಿಜ್ಞಾನದ ಅಜ್ಞಾನ ತೊಲಗಿಸಿ
ಪರಿಸರ, ಪಕ್ಷಿ, ಛಾಯಚಿತ್ರ
ಎನುತ ಸಾಹಿತ್ಯ ಸಮುದ್ರ ಈಜಿದ
ಕನ್ನಡದ ಚಂದ್ರ ಅಸ್ತಂಗತ...

- ದುಃಖಿ

ಬುಧವಾರ, ಏಪ್ರಿಲ್ 4, 2007

ಆ ಮುದುಕಿ

ಆ ಮುದುಕಿ ಮಲಗಿದ್ದಾಳೆ
ಚೆನ್ನೈನ ಆ ಜನನಿಬಿಡ ರಸ್ತೆಯಲ್ಲಿ

ಹಾಗೇ ಹೋಗಿ ಬರುವವರನ್ನು ನೋಡುತ್ತಾಳೆ
ಸ್ಥಿತ ಪ್ರಜ್ಞೆ ಕಣ್ಣುಗಳಿಂದ..
ಅವರು ನೋಡುತ್ತಾರೆ ಅವಳನ್ನು.
ಕರುಣೆ ಇದ್ದವರು ಕಾಸು ಎಸೆಯುತ್ತಾರೆ
ಇಲ್ಲದವರು ಕಿಸಕ್ಕೆಂದು ನಕ್ಕು ಮುನ್ನಡೆಯುತ್ತಾರೆ

ಅವಳ ಮಲಗಿದ ಶೈಲಿಯೋ..
ವಿಷ್ಣು ಕಮಲಾರೂಢ ರೀತಿ
ಅವಳಗಿಲ್ಲ ಯಾರದೋ ಭೀತಿ
ದಿನಕರ ದಿನ ಬೆಳಗಿ ಮುಳುಗೋವರೆಗೂ
ಹಾಗೆಯೇ ಮಲಗಿರುತ್ತಾಳೆ
ಅವಳ ಸುತ್ತ ಬಿದ್ದ ಕಾಸು ಒಮ್ಮೊಮ್ಮೆ ಕಿಸಕ್ಕೇನ್ನುತ್ತದೆ..
ಮಹಾನಗರದ ಸಮಸ್ತ ಆಗು ಹೋಗು ಕಂಡು.

ಅವಳು ಈಗಮ್ಮೊ..ಆಗೊಮ್ಮೆ
ತನ್ನಡೆಗೆ ಬರುವ ವಾಹನ, ಸೂಟು-ಬೂಟುಧಾರಿಗಳನ್ನುನೋಡುತ್ತಾಳೆ...
ಏನೋ ಹೇಳಲು ಹೋಗುತ್ತಾಳೆ.
ಮಾತು ಮಾತ್ರ ಗಂಟಲಲ್ಲೇ ಉಳಿಯುತ್ತದೆ
ಮತ್ತ ಅದೇ ಸ್ಥಿತ ಪ್ರಜ್ಞೆ ದೃಷ್ಠಿ, ತದೇಕ ಚಿತ್ತ ಎಲ್ಲರತ್ತ

ಬಸಗಾಗಿ ಕಾಯುತ್ತ
ನೋಡುತ್ತೇನೆ ನಾನು ಅವಳತ್ತ
ಅವಳು ಮಾತ್ರ ಕಾಸು-ಪಾಸು ಎನ್ನುತ್ತ
ಇನ್ನಾವುದರತ್ತ ಹರಿಸಿ ಚಿತ್ತ
ನಗುತ್ತಾಳೆ. ಬಸ್ ಬಂತೆಂದು ಧಾವಿಸುವಾಗ
ಒಂದು- ಎರಡೋ ರೂಪಾಯಿ ಎಸೆಯುತ್ತೇನೆ
ಅವಳು ಮಾತ್ರ ಹಾಗೇ ಮಲಗಿರುತ್ತಾಳೆ.

-ಮಲ್ಲಿ

ಬುಧವಾರ, ಮಾರ್ಚ್ 21, 2007

ಸಾವಿನ ಮನೆಯೆಡೆಗೆ...

ಎದ್ದು ನಡೆಯುತ್ತಿದ್ದೇನೆ ಸಾವಿನ ಮನೆಯೆಡೆಗೆ

ಸಂಬಂಧಗಳ ಸಹವಾಸ ಸಾಕು ಎಂದು

ಇರಬಹುದು ಬದುಕುವದಕ್ಕೆ ಕಾರಣಗಳು ನೂರಾರು

ನಾಯುವುದಕ್ಕೆ ನನಗೆ ಕಾರಣಗಳು ಸಾವಿರಾರು

ಬಂಧ-ಅನುಬಂಧಗಳ ಹುಡಕಾಟದಲ್ಲಿ

ದೇಹ-ಮನಸ್ಸು ಜರ್ಜರಿತ

ಕೊನೆಗೂ ನಿಲುಕುಲಿಲ್ಲ

ನಾ ಬಯಿಸಿದ ಸಬಂಧ
ಬಯಿಸಿದ್ದಾದರೂ ಏನು...

ಬೊಗೆಸೆಯಷ್ಟು ಪ್ರೀತಿ

ಸಿಕ್ಕಿದ್ದೇಷ್ಟು ಸಾಸಿವೆ ಕಾಳದಷ್ಟು ಅಲ್ಲ.

ಎದ್ದು ನಡೆಯುತ್ತಿದ್ದೇನೆ ಸಾವಿನ ಮನೆಯೆಡೆಗೆ


ಅಲ್ಲಿ ಎಲ್ಲೋ ನಗುತ್ತಿವೆ

ಹಳಸಿದ ಸಂಬಂಧಗಳು

ನನ್ನ ಕಥೆ-ವ್ಯಥೆ ಕಂಡು..
ನಗಲಿ, ನಕ್ಕು ನಕ್ಕು ಅಳಲಿ

ಬಳಲಿ ಬೆಂಡಾಗಲಿ..

ನನಗಿಲ್ಲ ಅದರ ಚಿಂತೆ

ಜೀವವನ್ನೇ ಧಿಕ್ಕರಿಸೇದ್ದವನಿಗೆ

ಇನ್ನಾವದರ ಚಿಂತೆ

ತೊಡೆದು ಹಾಕಿ ಎಲ್ಲ ಭ್ರಾಂತಿ

ಸಾಗುತ್ತಿದ್ದೇನೆ ಎಲ್ಲಿಯೂ ನಿಲ್ಲದಂತೆ

ಸಾವಿನ ಮನೆಯೆಡೆಗೆ..

ನಗುವನ್ನೇ ಮರೆತವನಿಗೆ ಅಳುವಿನ ಚಿಂತೆಯೇ

ಬದುಕನ್ನು ಬೇಡ ಎಂದವನಿಗೆ ಸಾವಿನ ಅಂಜಿಕಿಯೇ

ಬದುಕು ಬವಣೆಗಳ ತಲ್ಲಣದಿಂದ

ಹೊರಬರುವುದೇ ಈ ಕ್ಷಣದ ಸತ್ಯ; ಸಾವೇ ಸಾಂಗತ್ಯ

ನೀವು ಅನ್ನಬಹುದು ನಿರಾಶಾವಾದಿ

ಆದರೆ, ಇದು ಸತ್ಯ ಆಶೆಯಲ್ಲಿ ನಿರಾಶೆ

ಮನಗಂಡವರಿಗೆ ಮಾತ್ರ

ನನ್ನ ಭಾವ ಆಗುವುದು ಅರ್ಥ

ಎದ್ದು ನಡೆಯುತ್ತಿದ್ದೇನೆ ಸಾವಿನ ಮನೆಯೆಡೆಗೆ

-ಮಲ್ಲಿ

ಸಾವಿನ ಮನೆಯೆಡೆಗೆ...

ಎದ್ದು ನಡೆಯುತ್ತಿದ್ದೇನೆ ಸಾವಿನ ಮನೆಯೆಡೆಗೆ

ಸಂಬಂಧಗಳ ಸಹವಾಸ ಸಾಕು ಎಂದು

ಇರಬಹುದು ಬದುಕುವದಕ್ಕೆ ಕಾರಣಗಳು ನೂರಾರು

ನಾಯುವುದಕ್ಕೆ ನನಗೆ ಕಾರಣಗಳು ಸಾವಿರಾರು

ಬಂಧ-ಅನುಬಂಧಗಳ ಹುಡಕಾಟದಲ್ಲಿ

ದೇಹ-ಮನಸ್ಸು ಜರ್ಜರಿತ

ಕೊನೆಗೂ ನಿಲುಕುಲಿಲ್ಲ

ನಾ ಬಯಿಸಿದ ಸಬಂಧ
ಬಯಿಸಿದ್ದಾದರೂ ಏನು...

ಬೊಗೆಸೆಯಷ್ಟು ಪ್ರೀತಿ

ಸಿಕ್ಕಿದ್ದೇಷ್ಟು ಸಾಸಿವೆ ಕಾಳದಷ್ಟು ಅಲ್ಲ.

ಎದ್ದು ನಡೆಯುತ್ತಿದ್ದೇನೆ ಸಾವಿನ ಮನೆಯೆಡೆಗೆ


ಅಲ್ಲಿ ಎಲ್ಲೋ ನಗುತ್ತಿವೆ

ಹಳಸಿದ ಸಂಬಂಧಗಳು

ನನ್ನ ಕಥೆ-ವ್ಯಥೆ ಕಂಡು..
ನಗಲಿ, ನಕ್ಕು ನಕ್ಕು ಅಳಲಿ

ಬಳಲಿ ಬೆಂಡಾಗಲಿ..

ನನಗಿಲ್ಲ ಅದರ ಚಿಂತೆ

ಜೀವವನ್ನೇ ಧಿಕ್ಕರಿಸೇದ್ದವನಿಗೆ

ಇನ್ನಾವದರ ಚಿಂತೆ

ತೊಡೆದು ಹಾಕಿ ಎಲ್ಲ ಭ್ರಾಂತಿ

ಸಾಗುತ್ತಿದ್ದೇನೆ ಎಲ್ಲಿಯೂ ನಿಲ್ಲದಂತೆ

ಸಾವಿನ ಮನೆಯೆಡೆಗೆ..

ನಗುವನ್ನೇ ಮರೆತವನಿಗೆ ಅಳುವಿನ ಚಿಂತೆಯೇ

ಬದುಕನ್ನು ಬೇಡ ಎಂದವನಿಗೆ ಸಾವಿನ ಅಂಜಿಕಿಯೇ

ಬದುಕು ಬವಣೆಗಳ ತಲ್ಲಣದಿಂದ

ಹೊರಬರುವುದೇ ಈ ಕ್ಷಣದ ಸತ್ಯ; ಸಾವೇ ಸಾಂಗತ್ಯ

ನೀವು ಅನ್ನಬಹುದು ನಿರಾಶಾವಾದಿ

ಆದರೆ, ಇದು ಸತ್ಯ ಆಶೆಯಲ್ಲಿ ನಿರಾಶೆ

ಮನಗಂಡವರಿಗೆ ಮಾತ್ರ

ನನ್ನ ಭಾವ ಆಗುವುದು ಅರ್ಥ

ಎದ್ದು ನಡೆಯುತ್ತಿದ್ದೇನೆ ಸಾವಿನ ಮನೆಯೆಡೆಗೆ

-ಮಲ್ಲಿ

ಶನಿವಾರ, ಮಾರ್ಚ್ 17, 2007

ಮುಂಗಾರು ಸಿಂಚನ

ಮಲ್ಲಿಗೆಯ ಮುಖಕ್ಕೆ ಮುಂಗಾರು ಸಿಂಚನ
ಚಿತ್ತ ಚಿತ್ತಾರ ಮೂಡಿಸಿದೆ
ಆ ನಿನ್ನ ಕರಿ ಮುಂಗುರುಳಿನ ಕುಂಚ
ನನ್ನೆದೆಯ ಬಾಂದಳವೆಲ್ಲ ಕಂಪನ

ಸ್ನಿಗ್ಧ ಸೌಂದರ್ಯದ ಸುರತಿ
ನನ್ನ ನಗುವೆಲ್ಲಾ ನೀನು
ನನ್ನ ಕನಸು,ಕನವರಿಕೆ ನೀನು
ನೀನಿಲ್ಲದ ಬಾಳು ಬಾಳೇ..?

ಸಾವಿರ ಸಂಕೋಲೆ ದಾಟಿ
ಕೈಹಿಡಿವೆ ಈ ಜಗವ ಮೀಟಿ
ನೀನೊಬ್ಬಳಿದ್ದರೆ ಸಾಕು
ಕಾಲ ಕೆಳಗೆ ಆ ನಾಕು

ನಿನ್ನ ನಗುವಿನ ಅಲೆಗಳು
ನನ್ನ ಯಶಸ್ಸಿನ ಕಲೆಗಳು
ಆ ಅಳು, ದು:ಖ ದುಮ್ಮಾನ
ಇರಲಿ ಕಡಲಾಚೆ....

-Malli

ಬುಧವಾರ, ಫೆಬ್ರವರಿ 21, 2007

ಜಾಗತೀಕರಣ ಅಂದ್ರೆ ಇದಪ್ಪಾ..

ಛೇ.. ಅತಿ ಆತ್‍ಪಾ ಈ ಜಾಗತಿಕರಣ ಹಾವಳಿ... ಅಂತ ತಿಪ್ಪಣ್ಣ ಆ ಕಡೆಯಿಂದ ಗುಣಗತ್ತಾ ಬಂದ. ಯಾಕೋ ತಿಪ್ಪಣ್ಣ ಅಂಥದ್ದೇನಾತೀಗ.. ಹಂಗ್ಯಾಕ್ ಗೋಣಗ್ಲಾಕತ್ತಿ ಅಂಥ ನಾನು ನನ್ನದ ಮಾಸ್ತರ್ ಠೀವಿಯೋಳಗ್ ಅವಂಗ್ ಕೇಳಿದೆ.

ಏನ್ ಬಿಡ್ರಿ ಮಾಸ್ತರ್ ಈ ಜಾಗ್ತಿಕರಣ ಬಾಳಾತ್ರಿ.. ಇಂದಿನ ಪೆಪರ್ ನೋಡಿರೇನ್ ನೀವ್.. ಚೆನ್ನೈಯೋಳಗ ಯಾವ್ದೋ ಹೋಟಲ್ದಾಗ್ ಪರದೇಶಿ ಹಜಾಮರ ಬಂದಾರಂತ್... ಅಲ್ರೀ ಮಾಸ್ತರ್ ಇಲ್ಲಿನ್ ಹಜಾಮರೇನು ಸರಿಯಾಗಿ ಕಷ್ಟ್ ಮಾಡಾಂಗಲ್ಲಂತಿ ತಿಳ್ಕೋಂಡಾರೇನ್ರಿ ಈ ಸರಕಾರದವ್ರೋ.. ಅಂತಂದ್..........

ಓಹಾ ಇದಾ ವಿಚಾರ.. ಅಂತೇಂದಾನ್ದ್ರೂ ಬೆಳಿಗ್ಗೆ ನಾನು ಈ ಸುದ್ಧಿ ಓದಿದ್ದೇ. ಈಗ ತೆಲೆಯೋಳಗ ಈ ವಿಚಾರ ಗುಂಯಿಗಡ್ಲಿಕತ್ತು.

ಅಲ್ಲೀ ಮಾಸ್ತರ್, ನಮ್ಮ ನೀರ್ ಸೋಪ ಹಚ್ಚಿ ಕೆರಿತಾರ್.. ಅವರೇನ್ ಬಂಗಾರ ಹಚ್ಚಿ ಕೇರಿತಾರ್.. ಇವತ್ತ ಚೈನೈದಾಗ ಬಂದಾರ್ ಬೆಂಗಳೂರಗೆ ಬರ್ತಾರ್...ನಾಡಿದ್ದ ನಮ್ಮೂರಿಗೆ ಬರ್ತಾರಿವ್ರು.. ಆಗ ನಮ್ಮ ಗತಿ ಏನ್ರೀ ಅಂತ್ ತನ್ನ ಜೀವನೋಪಾಯದ ದೂರಾಲಚೆನೆಯಲ್ಲಿದ್ದ ತಿಪ್ಪಣ್ಣ.

ಹೌದೋ ತಿಪ್ಪಣ್ಣ ನೀ ಹೇಳೂದು ಖರೇ ಅದ. ಜಾಗ್ತಿಕರಣದಿಂದಾಗಿ ನಮ್ಮ ಊರಾಗೀನ ಶೆಟ್ರೀಗೂ ಉಳಿಗಾಲ ಇಲ್ಲ. ವಾಲ್ಟ ಮಾರ್ಟ್ ಅಂತೋನ್ನದು ಒಂದು ದೊಡ್ಡ ಕಂಪನಿ ಭಾರತಕ್ಕ್ ಬರೂದೈತಿ. ಆಗ ನೋಡಿ ನಮ್ಮ ಚಿಲ್ಲರೆ ಅಂಗಡಿ ಇಟ್ಕೋಂಡವರೆಲ್ಲಾ ಬಕ್ಕಾ ಬರ್ಲೆ ಬಿಳ್ತಾರ. ಹಂಗ್ಯ ಈಗ ನಾವಲ್ಯಾಗರಿದೂ ಪರಿಸ್ಥಿ ಬರಬೌದುಪಾ ಅಂತಂದೆ.

ಅವನು ಏನೋನೂ ಅನ್ತಾ ತನ್ನ ಕಟಿಂಗ್ ಶಾಪ್ ಹಾದಿ ಹೊಡೆದ ಹೊರಟ. ನನ್ನಾಕೆ ಸ್ಕೂಲಿಗೆ ಟೈಮಾಯ್ತು ಬನ್ನಿ ಎಂದು ಕರೆದಳು ನಾನು ಎದ್ದು ಒಳ ಹೋದೆ.

-ಮಲ್ಲಿಕಾರ್ಜನ್

ಮಂಗಳವಾರ, ಫೆಬ್ರವರಿ 20, 2007

ನನ್ನ ಅಜಂತಾ

ಯಾಕೆ ಸಿಗರೆಟ್ ಬಹಳ ಸೇದ್ತಿದ್ದಾರಾ ಅಂತಾ ನನ್ನ ಸಿನಿಯರ್ ಕೇಳಿದ್ರು.... ಇಲ್ಲಾ ಅಂತಾ ನಾನು ಹಾರಿಕೆ ಉತ್ತರಾ ಕೊಟ್ಟೇನಾದರ್ರೂ. ಅಂತಾರಳದಲ್ಲಿ ಅದು ನಿಜ.
ನಾನು ಇತ್ತೀಚೆಗೆ ಸಿಗರೇಟ್ ಜಾಸ್ತಿ ಸೇದ್ತಿದೀನಿ. ಹಾಗಂತ ನನ್ನ ಎಲ್ಲ ಫ್ರೇಂಡ್ಸ್ ಹೇಳ್ತಿದ್ದೀರಾ. ಅದು ನಿಜಾನೂ ಹೌದು.....

ಹೌದು ಸಿಗರೆಟ್ ಯಾಕ್ ಸೇದ ಬೇಕು ? ಮಜಾ ಮಾಡೋಕಾ, ಟೆನ್ಸನ್ ಕಡಿಮೆ ಮಾಡೋಕಾ, ಇಲ್ಲಾ ಸುಮ್ಮನೇನಾ ಅಥವಾ ಫಲಿಸದ ಪ್ರೀತಿಗಾಗಿಯೇ.... ಸೇದೋರಿಗೆ ನೂರೆಂಟು ಕಾರಣ.

ಸೇದಿದೇ ಇರೋದಿಕ್ಕ ಕಾರಣ ಇಲ್ಲ. ನಾನಂತೂ ಸೇದೋದು ಕಾರಣ ಇಲ್ಲದೇನೆ ಹಾಗಂತ ಅನ್ಕೊಂಡ್ರೂ ಆಳದಲ್ಲಿ ಕಾರಣ ಇದ್ದೇ ಇದೆ. ಅದು ಏನು ಅನ್ನೋದು ಇಲ್ಲಿ ಹೋಳೋಕ ಆಗಲ್ಲ. ಅಂತಂದ್ರೆ ಮತ್ತೆ ಯಾಕೆ ಇಲ್ಲಿ ಇದನ್ ಬರ್ತಿರಿದ್ದಾರೆ ಅಂತೀರಾ. ಅದಕ್ಕೂ ಕಾರಣ ಇದೆ ಕೇಳಿ.

ನಾನ ಸಿಗರೇಟ್ ಸೇದಾದ್ಮೇಲೆ ಅಜಂತಾ ಬೇಕು. ಅಯ್ಯೋ ಅಜಂತಾ ಕೂಡ್ಲೇ. ಹುಡುಗಿ ಅಂತಾ ತಿಳ್ಕೋಬೇಡಿಪಾ. ಅದು ಅಡಕಿ ಚೀಟಿ ಹೆಸರು. ಅದನ್ನೆ ಯಾಕೆ ತಿನ್ನೋದು ಅಂದ್ರೆ. ಸಿಗರೆಟ್ ಸೇದಿ ಆಪಿಸಿಗೆ ಬಂದು ಕಂಪ್ಯೂಟರ ಮುಂದೆ ಕೂಡ ಬೇಕಲ್ಲ. ಆಗ ನನ್ನು ಸುತ್ತ ಸಹದ್ಯೋಗಿಗಳಿಗೆ ನನ್ನ ಸಿಗರೇಟ್ ಸುವಾಸನೆ ಬಡಿಬಾರದು ಅಂತ ಈ ಮುನ್ನೆಚ್ಚರಿಕೆ...!

ನೀವು ಏನೇ ಹೇಳ್ರೀ ಈ ಅಜಂತ ಸೊಗಸು ತುಂಬಾ ಮಜಾರೀ.. ಹಾಗೆ ಬಾಯಿಲ್ಲಿ ಹಾಕೊಂಡು ತಕ್ಷಣ ಕರಗಿ ಬಿಡುತ್ತೆ ಅನ್ಕೊಂಡ್ರಾ.. ಅದ್ನಾ ಜಗೀಬೇಕು ಆಗ ಕರುಗುತ್ತೆ ಸಣ್ಣಗೆ. ಆದ್ರೇ ಒಂದು ನಮ್ಮ ಸರ್ಕಾರಗಳು ಪ್ರತಿಭಟನೆ ತಡೆಯೋಕೆ ಸಾಕುಷ್ಟು ಮನ್ನೆಚ್ಚರಿಕೆ ವಹಿಸ್ತಾರೆ ಆದ್ರೆ ಏನಾಗುತ್ತೆ. ಏನಾಗಬೇಕಿತ್ತೋ ಅದೇ ಆಗುತ್ತೆ. ಆದ್ರೆ ನನ್ನ ಮುನ್ನೆಚ್ಚರಿಕೆ ಮಾತ್ರ ಹಾಗಲ್ಲ. ಅದು ವಿಫಲವಾಗೋದೇ ಇಲ್ಲ.

ಹೀಗಾಗಿ ನಾನು ಯಾವಗ್ಲೂ ಬಚಾವ್ . ಏನಂತೀರಾ ಸಿಗರೇಟ್ ಮಿತ್ರರರೇ ನೀವು ಒಮ್ಮೆ ಟ್ರೈ ಮಾಡಿ ನೋಡಿ.


- ಮಲ್ಲಿಕಾರ್ಜುನ

ಮಂಗಳವಾರ, ಫೆಬ್ರವರಿ 13, 2007

ಪ್ರೀತಿ...


ಪ್ರೀತಿ ಎಂಬ ಎರಡೂವರೆ ಅಕ್ಷರ

ಆಶೆ ಆಕಾಂಕ್ಷೆಗಳು ಆಗರ


ಹೆಣ್ಣಿನ ಅಂತರಾಳ

ಹೊಕ್ಕು ನೋಡವ ತವಕ

ಒಮ್ಮೊಮ್ಮೆ ಎಟುಕಿತು..

ಮತ್ಚೋಮ್ಮೆ ಕುಟುಕೀತು..


ಪ್ರತಿ ಜೀವಿಯೂ ಬಯಸುವುದೂ

ಬೊಗಸೆಯಷ್ಟು ಹಿಡಿ ಪ್ರೀತಿಯನ್ನ

ಸಿಗದಿದ್ದರೆ ಜೀವನವೇ ಚಿತ್ರಾನ್ನ..!


ಸಹಿಸಿಕೊಂಡಷ್ಟು ಪ್ರೀತಿ ಸಹನೀಯ

ಇಲ್ಲದಿದ್ದರೇ ಜೀವನವೇ ನಿರಸ..

ಆಗದರಲಿ ಹಾಗೆ...

ಬೆಳಗಲಿ ಪತಿ ಪ್ರೇಮಿಯ ಹೃದಯ ಹಣತೆ


ಸಾಗಲಿ ಪ್ರೇಮಿಗಳ ನಿತ್ಯ ನೂತನ

ಜೀವನ ಪ್ರೇಮ ಕೊನೆಯಾಗದರಲಿ

ಎಲ್ಲಿಯೂ ನಿಲ್ಲದಿರಲಿ..



-ಮಲ್ಲಿಕಾರ್ಜುನ್


ಸೋಮವಾರ, ಫೆಬ್ರವರಿ 12, 2007

ನಿನಗೇಕೆ...?

ನನ್ನ ಹಾಡು ನನ್ನದು
ಸುಮ್ಮನೆ ಏಕೆ ಕೆಣಕುತ್ತಿ
ನನ್ನ ಹಾಡು ಎಂದು ನೀ..

ಹಾಡಿನ ಪಾಡು ನನ್ನದೆ
ಪಟ್ಟ ವ್ಯಧ್ಯೆಯು ನನ್ನದೆ
ನಿನಗೇಕೆ ಗೊಡವೆ ನನ್ನದೆಂದು...

ನಾ ಹಾಡುವುದು ನನಗಾಗಿ
ಕೇಳಿಸಿಕೊಳ್ಳದಿದ್ದರೂ ಹಾನಿಯಿಲ್ಲ ಲಾಭವೂ ಇಲ್ಲ.
ಇದು ನನ್ನ ಹಾಡು...

ಕೇಳ ಬೇಡ ನೀ..
ಯಾಕೆ ನನ್ನ ಹಾಡು ಎಂದು..



-ಮಲ್ಲಿಕಾರ್ಜುನ

ಬುಧವಾರ, ಫೆಬ್ರವರಿ 7, 2007

ಪಾಸ್‌ ಇದೆಯಾ..?

ಪಾಸ್‌ ಇದೆಯಾ..?
ಅತ್ತಿಂದ ಧ್ವನಿ ಬಂತು
ಬೆಂಗಳೂರ ಸಿಟಿ ಬಸ್ಸಿಂದಿಳಿದಾಕ್ಷಣ
ತೆಲೆ ಎತ್ತಿ ನೋಡಿದೆ
ಮಬ್ಬುಗತ್ತಲಿನಲ್ಲಿ

ಮೇಲುಗಣ್ಣಿನ ಹುಡುಗ
ಮೈ ಮೇಲೆ ಅಲ್ಲಲ್ಲಿ ಅರಿವೆ
ಕೋಡಬೇಕೋ ಕೋಡಬೇಡವೋ
ಯೋಚಿಸುವ ಮೊದಲೆ
ನನ್ನ ಕೈಕಿಸೆಯೊಳಗಿಳಿದು
ಅವನ ಕೈಗೆ ಪಾಸ್‌ ನೀಡಿತ್ತು...

ಮತ್ತೊಂದು ದಿನ ....

ಬಸ್‌ ಪಾಸ್‌ ಇದೆಯಾ..?
ಕೇಳಿತು ಅತ್ತ ಕಡೆಯಿಂದಬಸ್ಸಿಂದಿಳಾದಕ್ಷಣ.
ನೋಡಿದೆ, ಮೈ ತುಂಬಾ
ಬಟ್ಟೆ ಕೈಗಳು ತುಂಬಾ ಬಂಗಾರ
ಆದರೂ, ಪಾಸ್‌ ಇದೆಯಾ.... ?
ಇದ್ದರೂ ಇಲ್ಲ ಅಂದೆ.

ದುರುಗಟ್ಟಿದ ಆತ...
ದುರಳರು ದುರುಗಟ್ಟುತ್ತಾರೆ
ಆದರೂ `ಪಾಸ್‌'ಗಾಗಿ ಹಪಿಹಪಿಸುತ್ತಾರೆ..
ಇದೇ ನಗರ ಜೀವನಾನಾ...?

ಒಂದಡೇ ಇಲ್ಲದವರೂ ಬೇಡುತ್ತಾರೆ
ಇದ್ದವರೂ ಬೇಡುತ್ತಾರೆ....
ಇಲ್ಲ ಮತ್ತು ಇದ್ದವರ ನಡುವೆ
ಕೊಡವವನು ಯಾರು..?


-ಮಲ್ಲಿಕಾರ್ಜುನ್‌

ಮಂಗಳವಾರ, ಜನವರಿ 16, 2007

ನಟ, ಮೌಲ್ಯ ಮತ್ತು ಅನುಕರಣೆ

ಜನಮಾನಸದಲ್ಲಿ "ಹೀರೋ'ಗಳಾಗಿರುವ ನಮ್ಮ ಸಿನೆಮಾ 'ನಾಯಕ'ರು ನಿಜ ಜೀವನದಲ್ಲಿ ಹಾಗೇ ಇರ್ತಾರಾ.. ?
ಬಾಲಿವುಡ್ ಸ್ಟಾರ್(ಸಿನೆಮಾದಲ್ಲಿ ಮಾತ್ರ) ನಟ ಅಭಿಷೇಕ ಮತ್ತು ಮಾಜಿ ಸೌಂದರ್ಯ ರಾಣಿ(ಆಂತರಿಕ ಸೌಂದರ್ಯವಲ್ಲ) ಐಶ್ವರ್ಯ ರೈ ಅವರು ನಿಶ್ಚಿತಾರ್ಥ ಮತ್ತು ಅದರ ಪ್ರಹಸನ ನೋಡಿ ಇಂಥ ಪ್ರಶ್ನೆ ಎದ್ದಿದೆ.
ಸ್ವಲ್ಪ ನೆನಪು ಮಾಡಿಕೊಳ್ಳಿ.
ಕೆಲ ದಿನಗಳಿಂದ ಬಿಡುಗೆಡೆಯಾದ 'ಲಗೇ ರಹೋ ಮುನ್ನಾ ಭಾಯಿ' ಚಿತ್ರದಲ್ಲಿ ಅಭಿಷೇಕ ಬಚ್ಚನ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಆ ಪಾತ್ರ ಜೋತಿಷ್ಯ ದೋಷ ಹೊಂದಿದ ಯುವತಿಯನ್ನು ವರಿಸುವುದು. ಆ ಪಾತ್ರದಲ್ಲಿ ಅಭಿ, "ನಾನ ಅವಳನ್ನು ಮದುವೆಯಾದರೆ ಸಾಯ್ತಿನಿ ಇಲ್ಲವೊ ಗೋತ್ತಿಲ್ಲ. ಆದರೆ ಮದುವೆಯಾಗದಿದ್ದರೆ ಖಂಡಿತವಾಗಿರಲಾರೆ'' ಎನ್ನುತ್ತಾರೆ. ಅಂದರೆ ಜ್ಯೋತಿಷ್ಯವನ್ನು ನಿರಾಕರಿಸುವ ಹಾಗೂ ಸತ್ಯಕ್ಕೆ ಬೆಲೆ ಕೊಡುವದನ್ನು ಪ್ರತಿಪಾದಿಸುವ ಪಾತ್ರ ಅದು.
ಈಗ ನಿಜ ನಿಶ್ಚಿತಾರ್ಥಕ್ಕೆ ಬನ್ನಿ.
ಅದೇ ಅಭಿಷೇಕ ಬಚ್ಚನ್ ತನ್ನ ಪತ್ನಿಯಾಗಿ ಸ್ವೀಕರಿಸಲಿರುವ ಐಶ್ವರ್ಯ ರೈಳ ಕುಂಡಲಿಯಲ್ಲಿ ದೋಷ ಇರುವದರಿಂದ ಉಜ್ಜಯನಿ, ಕೇರಳಾ ಮತ್ತು ಬೆಂಗಳೂರು ಜ್ಯೋತಿಷಿ ಹತ್ತಿರ ಅಲೆದಾಡುತ್ತಿರುವುದು ಎಷ್ಟು ಹಾಸ್ಯಾಸ್ಪದ..! ಹಾಗಾದರೆ ನೀವ ಅನ್ನಬಹುದು. ಅದು ಸಿನೆಮಾ. ಇದು ನಿಜ ಜೀವನ. ಸಿನೆಮಾ ಮತ್ತು ನಿಜ ಜೀವನಕ್ಕೂ ತಂಬಾ ವ್ಯತ್ಯಾಸವಿದೆ. ಸೀನೆಮಾದಲ್ಲಿ ತೋರಿಸಲಾದ ಪ್ರತಿಯೊಂದು ಅನಕರಿಸಲಾಗದು ಎಂದು ವಾದ ಮಾಡಬಹುದು.
ಸರಿ. ಸಿನೆಮಾ ಮತ್ತು ನಿಜ ಜೀವನಕ್ಕೆ ತುಂಬಾ ವ್ಯತ್ಯಾಸವಿದೆ. ಹಾಗಾದರೆ ನಿನೆಮಾದಲ್ಲಿ ಪ್ರತಿಪಾದಿಸುವ ಅಮೂರ್ತವಾದ ಮೌಲ್ಯಗಳಿಗೆ ಮೂರ್ತ ರೂಪ ನೀಡುವ ಪಾತ್ರದಾರಿಗಳು ಜನರು ಕಣ್ಣಲ್ಲಿ ಸಾಕ್ಷಾತ ನಾಯಕರಾಗುತ್ತಾರೆ. ಆದರೆ ಅವರು ತಮ್ಮ ಜೀವನದಲ್ಲಿ ಏಕೆ (ಬೆರಳಣಿಕೆ ನಟರನ್ನು ಹೊರತುಪಡಿಸಿ) ಅಳವಡಿಸಿಕೊಳ್ಳಲಾರರು ..? ಅದು ಕೇವಲ ದುಡ್ಡ ತೆತ್ತು ನೋಡುವ ಪ್ರೇಕ್ಷಕರಿಗೆ ಮಾತ್ರವೇ ಅನ್ವಯವೇ..? ಹಾಗಾದರೆ ಅದೇ ನಾಯಕರನ್ನು ತಮ್ಮ ರೋಲ್ ಮಾಡಲ್ ಮಾಡಿಕೊಳ್ಳುವ ಅಭಿಮಾನಿಗಳದ್ದು ಕೇವಲ ಹುಚ್ಚತನವಾ..? ಇದೂಂದು ಘಟನೆ ಮಾತ್ರ. ಇಂಥ ಉದಾಹರಣೆಗಳು ಬೇಕಾದಷ್ಟು ದೊರೆಯುತ್ತವೆ.
ಇಲ್ಲಿ ಜ್ಯೋತಿಷ್ಯವನ್ನು ತೆಗಳುವ ಉದ್ದೇಶ ಇಲ್ಲ. ಚಿತ್ರದಲ್ಲಿ ಜ್ಯೋತಿಷ್ಯವನ್ನು ನಿರಾಕರಿಸುವ ನಟ ನಾಯಕ ನಿಜ ಜೀವನದಲ್ಲಿ ಅದರ ನೆರಳಿನಲ್ಲಿಯೇ ಇರುತ್ತಾನೆ ಎಂಬುದಷ್ಟೇ ಹೇಳುವುದು. ಭಾರತದಲ್ಲಿ ಸಿನೆಮಾ ತರುವ ಬದಲಾವಣೆಗಳು ಪ್ರಭಾವದಷ್ಟು ಬೇರೆ ಯಾವ ಮಾಧ್ಯಮವೂ, ವ್ಯಕ್ತಿಯೂ ಕೊಡ ತರಲಾರ. ಅದಕ್ಕಾಗಿ ತೆರೆಯ ಮೇಲಿನ ನಾಯಕರು ಪ್ರತಿಪಾದಿಸುವ ಮೌಲ್ಯದ ಒಂದಂಶವನ್ನಾದರೂ ತೆರೆ ಹಿಂದೆಯಾದರೂ ಪ್ರತಿಪಾದಿಸಬೇಕು. ಹಾಗಂತ ನಮ್ಮ ಯಾವ ಚಿತ್ರನಟರು ಇದಕ್ಕೆ ಹೊರತಾಗಿಲ್ಲ ಅಂತ ಅಲ್ಲ. ಕೆಲವು ನಟರು ಇದಕ್ಕೆ ಹೊರತಾಗಿದ್ದಾರೆ. ರಜನಿಕಾಂತ್, ಡಾ. ರಾಜಕುಮಾರು ಸೇರಿದಂತೆ ಕೆಲವು ನಟರು ತೆರೆಯ ಮೇಲೆ ಪ್ರತಿಪಾದಿಸಿದ ಮೌಲ್ಯಗಳನ್ನು ಎಲ್ಲವೂ ಅನುಕರಿಸದ್ದಿದ್ದೂ ಕೆಲವನ್ನಾಷ್ಟದರೂ ಅಳವಡಿಸಿಕೊಂಡು ನಿಜವಾದ ಸ್ಟಾರ್ ನಟರಾಗಿದ್ದಾರೆ.

ಶುಕ್ರವಾರ, ಜನವರಿ 12, 2007

ಪ್ರೇಮ ದಿಗಂತ

ಪ್ರೇಮ ದಿಗಂತದತ್ತ
ಹಾರುತ್ತಿವೇ ಹಕ್ಕಿಗಳು
ರೆಕ್ಕೆ ಚಾಚುತ್ತ..
ಪಟ ಪಟನೆ ಬಡಿದು
ಏನೋ ಹೇಳುತಿವೆ
ನಿನ್ನ ಕಣ್ಣ ರೆಪ್ಪೆಗಳು...
ಹಕ್ಕಿಗೋ ಆಕಾಶವೇ
ಅವಕಾಶ..
ನಿನ್ನ ಕಣ್ಣಿಗೆ ನನ್ನೆದೆಯ
ಶೋಧ..
ಗೆಳತಿ,
ಹೃದಯದ ಹೆಬ್ಬಾಗಿಲು ಕಣ್ಣು
ಅಂದಿದ್ದು ನಿನ್ನ ನೋಡಿಯೇ ?
ಭಾವನೆಗಳು ಮಾಹಪೂರ
ನಿನ್ನ ಕಣ್ಣ ಸಾಗರ
ನನಗದೇ ನಿತ್ಯ ನಾಗರ..
-ಮಲ್ಲ

ಬೇಸರವೇಕೆ ಬೆಡಗಿ


ಜೀವನಾ ನಿಕೃಷ್ಟ ಅಲ್ಲ
ಸಾವು ಖಚಿತ,
ತಂದಕೋಬ್ಯಾಡ ಮುಂಚಿತ
ಬ್ಯಾಸರ್ ಯಾಕ್ ಬೆಡಗಿ..


ಪ್ರೀತಿ ಅಂದ್ರ್ ಅಲ್ಲ ಅಸಹ್ಯ
ಅದು ಜೀವನ್ಮುಖಿ
ತಿಳ್ಕೋ ಚಂದ್ರಮುಖಿ
ಬ್ಯಾಸರ್ ಯಾಕ್ ಬೆಡಗಿ..

ಪ್ರೀತಿಗೂ ನೀತಿಗೂ ಅಂತ್ರ
ಅಂತ್ ನೀ ಅಳುತ ಕುಂತ್ರ
ಇದ್ದ ಬಾಳು ಬೇಳಕಾಗತೈತೇನು ?
ಬ್ಯಾಸರ್ ಯಾಕ್ ಬೆಡಗಿ..
-ಮಲ್ಲ





ಶನಿವಾರ, ಜನವರಿ 6, 2007

ಮುಂಗಾರಿನ ನೆನಪು...


ಧೋ ಎಂದು ಸುರಿಯುವ
ಮುಂಗಾರು ಮಳೆಗೆ
ನನ್ನವಳ ನೆನಪು ಉಮ್ಮಳಿಸುತ್ತಿದೆ,
ಕೈ-ಕೈ ಹಿಡಿದು ಮಳೆಯಲ್ಲಿ ಹಾಕಿದ ಹೆಜ್ಜೆಗಳು
ಎದೆಯಲ್ಲಿ ಅಚ್ಚಳಿಯದೇ ಉಳಿದಿವೆ.

ಮುಂಗಾರಿನ ಮಳೆಗೆ ಹೆಣೆದ ಕನಸುಗಳು
ಇನ್ನೂ ಹಾಗೆ ಇವೆ, ನೀರ ನಿಂತ ಮಡಿಗಳಂತೆ
ಕಟ್ಟೆಯೊಡೆದು ನೀರು ಜೀನುಗುವಂತೆ
ಈಗಲೋ ಆಗಲೋ ಒಮ್ಮೊಮ್ಮೆ ಇಣಕುತ್ತಿವೆ.
ಗೂಡಿನಿಂದ ಮರಿಹಕ್ಕಿ ಗೋಣು ಹೊರ ಹಾಕಿದಂತೆ

ಮುಂಗಾರಿನಲ್ಲಿ ಅಲ್ಲವೇ ನಾನವಳಿಗೆ
ಕೊಟ್ಟದ್ದು ಮೊದಲ ಮುತ್ತು...
ಆಕೆ ನಾಚಿ ನೀರಾಗಿದ್ದು, ಎಲ್ಲವೂ ನೆನಪಾಗಿ ಕಾಡುತ್ತಿದೆ.

ಹಸಿಯಾದ ರಸ್ತೆಯಲ್ಲಿ ನಡೆಯಾಗದೂ
ನಡೆಯದೇ ಇರಲಾಗದೂ
ಕೈ ಹಾಕಿ ಮಾಡಿದ ಆಣೆ ಪ್ರಮಾಣಗಳು
ಮುಂಗಾರಿನ ಮಳೆಯಲ್ಲಿ ಅಲ್ಲವೇ
ಮತ್ತೆ ಏಕೆ ಮರೆತಳು....?

-ಮಲ್ಲಿಕಾರ್ಜುನ